tag:blogger.com,1999:blog-70770417895020804062024-02-20T11:26:03.862-08:00ಮೃಗನಯನಿ.....ಇ ದು ಮ ನ ದೊ ಳ ಗಿ ನ ಕ ಣ್ಣು!ಮೃಗನಯನೀhttp://www.blogger.com/profile/05798486490706460406noreply@blogger.comBlogger28125tag:blogger.com,1999:blog-7077041789502080406.post-5162453525919055532008-06-10T23:56:00.000-07:002008-06-11T04:24:28.269-07:00ಮನಸು ಮಹಾಮರ್ಕಟದ ಸುಳಿ<div align="left">1<br />"ಕೊಲ್ಲುವ ಭಯ, ಹಸಿದುಕೊಂಡಿರುವ ಭರವಸೆ, ತಣ್ಣಗಿನ ನೋವು, ನನ್ನದಲ್ಲವೆನಿಸುವ ಕೆಲಸ, ಮಡುವುಗಟ್ಟುವ ಆತಂಕ ಅನುಮಾನಗಳು, ಗೊತ್ತೇ ಇಲ್ಲದ ಹೆಸರಿಸಲಾಗದ ದುಖ , ಕುರುಡು ಯೋಚನೆಗಳು ದಟ್ಟವಾಗಿ ಮೋಡದಂತೆ ನನ್ನನ್ನು ಆವರಿಸಿಕೊಳ್ಳುತ್ತಿದೆ ಅಂದುಕೊಳ್ಳುತ್ತಿರುವಾಗಲೇ, ಅವಳಿದ್ದಿದ್ದರೆ "ಇವೆಲ್ಲ ಮೋಡದಂತೆ ಆವರಿಸಿಕೊಳ್ಳುತ್ತಿವೆ ಅಂತ ಯಾಕೆ ಅಂದುಕೋತಿಯ? ದುಖಕ್ಕೆ ಮೋಡಾನೆ ಯಾಕೆ ಉಪಾಮಾನವಾಗಿ ಬಳಸಿಕೊಳ್ಳಬೇಕು?" ಅಂತ ಕೇಳಿರೋಳು. ಮೋಡ ಬೇಡ, ಮತ್ತೇನು? ಉಸಿರುಗಟ್ಟಿಸುವ ಗಾಳಿಯಂತೆ, ಮುಳುಗಿಸುವ ನೀರಿನಂತೆ, ಗಡಚಿಕ್ಕುವ, ಆಕ್ರಂದನದಂತೆ, ಯಾವುದಂತೆಯೋ ಆವರಿಸಿಕೊಳ್ಳುತ್ತಿರುವ ಈ ಎಲ್ಲವುಗಳಿಂದ ದೂರ ಹೋಗಿ ದನ ಕಾಯಬೇಕು, ರಂಜೆ ಮರದಡಿಯ ಹೂವು ಹೆಕ್ಕಬೇಕು,ನೆಲ್ಲಿಕಾಯಿ ತಿನ್ನಬೇಕು. ನಾನು ಕೇವಲ ಹತ್ತು ವರ್ಷದವನಾಗಿದ್ದಾಗ ಪಕ್ಕದ ಮನೆಯ ೨೧ ವರ್ಷದ ಹುಡುಗಿ ನನ್ನ ಕರೆದು ತೋರಿಸಿದ ಅವಳ ಬೆತ್ತಲು ದೇಹವನ್ನು ಮತ್ತೆ ಸುಮ್ಮನೇ ಅದೇ ಮುಗ್ಧತೆಯಿಂದ ನೋಡಬೇಕು, ಕೃಷ್ಣನ ಜೊತೆ ಪಂದ್ಯ ಕಟ್ಟಿ ನರ್ಮದೆಯಲ್ಲಿ ಕೈಸೋಲೋವರೆಗೂ ಈಜಬೇಕು, ತೆಳ್ಳಗೆ ಹರಡಿದ ಕಾಡುಗಳಲ್ಲಿ, ಅವಳ ಜೊತೆ ಕೈ ಕೈ ಹಿಡಿದುಕೊಂಡು ಮಾತೇ ಆಡದೆ ಅಲೆಯಬೇಕು" ಕಾರಿನ ಸೀಟನ್ನು ಹಿಂದಕ್ಕೆ ಮಾಡಿ ಒರಗಿಕೊಂಡು ಕಣ್ಣು ಮುಚ್ಚಿದ.<br /><br />ಇಪ್ಪತ್ತು ವರ್ಷದ ಹಿಂದೆ ಓದಿದ್ದ ಅರುಣ್ ಜೋಶಿಯವರ ಕಾದಂಬರಿಯ ಮೊದಲ ಪುಟದಲ್ಲಿದ್ದ ಸಾಲು "it irked him to be here, he could not rest ", ನೆನಪಾಯಿತು. ಅನಘಗೆ ಈ ಕಾದಂಬರಿಯನ್ನು ಓದಲು ಹೇಳಬೇಕು ಅಂದುಕೊಂಡ.ಆ ಸಾಲು ಯಥಾವತ್ತಾಗಿ ಯಾಕೆ ನೆನಪಾಯಿತು? ಕಿಟಕಿ ಹೊರಗಡೆ ನೋಡಿದ ಬೆಳಕು ನಿಧಾನವಾಗಿ ಹೊಂಬಣ್ಣವಾಗುತ್ತಾ ಕಿತ್ತಲೆಯ ರಸದಂತೆ ಆಕಾಶವನೆಲ್ಲ ತುಂಬುತ್ತಿದೆ ಅನಿಸುತಿದ್ದರೆ ಇದಕ್ಕೆ ಸಂಜೆ ಎಂಬ ಮುದ್ಡಾದ ಹೆಸರಿದೆಯಲ್ಲ ಅಂದುಕೊಳ್ಳುತ್ತಾ ಅವನ ಮನಸ್ಸು ಖುಷಿಯಾಗುತ್ತಿರುವಾಗಲೇ ತನ್ನ ಭಾರವಾದ ಕಂಗಳನ್ನು ಇನ್ನೂ ಭಾರವಾಗಿಸಿಕೊಂಡು ನೆಲ ನೋಡುತ್ತಾ ಶಮಾ ಕಾರ್ ಬಳಿ ಬಂದಳು. "ಶಿವು ನೀನು ಇಲ್ಲಿರ್ತಿಯ ಅಂತ ಗೊತ್ತಿತ್ತು. ಅಲ್ಲಿ ಕ್ಯಾಬಿನ್ ಹತ್ರ ಇಲ್ಲ ಅಂದ್ರೆ ಇಲ್ಲೇ ಇರ್ತಿಯ ಅಂತ ಬಂದೆ" ನಕ್ಕಳು. ಇವಳ್ಯಾಕೆ ಅನವಶ್ಯಕವಾಗಿ ಅಗತ್ಯಕ್ಕಿಂತ ಹೆಚ್ಚಾಗಿ ನಗುತ್ತಾಳೆ ಅಂದುಕೊಂಡ. ಇವಳು ಪರಿಚಯವಾದ ದಿನ ನೆನಪಾಯಿತು " ಇವಳು ಶಮಾ ನನ್ನ ಅಕ್ಕನ ಮಗಳು ಅಂತ ಕೃಷ್ಣ ಪರಿಚಯ ಮಾಡಿ ಕೊಡುವಾಗ ಇವಳ ಕಣ್ಣುಗಳು ತುಂಬಾ ಭಾರಾವಾಗಿದೆ ಅನಿಸಿದ್ದು ಬಿಟ್ಟರೆ ಇವಳಲ್ಲಿ ನನ್ನನ್ನು ಹಿಡಿದಿದಬಹುದಾದದ್ದು ಏನು ಇಲ್ಲ ಅಂತ ಅನಿಸಿದ್ದು ಜ್ಞಾಪಕವಾಯಿತು. "ನಿದ್ದೆ ಮಾಡ್ತಿದ್ದೆ, ಬಾ ಕ್ಯಾಂಟಿನ್ ಗೆ ಹೋಗಿ ತಿನ್ನುತ್ತಾ ಮಾತಾಡೋಣ..." ಶಮಾ ಬಂದಿದ್ಲು ಅಂದ್ರೆ ಅನಘ ಎಷ್ಟೊಂದು ಚುಡಾಯಿಸಬಹುದು ಅಂದುಕೊಂಡ.<br /><br />2<br /><br />ಮುದ್ಡಾದ ನಿದ್ದೆ ಮುಗಿಸಿ ಎದ್ದು ಕಿಟಕಿ ಹೊರಗಡೆ ನೋಡಿದಳು ಅನಘ. ಭುವಿಗೆ ಎಲ್ಲವನ್ನು ಸುರಿದುಖಾಲಿಯಾದ ಆಕಾಶ ಹಿತವಾಗಿ ಮುಲುಗುಟ್ಟುತ್ತಿದೆ ಅನ್ನಿಸಿತು. ಅವಳಿಗೆ ಹಾಗೆ ತನ್ನ ರೂಮಿನಿಂದ ಹೊರಗಡೆ ನೋಡುತ್ತಾ ಕೂರುವುದೆಂದರೆ ಬಹಳ ಇಷ್ಟ ಅನ್ನುವುದು ಅವಳು ಕೂತಿರುವುದನ್ನು ನೋಡಿದರೆ ಗೊತ್ತಾಗುತಿತ್ತು. ಕತ್ತಲು, ಕಡಲು, ಮಳೆ, ಅಮ್ಮ ನನಗೆ ಪೂರ್ತಿ ಅರ್ಥ ಆದ ದಿನ ಬದುಕೊಕ್ಕೆ ಏನು ಉಳಿದೇ ಇರೋಲ್ಲ ಅಂತ ಹೊಳೀತು. ಆದರೆ ನದಿ, ಹಕ್ಕಿ, ನಗು, ನಕ್ಷತ್ರ ಇಲ್ಲ ಅಂದ್ರೆ ನಂಗೆ ಬದುಕೊಕ್ಕೆ ಆಗಲ್ಲ ಅಂದಿದ್ದ ಅವನ ಮಾತುಗಳ ಪುನರಾವರ್ತನೆಯೇ ತನ್ನ ಮನಸಿನಲ್ಲಿ ಮೂಡಿದ್ದು ಅನ್ನಿಸಿದರೂ ಅವನ ನೆನಪೇ ಉಸಿರಲ್ಲಿ ಸಣ್ಣ ಪುಳಕವನ್ನು ತುಂಬಿತು.<br /><br /><br />ಅವತ್ತು ಅವನು ಬೆಂಗಳೂರಿನಲ್ಲಿ ಸಿಕ್ಕಾಗ ತುಂಬಾ ಬೇಜಾರಾಗಿದ್ದಾನೆ ಅಂತ ಗೊತ್ತಾಗುತ್ತಿತ್ತು. ಬೇಜಾರ್ ಯಾಕೆ? ಕಾರಣ ಹೇಳು ಅಂತ ಕೇಳಿದ್ದು ಸ್ಟುಪಿಡಿಟಿ. ಎಷ್ಟೊಂದು ಸತಿ ಬೇಜಾರಾಗಿರೋವಾಗ ಯಾರಾದರು ಕಾರಣ ಕೇಳಿದರೆ "ಕಾರಣ ಗೊತ್ತಿಲ್ಲ ನಂಗ್ ಒಂದೊಂದ್ ಸತಿ ಹಿಂಗಾಗುತ್ತೆ ಅಂತ ನಾನೇ ಹೇಳಿಲ್ಲವ...."<br /><br />ಅಡುಗೆ ಮನೆಗೆ ಎದ್ದು ಹೋದಳು.ಅಜ್ಜಿ ಎಂದಿನಂತೆ ಬಿಡದೆ ಮಾತಾಡುತಿದ್ರೆ ಚಿಕ್ಕಮ್ಮ ತಾನು ಈ ಲೋಕದವಳೇ ಅಲ್ಲ ಅನ್ನೋತರ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಾ ಅಜ್ಜಿಯ ಮಾತು ತನಗೆ ತಾಕುತ್ತಲೇ ಇಲ್ಲ ಅನ್ನೋ ರೀತಿ ಇರುವುದು ಕಂಡಿತು.ಇದು ದಿನಾ ನೋಡುವ ದೃಶ್ಯವಾದರೂ ಚಿಕ್ಕಮ್ಮಂಗೆ ಹಂಗೆ ಹೇಗೆ ಇರೋಕೆ ಸಾಧ್ಯ ಅಂತ ಮತ್ತೆ ಅಶ್ಚರ್ಯವಾಯಿತು. "ಕಾಫಿ ಫ್ಲಾಸ್ಕ್ ನಲ್ಲಿದೆಯ?" ತಾನು ಯಾರನ್ನು ಕೇಳಿದೆ? ಚಿಕ್ಕಮ್ಮನನ್ನೋ, ಅಜ್ಜಿಯನ್ನೋ ಎಂದು ಗೊಂದಲಗೊಳ್ಳುತ್ತಲೇ, ಗ್ರೈಂಡರ್ ನಿಂದ ದೋಸೆ ಹಿಟ್ಟನ್ನು ಇಳಿಸುತಿದ್ದ ಚಿಕ್ಕಮ್ಮನನ್ನು ಹೊಸದಾಗಿ ಅನ್ನುವಂತೆ ನೋಡಿದಳು. ಚಿಕ್ಕಮ್ಮ ಎಷ್ಟು ಲಕ್ಷಣ ಅಲ್ಲವ ಮತ್ತೆ ಅನ್ನಿಸಿತು. "ಒಂದೈದೆ ನಿಮಿಷ ಕಾಯಿ ಪುಟ್ಟಾ, ಬಿಸಿ ಕಾಫಿ ಮಾಡ್ಕೊಡ್ತಿನಿ." ಅಂದರು ಅಜ್ಜಿ.<br /><br /><br />ಮತ್ತೆ ರೂಮಿಗೆ ಬಂದರೆ ಅಲ್ಲಿ ಅವನದೇ ಘಮ. ಅವನು ಈ ಮನೆಗೆ ಬಂದದ್ದೆ ಇಲ್ಲ ಆದ್ರೆ ಇಲ್ಲಿ ಮಾತ್ರ ನನಗೆ ಅವನ ಸಾಮಿಪ್ಯದ ಅನುಭವವಾಗುತ್ತೆ. ಅವನು ಯಾಕೆ ಇಷ್ಟು ಡಿಜೆಕ್ಟೆಡ್ ಆಗಿದಾನೆ ಈ ಮೆಲಂಖಲಿಗೆ ಕಾರಣ ಏನು ಅಂದುಕೊಳ್ಳುತ್ತಿರುವಾಗಲೇ ಡಿಜೆಕ್ಷನ್, ಮೆಲಂಖಲಿ, ಡೆಸ್ಪಾಂಡನ್ಸೀ, ಮಾರ್ಬಿಡಿಟೀ ಎಲ್ಲ ಹತ್ತಿರ ಹತ್ತಿರದ ಪದಗಳು ಆದರೆ ಒಂದಕ್ಕೊಂದಕ್ಕೆ ಇರುವ ವ್ಯತ್ಯಾಸ ಏನಂತ ನೋಡಲು ಡಿಕ್ಷನರಿ ಪುಟಗಳನ್ನು ತಿರುವಿದಳು. ಖಿನ್ನತೆ, ಮ್ಲಾನತೆ, ಉಮ್ಮಳ, ನಿರಾಸೆ, ಮಂಕು ಕವಿ, ಗೀಳು ಹಿಡಿದ ಮನಸ್ಸು ಅಂತೆಲ್ಲಾ ಎಲ್ಲ ಪದಗಳಿಗೂ ಒಂದೇ ತರ ಇರುವ ಅರ್ಥಗಳನ್ನು ನೋಡುವಾಗ, "ಡಿಕ್ಷನರಿಗಳು ಇರಬಾರದು ಕಣೇ ನಮ್ಮ ಮನಸಿಗೆ ಬಂದ ಹಾಗೆ ಪದಗಳನ್ನ ಬಳಸಿಕೊಳ್ಳಬಹುದು ಅನ್ನೋ ಸ್ವಾತಂತ್ರನ ಕಿತ್ತುಕೊಳ್ಳತ್ತೆ ಅದು" ಅಂತ ಅವನು ಯಾವತ್ತೋ ಅಂದಿದ್ದು ಜ್ಞಾಪಕವಾಗಿ ಡಿಕ್ಷನರಿಯನ್ನ ಟಪ್ ಅಂತ ಮುಚಿಟ್ಟು ಅದರ ಮೇಲೆ ಸಿಟ್ಟು ಮಾಡಿಕೊಂಡಳು.<br /><br /><br />ನಿರಾಸೆ, ಮ್ಲಾನತೆ, ಖಿನ್ನತೆ, ಇತ್ಯಾದಿಗಳ ಮೂಲ ಯಾವುದು? ಯಾಕೆ ಯಾವಾಗಲಾದರೊಮ್ಮೆ ಎಲ್ಲರಿಂದ ದೂರ ಹೊರಟು ಹೋಗೋಣ ಅನ್ನಿಸುತ್ತೆ? ಯಾಕೆ ಎಲ್ಲರ ಮೇಲೆ ಅಘಾಧವಾಗಿ ಸಿಟ್ಟು ಬರುತ್ತೆ? ಬೇಜಾರಾಗುತ್ತೆ?ಸಂಕಟ, ಹಿಂಸೆ ಆಗುತ್ತೆ? ಸಿಟ್ಟನ್ನು ಚಲ್ಲಲಾರದೆ ಅಸಹಾಯಕವಾಗಿ ಯಾಕೆ ಓದ್ದಾಡುತ್ತೇವೆ? ಅಹಂಗೆ ತುಂಬಾ ಪೆಟ್ಟಾದರೆ ಹಾಗಾಗುತ್ತಲ್ಲವ? ನಮ್ಮನ್ನು ಯಾರಾದರೂ ಅಸಡ್ಡೆ ಮಾಡಿದಾಗ, ಗಮನಿಸದೇ ಹೋದಾಗ, ಅವಮಾನ ಮಾಡಿದಾಗ, ಅರ್ಥವೇ ಮಾಡಿಕೊಳ್ಳುತ್ತಿಲ್ಲ ಅನ್ನಿಸಿದಾಗ ಹೀಗೆ ಆಗುತ್ತೆ ಆದರೆ ನಾವು ನಮ್ಮ ದುಃಖವನ್ನ, ನಿರಾಸೆಯನ್ನ ಇನ್ನ್ಯಾವುದೋ ಕಾರಣದಿಂದ ಆಗಿದೆ ಅಂದುಕೊಳ್ಳುತ್ತೇವೆ. "ನಿನ್ನ ಅಹಂಗೆ ಪೆಟ್ಟು ಕೊಟ್ಟೋರು ಯಾರು? ಯಾರಾದರಾಗಲಿ ಹೇಳಬೇಡ ಆದರೆ ಇನ್ನೂ ಮುಂದೆ ಅದಕ್ಕೆಲ್ಲಾ ತಲೆಕೆಡಸಿಕೊಳ್ಳಬೇಡ." ಅಂತ ನಾನು ಹೇಳಿದ್ದು ಸರಿ ಅಂದುಕೊಂಡಳು .<br /><br /><br />3<br /><br />ಆಂಧ್ರ ಹೊಟೇಲಿನಲ್ಲಿ ಉಟಕ್ಕೆ ಅಂತ ಆಫೀಸಿನವರ ಜೊತೆ ಹೋದಾಗ ಅಲ್ಲಿ ಅವರು ಬಡಿಸಿದ ಚಟ್ನಿಪುಡಿ ನೋಡುತ್ತಲೇ ಅನಘಳ ನೆನಪಾಯಿತು. ಅವಳು ಹೇಳಿದ್ದನ್ನು ನೆನಪಿಸಿಕೊಳ್ಳತೊಡಗಿದ................. " ಅಪ್ಪನ ಜೊತೆ ನಾನು ನನ್ನ ತಮ್ಮ ಉಟ ಮಾಡ್ತಿದ್ದಿದ್ದು ಅಂದ್ರೆ ಶನಿವಾರ, ಭಾನುವಾರದ ದಿನ ಮಾತ್ರ. ಭಾನುವಾರ ಪುಲಾವೋ, ಬಿಸಿಬೇಳೆ ಬಾತ್, ಪುಳಿಯೊಗ್ರೆನೊ ಏನಾದ್ರೂ ಮಾಡಿರೋರು, ಜೊತೆಗೆ ಕಂಪಲ್ಸರಿ ಜಿರಿಗೆ,ಮೆಣಸು, ತೆಂಗಿನ ಕಾಯಿ ಹಾಕಿದ ಮೊಸರನ್ನ. ಅಪ್ಪ ಅಮ್ಮಂಗೆ ಮೊಸರನ್ನಕ್ಕೆ ತೆಂಗಿನಕಾಯಿ ಹಾಕೋದರ ಬಗ್ಗೆ ಯಾವಾಗಲೂ ಪುಟ್ಟ ಜಗಳ ಆಗೋದು. "ನೀ ಕಾಯಿ ತುರ್ದಿದ್ದು ಕಮ್ಮಿ ಆಯ್ತು ಸಾಕಾಗಲ್ಲ." ಅಂತ ಅಪ್ಪ ಅಮ್ಮಂಗ್ ಹೇಳದು, "ನೀವು ಮೊಸರನ್ನಕ್ಕೆ ಒಂದ್ ರಾಶಿ ಕಾಯಿ ಪೆಟ್ಟಿದ್ರೆ ನಾ ತಿನ್ನಲ್ಲ" ಅಂತ ಅಮ್ಮ ಕೂಗಾಡದು ರೂಮಿನಲ್ಲಿ ಓದ್ಕೊಂಡು ಕೂರುತಿದ್ದ ನಂಗೆ ನನ್ನ ತಮ್ಮನಿಗೆ ಕೇಳಿಸುತ್ತಿತ್ತು. ನೀ ಹಿಂಗ್ ಕೂಗಿದ್ರೆ ಮಕ್ಕಳು ಏನ್ ಓದ್ತಾರೆ ಅನ್ನೋರು ಅಪ್ಪ. ಆಮೇಲೆ ವಾದ ತುಂಬಾ ಮೆತ್ತಗೆ ನಡೆಯುತ್ತಿತ್ತು. ಅರ್ಥ ಆಗದ ವಿಷಯ ಅಂದ್ರೆ ಪ್ರತಿ ವಾರ ಅದೇ ವಿಷಯದ ಮೇಲೆ ಜಗಳ ಆಡ್ತಿದ್ರಲ್ಲ ಅಂತ.<br /><br /><br />ನನಗೆ ಇವತ್ತಿಗೂ ಕಾಡೋದು ಅಂದ್ರೆ ಶನಿವಾರದ ಮಧ್ಯಾನ್ಹದ ಉಟ. ನಾನು ನನ್ನ ತಮ್ಮ ಅಪ್ಪ ಬರೋಹೊತ್ತಿಗೆಲ್ಲಾ ಉಟ ಮುಗಿಸಿರ್ತಿದ್ವಿ.ಅಪ್ಪ ಅಮ್ಮ ಉಟಕ್ಕೆ ಕೂತ್ರೆ, ನಾ ಬಡಿಸುತ್ತಿದ್ದೆ. ನಮ್ಮ ಊಟ ಹಿಂಗಿರ್ತಿತ್ತು.... ಅನ್ನ ಸಾರು ನೆಂಚಿಕೊಳ್ಳೋಕೆ ಯಾವುದಾದರೂ ಪಲ್ಯ ಅಥವಾ ಸಂಡಿಗೆ, ಹಪ್ಪಳ, ಆಮೇಲೆ ಅನ್ನ ಚಟ್ನಿ ಪುಡಿ ಎಣ್ಣೆ ಹಾಕಿ ಕಲ್ಸೊದು, ಅದಕ್ಕೆ ನೆಂಚಿಕೊಳ್ಳೊಕ್ಕೆ ಸಾರಿನ ತಳದಲ್ಲಿರೊ ಬೇಳೆ. ಆಮೇಲೆ ಅನ್ನ ಮೊಸರು ಉಪ್ಪಿನಕಾಯಿ. ವಾರದಲ್ಲಿ ಮೂರು ನಾಲ್ಕು ದಿನ ಸಾರಿನ ಬದಲು ಹುಳಿನೊ ಅಥವಾ ಮಜ್ಜಿಗೆ ಹುಳಿನೊ ಇರ್ತಿತ್ತು. ಆದ್ರೆ ಚಟ್ನಿ ಪುಡಿ ಅನ್ನ ಮೊಸರನ್ನ ಇರಲೇ ಬೇಕು. ಚಟ್ನಿ ಪುಡಿ ಖಾಲಿಯಾದ ಒಂದೆರಡು ದಿನ ಪುಳಿಯೊಗ್ರೆ ಗೊಜ್ಜಿನಲ್ಲೋ ಅಥವಾ ಉಪ್ಪಿನಕಾಯಿ ರಸದಲ್ಲೋ ಕಲಸಿಕೊಂಡು ತಿನ್ನುತಿದ್ವಿ. ಅಷ್ಟರೊಳಗೆ ಅಮ್ಮ ಚಟ್ನಿ ಪುಡಿ ಮಾಡಿರೋಳು. ಮತ್ತೆ ಅದೇ ರೊಟೀನು.<br /><br />ಶನಿವಾರ ಮಧ್ಯಾನ್ಹ ನಾವು ಸ್ಕೂಲಿನಿಂದ ಬಂದು ಉಟ ಮಾಡಿ ಟೀವಿ ನೋಡ್ತಾ ಕೂರ್ತಿದ್ವಿ. ೨ ಕಾಲು ೨.೩೦ ಹೊತ್ತಿಗೆ ಅಪ್ಪ ಆಫೀಸಿನಿಂದ ಬಂದು ಕೈ ಕಾಲ್ ತೊಳೆದು ಅಮ್ಮನ ಜೊತೆಗೆ ಉಟಕ್ಕೆ ಕೂರೋರು. ನಾನು ಬಡಿಸ್ಟಿದ್ದೆ. ಅಪ್ಪ ಚಟ್ನಿ ಪುಡಿ ಅನ್ನದಲ್ಲಿ ಕಲಸಿಕೊಂಡು ತಿನ್ನೋವಾಗ ಬರೋ ಘಮ ಇದೆಯಲ್ಲಾ ನಂಗೆ ತುಂಬಾ ಇಷ್ಟ್ಟ ಅದು. ನಾ ಕಲ್ಸಿಕೊಂಡಾಗ ಯಾಕೆ ಹಂಗೆ ಘಮ ಬರ್ತಿರ್ಲಿಲ್ಲ ಅಂತ ಇನ್ನೂ ಗೊತ್ತಾಗಿಲ್ಲ. ನಾನು ಎಲ್ಲಾ ರೀತಿಯ ಕಾಂಬಿನೇಷನ್ ಅಂದರೆ ಒಂದು ದಿನ ಚಟ್ನಿ ಪುಡಿ ಜಾಸ್ತಿ ಹಾಕೊಂಡು, ಇನ್ನೊಂದಿನ ಎಣ್ಣೆ ಕಮ್ಮಿ ಹಾಕೊಂಡು, ಎರಡೂ ಜಾಸ್ತಿ ಹಾಕೊಂಡು, ಇನ್ನೂ ಹೀಗೆ ಏನೇನೋ ಪ್ರಯತ್ನ ಮಾಡಿ ಕೊನೆಗೆ ಅಪ್ಪ ಎಷ್ಟು ಚಟ್ನಿ ಪುಡಿ ಎಷ್ಟು ಎಣ್ಣೆ ಹಾಕ್ಕೊತಾರೆ ಅಂತ ಗಮನಿಸಿ ಅದೇ ರೀತಿ ಹಾಕ್ಕೊ೦ಡು ಪ್ರಯತ್ನ ಮಾಡಿದ್ರೂ ಅಪ್ಪ ತಿನ್ನೋವಾಗ ಬರ್ತಿದ್ದ ಘಮ ಬೇರೇನೆ. ಜಸ್ಟ್ ಔಟ್ ಆಫ್ ದ್ ವರ್ಲ್ಡ್ ಅಂತಾರಲ್ಲ ಹಾಗೆ. ಅಪ್ಪ ತಿನ್ನೋವಾಗ ನಂಗೆ ಎಷ್ಟು ಟೆಂಪ್ಟ್ ಆಗೋದು ಅಂದ್ರೆ ಅಪ್ಪನ ತಟ್ಟೆಗೆ ಕೈಹಾಕಿ ತಿಂದುಬಿಡಣ ಅನ್ನ್ಸೋದು. ಆದ್ರೆ ಯಾವತ್ತೂ ಹಂಗ್ ಮಾಡಿರ್ಲಿಲ್ಲ ನಾನು. ಹಂಗ್ಯಾಕೆ ಮಾಡಲಿಲ್ಲ ಅಂತ ನಂಗೆ ಗೊತ್ತಿಲ್ಲ. ಅಪ್ಪ ಒಂದ್ಚೂರು ತಿನ್ಸೂ ಅಂದ್ರೆ ಅಪ್ಪ ಖಂಡಿತ ತಿನ್ಸಿರೋರು.ಆದ್ರೆ ನಂಗೆ ಕೇಳಬೇಕು ಅಂತಾನೆ ಗೊತ್ತಾಗುತ್ತಿರಲಿಲ್ಲ. ಹಂಗೇನಾದ್ರೂ ತಿನ್ನಿಸಿಬಿಟ್ಟಿದ್ದಿದ್ರೆ, ನಿರಾಶೆ ಆಗೋಗದೇನೋ..ಅಥವಾ ಚಟ್ನಿ ಪುಡಿ ಅನ್ನ ಕಲಸ್ಕೊಂಡು ತಿನ್ನೋವಾಗ್ಲೆಲ್ಲ ಅಪ್ಪನ ನೆನಪು ಬರ್ತಿಲಿಲ್ವೇನೋ ಅಂದಿದ್ದಳು. ವಾಸ್ತವತೆಯ ನಿರಾಸೆಗೆ ಹೆದರಿ ಕಲ್ಪನೆಯಲ್ಲೇ ಸುಖ ಕಂಡುಕೊಳ್ಳುವ ಹುಡುಗಿ ಅವಳು.ಅದಕ್ಕೆ ಮತ್ತೊಮ್ಮೆ ಪುರಾವೆ ಸಿಕ್ಕಿತಲ್ಲಾ....<br /><br /><br />ನಾವು ಅಂದು ಮೊದಮೊದಲು ಸೇರಿದ್ದೆವು ಅವತ್ತು ಎರಡನೆ ಸುತ್ತು ಪ್ರೀತಿ ಮುಗಿದ ಮೇಲೆ ಅವಳು ಮಾತಾಡದೆಕೂತಿದ್ದಳು ಕಣ್ಣುಗಳಲ್ಲಿ ಶೂನ್ಯ ಸುಸ್ತಾಗಿರಬೇಕು ಅನ್ನಿಸಿತು. <br />"ಅನಘ ಸುಸ್ತಾಯ್ತಾ' ಕೇಳಿದೆ.<br />"ಉಹೂ.." ಮಾತು ಮುಂದುವರಿಸುತ್ತಾಳೆ ಎಂದು ತಿಳಿದಿತ್ತು ಸ್ವಲ್ಪ ಹೊತ್ತು ಸುಮ್ಮನಿದ್ದೆ.<br />"ಶಿವು ಇದು ಬರಿ ಇಷ್ಟೇನಾ ಇದನ್ನೇ ಕವಿಗಳು, ಲೇಖಕರು ಅಷ್ಟು ಪರಿಪರಿಯಾಗಿ ಬಣ್ಣಿಸುತ್ತಾರ? ಇಷ್ಟ್ಟಕ್ಕಾಗಿ ಜನ ಅಷ್ಟೊಂದು ಹಾತೊರೆಯುತ್ತಾರ? ಹುಚ್ಚಾರಾಗುತ್ತರ? ಇದೇ ಉತ್ಕಟತೆಯ ಔನತ್ಯ ಅನ್ನುವಂತೆ ಆಡುತ್ತಾರ, ನಿನಗೆ ನನ್ನ ಜೊತೆಗೆ ಸಿಕ್ಕ ಅನುಭವವೇ ಬೇರೆ ಶಮಾಳ ಜೊತೆ ಸಿಗೋ ಅನುಭವವೇ ಬೇರೆ ಅನ್ನಿಸುತ್ತಾ? ಅಥವಾ ನಾನೇ ಏನೇನೋ ಕಲ್ಪಿಸಿಕೊಂಡಿದ್ದೇನಾ? ಅದಕ್ಕೆ ನಂಗೆ ನಿರಾಸೆ ಆಗ್ತಿದೆಯಾ?" ಅಂತ ಅವಳು ಪ್ರಶ್ನಿಸುತ್ತಲೊ ತನ್ನನ್ನೇ ತಾನು ಕೇಳಿಕೊಳ್ಳುತ್ತಳೋ ಇದ್ದರೆ ನನಗೆ ಮೊದಮೊದಲು ಇಜಿಪ್ಟ್ ನ ಪಿರಮಿಡ್ ನೋಡಿದಾಗ ಆದ ನಿರಾಸೆ ನೆನಪಾಯಿತು. ಎಲ್ಲರೂ ಹೊಗಳುತಿದ್ದ ಜಗತ್ತಿನ ಅಧ್ಬುತಗಳಲ್ಲಿ ಒಂದಾದ ಅವನ್ನು ನೋಡಿದಾಗ ಅನ್ನಿಸಿದ್ದು ಇದು ಬರಿ ಇಷ್ಟೇನಾ? ನನ್ನ ಕಲ್ಪನೆಯಲ್ಲಿ ಅಖಂಡವಾದದ್ದು ಬೇರೇನೋ ಇತ್ತಲ್ಲಾ ಅಂತ ತಳಮಳವಾಗಿತ್ತು. ವಾಸ್ತವಿಕತೆಗೂ ಕಲ್ಪನೆಗೂ ಎಷ್ಟೊಂದು ವ್ಯತ್ಯಾಸ ಅಲ್ಲವ? "supremecy of fantacy over fact" ಅಂತ ಒಂದು ಎಡವಟ್ಟಾದ ಸಾಲು ಹೊಳೆದು, ಸಾಲು ಎಡವಟ್ಟಾಗಿದ್ದರು ಹಿತವಾಗಿದೆ ಅನ್ನಿಸಿತು. 'ಪಿರಮಿಡ್ದಿನ ಬಗ್ಗೆ ಏನೇನೋ ಕಲ್ಪಿಸಿಕೊಂಡು ನಿರಾಸೆಗೊಂಡಿದ್ದು ನನ್ನ ತಪ್ಪಲ್ಲವ? ಪಿರಮಿಡ್ದೆನು ತನ್ನ ಬಗ್ಗೆ ತಾನು ಹೇಳಿಕೊಂಡಿರಲಿಲ್ಲವಲ್ಲ ಅಂತ ತನಗೆ ಅನ್ನಿಸಿದ್ದು, ಅವಳ ಕಲ್ಪನೆಯ ಎತ್ತರಕ್ಕೆ, ಅದರ ಆಳ ವಿಸ್ತಾರಗಳಿಗೆ ತಕ್ಕಂತೆ ತನಗೆ ಅವಳನ್ನು ತೃಪ್ತಿ ಪಡಿಸಲಾಗಲಿಲ್ಲವಲ್ಲ ಎಂಬ ಸುಪ್ತ ಮಾನಸಿನ ಹತಾಶೆಗೆ ಮುಲಾಮಿನಂತೆ ಹೊಳೆದ ಸಮರ್ಥನೆಯಿರಬಹುದ? "ಪಿರಮಿಡ್ದೆನು ತನ್ನ ಬಗ್ಗೆ ತಾನು ಹೇಳಿಕೊಂಡಿರಲಿಲ್ಲ ಅನ್ನುವುದು ನಾನು ಅವಳಿಗೆ ನಿನ್ನ ಸುಖದ ಉತ್ಕಟತೆಯನ್ನು ಮೀಟುತ್ತೇನೆ ಎಂದೇನೂ ಹೇಳಿರಲಿಲ್ಲವಲ್ಲಎಂಬುದರ ರೂಪಕವಾ?' ಅನಿಸಿದ್ದು ನೆನಪಾಗಿ ನಿಟ್ಟುಸಿರಿಟ್ಟ.ಹಾಗಾದರೆ ಅವಳ ಚಟ್ನಿಪುಡಿಯ ಅನುಭವಾದಂತೆ ಬರಿ ಕಲ್ಪನೆಗಳಲ್ಲೇ ಉಳಿದುಹೋಗಬೇಕಾ? ವಾಸ್ತವಕ್ಕೆ ಎದುರಾಗಬಾರದ? ಕೇಳಿಕೊಂಡ.<br /><br />"ನಿನಗೆ ನನ್ನ ಜೊತೆಗೆ ಸಿಗೋ ಅನುಭವವೇ ಬೇರೆ ಶಮಾಳ ಜೊತೆ ಸಿಗೋ ಅನುಭವವೇ ಬೇರೆ ಅನ್ನಿಸುತ್ತಾ?" ಅಂತ ಅವಳು ಯಾಕೆ ಕೇಳಿದ್ದಳು? ಶಮಾಳನ್ನು ನಾನು ಸೇರುತ್ತೇನೆ ಅಂತ ಅವಳು ಅಂದುಕೊಂಡದ್ದು ಯಾಕೆ? ಶಮಾ ನನ್ನ ಆಸಕ್ತಿ ಕೆರಳಿಸಲು ಪ್ರಯತ್ನಿಸುತ್ತಾ ನನ್ನ ಜೊತೆ ಮಾತಾಡೋವಾಗಲೆಲ್ಲ , ವ್ಯವಹರಿಸೋವಾಗಲೆಲ್ಲ ನನ್ನ ಒರಗಿಕೊಂಡೋ ಪಕ್ಕದಲ್ಲಿ ಕೂತುಕೊಂಡೋ ಇರುವುದನ್ನು ಹಾಗೂ ನಾನು ಇದ್ಯಾವುದನ್ನು ವಿರೋಧಿಸದೆ ಸುಮ್ಮನೇ ಇರುವುದನ್ನು ನೋಡಿದ್ದರಿಂದ ಹಾಗೆಂದುಕೊಂಡಳ, ನಿಜವಾಗಲೂ ನಾನು ಶಮಾಳನ್ನುಕೂಡಿದ್ದು ಮೊನ್ನೆ ಮೊನ್ನೆ, ಅವಳನ್ನು ಕೂಡಿದ್ದು ನನ್ನ ಇಚ್ಛೆಯಿಂದ ಅಂತೂ ಅಲ್ಲ. ಅವಳು ಎಡೆಬಿಡದೆ ನನ್ನ ಬೆನ್ನು ಬಿದ್ದಿದರಿಂದ ಅಲ್ಲವ. ಸುಮ್ಮನಿದ್ದವನು ಆಫೀಸಿನವರ ಮೇಲಿದ್ದ ಸಿಟ್ಟನ್ನ ತೀರಿಸಿ ಕೊಳ್ಳಲು,ಅಲ್ಲಿ ಆದ ಅವಮಾನ ಅಸಡ್ಡೆಯನ್ನು ನೀಗಿಕೊಳ್ಳಲು ಇವಳನ್ನು ಬಳಸಿಕೊಂಡೆನ? ಬಳಸಿಕೊಂಡೆ ಅನ್ನುವುದು ಸರಿಯಾದ ಪದವೇ ಅಲ್ಲ.. ಬಳಸಿಕೊಂಡೆ ಅನ್ನಬೇಕಾದರೆ ನನಗೆನಾದರೂ ಉಪಯೋಗವಗಿರಬೇಕು ಅಲ್ಲವಾ? ಆದರೆ ನನಗೇನು ಅನ್ನಿಸಲೇ ಇಲ್ಲವಲ್ಲ.. ನನ್ನ ಮನಸಿನಲ್ಲಿ ಕಡೆಯುತ್ತಿದ್ದ ಕಳಮಲಗಳು ಕಡೆದು ನಿರಾಗುವ ಬದಲು ಇನ್ನೂ ಹೆಪ್ಪುಗಟ್ಟಿದುವಲ್ಲ. ಬಳಸಿಕೊಂಡಿದಿದ್ದು ನಾನಾ ಅವಳಾ..' ನಿಟ್ಟುಸಿರಿಟ್ಟ!<br /><br />4<br /><br />ಅವಳು ಭಾನುವಾರಕ್ಕೆ ಇಟ್ಟಿರುವ ಮತ್ತೊಂದು ಹೆಸರೇ, ಅಭ್ಯಂಜನದ ದಿನ ಎಂದು. ಭಾನುವಾರ ಬೆಳಿಗ್ಗೆ ಏಳುತ್ತಲೇ ಹಲ್ಲುಜ್ಜಿ ಅಜ್ಜಿ ಮಾಡಿರುವ ಸಕ್ಕರೆ ಪಾನಕದಂತೆ ಇರುವ ಕಾಫಿಯನ್ನ ಲೋಟಕ್ಕೆ ಬಗ್ಗಿಸಿಕೊಂಡು ಹಾಲಿಗೆ ಬಂದು ಕಸಾಗುಡಿಸುತ್ತಿರುವ ಬೈರನ ಹೆಂಡತಿಯನ್ನ ನೋಡುತ್ತಾ ತಾನು ಚಿಕ್ಕವಳಿದ್ದಾಗ ಅಮ್ಮನ ಹಳೆ ಸೀರೆಯನ್ನು ಉಟ್ಟಿದ್ದ ಅವಳನ್ನೇ ಅಮ್ಮ ಎಂದುಕೊಂಡಿದ್ದು ನೆನಪಾಗುತ್ತಿರುವಾಗಲೆ ಅಮ್ಮ ಬಂದು "ಬೇಗ ಬೇಗ ಕಾಫಿ ಕುಡಿ ಎಣ್ಣೆ ಹಾಕ್ಬಿಡ್ತೀನಿ ಸ್ನಾನ ಮಾಡ್ಕೊಂಬಿಡು. ಇಲ್ಲ ತಿಂಡಿ ತಿಂದು ಎಣ್ಣೆ ಹಾಕ್ಕೋತಿಯೋ?" ಎಂದು ಕೇಳಿದ ಪ್ರಶ್ನೆಗೆ<br />"ತಿಂಡಿ ಬೇಕು.." ಎಂದು ಉತ್ತರಿಸಿದ್ದು ಅವಳಿಗೆ ಕೇಳಿಸಿತೋ ಇಲ್ಲವೋ ಎಂದುಕೊಳ್ಳುತ್ತಿರುವಾಗಲೇ<br />"ದೋಸೆ ಹಾಕಾಗಿದೆ ಆಮೇಲೆ ಆರ್ ಹೋಯ್ತು ಅಂತಿಯ ಬಂದು ತಿನ್ನು." ಎಂದು ಕೂಗಿಕೊಳ್ಳುತ್ತಿರುವ ಅಮ್ಮನ ಮಾತು ಕೇಳಿಸಿ, ತಿಂಡಿ ತಿಂದು, ಆಮೇಲೆ ಎಣ್ಣೆ ಹಾಕಿಕೊಂಡು ಒಂದರ್ಧ ಗಂಟೆ ಬಿಟ್ಟು ಸ್ನಾನಕ್ಕೆ ಇಳಿದಾಗ, "ಅಮ್ಮ ಹಂಡೆಯಿಂದ ಸುರಿವ ಬಿಸಿನೀರಿಗೆ ಬಚ್ಚಲಿನ ಬಿಳಿ ಗೋಡೆಗಳೇ ಕೆಂಪಾಗಿವೆ ನಾನು ಕೆಂಪಾಗುವುದು ಏನು ಮಹಾ..." ಎಂದು ಕೊಂಡು ಸ್ನಾನ ಮುಗಿಸಿ ಅಮ್ಮ ಹೊದೆಸುವ ಕಪ್ಪು ರಗ್ಗಿನೊಳಗೆ ಸಾದ್ಯಾಂತವಾಗಿ ಬೆವರಿ,ಎದ್ದು,ಬಟ್ಟೆ ಹಾಕಿಕೊಂಡು, ದೇವರಿಗೆ ನಮಸ್ಕಾರ ಮಾಡಿ, ಜಗುಲಿಗೆ ಬಂದರೆ ಎಳನೀರು ಕೊಚ್ಚಿ ಕೊಡುವ ಭೈರ........<br /><br /><br />ಸೊಂಟದ ಕೆಳಗಿನವರೆಗೂ ಇಳಿಬಿಟ್ಟ ತಲೆಗೂದಲು ತುಂಬಾ ಕಪ್ಪಗೆನಿಲ್ಲ ಅದಕ್ಕೆ ಹೊಂಬಣ್ಣದ ಲೇಪನವಿದೆ. ಅವಳು ಅಭ್ಯಂಜನ ಮಾಡಿದ ಸಂಜೆ ನೀಲಿ ಬಣ್ಣದ ದೂರ ದೂರ ಹಲ್ಲಿರುವ ಹಾಗೂ ಜೇನಿನ ಬಣ್ಣದ ಹತ್ತಿರ ಹತ್ತಿರ ಹಲ್ಲಿರುವ ಬಾಚಣಿಗೆಗಳನ್ನು ಪಕ್ಕ ಪಕ್ಕದಲ್ಲಿಟ್ಟುಕೊಂಡು, ಸಿ ಡಿ ಯಲ್ಲಿ ಮಂದ್ರ ಸ್ವರದಲ್ಲಿ ಬರುತ್ತಿರುವ ಗಜಲ್ಗಳಿಗೆ ಕಿವಿಯಾಗುತ್ತಾ, ಕಿಟಕಿಯ ಹೊರಗೆ ಕಾಣುವ ಸಂಜೆಯ ಬಣ್ಣಗಳಿಗೆ ಬೆರಗಾಗುತ್ತಾ, ಅವುಗಳ ಆಳವನ್ನು ಅಳೆಯುತ್ತಾ, ಕೂದಲ ಒಂದೊಂದು ಸಿಕ್ಕು ಬಿಡಿಸಿದಾಗಲೂ ಹಾಯ್...ಎನಿಸಿ, ಹಾಯ್... ಎನಿಸುತ್ತಲೇ ಅವನ ನೆನಪಾಗಿ, ಅವನ ನೆನಪಾಗುತ್ತಲೇ ಯಾವುದೋ ಯೋಚನೆಯಲ್ಲೋ, ನೆನಪಿನಲ್ಲೋ, ಕಲ್ಪನೆಯಲ್ಲೋ ಕಳೆದು ಹೋಗುವ, ಕಳೆದುಹೋದಂತೆಲ್ಲಾ ತಿಳಿಯಾಗುವ ಪ್ರಕ್ರಿಯೆಗೆ ಅವಳು ಸಿಕ್ಕುಬಿಡಿಸಿಕೊಳ್ಳುವುದು ಎಂದು ಹೆಸರಿಟ್ಟಿರುವುದು ಎಷ್ಟೊಂದು ಸೂಕ್ತವಾದದ್ದು ಅನಿಸುತ್ತದೆ.<br /><br />ಹೀಗೆ ಸಿಕ್ಕು ಬಿಡಿಸಿಕೊಳ್ಳುತ್ತಲೇ ಅವನು ಹೇಳಿದ್ದನ್ನು ಜ್ಞಾಪಿಸಿಕೊಂಡಳು " ನಾನು ಅಷ್ಟೆಲ್ಲಾ ಸುತ್ತಿ ಮಾಡಿ ಆ ಬಳ್ಳಾರಿ , ಬಿಜಾಪುರಗಳ ಸುಡು ಬಿಸಿಲಿನಲ್ಲಿ ಕೆಲಸಮಾಡಿಕೊಂಡು ಬಂದರೆ ನನ್ನ ಯಾವುದೊಂದು ರಿಪೋರ್ಟು ಸರಿಯಾಗಿ ಪ್ರಕಟ ಆಗಿಲ್ಲ. ಹೀಗೆ ಮಾಡುವುದಾಗಿದ್ದಾರೆ ನನ್ನನ್ನೇ ಅಷ್ಟು ದೂರ ಕಳುಹಿಸುವ ಅವಶ್ಯಕತೆ ಏನಿತ್ತು? ನನಗೆ ಇವರ್ಯಾರು ಬೆಲೆ ಕೊಡ್ತಿಲ್ಲ ನನ್ನ ಅವಶ್ಯಕತೆ ಇವರಿಗಿಲ್ಲ ಅಂತ ಅನ್ನಿಸುತ್ತೆ. "ಹೀಗ್ಯಾಕೆ ಮಾಡಿದಿರಿ? ಹೀಗೇಕಾಯ್ತು?" ಅಂದರೆ "ಈ ಸರಿ ಅಡ್ಜಸ್ಟ್ ಮಾಡ್ಕೊಳಿ ಶಿವು, ಮುಂದಿನ ಸತಿಯಿಂದ ಈ ತಪ್ಪುಗಳು ಆಗದಂತೆ ನೋಡ್ಕೋತಿವಿ." ಅಂತಾರೆ. ನನ್ನನೆಲ್ಲ ಇವರು ತುಳಿಯಕ್ಕೆ ಪ್ರಯತ್ನ ಪಡ್ತಿದ್ದಾರೆ, ನಾನು ಖ್ಯಾತಿಗೆ ಬರುತ್ತಿರೋದು ಇವರಿಗೆ ತಡೆಯೊಕ್ಕೆ ಆಗ್ತಿಲ್ಲ ಅದಕ್ಕೆ ಹೀಗೆ ಮಾಡ್ತಿದಾರೆ ಅಂತ ಸ್ಪಷ್ಟವಾದಾಗ ಹಿಂಸೆ ಆಗುತ್ತೆ. ಎಲ್ಲರೂ ಹೀಗೆ ಮಾಡಿ ನನ್ನ ಬೆಳೆಯೋಕೆ ಬಿಡಲ್ಲವೇನೋ ಅಂತ ಭಯವಾಗುತ್ತೆ." ಅಂದಿದ್ದ ಅವನ ಕಣ್ಣ ಅಂಚಿನಲ್ಲಿ ನೀರು ಹೆಪ್ಪುಗಟ್ಟಿದ್ದು ಕಂಡದ್ದು ನನ್ನ ಕಲ್ಪನೆಯೋ ಅಥವಾ ನಿಜವೋ ಎಂದು ಗೊಂದಲವಾಯಿತು. ಅವನು ಆ ರೀತಿ ಇದ್ದದ್ದು ನೆನಪಾಗಿ ಸಂಕಟವಾಯಿತು.<br /><br />5<br /><br />"ದೇಹಕ್ಕೆ ಗಾಯವಾದರೆ ಮುಲಾಮು ಹಚ್ಚಿ ಸರಿಪಡಿಸಿಕೊಳ್ಳಬಹುದು, ಆದರೆ ಮನಸ್ಸಿಗೆ ಗಾಯವಾದರೆ ಏನು ಮಾಡಲಾಗುವುದಿಲ್ಲ." ಅಂತ ಯಾವುದೋ ಒಂದು ಉಪನ್ಯಾಸದಲ್ಲಿ ಕೇಳಿದ್ದ ನೆನಪಾಗಿ ಮನಸ್ಸಿನ ಗಾಯಕ್ಕೆ ಮರೆವೆಂಬ ಮುಲಾಮಿದೆಯಲ್ಲಾ ದಿನಗಳು ಉರುಳಿದಂತೆ ಎಂಥಾ ಗಾಯಗಳು ವಾಸಿಯಾಗುತ್ತದೆ ಅಂದುಕೊಂಡ.<br /><br />'ಸಿರಿಗೆರೆಯ ನೀರಿನಲ್ಲಿ ಅರಳಿದ ತಾವರೆಯಲಿ ಕೆಂಪಾಗಿ ನಿನ್ನ ಹೆಸರು......', ಎಂದು ಸಿ ಡಿ ಇಂದ ಹಾಡು ಹೊಮ್ಮುತಿತ್ತು. ಹಾಡು ಮುಗಿಯುತ್ತಲೇ ಕೆ. ಎಸ್. ನಾ ರ ಈ ಹಾಡಿನ ಹುಡಿಗಿಯ ಹೆಸರೆನಿರಬಹುದೆನ್ದು ಅಶ್ಚರ್ಯವಾಯಿತು! ಯೋಚಿಸಿದ "ಹೊಂದಾಳೇ ಹೂವಿನಲಿ ಹೊರಟ ಪರಿಮಳದಲಿ ಕೆಂಪಾಗಿ ನಿನ್ನ ಹೆಸರು.." ಎಂದು ಖುಷಿಯಿಂದ ಗುನುಗಿದ. ಹೆಸರೇನೆಂದು ಹೋಳಿಯಲಿಲ್ಲ 'ಶಾರದೆ ಇರಬಹುದ?' ಕೇಳಿಕೊಂಡ. ಅನಘನನ್ನು ಕೇಳೋಣ ಅನ್ನಿಸಿತು. ಆದರೆ ಅವಳು ಕೊಡಬಹುದಾದ ಉತ್ತರ ಹೊಳೆಯಿತು. "ಹೆಸರು ಮುಖ್ಯ ಅಲ್ಲ ಕಣೋ ಅವಳ ನೆನಪಿನಲ್ಲಿ ಅವರು ಹಾಡಿದ ಹಾಡಿನ ಭಾವ ಮುಖ್ಯ" ಆದರೂ ಫೋನು ಮಾಡಿ " ಅನಘ , ಕೆ. ಎಸ್. ನಾ ರ 'ನಿನ್ನ ಹೆಸರು...' ಪದ್ಯದ ಹುಡುಗಿ ಹೆಸರೆನಿರಬಹುದೆ?" ಕೇಳಿದ. ಅವನು ಅಂದುಕೊಂಡಿದಕ್ಕಿಂತ ಭಿನ್ನವಾಗಿ ತಕ್ಷಣ ಅವಳು " ಉಲ್ಲಸಿನಿ" ಅಂದಳು. ಅಶ್ಚರ್ಯವಾಗಿ "ಯಾಕೆ?" ಕೇಳಿದ. " ಅಷ್ಟು ಬೇಜಾರಾಗಿದ್ದವನಿಗೆ ಉಲ್ಲಾಸ ತುಂಬಿದ ಹುಡುಗಿಯ ಹಾಡಲ್ಲವ ಅದು ಅದಕ್ಕೆ" ಅಂದಳು ಖುಷಿಯಿಂದ....ಖುಷಿ ಹರಡಿತು...</div>ಮೃಗನಯನೀhttp://www.blogger.com/profile/05798486490706460406noreply@blogger.com28tag:blogger.com,1999:blog-7077041789502080406.post-83767855860392605192008-05-19T21:27:00.000-07:002008-05-19T22:25:46.716-07:00ಅಲೆಬಂದು ಕರೆಯುವುದು ನಿನ್ನೊಲುಮೆಯರಮನೆಗೆ<span style="color:#ff0000;"><em><span style="color:#000000;"><strong>ಬೆಳಗ ಚೈತನ್ಯವೇ</strong></span></em></span><span style="color:#000000;">..</span><br />ಚುನಾವಣೆಯ ಬಿಸಿ ವಾತಾವರಣಕ್ಕೂ ತಟ್ಟಿರಬೇಕು, ಇಲ್ಲಿ ಚಳಿ ಇಲ್ಲ. ಒಳ್ಳೆಯದಾಯಿತು ಚಳಿ ಇದ್ದಿದ್ದರೆ ನೀನು ಇನ್ನೂ ಬೇಕೆನಿಸುತ್ತಿದ್ದೆ. ನೀನು ಹಾಲೆಂಡಿಗೆ ಹೋದಮೇಲೆ ಇಲ್ಲಿ ತುಂಬಾ ಬೋರು. ಅಮ್ಮ ಮನೆಗೆ ಬಾ ಅಂದಳು, ಕೆಲಸಕ್ಕೆ ಒಂದುವಾರ ರಜ ಹಾಕಿ ಅಮ್ಮನ ಜೊತೆ ಸುಮ್ಮನೆ ಶಾಪಿಂಗು, ಮೂವಿ ಅಂತ ಸುತ್ತುತ್ತಿದ್ದೇನೆ.<br /><br />ನಾನು ಅಮ್ಮ ಸಮುದ್ರದ ಬಳಿ ಹೋಗಿದ್ದೆವು. ಸಂಜೆ ಹೊತ್ತು, ಗಾಳಿ. ಅಪ್ಪಳಿಸುತ್ತಿದ್ದ ಅಲೆಗಳಿಗೆ ಪಾದಗಳನ್ನು ಒದ್ದೆ ಮಾಡಿ ಹೋಗುವ ಸಂಭ್ರಮ. ಅಲ್ಲೆಲ್ಲೋ ಸಮುದ್ರದಾಳದಲ್ಲಿ ಹುಟ್ಟಿ ಸುಳಿಸುಳಿದು ಬರುತ್ತಿದೆ ಅನಿಸುತ್ತಿದ್ದ ಗಾಳಿಗೆ ಮುಖಒಡ್ಡಿ ನಿಂತಿದ್ದರೆ ಅದು ನನ್ನ ತುಂಬ fierce ಆಗಿ, ಸಾದ್ಯಂತವಾಗಿ ಮುದ್ದಿಸುತ್ತಿದೆ ಅನ್ನಿಸಿತು. ಥೇಟು ನಿನ್ನಂತೆಯೇ ಅಂದುಕೊಂಡೆ.<br /><br /><strong>ಅಲೆಬಂದು ಕರೆಯುವುದು ನಿನ್ನೊಲುಮೆಯರಮನೆಗೆ</strong><br /><strong>ಒಳಗಡಲ ರತ್ನ ಪುರಿಗೆ</strong><br /><strong>ಅಲೆಯಿಡುವ ಮುತ್ತಿನಲೇ ಕಾಣುವುದು ನಿನ್ನೊಲುಮೆ</strong><br /><strong>ಒಳಗುಡಿಯ ಮೂರ್ತಿಮಹಿಮೆ</strong>...<br /><br />ಇವತ್ತು ಒಬ್ಬಳೇ ಇರಬೇಕೆನ್ನಿಸಿತು. ಅಮ್ಮನನ್ನು ಅವಳ ಮನೆಯಲ್ಲಿ ಬಿಟ್ಟು ನಾನು ಇಲ್ಲಿ ಮನೆಗೆ ಬಂದೆ. ನೀನು ಚಿಕ್ಕ ಮಕ್ಕಳ ಹಾಗೆ ಎಲ್ಲವನ್ನೂ ನಿನ್ನ ಮುಂದೆ ಹರವಿಕೊಂಡು ಕೆಲಸ ಮಾಡುತ್ತಿರುತ್ತೀಯಲ್ಲ ಆ ಚಿತ್ರ ಕಣ್ಣ ಮುಂದೆ ಹಾದು ಹೋಯಿತು. ನೀನು ಹಾಗೆ ಕೂತಿರೋವಾಗ ನಂಗೆ ಎಷ್ಟು ಇಷ್ಟ ಆಗ್ತೀಯ ಗೊತ್ತಾ... ಮನೆ ತುಂಬ ನೀಟಾಗಿದೆ, ಏನೂ ಹರಡಿಲ್ಲ ಕೊಳೆಯಾಗಿಲ್ಲ. ನೀನಿಲ್ಲವಲ್ಲ..ಉಹುಂ ಕೊರಗ್ತಾ ಇಲ್ಲ ನಾನು, ನಿನ್ನ ನೆನಪುಗಳಿಂದ ನನ್ನ ಒಂಟಿತನ ಘಮ ಘಮ.<br /><br /><br />ಕಿಷನ್ ಮೆಸೇಜ್ ಕಳುಹಿಸಿದ್ದ<br />"I have seen old ship<br />sail like swans asleep" ಇದರ ಬಗ್ಗೆ ಕಮೆಂಟು ಮಾಡು ಅಂತ. ಪದ್ಯ ಯಾರದು ಕೇಳಿದೆ. 'ಯಾರದೋ ಗೊತ್ತಿಲ್ಲ, ಪದ್ಯದ ಹೆಸರೂ ನೆನಪಿಲ್ಲ ಸಾಲುಗಳು ಮಾತ್ರ ನೆನಪಾದವು' ಅಂದ. ಖುಷಿಯಾಯಿತು ನನಗೆ. ಸಾಲುಗಳು ಹಾಗೇ ನೆನಪಾಗಬೇಕು ಅಲ್ಲವ.. ಹೆಸರಿನ ಹಂಗಿಲ್ಲದೆ, ಕವಿಯ ಹಂಗಿಲ್ಲದೆ? ಹಾಗೆ ನೆನಪಾಗೋದ್ರಲ್ಲೇ ಆ ಸಾಲುಗಳ ಸಾರ್ಥಕತೆ ಇದೆ ಅನ್ನಿಸಿತು. ನಿಂಗೇನನ್ನಿಸುತ್ತೆ ಹುಡುಗಾ..?<br /><br /><br /><strong><em>J.M Coetzee</em></strong>ಯ <em><strong>Disgrace</strong></em> ಕಾದಂಬರಿ ಒದುತ್ತಿದ್ದೆ ಹಾಯ್ ಬೆಂಗಳೂರಿನಲ್ಲಿ ಜಾನಕಿ ಈ ಪುಸ್ತಕದ ಬಗ್ಗೆ ಬರೆದಿದ್ದರು. ತುಂಬ ವಿಭಿನ್ನವಾಗಿದೆ ಕಣೋ ಕಾದಂಬರಿ ಅದರಲ್ಲಿ ಬರೋ <strong>David Lurie</strong> ಒಂದು ಕಡೆ ಹೀಗೆ ಹೇಳುತ್ತಾನೆ<br /><span style="color:#000000;"><strong>"But in my experience poetry speaks to you either at first sight or not at all. A flash of revelation a flash of response like lightning like falling in love."</strong></span> ಮತ್ತೆ ಇನ್ನೊಂದು ಕಡೆ ಲೇಖಕ ಹೇಳುತ್ತಾನೆ <strong>"<span style="color:#000000;">Exactly good or bad, he just does it. He dosent act on principle but on impulse."</span></strong> ನನಗೆ ಎಲ್ಲಕ್ಕಿಂತ ಅದರ ಆರನೇ ಅಧ್ಯಾಯ ತುಂಬ ಇಷ್ಟ ಆಯ್ತು.ನಿನ್ನ ತೋಳಿನ ಮೇಲೆ ತಲೆ ಇಟ್ಟು ಮಲಗಬೇಕು, ಇದನ್ನೆಲ್ಲಾ ಮಾತಾಡಬೇಕು, ಮಾತಾಡುತ್ತಾ ನಿನ್ನ ಎದೆಯ ಇಂಚಿಂಚನ್ನೂ ನನ್ನ ಬೆರಳುಗಳಲ್ಲಿ ಅಳೆಯಬೇಕು, ಅದರ ಹರವಿಗೆ ಸೋಲಬೇಕು, ಸುಸ್ಥಾಗಬೇಕು, ಸುಖ ಭೋರ್ಗರೆಯಬೇಕು... ಬೇಗ ಬಾ ಹುಡುಗಾ..........<br /><p><strong>.....<em>ನಿನ್ನ ಪೇಪೆಜೀನ್ಸ್<br /></em></strong></p>ಮೃಗನಯನೀhttp://www.blogger.com/profile/05798486490706460406noreply@blogger.com20tag:blogger.com,1999:blog-7077041789502080406.post-47220840759459578312008-03-28T01:13:00.000-07:002008-06-19T22:25:46.837-07:00ನಿಜದ ನೆರಳಿನ ನೆಲೆ<div align="left">ಅನಂತಮೂರ್ತಿಗೆ ತಾನು ಚಿತ್ರಕಾರನೋ ಕವಿಯೋ ಲೇಖಕನೋ ಆಗಬೇಕಿತ್ತೆಂದು ಬಹಳ ಸಲ ಅನ್ನಿಸಿದ್ದುಂಟು. ಏಕೆಂದರೆ ಅವನೇ ಹೇಳುವಂತೆ ಉದಾಹರಣೆಗೆ ನಿಮಗೆ ಟ್ರೈನ್ ಪದ ಕೇಳಿದ ತಕ್ಷಣ ಏನನ್ನಿಸುತ್ತೆ? ಉದ್ದದ ಟ್ರೇನು, ಅದರ ಚುಕುಬುಕು ಶಬ್ದ ಅಥವ ಹೆಚ್ಚಂದರೆ ಅದರ ಬಣ್ಣ ಇಲ್ಲವೇ ನೀವು ಟ್ರೇನಿಗಾಗಿ ಕಾದೂ ಕಾದೂ ಬೇಸತ್ತ ದಿನ ಜ್ಞಾಪಕಕ್ಕೆ ಬರಬಹುದು . ಆದ್ರೆ ಅನಂತಮೂರ್ತಿಗೆ ಹಾಗಲ್ಲ ಅವನಿಗೆ ಟ್ರೇನೆಂದರೆ ಉದ್ದಕೆ ಓಡುತ್ತಿರುವ ಟ್ರೇನು, ಅದರಲ್ಲಿನ ಸೀಟು ತುಂಬಿ ಸೀಟುಗಳು ಸಾಲದೆ ನಿಂತಿರುವ ಜನ, ಅವರು ಯಾರಾದರೂ ಮುಂದಿನ ಸ್ಟಾಪಿನಲ್ಲಿ ಇಳಿಯುತ್ತಾರ ಎಂದು, ಕೂತಿರುವವರು ಬ್ಯಾಗನ್ನು ಸರಿಸುವುದನ್ನೇ ಗಮನಿಸುತ್ತಾ ಬ್ಯಾಗಿನ ಬಳಿ ಅವರ ಕೈ ಹೋದಾಗ ಖುಶಿ ಪಟ್ಟು ನಿಟ್ಟುಸಿರುಡುವ ಮೊದಲೇ ಆ ಬ್ಯಾಗಿಗೆ ಕೈ ಹಾಕಿದವನು ಅದೊರಳಗಿಂದ ಡಬ್ಬವೊಂದನ್ನು ತೆಗೆದು ಎಂಥದನ್ನೋ ತಿನ್ನಲು ಶುರು ಮಾಡಿದಾಗ ಆಗುವ ನಿರಾಸೆ, ಒಂದು ಹೆಡಿಗೆ ಸಾಮಾನನ್ನು ತೌರುಮನೆಯಿಂದ ತಂದು ಹೊರಟು ಬಂದಿರುವ ಹೆಂಗಸು ಆಗಾಗ ಸಾಮಾನನ್ನು ಲೆಕ್ಕ ಹಾಕುತ್ತಾ, ಅಲ್ಲೆಲ್ಲೋ ಬಾಗಿಲ ಬಳಿ ನಿಂತಿರುವ ದಾಸಯ್ಯನನ್ನು ಮಾತಾಡಿಸುತ್ತಿರುವ ತನ್ನ ತುಂಟ ಮಗನನ್ನು ಕಣ್ಣಲ್ಲೇ ಗದರಿಸುತ್ತಿರುವುದು, ಕಡಲೇ ಕಾಯಿಯೋ, ಪೇರಲೇ ಹಣ್ಣೋ, ಮಂಡಕ್ಕಿಯನ್ನೋ, ಎಂಥದೋ ವಡೆಯನ್ನೋ ಮಾರುವ ಹುಡುಗರು. ಅಲ್ಲೆಲ್ಲೋ ಏ.ಸಿ. ಛೇಂಬರಿನಲ್ಲಿ ಒಳ್ಳೊಳ್ಳೆ ಬಟ್ಟೆಯನ್ನ ಹಾಕಿಕೊಂಡು ಕೈಯಲ್ಲೊಂದು ಇಂಗ್ಲೀಷ್ ಪುಸ್ತಕವನ್ನು ಹಿಡಿದುಕೊಂಡೋ, ಇಯರ್ ಫೋನನ್ನು ಕಿವಿಯಲ್ಲಿ ಸಿಕ್ಕಿಸಿಕೊಂಡೋ ಕೂತಿರುವ ಹುಡುಗರು, ನಿದ್ದೆ ಮಾಡುತ್ತಿರುವ ಗಂಡಸರು, ಮುದ್ದು ಮುದ್ದಾದ ಬೆಳ್ಳಗಿನ ಮಕ್ಕಳು ಅಷ್ಟೇ ಚಂದದ ಅವರ ಅಮ್ಮಂದಿರು.. ಇನ್ನೂ ಏನೇನೋ ಕಲ್ಪನೆ ಬರುತ್ತೆ. ಬರೀ ಟ್ರೇನಿನ ವಿಷಯವಲ್ಲ ಯಾರಿಗಾದರೂ ಒಂದು ಪ್ರಶಸ್ತಿ ಬಂದಿದೆ ಅಂದರೆ ಆ ಪ್ರಶಸ್ತಿಗೆ ಎಷ್ಟು ಜನ ಆಸೆ ಪಟ್ಟಿರಬಹುದು? ಅದು ಸರಿಯಾದವನಿಗೇ ಸಿಕ್ಕಿರಬಹುದಾ..? ಅಲ್ಲಿ ಏನೇನು ರಾಜಕೀಯಗಳು ನೆಡದಿರಬಹುದು? ಪ್ರಶಸ್ತಿಯನ್ನ ಸ್ವಲ್ಪದರಲ್ಲೇ ತಪ್ಪಿಸಿಕೊಂಡವನ ಗೋಳಿನ ಕಥೆಯೇನು? ಎಂದು ಯೋಚಿಸುತ್ತಿರುತ್ತಾನೆ. ಹೀಗೇ ಏನೇನೋ ಸ್ಕೂಲಿನ ಮಕ್ಕಳ ಬಗ್ಗೆ, ಅಲ್ಲೆಲ್ಲೋ ಆದ ಯುದ್ದದಲ್ಲಿ ಹೋರಾಡುತ್ತಿರುವ ಯೋಧನ ಯೋಚನೆಗಳ ಬಗ್ಗೆ, ಇತ್ಯಾದಿ.. ಆದರೆ ಅವನು ವಿದೇಶೀ ಕಂಪನಿಯೊಂದರಲ್ಲಿ ‘ಫಿನಾನ್ಸ್ ಮ್ಯಾನೇಜರ್’ ಆಗಿರೊದ್ರಿಂದ ಬಡ್ಜೆಟ್, ಪ್ರಾಫಿಟ್, ಲಾಸ್, ಫೋರ್ಕಾಸ್ಟ್ ಇತ್ಯಾದಿಗಳಲ್ಲೇ ಮುಳುಗಿ ಹೋಗಿರೊದ್ರಿಂದ ಮತ್ತು ಬರೆಯಲು ಕೂತಾಗಲೆಲ್ಲಾ ಹೇಗೆ ಶುರುಮಾಡಬೇಕು ಎಂದು ತಿಳಿಯದೇ ಹೋಗುವುದರಿಂದ ಸುಮ್ಮನಾಗುತ್ತನೆ.<br /><br />ಅವನು ಆಫೀಸಿಗೆ ಹೋಗಬೇಕಾದರೆ ದಿನವೂ ಆ ಹಾದಿಯಲ್ಲೇ ಬರುತ್ತನೆ. ಅದೇ ತಿರುವು, ಅದೇ ಹೊಂಡ, ಅದೆ ದಾರಿಯ ಬದಿಯ ಕರಿಬೇವಿನ ಮರ, ಅದೇ ಗಾಡಿಯ ಗೇರನ್ನು ಬದಲಿಸುವ ರೀತಿ, ಕಾರಲ್ಲಿ ಕೂತಾಗಿನಿಂದ ಏನೇನನ್ನೋ ಯೋಚಿಸುತ್ತಾ- ಕಲ್ಪಿಸಿಕೊಳ್ಳುತ್ತಾ ಹೊರಡುವವನಿಗೆ ಆಫೀಸು ತಲುಪುವುದು ಗೊತ್ತಾಗುತ್ತಿರಲಿಲ್ಲವೋ ಏನೋ ಆದರೆ ಅಲ್ಲೇ ಹತ್ತಿರದ ಆಸ್ಪತ್ರೆಯಿಂದ ಹೊರಹೊಗುವ ಅಥವ ಆಸ್ಪತ್ರೆಯೊಳಗೆ ದೊಡ್ಡ ಸದ್ದು ಮಾಡುತ್ತಾ ಒಳಬರುವ ಆಂಬ್ಯುಲೆನ್ಸ್ಗಳನ್ನು ನೋಡುತ್ತಲೇ ಅನಂತಮೂರ್ತಿಗೆ ವಿಚಿತ್ರ ಸಂಕಟ ಆಗುತ್ತೆ. ಅದರ ಒಳಗೆ ಮಲಗಿರಬಹುದಾದ ಪೇಷಂಟಿನ ಕಲ್ಪನೆಗಳು ಬರುತ್ತೆ. ಸುಟ್ಟ ಗಾಯವಿರಬಹುದಾ? ಬೈಕಿನಿಂದ ಬಿದ್ದಿದ್ದೋ? ಟಿ.ಬಿ? ಹಾರ್ಟಟ್ಯಾಕ್? ಕ್ಯಾನ್ಸರ್? ಯಾರ ಹೆಂಡತಿ, ಯಾರ ಮಾವ ಯಾರ ತಮ್ಮ ಇನ್ನ್ಯಾರ ಅಕ್ಕ, ಅವರ ಕಣ್ಣ ಕೆಂಪು, ಬದಲಿಸದ ಸೀರೆ, ಬಿಕ್ಕಳಿಸುವ ದುಃಖ, ತೂತಾದ ಬನೀನು, ಹೆದರಿದ ಹಣೆಯಂಚಿನ ಬೆವರು, ರಕ್ತ, ಮುಗ್ಗಲು ಬದಲಿಸುತ್ತಿರುವ ಸಂಕಟ, ಗ್ಲೂಕೊಸು, ಇಂಜೆಕ್ಷನ್ನು, ಕುಳ್ಳ ಡಾಕ್ಟ್ರು, ಬಿಳೀ ಬಟ್ಟೆಯ ವಾರ್ಡ್ ಬಾಯ್, ಮಲಿಯಾಳಿ ನರ್ಸು ಎಲ್ಲಾ ಮನಸ್ಸಿನಲ್ಲಿ ಮೂಡುವುದರಿಂದ ಆಫೀಸಿಗೆ ಬಂದು ಬೇಜಾರಾಗಿ ಕೂರುತ್ತನೆ.</div><div align="left"><br />೨<br />“ಅವನನ್ನ ನಂಗೆ ಪ್ರೀತ್ಸಕ್ಕಾಗಲ್ಲ. ಅವನು ನನ್ನ ಪೂರ್ತಿ ಅರ್ಥ ಮಾಡ್ಕೊಂಡಿದಾನೆ. ನನ್ನ ಪ್ರತಿಯೊಂದು ರೀತಿಯೂ ಅವನಿಗೆ ಅರ್ಥ ಆಗುತ್ತೆ. ಮಾತಾಡೋಕ್ಕೆ ಕಷ್ಟ ಪಡುತ್ತಾ ಏನೋ ಹೇಳುತ್ತಿದ್ದರೆ ‘ನೀನು ಏನೋ ಹೇಳ್ಬೇಕು ಆದ್ರೆ ಏನನ್ನೋ ಹೇಳ್ತಾ ಇದೀಯ’ ಅಂತಾನೆ. ನಾನು ಎನಾದ್ರೂ ಹೇಳೋಕ್ ಮುಂಚೆ ಅದು ಅವನಿಗೆ ಗೊತ್ತಾಗಿಬಿಡುತ್ತೆ. ನಾನು ಎಲ್ಲಿಗೋ ಬರ್ತಿನಿ ಅಂತ ಹೇಳಿ, ಹೋಗದಿದ್ದಾಗ ಅವನೂ ಬಂದಿರೋಲ್ಲ. ‘ನೀ ಬರಲ್ಲ ಅಂತ ಅನ್ನಿಸ್ತು ಅದಕ್ಕೇ ನಾನೂ ಬರೋಕ್ ಹೋಗ್ಲಿಲ್ಲ’ ಅಂತಾನೆ. ಬಟ್ಟೆ ಅಂಗಡಿಗೆ ಹೋಗಿರ್ತೀವಿ ನಂಗೆ ಇಷ್ಟ ಆಗಿರೋ ಜೀನ್ಸ್ನ ತೋರಿಸುತ್ತ ‘ಇದು ನಿಂಗೆ ಇಷ್ಟ ಆಯ್ತಲ್ವ?’ ಅಂತಾನೆ. ಅವತ್ತು ಎಲ್ಲರೂ ಹೋಟಲಿಗೆ ಹೋಗಿದ್ವಲ್ಲ ನೆನಪಿದ್ಯಾ? ನಾನು ವೆಜ್ ಬಿರ್ಯಾನಿ ತಿನ್ನಣ ಅಂತಿದ್ದೆ.. ಮೆನು ನೋಡುತ್ತಾ ನಿಮಗೆಲ್ಲಾ ಏನು ಬೇಕು ಅಂತ ಕೇಳುತ್ತಾ ಆರ್ಡರ್ ಮಾಡುತ್ತಿದ್ದವನು ನನ್ನ ಸರದಿ ಬಂದಾಗ ‘ನಿಂಗೆ ವೆಜ್ ಬಿರ್ಯಾನಿ ಅಲ್ವಾ’ ಅಂತ ಕಣ್ ಹೊಡ್ದಾ.. ಆಶ್ಚರ್ಯ ಆಯ್ತು ನಂಗೆ. ಬರೀ ಇಷ್ಟೇ ಅಲ್ಲ.. ಪುಸ್ತಕ ತೊಗೊಳೋವಾಗ, ಮೂವಿಗೆ ಹೋಗಣ ಅನ್ಕೊಂಡಾಗ ಗಿಫ್ಟ್ ಹುಡುಕೋವಾಗ, ಎಲ್ಲಿಗಾದ್ರೂ ಹೋಗಣ ಅನ್ಕೊಂಡಾಗ ಏನಾದ್ರೂ ಅವನಿಗೆ ಗೊತ್ತಾಗುತ್ತೆ. </div><br /><div align="left">ಅಷ್ಟೆಲ್ಲಾ ಅರ್ಥ ಮಾಡ್ಕೊಂಡಿದಾನಲ್ಲ ಅದಕ್ಕೇ ಹಿಂಸೆ ಆಗತ್ತೆ ನಂಗೆ. ನಾನು ಏನು ಯೋಚಿಸಿರೂ ಗೊತ್ತಾಗುತ್ತಲ್ಲ ಅಂತ ಭಯವಾಗುತ್ತೆ. ನಾನು ಬಿಚ್ಚಿಟ್ಟ ಪುಸ್ತಕ ಅವನಿಗೆ. ಓದಿ ಮುಗಿಸಿದಾನೆ. ಬಹಳ ಇಷ್ಟವಾದ ಪುಸ್ತಕವನ್ನ ಮತ್ತೆ ಮತ್ತೆ ಓದುವ ಪ್ರೀತಿ ಇರಬಹುದು, ಆದರೆ ಮೊದಲನೆ ಸತಿ ಓದೋವಾಗ ಇರೋ ಕಾತರತೆ ಇರಲ್ಲ. ಅದು ದೇವರ ಪ್ರೀತಿ, ನಿಶ್ಚಲ ಸರೋವರದಂತೆ ಭೋರ್ಗರೆಯುವುದಿಲ್ಲ, ಉಕ್ಕುವುದಿಲ್ಲ. ನನಗೆ ಅಂಥ ಪ್ರೀತಿ ಬೇಕಾಗಿಲ್ಲ.... ಎಲ್ಲರಿಗೂ ಅರ್ಥ ಆಗೋದಿಲ್ಲ ಇದು. ಹೇಳಿದ್ರೆ ಹುಚ್ಚು ಅನ್ಕೊತಾರೆ. ಅಣ್ಣಾ ನೀನು ಇಷ್ಟು ಬಲವಂತ ಮಾಡಿದ್ಯಲ್ಲ ಅಂತ ಹೇಳ್ದೆ.” ಅಂತ ತುಂಬ ನಿಧಾನವಾಗಿ ಪಿಸುಗುಟ್ಟುವಂತೆ ಹೇಳಿದಳು ವಸುಂಧರ.<br /><br />ಅವಳು ಪಿಸುಗುಟ್ಟುತ್ತಿದ್ದುದು ಕರೆಂಟು ಹೋಗಿ ಕತ್ತಲಾಗಿರುವುದಕ್ಕೋ ಇಲ್ಲವೇ ಮಹಡಿಮೇಲಿರುವ ಸೋದರತ್ತೆಗೆ ಕೇಳಿಸುತ್ತದೆ ಎಂಬ ಕಾರಣದಿಂದಲೋ ಎಂದು ಅರ್ಥವಾಗಲಿಲ್ಲ. ಮೇಲಿರುವ ಅತ್ತೆಗೆ ಕೇಳಿಸುವ ಪ್ರಮೇಯವಿರಲಿಲ್ಲ ಅವರು ಅಮ್ಮನ ಜೊತೆ ದೊಡ್ಡ ದನಿಯಲ್ಲಿ ಮಾತಾಡುತ್ತಿದ್ದರು. ಅತ್ತೆಗೆ ತಮ್ಮ ಮಗ ಜನ್ನ ಮತ್ತು ವಸುವಿನ ಮದುವೆಯಾಗಲಿ ಎಂಬ ಆಸೆ ಇತ್ತು. ಅವನಂತೂ ಇವಳನ್ನು ತುಂಬಾ ಪ್ರೀತಿಸುತ್ತಿದ್ದ, ತುಂಬಾ ಹಚ್ಚಿಕೊಂಡಿದ್ದ. ಇವಳೂ ‘ಅವನು ತುಂಬಾನೇ ಒಳ್ಳೆ ಹುಡ್ಗ ಆದ್ರೆ ಅವನನ್ನ ಮದುವೆ ಮಾತ್ರ ಆಗಲ್ಲ.’ ಅನ್ನುತ್ತಿದ್ದಳು. ಅವನು ಯಾಕೆ ಬೇಡ ಕಾರಣ ಹೇಳು ಅಂದಿದ್ದಕ್ಕೆ ಉತ್ತರ ಮಾತ್ರ ಕೊಟ್ಟಿರಲಿಲ್ಲ. ಸಂಜೆ ಆಫೀಸಿನಿಂದ ಬಂದಮೇಲೆ ಏನೇನೋ ಮಾತಡುತ್ತಾ ಕೂತಿರುವಾಗ ಫಕ್ಕನೆ ಕರೆಂಟು ಹೊಯಿತು. ಸ್ವಲ್ಪ ಹೊತ್ತು ಸುಮ್ಮನಿದ್ದು ಅಮೇಲೆ ಹೇಳಿದಳಲ್ಲಾ.....</div><br /><div align="left">ಹೌದಾ, ಕತ್ತಲು ಮೌನವನ್ನು ಕಲಿಸುತ್ತದಾ? ಕತ್ತಲಲ್ಲಿ ಬೊಬ್ಬೆ ಹಾಕಲಾಗುವುದಿಲ್ಲ. ನಾವ್ಯಾಕೆ ಕತ್ತಲಿಗೆ ಹೆದರಿ ಸುಮ್ಮನಾಗುತ್ತೇವೆ? ಇಲ್ಲವೇ ಕಳೆದುಹೋಗುತ್ತೇವೆ, ನಮ್ಮ ಒಳಗುಗಳನ್ನು ತಡಕಾಡುತ್ತೇವೆ? ಕತ್ತಲಾಗುತ್ತಾ ಹಕ್ಕಿಗಳೂ ಸುಮ್ಮನಾಗುತ್ತವಲ್ಲ..? ಕತ್ತಲಲ್ಲಿ ಮೌನವಾಗಿ ಆಪ್ತವಾಗುತ್ತೇವೆ, ಹತ್ತಿರ್ವಾಗುತ್ತೇವೆ ನಿಜವಾಗುತ್ತೆವೆ. ಕತ್ತಲಿಗೆ ನಮ್ಮ ಅಸ್ಥಿತ್ವವನ್ನ ಹಿರಿದಾಗಿಸುವ ಶಕ್ತಿ ಇದೆ. ಕತ್ತಲು ಗುಟ್ಟುಗಳನ್ನು ಅಡಗಿಸಿಕೊಳ್ಳುತ್ತೇನೆ ಎಂಬ ಭ್ರಮೆಯನ್ನ ಹುಟ್ಟಿಸುತ್ತದೆ ಅದಕ್ಕೆ ಧೈರ್ಯ ಮಾಡುತ್ತೇವೆ. ಕತ್ತಲಿಗೆ ವಿಚಿತ್ರವಾದ ಶಕ್ತಿ ಇದೆ. ಅದು ಸುಮ್ಮನೆ ಇರುತ್ತದೆ, ತಣ್ಣಗೆ ಕರೆಯುತ್ತದೆ. ಬೆಳಕಿನಲ್ಲಿ ಬತ್ತಲಾಗಿಸುತ್ತದೆ ಅಸಹಾಯಕವಾಗಿ ಕೈಚಲ್ಲುತ್ತದೆ ಅಂದುಕೊಂಡ.</div><br /><div align="left">ಅನಂತಮೂರ್ತಿಗೆ ಕಾಲೇಜು ದಿನಗಳ ನೆನಪು ಬರ್ತಿತ್ತು. ಜೋಗ್ಗೆ ಹೋದಾಗ ಅಲ್ಲಿ ಇನ್ನೊಂದು ಕಾಲೇಜಿನವರು ಇಪ್ಪತ್ತು ಜನ ಬಂದಿದ್ದರು. ಅವರಲ್ಲಿ ಎಂಟು ಜನ ಹುಡುಗರು, ಇಬ್ಬರು ಹುಡುಗೀರು ಪೂರ್ತಿ ಕೆಳಗಿಳಿದಿದ್ದರು. ಇಳಿಯೋದೇನೋ ಇಳಿದಿದ್ದಾರೆ ವಾಪಸ್ ಹೋಗೋಕ್ ಗೊತ್ತಾಗ್ತಿಲ್ಲ. ನೀರು-ಪಾಚಿ. ಒಬ್ಬಳು ಹುಡುಗಿಯಂತೂ ಸಂಜೆ ಕತ್ತಲಾಗುತ್ತಿದ್ದರೂ ಇನ್ನೂ ಸ್ವಲ್ಪ ಹೊತ್ತು ಇಲ್ಲೇ ಇರಣ ಅಂತ ಹಠ ಮಾಡುತ್ತಿದ್ದಳು. ಅವಳ ಉತ್ಸಾಹ ಹೇಗಿತ್ತೆಂದರೆ ಯಾವುದೋ ಹಕ್ಕಿಯ ಮುದ್ದು ಧ್ವನಿಯನ್ನ ನುಂಗಿದಾಳೇನೋ, ಆ ಧ್ವನಿಯ ಮಂದ್ರ ಆಲಾಪಗಳು ದೇಹದ ಮೂಲೆ ಮೂಲೆಗೂ, ಕಣ್ಣಿನ ಬೆಳಕಿಗೂ, ಮೂಗಿನ ಹಟಕ್ಕೂ, ನುಣುಪು ಕೆನ್ನೆಯ ಅಹಂಕಾರಕ್ಕೂ, ಅವಳು ಅಕಸ್ಮಾತಾಗಿ ಕಚ್ಚಿದರೂ ಸಾಕು ರಕ್ತ ಹೊರಬರುತ್ತೆ ಅನ್ನುವಂತಿದ್ದ ಕೆಂಪು ತುಟಿಯೊಳಗಿನ ಜೀವಕ್ಕೂ, ಒದ್ದೆಕೂದಲಿನಲ್ಲಿ ಸಿಕ್ಕಿ ಹಾಕಿಕೊಂಡ ನೀರ ಹನಿಗಳಿಗೂ, ಕೈ ಬೀರಳಿನ ಕೆಂಪಿಗೂ, ಕಾಲಿನ ಕಿರುಬೆರಳಿನ ಉಗುರಿಗೆ ಹಚ್ಚಿಕೊಂಡ ತೆಳು ನೇರಳೆ ಬಣ್ಣಕ್ಕೂ ಹರಡಿದೆ ಎನ್ನುವಂತೆ ಪುಟಿಯುತ್ತಿದ್ದಳು. ಅನಂತಮೂರ್ತಿ ಜನ್ನ ಸೇರಿಕೊಂಡು ಎಲ್ಲರಿಗೂ ಮೇಲೆ ಹೋಗಲು ಸಹಾಯ ಮಾಡುತ್ತಿದ್ದರು. ಎಲ್ಲರಿಗಿಂತಲೂ ಮುಂದೆ ಹೋಗುತ್ತಾ ಎಲ್ಲಿ ಜಾರುತ್ತೋ ಅಲ್ಲಿ ನಿಂತುಕೊಂಡು ಹಿಂದೆ ಬರುತ್ತಿರುವವರನ್ನು ದಾಟಿಸುತ್ತಿದ್ದರು. ಅವಳು ಬಂದಳು ದಾಟಿಸೋದಕ್ಕೆ ಅಂತ ಕೈ ಹಿದಿದುಕೊಂಡಾಗ ನೋಡಿದ.... ಪಾರದರ್ಶಕ ಕಣ್ಗಳು. ಆ ಕಣ್ಗಳಲ್ಲಿ ಎಂಥಾ ನಿರ್ಲಕ್ಷವಿತ್ತು ಅಂದರೆ ’ಅಬ್ಬ!’ ಅನ್ನಿಸಿತ್ತು. </div><br /><div align="left">ಜೋಗದಿಂದ ವಾಪಸ್ಸು ಬಂದಮೇಲೂ ಅವಳ ಕಣ್ಗಳು ಅವನನ್ನು ಎಡಬಿಡದೆ ಕಾಡಿದ್ದವು. ಆ ಹುಡುಗಿ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನವಳು ಅಂತ ಮಾತ್ರ ಗೊತ್ತಿತ್ತು. ಅವಳ ಬಗ್ಗೆ ಇಂಟರ್ನೆಟ್ಟಿನ ಆರ್ಕುಟ್ಟಿನಲ್ಲಿ ಹುಡುಕಲು ಪ್ರಯತ್ನ ಮಾಡಿದ, ಸಹ್ಯಾದ್ರಿ ಕಾಲೇಜಿನ ತನ್ನ ಸ್ನೇಹಿತರನ್ನು ವಿಚಾರಿಸಿದ ಆದರೆ ಉಪಯೋಗವಾಗಿರಲಿಲ್ಲ. ಅವಳ ಕಣ್ಗಳು ಅದರ ನಿರ್ಲಕ್ಷ ಇಂದಿಗೂ ಯಾಕೆ ಕಾಡುತ್ತೆ ಅಂದುಕೊಂಡ.</div><div align="left"><br />ಅಂಥ ನಿರ್ಲಕ್ಷ ವಸುವಿನ ಸ್ವಭಾವದಲ್ಲೇ ಇದೆ ಬರೀ ಕಣ್ಗಳಲಲ್ಲ, ಅವಳನ್ನ ಆಶ್ಚರ್ಯ ಪಡಿಸೋಕ್ಕೆ ಸಾಧ್ಯಾನೇ ಇಲ್ಲವೇನೋ ಅನ್ನೋಥರ ಇರುತ್ತಾಳಲ್ಲಾ.. ಅವಳಿಗೆ ಅಮ್ಮನ ಸಂಕಟ ಅರ್ಥ ಆಗೋದೇ ಇಲವ? ಮದುವಯೇ ಆಗೋಲ್ಲವಾ ಇವಳು? ಎಂಬ ಪ್ರಶ್ನೆಗಳು ಅವನ ತಲೆಯನ್ನ ಸುತ್ತುತ್ತಿದ್ದವು.</div><br /><div align="left">“ವಸು ನಿಂಗೆ ಬೇರೆ ಯಾರಾದ್ರೂ ಇಷ್ಟ ಆಗಿದಾರೇನೆ..?” ತಂಗಿಯನ್ನ ಪ್ರೀತಿಯಿಂದ ನೋಡಿದ “ಅಣ್ಣಾ ನಿಂಗೆ ರಾಘು ಜ್ಞಾಪಕ ಇದಾನಾ?” ಅಣ್ಣ ತನ್ನ ನೆನಪಿನ ಪುಟಗಳನ್ನ ತಿರುವುತ್ತಾ ಗೊಂದಲಗೊಂಡಿರುವುದನ್ನ ಗುರುತಿಸಿ “ನಾವು ಹಾಸನದಲ್ಲಿದ್ದಾಗ ನಮ್ಮ ಮನೆ ಹತ್ರ ಇದ್ನಲ್ಲ ನೀನು ಆಗ ಬೆಂಗಳೂರಿನಲ್ಲೇ ಓದ್ತಿದ್ದೆ ನಿಂಗೆ ಸರಿಯಾಗಿ ಪರಿಚಯ ಇಲ್ವೇನೋ ಅಮ್ಮಂಗೆ ಚೆನ್ನಾಗ್ ಗೊತ್ತು. ಅಪ್ಪಂಗೆ ಇಲ್ಲಿಗೆ ಟ್ರಾನ್ಸ್ಫರ್ ಆಗಿ ನಾವು ಇಲ್ಲಿಗೆ ಬಂದ್ಮೇಲೆ ಕಾಂಟ್ಯಾಕ್ಟ್ನಲ್ಲಿರಲಿಲ್ಲ. ಒಂದು ವಾರದ ಹಿಂದೆ ಕಾಫಿಡೇನಲ್ಲಿ ಅಕಸ್ಮಾತಾಗಿ ಸಿಕ್ಕಿದ.” ಅಂದಳು ನೆಲ ನೋಡುತ್ತಾ. ಅನಂತನಿಗೆ ತನ್ನ ತಂಗಿಯ ಕೆನ್ನೆ ಕೆಂಪಾದುದ್ದನ್ನ ಗಮನಿಸಲು ಕಷ್ಟಾವಾಗಲಿಲ್ಲ. ಆಶ್ಚರ್ಯ ಆಯ್ತು ಅವನಿಗೆ ತನ್ನ ತಂಗಿಗೆ ಯಾರೋ ಇಷ್ಟ ಆಗಿದಾರೆ ಅನ್ನೋದಕ್ಕಲ್ಲ ಅವಳೂ ನಾಚಿಕೆ ಪಟ್ಟುಕೊಳ್ಳುತ್ತಾಳಲ್ಲ ಅನ್ನೋದಕ್ಕೆ.</div><br /><div align="left">ಅನಂತನ ಕಲ್ಪನೆ ಗರಿ ಬಿಚ್ಚಿಕೊಳ್ಳುತ್ತಿತ್ತು.... ತನಗೆ ಸರಿಯಾಗಿ ಜ್ನಾಪಕವೇ ಇರದ ರಾಘು ಹೇಗಿರಬಹುದು? ಅವನು ಬುಲೆಟ್ ಇಟ್ಟಿರ ಬೇಕು ಇವಳಿಗೆ ಬೈಕಿಟ್ಟಿರೊರಿಗಿಂತ ಬುಲೆಟ್ ಇರೋರು ಇಷ್ಟ ಆಗ್ತಾರೆ. ಅವನನ್ನ ಇವಳು ಅಕಸ್ಮಾತಾಗಿ ನೋಡಿದಾಗ ಇವಳ ಕಣ್ಣುಗಳ ನಿರ್ಲಕ್ಷಕ್ಕೂ ಆಶ್ಚರ್ಯ ಆಗಿರಬಹುದಾ.. ಅವನು ತುಂಬಾ ಉದ್ದಕೆ ಇರಬಹುದಾ.. ಇವರಿಬ್ಬರ ಮದುವೆಯನ್ನ ಊರಲ್ಲೇ ಮಾಡಬೇಕು.. ಮದುವೆಗೆ...</div><br /><div align="left">೩<br />“ ನಾನು ಇವತ್ತು ಊಟ ಮಾಡ್ದೆ” ಅಂತ ನಕ್ಕ ಮಧ್ಯಾಹ್ನದ ಉರಿ ಸೂರ್ಯ, ಸಂಜೆಗೆ ಕಿತ್ತಲೆ ಬಣ್ಣವಾಗಿ ಆಕಾಶವೆಲ್ಲಾ ಹರಡುವಂತೆ ಅವನ ನಗು ತುಟಿಯಲ್ಲಿ ಹುಟ್ಟಿ ಮೈಮನಗಳನ್ನು ಸವರಿಕೊಂಡು ಹರಡಿತು. ಅವನ ತುಟಿ ಎಷ್ಟು ಕೆಂಪಲ್ಲವ ಅಂದುಕೊಂಡು “ನೀನು ದಿನಾ ಊಟ ಮಾಡ್ದೆ ಉಪವಾಸ ಇರ್ತಿದ್ಯಾ.” ಕೇಳಿದಳು. “ಹಂಗಲ್ಲ ಕೇಳು-” ಅಂತ ತಾನು ಕುತಿದ್ದ ಆ ಕುರ್ಚಿಯನ್ನ ಟೇಬಲ್ಲಿಗೆ ಹತ್ತಿರ ಎಳೆದುಕೊಂಡ.</div><br /><div align="left">ಹೌದು ಅವರು ಹದಿನೈದು ದಿನಗಳಿಂದ ಮಾತಾಡಿಕೊಂಡಿದಾರೇನೋ ಅನ್ನುವಂತೆ ಜಯನಗರದ ಫೋರ್ಥ್ ಬ್ಲಾಕ್ನಲ್ಲಿರೋ ಕಲ್ಮನೆ ಕಾಫಿ ಹೌಸ್ ನಲ್ಲಿ ಸರಿಯಾಗಿ ನಾಲ್ಕೂ ಹದಿನೈದಕ್ಕೆ ಭೇಟಿಯಾಗುತ್ತಿದ್ದರು. ಹದಿನೈದು ದಿನಗಳ ಮುಂಚೆ ಅವರು ನಾಲು ವರ್ಷದ ನಂತರ ಅಲ್ಲಿ ಭೇಟಿಯಾಗಿದ್ದರು, ತುಂಬ ಅನಿರೀಕ್ಷಿತವಾಗಿ. ಸ್ನೇಹಿತೆಯೊಬ್ಬಳು ಎನೋ ಹೇಳಬೇಕು ಅಲ್ಲಿಗೆ ಬಾ ಅಂತ ಕರೆದಿದ್ದರಿಂದ ಅವಳಿಗೆ ಕಾಯುತ್ತಾ ಕುಳಿತಿದ್ದಳು ವಸು. ಇವನು ಸುಮ್ಮನೆ ಒಳಗೆ ಬಂದ ಇವಳ ಕಣ್ಗಳಲ್ಲಿ ದೀಪದ ಕಾಂತಿ. ಏನೂ ಹೇಳಲು ತೋಚದೆ ಸುಮ್ಮನೆ ನೋಡುತ್ತಿದ್ದಳು.. ಅವನೂ ನೋಡಿದ- ಮುಖ ಸಿಂಡರಿಸಿದ ಅವಳು ಮರೆತು ಹೋಗಿದ್ದಳಾ.. ಇಲ್ಲ ನಕ್ಕ “ವಸೂ.....” ಎದುರು ಬಂದು ಕೂರುತ್ತಲೇ “ಈಗಲೂ ನೀನು ಚಳಿಗಾಲದಲ್ಲಿ ಸ್ವೆಟರನ್ನು ಹಾಕಿಕೊಳ್ಳೋದಿಲ್ಲವ” ಕೇಳಿದ ಅವಳ ದುಂಡುಮಲ್ಲಿಗೆ ಬಿಳುಪಿನ ಟೀ ಶರ್ಟಿನ ವಿ ಆಕಾರದ ಕುತ್ತಿಗೆ ನೋಡುತ್ತಾ.. ಟಿ-ಷರ್ಟಿನ ಮೇಲೆ ಏನು ಬರೆದಿದ್ದಾರೆಂದು ಓದಬೇಕೆಂಬ ಆಸೆಯನ್ನು ಹತ್ತಿಕ್ಕಿಕೊಂಡು ಅವಳ ಕಣ್ಗಳನ್ನೇ ನೋಡಿದ. “ನೀನು ದಪ್ಪ ಆಗ್ಲೇ ಇಲ್ಲ ಅಂದಳು” ಅಷ್ಟೊತ್ತಿಗೆ ವಸುವಿನ ಸ್ನೇಹಿತೆ ಬಂದಳು ಪರಿಚಯ ಮಾಡಿಕೊಟ್ಟದ್ದಾಯಿತು, ಕಾಫಿ ಕುಡಿದು- ಮಾತಾಡಿ, ಲೇಟಾದರೆ ಅಮ್ಮ ಬೈಯುತ್ತಾಳೆಂದು ಜ್ಞಾಪಕಕ್ಕೆ ಬಂದು ಮನೆ ಕಡೆ ಹೊರಟಳು. ಅಮ್ಮನನ್ನು ಕೇಳ್ದೆ ಅಂತ ಕೂಗಿ ಹೇಳಿದ ರಾಘು.. ತಿರುಗಿ ನೋಡಿ ನಕ್ಕಳು.<br /><br />ನಾಳೆ ಸಿಗು ಅಂತ ಅವನೇನೂ ಹೇಳಿರಲಿಲ್ಲ. ಇವಳೂ ಮಾತು ಕೊಟ್ಟಿರಲಿಲ್ಲ ಆದರೂ ಮಾರನೇ ದಿನ ಬಂದು ಕಾಯತೊಡಗಿದ್ದಳು, ಎದೆ ಹೊಡೆದುಕೊಳ್ಳುತ್ತಿತ್ತು.. “ಅವನು ಬರೂದಿಲ್ಲವ?” ಅವನು ಬಂದ ಬರುತ್ತಲೇ ಇವಳನ್ನು ನೋಡಿ ಸಮಾಧಾನದ ನಿಟ್ಟುಸಿರಿಟ್ಟ. ಅವನ ಕಣ್ಗಳಲ್ಲಿದ್ದ ಆತಂಕ ವಸುವನ್ನು ನೋಡುತ್ತಲೇ ಕರಗತೊಡಗಿದ್ದು ಕಾಣಿಸಿತು. ಇಬ್ಬರೂ ಮುದ್ದಾಗಿ ನಕ್ಕರು.<br /><br />“-ಊಟ ಮಾಡೋದಕ್ಕೂ ಅನ್ನ ತಿನ್ನೋದಕ್ಕೂ ವ್ಯತ್ಯಾಸ ಇದೆ. ಅನ್ನ ತಿನ್ನೋದು ಅಂದ್ರೆ ಬದುಕೋಕ್ಕೆ ಏನಾದ್ರೂ ತಿನ್ನ ಬೇಕಲ್ಲ ಅದಕ್ಕೆ ಏನನ್ನದರೂ ತಿಂದು ಸುಮ್ಮನಾಗೋದು ಊಟ ಮಾಡೋದು ಅಂದ್ರೆ ಇವತ್ತು ಮಾಡಿದೆನಲ್ಲ ನನ್ನ ದೊಡ್ಡಮ್ಮನ ಮನೇಲಿ ಅದು. ಅದರಲ್ಲಿ ತಿಂದ ಸಂತೋಷ ಇರತ್ತೆ.....”</div><br /><div align="left">ಕಲ್ಮನೆ ಕಾಫಿ ಹೌಸಿನ ಪುಸ್ತಕಗಳು, ಅಲ್ಲಿನ ಚೌಕಾಕಾರದ ಮರದ ಕುರ್ಚಿಗಳು, ಅದಕ್ಕೆ ಒರಗಿಕೊಳ್ಳೋಕ್ಕೆ ಇಲ್ಲದಿರೋದ್ರಿಂದ ಮುಂದೆ ಬಾಗಿ ಕೂರುವ ಜನ, ಕಾಫಿ ಬೀಜದ ಬಣ್ಣದ ಕುಷನ್ನು, ಪಕ್ಕದ ಟೇಬಲ್ಲಿನ ಕುರ್ಚಿಯಲ್ಲಿ ಕೂತ ಕಾಲೇಜು ಹುಡುಗನ ಕೈಯಲ್ಲಿರುವ ಲೋಟ, ಅದರ ಬಿಸಿಯನ್ನ ಅನುಭವಿಸುತ್ತಿರುವ ಅವನ ತೆಳುಗಪ್ಪು ಬೆರಳುಗಳು, ದೂರದಲ್ಲಿರುವ ಪುಸ್ತಕಗಳನ್ನ ಕಣ್ಣಲ್ಲೇ ಅಳೆಯುತ್ತಿರುವ ಅಜ್ಜ ಯಾವುದೇ ಬಣ್ಣದ ಹಂಗಿಗೆ ಬೀಳದೆ ಹರಡಿರುವ ಅವರ ಬಿಳೀಗೂದಲು, ಈವಯಸ್ಸಿನಲ್ಲೂ ಹಿರೊವಿನಂತೆ ಕಾಣುತ್ತಿದ್ದ ಅವರು.... ಇವನು ವಯಸ್ಸಾದಮೆಲು ಹೀಗೇ ಇರುತ್ತಾನ..... “ಮದುವೆ ಆಗು ಈ ಕಷ್ಟನೇ ಇರಲ್ಲ ದಿನಾ ಊಟ ಮಾಡಬಹುದು” ಆಂದಳು. “ಆಗೋಣ” ಅಂದ. ನಕ್ಕಳು. ಅಣ್ಣನ ನೆನಪು ಬಂತು..... ಅಮ್ಮನಿಗೆ ಖುಷಿಯಾಗುತ್ತದಾ ಕೇಳಿಕೊಂಡಳು.<br /><br />೪<br />ಟ್ರಾಫಿಕ್ ಸಿಗ್ನಲ್ ನೋಡಿ ಫಕ್ಕನೆ ಕಾರು ನಿಲ್ಲಿಸಿದ ಅನಂತಮೂರ್ತಿ. ಆಂಬ್ಯುಲೆನ್ಸ್ ಒಂದು ದೊಡ್ಡದಾಗಿ ಶಬ್ಧ ಮಾಡುತ್ತಾ ಪಕ್ಕದ ರೋಡಿನಲ್ಲಿ ಹಾದು ಹೋಯಿತು. “ನಂ ಕಡಿ ಆಂಬ್ಯುಲೆನ್ಸ್ಗೆ ‘ಹೋಗು ಬಾ ಹೋಗು ಬಾ’ ಅಂತಾರೆ ಅಂತ ಆಫೀಸಿನಲ್ಲಿ ವೀರು ಹೇಳಿದ್ದು ಜ್ಞಾಪಕ ಬಂದು ನಗು ಬಂತು. ಅದ್ಯಾವುದೂ ನೆನಪಾಗಲಿಲ್ಲ ಆಗ ರಕ್ತ, ಗ್ಲೂಕೋಸು, ತೂತು ಬನೀನು, ಹಣೆಯಂಚಿನ ಬೆವರು, ಬದಲಿಸದ ಸೀರೆ.. ಅವರ್ಯಾರ ಬಗ್ಗೆಯೂ ಎನೂ ಅನ್ನಿಸಲಿಲ್ಲ ಯರದೋ ಅಣ್ಣ, ಇನ್ನ್ಯಾರದೋ ತಾಯಿ, ಮತ್ತ್ಯಾರ ಮಾವ.. ಆ ಸದ್ದಿಗೆ ಸಾಹಿತ್ಯವೋ ಅನ್ನುವಂತೆ ಹೋಗು ಬಾ ಹೋಗು ಬಾ ಎಂದು ಗುನುಗಿಕೊಳ್ಳುತ್ತಾ ಆಫೀಸಿನಿಂದ ಮನೆಗೆ ಹೋದರೆ ಮನೆಯಲ್ಲಿ ಯಾರೂ ಇಲ್ಲ. ಈ ಹೊತ್ತಿನಲ್ಲಿ ಎಲ್ಲರೂ ಎಲ್ಲಿ ಹೋದರು ಎಂದುಕೊಂಡು ಕಾಲ್ ಮಾಡಲು ಮೊಬೈಲ್ ತೆಗೆದು ನೋಡಿದರೆ ಹದಿನಾರು ಮಿಸ್ಡ್ ಕಾಲ್ ಇದ್ದವು. “ಛೆ ಸೈಲೆಂಟ್ ಮೋಡ್ನಲ್ಲೇ ಇದೆ.” ಕಾಲು ಯಾರು ಮಾಡಿದ್ದು ಅಂತ ನೋಡೋ ಹೊತ್ತಿಗೆ ಮತ್ತೆ ಕಾಲ್ ಬಂತು. ಎತ್ತಿದರೆ ಅಮ್ಮ “ವಸು!-ವಸು! ಆಕ್ಸಿಡೆಂಟ್.....” ಅಂತ ಬಿಕ್ಕುತ್ತಿದ್ದಳು. ಏನೂ ಅರ್ಥವಾಗಲಿಲ್ಲ ಜನ್ನ ಫೋನ್ ತೆಗೆದುಕೊಂಡು ಹೇಳಿದ “ಹಾಸನದಲ್ಲಿ ನಿಮ್ಮ ಮನೆ ಹತ್ರ ಇದ್ದನಂತಲ್ಲ ರಾಘು ಅಂತ ವಸು ಅವನ ಜೊತೆ ಬುಲೆಟ್ಟಿನಲ್ಲಿ ಬರುತ್ತಿದ್ದಳಂತೆ ಆಕ್ಸಿಡೆಂಟ್ ಆಗಿದೆ ಹುಡುಗ ಸ್ಪಾಟ್ನಲ್ಲೇ ಹೋಗ್ಬಿಟ್ಟಿದಾನೆ, ವಸುನ ನಿಮ್ಮ ಆಫೀಸಿನ ಹತ್ತಿರದಲ್ಲೇ ಇರೋ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕರ್ಕೊಂಡು ಬಂದು ಸೇರ್ಸಿದಿವಿ” ಅಂತ ವರದಿ ಮಾಡುವವನ ಥರ ತಣ್ಣಗೆ ಹೇಳುತ್ತಿದ್ದಾನೆ ಅನ್ನೋದನ್ನ ಎಷ್ಟು ನಿರ್ಲಕ್ಷಿಸಬೇಕು ಅಂದುಕೊಂಡರೂ ಅನಂತಮೂರ್ತಿಗೆ ಅವನ ಧ್ವನಿಯಲ್ಲಿದ್ದ ತಣ್ಣಗಿನ ನಿರ್ಲಕ್ಷವನ್ನ- ಮಾತ್ಸರ್ಯವನ್ನ ಗಮನಿಸಿದೆ ಇರಲಾಗಲಿಲ್ಲ. ದುಃಖ ಉಮ್ಮಳಿಸಿ ಬರುತ್ತಿತ್ತು. </div><div align="left"><br /></div><div align="left">೫<br />ತನಗೆ ಮುಖವೇ ಜ್ಞಾಪಕವಿರದ ರಾಘು ಮತ್ತು ತನ್ನ ತಂಗಿಯ ಜೀವನದ ಬಗ್ಗೆ ಕಲ್ಪಿಸಿಕೊಂಡಿದ್ದೆಲ್ಲಾ ಕಲ್ಪನೆಯಾಗೇ ಉಳಿದಿತ್ತು. ಹೌದು ತಾನು ಕವಿಯೋ ಲೇಖಕನೋ ಚಿತ್ರಕಾರನೋ ಆಗಬೇಕು ಅಂದುಕೊಂಡು ಬರೆಯಲು ಶುರು ಮಾಡಿದ ಅನಂತಮೂರ್ತಿ.... ಅವನು ಇಂದು ದೊಡ್ಡ ಲೇಖಕನಾಗಿದ್ದಾನೆ. <br /><br />(ಕನ್ನಡ ಪ್ರಭ ದಲ್ಲಿ ಪ್ರಕಟವಾದ ಕಥೆ )</div>ಮೃಗನಯನೀhttp://www.blogger.com/profile/05798486490706460406noreply@blogger.com35tag:blogger.com,1999:blog-7077041789502080406.post-7279140703342382062008-03-18T21:26:00.000-07:002008-03-25T21:54:03.204-07:00ಮಳೆ ನೀರಿನಲ್ಲಿ...<div align="left"><span style="color:#cc33cc;">ಸಿಹಿ ಘಮವೇ...</span></div><div align="left"></div><div align="left"><span style="color:#cc33cc;"></span></div><div align="left"><span style="color:#cc33cc;"></span></div><div align="left"></div><div align="left">ವಾತಾವರಣವನ್ನೆಲ್ಲಾ ಘಂ ಎನಿಸುತ್ತಾ ಹಿತವಾಗಿ ನೆಲವನ್ನು ಒದ್ದೆಯಾಗಿಸುತ್ತಿದ್ದ ಮಳೆ ಅಮಲೇರಿ ಧೋ ಧೋ ಎಂದು ಸುರಿಯುತ್ತಿದೆ. ಕಿಟಕಿಯಿಂದ ನೋಡುತ್ತಿದ್ದರೆ ಆಸೆ ಹತ್ತಿಕ್ಕಲಾಗಲಿಲ್ಲ. ಯಾರಾದರೂ ಏನಾದರೂ ಅಂದುಕೊಂಡು ಸಾಯಲಿ ಅಂತ ಕನಕಾಂಬರದ ಗಿಡಗಳನ್ನ, ಮಲ್ಲಿಗೆ ಬಳ್ಳಿಯನ್ನ ಹಬ್ಬಿಸಿರುವ ಹಿತ್ತಲಿಗೆ ಹೋಗಿ ನನೆಯುತ್ತಿದ್ದರೆ ನೀನು ಈಜುತ್ತಿದ್ದ ನೆನಪು.<em><span style="color:#000000;">ನದಿಯಲ್ಲಿ, ನನ್ನಲ್ಲಿ. </span></em><em><span style="color:#000000;">ಪ್ರೀತಿ ಮಳೆಯಲ್ಲಿ ಒದ್ದೆ ಒದ್ದೆ.<br /></span></em><em><span style="color:#33cc00;"></span></em></div><div align="left"><em><span style="color:#33cc00;">ಇಬ್ಬನಿಯಲಿ ನೆಂದಿದೆ </span></em></div><div align="left"><em><span style="color:#33cc00;">ಪ್ರೀತಿಯಲಿ ತೊಯ್ದಿದೆ</span></em></div><div align="left"><em><span style="color:#33cc00;">ನೆನಪಿನಲಿ ನೇಯ್ದಿದೆ </span></em></div><div align="left"><em><span style="color:#33cc00;">ಈ ಪ್ರೇಮ..</span></em></div><div align="left"><br /></div><div align="left">ಅಜ್ಜಿಗೆ ಇನ್ನಿಲ್ಲದ ಹೊಟ್ಟೆಗಿಚ್ಚು. ನಾನು ಮಳೇಲಿ ನೆನಿತಾ ನಿನ್ನ ನೆನಪಿಸಿಕೊಳ್ಳುತ್ತಿರುವ ವಾಸನೆ ಹತ್ತಿದವಳಂತೆ ಕೊಡೆ ಹಿಡಿದುಕೊಂಡು ಹಿತ್ತಲಿಗೆ ಬಂದು ನೀ ಹಿಂಗೆಲ್ಲಾ ಮಳೇಲಿ ನೆಂದು ಹುಶಾರ್ ತಪ್ಪಿಸ್ಕೊಳದಾದ್ರೆ ಹಳ್ಳಿಗೆ ಬರ್ಲೇ ಬೇಡ ಅಂತ ಗುಟುರು ಹಾಕಿದಳು. ನೀನು ನನಗೆ ಸಮುದ್ರ ತೋರಿಸಿದೆಯಲ್ಲ, ಅಬ್ಬಾ! ಅದು ನಿನ್ನ ಥರವೇ... ಸಮುದ್ರದ ಅಲೆಗಳು ದಡವನ್ನು ಅಪ್ಪಳಿಸುತ್ತವೆ ಅಂತ ಯಾರೋ ಬರೆದಿದ್ದು ಸುಳ್ಳು. ಸಮುದ್ರದ ತುಟಿಗಳು ದಡವನ್ನು ಮುತ್ತಿಕ್ಕುತ್ತಿರುವುದನ್ನು ನೊಡಿ ನನ್ನ ಒಳಗುಗಳು ಸ್ಥಬ್ಧ. ಅವತ್ತೆಲ್ಲಾ ಅಲ್ಲೆ ಇದ್ದೆವಲ್ಲಾ ಪ್ರತೀ ಅಲೆ ಉಕ್ಕೋವಾಗಲೂ ನೀನು ಸುರಿಸುತ್ತಿದ್ದ ಮುತ್ತುಗಳ ರಾಶಿ. ಸಾಗರದಲ್ಲಿ ಮುತ್ತು ಸಿಗುತ್ತೆ ಅಂತಾರಲ್ಲ ಇದಕ್ಕೇನಾ?</div><div align="left"><br /><em><span style="color:#33cc00;">ಇಂದು ಮರಳಿಗೆ ಹಬ್ಬ.. ಅಪ್ಪೋ ಅಲೆಗೂ ಹಬ್ಬ..</span></em></div><div align="left"><br />ನೀನು ಅಲ್ಲಿ ಬೆಳ-ಬೆಳಗ್ಗೆ ಜಿಮ್ಮಿನಲ್ಲಿ ಬೆವರು ಸುರಿಸುತ್ತಾ ಜೋರಾಗಿ ಏದುಸಿರಾಗುತ್ತಿದ್ದರೆ ನನಗೆ ಇಲ್ಲಿ ನಿನ್ನ ಉಸಿರು ತಾಕಿದ ಅನುಭವ. ತುಂಬ ದಿನ ಆಯಿತಲ್ವಾ ಮಾತಾಡಿ. ನೀನು ಸಿಟ್ಟಾಗಿ ಕಳಿಸಿದ ಮೆಸೇಜ್ ನೋಡಿದೆ... ಜಗಳಗಂಟ. ಇನ್ನೇನು ನಾಡಿದ್ದು ಬಂದುಬಿಡ್ತೀನಿ, ಬೈಕೊಬೇಡ. ನಿನ್ನ ಬಿಟ್ಟು ಖುಶಿಯಾಗೇನಿಲ್ಲ ನಾನು..</div><div align="left"><br /><em><span style="color:#33cc00;">ತೌರ ಸುಖದೊಳೆನ್ನ ಮರೆತಿಹಳು ಎನ್ನದಿರಿ<br />ನಿಮ್ಮ ಪ್ರೇಮವ ನೀವೆ ಒರೆಯನಿಟ್ಟು<br />ನಿಮ್ಮ ನೆನಹೇ ನನ್ನ ಹಿಂಡುವುದು ಹಗಲಿನಲಿ<br />ಇರುಳಿನಲಿ ಕಾಣುವುದು ನಿಮ್ಮಾ ಕನಸು</span></em></div><em><span style="color:#33cc00;"><div align="right"><br /></span></em><span style="color:#3366ff;">-ನೀ ಅಪ್ಪುವ ದಡ</span></div><div align="left"></div><div align="left"></div>ಮೃಗನಯನೀhttp://www.blogger.com/profile/05798486490706460406noreply@blogger.com15tag:blogger.com,1999:blog-7077041789502080406.post-41215333038966603662008-03-13T06:14:00.000-07:002008-03-13T06:42:49.782-07:00ಓಲೆಆ ಮುತ್ತಿನ ಕಿವಿಯೋಲೆ ನೋಡುತ್ತಾ ಬೆಚ್ಚಿಬಿದ್ದೆ. ಅದು ಅಚ್ಚು ಹಾಗೇ ಇತ್ತು. ನನಗೆ ಯಾವಾಗಲೂ ಕಾಣುತ್ತಿದ್ದ ಓಲೆಯೇ ಅದು. ವ್ಯತ್ಯಾಸವೇ ಇಲ್ಲ. ಮೊಟ್ಟೆಯಾಕಾರದ ಮಾಸಿದ ಬಿಳುಪಿನ ಮುತ್ತು, ಅದರ ಬೆನ್ನಿಗೆ ಅಂಟಿಕೊಂಡ ಚಿನ್ನ. ಒಂದು ಚೂರು ಆಚೀಚೆ ಇಲ್ಲ. ಹಾಗೇ ಥೇಟ್. ಆ ಎಲ್ಲ ರಾಶಿ ಆಭರಣಗಳ ಮಧ್ಯೆ ಅದು ಕಣ್ಣಿಗೆ ಬಿದ್ದಿದ್ದು ವಿಶೇಷವೇನಲ್ಲ.<br /><br />ಈಗ ಅಭ್ಯಾಸವಾಗಿ ಹೋಗಿದೆ. ಇದು ಶುರುವಾದದ್ದು ನಾನು ಪಿಯುಸಿಯಲ್ಲಿದ್ದಾಗ. ರಾಜಾಜಿನಗರದಲ್ಲಿ ಅವರ ಟ್ಯೂಷನ್ ಐದೂವರೆಗೆ ಶುರುವಾಗುತ್ತಿತ್ತು. ನಾನು ನಮ್ಮ ಹೆಸರುಘಟ್ಟದ ಮನೆಯನ್ನ ನಾಲ್ಕೂ ಕಾಲಿಗೆ ಬಿಟ್ಟು ಬಿಡುತ್ತಿದ್ದೆ. ಮನೆಯಿಂದ ಬಸ್ ಸ್ಟಾಪ್ ಗೆ ಹದಿನೈದು ನಿಮಿಷದ ದಾರಿ. ಹಾಗೇ ನೆಡೆದುಕೊಂಡು ಹೋಗುತ್ತಿದ್ದರೆ ಅವನು ನನ್ನನ್ನು ನೋಡುತ್ತಲೇ ನಿಂತಿರುತ್ತಿದ್ದ. ಅವನು ಯಾರಂತ ಗೊತ್ತಿರಲಿಲ್ಲ. ಇವತ್ತಿಗೂ ಗೊತ್ತಿಲ್ಲ. ಅವನೇನು ನನ್ನ ಕರೆದಿರಲಿಲ್ಲ. ಸುಮ್ಮನೆ ನನ್ನನ್ನು ನೋಡುತ್ತಿದ್ದ. ಆದರೆ ಅವನಲ್ಲಿ ಎಂಥ ವಿಲಕ್ಷಣವಾದ ಆಕರ್ಷಣೆ ಇತ್ತೆಂದರೆ ಒಂದು ದಿನ ನಾನೇ ಹತ್ತಿರ ಹೋಗಿದ್ದೆ. ನಾನು ಅವನ ಮುಂದೆ ನಿಂತ ತಕ್ಷಣ ಅವನು ನಡೆದುಕೊಂಡು ಹೋದ. ನಾನು ಕುರಿಯಂತೆ ಹಿಂಬಾಲಿಸಿದೆ. ಆಮೇಲೆ ನಡೆದದ್ದು ಕನಸೆಂದೇ ನನ್ನ ಭ್ರಮೆ. ಹೂವಂತೆ ನನ್ನ ಅರಳಿಸಿದ್ದ. ಹಿತವಾಗಿ ಕಲಕಿದ್ದ ಅವನು. ನಾನು ಹೇಗೆ ಮನೆಗೆ ವಾಪಸ್ಸು ಬಂದೆ ಎಂಬುದು ನನಗೆ ಗೊತ್ತಿಲ್ಲ. ಯಾರಿಗೂ ಗೊತ್ತಾಗದಂತೆ (ನನಗಾದರೂ ಗೊತ್ತಾಗಿತ್ತಾ?) ನನ್ನ ಜೀವನದಲ್ಲಿ ಏನೋ ನಡೆದುಹೋಗಿತ್ತು. ಅವನ ಎಡಕಿವಿಯಲ್ಲಿದ್ದ ಮುತ್ತಿನ ಓಲೆ ಮಾತ್ರ ಜ್ಞಾಪಕವಿತ್ತು. ಆಮೇಲಿಂದ "ಅಪ್ಪಾ ನಂಗೆ ಭಯ ಆಗತ್ತೆ, ನನ್ನ ಬಸ್ ಸ್ಟಾಪ್ ವರೆಗೂ ಬಿಡು" ಅಂತ ಕರೆದುಕೊಂಡು ಹೋಗಲು ಶುರು ಮಾಡಿದೆ. ಅಪ್ಪ ಬಂದು ಬಸ್ಸಲ್ಲಿ ಕೂರಿಸಿ ವಾಪಾಸು ಹೋಗಿ ಮಲಗುತ್ತಿದ್ದರು. ಹಾಗೆ ಒಂದು ದಿನ ಹೋಗುತ್ತಿದ್ದಾಗ ನನ್ನ ಹಿಂದೆ ಯಾರೋ ಬರುತ್ತಿದ್ದಾರೆನ್ನಿಸಿತು. ಬಲಗಡೆಗಿದ್ದ ಅಪ್ಪನ ಜೊತೆ ಮಾತನಾಡುತ್ತಲೇ ಎಡಗಡೆಗೆ ತಲೆ ತಿರುಗಿಸಿ ನೋಡಿದರೆ ಕಂಡಿದ್ದು ಮುತ್ತಿನ ಓಲೆ. ನನ್ನ ಮುಖ ಬಿಳಿಚಿದ್ದು ಅಪ್ಪನಿಗೆ ಕತ್ತಲಲ್ಲಿ ಗೊತ್ತಾಗಲಿಲ್ಲ. ಅವತ್ತು ಶುರು ಆಗಿದ್ದು ನನಗೆ ಬಹಳಷ್ಟು ಸಲ ಕಾಣಿಸಿದೆ. ಮುಖ ತೊಳೆದುಕೊಂಡು ಕನ್ನಡಿ ನೋಡಿಕೊಳ್ಳುವಾಗ ಎಲ್ಲರ ಜೊತೆ ಕೂತು ಏನನ್ನೋ ಹರಟುತ್ತಿರುವಾಗ, ಆಟಾಡುವಾಗ, ಹಾಲು ಕಾಯಿಸುವಾಗ, ಕಾಲೇಜಿನಲ್ಲಿ ಪಾಠ ಮಾಡುವಾಗ, ಇಸ್ತ್ರಿ ಮಾಡುವಾಗ ಹೀಗೆ.... ಪ್ರತಿಯೊಂದು ಬಾರಿಯೂ ನನ್ನ ಹಿಂದೆ ಎಡಗಡೆಗೆ ಯಾರೋ ಇರುತ್ತಾರೆ. ಆ ಮುತ್ತಿನ ಓಲೆ ಹಾಕಿಕೊಂಡು. ಅವರು ಕಾಣಿಸುವುದಿಲ್ಲ, ಬರೀ ಓಲೆ ಕಾಣಿಸುತ್ತದೆ.<br /><br /><br />ಹೀಗೆ ಕಾಣಿಸಲು ಶುರುವಾಗಿ ಆರು ತಿಂಗಳಾದರೂ ಯಾರಿಗೂ ಹೇಳಿರಲಿಲ್ಲ ಇದರ ಬಗ್ಗೆ. ಏನೆಂದು ಹೇಳಲಿ? ಮುತ್ತಿನ ಓಲೆ ಕಾಣಿಸುತ್ತದೆ ಎಂದಾ? ಹುಚ್ಚು ಅನ್ನುವುದಿಲ್ಲವಾ? ಆದರೆ ಒಂದು ದಿನ ತಡೆಯಲಾಗದೆ ಅಕ್ಕನಿಗೆ ಹೇಳಿದೆ. ಅವಳು ಆಗ ತಾನೆ ಬಿ.ಎಸ್.ಸಿ ಸೈಕಾಲಜಿ ಓದುತ್ತಿದ್ದಳು. ತಕ್ಷಣ ಅವಳು ಇದನ್ನ ಹಾಲೂಸಿನೇಶನ್ ಎಂದಳು. "ಹಂಗಂದ್ರೆ ನಿಜವಾಗಲೂ ಅಲ್ಲಿ ಏನೂ ಇರೋದಿಲ್ಲ, ಆದರೆ ನಮಗೆ ಮತ್ತೆ ನಮ್ಮ ಸೆನ್ಸ್ ಆರ್ಗನ್ಸ್ ಗಳಿಗೆ ಏನಾದ್ರೂ ಇರುತ್ತೆ ಅನಿಸುತ್ತೆ. ಉದಾಹರಣೆಗೆ ಕೆಲವೊಬ್ಬರು ನಮಗೆ ದೇವರು ಕಾಣಿಸುತ್ತೆ ಅಂತನೋ, ಅಥವಾ ಯಾವದ್ಯಾವುದೋ ಸದ್ದುಗಳು ಕೇಳುತ್ತೆ ಅಂತನೋ ಹೇಳ್ತಾರಲ್ಲ ಹಂಗೆ, ಇದೊಂದು ಮಾನಸಿಕ ಸಮಸ್ಯೆ ಅಷ್ಟೇ" ಎಂದಿದ್ದಳು. ಸರಿ, ನನಗೆ ಎಲ್ಲಾ ರೀತಿಯ ಮನಶ್ಯಾಸ್ತ್ರದ ಪರೀಕ್ಷೆಗಳನ್ನ ಮಾಡಿಸಿದ್ದಾಯ್ತು, ಎಂಥೆಂತದೊ ಮಾತ್ರೆಗಳನ್ನ ತಿಂಗಳುಗಟ್ಟಲೇ ತಿನ್ನಿಸಿದ್ದಾಯ್ತು. ಆದರೆ ನನ ಓಲೆ ಕಾಣಿಸುವುದು ನಿಂತಿರಲಿಲ್ಲ. ಅದು ಕಾಣಿಸುತ್ತಿತ್ತು ಅನ್ನೋದು ಬಿಟ್ಟರೆ ಬೇರೇನು ತೊಂದರೆ ಆಗಿರಲಿಲ್ಲ ನನಗೆ. ಹಾಲೋಸಿನೇಶನ್ ಗೆ ಒಳಗಾಗಿರುವ ರೋಗಿಗಳ ಬೇರೆ ಯಾವ ಗುಣ ಲಕ್ಷಣಗಳೂ ನನ್ನಲ್ಲಿ ಇರಲಿಲ್ಲ. ಅಪ್ಪ ಅಮ್ಮ ಮಾಡಿಸಿದ ಟ್ರೀಟ್ ಮೆಂಟ್ ಗಳ ನಂತರವೂ ನನಗೆ ಓಲೆ ಕಾಣಿಸುತ್ತದೆ ಎಂದು ಹೇಳಿದರೆ ಅವರು ಸಂಕಟ ಪಟ್ಟುಕೊಳ್ಳುತ್ತಾರೆ ಅಂತ ಗೊತ್ತಿತ್ತು. ಅದಕ್ಕೆ ನನಗೆ ಈಗ ಅಂತದ್ದೇನು ಕಾಣುವುದಿಲ್ಲ ಎಂದು ಸುಳ್ಳು ಸುಳ್ಳೇ ಹೇಳೆ ಅಪ್ಪ ಅಮ್ಮನನ್ನು ಸಮಾಧಾನ ಪಡಿಸಿದ್ದೆ.<br /><br />ನಾನೇ ಮನಶ್ಯಾಸ್ತ್ರವನ್ನು ಮುಖ್ಯ ವಿಷಯವನ್ನಾಗಿ ಆರಿಸಿಕೊಂಡು ಅದರಲ್ಲೇ ಪಿ.ಜಿ ಮಾಡಿ ಈಗ ಅದೇ ವಿಷಯವನ್ನು ಪಾಠ ಮಾಡುತ್ತಿದ್ದೇನೆ. ಏನೂ ವ್ಯತ್ಯಾಸವಾಗಿಲ್ಲ. ಇಂದಿಗೂ ಹಾಗೇ ಆಗಾಗ ಆ ಮುತ್ತಿನ ಓಲೆ ಕಾಣಿಸಿಕೊಳ್ಳುತ್ತದೆ.<br /><br />ಅಂತ ಓಲೆಯನ್ನು ಸುಮಾರು ಇಪ್ಪತ್ತು ವರ್ಷದಿಂದ ಹುಡುಕುತ್ತಿದ್ದೇನೆ. ಆಭರಣದ ಅಂಗಡಿಗಳನ್ನೆಲ್ಲಾ ಜಾಲಾಡಿದ್ದೇನೆ. ಇಷ್ಟು ದಿನ ಆದರೂ ಸಿಕ್ಕಿರಲಿಲ್ಲ. ಈಗ ಇವತ್ತು ಕಂಡಿತು. ಆ ಮುತ್ತಿನ ಓಲೆಯನ್ನ ಕೊಂಡು ತಂದೆ. ನನ್ನ ಗಂಡನಿಗೋ ಮಕ್ಕಳಿಗೋ ಈ ವಿಷಯದ ಬಗ್ಗೆ ಒಂದು ಚೂರು ಸುಳಿವುಕೊಡಲಿಲ್ಲ. ಅವರಿಗೆ ನಾನು ಕೊಂಡು ತಂದ ಮುತ್ತಿನ ಓಲೆಯನ್ನೇ ತೋರಿಸಲಿಲ್ಲ. ಅದನ್ನ ಲಾಕರಿನಲ್ಲಿ ಭದ್ರವಾಗಿ ಮುಚ್ಚಿಟ್ಟೆ. ಅವತ್ತಿನಿಂದ ನನಗೆ ಆ ಓಲೆ ಕಾಣಿಸುವುದು ನಿಂತು ಹೋಗಿದೆ.<br /><br /><br />ಬರೀ ಇಷ್ಟೇ ಆಗಿದ್ದರೆ, ಇದನ್ನೆಲ್ಲಾ ಹೇಳಬೇಕಾಗಿರಲಿಲ್ಲ. ಮೊನ್ನೆ ನನ್ನ ಹದಿನಾರು ವರ್ಷದ ಮಗಳಿಗೆ ತಲೆಸ್ನಾನ ಮಾಡಿಸುತ್ತಾ ಅವಳ ಉದ್ದಕೂದಲನ್ನು ಸೀಗೇಪುಡಿಯಲ್ಲಿ ಉಜ್ಜುತ್ತಿದ್ದೆ. ಆಗ ಹೇಳಿದಳು "ಅಮ್ಮ, ಮೊನ್ನೆಯಿಂದ ನಂಗೆ ನನ್ನ ಹಿಂದೆ ಯಾರೋ ಇದ್ದಾರೆ ಅನ್ಸುತ್ತೆ. ಬರೀ ಅವರು ಹಾಕಿಕೊಂಡಿರೋ ಮುತ್ತಿನ ಓಲೆ ಕಾಣ್ಸುತ್ತೆ, ಹಿಂತಿರುಗಿ ನೋಡಿದ್ರೆ ಯಾರೂ ಇರಲ್ಲ" ಅಂದಳು. ನನ್ನ ಎದೆ ಧಸಕ್ ಎಂದಿತು. ರೂಮಿಗೆ ಹೋಗಿ ಲಾಕರ್ ಬೀಗ ತೆಗೆದು ನೋಡಿದೆ. ಆ ಮುತ್ತಿನ ಓಲೆ ಅಲ್ಲಿರಲಿಲ್ಲ.!!ಮೃಗನಯನೀhttp://www.blogger.com/profile/05798486490706460406noreply@blogger.com24tag:blogger.com,1999:blog-7077041789502080406.post-17808001820008929072008-02-25T00:10:00.000-08:002008-02-25T00:20:15.710-08:00ನಾಣಿಎಚ್ಚರವಾಯಿತು ನಾಣಿಗೆ. ಬೆಳಗಾಯಿತಾ ಅಂತ ತೊಟ್ಟಿ ಕಡೆ ನೋಡಿದ. ಜಗತ್ತಿನ ಕತ್ತಲನ್ನೆಲ್ಲಾ ತಮ್ಮ ತೊಟ್ಟಿಗೇ ಸುರಿದಿದ್ದಾರೇನೋ ಅಂತ ಅನುಮಾನ ಬಂತು. ಬೆಳಗಾಗಿಲ್ಲ ಹಾಗಿದ್ರೆ! ಇಷ್ಟು ಬೇಗ ಯಾಕೆ ಎಚ್ಚರ ಆಯ್ತು ಅಂದುಕೊಂಡು ಅಮ್ಮ ಮಲಗಿದ್ದ ಹಾಸಿಗೆ ಕಡೆ ನೋಡಿದ. ಅಮ್ಮ ಮಲಗಿದ್ದಳು. ಸಣ್ಣಗೆ ಗೊರಕೆ ಹೊಡೆಯುತ್ತಿರುವುದು ಅಮ್ಮನಾ? ತಮ್ಮನಾ? ಎಂದು ಗೊತ್ತಾಗದೆ ಮತ್ತೆ ತೊಟ್ಟಿಯ ಹೊರಗೆ ನೋಡತೊಡಗಿದ. ಚೂರು ಚೂರೇ ಬೆಳಗಾಗುತ್ತಿತ್ತು. ಮೊನ್ನೆ ಮೂಲೆಮನೆ ರಾಜು ಕೊಟ್ಟ ಪುಸ್ತಕದಲ್ಲಿದ್ದ ಮೂಡಲ ಮನೆಯ.... ಜ್ಞಾಪಕಕ್ಕೆ ಬಂತು. ಬೇಂದ್ರೆ ಒಬ್ಬ ಅನುಭಾವಿ ಕವಿ, ಹಿ ಮೂವ್ಸ್ ಫ್ರಮ್ ಸಿಂಪಲ್ ಟು ಸಬ್ಲೈಮ್ ಅಂದಿದ್ದ ರಾಜು. ಅನುಭಾವಿ ಕವಿ ಸಬ್ಲೈಮ್ ಎಂಬುವುದರ ಅರ್ಥ ಗೊತ್ತಾಗದಿದ್ದರೂ ಪದಗಳು ಚೆನ್ನಾಗಿವೆ ಅನ್ನಿಸಿತ್ತು. ಆ ಪದ್ಯದ ಸಾಲುಗಳನ್ನು ನೆನೆಪಿಸಿಕೊಳ್ಳತೊಡಗಿದ. ಗಂಧರ್ವರ ಸೀಮೆಯಾಯಿತು ಕಾಡಿನಾ.....<br /><br />ನಾಣಿ ಇಷ್ಟು ಬೇಗ ಯಾಕೆ ಎದ್ಯಪ್ಪಾ... ಫೇಲಾಗಿದ್ರೆ ಏನಂತೆ? ಅದಕ್ಕೆಲ್ಲಾ ಹೀಗೆ ಚಿಂತೆ ಮಾಡ್ಕಂಡು ನಿದ್ದೆ ಬಿಟ್ರೆ ಆಗತ್ತಾ? ಪರೀಕ್ಷೆ ಸಮಯದಲ್ಲೇ ನೀನಿಷ್ಟು ಬೇಗ ಎದ್ದಿರ್ಲಿಲ್ಲ. ಸುಮ್ನೆ ಯೋಚಿಸಬೇಡ ಎನ್ನುತ್ತಾ ಎದ್ದು ತಾನು ಫೇಲಾಗಿದ್ದನ್ನು ಜ್ಞಾಪಿಸಿ ಬಚ್ಚಲಕಡೆಗೆ ಹೋದ ಅಮ್ಮನ ಮೇಲೆ ಸಿಟ್ಟು ಬಂತು ನಾಣಿಗೆ. ನಾ ಅದೇ ಚಿಂತೇಲ್ ಎದ್ದದ್ದು ಅಂತ ಇವಳಿಗೆ ಹೇಳ್ದವರ್ಯಾರು? ಅಂದುಕೊಂಡ.<br />ತಂಗಿ ಎದ್ದು ನಿದ್ದೆಗಣ್ಣಲ್ಲೆ ಕೈ ನೋಡುತ್ತಾ ಕೈಯ ಮೂಲೆಗಳಲ್ಲಿ ಲಕ್ಷ್ಮೀ, ಸರಸ್ವತಿ, ಗೌರಿಯರನ್ನು ಹುಡುಕತೊಡಗಿದಳು. ನಾನು ಎದ್ದು ಇಷ್ಟು ಹೊತ್ತಾದರೂ ಹೇಳಿಕೊಳ್ಳಲೇ ಇಲ್ಲವಲ್ಲಾ ಎಂದು ಕೈಯ ನೋಡುತ್ತಾ ಮನಸ್ಸಿನಲ್ಲೇ,<br />ಕರಾಗ್ರೇ ವಸತೇ ಲಕ್ಷ್ಮೀ, ಕರಮಧ್ಯೇ ಸರಸ್ವತೀ<br />ಕರಮೂಲೆ ಸ್ಥಿತಾಗೌರಿ, ಪ್ರಭಾತೇ ಕರದರ್ಶನಂ... ಎಂದು ಹೇಳಿಕೊಂಡು ತಾನೂ ಆ ದೇವತೆಯರನ್ನೆಲ್ಲಾ ಕೈಯಲ್ಲಿ ಹುಡುಕಿದ.<br />ಹಲ್ಲುಜ್ಜಿದ ಶಾಸ್ತ್ರ ಮಾಡಿ ಬಂದ. ದೊಡ್ಡ ಅಕ್ಕ ಮತ್ತು ಅತ್ತೆ ಸೇರಿಕೊಂಡು ಎಲ್ಲರ ಹಾಸಿಗೆ ಸುತ್ತಿಡುತ್ತಿದ್ದರು. ತಮ್ಮ ಒಂದೊಂದಾಗಿ ಅದನ್ನೆಲ್ಲಾ ನಡುಮನೆಗೆ ಹೊತ್ತುಕೊಂಡು ಹೋಗಿ ಇಡುತ್ತಿದ್ದ. ಕೊನೆಯ ತಂಗಿ ಆಗಲೇ ಗುಡಿಸಲು ಶುರು ಮಾಡಿದ್ದಳು. ಇವಳಿಗೆ ಗುಡಿಸೋದಂದ್ರೆ ಯಾಕಿಷ್ಟು ಇಷ್ಟ? ಅನ್ನೋ ಬಗೆಹರಿಯದ ಪ್ರಶ್ನೆಯನ್ನ ಮತ್ತೆ ಕೇಳಿಕೊಂಡ.<br />-<strong><span style="color:#660000;">ಎರಡು</span></strong>-<br />ಕೊಟ್ಟಿಗೆಗೆ ಹೋಗಿ ಎಮ್ಮೆಗಳಿಗೆ ತೌಡು ಹಾಕಿ ಬರಲು ಹೊರಟ ನಾಣಿ. ತೌಡು ಕಲೆಸಿದ ಭಾರದ ಬಕೇಟನ್ನು ಹೊತ್ತು ಕೊಟ್ಟಿಗೆಗೆ ಹೋದಾಗ, ಇಡೀ ಎಂಟು ಹಳ್ಳೀಲೇ ನಿಮ್ಮ ಅಣ್ಣನಷ್ಟು ಚೆನ್ನಾಗಿ ಕೊಟ್ಟಿಗೆಯನ್ನು ಯಾರು ಕಟ್ಟಿಸಿಲ್ಲ ಅಂತ ಅಮ್ಮ ಅಂದಿದ್ದು ನೆನಪಾಯಿತು. ತೌಡಿನ ಬಕೇಟನ್ನು ಇಡಕ್ ಗತಿಯಿಲ್ಲ, ಎಮ್ಮೆಗಳು ಮುನ್ನುಗ್ಗಿ ಅದಕ್ಕೆ ಬಾಯಿ ಹಾಕಿದವು. ಇವಕ್ಕೆ ಯಾಕಿಷ್ಟು ಆತ್ರ? ಅಂದ್ಕೊಂಡ. ಹೌದು. ಅಣ್ಣ ಕೊಟ್ಟಿಗೆಯನ್ನು ತುಂಬಾ ಚೆನ್ನಾಗೇ ಕಟ್ಟಿದ್ದಾರೆ. ದೊಡ್ಡ ಕೊಟ್ಟಿಗೆ, ಅದಕ್ಕೆರಡು ಕಿಟಕಿ, ಈ ಎಮ್ಮೆಗಳು ಹುಯ್ದ ಗಂಜಲ, ಸಗಣಿ ಎಲ್ಲವೂ ಜಾರಿ ಒಂದು ಮೂಲೆಯಲ್ಲಿ ಶೇಖರವಾಗುವಂತೆ ಓರೆಯಾಗಿ ಹಾಸಿದ ಕಲ್ಲುಗಳು, ಶೇಖರವಾದ ಗಂಜಲ ಸಗಣಿಗಳನ್ನು ಆರಾಮಾಗಿ ತೆಗೆದು ತಿಪ್ಪೆಗೆ ಹಾಕಲು ಒಂದು ಬಕೀಟು... ಹೀಗೆ... ಆದ್ರೆ ಒಂದು ಕೊರತೆ ಅಂದ್ರೆ ಕೊಟ್ಟಿಗೆಯಲ್ಲಿ ಒಂದೇ ಒಂದು ಹಸುವೂ ಇಲ್ಲ. ಬೆಳಿಗ್ಗೆ ಎದ್ದು ಕರಾಗ್ರೇ ವಸತೇ ಹೇಳಿ ನಿತ್ಯ ಕರ್ಮಗಳಿಗೆ ತೆರಳೋ ಮುಂಚೆ ಹಸುಗಳ ದರ್ಶನ ಆಗಬೇಕು. ಆದರೆ, ನಮ್ಮ ಮನೇಲಿ ಹಸುವೇ ಇಲ್ಲವಲ್ಲ ಅಂತ ತಾತ ಎಷ್ಟೋ ಸಾರಿ ಬೇಸರಿಸಿಕೊಳ್ಳುತ್ತಿದ್ದರು. ಅಮ್ಮ ಅಂತೂ ಹಸುವಿನ ಹಾಲು ಶ್ರೇಷ್ಠ. ಒಂದ್ ಹಸುನೂ ಮನೇಲಿಲ್ಲ. ದೇವರಿಗೆ ನೈವೇದ್ಯಕ್ಕಿಡಕ್ಕಾದರೂ ಹಸುವಿನ ಹಾಲು ಬೇಡ್ವೇ? ಒಂದು ಹಸು ತನ್ನಿ ಅಂತ ಅಣ್ಣನಿಗೆ ಸಾಕಷ್ಟು ಸಾರಿ ಹೇಳಿದ್ರು ಅಣ್ಣ ಕಿವಿಗೆ ಹಾಕ್ಕೊಂಡಿರಲಿಲ್ಲ. ಅಮ್ಮ ಎಷ್ಟು ಒರಲಿದರೂ ತಲೆಕೆಡಿಸಿಕೊಳ್ಳದೆ ಸ್ಕೂಲು-ತೋಟ-ಇಸ್ಪೀಟು ಇಷ್ಟರಲ್ಲೇ ಮುಳುಗಿ ಹೋಗಿರುವ ಅಣ್ಣನ ಬಗ್ಗೆ ಸಿಟ್ಟು ಬಂತು ನಾಣಿಗೆ. ಆದ್ರೆ ತಾನು ಫೇಲಾಗಿದ್ದಕ್ಕೆ ಏನೂ ಬೈಯ್ಯದೆ ಸುನಂದ (ಅತ್ತೆ ಮಗಳು) ಪಾಸೋ....? ಅಂತ ಕೇಳಿದ್ದ ಅಣ್ಣ ತುಂಬಾ ಕೆಟ್ಟವರೇನಲ್ಲ ಅನ್ನಿಸಿತು. ಸುನಂದ ಪಾಸಾಗಿದ್ದೇನೋ ಸರಿ. ಆದರೆ ವೆಂಡರ್ಮನೆ ಗೋಪು ಹೆಂಗ್ ಪಾಸಾದ ಅನ್ನೋ ಪ್ರಶ್ನೆ ಮಾತ್ರ ಬಗೆಹರಿಲಿಲ್ಲ. ಹಿತ್ತಲಿಗೆ ಹೋಗಿ ಕೈ ತೊಳೆದುಕೊಂಡ.<br /><span style="color:#660000;"><strong>-ಮೂರು-</strong></span><br />ಅಡುಗೆ ಮನೆಯಿಂದ ಬಿಸಿಕಾಫಿ ಘಮ ಬರ್ತಿತ್ತು. ಕಾಫಿ ಕುಡಿದು ಹೊರಟಾಗ, ಹೊರಗಾಗಿದ್ದರಿಂದ ಜಗಲಿ ತುದಿ ಕೋಣೆಲಿ ಕೂತಿದ್ದ ಎರಡನೇ ಅಕ್ಕ ಲಲಿತ ಎಲ್ಲಿಗ್ ಹೊರಟೆಯೋ ಅಂತ ಕೂಗಿದ್ದನ್ನ ಕೇಳಿಸಿಕೊಳ್ಳದೆ ಮುನ್ನಡೆದು ಪುಟ್ಟಸ್ವಾಮಿ ಮನೆ ಕಡೆ ಹೊರಟ. ಪುಟ್ಸಾಮಿ ಮನೆಗೆ ಎರಡು ದಾರಿ. ಎದಿರು ಮನೆ ಆಚಾರಿ ಹಿತ್ತಲನ್ನ ದಾಟಿ ಎಣಿಸಿ ಒಂದೈವತ್ತು ಹೆಜ್ಜೆ ಇಡೋದ್ರೊಳಗೆ ಪುಟ್ಸಾಮಿ ಮನೆ. ಆದ್ರೆ ಅದನ್ನ ಆಚಾರ್ರ ವಟಾರದ ಕಕ್ಕಸ್ಗುಂಡಿ ಅಂತಾಳೆ ಅಮ್ಮ. ಇನ್ನೊಂದು ಬಳಸು ದಾರಿ. ಆದರೆ ಈ ಲಲಿತ ನೋಡ್ತಾ ಇರೋದ್ರಿಂದ ಹತ್ತಿರದ ದಾರೀಲಿ ಹೋದ್ರೆ ಅಮ್ಮಂಗೆ ಹೇಳಿ ಬೈಯಿಸ್ತಾಳೆ. ಇದರ ಉಸಾಬರಿನೇ ಬೇಡ ಅಂತ ಬಳಸು ದಾರಿಲೇ ಹೊರಟ.<br />-<span style="color:#660000;"><strong>ನಾಲ್ಕು-<br /></strong></span>ಪುಟ್ಟಸ್ವಾಮಿ ಹಸು, ಎಮ್ಮೆ, ದನ, ಕರ, ಅಂತಾ ಅವುಗಳ ಮಧ್ಯೆನೇ ಬೆಳದೋನು ಅವುಗಳ ಸಕಲ ಚರಾಚರ ಭಾವನೆಗಳನ್ನ ಅರ್ಥಮಾಡಿಕೊಂಡು ಅವು ಯಾವ ಆಕ್ಷನ್ ಮಾಡಿದ್ರೆ ಏನ್ ಅರ್ಥ ಏನ್ ಹೇಳ್ತಿವೆ ಎಂದು ತಿಳ್ಕೊಂಡು ಬಿಡೋನು. ಅಲ್ಲದೇ ಅವುಗಳಿಗೆ ಏನೇ ಖಾಯಿಲೆ ಕಸಾಲೆ ಆದ್ರೂ ಅವನೇ ವೈದ್ಯ. ಬಿ.ಎ. ಮೇಸ್ಟ್ರು ಒಂದ್ ಸಾರಿ ಅವನಿಗೆ ನೀ ನಮ್ಮೂರಿನ ವೆಟರ್ನರಿ ಡಾಕ್ಟ್ರು ಕಣಯ್ಯ. ಪ್ರಾಣಿಗಳ ಡಾಕ್ಟ್ರಿಗೆ ಇಂಗ್ಲಿಷ್ನಲ್ಲಿ ಹಿಂಗಂತಾರೆ. ಯಾವ್ ಕಾಲೇಜನಲ್ ಓದ್ದೇ....? ಅಂತ ನಗ್ನಗ್ತಾ ಕೇಳಿದ್ದಕ್ಕೆ, ಸ್ವಾಮ್ಯೋರೇ... ಆ ಕ್ಲಾಸ್ ಮಾಡ್ಬ್ಯಾಡಿ ಅಂತ ಪೆಚ್ಚುಪೆಚ್ಚಾಗಿ ಖುಷಿ ಪಟ್ಟಿದ್ದ.<br />ಒಂದು ಸತಿ ಮನೆ ಎಮ್ಮೆ ಗೌರಿಗೆ ಕಣ್ಣಲ್ಲಿ ಪೊರೆ ಬಂದಿತ್ತು. ಇನ್ನೇನು ಪುಟ್ಸಾಮಿನೇ ವೈದ್ಯ. ಅವನ ವೈದ್ಯವೋ ಅದೊಂದು ವ್ರತ. ಅವನು ವೈದ್ಯ ಮಾಡೋವಾಗ ಮೌನದಿಂದ ಇರ್ತಿದ್ದ. ಅವ್ನು ಬೆಳಬೆಳಗೇನೇ ತುಂಬೆ ಎಲೆ ಕಿತ್ತುಕೊಂಡು ಬರ್ತಿದಿದ್ದು ಬೀದಿ ತುದೀಲಿ ಕಾಣಿಸ್ತಿದ್ದಾಂಗೆ ನಾಲ್ಕೈದು ಜನ ಗೌರಿಯನ್ನ ಹಿಡ್ಕೊಂಡು ಸಿದ್ಧರಾಗ್ತಿದ್ರು. ಅವ್ನು ಆ ತುಂಬೆ ಎಲೆಗಳನ್ನು ಚೆನ್ನಾಗಿ ಎರಡು ಕೈಯಲ್ಲಿ ಗಟ್ಟಿಯಾಗಿ ಹೊಸಕಿ ನೇರವಾಗಿ ಗೌರಿ ಕಣ್ಣಿಗೆ ಹಿಂಡುತ್ತಿದ್ದಾಗ ಗಟ್ಟಿಯಾದ ನಾಲ್ಕು ಹನಿ ಬಿದ್ದ ಕ್ಷಣ ಗೌರಿ ಒದ್ದಾಡುತ್ತಿದ್ದಳು. ಮತ್ತೆ ಅರ್ಧ ಚಮಚ ಉಪ್ಪಿನ ಪುಡಿ ಹಾಕಿದಾಗ ಗೌರೀನ ಹಿಡಿಯೋದೇ ಕಷ್ಟವಾಗುತ್ತಿತ್ತು. ಹೇಗೆ ಬಹಳಷ್ಟು ದಿನ ಮಾಡಿದ ಮೇಲೆ ಪೊರೆ ಪೂರಾ ಹೋಯ್ತು. ಆಂಥಾ ವೈದ್ಯ ಪುಟ್ಟಸ್ವಾಮಿ.<br />ಪುಟ್ಸಾಮಿ ನೀ ಹೆಳದಂಗೇ ಕೇಳುತ್ತಲ್ಲ ಗೋವುಗಳು ಹೇಗೋ? ಅಂತ ಕೇಳಿದ್ದಕ್ಕೆ ನಾರಾಯಣನೋರೇ ಯಾವುದಾದ್ರು ರಾಸಿನ ಕುತ್ತಿಗೆ, ಮೈಯ್ನ ನಾಲ್ಕು ದಿನ ಪ್ರೀತಿಯಿಂದ ಸವ್ರುತ್ತಿದ್ರೆ ಅವಕ್ಕೂ ನಮ್ ಪ್ರೀತಿ ಅರ್ಥವಾಗಿ ಅವು ನಾವ್ ಹೆಳ್ದಂಗೇ ಕೇಳತೆ ಎಂದಿದ್ದ. ಇದೆಲ್ಲಾ ಮನಸ್ಸಿನ ಅಂಗಳದಲ್ಲಿ ಹಾದು ಹೋಗುವಷ್ಟರಲ್ಲಿ ಪುಟ್ಸಾಮಿ ಮನೆ ಬಾಗಿಲ ಹತ್ತಿರ ಬಂದಾಗಿತ್ತು. ಈ ದಾರಿ ಸವೆದಿದ್ದೇ ಗೊತ್ತಾಗಿಲ್ವಲ್ಲ ಅಂದ್ಕೊಂಡ ನಾಣಿ.<br />ಬೊಗಸೆಯಲ್ಲಿ ನೀರು ತುಂಬಿಕೊಂಡು ಸೂರ್ಯನಿಗೆ ಅಭಿಮುಖವಾಗಿ ಕಣ್ಣುಮುಚ್ಚಿ ಭಕ್ತಿಯಿಂದ ಅರ್ಘ್ಯ ಕೊಡುತ್ತಿದ್ದ ಪುಟ್ಸಾಮಿ ಅಣ್ಣ ದೇವರ ಮನೇಲಿ ಕೂತು ಗಂಟೆಗಟ್ಟಲೆ ಮಾಡೋ ಪೂಜೆಗಿಂತ ಪುಟ್ಸಾಮಿಯ ಒಂದು ನಿಮಿಷದ ಪೂಜೆ ಹೆಚ್ಚಲ್ವಾ ಅನ್ನಿಸಿತು. ತಾನು ಬಂದ ಕೆಲಸಾನೇ ಮರೆತು ಪುಟ್ಸಾಮಿನೇ ನೋಡುತ್ತಾ ನಿಂತ ನಾಣಿ.<br />ಎರಡ್ ನಿಮಿಷದ ನಂತರ ಏನ್ ಅಯ್ನೋರೇ ಇಷ್ಟು ಬೆಳಬೆಳಗೇನೇ ಬಂದ್ರಿ? ಅಂತ ಹರಿದ ಲುಂಗಿಗೆ ಕೈ ಒರೆಸಿಕೊಳ್ಳುತ್ತಾ ಕೇಳಿದ ಪುಟ್ಸಾಮಿ. ಪುಟ್ಸಾಮಿ ಒಂದು ವಿಷ್ಯ. ಯಾರಿಗೂ ಹೇಳಕ್ ಹೋಗಬ್ಯಾಡ ಈಗಲೇ. ನಮ್ ಮನೇಗೆ ಒಂದು ಹಸು ಬೇಕು. ಯಾರ್ ಹತ್ರ ಇದೆ? ಇದ್ರೆ ನೋಡೋಣ ಅಂತ ನಾಣಿ ಅಂದದ್ದಕ್ಕೆ ದೊಡ್ಡ ಅಯ್ನೋರಿಗೆ ಹೇಳಿ. ನೀವ್ ಯಾಕೆ ತಲೆ ಕೆಡಿಸ್ಕೊಳಕ್ ಹೋಯ್ತೀರಾ? ಇನ್ನಾ ಚಿಕ್ಕವರು ನೀವು ಅಂತ. ಅದಕ್ಕೆ ನಾಣಿ ಇಲ್ವೋ.. ನಾ ಬಂದಿದ್ದೇ ಅಂತ ಅಣ್ಣನ ಹತ್ರ ಹೇಳಬ್ಯಾಡ. ಒಂದ್ ಹಸು ನೋಡು. ನಾನೇ ವ್ಯಾಪಾರ ಮಾಡ್ತೀನಿ. ಚಿಕ್ಕವನಲ್ಲ ನಾನು. ನಂಗೂ ಹದಿನೈದ್ ದಾಟ್ತು ಅಂದ. ಆಗ ಪುಟ್ಸಾಮಿ ಅಲ್ಲಾ ಪಟ್ನದ್ ಹೊನ್ನನ ಹತ್ರ ಹದಿನೈದ್ ದಿವಸದಲ್ಲಿ ಕರು ಹಾಕಿರೋ ಹಸು ಐತೆ. ತಿಂಡಿ ತಿನ್ಕಂಡ್ ದುಡ್ ತಕ್ಕಂಡ್ ಬನ್ನಿ, ನೋಡೋಣ ಎಂದ. ಸರಿ ನಾನ್ ಒಂದ್ ಗಂಟೇಲಿ ರೆಡಿಯಾಗಿ ಬರ್ತೀನಿ ಅಂತ ನಾಣಿ ಕೂಗಿಕೊಂಡಿದ್ದು ಆಚಾರಿ ಮನೆ ಹಿತ್ಲಿಂದ ಕೇಳಸ್ತು.<br /><br />ತಾನು ಕೂಡಿಸಿಟ್ಟ ದುಡ್ನೆಲ್ಲಾ ಹರವಿಕೊಂಡ. ಅವು ಐವತ್ತೆರಡು ರೂಪಾಯಿ ಅನ್ನುತ್ತಿದ್ದವು. ಅಮ್ಮನನ್ನು ತುಂಬಾ ಹೊತ್ತು ಪುಸಲಾಯಿಸಿದ್ದಕ್ಕೆ ಅವಳು ಐವತ್ತು ರೂಪಾಯಿ ಕೊಟ್ಟಳು. ಹಸು ತರೋವರೆಗೂ ಅಣ್ಣನಿಗೆ ಹೇಳಬಾರದೆಂದು ಆಣೆ ಹಾಕಿಸಿಕೊಂಡು ಸ್ನಾನ ಸಂಧ್ಯಾವಂದನೆ ಮುಗಿಸಿ ಅಮ್ಮ ಮಾಡಿಕೊಟ್ಟ ರೊಟ್ಟಿ ಚಟ್ನಿ ತಿಂದು ದುಡ್ಡನ್ನ ಮತ್ತೆ ಎಣಿಸಿ ಜೋಬಿನಲ್ಲಿ ಭದ್ರವಾಗಿ ಇಟ್ಟುಕೊಂಡು ಪುಟ್ಸಾಮಿ ಮನೆಗೆ ಹೋದ. ಪುಟ್ಸಾಮಿನೂ ಹೊರಟು ನಿಂತಿದ್ದ.<br /> <span style="color:#660000;"><strong> -ಐದು-</strong></span><br />ಅಲ್ಲಾಪಟ್ಟಣ ಹುಲಿಕಲ್ನಿಂದ ಪಶ್ಚಿಮಕ್ಕೆ ಒಂದು-ಒಂದೂವರೆ ಕಿ.ಮೀ. ದೂರದಲ್ಲಿದೆ. ಹೊನ್ನನ ಅಪ್ಪ ನಿಮ್ ಮನೆ ಗೇಣಿದಾರನಾಗಿದ್ದೋನೆ. ಈಗ ಅವ್ನು ಇರೋ ಜಮೀನು ನಿಮ್ದೆ ಆಗಿತ್ತು.... ಅಂತ ಯಾವುದೋ ಹಳೇ ಕಥೇನ ಸವಿಸ್ತಾರವಾಗಿ ಹೇಳ್ತಾ ಪುಟ್ಸಾಮಿ ಬಿರಬಿರನೆ ಹೆಜ್ಜೆ ಹಾಕ್ತಿದ್ದ. ಆದ್ರೆ ನಾಣಿ ಮನಸ್ಸು ಹಸು ಹೇಗಿರಬಹುದು ಅಂತ ಯೋಚಿಸುತ್ತಿತ್ತು. ಹೊನ್ನನ ಮನೆಗೆ ಎಷ್ಟು ದೂರ ಅಂತ ಮನಸ್ಸಿನಲ್ಲೇ ಲೆಕ್ಕ ಹಾಕತೊಡಗಿದ. ಮೊದಲು ಸಿಗೋದು ಜೋಯಿಸರ ತೋಟ, ನಂತರ ಬಿ.ಎ. ಮೇಷ್ಟ್ರದ್ದು, ಆ ತುದೀಗೆ ಅಲ್ಲಾ ಪಟ್ಣದ ಮನೆ ಶೀನಂದು. ಎಲ್ಲಾ ಅಡಿಕೆ ತೋಟಗಳು, ಅದಕ್ಕೆ ವೀಳ್ಯದೆಲೆ ಹಂಬು ಹಂಬ್ಸಿದ್ರು. ಮೇಲಕ್ಕೆ ಜಗನ್ನಾಥನ ಕೆರೆ, ಮುಂದಕ್ಕೆ ಪುಟ್ಸಾಮಿ ಹೊಲ, ನಂತರ ಸಿಗೋದೆ ಹೊನ್ನನ ಜಮೀನು. ಇವನ್ನೆಲ್ಲ ದಾಟಿ ಹೊನ್ನನ ಜಮೀನಿಗೆ ಬಂದ್ರೆ ಅಲ್ಲೇ ಹೊನ್ನ ಬದುವಿನಲ್ಲಿ ದನಗಳನ್ನ ಮೇಯಿಸ್ತಾ ಉಳುಮೆ ಮಾಡ್ತಿದ್ದ. ಹೊನ್ನಾ-ಪುಟ್ಸಾಮಿ ಏನೋ ಮಾತ್ನಾಡಿಕೊಂಡ್ರು. ಹೊನ್ನಾ ಇಲ್ಲೇ ಬದುನಲ್ ಮೇಯ್ತಿದೆ ನೋಡಿ ಬನ್ನಿ ಅಂದ. ತುಂಬಾ ಸಾಧು ಹಸ. ಹಾಯಕ್ಕಿಲ್ಲ, ಕಾಲೆತ್ತಕ್ಕಿಲ್ಲ. ತುಂಬಾ ಒಳ್ಳೆ ಹಸ ಅಂತೆಲ್ಲಾ ಹೊಗಳಿಕೊಂಡ. ಪುಟ್ಸಾಮಿ ಹಸು ತಡವಿ ಕೆಚ್ಚಲಿಗೆ ಕೈ ಹಾಕಿದ. ಹಸು ತುಂಬಾ ಸಾಧು ಒಳ್ಳೆದು ಅಂತ ನಿರ್ಧಾರವಾಯ್ತು. ಹಾಲೆಷ್ಟು ಕೊಡುತ್ತೆ? ಪ್ರಶ್ನೆ ಎದುರಾಯ್ತು. ಒಂದು ಮುಕ್ಕಾಲು ಸೇರು. ಕಿಂಚಿತ್ ಹೆಚ್ಚೆಯಾ ಅಂದಾ ಹೊನ್ನ. ಒಂದು ಪಡಿ (ಸುಮಾರು ಅರ್ಧ ಲೀಟರ್) ಹಾಲು ಕೊಟ್ರೆ ಸಾಕು ಅಂತ ಅಮ್ಮ ಹೇಳಿದ್ಲು. ಇದು ಮುಕ್ಕಾಲು ಸೇರು ಕೊಡುತ್ತೆ ಅಂತ ಖುಷಿಯಾಯ್ತು. ಮುನ್ನೂರು ಕೊಡೋದು ಅಂತ ತುಂಬಾ ಚೌಕಾಸಿ ನಂತರ ನಿರ್ಧಾರ ಆಯ್ತು. ಈಗ ನೂರು ರೂಪಾಯಿ ತಕ್ಕೋ. ನಾಳೆ ಪುಟ್ಸಾಮಿ ಹತ್ರಾ ಇನ್ನೂ ಇನ್ನೂರು ಕಳಿಸ್ತೀನಿ ಅಂತ ನಾಣಿ ಹೇಳಿದ್ದಕ್ಕೆ ಹೊನ್ನ ಹಸುವಿನ ಹಗ್ಗವನ್ನು ಕೊಡುತ್ತಾ ಹಗ್ಗದ ಕಾಸು ನಾಲ್ಕು ರೂಪಾಯಿ ಕೊಟ್ಬಿಡಿ ಅಂತ ಪಟ್ಟು ಹಿಡಿದ. ಕೊನೆಗೆ ಒಂದು ರೂಪಾಯಿ ಕೊಟ್ಟು ಹಸು ಹೊಡ್ಕೊಂಡು ಊರಕಡೆ ಹೊರಟಿದ್ದಾಯ್ತು. ಕರೂನ ಪುಟ್ಸಾಮಿ ಎತ್ಕಂಡಿದ್ದ. ಆ ಕರೂಗೆ ನಡೆಯಾಕ್ಕು ತ್ರಾಣ ಇರ್ಲಿಲ್ಲಾ. ಇವತ್ತು ಹೆಚ್ ಹಾಲ್ ಸಿಗಾಕಿಲ್ಲ. ಈಗ ಕರ ಕುಡ್ಕಂಬುಟದೆ ಅಂತ ಕೊನೆ ಮಾತು ಸೇರಿಸಿದ ಹೊನ್ನ. ಈವತ್ನಿಂದ ನಮ್ಮನೇಲು ಹಸು ಇರತ್ತೆ. ಅಮ್ಮಾ ಬೆಳಗ್ಗೆ ಎದ್ದ ತಕ್ಷಣ ಇದ್ರ ದರ್ಶನ ಮಾಡ್ಬೋದು, ದೇವ್ರಿಗೆ ನೈವೇದ್ಯಕ್ಕೆ ಹಾಲೆ ಇಡ್ಬೋದು, ಎಷ್ಟು ಸಂತೋಷ ಅವ್ಳಿಗೆ ಎಂದೆಲ್ಲಾ ಕಲ್ಪಿಸಿಕೊಳ್ಳುತ್ತಾ ಖುಷಿ ಖುಷಿಯಾಗಿದ್ದವನಿಗೆ ತೋಟವನ್ನು ಹಿಂದೆಹಾಕಿದ್ದು ಗೊತ್ತೇ ಆಗಲಿಲ್ಲ.<br />ಜಗುಲಿಯ ಬಳಿಯೇ ನಿಂತಿದ್ದ ಕೊನೆ ತಂಗಿ ಕನಕೆ ಹಸು ಕರುವನ್ನು ನೋಡಿ ಮುಖದಲ್ಲಿ ಆಶ್ಚರ್ಯ ತುಂಬಿಕೊಂಡು ಅಮ್ಮನ ಬಳಿ ಓಡಿದಳು. ಅಮ್ಮಾ ಬಂದು ಹಸುವನ್ನು ನೋಡಿ ಎಷ್ಟ್ ಹಾಲ್ ಕೊಡುತ್ತಂತೆ? ಅಂದ್ಲು. ಮುಕ್ಕಾಲ್ ಸೇರ್ ಕೊಡುತ್ತಂತೆ. ಆದ್ರೆ ಇವತ್ತು ಕರು ಕುಡ್ಕೊಂಡು ಬಿಟ್ಟಿದೆ ಅಂದ ನಾಣಿ. ಏನೋ..... ನೋಡಿದ್ರೆ ಹಂಗನ್ಸವಲ್ಲ ಅಚ್ಚೇರು ಕೊಟ್ರೆ ಸಾಕು ಅಂದುಕೊಳ್ಳುತ್ತಾ ಅಮ್ಮ ಒಳಗೆ ಹೋದಳು.<br />ಅಯ್ಯೋ ಅಮ್ಮಂಗೆ ಖುಷಿಯಾಗ್ಲೇ ಇಲ್ವಲ್ಲಾ. ಬರೀ ಹಾಲು ಕೊಡೋದ್ರ ಬಗ್ಗೆ ಕೇಳಿ ಹೋದ್ಲು. ದಿನಾ ಹಸುವಿನ ದರ್ಶನ ಮಾಡ್ಬೋದಲ್ಲಾ? ಬರೀ ಹಾಲೇ ಮುಖ್ಯವ? ಅಂತ ಏನೇನೋ ಅನ್ನಿಸಿ, ನಾ ಇಷ್ಟೆಲ್ಲಾ ಕಷ್ಟ ಪಟ್ರೂ ಅಮ್ಮಾ ಒಂಚೂರು ಹೋಗ್ಳಲೇ ಇಲ್ಲವಲ್ಲ ಅಂತ ಅಳು ಬಂತು. ನಾನ್ ಹುಡುಗ ಅಳ್ಬಾರ್ದು ಅಂದುಕೊಂಡ.<br />ಹಸು-ಕರುವನ್ನು ಕೊಟ್ಟಿಗೆಯಲ್ಲಿ ಕಟ್ಟಿ ಒಂದ್ ದೊಡ್ಡ ಲೋಟ ತಂದು ಇಷ್ಟ್ ಹಾಲ್ ಸಿಗ್ಬೋದು. ಇವತ್ತು ಕರೂಗೆ ಹಾಲ್ ಬಿಡಲ್ಲ. ಹೆಂಗಿದ್ರು ಅದು ಕುಡ್ಕಂಡಿದ್ಯಲ್ಲಾ ಅಂತ ಅಂದುಕೊಂಡು ಹಾಲು ಕರೆಯೋಕೆ ಶುರು ಮಾಡ್ದ. ಮುಕ್ಕಾಲು ಲೋಟ ತುಂಬಿತು. ಸರಿ ನಾಳೆಯಿಂದ ಸರಿಯಾಗಿ ತುಂಬುತ್ತಲ್ಲ ಅಂತ ದೇವ್ರ ಮನೇಲಿ ಹಾಲು ಇಟ್ಬಂದ.<br />ಚೆನ್ನಾಗಿ ತಿನ್ನಲಿ ಅಂತ ಮೂರ್ನಾಲ್ಕು ಎಮ್ಮೆಗಳಿಗೆ ಹಾಕುವಷ್ಟು ಹುಲ್ಲನ್ನು ಇದಕ್ಕೊಂದ್ದಕ್ಕೇ ಹಾಕಿದ. ಹೊನ್ನ ಈ ಹಸೂನ ಭೈರಿ ಅಂತ ಕರೀತಿದ್ದುದು ಜ್ಞಾಪಕಕ್ಕೆ ಬಂದು ಅಯ್ಯೋ ಹೆಸ್ರು ಚೆನ್ನಾಗಿಲ್ಲ ಅನಿಸಿ ಬೆಳ್ಳಿ ಅಂತ ಬದಲಿಸಿ ಬೆಳ್ಳಿ ಬೆಳ್ಳಿ ಅಂತ ಕರೆದು ಚೆನ್ನಾಗಿ ಮೈದಡವಿದ.<br /><span style="color:#660000;"><strong>-ಆರು-</strong></span><br />ಒಂದು ಚೊಂಬು ಭರ್ತಿ ಹಾಲನ್ನ ನೈವೇದ್ಯಕ್ಕೆ ಇಟ್ಟಿದ್ದಾಳೆ ಅಮ್ಮ. ನೋಡಿ ಅಷ್ಟು ದಿನದಿಂದ ಒರಲಿದ್ರು ಒಂದ್ ಹಸು ತರಲಿಲ್ಲ ನೀವು. ಈಗ ಇವ್ನೇ ಹೋಗಿ ಎಷ್ಟು ಚೆನ್ನಾಗಿರೋ ಹಸು ತಂದಿದ್ದಾನೆ ನೋಡಿ ಅಂತ ಅಣ್ಣನಿಗೆ ಅಮ್ಮ ಹೇಳ್ತಿದ್ದಿದು ಕೇಳಿಸ್ತು. ಬೆಳ್ಳಿ ಹೆಸರು ಎಷ್ಟು ಚೆನ್ನಾಗಿದೆ ಅಲ್ವೇನೆ? ಅಂತ ದೊಡ್ಡಕ್ಕ ಕಮಲ ಹೇಳಿದ್ಲು. ನಾ ಬೆಳ್ಳಿ ಅಂತ ಹೆಸ್ರಿಟ್ಟಿದ್ದು ಇವಳಿಗೆ ಗೊತ್ತಾಯ್ತಾ? ನಾನೇ ಹಾಲ್ ಕರೀ ಬೇಕು ಅಂದ್ಕೊಂಡಿದ್ನಲ್ಲಾ ಇವತ್ತು ಹಾಲ್ ಕರ್ದೋರು ಯಾರು? ನಿನ್ನೆ ಸಂಜೆ ಪಾಪ ಆ ಕರುಗೆ ನಾ ಹಾಲು ಕುಡಿಯೋಕೆ ಬಿಟ್ಟಿರಲಿಲ್ಲ. ಇವತ್ತಾದ್ರೂ ಬಿಟ್ರೋ ಇಲ್ವೋ ಅಂತ ಚಿಂತೆ ಹತ್ತಿತು. ತಕ್ಷಣ ಎಚ್ಚರಾಯಿತು. ಬೆಳಗಾಗಿರಲಿಲ್ಲ. ತೊಟ್ಟಿಯಲ್ಲಿ ಸುರಿದ ಕತ್ತಲು. ಏನು ಎತ್ತ ಅರ್ಥ ಆಗಲಿಲ್ಲ. ಸ್ವಲ್ಪ ಹೊತ್ತಿನ ಮೇಲೆ ಓ ಕನಸು ಅಂತ ಹೊಳೀತು. ಬೆಳಿಗ್ಗೆ ಎದ್ದು ಹಸೂಗೆ ತೌಡು ಹಾಕಬೇಕು. ಎಷ್ಟು ಗಂಟೆ ಆಯ್ತು ಅಂತ ಕಣ್ಣು ಕೀಲಿಸಿ ನೋಡಿದ. ಗಡಿಯಾರಕ್ಕೂ ಕಪ್ಪು ಸುರಿದಿತ್ತು. ಗಡಿಯಾರ ನಿಂತು ಹೋಗಿದೆಯೇ ಅಂತ ಅನುಮಾನ ಆಯ್ತು. ಎದ್ದು ಹತ್ತಿರ ಹೋಗಿ ಟಾರ್ಚ್ ಬೆಳಕು ಬಿಟ್ಟು ನೋಡಿದ. ಇನ್ನೂ ಎರಡೂವರೆ ಗಂಟೆ. ವಾಪಾಸು ಬಂದು ಮಲಗ ಬೇಕಾದ್ರೆ ಕೊನೇ ತಮ್ಮ ಶೇಷನಿಗೆ ಕಾಲು ತಗುಲಿತು. ಅವನು ಸೀದ ಎದ್ದು ತೊಟ್ಟಿಯ ಸುತ್ತ ಓಡತೊಡಗಿದ. ನಾಣಿಗೆ ಕಕ್ಕಾಬಿಕ್ಕಿ. ಬಿದ್ದುಬಿಟ್ರೆ ಏನ್ ಗತಿ ಅಂತ ಭಯವಾಗಿ ಪಕ್ಕದಲ್ಲಿದ್ದ ಅತ್ತೆಯನ್ನು ಎಚ್ಚರಿಸಿದ. ಅಯ್ಯೋ ಬೀಳ್ತಾನೆ ಕಣೋ ಎನ್ನುತ್ತಾ ಅತ್ತೆ ಅವನ ಸುತ್ತ ಎರಡು ಸುತ್ತು ಸುತ್ತಿ ಗಟ್ಟಿಯಾಗಿ ಹಿಡಿದುಕೊಂಡು ಬಂದು ಪಕ್ಕದಲ್ಲೇ ಮಲಗಿಸಿಕೊಂಡ್ರು.<br />ನಾಣಿ ಮತ್ತೆ ಮಲಗಿದ. ಏನೇನೋ ಕನಸುಗಳು. ಬೆಳ್ಳಿ-ಹಾಲು-ಹೊನ್ನ-ಕರು-ಅದರ ದೈನ್ಯ ಮುಖ-ಹಲಸಿನ ಮರ-ಅಡಿಕೆ ತೋಟ.. ಏನೇನೋ.. ಸಂಬಂಧವಿಲ್ಲ, ಅರ್ಥವಿಲ್ಲ! ಮತ್ತೆ ಎಚ್ಚರವಾದಾಗ ಅಮ್ಮ ಮಡಿ ಕೋಲಲ್ಲಿ ಬಟ್ಟೆ ತೆಗೆದುಕೊಂಡು ಸ್ನಾನಕ್ಕೆ ಹೋದಳು. ನಾಣಿ ಅಡುಗೆ ಮನೆಗೆ ಹೋಗಿ ನೋಡಿದ ಬೇಕಾದಷ್ಟು ಮಜ್ಜಿಗೆ ಇತ್ತು. ಅದನ್ನು ಕೊಟ್ಟಿಗೆಗೆ ತೆಗೆದುಕೊಂಡು ಹೋಗಿ ಬಕೆಟ್ಗೆ ಸುರಿದ. ಅದಕ್ಕೆ ಒಂದು ರಾಶಿ ತೌಡನ್ನು ಸುರಿದು ಗಟಾಯಿಸಿ ಬೆಳ್ಳಿ ಮುಂದೆ ಇಟ್ಟ. ಅದು ಸರಿಯಾಗಿ ತಿನ್ನಲಿಲ್ಲ. ಮಜ್ಜಿಗೆ ವಾಸನೆಗೋ ಏನೋ ಚೂರು ಚೂರು ತಿಂದಿತು. ಅಷ್ಟೊಂದು ಕಲಸಿ ಹಾಕಿದ್ದೇನೆಂದು ಅಮ್ಮನಿಗೆ ಗೊತ್ತಾದ್ರೆ ತೊಂದರೆ ಎಂದುಕೊಂಡು ಅವನ್ನು ಎಮ್ಮೆಗಳ ಮುಂದಕ್ಕೆ ಇಟ್ಟ. ಎಮ್ಮೆಗಳು ಯಥಾ ಪ್ರಕಾರ ಕಿತ್ತಾಡಿಕೊಂಡು ತಿಂದವು. ಏಳು ಗಂಟೆ ಹೊತ್ತಿಗೆ ಒಂದು ದೊಡ್ಡ ಚೊಂಬು, ಲೋಟ ತೆಗೆದುಕೊಂಡು ಕೊಟ್ಟಿಗೆಯ ಕಡೆ ಹೋದ. ಲೋಟಕ್ಕೆ ಹಾಲು ಕರೆಕರೆದು ಅದು ತುಂಬಿದಂತೆ ಚೊಂಬಿಗೆ ಸುರಿಯುವುದೆಂಬ ಕಲ್ಪನೆಯೊಂದಿಗೆ ಕರುವಿಗೆ ಎಷ್ಟು ಹಾಲು ಬಿಡಬೇಕು ಎಂಬ ಪ್ರಶ್ನೆ ಎದುರಾಯಿತು. ಮೊದಲು ಹಾಲು ಕರೆದು ಬಂದು ಅರ್ಧ ಸೇರು ಆದ ಮೇಲೆ ಉಳಿದದ್ದನ್ನ ಕರುವಿಗೆ ಬಿಡೋಣ. ಸಾಕಾಗದಿದ್ದರೆ ಮನೆಯಲ್ಲಿ ಬೇರೆ ಹಾಲು ಇರುತ್ತಲ್ಲಾ? ಅಮ್ಮನ ಕಣ್ಣು ತಪ್ಪಿಸಿ ಅದನ್ನೆ ಕುಡಿಸೋಣ ಎಂದುಕೊಂಡ.<br />ಅಲ್ಲಿಗೆ ಸೌಭಾಗ್ಯತ್ತೆ ಬಂದು ನಿಂತಿದ್ದರು. ಅವರು ಅಣ್ಣನ ಅಕ್ಕ. ಬಹಳ ವರ್ಷಗಳಿಂದ ನಾಣಿಯ ಮನೆಯಲ್ಲೇ ಇದ್ದರು. ಮದುವೆಯಾಗಿ ಎಷ್ಟು ವರ್ಷಗಳಾದರೂ ಮಕ್ಕಳಾಗದೆ ಇದ್ದಾಗ ಸೌಭಾಗ್ಯತ್ತೆಯ ಗಂಡನ ಮನೆಯವರು ಇವರನ್ನು ಇಲ್ಲಿ ತಂದು ಬಿಟ್ಟಿದ್ದರು. ಅಣ್ಣ ಇಲ್ಲದಿರುವಾಗ ಅಮ್ಮ ಎಷ್ಟೋ ಸತಿ ಸೌಭಾಗ್ಯತ್ತೆಯನ್ನು ಹಂಗಿಸುತ್ತಿದ್ದರು. ಆದರೆ ಅತ್ತೆಯದು ಒಂದೇ ಉತ್ತರ-ಮೌನ. ಸೌಭಾಗ್ಯತ್ತೆಗೆ ನಾಣಿ ಎಂದರೆ ತುಂಬಾ ಪ್ರೀತಿ. ಕದ್ದುಮುಚ್ಚಿ ತೇಂಕೋಳು, ಚಕ್ಕುಲಿ, ಬರ್ವಡೆ, ಮಿಠಾಯಿ, ಲಾಡುಗಳನ್ನು ಕೊಡುತ್ತಿದ್ದರು. ಅವರು ಊಟಕ್ಕೆ ಬಡಿಸೋಕೆ ನಿಂತರೆ ಇವನಿಗೆ ಹೆಚ್ಚೇ ತುಪ್ಪ ಬೀಳುತ್ತಿತ್ತು. ಒಂದು ಸತಿ ನಾಣಿಗೆ ಜ್ವರ ಬಂದಾಗ ಮೂರ್ನಾಲ್ಕು ದಿನ ಕಾಯ್ತಿದ್ದರು. ಇವನು ಫೇಲ್ ಆದಾಗ ತಬ್ಬಿಕೊಂಡು ಸಮಾಧಾನ ಮಾಡಿದ್ದರು.<br />ನಾಣಿ ಹಾಲು ಕರೆಯಲು ಶುರು ಮಾಡಿದ. ಆದರೆ ಯಥಾ ಪ್ರಕಾರ ಮುಕ್ಕಾಲು ಲೋಟ ಮಾತ್ರ ತುಂಬಿತು. ಇನ್ನೊಂದು ಲೋಟ ಹಾಲಿಲ್ಲ! ಆಘಾತ! ಆಶ್ಚರ್ಯ! ಅಯ್ಯೋ ಏನೋ ಇದು ನಾಣಿ. ಇಷ್ಟೇ ಹಾಲ ಇದು ಕೊಡೋದು? ಆ ಹೊನ್ನ ನಿಂಗೆ ಸರಿಯಾದ ಪಂಗನಾಮ ಹಾಕಿದಾನೆ. ಅಣ್ಣ ಸರಿಯಾಗಿ ಬಯ್ತಾನೆ. ಉಪಯೋಗಕ್ಕೆ ಬಾರದ್ದನ್ನ ಯಾರೂ ಇಷ್ಟ ಪಡಲ್ಲ ಕಣೋ. ಈಗ ನನ್ನ ನೋಡು... ಏನೋ ಹೇಳಲು ಹೋಗಿ ಹುಮ್ ಅಂತ ನಿಟ್ಟುಸಿರು ಬಿಟ್ಟಳು. ಕರುವಿಗೊಂದು ತೊಟ್ಟು ಹಾಲಿರಲಿಲ್ಲ. ಕರುವನ್ನು ಹೋಗಿ ತಬ್ಬಿಕೊಂಡ ನಾಣಿ. ಅದರ ಹಳ್ಳೆ ಹೊಡೆದುಕೊಳ್ಳುತ್ತಿತ್ತು. ಅದಕ್ಕೆ ಅಂಬಾ ಎಂದು ಕಿರುಚಲು ಶಕ್ತಿ ಇರಲಿಲ್ಲ. ಸಂಕಟ ಆಯಿತು ನಾಣಿಗೆ. ಅತ್ತೇನ ಹೋಗಿ ತಬ್ಬಿಕೊಂಡು ಬಿಕ್ಕಳಿಸಿ ಅತ್ತ. ಅತ್ತೆ ದಯವಿಟ್ಟು ಅಣ್ಣನಿಗೆ ಈಗ್ಲೇ ಹೇಳ್ಬೇಡ ಎಂದು ಮತ್ತೆ ಬಿಕ್ಕಳಿಸಿದ. ಕರೆದ ಹಾಲಿಗೆ ನೀರನ್ನು ಸೇರಿಸಿ ಮುಕ್ಕಾಲು ಲೋಟ ಹಾಲನ್ನು ಒಂದು ಲೋಟ ಮಾಡಿ ಅಡಿಗೆ ಮನೆ ಹತ್ತಿರ ತಲುಪಿದ.<br />ಇವನಿಗೆ ವ್ಯಾಪಾರ ಮಾಡಕೆ ಹೇಳ್ದೋರ್ ಯಾರು? ನಾ ಕಬ್ಳಿಗೆರೆ ಇಂದಾನೋ, ಬೆಟ್ದಳ್ಳಿ ಇಂದಾನೋ ಒಳ್ಳೆ ಹಸು ತರ್ತಿದ್ದೆ ಅಂತ ಅಣ್ಣ ಹೇಳ್ತಿದ್ದದ್ದು ಕೇಳಿಸ್ತು. ಹಾಲೆಷ್ಟು ಕೊಡುತ್ತೆ ಅಂತ ಗೊತ್ತಾಗದೆ ಹೀಗೆ ಹೇಳುತ್ತಿರುವ ಅಣ್ಣನ ಮುಂದೆ ಒಂದು ಲೋಟ ಹಾಲನ್ನು ಹಿಡಿದುಕೊಂಡು ಹೋದರೆ ಏನೆನ್ನಬಹುದು ಯೋಚಿಸಿ ಮತ್ತೆ ಕೊಟ್ಟಿಗೆ ಕಡೆ ಹೋದ. ಆ ಹಸು ಇಷ್ಟು ಕಡಿಮೆ ಹಾಲ್ ಕೊಟ್ಟದ್ದಾದ್ರೂ ಯಾಕೆ ಎಂದು ತುಂಬಾ ಯೋಚಿಸಿ, ಕೊನೆಗೆ ಹೊಸ ಜಾಗ ಘಾಸಿಯಾಗಿರ್ಬೇಕು. ನಾ ಇಟ್ಟಿದ್ ತೌಡನ್ನು ಸರಿಯಾಗಿ ತಿನ್ಲಿಲ್ಲ. ಇವತ್ ಬೆಳಿಗ್ಗೆ ಎಲ್ಲಾ ಚೆನ್ನಾಗಿ ಮೇಯಿಸ್ತೀನಿ. ಆವಾಗಾದ್ರೂ ಸಂಜೆ ಸರಿಯಾಗಿ ಹಾಲು ಕೊಡ್ಬಹುದು ಅಂತೆಲ್ಲಾ ಸಮಜಾಯಿಷಿ ಕೊಟ್ಕೊಂಡ. ಅಣ್ಣ ಸ್ಕೂಲಿಗೆ ಹೋದ್ರು ಅಂತ ಗೊತ್ತಾದ್ ಮೇಲೆ ಅಡಿಗೆ ಮನೆಗೆ ಬಂದು ಅಮ್ಮನಿಗೆ ಹಾಲು ಕೊಟ್ಟ. ತನಗೆ ಹೊಳೆದ ಸಮಜಾಯಿಷಿಗಳನ್ನೇ ಅಮ್ಮನಿಗೆ ವಿವರಿಸಿ ಹೇಳಿದ. ಅಮ್ಮ ಬೇರೆ ಚಿಂತೆಯಲ್ಲಿ ಇದ್ದುದರಿಂದ ಅದರ ಕಡೆ ಹೆಚ್ ಗಮನ ಕೊಡಲಿಲ್ಲ.<br />ಹದಿನೈದು ವರ್ಷದಲ್ಲಿ ಒಂದು ದಿವಸವೂ ಹಸು ಮೇಯಿಸಿ ಗೊತ್ತಿಲ್ಲದ ಹುಡುಗ. ಹಸು ಮೇಯಿಸಿಕೊಂಡು ಬರಲು ಹೊರಟ. ದಾರಿಯಲ್ಲಿ ಸಿಕ್ಕ ಜೋಯಿಸ ಹೊಸ ಹಸನೇನೋ? ಎಷ್ಟು ಕೊಟ್ರಿ? ಯಾಕೋ ಚಿರೂಪು ಅಂತೆಲ್ಲಾ ಹೇಳಿ ಅವನ ಆತಂಕಕ್ಕೆ ಇನ್ನಷ್ಟು ಆತಂಕ ಸೇರಿಸಿದ್ರು.<br />ಒಂದು-ಒಂದೂವರೆ ಗಂಟೆ ಮೇಯಿಸುವಷ್ಟು ಹೊತ್ತಿಗೆ ಛೇ ಎಷ್ಟೊಂದು ಸಮಯ ಹಾಳು ಎನಿಸಿತು. ಅಷ್ಟರಲ್ಲಿ ಒಂದು ಉಪಾಯ ಹೊಳೆಯಿತು. ಒಂದು ದೊಡ್ಡ ಹಗ್ಗವನ್ನು ತಂದು ಹಸುವಿಗೆ ಕಟ್ಟಿ ಹಗ್ಗದ ಮತ್ತೊಂದು ತುದಿಯನ್ನು ಗೂಟಕ್ಕೆ ಕಟ್ಟಿ ಅದು ಅಲ್ಲೆಲ್ಲಾ ಓಡಾಡಿಕೊಂಡು, ಮೇಯುವಂತೆ ವ್ಯವಸ್ಥೆ ಮಾಡಿ ಪುಟ್ಸಾಮಿ ಮನೆ ಕಡೆ ಓಡಿದ. ಕೊಟ್ಟಿಗೆಯಲ್ಲಿದ್ದ ಪುಟ್ಸಾಮಿಗೆ ಇವತ್ ಬೆಳಿಗ್ಗೆ ತನಗೆ ಆದ ಆಘಾತವನ್ನು ವಿವರಿಸಿದ ನಾಣಿ. ಅಯಿನೋರೆ ಹೊಸ ಜಾಗ ಅಲ್ವ? ಅದಕ್ಕೆ ಘಾಸಿಯಾಗಿರ್ಬೇಕು. ಸಂಜೆ ಚೆನ್ನಾಗಿ ಹಾಲು ಕೊಡ್ತದೆ ಬಿಡಿ. ಚಿಂತೆ ಮಾಡ್ಬೇಡಿ ಅಂತ ಪುಟ್ಸಾಮಿ ತನಗೆ ಅನಿಸದ್ದನ್ನೇ ಹೇಳಿದ್ದನ್ನು ಕೇಳಿಸಿಕೊಂಡು ಮನೆಗೆ ಹೋಗಿ ಊಟ ಮಾಡಿ ನರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ ಹಿಡಿದುಕೊಂಡು ಹಸು ಕಟ್ಟಿದ ಜಾಗಕ್ಕೆ ಹೋದ. ಹಸು ಚೆನ್ನಾಗಿ ಮೇಯ್ತಿತ್ತು. ಬೆಳ್ಳಿ ಬೆಳ್ಳಿ ಅಂತ ಕರೆದು ಮುದ್ದು ಮಾಡಿದ.<br />ಸಂಜೆ ಪುಸ್ತಕವನ್ನು ಹಿಡಿದುಕೊಂಡು ಬೆಳ್ಳಿಯನ್ನು ಹೊಡೆದುಕೊಂಡು ಮನೆ ಕಡೆ ಹೊರಟ್ರೆ ಮಧ್ಯದಲ್ಲಿ ರಾಜು ಸಿಗಬೇಕೆ! ಅವನು ಈಗ ಕೆ.ಎಸ್.ನ. ಅವರ ಬಗ್ಗೆ ಕೊರೆದ. ಹೊಸ ಹಸುವ? ಕೇಳಿದ ಅವನಿಂದ ತಪ್ಪಿಸಿಕೊಂಡು ಮನೆಗೆ ಹೋಗಿ ಹಾಲು ಕರೆದರೆ ಎನ್ನಿಸಿತು ನಾಣಿಗೆ.<br />ಮನೆಗೆ ಬಂದ. ಜಗುಲಿ ಮೇಲೆ ಅಮ್ಮ ಕುಳಿತಿದ್ದಳು. ಹಾಲು ಕರೆದು ಇಡೋ ಎಂದಳು. ಚಂಬು ಲೋಟ ಹಿಡಿದುಕೊಂಡು ಹಾಲು ಕರೆಯೋಕೆ ಕೊಟ್ಟಿಗೆಗೆ ಹೋದ ನಾಣಿ. ಸ್ವಲ್ಪಹೊತ್ತಿನಲ್ಲೇ ಪುಟ್ಸಾಮಿ ಮನೆ ಮುಂದೆ ನಿಂತಿದ್ದ. ಕಣ್ಣುಗಳಲ್ಲಿ ಕಾರ್ಮೋಡ. ಅತ್ತೆಯ ಜ್ಞಾಪಕ ಬಂದಿತ್ತು. ಪುಟ್ಸಾಮಿ ಮನೆ ಹೊರಗೆ ಬಂದು ಅಲ್ಲಾಪಟ್ನದ ಕಡೆ ನೋಡಿದ. ಕತ್ತಲು ನಿಧಾನವಾಗಿ ಸುರಿಯಲು ಮೊದಲಿಟ್ಟಿತು.<br /><em><span style="font-size:78%;color:#003300;">(ದಿ ಸಂಡೇ ಇಂಡಿಯನ್ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕತೆ ಇದು.)</span></em><br /><em></em>ಮೃಗನಯನೀhttp://www.blogger.com/profile/05798486490706460406noreply@blogger.com23tag:blogger.com,1999:blog-7077041789502080406.post-23978899588395913352008-01-25T21:38:00.000-08:002008-01-29T01:31:51.158-08:00ಮನಶ್ಯಾಸ್ತ್ರಅವಳು ಬಾಗಿಲು ತೆಗೆದು ನೋಡಿದ್ರೆ ಅವನು ಅಲ್ಲಿ ನಿಂತಿದ್ದ. ಅವಳಿಗೆ ಯಾವತ್ತೂ ಆಗದಷ್ಟು ಖುಷಿಯಾಯಿತು. ಆವ್ನು ಅವ್ಳ ಹಿಂದೆನೇ ಒಳಗೆ ಬಂದ, ಅಲ್ಲೆಗೆ ಬಂದಿರೋದಕ್ಕೆ ತುಂಬ ಖುಷಿಯಾಗಿದಾನೆ ಅನ್ನಿಸಿತು.<br />'ಏನೂ ಕೆಲಸ ಇಲ್ಲವಲ್ಲ?'<br /><br />'ಇಲ್ಲ ಕಾಫಿ ಮಾಡ್ಕೊಂಡು ಕುಡಿಯೋಣ ಅಂತಿದ್ದೆ.'<br /><br />'ಮತ್ತೆ ಯಾರಾದ್ರೂ ಬರೋರು ಇದಾರ??'<br /><br />'ಇಲ್ಲ ಯಾರೂ ಇಲ್ಲ' 'ಆಹಾ.. ಒಳ್ಳೇದಾಯ್ತು.'<br /><br />ಕಾರ್ ಕೀಯನ್ನ ಟೇಬಲ್ಲಿನಮೇಲಿಟ್ಟು ಆರಾಮಾಗಿ ಜರ್ಕಿನ್ನನ್ನೂ ಶೂಸನ್ನೂ ಬಿಚ್ಚಿದ. ಆವನನ್ನ ನೋಡ್ತಿದ್ದ್ರೆ ಯಾವ್ದಕ್ಕೂ ಆತುರ ಇಲ್ಲವೇನೋ, ಆರಾಮಾಗಿದಾನೇನೋ ಅಥವ ಅವುಗಳೆಲ್ಲಾ ಜೀವನ ಪರ್ಯಂತ ಬೇಡ್ವೇನೋ ಅನ್ನೋಹಾಗೆ ಕಂಡ. ಬಚ್ಚಲಿಗೆ ಹೋಗಿ ಸುಖವಾಗಿ ಕೈಕಾಲು ತೊಳೆದುಕಂಡು ಬಂದ.<br /><br />ಕಿಟಕಿಗಳನ್ನು ಮುಚ್ಚಿದ ಭಾರವಾದ ಪರದೆಗಳನ್ನ ದಾಟಿ ಒಳಬರುತ್ತಿರುವ ಮಬ್ಬು ಬೆಳಕಿನಲ್ಲಿ ಒಂದುಕ್ಷಣ ಇಬ್ಬರೂ ಸುಮ್ಮನಾದರು, ಸುಮ್ಮನಿರುವ ಮಬ್ಬು ಬೆಳಕಿನಂತೆ. ಅವರ ತುಟಿಗಳಲ್ಲಿ ಹರಡಿದ ಖುಷಿಯ ಸಿಹಿಯನ್ನು ಅನುಭವಿಸುತ್ತಾ.. ಅವರ ಒಳಗುಗಳು ಪಿಸುಗುಟ್ಟುತ್ತಿದ್ದವು.<br />‘ನಾವು ಯಾಕಾದರೂ ಮಾತಾಡಬೇಕು?<br /><br />' ಇಷ್ಟು ಸಾಕಾಗದ?ಬೇಕಾದಷ್ಟು ಇದು.'<br /><br />'ನನಗೆ ಇಲ್ಲಿಯವರೆಗೆ ಗೊತ್ತೇ ಆಗಲಿಲ್ಲವಲ್ಲ’<br /><br />‘ನಿನ್ನ ಜೊತೆ ಸುಮ್ಮನೆ ಇರೋಕ್ಕೆ ಎಷ್ಟು ಚೆನ್ನಾಗಿರುತ್ತೆ’<br /><br />'ಹೀಗೇ ಸುಮ್ನೆ.ಇಷ್ಟು ಸಾಕಪ್ಪಾ ಇನ್ನೇನು ಬೇಡ'<br /><br /><br />ಅವನ ಕಣ್ಗಳು ಅವಳದ್ದನ್ನು ಸಂಧಿಸಿದವು ಅವಳು ತಕ್ಷಣ ಬೇರೆ ಕಡೆ ನೋಡಿದಳು.<br />‘ಕಾಫಿ ! ಕಾಫಿ ಕುಡೀಬೇಕು ಅನ್ನಿಸ್ತಿದೆಯಾ?’<br /><br />'ಇಲ್ಲ ಅನ್ನಿಸ್ತಿಲ್ಲ'<br /><br />'ನಂಗೆ ಅನ್ನಿಸ್ತಿದೆ'<br /><br />'ನೀನು ಹಾಸ್ಪಿಟಲ್ನಲ್ಲ ಕಾಫೀ ಡೇಲೇ ಹುಟ್ಟಿದ್ದು ನಿಜ…' ಎನ್ನುತ್ತಾ ಸೋಫಾಮೇಲೆ ಧಡಾರಂತ ಕೂತ<br /><br />'ಹೌವ್ದು ಕಣೋ ಕಾಫಿ ಇಷ್ಟ ನಂಗೆ' ಎನ್ನುತ್ತಾ ಅಡುಗೆ ಮನೆಗೆ ಹೋದಳು, ಅವನೂ ಹಿಂದೆಯೇ ಬಂದ.ಅವಳು ಕಾಫಿ ಮಾಡೋದನ್ನೇ ನೋಡುತ್ತಿದ್ದ. ಅವಳು ಕಾಫಿ ಮಾಡೋ ರೀತಿಲೇ ಅವಳಿಗೆ ಕಾಫಿ ಮಾಡೋಕ್ಕೆ ತುಂಬ ಇಷ್ಟ ಅನ್ನೋದು ಗೊತ್ತಾಗುತ್ತಿತ್ತು.ಕಾಫಿಬೀಜವನ್ನ ಹುರಿಯೊಕ್ಕೇ ಎಂದು ಇಟ್ಟಿದ್ದ ಬಾಣಲೆಯಲ್ಲಿ ಕಾಫಿಬೀಜವನ್ನ ಹುರಿಯುತ್ತಿದ್ದರೆ.. ಪಕ್ಕದಲ್ಲಿ ತುಂಬ ಕಡಿಮೆ ಕಾವಲ್ಲಿ ನೀರು ಬೆಚ್ಚಗಾಗುತ್ತಿತ್ತು.’ಸಕ್ಕರೆ ಹಾಕೋಲ್ಲ’ ಕಣ್ಣಲ್ಲಿ 'ನಿಂಗೂ ಬೇಡ ಅಲ್ಲ್ವ?'ಅನ್ನೊ ಪ್ರಶ್ನೆ. ಕಾಫಿ ಬೀಜವನ್ನ ಹಾಲುಬಿಳುಪಿನ ಪುಟ್ಟ ಮಿಕ್ಸರ್ನಲ್ಲಿ ಟರ್ರ್ ರ್ ರ್.. ಎನಿಸುತ್ತಿದ್ದರೆ, ಮನೆಯೆಲ್ಲಾ ಘಮಘಮ.. ‘ನಂಗೆ ಬೇಡ ಆಮೇಲ್ ಬೇಕಾದ್ರೆ ಮೇಲೆ ಹಾಕೋತಿನಿ’ ಫ್ರಿಡ್ಜಿನಿಂದ ಹಾಲು ತೆಗೆದು ಕೊಟ್ಟು, ಹೊರಗೆ ಹೋಗಿ ಪೇಪರ್ ನೋಡುತ್ತಾ ಮನೆಯೆಲ್ಲಾ ಅಡ್ಡಾಡುತ್ತಿದ್ದ ಘಮವನ್ನ ಅನುಭವಿಸುತ್ತಿದ್ದ. ಕಾಫಿ ಬಂತು ಹಿಂದೆಯೇ ಏನೇನೋ ತಿಂಡಿಗಳು. ಅವ್ಳು ಯಾವಾಗ್ಲೂ ರುಚಿರುಚಿಯಾಗಿರೋದನ್ನೇ ಇಟ್ಟಿರುತ್ತಾಳೆ… ಚಕ್ಕುಲಿ, ತೇಂಗೊಳಲು ನೆಂಚಿಕೊಳ್ಳೊಕ್ಕೆ ಪುಳಿಯೋಗರೆ ಗೊಜ್ಜು. ಕಾಫಿಯನ್ನ ಬೆಚ್ಚಗೆ ಹೀರುತ್ತಾ ಹೇಳಿದ ‘ಹೋದ್ ಸತಿ ಸಿಕ್ಕಾಗ ಹೇಳಿದೆಯಲ್ಲ ಅದರ ಬಗ್ಗೆ ಯೋಚಿಸುತ್ತಿದ್ದೆ. ನಂಗೇನನ್ಸುತ್ತೆ ಅಂದ್ರೆ…’<br /><br /><br />ಹೌದು ಅದಕ್ಕಾಗೇ ಅವನು ಕಾಯುತ್ತಿದ್ದ ಅವಳೂ ಕೂಡ. ಅವಳು ನೋಡಿದಳು ಅವನು ಸೋಫಾಕ್ಕೆ ಒರಗಿಕೊಂಡು ಬಿಚ್ಚಿಕೊಳ್ಳತೊಡಗಿದ್ದ ಮತ್ತು ತಾನು ನೀಲಿ ಕುರ್ಚಿಯಲ್ಲಿ ಮುದುಡಿಕೊಳ್ಳುತ್ತಿದ್ದಳು. ಈ ಚಿತ್ರ ಎಷ್ಟು ವಿವರವಾಗಿ ಸ್ಪುಟವಾಗಿ ಅವಳ ಕಣ್ಣುತುಂಬಿತೆಂದರೆ ಬಿಡಿಸಬಹುದೇನೋ ಅಂದುಕೊಂಡಳು. ಆದರೂ ಆತುರ ಮಾಡೋಕ್ಕಾಗೋಲ್ಲ ಅವಳಿಗೆ ‘ನಂಗೆ ಟೈಮ್ ಬೇಕು’ ಅಂತ ಕಿರುಚಿಕೊಳ್ಳುತ್ತಾಳೆ' ಅನ್ನಿಸಿತು. ತನಿನ್ನೂ ಬೆಳೆಯುವುದ್ದಕ್ಕೆ, ಒಳಗೊಳಗೇ ಶಾಂತವಾಗುವದಕ್ಕೆ ಸಮಯಬೇಕಾಗಿತ್ತು ಅವಳಿಗೆ. ಇಷ್ಟು ವಿವರವಾಗಿ ಬದುಕಿದ ಸಂಗತಿಗಳಿಂದ ಕಳಚಿಕೊಳ್ಳಲು , ಬರಿದಾಗಲು ಬೇಕಿತ್ತು ಸಮಯ. ಅಲ್ಲಿದ್ದ ಸಂತೋಷ ಕೊಡುವ- ಅಳಿಸುವ ಪ್ರತಿಯೊಂದು ವಸ್ತುವೂ ಅವಳ ಭಾಗವೇ, ಅವಳ ಕುಡಿಯೇ, ಅವುಗಳೇ ಅತಿ ಹೆಚ್ಚು ಹಕ್ಕನ್ನು ಅವಳ ಮೇಲೆ ಸಾಧಿಸಿದ್ದವು.ಆದರೆ ಅವೆಲ್ಲವುಗಳಿಂದ ದೂರವಾಗಬೇಕು, ಬಿಡಿಸಿಕೊಳ್ಳಬೇಕು. ಅವೆಲ್ಲವನ್ನೂ ಮಡಚಿ- ಉಸಿರುಗಟ್ಟಿಸಿ- ಅಟ್ಟದಮೇಲೆ ತುರುಕಬೇಕು ರಾತ್ರಿಯಾಗುತ್ತಲೆ ಬಲವಂತ ಮಾಡಿ ಮಲಗಿಸಬೇಕಾದ ಮಕ್ಕಳಂತೆ-ಚೂರು ಸದ್ದಿಲ್ಲದೆ ಉಸಿರುಗಟ್ಟಿಸಬೇಕು.<br /><br /><br />ಸ್ನೇಹದಲ್ಲಿ ಸಂಪೂರ್ಣ ಸಮರ್ಪಿಸಿಕೊಂಡಿದ್ದರು ಅವರು. ಮೈದಾನದ ಎರಡು ಬದಿಗಳಲ್ಲಿರುವ ದೊಡ್ಡ ನಗರಗಳಂತೆ, ಅವರ ಮನಸುಗಳು ಒಬ್ಬರಿಗೊಬ್ಬರಿಗೆ ತೆರೆಯಲ್ಪಟ್ಟಿದ್ದವು. ಆವನು ಅವಳಲ್ಲಿಗೆ ಗೆದ್ದುಕೊಳ್ಳುವವನಂತೆ ಆಕ್ರಮಣಕಾರನಂತೆ ಬರುತ್ತಿರಲಿಲ್ಲ. ಮ್ರುದು ದಳಗಳ ಮೇಲೆ ನೆಡೆದುಕೊಂಡುಬರುವ ರಾಣಿಯಂತೆ ಬರುವುದು ಅವಳ ರೀತಿಯಲ್ಲ. ಊಹಂ, ಅವರದು ತುಂಬು ಪ್ರಯಾಣಗಳು, ಚಾರಣಗಳು, ತಿರುಗಾಟಗಳು, ನೋಡಬೇಕಾಗಿದ್ದನ್ನು ಅಡಗಿರುವುದನ್ನು ಹುಡುಕುವುದರಲ್ಲಿ ಮುಳುಗಿಹೊಗುತ್ತಿದ್ದರು.. ಇವೆಲ್ಲವುದರಿಂದ ಅವನು ಅವಳಿಗೆ ಸಂಪೂರ್ಣ ನಿಜವಾಗಿದ್ದ.. ಅವಳು ಅವನಿಗೆ ಪ್ರಾಮಾಣಿಕವಾಗಿದ್ದಳು.<br /><br /><br />ಆವರಲ್ಲಿ ತುಂಬ ಚಂದದ್ದೇನೆಂದರೆ, ಅವರಿಬ್ಬರೂ ಆ ಎಲ್ಲಾ ಸಾಹಸ ಕಾರ್ಯಗಳನ್ನ ಯಾವುದೇ ಹುಚ್ಚು ಭಾವನೆಗಳಿಗೆ ಒಳಗಾಗದೆ, ಖುಷಿಯಾಗಿ ಅನುಭವಿಸೋಷ್ಟು ದೊಡ್ಡವರಾಗಿದ್ದರು. ಯಾವುದೇ ಅನುರಾಗ ಮೋಹ ಅವರನ್ನು ನಿರ್ನಾಮ ಮಾಡಿಬಿಡುತ್ತದೆಂಬುದು ಅವರಿಗೆ ಗೊತ್ತಿತ್ತು. ಅಂಥದೆಲ್ಲಾ ಅವರ ಜೊತೆ ಆಗಿಹೋಗಿತ್ತು. ಅವನಿಗೆ ಮೂವತ್ತೊಂದು ಅವಳಿಗೆ ಮೂವತ್ತು. ಆವರಿಗೆ ಅವರದೇ ಆದ ಅನುಭವಗಳಿದ್ದವು ತುಂಬು ಅನುಭವಗಳು, ವಿವಿಧ ಅನುಭವಗಳು. ಆದರೆ ಇದು ಕುಯಿಲಿನ ಸಮಯವಲ್ಲವೇ…??<br /><br /><br />ತಟ್ಟೆಯಲ್ಲಿಟ್ಟಿದ್ದ ಮೈಸೂರುಪಾಕನ್ನು ಕತ್ತರಿಸುತ್ತಿದ್ದಳು ಅವನು ತಟ್ಟೆಗೆ ಕೈಹಾಕಿದ.<br />‘ಅದೆಷ್ಟು ಚೆನ್ನಾಗಿದೆ ಅನ್ನೋದನ್ನ ಅರ್ಥ ಮಾಡ್ಕೋ. ಆದನ್ನ ಅನುಭವಿಸುತ್ತಾ ತಿನ್ನಬೇಕು ಕಣ್ಣು ಮುಚ್ಚಿಕೊಂಡು. ಬೀದಿ ಬದಿಯಲ್ಲಿ ಸಿಗೋ ಕಡ್ಲೆ ಮಿಠಾಯಿಯಲ್ಲ ಇದು, ನೋಡು ಬಾಯಲ್ಲಿಟ್ಟರೆ ಹೇಗೆ ಕರಗಿಹೋಗತ್ತೆ. ಪುರಾಣದಲ್ಲಿ ಬರೋ ಅಮ್ರಥದ ಥರ ಇದು. ಅಮ್ರತಕ್ಕೆ ಕಿತ್ತಾಡಿದ್ದರು ಅನ್ನೋದನ್ನ ಮರೀಬೆಡ’ ಅಂದಳು<br /><br />‘ನಂಗೆ ಅದ್ನೆಲ್ಲಾ ವಿವರಿಸಬೇಕಿಲ್ಲ ನೀನು. ನಂಗೊತ್ತು ನಾ ಇಲ್ಲಿ ತಿನ್ನೋದು ಬೇರೆಲ್ಲೂ ಸಿಗೋಲ್ಲ. ಆದ್ರೆ ಪ್ರಯಷಃ ಅಷ್ಟು ದಿನದಿಂದ ಒಬ್ಬನೇ ಇದ್ದಿದ್ದರಿಂದಲೋ, ತಿನ್ನೋವಾಗಲೆಲ್ಲಾ ಓದಿಕೊಂಡೋ, ಟೀ ವಿ ನೋಡಿಕೊಂಡೋ, ಇನ್ನೇನನ್ನೋ ಮಾಡುತ್ತಿರೋದ್ರಿಂದಲೋ ಏನೋ.. ಆಹಾರವನ್ನ ಆಹಾರದಂತೆ ನೊಡ್ತೀನಿ. ಯಾವಾಗಲೂ ಗಬಗಬ ತಿಂದು ಮುಗಿಸ್ತೀನಿ.’<br /><br />ನಕ್ಕ ‘ಆಶ್ಚರ್ಯ ಆಗತ್ತಲ್ವಾ ನಿಂಗೆ?’<br /><br />ಅವಳ ಕಣ್ಗಳು ನಗುತ್ತಿದ್ದವು ಅವನು ಮತ್ತೆ ನಕ್ಕ.<br /><br /><br />ಆದ್ರೆ ನೋಡಿಲ್ಲಿ ಹರಡಿದ್ದ ಪೇಪರನ್ನು ಮಡಚಿ ಟೇಬಲ್ಲಿನಮೇಲಿಟ್ಟು ಪಟಪಟ ಮಾತಾಡತೊಡಗಿದ. ‘ಹೊರಗಡೆಯ ಜೀವನವೇ ಇಲ್ಲ ನನಗೆ. ಎಷ್ಟೋ ವಸ್ತುಗಳ ಹೆಸರು ಗೊತ್ತಿಲ್ಲ-ಮರಗಳು, ರೋಡುಗಳು, ತಿರುವುಗಳು, ಅಂಗಡಿಗಳು, ಇನ್ನೂ ಏನೇನೋ.. ನಾ ಯಾವತ್ತೂ ಜಾಗಗಳನ್ನ ಪೀಠೋಪಕರಣಗಳನ್ನ, ಗಾಜುಗಳನ್ನ, ಗಮನಿಸಿದ್ದೇ ಇಲ್ಲ. ಅಥವ ಜನ ಹೆಂಗೆ ಕಾಣ್ತಾರೆ ಅಂತ ಗೊತ್ತಿಲ್ಲ. ಒಂದು ಕೋಣೆ ಇನ್ನೊಂದರಂತೆ ಕಾಣತ್ತೆ, ಒಂದು ಜಾಗ ಇನ್ನೊಂದರಂತೆ, ಒಂದು ಸ್ಥಳ ಮತ್ತೊಂದರಂತೆ. ಯಾವುದಾದರೊಂದು ಜಾಗ ಕೂರೋಕ್ಕೆ- ಓದೊಕ್ಕೆ- ಮಾತಾಡೋಕ್ಕೆ. ಆದರೆ ಈಗ...’ ಆವನು ಇಲ್ಲಿ ನಿಲ್ಲಿಸಿದ ನಿಷ್ಕಪಟವಾದ ಸುಂದರ ನಗು ಅವನ ತುಟಿಗಳನ್ನ ಸವರಿಕೊಂಡು ಹೋಯಿತು. ‘ಆದರೆ ಈ ಮನೆಯೊಂದನ್ನ ಬಿಟ್ಟು” ಅವನು ತನ್ನ ಅವಳ ಸುತ್ತ ನೋಡಿ ಖುಷಿಯಿಂದ ಆಶ್ಚ್ಯರ್ಯದಿಂದ ನಕ್ಕ. ಆವನು ಯಾವಥರದೋನೆಂದರೆ ಪಯಣದ ಕೊನೆಗೆ ಬಂದಾಗಿದೆಯೆಂದು ನಿದ್ದೆಯಿಂದೆದ್ದು ತಿಳಿದುಕೊಳ್ಳುವ ಪ್ರಯಾಣಿಕನಂತೆ.<br /><br />‘ ಇಲ್ಲಿ ವಿಲಕ್ಷಣವಾದ್ದೊಂದಿದೆ. ನಾನು ಕಣ್ಣು ಮುಚ್ಚಿಕೊಂಡರೆ ಈ ಜಗದ ಚಿಕ್ಕ ಚಿಕ್ಕ ವಿವರವೂ ನನ್ನ ಕಣ್ಣು ಕಟ್ಟುತ್ತೆ. ಇವಾಗ ಅದು ನನಗೆ ಗೊತ್ತಾಗುತ್ತಿದ್ದೆ. ನಾನು ಇಲ್ಲಿಂದ ದೂರ ಇದ್ದಾಗಲೆಲ್ಲ ನನ್ನ ಮನಸ್ಸು ಇಲ್ಲಿಗೆ ಬಂದು ಹೋಗುತ್ತೆ.. ನಿನ್ನ ಕೆಂಪು ನೀಲಿ ಕುರ್ಚಿಗಳ ಸುತ್ತ ಅಡ್ಡಾಡುತ್ತೆ. ಹಣ್ಣುಗಳನ್ನು ಇಟ್ಟಿರುತ್ತಿಯಲ್ಲ ಆ ಗಾಜಿನ ಬಟ್ಟಲು ಅದನ್ನ ದಿಟ್ಟಿಸುತ್ತೆ, ಮ್ರುದುವಾಗಿ ಮುಚ್ಚಿದ ಭಾರವಾದ ಕಿಟಕಿ ಪರದೆಗಳ ಹಿಂದೆ ಅಡಗುತ್ತೆ.' ಹೀಗೆ ಮಾತನಾಡುತ್ತಾ ಅವುಗಳೆಲ್ಲದರ ಮೇಲೆ ಕಣ್ಣಾಡಿಸಿದ. ‘ಆ ನೀಲಿ ಪರದೆ ನಂಗೆ ತುಂಬ ಇಷ್ಟ’ ಖುಷಿಯಿಂದ ಗುನುಗಿದ. ಆಮೇಲೆ ಅವರಿಬ್ಬರ ಮಧ್ಯೆ ಧಿಗ್ ಎಂದು ಮೌನ ಪ್ರತ್ಯಕ್ಷವಾಯಿತು.<br /><br />ಮೌನ ನಿಧಾನವಾಗಿ ಹರಡಿತು. ಸಮಾಧಾನವಾಗಿ ಹರಡಿದ್ದ ಆ ಮೌನವು ‘ಸರಿ ಇಲ್ಲಿ ಸೇರಿದೀವಿ ಕೊನೆಯಸಲ ಬಿಟ್ಟಲಿನಿಂದ ಶುರುಮಾಡದಿರಲು ಕಾರಣಗಳೇ ಇಲ್ಲವಲ್ಲ ಎಂದಿತು’<br />ಇಬ್ಬರೂ ಮೌನವನ್ನು ಮುರಿದರು ‘ನಾನು ಅಡುಗೆ ಮನೆ ಕ್ಲೀನ್ ಮಾಡಿ ಬರ್ತೀನಿ.' ಅವಸರಿಸಿದಳು. 'ಪೇಪರಿನ ಆ ಕಾಲಮ್ಮನ್ನು ಓದಲೇ ಇಲ್ಲ’ ಅವನು ಉಸುರಿದ.. ಇಬ್ಬರೂ ಒಬ್ಬರಿಂದೊಬ್ಬರು ತಪ್ಪಿಸಿಕೊಂಡರು. ಅವಳು ಡಬ್ಬಗಳನ್ನ ಶಲ್ಫಿನಮೇಲಿಟ್ಟು, ಸ್ಲಾಬನ್ನು ಮ್ರುದು ಗುಲಾಬಿ ಬಟ್ಟೆಯಲ್ಲಿ ಒರೆಸಿದಳು. ಬೇಗ!ಬೇಗ! ಅದು ಮತ್ತೆ ಆಗೋದನ್ನ ಅವರು ತಡೀಬೇಕು.<br /><br /><br />‘ಮತ್ತೆ , ನೀನು ಬಿಟ್ಟು ಹೊದ ಪುಸ್ತಕವನ್ನ ಓದಿದೆ’<br /><br />'ಓ..ಏನನ್ಸುತ್ತೆ’ ಕೇಳಿದಳವಳು<br /><br />'ಏಲ್ಲದರ ತರಾನೇ ಮ್ಮ್ಹ್ಹ್ ಹ್ಹ್ ಹ್.. ಆದ್ರೆ ಅವರದು ಸ್ವಲ್ಪ ಅವಸರ ಅನ್ನಿಸೋಲ್ವ? ತುಂಬ ನಿಜವಾಗುತ್ತಾರೆ, ತುಂಬ ಬೇಗ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುತ್ತಾರೆ, ಒಬ್ಬರೊಳಗೊಬ್ಬರು ಇಳಿಯುತ್ತಾರೆ..ಎಲ್ಲಾ ಕಲ್ಪನೆ ನಿಜ ಜೀವನದಲ್ಲಿ ಹಾಗಾಗಲ್ಲ ಅಲ್ವ?’ ಎಂದವನ ಎದೆ ಹೊಡೆದುಕೊಳ್ಳುತ್ತಿತ್ತು.. ಅವಳ ಕೆನ್ನೆಗಳು ಬಿಸಿಯಾದವು, ಕೆಂಪಾದವು. ಒಂದುನಿಮಿಷ ಅವರೆಲ್ಲಿದ್ದಾರೆ ಏನಾಗುತ್ತಿದೆ ಗೊತ್ತಾಗಲಿಲ್ಲ ಅವಳಿಗೆ.. ಮತ್ತೆ ಸಮಯ ಸಿಗೋಲ್ಲ.. ಇಷ್ಟು ದೂರ ಬಂದಮೇಲೂ ಹಿಗೇಕಾಯಿತು? ತೊದಲಿದರು, ಅನುಮಾನಿಸಿದರು, ಸುಸ್ಥಾದರು,ಸುಮ್ಮನಾದರು.. ಸುರಿದು ಪ್ರಶ್ನಿಸುವ ಬೆಳಕಿನಲ್ಲಿ ಮತ್ತೆ ಮತ್ತೆ ಜಾಗ್ರುತರಾದರು…<br /><br />ಅವಳು ತಲೆ ಎತ್ತಿದಳು ‘ಮಳೆಯಾಗುತ್ತಿದೆ ಪಿಸುಗುಟ್ಟಿದಳು’ ನನಗೆ ನೀಲಿ ಪರದೆ ಇಷ್ಟ ಎಂದವನ ಕುಷಿಯಿತ್ತು ಅದರಲ್ಲಿ.<br />ಆದರೆ ಅವರು ಯಾಕೆ ಹಾಗೇ ಅದನ್ನ ಘಟಿಸಲು ಬಿಡೋಲ್ಲ-ಶರಣಾಗತರಾಗೊಲ್ಲ-ಏನಾಗುತ್ತೆ ಅಂತ ನೋಡೋಲ್ಲ? ಇಲ್ಲ! ಅನಿಶ್ಚಿತವಾದ್ದ್ದನ್ನು ಕದಡಿದ್ದರು ಅವರು. ಆವರ ಸ್ನೆಹ ಅಪಾಯದಲ್ಲಿದೆ ಅನ್ನೋದನ್ನ ತಿಳಿದುಕೊಳ್ಳೋಕ್ಕೆ ಕಷ್ಟವಾಗಲಿಲ್ಲ ಅವರಿಗೆ.<br /><br />ಆವನು ಮತ್ತೆ ಪೇಪರು ಮಡಿಸಿಟ್ಟ ತನ್ನ ತನ್ನ ತಲೆಗೂದಲಲ್ಲಿ ಕೈಯಾಡಿಸಿದ.. 'ನಾನೇನು ಯೋಚಿಸುತ್ತಿದ್ದೆ ಅಂದ್ರೆ ಭವಿಷ್ಯದ ಕಾದಂಬರಿ ಮನಷ್ಯಾಸ್ತ್ರದ ಕಾದಂಬರಿ ಆಗಿರುತ್ತೋ ಇಲ್ಲವೋ ಅಂತ. ಸಾಹಿತ್ಯಕ್ಕೂ ಮನಷ್ಯಾಸ್ತ್ರಕ್ಕೂ ಸಂಭಂದವಿದೆ ಅನ್ನಿಸೋಲ್ವ??'<br /><br />‘ಹಾಗಾದ್ರೆ ಇವತ್ತಿನ ಯುವಬರಹಗಾರರೆಲ್ಲ ಮನಷ್ಯಾಸ್ತ್ರ ವಿಷ್ಲೇಷಣೆಗಳನ್ನ ತಮ್ಮ ಹಕ್ಕು ಅಂತ ತಿಳ್ಕೊಂಡು ವಿಷ್ಲೇಷಣೆಗೆ ಇಳಿಯುತ್ತಾರೆ ಅಂತೀಯ? 'ಅವಳು ಹುರಿಗಟ್ಟತೊಡಗಿದಳು<br /><br />'ಹೌದು ಮತ್ತೆ. ಯಾಕಂದ್ರೆ ಇವತ್ತಿನ ಹುಡುಗರು ಎಷ್ಟು ಬುದ್ದಿವಂತರೆಂದರೆ ಈಗಿನ ಉಸಿರುಗಟ್ಟಿಸುವ ಕೊಳಕು, ಅಸಹ್ಯ ಸ್ಥಿತಿ ಸರಿಹೊಗಬೇಕೆಂದರೆ ಅದರ ಮೂಲಗಳಿಗೇ ಹೋಗಬೇಕೆಂಬುದನ್ನು ತಿಳಿದುಕೊಂಡಿದ್ದಾರೆ. ಅವುಗಳ ಮೂಲಗಳಿಗೆ ಹೊಗಬೇಕು, ಅವುಗಳ ಬುಡಕ್ಕೆ ಇಳಿಯಬೇಕು, ಎಲ್ಲವನ್ನೂ ವಿವರವಾಗಿ ಅಭ್ಯಸಿಸಬೇಕು ಅಲ್ಲಿಂದಲೇ ರೋಗವನ್ನ ಕಿತ್ತೆಯಬೇಕು’ ಅವನೂ ಹುರಿಗಟ್ಟತೊಡಗಿದ.<br /><br />'ಆದ್ರೆ ಹ್ಮ್ಮ್ ಮ್ ಮ್ ..’ ನರಳಿದಳು 'ಎಂಥ ಭಯಾನಕ ನೀರಸ ನೋಟ ಅನ್ನಿಸುತ್ತೆ’<br />‘<br />ಖಂಡಿತ ಇಲ್ಲ..’ಅಂದನವ 'ನೋಡಿಲ್ಲಿ.. ಏನ್ಗೊತ್ತಾ..’ ಮಾತು ಮುಂದುವರೆಯಿತು ಈಗ ನಿಜವಾಗಿ ನಾವು ಗೆದ್ದೆವೇ?’ ಅವಳ ನಗು ಹೆಳಿತು ‘ನಾವು ಗೆದ್ದೆವು..’ ಅವನ ಕಣ್ಣು ನುಡಿಯಿತು ' ಹೌದುಗೆದ್ದೆವು’<br />ಆದರೆ ನಗು ಹೆಚ್ಚಾಯಿತು, ನೋವಾಯಿತು ಅವರಿಗೆ ತಮಗೆ ತಾವೇ ತೊಗಲು ಬೊಂಬೆಗಳಂತೆ ಇಲ್ಲದ್ದನ್ನು ಎಳೆದಾಡುತ್ತಿದ್ದೇವೆ ಅನ್ನಿಸಿತು.<br />‘ನಾವೇನು ಮಾತಾಡುತ್ತಿದ್ದೆವು’ ಯೊಚಿಸಿದ ಅವನು. ಆವನಿಗೆ ಎಷ್ಟು ಖಾಲಿ ಅನಿಸಿತೆಂದರೆ ಕಣ್ಣುಗಳು ತೆರೆದಿದ್ದರೂ ಎನೂ ಕಾಣಿಸುತ್ತಿಲ್ಲ ಅನ್ನಿಸಿತು.<br />'ಎಂಥ ಸನ್ನಿವೇಶ ನಮ್ಮಗಳದು' ಅನ್ನಿಸಿತು ಅವಳಿಗೆ. ನಿಧಾನವಾಗಿ ನೋಡಿದಳು ಅವನನ್ನ.. ತುಂಬಾ ನಿಧಾನವಾಗಿ ಅವಳಿಗೆ ತಾನು ಯಾವುದರ ಹಿಂದೆ ಓಡುತ್ತಿದ್ದೇನೆ ಅನ್ನಿಸಿತು. ಭೀಕರ ಮೌನ ಮಧ್ಯೆ.<br /><br />ಗಡಿಯಾರ ಆರು ಗಂಟೆಯಾಯಿತೆಂದು ಆಕಳಿಸಿತು. ಎಂತ ದಡ್ಡರು ಅವರು-ಭಾರವಾದ ಹಿರಿದಾದ ಬುದ್ದಿಗಳು ಅವರದು.<br />ಮ್ರುದುವಾದ ಸಂಗಿತದಂತೆ ಮೌನವು ಅವರನ್ನು ಸುತ್ತುವರೆಯಿತು. ಆ ಸಂಗೀತದಲ್ಲಿ ಕೋಪವಿತ್ತು.. ಕೋಪ ಅವಳಿಗೆ ಅದನ್ನು ಸಹಿಸಿಕೊಳ್ಳಲು..ಅವನಂತೂ ಸತ್ತೇ ಹೋಗುತ್ತಿದ್ದ.. ಮೌನ ಮುರಿಯಬೇಕೆನ್ನಿಸಿತವನಿಗೆ ಆದರೆ ಮಾತಿನಿಂದಲ್ಲ.. ಯಾವುದೇ ಕಾರಣದಿಂದಲೂ ಹುಚ್ಚು ಬಡಬಡಿಕೆಗಳಿಂದಲ್ಲ. ಆವರಿಬ್ಬರಿಗೂ ಬೇರೆಯದೇ ಭಾಷೆಯಿತ್ತು ಮಾತನಾಡಲು..ಆ ರೀತಿಯಲ್ಲಿ ಅವನು ಪಿಸುಗುಟ್ಟಬೆಕೆಂದುಕೊಂಡ ‘ನಿನಗೂ ಹೀಗೆಲ್ಲ ಆಗುತ್ತಾ.. ? ಇದನ್ನೆಲ್ಲಾ ಅರ್ಥ ಮಾಡ್ಕೊತೀಯ ನೀನು?’<br />ಆದರೆ ನಾಲಿಗೆ ಮೋಸ ಮಾಡಿತು ಅವನ ಕಿವಿಗಳು ಕೇಳಿಸಿಕೊಂಡಿದ್ದೇ ಬೇರೆ ‘ನಾನು ಹೋಗಬೇಕು ರಾಯರು ಆರುಗಂಟೆಗೆ ಬರುತ್ತೆನೆಂದಿದ್ದರು’<br /><br />'ದೇವರೇ ಹೀಗ್ಯಾಕೆ ಹೇಳಿದ’ ಅವಸರವಾಗಿ ಕುರ್ಚಿಯಿಂದ ಎದ್ದಳು ‘ಹಾಗದ್ರೆ ಓಡಬೇಕು ನೀನು ರಾಯರು ತುಂಬಾ ಶಿಸ್ತು ಸಮಯಕ್ಕೆ ಸರಿಯಾಗಿ ಹೊಗದಿದ್ರೆ ಬೇಜಾರಾಗುತ್ತೆ ಅವ್ರಿಗೆ’ ಅಂತ ಅವಳು ಹೇಳೋದನ್ನ ಅವನ ಕಿವಿಗಳು ಮತ್ತೆ ಕೇಳಿಸಿಕೊಂಡವು.<br /><br /><br />'ಯಾಕೆ ಹೀಗ್ ಮಾಡಿದೆ ಹುಡುಗ? ನೋಯಿಸಿದೆ ನನ್ನ.. ನಾನು ನಿನಗೆ ಅರ್ಥವಾಗುತ್ತಿಲ್ಲವಾ.. ನಾವು ಸೋತ್ವಿ’ ಅವಳ ಹ್ರುದಯ ನುಡಿಯಿತು ಜರ್ಕಿನ್ನನ್ನು ಕೈಗೆ ಕೊಟ್ಟಳು ಸಾಕ್ಸು ಹಾಕಿಕೊಂಡ. ಒಂದೇ ಒಂದು ಮಾತಿಗು ಅವಕಾಶ ಕೊಡದೆ ಸೀದ ಹೋಗಿ ಬಾಗಿಲು ತೆರೆದಳು.<br />ಅವರು ಒಬ್ಬರನ್ನೊಬ್ಬರು ಆ ಸ್ಥಿತಿಯಲ್ಲಿ ಬಿಡಬಹುದಾ..?ಅವನು ಹೊಸಲಿನ ಹೊರಗೆ ನಿಂತಿದ್ದ ಅವಳು ಬಾಗಿಲನ್ನು ಹಿಡಿದುಕೊಂಡು ಒಳಗೆ. ಈಗ ಮಳೆಬರುತ್ತಿರಲಿಲ್ಲ<br />'ನಂಗೆ ನೋವು ಮಾಡಿದೆ ಹುಡ್ಗ. ನೋವು ಮಾಡಿದೆ ಯಕ್ ಹೋಗ್ತಿಲ್ಲ ನೀನು? ಇಲ್ಲ ಹೋಗ್ಬೇಡ,ನಿಲ್ಲು ಬೇಡ ಹೋಗು,ಇಲ್ಲ-ನಿಲ್ಲು-ಹೋಗು.' ಕಣ್ಗಳು ಕತ್ತಲನ್ನು ದಿಟ್ಟಿಸುತ್ತಾ ನುಡಿಯುತ್ತಿದ್ದವು..<br />ಅವಳು ಅದೆಲ್ಲವನ್ನು ನೋಡಿದಳು..ಹಸಿರು ಹೂದೋಟ ಕಪ್ಪಗಾಗುತ್ತಿರುವುದು, ದೊಡ್ಡ ಕಿಟಕಿಗಳು ನಕ್ಷತ್ರಗಳನ್ನ ತುಂಬಿಕೊಳ್ಳುತ್ತಿರುವುದು, ಆದರೆ ಅವನು ಇದ್ಯಾವುದನ್ನೂ ನೋಡುವುದಿಲ್ಲ ಅವನಿಗಿರುವುದು ಆಧ್ಯಾತ್ಮಿಕ ದ್ರುಷ್ಟಿ<br /><br />ಹೌದು ಅವಳಿಗನ್ನಿಸಿತು 'ಅವನೇನನ್ನೂ ನೊಡೋಲ್ಲ. ಇಲ್ಲ, ಇನ್ನು ಸರಿ ಮಾಡೋಕ್ಕೆ ಸಾಧ್ಯವೇ ಇಲ್ಲ. ತುಂಬ ನಿಧಾನವಾಯಿತು.' ತಣ್ಣನೆಯ ಕೊರೆಯುವ ಗಾಳಿ ಬೀಸಿತು.ಧಡಾರಂತ ಬಾಗಿಲು ಮುಚ್ಚಿದಳು<br />ಮತ್ತೆ ರೂಮಿಗೆ ಒಡಿಹೋಗಿ ಎಷ್ಟು ವಿಚಿತ್ರವಾಗಿ ಆಡಿದಳು ಕೈಯೆತ್ತಿ ಕೂಗಿದಳು. 'ಹುಚ್ಚು!' 'ಮೂರ್ಖತನ' ಹಾಸಿಗೆಯ ಮೇಲೆ ಅಡ್ಡಾದಳು, ಮ್ರುದು ಹಾಸಿಗೆ ಮುಲುಗುಟ್ಟಿತು. ಏನನ್ನೂ ಯೋಚಿಸುತ್ತಿರಲಿಲ್ಲ ಎಲ್ಲಾ ಖಾಲಿ ಖಾಲಿ. ನಿಧಾನವಾಗಿ ಅನ್ನಿಸಲು ಶುರುವಯಿತು ಎಲ್ಲಾ ಮುಗಿಯಿತ? ಏನಾದರೂ ಉಳಿಯಿತ? ಮುಗಿದ ಅಧ್ಯಾಯವ? ಅವನನ್ನು ಯಾವತ್ತೂ ನೋಡೋದಿಲ್ಲ ಅವಳು. ಬಾಗಿಲು ಬಡಿದ ಸದ್ದಾಯಿತು ಅವನೇ ಇರಬೇಕು ಹಾಗೆ ನಿಲ್ಲಿಸಿ ಬಡಿಯುವವನು ಅವನೇ. ಮನಸು ಎದ್ದಿತು, ದೇಹ ಮಲಗೇ ಇತ್ತು.. ನಾನು ಬಾಗಿಲು ತೆಗೆಯುವುದಿಲ್ಲ ಮನಸು ಹೇಳಿತು, ದೇಹ ಎದ್ದಿತು..ಅಷ್ಟರಲ್ಲಿ ಮತ್ತೆ ದಬದಬ ಇದು ಅವನಲ್ಲ..<br /><br />ಬಗಿಲು ತೆರೆದಳು ಮದುವೆಯಾಗದ ವಯಸ್ಸಾದ ಮುದುಕಿ.. ದಿನಾ ಹೀಗೆ ಬಾಗಿಲು ಬಡಿದು ತೆರೆದಾಗ ‘ಹುಡುಗಿ ನನ್ನ ಹೊರಗೋಡಿಸು’ ಅನ್ನೋ ಅಭ್ಯಾಸವಿತ್ತು ಅವಳಿಗೆ. ಆದರೆ ಅವಳು ಯಾವತ್ತೂ ಕಳಿಸುತ್ತಿರಲಿಲ್ಲ ಅವಳನ್ನು. ಅವಳ ಕೆದರಿದ ಕೂದಲನ್ನು, ಕಂದಿದ ಕಣ್ಗಳನ್ನು, ಪ್ರೀತಿಯಿಂದ ನೋಡುತ್ತಿದ್ದಳು. ಧೂಳು ಮೆತ್ತಿದ ಹೂಗಳನ್ನು ಕೊಂಡುಕೊಳ್ಳುತ್ತಿದ್ದಳು.<br /><br />ಆದರೆ ಇವತ್ತು'ಅಯ್ಯೋ ಆಗೋಲ್ಲ! ಇವತ್ತು ಯಾರೊ ಇದಾರೆ ತುಂಬ ಕೆಲಸ ಇದೆ.’ 'ಪರವಾಗಿಲ್ಲ ಹುಡುಗಿ ಹೂಗಳನ್ನ ಇಲ್ಲಿಟ್ಟು ಹೋಗಿರುತ್ತೇನೆ’ ನುಡಿದಳು ಅಜ್ಜಿ<br />ಅಜ್ಜಿ ಹೋಗತೊಡಗಿದಳು ಮತ್ತೆ ಅವೆಲ್ಲಾ ಕಾಣಿಸಿದವು.. ಕಪ್ಪು ಹೂದೋಟ, ನಕ್ಷತ್ರ ತುಂಬಿದ ಕಿಟಕಿ.. ಆದರೆ ಈಗ ಅವಳು ತಪ್ಪು ಮಾಡಲಿಲ್ಲ ಹೋಗಿ ತಬ್ಬಿಕೊಂಡಳು. ಆ ಅಜ್ಜಿ 'ಏನು ಅಲ್ಲ ಅವು ಕಡಿಮೆ ಬೆಲೆಯ ಹೂಗಳು’ ಅಂದಳು.ಇವಳು ಖುಷಿಯಾಗಿ ಹಣೆಗೆ ಮುತ್ತಿಟ್ಟಳು ‘ಹಾಗಾದರೆ ನಾ ಬಂದಿದ್ದು ನಿನಗೆ ನಿಜವಾಗಲೂ ಬೇಜಾರಿಲ್ಲವ’<br />'ಗುಡ್ ನೈಟ್ ಅಜ್ಜಿ' ಪಿಸುಗುಟ್ಟಿದಳು 'ಮತ್ತೆ ಮತ್ತೆ ಬಾ..’<br /><br />ಈಗ ನಿಧಾನವಾಗಿ ಬಾಗಿಲು ಹಾಕಿದಳು ಸಾವಧಾನವಾಗಿ ರೂಮಿಗೆ ಹೋಗಿ ಕಣ್ಣು ಮುಚ್ಚಿ ನಿಂತರೆ 'ಎಷ್ಟು ಹಗುರವಾಗಿದ್ದೇನೆ'ಅನ್ನಿಸಿತು. ಮುಗ್ದ ನಿದ್ದೆಯನ್ನು ಮಾಡಿ ಮುಗಿಸಿದಂತೆ.ಉಸಿರಾಟವೂ ಖುಷಿ ಎನಿಸುತ್ತಿತ್ತು.<br /><br />ಹರಡಿದ್ದೆಲ್ಲವನ್ನು ಜೋಡಿಸಿದಳು. ಪಾತ್ರೆ ತೊಳೆದಳು. ಬರೆಯೋಕ್ಕೆ ಹೋಗೋ ಮುಂಚೆ ಕೆಂಪು ನೀಲಿ ಕುರ್ಚಿಗಳನ್ನ, ನೀಲಿ ಪರದೆಗಳನ್ನ ಸರಿಮಾಡಿದಳು. ಹಣ್ಣುಗಳನ್ನ ಗಾಜಿನ ಬಟ್ಟಲಲ್ಲಿ ತುಂಬಿದಳು<br />‘ನಾನು ಆ ಮನಶ್ಯಾಸ್ತ್ರದ ಕಾದಂಬರಿಯ ಬಗ್ಗೆ ಯೋಚಿಸುತ್ತಿದ್ದೆ…’ಬರೆದೇ ಬರೆದಳು. 'ನಿಜವಾಗಲೂ ಎಷ್ಟು ಆಶ್ಚರ್ಯ ಅಲ್ವಾ…’ ಕೊನೆಗೆ ಕಪ್ಪು ಇಂಕು ಬರೆಯುತ್ತಿದ್ದುದು ಕಾಣಿಸಿತು 'ಗುಡ್ ನೈಟ್ ಸ್ನೇಹವೇ.. ಮತ್ತೆ ಮತ್ತೆ ಬಾ..'<br /><br /><br /><br /><br />(ಕ್ಯಾಥರೀನ್ ಮ್ಯಾನ್ಸ್-ಫೀಲ್ಡ್ ಬರೆದ psychology ಕತೆಯಿಂದ ಸ್ಪೂರ್ತಿಗೊಂಡು ಬರೆದ ಕತೆ)ಮೃಗನಯನೀhttp://www.blogger.com/profile/05798486490706460406noreply@blogger.com23tag:blogger.com,1999:blog-7077041789502080406.post-32467530700003738602008-01-05T20:47:00.000-08:002008-01-05T23:13:31.746-08:00ನದಿಗೆ ನೆನಪಿನ ಹಂಗುಟ್ರೇನಿನ ಎ.ಸಿ ಕೋಚಿನಲ್ಲಿ ಸಿಕ್ಕಿದ ನೀನು ಸ್ವಲ್ಪವೇ ದಿನದಲ್ಲಿ ನನಗೆ ನನ್ನ ಮೊಬೈಲಿಗೆ ಮಾತು ಕಲಿಸಿದ್ದೆ... ಸ್ಕೂಟಿ 60ರಿಂದ 80ರಲ್ಲಿ ಓಡಲು ಶುರುವಾಗಿತ್ತು. ನಿತ್ಯ ಹೊಸ ಹೊಸ ಬಟ್ಟೆ ಹಾಕಿಕೊಳ್ಳುತ್ತಿದ್ದೆ, ಬಣ್ಣ ಬಣ್ಣದ ಲಿಪ್ ಸ್ಟಿಕ್ಕುಗಳು, ಪರ್ಪ್ಯೂಮುಗಳು ನನ್ನ ಮೇಕಪ್ ಕಿಟನ್ನು ತುಂಬಿತ್ತು... ಯಾರಿಗೂ ನಂಬರ್ ಕೊಡದ ನಾನು ನಿನಗೆ ಏಕೆ ಕೊಟ್ಟೆನೋ? ಆಕಾಶ್ ಎನ್ನುವ ಹೆಸರಿಗೆ ಮರುಳಾಗಿಯ? ಇಲ್ಲ ಹೆಸರಿನ ಭ್ರಮೆ ಇಲ್ಲ ನನಗೆ, ಯಾವ ಹೆಸರಾದರೇನು? ನನಗಿಷ್ಠವಾದ ಹಾಡುಗಳು ನಿನಗೂ ಇಷ್ಟ ಅನ್ನೋ ಒಂದೇ ಕಾರಣಕ್ಕೆ ಕೊಟ್ಟೆ ಅನ್ನುವುದಂತೂ ಸುಳ್ಳು. ಅದೊಂದೇ ಕಾರಣವಲ್ಲ, ಅದರ ಜೊತೆಗೆ ನೀನು ಶ್ರೀಮಂತ ಮತ್ತು ಮೆಚ್ಯೂರ್ಡ್ ಅನ್ನೋದನ್ನ ನಿನ್ನ ಮಾತು ತೋರಿಸಿಯಾಗಿತ್ತು. ಎಲ್ಲೋ ಅಪ್ಪನಂತೆ ಅನ್ನಿಸಿದ್ದೆ.<br /><br /><br />ನಿನಗೆ ಮದುವೆ ಆಗಿದೆ ಅಂತ ನೀನು ಹೇಳೋಕ್ಕೆ ಮೊದಲೇ ನನಗೆ ಗೊತ್ತಾಗಿ ಹೋಗಿತ್ತು. ನೀನು ನನ್ನ ಆವರಿಸಿಕೊಳ್ಳಲು ಮಾಡುತ್ತಿರುವ ಪ್ರತಿಯೊಂದು ಪ್ರಯತ್ನ, ಮಾತು,ನಗು,ಪ್ರೀತಿ,ದುಃಖ,ದುಮ್ಮಾನ.. ಎಲ್ಲವೂ.. ಆದರೂ ನಿನ್ನಿಂದ ನನ್ನ ಬಿಡಿಸಿಕೊಳ್ಳಲು ಆಗುತ್ತಿರಲಿಲ್ಲ. ನನ್ನ ವಯಸ್ಸಿನ, ನನ್ನ ಪ್ರೀತಿಸುತ್ತಿದ್ದ, ನನ್ನ ಸೌಂದರ್ಯವನ್ನು ಹೊಗಳುತ್ತಿದ್ದ, ನನ್ನ ಮುಂದೆ ಅವರ ಪ್ರೀತಿಯನ್ನು ಹೇಳಿಕೊಳ್ಳುತ್ತಿದ್ದ ಹುಡುಗರೆಲ್ಲಾ ಬುದ್ದಿ ಬಲಿಯದ ಶರಣಾಗತ ಹುಡುಗರಂತೆ ಕಾಣುತ್ತಿದ್ದರು. ನನಗೆ ಅವರ ಪ್ರೀತಿ ಅರ್ಥವೇ ಆಗುತ್ತಿರಲಿಲ್ಲ, ಅವರ ಪ್ರೀತಿಯನ್ನು ಆಡಿಸಿಕೊಂಡು ನಗುತ್ತಿದ್ದೆ. ನೀನು ಸಿಕ್ಕಿದೆ. ನಿನ್ನ ಮಾತುಗಳು ಅಪ್ಪಟ ಆರಾಧನೆ ನೀನು ಯಾವತ್ತಿಗೂ ನನ್ನ ಪ್ರೀತಿಸುತ್ತೀನಿ ಅಂತ ಹೇಳಿರಲಿಲ್ಲ, ಆದರೆ ನನ್ನ ಮನಸ್ಸಿನ ಪ್ರತಿಯೊಂದು ಎಳೆಯನ್ನೂ ಅರ್ಥ ಮಾಡಿಕೊಂಡು ಅದನ್ನು ವಿವರಿಸುತ್ತಿದ್ದೆ. ಸಮಾಧಾನ ಪಡಿಸುತ್ತಿದ್ದೆ. ನನ್ನ ಸೌಂದರ್ಯವನ್ನು ನಿನ್ನ ಕಣ್ಣ ತುಂಬ ತುಂಬಿಕೊಳ್ಳುತ್ತಿದ್ದೆ, ಹಾಗೆ ತುಂಬಿಕೊಳ್ಳುತ್ತಿದ್ದೇಯೆಂಬುದನ್ನು ನನಗೆ ತಿಳಿಯುವ ಹಾಗೆ ಮಾಡುತ್ತಿದ್ದೆ.<br /><br /><br />ಚೆನ್ನೈನಿಂದ ಬೆಂಗಳೂರಿಗೆ ಬರುವ ಟ್ರೇನಿನ ಎ.ಸಿ. ಕೋಚಿನಲ್ಲಿ ಕಿಟಕಿ ಪಕ್ಕ ಕುತು, ಕಿಟಕಿ ಹೊರಗೆ ನೋಡುತ್ತಿದ್ದ ನಾನು ಟ್ರೇನ್ ಹೊರಟಾಗ "ಸದ್ಯ ನನ್ನ ಪಕ್ಕ ಯಾರೂ ಇಲ್ಲವಲ್ಲ ತಲೆ ತಿನ್ನೋದಕ್ಕೆ." ಅಂದುಕೊಂಡು ಕಣ್ಣು ಮುಚ್ಚಿದೆ ಆದರೆ ಒಂದೇ ನಿಮಿಷ "ನಿಮ್ಗೆ ಡಿಸ್ಟರ್ಬ್ ಮಾಡ್ತಿದಿನಿ ಅನ್ಸತ್ತೆ ಇದು ನನ್ನ ಸಿಟು. ನಿಮ್ಮ ಲಗೇಜನ್ನು ಕೆಳಗಿಟ್ಟುಕೊಳ್ಳುತ್ತೀರ?" ಅಂದೆ ನೀನು. ಕಣ್ಣು ಬಿಟ್ಟು ನೋಡಿದೆ ನಿನ್ನ ಕಣ್ಣು ಗಳ ಭರ್ತಿ ಆರಾಧನೆ, ಆಶ್ಚರ್ಯ..'ಇನ್ನೊಬ್ಬ ಜೊಲ್ಲು.' ಎಂದು ಮನಸಲ್ಲೇ ಅಂದುಕೊಂಡು ಬ್ಯಾಗನ್ನು ಕೆಳಗಿಟ್ಟು ಮತ್ತೆ ಕಣ್ಣು ಮುಚ್ಚಿದೆ. "ಇನ್ನು ಇವನು ಮಾತಾಡಿಸುತ್ತಾನೆ ಹೇಗೆ ಶುರು ಮಾಡಬಹುದು?" ಅಂತ ಕಲ್ಪಿಸಿಕೊಳ್ಳುತ್ತಿದ್ದರೆ ನೀನು ನನ್ನ ಮಾತಾಡಿಸಲೇ ಇಲ್ಲ. ನನಗೆ ಹಠ ಹುಟ್ಟಿತು. ನಾನು ಮಲಗಿದ್ದೀನಿ ಅಂದುಕೊಂಡು ನೀನು ಮಾತಾಡಿಸುತ್ತಿಲ್ಲ ಅಂತ ಕಣ್ಣು ಬಿಟ್ಟು ಕಿಟಕಿ ಹೊರಗೆ ನೋಡುತ್ತಾ ಕೂತೆ. ನೀನು ಮಾತಾಡಿಸಲಿಲ್ಲ. ನನ್ನ ನೋಡುತ್ತಿರಬಹುದು ಅಂತ ಸುಮ್ಮನೆ ನಿನ್ನ ಕಡೆ ನೋಡಿದೆ ಇಲ್ಲ ನಿನ್ನ ಲೋಕವೇ ನಿನಗೆ. ನನಗೇ ಸಿಟ್ಟು ಬಂದು ನಾನೇ ಮಾತಾಡಿಸಿದೆ.<br /><br /><br />ನನ್ನ ಜೊತೆ ಮಾತಾಡದಿದ್ದರೆ, ನಾನು ಒಂದು ದಿವಸ ಸಿಗದಿದ್ದರೆ ಬದುಕು ಸಾಧ್ಯವಿಲ್ಲ ಅನ್ನೋ ಹಾಗೆ ಆಡುತ್ತಿದ್ದೆ ನೀನು. ಒಂದು ದಿನ 'ಮುತ್ತು ಕೊಡು' ಎಂದು ನೀನು ಕೇಳಿದಾಗ ಆಶ್ಚರ್ಯ ಆಗಿತ್ತು ನನಗೆ. ನಾವೆಷ್ಟು ಪ್ರೀತಿಯ ಮಾತು ಆಡಿದ್ದರೂ ಪ್ರೀತಿಯ ಆ ಮುಖದ ಬಗ್ಗೆ ಯೋಚಿಸೇ ಇರಲಿಲ್ಲ ನಾನು. ಸುಮ್ಮನೆ ನಿನ್ನ ಮುಖ ನೋಡಿದೆ, ನಿನ್ನ ಕಣ್ಣುಗಳು ನನ್ನ ತಿನ್ನುತ್ತಿದ್ದವು, ಹಿಂದೆ ನನ್ನ ಬಹಳಷ್ಟು ಜನ ನನ್ನ ಹಾಗೆ ನೋಡಿದ್ದರು ಆದರೆ ಆವಾಗ ಅದು ಯಾವ ಭಾವನೆ ಎಂದು ಅರ್ಥ ಆಗಿರಲಿಲ್ಲ ನನಗೆ. ಈಗ ಆ ಎಲ್ಲಾ ಕಣ್ಣುಗಳು ನನ್ನ ಅವಸರಿಸಿ ತಿನ್ನುತ್ತಿವೆ , ದೇಹದ ಮೇಲೆಲ್ಲಾ ಒಟ್ಟಿಗೆ ಸರಿದಾಡುತ್ತಿವೆ ಅನ್ನಿಸಿ, ತಲೆ ಸಿಡಿದು ಹೋಗುತ್ತಿದೆ ಅನ್ನಿಸಿತು. ಅಸಹ್ಯವಾಗಿ ಕಣ್ಣು ಮುಚ್ಚಿದೆ. ಅದು ನಿನಗೆ ಸಮ್ಮತಿ ಅನ್ನಿಸಿರಬೇಕು ನೀನು ಮುಂದುವರಿದೆ...<br /><br />ನನ್ನ ಮೀಸಲು ಮುರಿದ ದಿನ ಅಳಲಿಲ್ಲ ನಾನು ಏನೂ ಅನಿಸಲಿಲ್ಲ ನನಗೆ ಆದರೆ ನನ್ನ ಕಲ್ಪನೆಯ ಮಿಲನ ಒಬ್ಬರೊನ್ನೊಬ್ಬರು ಹಂಚಿಕೊಳ್ಳುವುದು ಅದಕ್ಕೆ ಬೆಂಕಿ ಹಾಕಿದ್ದೆ ನೀನು ನಾನು ಅದಕ್ಕೆ ತಯಾರಾಗುವ ಮೊದಲೇ ನೀನು ನನ್ನ ಪಡೆದಾಗಿತ್ತು<br /><br />ಮಿಲನವೆಂದರೆ ಅದೂ ಮಾತಿನಂತೆ ಮೊದಮೊದಲು ಆದ ಪರಿಚಯದಂತೆ. ಮೌನದಿಂದ ಕಣ್ಗಳ ಮುಗ್ಧ ನೋಟ, ನಗುವಿನ ಪರಿಚಯ-ಇಷ್ಟಿಷ್ಟೇ ಮಾತು, ನಡುವೆ ಸ್ವಲ್ಪ ಸ್ವಲ್ಪವೇ ಇಣುಕುವ ತುಂಟತನ- ಮುಂದುವರಿದು ಮಾತಿನ ಮಂಟಪ. ಹಾಗೇ ಮಿಲನವೆಂದರೆ ಚೂರು ಚೂರಾಗಿಯೇ ಶುರುವಾಗಿ ತುಂಟತನವನ್ನು ಮೀಟಿ, ಅಲ್ಲಲ್ಲಿ ತಡಕಿ ಇನ್ನೆಲ್ಲೋ ಬೆದಕಿ ಮುಂದುವರೆದು ಐಕ್ಯವಾಗುವ ಭವ್ಯ ಪ್ರಕ್ರಿಯೆ. ಸುಮ್ಮನೆ ಒಬ್ಬರು ಇನ್ನೊಬ್ಬರನ್ನು ತಿನ್ನುವುದಕ್ಕೆ ಮಿಲನವೆಂಬ ದೊಡ್ಡ ಹೆಸರು ಬೇಕಿಲ್ಲ.<br /><br /><br />ನೀನು ನನ್ನಿಂದ ಅಪೆಕ್ಷಿಸೋದಾದರೂ ಏನನ್ನ ಅಂತ ಅರ್ಥ ಮಾಡಿಕೊಳ್ಳಬೇಕಿತ್ತು ನಾನು. ಹದಿನಾರು ಹದಿನೇಳು ವರ್ಷದ ಹುಡುಗಿಗೆ ಅದೆಲ್ಲಾ ಅರ್ಥವಾಗೋದಾದರೂ ಹೇಗೆ? ನೀನು ಕೆಟ್ಟವನಾ? ಊಹುಂ ಗೊತ್ತಾಗಲಿಲ್ಲ ನಂಗೆ!<br /><br /><br />ಇಲ್ಲ ನೀ ನನ್ನ ಪ್ರೀತಿಸಲೇ ಇಲ್ಲ ಅಂತ ಹೇಳ್ತಿಲ್ಲ ನಾನು ಎಲ್ಲಿ ತುಂಬಿಡಲಿ ಎಂದು ಗೊತ್ತಾಗದಷ್ಟು ಪ್ರೀತಿಸುತ್ತಿದ್ದೆ ಅನ್ನಿಸುತ್ತಿತ್ತು.<br />ಆದರೆ ಪ್ರೀತಿಸುವವರು ತುಂಬಾ ನಂಬುತ್ತಾರೆ ಅಲ್ಲವ? ನೀನು ನನ್ನ ನಂಬುತ್ತಲೇ ಇರಲಿಲ್ಲ! 'ನಂಬದೇ ಇರುವುದಕ್ಕೂ' 'ಅಪನಂಬಿಕೆ' ಎನ್ನುವುದಕ್ಕೂ ವ್ಯತ್ಯಾಸವಿದೆ. ನಿನ್ನ ಮನೆಯ ನಂಬರ್ ಏನೆಂಬುದು ಇಂದಿಗೂ ನನಗೆ ಗೊತ್ತಿಲ್ಲ. ನಿನ್ನ ಮನೆಯಿರುವ ರಸ್ತೆಯಲ್ಲಿ ಎಂದೂ ಓಡಾದಿದ್ದೇ ಇಲ್ಲ ನಾನು. ನಿನ್ನ ಸ್ನೇಹಿತರು ಬಂಧುಗಳು ಯಾರೆಂಬುದರ ಬಗ್ಗೆ ಎಂದು ಹೇಳಲೇ ಇಲ್ಲ ನೀನು. ಆದರೆ ನನ್ನ ಸ್ನೇಹಿತರ ಬಂಧುಗಳ ವಿಳಾಸವೆಲ್ಲವೂ ತಿಳಿದಿತ್ತು ನಿನಗೆ. ನನ್ನ ಪತ್ರಗಳೆಲ್ಲವನ್ನೂ ಜೋಪಾನವಾಗಿ ಇರಿಸಿಕೊಂಡಿದ್ದೆ ನೀನು ಪತ್ರಗಳನ್ನೇ ಬರೆಯುತ್ತಿರಲಿಲ್ಲ...<br /><br />ಆದರೆ ಇವೆಲ್ಲವುದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ನಾನು. ನನಗೆ ಬೇಕಾಗಿದ್ದಿದ್ದು ನಿನ್ನ ಪ್ರೀತಿ ಮಾತ್ರ.. ಹಾಗಂತ ನನ್ನ ಅಪ್ಪ "ಅಮ್ಮ ಪ್ರೀತಿಸುತ್ತಿರಲಿಲ್ಲ. ಅದಕ್ಕೆ ನಿನ್ನ ಬಳಿ ಬಂದೆ, ಹೊರಗಿನ ಪ್ರೀತಿಗೆ ಹಂಬಲಿಸಿದೆ." ಎಂದೆಲ್ಲಾ ಸುಳ್ಳು ಹೇಳುವುದಿಲ್ಲ ನಾನು. ತುಂಬ ಪ್ರೀತಿಸುತ್ತಿದ್ದರು ಮನೆಯವರೆಲ್ಲ ಎಲ್ಲರಿಗೂ ನಾನೆಂದರೆ ಮುದ್ದು ಆದರೂ ಹೊರಗಿನ ಪ್ರೀತಿಗೆ ಕಾತರಿಸಿದೆ. ಅದು ಯಾರ ತಪ್ಪು? ನಿಜವಾಗಲೂ ಹಾಗೆ ಅಪೇಕ್ಷಿಸುವುದು ತಪ್ಪೇ?<br /><br /><br /><br />ದಿನೇದಿನೇ ನಿನ್ನ ಪ್ರೀತಿ ಹೆಚ್ಚಾಗುತ್ತಿತ್ತು ಮೊದಮೊದಲು ಇಷ್ಟ ಆಗುತ್ತಿದ್ದ ನಿನ್ನ ಪೊಸೆಸ್ಸಿವ್ನೆಸ್ ಬರಬರುತ್ತಾ ಉಸಿರುಕಟ್ಟಿಸತೊಡಗಿತ್ತು.<br />"ನನ್ನ ಹೆಂಡತಿ ನನ್ನ ಅರ್ಥವೇ ಮಾಡಿಕೊಳ್ಳೋಲ್ಲ. ಅವಳಿಗೆ ಅವಳ ಓದೇ ಹೆಚ್ಚು. ನನ್ನ ಬೇಕು ಬೇಡಗಳಿಗೆ ಸರಿಯಾಗಿ ಸ್ಪಂದಿಸಲ್ಲ." ಎಂದು ನೀ ಹೇಳಿದ ದಿನ ಹಿಂಸೆ ಆಗಿತ್ತು ನನಗೆ. ಅವಳು ಸರಿ ಇಲ್ಲ ಅದಕ್ಕೆ ನಿನ್ನ ಕಡೆ ವಾಲಿದೆ ಅನ್ನೋ ಎಕ್ಸ್ಕೂಸ್ ಅಲ್ಲವ? ಕಾಡೋ ಗಿಲ್ಟಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ. ಅವ್ಳ ಬಗ್ಗೆ ಇನ್ನೂ ಹಾಗೇ ಏನೇನೋ ಹೇಳಿ ನಿನ್ನ ನೀನು ಸಮರ್ಥಿಸಿಕೊಳ್ಳುತ್ತಿದ್ದರೆ ಅಸಹ್ಯ ಕಿಬ್ಬೊಟ್ಟೆಯಾಳದಿಂದ ಉಕ್ಕುತ್ತಿತ್ತು ನನಗೆ. ನಿನ್ನ ಹೆಂಡತಿ ಚಂದದ ಹೆಂಗಸು. ದೊಡ್ಡ ಕಾಲೇಜೊಂದರಲ್ಲಿ ಲೆಚೆರರ್. ಇಷ್ಟ ಆಗುತ್ತಿದ್ದಳು ಎಲ್ಲರಿಗೂ, ನನಗೂ. ಅವಳು ಕೆಟ್ಟವಳಲ್ಲ, ಕೆಟ್ಟವಳಾದರೂ ನೀನು ಹಾಗೆ ಸಮರ್ಥನೆ ಮಾಡಿಕೊಳ್ಳಬಾರದಿತ್ತು. ತಪ್ಪು ಮಾಡಿದ್ದರೆ ತಾನೆ ಸಮರ್ಥನೆ? ನಿನಗೆ ನನ್ನ ಪ್ರೀತಿಸಿದ್ದು ಅನೈತಿಕ ಅನ್ನಿಸಿತ್ತಾ? ನೀನು ಇಷ್ಟ ಆಗ್ತಿಯ ಅದಕ್ಕೆ ಪ್ರೀತಿಸ್ತೀನಿ ಅನ್ನೋದು ಎಷ್ಟು ನೇರ ಅಲ್ಲವ.. ನೀನು ನನ್ನ ಪ್ರೀತಿಸೋದಕ್ಕೆ ಹೆಂಡತಿ ಕೆಟ್ಟವಳಾಗಬೇಕಿರಲಿಲ್ಲ...<br /><br /><br /><br /><br />ನದಿಗೆ ನೆನಪಿನ ಹಂಗಿಲ್ಲವೆಂದು ಹೇಳುತ್ತಾರೆ ನೀರಿನ ಮೇಲೆ ಚಿತ್ರ ಬರೆಯೋಕ್ಕಾಗೊದಿಲ್ಲ ಕತ್ತಿಯಲ್ಲಿ ಗಾಯ ಮಾಡೊಕ್ಕಾಗುವುದಿಲ್ಲ ಅನ್ನುತ್ತಾರಲ್ಲ ಬರೆದ ಚಿತ್ರಗಳು ಆದ ಗಾಯಗಳು ಎಲ್ಲವೂ ಕಾಣಲೇ ಬೇಕೆಂದಿದೆಯೇನು? ನದಿ ಎಂದರೇನು ಚಲಿಸುವ, ಹರಿಯುವ, ಉಕ್ಕುವ ನೀರಲ್ಲವೇ? ಈ ನೀರಿಗೆ ನೆನಪಿನ ಹಂಗು ಮಾತ್ರವಲ್ಲ, ಹೆಸರು ಬದಲಿಸಿಕೊಳ್ಳುವ ಚಟವೂ ಇದೆ. ಇಲ್ಲಿ ಪುಟ್ಟಗೆ ಹರಿಯುವ ಝರಿ ಎನಿಸಿಕೊಂಡರೆ, ಮತ್ತೆಲ್ಲೋ ಜಲಪಾಟವೆಂಬ ಭವ್ಯತೆ. ಮುಂದೆಲ್ಲೋ ನದಿ ಎಂದು ಸುಮ್ಮನಾದರೆ, ಮೊಗದೊಮ್ಮೆ ಸಮುದ್ರದ ವಿಷಾಲತೆ. ಸಮುದ್ರದ ಉಪ್ಪು ನದಿಯ ಗಾಯದ ಕಣ್ಣೀರಿಗೆ ಸಾಕ್ಷಿ. ನದಿಗೆ ನೆನಪಿನ ಹಂಗಿದೆ! ನದಿ ಹೆಣ್ಣೇ? ಛೆ! ನನ್ನ ತಲೆಯಲ್ಲಿ ಎನೇನೋ ಯೋಚನೆಗಳು ಅರ್ಥವಿಲ್ಲದ್ದು.<br /> ಕತ್ತಲೆಯಲ್ಲಿ ಇರುಳು ಹೊರಳುತ್ತಿದೆ. ಎದುರು ಸಮುದ್ರವೆಂಬ ಹೆಸರಿನ ಹಂಗು ಹೊತ್ತು ಉಕ್ಕುತ್ತಿರುವ ನೀರಿನ ಬಣ್ಣ ಕಪ್ಪೋ? ನೀಲಿಯೋ? ಎರೆಡೂ ಅಲ್ಲ ಕತ್ತಲೆ ನನ್ನ ನಿನ್ನ ಸಂಭಂದದ ಬಣ್ಣವೇನು? ಗುಲಾಬಿಯೊ.. ನೀಲಿಯೋ.. ಎರಡೂ ಅಲ್ಲ....<br /><br /><br />ನನಗೆ ಬಣ್ಣದ ಆಟ ಹೇಳಿಕೊಡಲು ಬಂದವನನ್ನು ಒಳಗೆ ಬಿಟ್ಟುಕೊಡಲೂ ಭಯವಾಗುತ್ತಿತ್ತು. ನಿನ್ನ ಭಯ. ಹೌದು ನಿನಗೆ ನಾನು ಹೆದುತ್ತೀದ್ದೇನೆಂಬುದು ನನಗೆ ಸ್ಪಷ್ಟವಾಗಿ ಗೊತ್ತಾಗಿದ್ದೇ ಆಗ.ಬಣ್ಣ ತುಂಬಿಸಲು ಬಂದ ಹುಡುಗನಿಗೆ ಯಾರೋ ಕೆಂಬಣ್ಣದ ರುಚಿ ತೋರಿಸಿದ್ದಾರೆಂಬುದು ತಿಳಿಯಿತು. ಅವನು ಆಸ್ಪತ್ರೆಯೊಂದರಲ್ಲಿ ಚೆತರಿಸಿಕೊಳ್ಳುತ್ತಿದ್ದ. ಆವಾಗಲೇ ಅನ್ನಿಸಿದ್ದು ನಿನ್ನಿಂದ ತಪ್ಪಿಸಿಕೊಳ್ಳಲೇಬೆಕೆಂದು. ದೂರ ಓಡಿಹೋಗೋಣವೆಂದುಕೊಂಡೆ ಆದರೆ ನನ್ನ ಓದು ಮುಗಿಯಲು ಇನ್ನೂ ಆರು ತಿಂಗಳಿತ್ತು. ಪ್ರೀತಿ ಸತ್ತಿತ್ತು. ಅಲ್ಲಿಯವರೆಗೂ ನಿನ್ನ ಜೊತೆ ಪ್ರೀತಿಯ ನಾಟಕ ಆಡದೆ ವಿಧಿ ಇರಲಿಲ್ಲ. ಅಪ್ಪನಿಗೆ "ಮದುವೆ ಮಾಡಿಬಿಡು" ಎಂದು ಹೇಳೋಣವೆಂದುಕೊಂಡೆ ಆದರೆ ಕೆಲವುದಿನಗಳಾದರೂ ದುಡಿದು ಸ್ವತಂತ್ರವಾಗಿರಬೇಕೆಂಬನನ್ನ ಹಂಬಲವನ್ನು ಹತ್ತಿಕ್ಕಲಾಗಲಿಲ್ಲ. ಆರು ತಿಂಗಳ ನಂತರ ನಿನ್ನಿಂದ ದೂರ ಮೇಘಾಲಯಕ್ಕೆ ಹೋದೆ ಫೋನು ಕೊಳ್ಳಲಿಲ್ಲ, ನಿನ್ನ ಜೊತೆಯ ಸಂಪರ್ಕ ಸಂಪುರ್ಣವಾಗಿ ಕಡಿದುಕೊಂಡಿದ್ದೆ.ನಿನಗೆ ಪತ್ರ ಬರೆಯುವ ತಾಕತ್ತಿಲ್ಲವೆಂಬುದು ಗೊತ್ತಿತ್ತು . ಎಲ್ಲಿ ಮನೆಗೆ ಹೊಗಿ ವಿಚಾರಿಸುತ್ತಿಯೋ? ಒಮ್ಮಿಂದೊಮ್ಮೆ ಧುತ್ ಎಂದು ಪ್ರತ್ಯಕ್ಷವಾಗಿಬಿಟ್ಟರೆ? ಎಂದು ಬಹಳಷ್ಟು ದಿನ ಹೆದರಿದ್ದೆ.ಆದರೆ ಹಾಗೇನಾಗಲಿಲ್ಲ. ಇಗ ನನ್ನ ಬದುಕಿನಲ್ಲಿ ಬಣ್ಣಗಳ ಮೇಳ! ಅವನದು ಸಮುದ್ರ ಪ್ರೀತಿ.<br /><br /><br />ಮೊನ್ನೆ ನಿನ್ನ ಫ್ಲೈಟಿನಲ್ಲಿ ನೋಡಿದೆನಲ್ಲ ನೀನು ಮಲಗಿದ್ದೆ. ಪಕ್ಕದಲ್ಲಿ ಇನ್ಯಾರೋ ಹುಡುಗಿ. ಸುಮ್ಮನೆ ಹಿಂದಿನದೆಲ್ಲಾ ನೆನಪಾಯಿತು. ನದಿಗೆ ನೆನಪಿನ ಹಂಗು!<br />ನೀನು ಕೆಟ್ಟವನಾ? ಉಹುಂ ಇನ್ನು ಗೊತ್ತಾಗುತ್ತಿಲ್ಲ...ಮೃಗನಯನೀhttp://www.blogger.com/profile/05798486490706460406noreply@blogger.com30tag:blogger.com,1999:blog-7077041789502080406.post-38728252367145741502007-12-12T02:47:00.000-08:002007-12-12T03:00:58.596-08:00ನೀಲಿ ನಕ್ಷತ್ರದಿಂದ ಬಂದ ಪತ್ರಮಧ್ಯರಾತ್ರಿಯ ಕಪ್ಪಿನೊಳಗಣ ಬೆಳಕೇ...<br /><br />ಅಮ್ಮ ಅಡುಗೆ ಮನೆಯಲ್ಲಿ ಏನೋ ದಡ ಬಡ ಮಾಡುತ್ತಿದ್ದಾಳೆ.ಚಿಕ್ಕಪ್ಪ ಅಪ್ಪ ಸೇರಿ ಟಿ ವಿ, ಸೋಫ, ಟೆಬಲ್ಲು- ಕುರ್ಚಿ, ಮಂಚ ಎಲ್ಲವನ್ನೂ ತಂದು ಜೋಡಿಸಿಟ್ಟಿದ್ದಾರೆ..ನೀನು ಅವತ್ತು ಬಂದಾಗ ಖಾಲಿ ಇದ್ದ ಮನೆ ಈಗ ತುಂಬಿದೆ. ಹುಚ್ಚು ಅಪ್ಪನಿಗೆ, ಮನೆ ತುಂಬಬಹುದು........ಮನಸ್ಸು...????<br /><br />ಈ ಮನೆ ಕೊಂಡು 'ಶಿಫ್ಟ್ ಮಾಡ್ತೀನಿ ನಾನು' ಅಂದಾಗ 'ನಿಂಗೊಬ್ನಿಗೇ ಕಷ್ಟ ಆಗುತ್ತೆ, ನಾ ಬರ್ತೀನಿ.' ಅಂದು ಮೊದಮೊದಲು ಮನೆಗೆ ಬಂದವಳು ನೀನು. ಖಾಲಿ ಮನೆ ಏನು ಕೊಂಡುಬಂದಿರಲಿಲ್ಲ.. ಬರೀ ನನ್ನ ಬಟ್ಟೆ, ಚಪ್ಪಲಿಗಳು, ಶೂಗಳು, ಹಾಗೂ ಲ್ಯಾಪ್ ಟಾಪ್. ಮನೆಗೆ ಬಂದವಳೇ ಒಂದಿಷ್ಟು ವಸ್ತುಗಳನ್ನ ಪಟ್ಟಿ ಮಾಡಿ 'ತೊಗೊಂಡು ಬಾ' ಎಂದು ನನ್ನ ಕೈಗೆ ಕೊಟ್ಟು, ನಾನು ಬರುವುದೊರೊಳಗೆ ಪಕ್ಕದ ಮನೆಯವರ ಸ್ನೇಹ ಮಾಡಿ, ಪೊರಕೆ ತಂದು, ಮನೆ ಗುಡಿಸಿ ನನ್ನ ಹಳೇ ಟೀ ಷರ್ಟಿನಲ್ಲಿ ನೆಲ ಒರೆಸುತ್ತಿದ್ದೆ! ಆಮೇಲೆ ನಾನು ನೀನು ಸೇರಿ ಸಾದ್ಯವಾದಷ್ಟು ಮನೆ ಸ್ವಚ್ಚ ಮಾಡಿ, ಒಟ್ಟಿಗೆ ಸ್ನಾನ-ಅಡುಗೆ-ಊಟ ಮಾಡಿ ಗಡಿಯಾರ ನೋಡಿದರೆ, ಗಡಿಯಾರದ ಮುಳ್ಳುಗಳು ಒಂಭತ್ತು ಘಂಟೆ ಎನ್ನುತ್ತಿದ್ದವು.<br /><br />ಟೆರೇಸಿನ ಮೇಲೆ ಹೋದರೆ, ನಕ್ಷತ್ರಗಳು ಕೈಗೆ ಸಿಗುವಷ್ಟು ಹತ್ತಿರ! ಮಲಗೋಣವೆಂದೆ ನೀನು.. ಹಾಸಿಗೆ ಇಲ್ಲ.... ದಿಂಬಿಲ್ಲ.... ಮರೆತೇ ಹೋಗಿತ್ತು ನನಗೆ. ನಿನ್ನ ಕಣ್ಣು ನೋಡಿದರೆ ಅದರಲ್ಲಿ ತುಂಟ ನಗು...'ನಕ್ಷತ್ರದಿಂದ ನೀಲಿ ನೀಲಿ ಹೊಳೆಯುವ ಧೂಳು ಉದುರುತ್ತೆ, ಇಲ್ಲೇ ಮಲಗೋಣ' ಎಂದು ನನ್ನ ತೋಳ ಮೇಲೆ ತಲೆ ಇಟ್ಟು ಮಲಗಿದೆ. ತಕ್ಷಣ ಆವರಿಸಿಕೊಂಡ ನಿದ್ರೆ.<br /><br />ಮಧ್ಯರತ್ರಿ ಸುಮ್ಮನೆ ಎಚ್ಚರವಾಯಿತು.. ಕತ್ತೆತ್ತಿ ನೋಡಿದರೆ ಜೇನಿನಲ್ಲಿ ಅದ್ದಿ ತೆಗೆದಂತಿದ್ದ ಚಂದ್ರ... ಅವನ ಬೆಳಕಿನಲ್ಲಿ ನಿನ್ನ ಹಾಲು ಬಿಳುಪಿನ ಬಣ್ಣಕ್ಕೆ ಬಂಗಾರದ ಮೆರಗು...ನಿನಗೆ ನೀಲಿ ನಕ್ಷತ್ರದ ಕನಸು...ನಾನು ನಿನ್ನೊಳಗೆ ಉಕ್ಕಿದೆ, ನೀನು ಸಣ್ಣಗೆ ನನಗೆ ಕೇಳುವಷ್ಟೇ ಹಿತವಾಗಿ ಚೀರುತ್ತಿದ್ದರೆ, ಚಂದ್ರ ನಕ್ಷತ್ರಗಳೂ ಹೊಟ್ಟೆ ಉರಿದುಕೊಳ್ಳುತ್ತಿದ್ದವು...<br /><br />ಅವತ್ತು ಡವ್ ಸೋಪಿನಿಂದ ಸ್ನಾನ ಮಾಡಿದೆವಲ್ಲ ಆ ಸೋಪು ದಿನದಿನವೂ ಇಷ್ಟಿಷ್ಟೇ ಕರಗುತ್ತಿದೆ... ನೀನು ತರಿಸಿದ ಗ್ಯಾಸ್ ಸ್ಟೋವಿನಲ್ಲೆ ಅಮ್ಮ ಅಡುಗೆ ಮಾಡುತ್ತಾಳೆ, ನಿನಗಿಷ್ಟವಾದ ಬಿಳಿ-ನೀಲಿ ಬಣ್ಣದ ಭಾರವಾದ ಪರದೆಗಳು ಕಿಟಕಿಗಳಹಿಂದೆ ತಣ್ಣಗೆ ನಿಂತಿವೆ.. ನಿನಗೆ ಕಾಯುತ್ತಾ...<br /><br />ಅಪ್ಪ ಅಮ್ಮ ಒಪ್ಪಿದ್ದಾರೆ...ನಿನ್ನ ಅಪ್ಪನನ್ನು ಒಪ್ಪಿಸಿ ಬಂದೇ ಈ ಪತ್ರ ಬರೆಯುತ್ತಿದ್ದೇನೆ...ನಿನ್ನ ವಿಲನ್ ಅಪ್ಪನೇ ಒಪ್ಪಿಕೊಂಡಾಗಿದೆ ಅಂದಮೇಲೆ ನೀನು ಜಂಬ ಮಾಡಿದರೆ ಅರ್ಥವಿಲ್ಲ...<br /><br />ಟೆರೇಸಿಗೆ ಹೋಗಲು ಮನಸ್ಸೇ ಬರುವುದಿಲ್ಲ ನಕ್ಷತ್ರಗಳು ಹೊಳೆಯುವ ನೀಲಿ ಧೂಳನ್ನು ನಿನಗಲ್ಲದೆ ಬೇರೆ ಯಾರಿಗೂ ಕೊಡೋಲ್ಲವಂತೆ..ಡವ್ ಸೋಪ್ ಪೂರ್ತಿ ಕರಗುವುದರೊಳಗೆ ಬಂದುಬಿಡು...<br />.................................................ತುಂಬ ನಿನ್ನವನು,ನೀಲಿ ನಕ್ಷತ್ರ;-)ಮೃಗನಯನೀhttp://www.blogger.com/profile/05798486490706460406noreply@blogger.com12tag:blogger.com,1999:blog-7077041789502080406.post-20943075423500608572007-12-05T13:47:00.000-08:002007-12-10T23:32:47.056-08:00ಅಪ್ಪ ಕಾಣಿಸಿದ ಕತೆಗಳು- 1.ವೈದೇಚಿತ್ತಿನಾನು ಸಣ್ಣವಳಾಗಿದ್ದಾಗಿಂದಾನೂ, ನನಗೆ ನೆನಪಿರೋವಾಗ್ಲಿಂದಾನೂ, ಕರೆಂಟು ಹೋದಾಗ ಪುಸ್ತಕಗಳನ್ನು ಮಡಚಿಟ್ಟು ಅಪ್ಪ ಅಮ್ಮನ ಜೊತೆಗೆ ಬಂದು ಕೂರ್ತಿದ್ವಿ(ನಾನು,ನನ್ನ ತಂಗಿ). ಆಗ ಅಪ್ಪ ತಮ್ಮ ನೆನಪಿನ ಬುಟ್ಟಿಯಿಂದ ಊರಿನ ಜನರ ಜೀವನದ ಘಟನೆಗಳನ್ನ, ಕತೆಗಳನ್ನ, ಒಂದೊಂದಾಗಿ ಹೆಕ್ಕಿ ಹೇಳೋರು. ಅಥವಾ ಈಸೋಪನಾ ನೀತಿ ಕತೆಗಳೋ, ಪಂಚತಂತ್ರದ ಕತೆಗಳೋ ನೀತಿಚಿಂತಾಮಣಿಯ ಕತೆಗಳನ್ನೋ ಹೇಳೋರು....ಇಲ್ಲವೇ ಭಗವದ್ ಗೀತೆ, ಶ್ಲೋಕಗಳು, ಮುಕುಂದ ಮಾಲೆ ಬಾಯಿಪಾಠ ಮಾಡಿಸೋರು...ನನ್ನ facinate ಮಾಡ್ತಿದಿದ್ದು ನಮ್ಮೂರಿನ ಜನರ ಕತೆಗಳು, ಅವರನ್ನ, ಅವರ ಸ್ವಭಾವಗಳನ್ನ ಅಪ್ಪ analise ಮಾಡ್ತಿದ್ದ ರೀತಿ. ರಥೋತ್ಸವಕ್ಕೋ, ದೀಪಾವಳಿಗೋ, ಗೋಕುಲಷ್ಟಮಿಗೋ, ಇಲ್ಲವೇ ನವರಾತ್ರಿಯ ಪಾರಾಯಣದ ಸಮಯದಲ್ಲೋ... ಊರಿಗೆ ಹೋದಾಗ ಆ ಜನರನ್ನೆಲ್ಲಾ ನೋಡಿ ಅವರಿಗೆ ಸಂಬಂಧಿಸಿದ ಕತೆಗಳನ್ನ ಜ್ನಾಪಿಸಿಕೊಂಡು ಖುಶಿ ಪಡ್ತಿನಿ...<br /><br />ಈಗೊಂದು ಹೊಸ ಪ್ರಯೊಗ, ನಮ್ಮೂರಿನ ಜನರನ್ನ ಒಬ್ಬೂಬ್ಬರನ್ನೂ ನಾನು ನೋಡಿದ ಹಾಗೆ ನಿಮ್ಮ ಮುಂದೆ ಇಡ್ತೀನಿ. ಅವರಿಗೆ ರಿಲೆಟ್ ಆಗಿರೊ ಪಾಸ್ಟ್ ಸ್ಟೋರೀಸ್ ಇದ್ರೆ ಹೇಳ್ತಿನಿ. ಈ ಕತೆಗಳಲ್ಲಿ ಭೋದನೆ ಇಲ್ಲ, ಏನೋ ಸಂದೆಶ ಇರ್ಲೇಬೇಕು ಅಂತ ಹುಡುಕಬೇಡಿ. ಏನಾದ್ರು ಕಂಡ್ರೆ ಸಂತೋಷ. continous ಆಗಿ ಬರೀತಿನಿ ಅಂತ ಅಲ್ಲ, ಮದ್ಯೆ ಮದ್ಯೆ ಯಾವಾಗ್ಲಾದ್ರು ಬರಿತಿನಿ 'ಅಪ್ಪ ಕಾಣಿಸಿದ ಕತೆಗಳು' ಅಂತ ಕರ್ಯೋಕ್ಕೆ ಖುಶಿ ನಂಗೆ. ನಮ್ಮೂರಿನ ಜನರ ಕತೆ ಇಷ್ಟ ಆಗಬಹುದು ನಿಮಗೆ...<br /><br />ವೈದೇಚಿತ್ತಿ<br /><br />1<br />"ಈ ವೈದೇಹಿಗೆ ಇಷ್ಟು ವಯಸ್ಸಾದರೂ ಇಂಥ ಬುದ್ದಿ ಯಾಕೆ ಅಂತ? ಅವಳಿಗೇನು ಒಡವೆಯಾ? ಸೀರೆಯಾ? ಗೋಪಾಲ ಬಂದು ಪಾಪ ಗೊಳೋ ಅಂತ ಅತ್ತುಕಂಡ. ತಿಂಗಳಿಗೆ ಐನೂರು ರುಪಾಯಿ ಕೊಡ್ತಾಳಂತೆ ಕಣೋ ನಾವು ಕೆಲ್ಸದವರಿಗೂ ಅಷ್ಟು ಕಡಿಮೆ ಕೊಡೋಲ್ಲ. ಅದೇನು ಜಿಗ್ಗತನವೋ... ಮಗಂಗೆ ಕೊಟ್ರೆ ಏನಾದ್ರು ಕಳ್ಕತಾಳ? ಅಂಥದ್ರಲ್ಲಿ ಫೋನ್ ಬಿಲ್ಲೂ ನೀನೇ ಕಟ್ಟು ಅಂತಾಳಂತೆ. ಇನ್ನೇನ್ ಉಳಿಯುತ್ತೆ ಇವ್ನ ಕೈಯಲ್ಲಿ ಪಾಪ? ಆಕಡೀಗೆ ತೋಟ ತೋಟ ಅಂತ ಹಿಂದಿನಿಂದ್ಲೂ ಅಲ್ಕಂಡು ಪೌರೋಹಿತ್ಯಾನೂ ಕಲೀಲಿಲ್ಲ, ಓದ್ಲೂ ಇಲ್ಲ, ಈಕಡೀಗೆ ತೋಟದಲ್ಲಿ ಎಷ್ಟು ಗೈದ್ರೂ ಉಪ್ಯೋಗ್ವಿಲ್ಲ... ಸಾಲದ್ದಕ್ಕೆ ಮೂರುಮೂರು ಮಕ್ಕಳು ಬೇರೆ... ಊಟಕ್ ಕಷ್ಟವಿಲ್ಲ ಅನ್ನೋದ್ ಬಿಟ್ರೆ ಕೈಯಲ್ಲಿ ನಾಲ್ಕು ಕಾಸೂ ಆಡಂಗಿಲ್ಲ..... ನಿ ಏನೇ ಹೇಳು ಶ್ರೀನಿವಾಸ ಅವ್ಳಿಗೆ ತಲೆ ಕೆಟ್ಟಿರೋದಂತೂ ಸತ್ಯವೇಯ.” ಅಂತ ಅಜ್ಜಿ ಬಿಸಿ ಬಿಸಿ ಕಾವಲಿ ಮೇಲೆ ದೊಸೆ ಹಾಕ್ತಾ ಹೇಳ್ತಿದ್ರೆ, ಪುಟ್ಟಿ "ಅದೇ ಆ ಮುಂಬಾವಿ ಮನೆ ವೈದೇಚಿತ್ತಿನ?" ಅಂದ್ಲು ದೋಸೆ ನುಂಗುತ್ತಾ "ಹೂಂ...." ಅಂದ ಅಪ್ಪ "ಇನ್ನೂ ತುಂಬ ಚಿಕ್ಕವರು ನೀವು ದೊಡ್ಡವರ ವಿಷಯಾನೆಲ್ಲಾ ಮಾತಾಡ್ ಬಾರ್ದು" ಅಂದ್ರು.<br /><br /><br />2<br />ವೈದೇಚಿತ್ತಿ ಪೂರ್ತಿ ಹೆಸರು ವೈದೇಹಿ ಅಂತ ಅವರು ಈಗ ಇರೊದನ್ನ ನೋಡಿದ್ರೆ ಒಂದು ಕಾಲಕ್ಕೆ ನೋಡೋಕ್ಕೆ ಅಷ್ಟು ಲಕ್ಷಣ ಇಲ್ಲ್ದಿದ್ರೂ ತೆಳ್ಳಗೆ ಗೋಧಿಬಣ್ಣಕ್ಕೆ ಇದ್ದಿರಬಹುದು. ಈಗ ಮುಖದಲ್ಲಿ ಎಂಥದ್ರದ್ದೋ ಕಲೆಗಳು ಇವೆ. ಇನ್ನೂ ಸ್ವಲ್ಪ ದಪ್ಪ ಇದ್ದಿದ್ದ್ರೆ ಅವರ ವಯಸ್ಸಿಗೆ ಒಪ್ಪುತ್ತಿತ್ತು. ಬೋಳಿಸಿದ ತಲೇನ ಕೆಂಪು ಸೀರೆಯಲ್ಲಿ ಮುಚ್ಚಿಕೊಂಡಿರ್ತಾರೆ. ವೈದೇಚಿತ್ತಿ ಈಗ ಇರೋ ಮನೆ ಮುಂದೆ ಭಾವಿ ಇರೋದ್ರಿಂದ, ಅವರ ಮನೇನ ಮುಂಭಾವಿ ಮನೆ ಅಂತ ಕರೀತಾರೆ. ಆದ್ರೆ ಹಿಂದೆ ಅವ್ರು ನಮ್ಮ ತೊಟ್ಟಿ ಮನೇಲೇ ಇದ್ರಂತೆ. ಈ ವೈದೇಚಿತ್ತಿನ ನಾವೆಲ್ಲಾ ವೈದೇಚಿತ್ತಿ ಅಂತ ಯಾಕೆ ಕರೀತಿವಿ ಅಂತ ಇತಿಹಾಸ ಕೆದಕಿದಾಗ ತಿಳಿಯೋದು ಇಷ್ಟು...... ಹಿಂದೆ ಅಂದ್ರೆ ಈಗಿಂದ ಒಂದು ನಲವತ್ತು ಐವತ್ತು ವರ್ಷದ ಹಿಂದೆ ಈಗಿನ ನಮ್ಮ ಚತ್ರದಂತಹಾ ದೊಡ್ಡ ಮನೇಲಿ ಈಗಿನ ತರ ಬರೀ ಎರಡೇ ಸಂಸಾರಗಳಿರಲಿಲ್ಲವಂತೆ ಇನ್ನೂ ಎರೆಡು ಸಂಸಾರ ಇತ್ತಂತೆ. ವೈದೇಚಿತ್ತಿಯವರದೂ ಅದರಲ್ಲಿ ಒಂದು. ಈ ತೊಟ್ಟಿ ಮನೆಗೆ ವೈದೇಚಿತ್ತಿ ಮದುವೆ ಆಗಿ ಬಂದಾಗ ಆ ಮನೆಯ ಸೊಸೆಯಂದಿರಲ್ಲಿ ಅವರೇ ಚಿಕ್ಕವರಾದ್ದರಿಂದ ಹಾಗೂ ಆ ತೊಟ್ಟಿಯವರೆಲ್ಲಾ ಒಂದೇ ಗೋತ್ರದವರಾದ್ದರಿಂದ ವೈದೇಹಿ ಮನೆಯ ಮಕ್ಕಳಿಗೆ ವೈದೇಹಿಚಿತ್ತಿಯಾಗಿ ಕೊನೆಗೆ ವೈದೇಚಿತ್ತಿ ಆದ್ಲು.<br /><br />ವೈದೇಚಿತ್ತಿಗೆ ಗಂಡ ಅನ್ನೋರು ಇದ್ದಿರಬಹುದು ಅಂತ ನನಗನ್ನಿಸಿದ್ದೇ ತೀರ ಇತ್ತೀಚೆಗೆ. ಅವರು ಆ ಕೆಂಪು ಮಡಿ ಬಟ್ಟೆಯಲ್ಲಿ ಹುಟ್ಟುಬಟ್ಟೆನೋ ಅನ್ನೋಷ್ಟು ಸಹಜವಾಗಿ ಕಾಣ್ತಿದ್ರು. ಆದ್ರೆ ಅವರಿಗೆ ಈಗ ಮಕ್ಕಳಿವೆ ಹಾಗೂ ಈಗ ಅವರು ವಿಧವೆ ಅನ್ನೋ ಎರೆಡು ಅಂಶಗಳಿಂದ (ಈ ಎರೆಡನೇ ಅಂಶದಿಂದ ಅವ್ರಿಗೇನು ಬೇಜಾರಾದಂಗೆ ಕಾಣ್ಸಲ್ಲ) ಅವರಿಗೆ ಗಂಡ ಇದ್ದಿದ್ದಂತೂ ನಿಶ್ಚಯ. ವೈದೇಚಿತ್ತಿ ಗಂಡನಿಗೆ ಆ ಊರಿನ ಎಲ್ಲರಂತೆ ಅಡಿಕೆ ತೋಟ ಇತ್ತು. ಸ್ವಲ್ಪ ಕಮ್ಮೀನೇ ಇತ್ತು ಅರ್ಧ ಎಕರೆ. ಜೊತೆಗೆ ಪೌರೋಹಿತ್ಯಾನೂ ಮಾಡ್ತಿದ್ರು. ಮೂರು ಜನ ಮಕ್ಕಳು ಎರೆಡು ಹೆಣ್ಣು ಒಂದು ಗಂಡು. ದೊಡ್ಡ ಹುಡುಗಿ ಶ್ಯಾಮಲಾನ ಆ ಕಾಲಕ್ಕೇ ಡೆಲ್ಲಿಲಿದ್ದ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ರು. "ಅವ್ನಿಗೆ ನಮ್ಮ ಕಮಲನ್ನ ಕೊಡಣ ಅಂತಿದ್ವಿ ಕಣೇ ನಿಮ್ಮ ತಾತ ಡೆಲ್ಲಿ ತುಂಬ ದೂರ ಕಷ್ಟ ಸುಖ ಅಂದ್ರೆ ನೋಡೋಕ್ಕಾಗಲ್ಲ ಬೇಡ ಅಂದ್ರು. ಅವ್ಳು ಹತ್ರದಲ್ಲೇ ಇದ್ದು ಸುಖ ಸುರ್ಕೊಂಡಿದ್ದು ಗೊತ್ತಿದ್ಯಲ್ಲ." ಅಂತ ಒಂದು ಸತಿ ನಿಟ್ಟುಸಿರಿಟ್ಟಿದ್ದರು ಅಜ್ಜಿ. ಎರಡನೇ ಮಗಳು ವಿಮಲನ್ನ ಹತ್ತಿರದ ಊರಿಗೇ ಕೊಟ್ಟಿದ್ದರು. ಆ ಆಂಟಿ ಎಷ್ಟು ಬಿಗಿಯಾದ ಬ್ಲೌಸ್ ಹಾಕ್ತಾರೆ ಅಂದ್ರೆ ಇನ್ನೇನು ಹರಿದೇ ಹೋಗುತ್ತೇನೋ ಅನ್ಸುತ್ತೆ... ಅವರನ್ನ ನೋಡಿದಾಗಲೆಲ್ಲಾ ನನಗೇ ಉಸಿರುಕಟ್ಟಿದಂಗೆ ತೋಳುಬಿಗಿದಹಾಗಾಗುತ್ತೆ. ಇನ್ನು ಉಳಿದವರು ಗೋಪಾಲ ಅವರಿಗೆ ಪಕ್ಕದ ಹಳ್ಳಿಯಿಂದ ಹೆಣ್ಣು ತಂದಿದಾರೆ ಆ ಆಂಟಿ ಮನೆ ಹೊರಗೆ ಕಾಲೇ ಹಾಕೋಲ್ಲ.<br /><br /><br /><br />3<br />ವೈದೆಚಿತ್ತಿಗೆ ನಾನ್ಯಾರು ನನ್ನ ತಂಗಿ ಯಾರು ಅಂತ ಯಾವಾಗಲು ಗೊಂದಲವೇ ಅದೇನು ನಿಜವಾಗಲೂ ಗೊತ್ತಗಲ್ವೋ ಅಥ್ವಾ ಬೇಕ್ಬೇಕು ಅಂತ ಹಾಗೆ ಮಾಡ್ತಾರೋ ಗೊತ್ತಿಲ್ಲ. ನಾವು ನಾನು ನನ್ನ ತಂಗಿ ಪ್ರತಿ ಸಲ ಊರಿಗೆ ಹೋದಾಗಲೂ ನಮ್ಮಿಬ್ಬರಲ್ಲಿ ಅವರಿಗೆ ಯಾರು ಮೊದಲು ಸಿಕ್ಕಿದರೂ ಅವರು ಕೇಳೋದು ಒಂದೆ ರೀತಿಯ ಪ್ರಶ್ನೆಗಳು. ಉದಾಹರಣೆಗೆ ನಾನು ಸಿಕ್ಕಿದೆ ಅನ್ನಿ....<br /><br />ವೈದೇಚಿತ್ತಿ: ನೀನು ಶ್ರೀನಿವಾಸನ ಮಗಳಲ್ಲವೇನೆ, ಯಾವಾಗ ಬಂದ್ರೆ? ನೀನು ಅಕ್ಕಾನೋ? ತಂಗಿಯೋ?<br />ನಾನು : ನಾನು ಅಕ್ಕ ತಂಗಿ ಒಳಗಡೆ ಇದಾಳೆ ನೀವು ಹೇಗಿದಿರ ವೈದೇಚಿತ್ತಿ?<br />ವೈದೇಚಿತ್ತಿ: ನಾನು ಚೆನ್ನಾಗಿದಿನಮ್ಮ..... ನಿನ್ನ ಅಮ್ಮ ಬ೦ದಿದಾಳೋ ? ಎಷ್ಟು ದಿನ ಇರ್ತಿರ?<br />ನಾನು : ಹೊ೦.... ಅಮ್ಮಾನು ಬ೦ದಿದಳೆ ರಥೋತ್ಸವ ಮುಗಿಸಿಕೊಂಡು ಹೊರ್ಡದು ಅಂತ.....<br />ವೈದೇಚಿತ್ತಿ: ಹಂಗಾದ್ರೆ ಇನ್ನು ನಾಲ್ಕೈದು ದಿನ ಇರ್ತಿರ ಅನ್ನಿ. (ದ್ರುಷ್ಟಿ ತೆಗೆಯುತ್ತಾ...) ಎಷ್ಟು ಚೆನ್ನಾಗಿದಿಯೇ ನನ್ನ ಕಂದ ಬೆಳ್ಳಿಗುಂಡು ಬೆಳ್ಳಿ ಗುಂಡು<br /><br /><br /><br />ಈ ಬೆಳ್ಳಿ ಗುಂಡು ಅನ್ನೋದು ಒಂದು ಎಡವಟ್ಟು ಪದ. ನನ್ನ ಹಾಗೆ ಯಾರಾದರೂ ಕರೆದ್ರೆ ತುಂಬ ಗೊಂದಲ ಆಗುತ್ತೆ...ಯಾಕ್ ಗೊತ್ತ? ಅದರಲ್ಲಿ ಬೆಳ್ಳಿನೂ ಇದೆ ಗುಂಡೂ ಇದೆ, ಬೆಳ್ಳಗಿದಿಯಾ ಅಂತ ಹೊಗಳ್ತಾ ಇದಾರೋ ಅಥವಾ ಗುಂಡಗಿದಿಯಾ ಅಂತ ಆಡ್ಸ್ಕತಾ ಇದಾರೋ ಅಂತ ಗೊತ್ತಾಗದೇ ಸುಮ್ಮನೆ ಮಿಕ ಮಿಕ ಅಂತ ಹಾಗೆ ಕರೆದೋರನ್ನ ನೋಡ್ಕೊತಾ ನಿಂತ್ಕೊಬಿಡ್ತೀನಿ. ಇಂಥ ಎಡವಟ್ಟು ಪದಗಳಿಗೆ ಪ್ರತಿಕ್ರಯಿಸೋದಾದರೂ ಹೇಗೆ........<br /><br /><br />4<br />"ಗೋಪಾಲ ನೀನು ಶ್ಯಾಮಲನ ಕೈಲಿ ಹೇಳಿಸಿ ನೋಡು ವೈದೇಚಿತ್ತಿಗೆ ಶ್ಯಾಮಲ ಅಂದ್ರೆ ಸ್ವಲ್ಪ ಹೆಚ್ಚೇ ಪ್ರೀತಿ..." ಅಂತ ಅಪ್ಪ ಗೋಪಾಲ ಮಾಮಂಗೆ ಹೇಳ್ತಿದಿದ್ದು ಕೇಳಿಸ್ತು. ಪಕ್ಕದಲ್ಲಿದ್ದ ಚಿಕ್ಕಪ್ಪ "ಒಳಗಡೆ ಹೋಗಿ ಕಾಫಿ ಮಾಡ್ಸ್ಕಬಾಮ್ಮ" ಅಂದ್ರು. ಅಡುಗೇ ಮನೇಲಿ ಚಿಕ್ಕಮ್ಮ ಇದ್ರು "ಕಾಫಿ ಮಾಡ್ಬೇಕಂತೆ ಗೋಪಾಲ ಮಾಮ ಬಂದಿದಾರೆ ಅಂದೆ." " ಈ ಮನೇಲಿ ಒಂದು ಹಂಡೆಗಟ್ಲೆ ಕಾಫಿ ಮಾಡಿದ್ರೂ ಖಾಲಿಯಾಗೋಗುತ್ತೆ, ನನ್ ಜೀವನವೆಲ್ಲಾ ಕಾಫಿ ಮಾಡೋದ್ರಲ್ಲೇ ಕಳ್ದ್ಹೋಯ್ತು...." ಅಂತ ಚಿಕ್ಕಮ್ಮ ಗೊಣಗುತ್ತಾ ಕಾಫಿಗೆ ನೀರಿಟ್ಟಳು. ಕಾಫಿ ಮಾಡುವುದರ ಬಗ್ಗೆ ಅಮ್ಮ ಮತ್ತು ಚಿಕ್ಕಮ್ಮನಿಗೆ ಇರುವ ಅಸಮಾಧಾನದ ಪರಿಚಯವಿದ್ದ ನನಗೆ ಚಿಕ್ಕಮ್ಮನ ಮಾತುಗಳಿಗಿಂತ ತೊಟ್ಟಿಯಲ್ಲಿ ನಡೆಯುತ್ತಿರುವ ಮಾತುಗಳು ಮುಖ್ಯ ಅನ್ನಿಸಿ ಅಮ್ಮ ಆಗತಾನೆ ಒಗೆದು ತಂದು ಇಟ್ಟಿದ್ದ ಬಟ್ಟೆಗಳನ್ನು ಹಿಂಡಿ ಕೊಡಿಯ ಮೇಲೆ ಒಣಗಿಸುವ ನೆಪದಲ್ಲಿ ತೊಟ್ಟಿಗೆ ಬಂದು ಬಟ್ಟೆ ಹಿಂಡತೊಡಗಿದೆ.ನಾನು ಒಳಗೆ ಹೋಗಿ ಬರುವ ಹೊತ್ತಿಗೆ ಅಪ್ಪ ಮಾತು ಮುಗಿಸಿಯಾಗಿತ್ತು "ನಂಗು ಸಾಕಾಗ್ ಹೋಗಿದೆ ಶ್ರೀನಿವಾಸ ಎಲ್ಲರೂ ಅವಳಿಗೆ ಹೇಳಿದ್ದಾಯ್ತು ಶ್ಯಾಮಲಾನೂ ಹೇಳಿದ್ಲು, ಅವಳ ಮುಂದೆ ಹೂಂ ಹೂಂ.. ಅಂತಾಳೆ ಅವಳು ಮರೆಯಾದ ತಕ್ಷಣ ಅದೇ ರಾಗ ಅದೇ ತಾಳ. ಟವ್ನ್ ನಲ್ಲಿ ಯಾವುದಾದರೂ ಬೇಕರಿಗೆ ಹೋಗಿ ಸೇರ್ಕಳಣ, ಬೇಕರಿ ಇಡೋಕ್ಕಂತು ಭಾಗ್ಯವಿಲ್ಲ ತಿಂಗಳಿಗೆ ಎರೆಡು ಮೂರು ಸಾವ್ರನಾದ್ರೂ ಸಿಗುತ್ತೆ ಅನ್ಕಂಡ್ರೆ ಇಲ್ಲಿ ತೋಟ ನೋಡ್ಕಳೋರ್ಯಾರು? ಅಮ್ಮನ್ನ ಈ ಕೊನೇಗಾಲ್ದಲ್ಲಿ ಬಿಟ್ಟೊಗದ್ ಹ್ಯಾಗೆ? ಈಗ ಊಟಕ್ ಕಷ್ಟ್ವಿಲ್ಲ, ಆಮೇಲೆ ಅದಕ್ಕೂ ಕುತ್ತು ಬಂದ್ರೆ ಏನ್ ಮಾಡದು....?" ಅಷ್ಟು ಹೊತ್ತಿಗೆ ಕಾಫಿ ಬಂತು.. ಒಳಗಡೆ ಗೊಣಗುತ್ತಿದ್ದ ಚಿಕ್ಕಮ್ಮ ಅಷ್ಟೇ ವಿರುದ್ದವಾದ ಶಾಂತ ನಗುಮುಖದಿಂದ ಕಫಿ ತಂದು ಕೊಟ್ಟಳು. ಗೋಪಾಲಮಾಮನ ಮುಖ, ಗಂಟಲು ಕಾಫಿಯ ಹಿತದಿಂದ ತುಂಬಿಕೊಂಡಿತು. ಚಿಕ್ಕಮ್ಮ ಅಧ್ಭುತವಾಗಿ ಕಾಫಿ ಮಾಡ್ತಾಳೆ. ಚಿಕ್ಕಪ್ಪ ದಡಬಡಿಸಿ ಕಾಫಿ ಕುಡಿದು ತಮ್ಮ ಬುಲೆಟ್ಟಿನ ಗುಡು ಗುಡು ಶಭ್ದದೊಂದಿಗೆ ಅಂಗಡಿಗೆ ಹೋದರು.<br /><br />ನಾನು ಹಿಂಡಿದ ಬಟ್ಟೆಯನ್ನ ಕಷ್ಟಪಟ್ಟು ಕೊಡಿಯಮೇಲೆ ಒಣಗಿಸುತ್ತಿದ್ದೆ ..."ಹೇಳ್ಕಳಕ್ಕೆ ನಾಚಿಕೆ ಯಾಗುತ್ತೆ ಶ್ರೀನಿವಾಸ, ಈಗೀಗ ಬ್ರಾಮ್ಹಣಾರ್ಥಕ್ಕೆ ಯಾರದ್ರು ಕರೀತಾರೇನೋ ಅಂತ ಕಾಯಂಗಾಗೋಗಿದೆ. ತಿಂಗಳಲ್ಲಿ ಒಂದು ನಾಲ್ಕೈದು ಬ್ರಾಮ್ಹಣಾರ್ಥ ಆದ್ರೆ ಕೈಯಲ್ಲಿ ಸ್ವಲ್ಪ ದುಡ್ಡಾಡುತ್ತೆ, ದುರಂತ ನೋಡು ಯಾರೂ ಸಿಗ್ದೆ ಈಗ ನಾನಂಥೋರ್ನೆಲ್ಲಾ ಬ್ರಾಮ್ಹಣಾರ್ಥಕ್ಕೆ ಕರೆಯೋಹಂಗಾಗೋಗಿದೆ. ನನಗೆ ಹೋಗೊಕ್ಕೆ ಎಷ್ಟು ಹಿಂಸೆ ಆಗುತ್ತೆ ಆದ್ರೆ ಹೋಗ್ದೆ ವಿದಿಯಿಲ್ಲ. ಹೆಚ್ಚು ಕಡಿಮೆ ಬ್ಯಾಂಕಿನಲ್ಲಿ ಹೆಚ್ಚು ಕಡಿಮೆ ಅಮ್ಮನ ಹೆಸರಿನಲ್ಲಿ ಮೂರು ಲಕ್ಷ ಇದೆ ಯಾಕ್ ಬೇಕು ಅವ್ಳಿಗೆ ನಂಗ್ ಬೇಡಪ್ಪ ಹೋಗ್ಲಿ ವಿಮ್ಲಂಗಾದ್ರೂ ಕೊಡ್ತಾಳ ಅವ್ಳೂ ಕಷ್ಟದಲ್ಲಿದ್ದಾಳೆ.... ಅಮ್ಮ ಸತ್ರೂ ಆ ಹಣನ ನಾ ಮುಟ್ಟೋಲ್ಲ...ಮೊದಲು ಅಮ್ಮ ಹೀಗಿರ್ಲಿಲ್ವೋ ಅಥವಾ ನಮಗೇ ಅಮ್ಮನ ಗುಣ ಗೊತ್ತಾಗಿದ್ದೇ ಅಪ್ಪ ಸತ್ತ ಮೇಲೆ ಅನ್ಸುತ್ತೆ. ಅಪ್ಪ ಇದ್ದಾಗ ಅಮ್ಮನ್ನ ಕಾರಣವಿಲ್ಲದೇ ಮಾತು ಮಾತಿಗೂ ಬೈದು ಹೀಯಾಳಿಸೋರು, ಅಮ್ಮನ ವ್ಯಕ್ತಿತ್ವ, ಅವಳು ಹೇಗೆ? ಅನ್ನೋದೇ ಗೊತ್ತಿರ್ಲಿಲ್ಲ. ಅಪ್ಪ ಸತ್ತ್ಮೇಲೇನೇ ಅಮ್ಮ ಸ್ವತಂತ್ರವಾಗಿದ್ದು, ಖುಶಿಯಾಗಿದ್ದು. ಅಪ್ಪಂಗೆ ಗಾಳಿ ಹಿಡ್ದು ಹೋದ್ರು ಅಂತಾರೆ ಅಪ್ಪಂಗೆ ಗಾಳಿ ಹಿಡ್ದಿದ್ದೋ, ಇವ್ಳಿಗೇ ಧನ ಪಿಚಾಚಿ ಹಿಡಿತೋ ಗೊತ್ತಿಲ್ಲ..."ಅನ್ನುತ್ತಿದ್ದ್ರು ಗೋಪಾಲ ಮಾಮ....<br /><br /><br />5<br />ಅಜ್ಜಿ ಜೊತೆ ಜಗುಲಿ ಮೇಲೆ ಕೂತ್ಕೊಂಡೋ ಅರಂಗಿನಲ್ಲಿ ಕೂತ್ಕೋಂಡೋ "ರಂಗಮಣಿ.... ವಿಶ್ಯ ಕೇಳಿದ್ಯ ಬಿ ಎ ಮೇಷ್ಟ್ರಿಗೆ ಈಗ ಕಿವಿ ಕೇಳಲ್ವಂತೆ....,ರಂಗಮಣೀ ಮೊನ್ನೆ ಆ ಹಾಲುಮಾರೋ ಕರಿಯನ್ ಮಗು ಸತ್ತೋಯ್ತಂತೆ..ಪಾಪ..." ಅಂತಾನೋ "ರಂಗಮಣಿ ನಮ್ಮ ಶ್ಯಾಮಲ ಹಿಂಗಂದ್ಲು, ನಮ್ಮ ಶ್ಯಾಮಲ ದೆಲ್ಲಿಯಿಂದ ಮಿಠಾಯಿ ಕಾಳ್ಸಿದಾಳೆ ತೊಗೋ... ಶ್ಯಾಮ್ಲನ್ನ ಮಕ್ಕ್ಳು ಕ್ಲಾಸ್ನಲ್ಲಿ ಫಸ್ಟ್ ಅಂತೆ, ಶ್ಯಾಮಲನ್ನ ಮೊದ್ಲನೇ ಮಗ ಗರುಡ ಗರುಡ(ಅಂದ್ರೇ ತುಂಬ ಚೆನ್ನಗಿದಾನೆ ಅಂತ)" ಅಂತ ಕೊರೆಯುತ್ತಾ ಕೂರುವ ವೈದೇಚಿತ್ತಿ ಹೀಗೆಲ್ಲಾ ಮಾಡ್ತಾರೆ ಅನ್ಸಲ್ಲ.. ಭೈರಪ್ಪನವರ ಸಾಕ್ಶಿಯಲ್ಲಿ ಬರೊ ಜಿಪುಣ ಮನುಷ್ಯನ ಥರಾನ ಇವರು? ಇವರು ಸತ್ತಾಗ ಗೋಪಲಮಾನೂ ಆ ಕಾದಂಬರಿಯಲ್ಲಿ ಬರೋ ರೀತಿಯಲ್ಲೇ ಮೂರು ಲಕ್ಷಾನ ಇವರ ಹೆಣದ ಜೊತೆ ಸುಡಬಹುದ..??? ಎಂದು ಏನೇನೋ ಅಸಂಭದ್ದವಾಗಿ ಯೋಚಿಸುತ್ತಾ ಜಗುಲಿಯ ಮೇಲೆ ಕೂತಿದ್ದೆ, ನನ್ನ ತಂಗಿಯೂ ಪಕ್ಕದಲ್ಲಿದ್ದಳು ಅದ್ಯಾವುದೋ ಮಾಯೆಯೆಲ್ಲಿ ಮನೆ ಬಾಗಿಲಿನ ಬಳಿ ಪ್ರತ್ಯಕ್ಷವಾದ ವೈದೇಚಿತ್ತಿ "ಶ್ರೀನಿವಾಸನ ಮಕ್ಕಳಲ್ವೇನ್ರೇ ಯಾವಾಗ ಬಂದ್ರಿ... ಇದರಲ್ಲಿ ಅಕ್ಕ ಯಾರು ತಂಗಿ ಯಾರು?" ಅಂದ್ರು....ಮೃಗನಯನೀhttp://www.blogger.com/profile/05798486490706460406noreply@blogger.com9tag:blogger.com,1999:blog-7077041789502080406.post-4124103007122495032007-11-02T04:53:00.000-07:002007-11-02T21:32:02.471-07:00ಗೋಡೆ1<br />ನನ್ನ ಬಿಟ್ಟು ಹೋಗ್ತೀಯ ಮೈತ್ರಿ? ನನ್ಗೆ ಭಯ ಆಗ್ತಿದೆ. ನಾನೇನ್ ತಪ್ಪು ಮಾಡಿದೀನಿ? ನೀನು ಹೇಳಿದ ಹಾಗೆ ಕೇಳ್ತೀನಿ, ನೀ ಹೇಳಿದ್ದರ ವಿರುದ್ದ ಏನಾದರೂ ಮಾಡಿದೀನ ಇಲ್ಲಿವರೆಗೂ? ದಯವಿಟ್ಟು ಬಿಟ್ಟು ಹೊಗಬೇಡ ಮೈತ್ರಿ. 'ನಾವು ಒಬ್ಬರಿಗೊಬ್ಬರು ಜೊತೆಯಾಗಿರ್ತೀವಿ ಕಷ್ಟ ಆಗ್ಲಿ, ಸುಖ ಆಗ್ಲಿ.' ಅಂತ ದೇವರ ಮುಂದೆ ಪ್ರಮಾಣ ಮಾಡಿದೀವಿ. ನಂಗೆ ಭಯ ಆಗ್ತಿದೆ, ನನ್ನ ಬಿಟ್ಟು ಹೋಗಬೇಡ... ಅಂತ ಪಕ್ಕದಲ್ಲಿ ಮಲಗಿದ್ದ ನನ್ನ ಗಂಡ ಒಂದೇ ಸಮನೆ ಬಡಬಡಿಸತೊಡಗಿದಾಗ ವ್ರಶಾಂಕ್ ಇವನ ಹತ್ತಿರ ಮಾತಾಡಿದಾನೆ ಅಂತ ಗೊತ್ತಾಯ್ತು..ಉತ್ತರ ಕೊಡೋಕ್ಕೂ ಹಿಂಸೆ ಆಗಿ ಎದ್ದು ಹೊಗಿ ವೆರೆಂಡಾದ ಈಸಿ ಕುರ್ಚಿ ಮೆಲೆ ಕೂತೆ.<br /><br /><br />ವರೆಂಡಾದ ಕಿಟಕಿಯಿಂದ ಕಾಣುತ್ತಿದ್ದ ಮನೆಯ ಮುಂದಿನ ನಲ್ಲಿಕಾಯಿ ಮರದ ರುಚಿ ಇಲ್ಲದ ಚಿಕ್ಕ ಚಿಕ್ಕ ಕಾಯಿಗಳ ಬಗ್ಗೆ ಏನೂ ಅನ್ನಿಸಲಿಲ್ಲ. ತನ್ನ ಗಂಡನ ಅತೀ ಒಳ್ಳೆಯತನದ, ಪ್ರತಿಯೊಂದಕ್ಕೂ 'ನೀ ಹೇಳಿದ ಹಾಗೆ' ಅನ್ನುವ, ನನ್ನ ಮುಂದೆ ತಾನು ಬುದ್ದಿವಂತ ಅಂತ ತೋರಿಸಿಕೊಳ್ಳಲು ಹೋಗಿ ಪೆಚ್ಚಾಗುವ, ತನ್ನ ಬಸುರಿ ಮಾಡಿದ್ದನ್ನೇ ದೊಡ್ಡ ಸಾಧನೆ ಅನ್ನುವಂತೆ ಆಡಿದ್ದ ಅವನ ಬಗ್ಗೆ ಅಸಹ್ಯ ಆಗುವುದೂ ನಿಂತು ಹೊಗಿತ್ತು. ಎನೂ ಅನ್ನಿಸುವುದಿಲ್ಲ ಅವನ ಬಗ್ಗೆ. ಯಾರ ವ್ಯಕ್ತಿತ್ವವೂ 'ಇಷ್ಟು' ಎಂದು ಅಳೆದು ಮುಗಿಸಿಬಿಡುವಂತೆ ಇರಬಾರದು ಗಟ್ಟಿಯಾಗಬೇಕು- ದೊಡ್ಡದಾಗಬೇಕು- ಅಗಲವಾಗಬೇಕು -ವಿಸ್ತಾರವಾಗಬೇಕು. ಇಲ್ಲವೇ ಚಿಕ್ಕದಾಗಬೇಕು- ಪುಟ್ಟದಾಗಬೇಕು- ಜೊಳ್ಳಾಗಬೇಕು. ಇರ್ಬಾರ್ದು ಹೀಗೆ, ಏನೂ ಅನ್ನಿಸದ ನಲ್ಲೀಕಾಯಿ ಮರದಂತೆ ಅನ್ನಿಸಿತು ಹೀಗೆ ಅನ್ನಿಸಿದ್ದು ಮೊದಲ ಸಲವೇನಲ್ಲವಲ್ಲ ಅಂದುಕೊಂಡಳು.<br /><br /><br />ಹುಡುಗರಿಗೆ ವಿಷಯಗಳು ಅರ್ಥವಾಗುವುದು ಎಲ್ಲಾ ಬಾಗಿಲು ಮುಚ್ಚಿ ಹೋಗಿದೆ, ಇನ್ನು ಬಿಡಿಸಿಕೊಂಡು ಹೋಗಲು ದಾರಿ ಇಲ್ಲ ಅನ್ನುವಾಗಲ? ಬಾಗಿಲು ತೆಗೆದಿದ್ದರೂ ನೆಡೆದುಕೊಂಡು ಹೋಗಲಾರೆ ಎನ್ನುವಷ್ಟು ನಿಷಕ್ತರಾಗಿ ತೋರುವವರು, ಎಲ್ಲಾ ಬಾಗಿಲು ಮುಚ್ಚಿದಮೇಲೆ ಗೋಡೆ ಒಡೆಯಲೂ ಹೆದರುವುದಿಲ್ಲ.<br /><br /><br />ನನ್ನ ಒಂದು ವರ್ಷದ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು, 'ಇದು ನನ್ನ ಮಗು ಅಂತಾನೆ ನೋಡ್ಕೊತೀನಿ ದಯವಿಟ್ಟು ನೀ ನನ್ನ ಜೊತೆ ಬಾ' ಅಂದ.ನನ್ನ ಗಂಡ ಬದುಕಿದ್ದಾನೆ ಮತ್ತು ನನಗೂ ಅವನಿಗೂ ಡೈವೋರ್ಸ್ ಆಗೋ ಯಾವ ಛಾನ್ಸು ಇಲ್ಲ ಅಂತ ಹೇಳಿ ಜೋರಾಗಿ ನಕ್ಕಿದ್ದೆ.ಅವ್ನು 'ನಾನು ಜೊಕ್ ಮಾಡ್ತಿಲ್ಲ ಹುಡುಗಿ, ಅರ್ಥ ಮಾಡ್ಕೊ ನನ್ನ' ಅಂದ. ಆವಾಗ ನೀ ನನ್ನ ಅರ್ಥಮಾಡ್ಕೊಬಹುದಿತ್ತು ನಮ್ಮ ಸಂಭಂದದ ಬಗ್ಗೆ, ಅದರ ಸಾರ್ಥಕತೆ ಬಗ್ಗೆ ನಿಶ್ಚಿತತೆ ಇತ್ತು. ನೀನು ಅದನ್ನ ಅರ್ಥ ಮಾಡ್ಕೊಳಲಿಲ್ಲ. ಯಾರಿಗೋ ಪ್ರಾಮಿಸ್ ಮಾಡ್ಬಿಟ್ಟಿದ್ದೆ. ಪಾಪ... ನಿಂಗೆ ಆವಾಗ ಅರ್ಥ ಆಗ್ಲಿಲ್ಲ ,ನಿನ್ನ ತಪ್ಪೇನಿಲ್ಲ ಬಿಡು ಅಂದು ನಕ್ಕೆ. 'ನನ್ನ ಚುಚ್ಚ ಬೇಡ ಕಣೆ ನಂಗೆ ಅರ್ಥ ಆಗಿದೆ, ನಿನ್ನ ಬಿಟ್ಟು ಇರೊಕ್ಕಾಗಲ್ಲ ನಂಗೆ ಅಂತ. ನಾನು ನಿನ್ನ ಗಂಡನ್ನೇ ಕೇಳ್ತಿನಿ, ನನ್ನ ಹುಡುಗಿನ ನಂಗೆ ಕೊಡು ಅಂತ, ನೀ ಬೇಡ ಅನ್ನಬೇಡ' ಅಂದ. ಕೇಳು ಅಂದೆ.<br /><br /><br />2<br /><br />'ವ್ರಶಾಂಕ್, ಲಾವಣ್ಯ ಅನ್ನೋ ಹುಡುಗೀನ ಪ್ರೀತಿಸ್ತಿದಾನೆ ಕಣೆ' ಅಂತ ಆದಿ ಹೇಳ್ದಾಗ ಒಂದು ದೊಡ್ಡ ನಿಟ್ಟುಸಿರು ಹೊರಟಿತ್ತು.ಲಾವಣ್ಯ ಹೆಸರು ಚೆನಾಗಿದೆ ಅಂದುಕೊಂಡಳು. ಎರಡು ತಿಂಗಳು ಬಿಟ್ಟು ವ್ರಶಾಂಕೇ ಫೋನ್ ಮಾಡಿ, ಮೈತ್ರಿ... ಅಂದಾಗ ಆಶ್ಚರ್ಯ ಆಗಿತ್ತು. ಮನೆಗೆ ಬಾ ಅಂದಳು, ಬಂದ. ಅಪ್ಪ ಅಮ್ಮ ಹಳ್ಳಿಗೆ ಹೋಗಿದ್ದರು ಅಲ್ಲಿಯ ದೇವಸ್ತಾನದಲ್ಲಿ ಎನೋ ಪೂಜೆ ಮಾಡಿಸಲು, ಆದ್ರೆ ಅಜ್ಜಿ ಮಾತ್ರ ಇದ್ದಳು ಮನೆಯಲ್ಲಿ, ಆಗಾಗ ಕೆಮ್ಮುತ್ತಾ.<br /><br /><br />ಏನೇನೋ ಮಾತಾಡಿದೆವು ಸ್ನೇಹಿತರ ವಿಷಯ,ಅವನ ಕೆಲಸದ ವಿಷಯ, ಅವಳ ಕೆಲಸದ ವಿಷಯ, ಲಾವಣ್ಯ ಹೇಗಿದಾಳೆ ಕೇಳಿದಳು 'ಅದು ಮಗು ಬಿಡು' ಅಂದ. ಇರಬಹುದು ಅನ್ನಿಸಿತು ಅವಳಿಗೆ. ಅಮ್ಮ ಬೆಳಗ್ಗೆ ಮಾಡಿಹೋಗಿದ್ದ ಉಪ್ಪಿಟ್ಟನ್ನೇ ಹಾಕಿಕೊಟ್ಟಳು, ಬಟ್ಟಲಲ್ಲಿ ಬಿಳಿ ಮೊಸರು. ನಿನಗೆ ಕೆನೆ ಮೊಸರು ಅಂದ್ರೆ ಈಗಲೂ ಆಗೋಲ್ಲವ? ಅಂದ. ಪರವಾಗಿಲ್ಲ ಹಳೇದೆಲ್ಲ ಇನ್ನು ನೆನಪಿದೆಯಲ್ಲ ಅಂದು ನಕ್ಕಳು. ಹತ್ತಿರ ಬಾರೆ ಅಂದ, ಹೋಗಿ ಪಕ್ಕದಲ್ಲಿ ಕೂತಳು. ಕಾಲೇಜಿನಲ್ಲಿ ನೀ ನನ್ನ ಪ್ರೀತಿಸ್ತಿದ್ದೆ ಅಲ್ವ? ಅಂದ.ಇಷ್ಟು ಹೊತ್ತು ಕೇಳಿಸಿದರು ಕೇಳಿಸದ ಹಾಗೆ ಇದ್ದ ಅಜ್ಜಿಯ ಕೆಮ್ಮು ಕೇಳಿಸತೊಡಗಿತ್ತು. ನೀನೂ ನನ್ನ ಪ್ರೀತಿಸುತ್ತಿದ್ಡೆ ವ್ರಶಾಂಕ್ ಅಂದಳು. ನಿನ್ನ ಅಜ್ಜಿಗೆ ತುಂಬ ಕೆಮ್ಮು ಅಲ್ವ? ಅಂದ, ಮುಗುಳ್ನಕ್ಕಳು. ಇನ್ನು ಎನೇನೊ ಮಾತಾಡಿದರು ಹೊರಡೋ ಮುಂಚೆ ಅಜ್ಜಿ..ನಿಮ್ಮ ಆರೋಗ್ಯ ನೋಡ್ಕೊಳಿ ಅಂದ. ದೂರ ಹೋದ ಮೇಲೆ ಲಾವಣ್ಯಳ ಫೋಟೊ ಮೇಲ್ ಮಾಡ್ತೀನಿ ಅಂತ ಕೂಗ್ದ.<br /><br />ಸರಿಯಾಗಿ ಮೊಳಕೆಯೇ ಒಡೆಯದ್ದಿದ್ದ ಸಂಭಂದ, ಅಂದಿನಿಂದ ಜೀವ ಪಡೆಯಲು ಕಾತರಿಸುತ್ತಿತ್ತು, ಹಸಿರಾಗಲು ಶುರುವಾಗಿತ್ತು, ರಸ ಒಸರಲು ಪ್ರಾರಂಭಿಸಿತ್ತು.ಅದೇ ಸಮಯಕ್ಕೆ ಸರಿಯಾಗಿ ಅವಳಿಗೆ ಗಂಡು ನೋಡಲು ಶುರು ಮಾಡಿದ್ದರು ಪ್ರತಿಯೊಂದು ಹುಡುಗನನ್ನೂ ಬೇಡ ಬೇಡ ಎಂದು ನಿರಾಕರಿಸುತ್ತಿದ್ದಳು. ಏಕೆ ಅಂತ ಅವಳಿಗೇ ಗೊತ್ತಿರಲಿಲ್ಲ. ಅವಳ ಅಮ್ಮ ಅಳಲು ಶುರು ಮಾಡಿದ್ದರು, ಹಿಂಸೆ ಆಗುತಿತ್ತು ಮನೆಯಲ್ಲಿ. ಇವತ್ತು ನಿರ್ಧಾರಕ್ಕೆ ಬಂದೇ ಬಿಡಬೇಕು ಅಂತ ವ್ರಶಾಂಕ್ ಬಳಿ ಹೋಗಿ 'ನನ್ನ ಮದುವೆ ಆಗು ವ್ರಶಾಂಕ್' ಅಂದಿದ್ದಳು ನಾನೇನೋ ತಯಾರಿದ್ದೀನಿ ಆದ್ರೆ ಲಾವಣ್ಯಾಗೆ ಪ್ರಾಮಿಸ್ ಮಾಡಿಬಿಟ್ಟಿದೀನಲ್ಲ, ಪ್ರಾಮಿಸ್ ಮುರಿಯೋದು ತಪ್ಪಲ್ಲವ? ಅಂದಿದ್ದ. ತನ್ನ ಬಳಿ ಇರೋವಾಗ, ತನ್ನ ಸೇರೋವಾಗ, ಸುಖಿಸುವಾಗ, ಆಣೆ- ಪ್ರಮಾಣ, ನಂಬಿಕೆ, ಮನಸ್ಸು- ಮನಸ್ಸಾಕ್ಷಿ, ಎಲ್ಲವನ್ನೂ ಬೀದಿಗೆ ಎಸೆದಂತೆ ಆಡುತ್ತಿದ್ದವನಿಗೆ ಆಣೆ ಪ್ರಮಾಣದ ಜ್ನಾಪಕ ಬಂದ್ದಿದ್ದು ನೋಡಿ ಹೇಡಿ ಅನ್ನಿಸಿ 'ಸರಿ ನೀನು ನಿನ್ನ ಆಣೆ ಉಳಿಸಿಕೋ ಅವಳನ್ನೇ ಮದುವೆ ಆಗು.' ಅಂದಿದ್ದಳು. ಇದಾದ ಎರಡೇ ತಿಂಗಳಲ್ಲಿ ಮೈತ್ರಿಯ ಮದುವೆ ಆಗಿಹೋಗಿತ್ತು.<br /><br /><br />3<br />ಛೇ.. ನಾವು ಮತ್ತೆ ಸಿಗಲೇಬಾರದಿತ್ತು ಅವತ್ತು ಫೋನ್ನಲ್ಲಿ ಮಾತಾಡೋವಾಗ ನಾನು ಕೇರಳಕ್ಕೆ ಹೋಗ್ತಿದೀನಿ ಒಂದು ವಾರ ಅಂದೆ. ಲಾವಣ್ಯ ಬರ್ತಿದಾಳ ಅಂತ ಕೇಳಿದಳು, ಇಲ್ಲ ಅಂದೆ. ನಾ ಬರ್ತೀನಿ ವ್ರಶಾಂಕ್ ಅಂದಳು. ಆಶರ್ಯ ಆಯ್ತು ನಿಜವಾಗ್ಲು ಮೈತ್ರಿ!!! ಅಂದೆ. 'ನನಗು ತಿರುಗಬೇಕು ಅಂತ ಮನಸ್ಸಾಗಿದೆ, ಒಂದೇ ಕಡೆ ಇದ್ದು ಬೊರು. ಕೆಲಸಕ್ಕು ಒಂದುವಾರ ರಜೆ ಹಾಕಿಬಿಡ್ತೀನಿ, ಇವರೂ ಫಾರಿನ್ ಟೂರ್ನಲ್ಲಿದಾರೆ, ಮಗೂನು ಕರ್ಕೊಂಡು ಬರ್ತೀನಿ. ನಿನ್ನ ಕೆಲಸಕ್ಕೆ ತೊಂದರೆ ಮಾಡೋಲ್ಲ ಅಂದಿದ್ದಳು.<br /><br />ಒಂದು ವಾರ ಪೂರ್ತಿ ಜೊತೆಲಿ ಕಳೆದೆನಲ್ಲ ಆವಾಗಲೇ ಗೊತ್ತಾಗಿದ್ದು ಅವಳಿಗೂ ಇವಳಿಗೂ ಎಷ್ಟು ವ್ಯತ್ಯಾಸ ಎಂದು. ಮೊದಮೊದಲು ಇನೊಸೆಂಟ್ ಅನ್ನಿಸುತ್ತಿದ್ದ ಲಾವಣ್ಯ, ಈಗ ನಾಟಕ ಮಾಡ್ತಾಳೆ ಅನ್ನಿಸುತಿತ್ತು. ಅವಳ ಜೊತೆ ಇರೋವಾಗಲೆಲ್ಲಾ ಉಸಿರುಕಟ್ಟುತ್ತಿರುವ ಭಾವನೆ. ಚಿಕ್ಕ ಚಿಕ್ಕ ವಿಷಯಗಳನ್ನೂ ದೊಡ್ಡದು ಮಾಡುವ, ನಾನು ಬೇರೆ ಹುಡುಗಿಯರನ್ನು ನೋಡಿದರೆ ಸಾಕು ಉರಿದು ಬೀಳುವ, ನನ್ನ ಬೇಕು ಬೇಡಗಳನ್ನು ಅರ್ಥ ಮಾಡಿಕೊಳ್ಳದ, ಸಂದರ್ಭಗಳಿಗೆ ಸರಿಯಾಗಿ ಸ್ಪಂದಿಸದ, ಅತ್ಯಂತ ಹಠಮಾರಿ-ಪೊಸೆಸ್ಸಿವ್ ಹುಡುಗಿ ಅವಳು. ಪಕ್ಕದಲ್ಲೇ ಕುಳಿತುಕೊಂಡು ನಾನು ಹುಡುಗಿಯರ ಜೊತೆ ಫ್ಲರ್ಟ್ ಮಾಡುವುದನ್ನು ಎಂಜಾಯ್ ಮಾಡುತ್ತಾ, ನನ್ನ ಚುಡಾಯಿಸುತ್ತಾ, ಹೆಚ್ಚು ಸ್ಪೇಸ್ ಕೊಡುವ, ಬೇಕಾದಲ್ಲಿ ಮಾತಾಗುವ-ಬೇಡವಾದಲ್ಲಿ ಮೌನವಾಗುವ, ಬರೀ ಪ್ರೀತಿ ಪ್ರೇಮದ ಮಾತಡಿ ಬೋರ್ ಮಾಡದೆ, ಏನೇ ವಿಷಯ ಎತ್ತಿಕೊಂಡರೂ ಸಮರ್ಥವಾಗಿ ವಾದ ಮಾಡುವ, ಆದರೆ ಜಗಳ ಆಡದ ಅಷ್ಟೇ ಪ್ರೀತಿಸುವ ಹುಡುಗಿ ಮೈತ್ರಿ.<br /><br />ಹೌದು ನಾನಾಗ ತಪ್ಪೇ ಮಾಡಿರಬಹುದು. ಅವಳನ್ನ ಅರ್ಥ ಮಾಡಿಕೊಂಡಿದ್ದು ಬಹಳ ನಿಧಾನ ಇರಬಹುದು, ಆದ್ರೆ ಅವಳನ್ನ ತುಂಬಾ ಪ್ರೀತಿಸುತ್ತೇನೆ. ಅವಳ ಗಂಡ ಅವಳನ್ನ ನೋಡಿಕೊಳ್ಳೋದಕ್ಕಿಂತ ಚೆನ್ನಾಗಿ ನೋಡಿಕೊತೆನೆ ನಾನು. ಲಾವಣ್ಯಾಗೆ ಮೊನ್ನೇನೆ ಹೇಳಿಬಂದೆನಲ್ಲ ನನಗೂ ನಿನಗೂ ಆಗಿಬರೋಲ್ಲ, ನಮ್ಮಿಬ್ಬರ ಸ್ವಭಾವಗಳು ಬೇರೆ ಬೇರೆ, ಜೊತೇಗಿರೋದು ಕಷ್ಟ ಆಗುತ್ತೆ ಅಂತ. ಇದನ್ನ ಎಷ್ಟು ಹೊತ್ತು ಅವಳಿಗೆ ವಿವರಿಸಿದೆ ಆದ್ರೆ ಅವಳು ಮೊನ್ನೇನೂ ಅದೇ ಥರ ಆಡಿದಳು, ಅತ್ತಳು, ಬಾಯಿಗೆ ಬಂದ ಹಾಗೆ ಬೈದಳು, ಹೊಡೆದಳು, ನಾನು ಎದ್ದು ಬಂದೆ. ಆದ್ರೆ ಇನ್ನು ಮುಂದೆ ಎಲ್ಲಾ ಚೆನ್ನಾಗಿರುತ್ತೆ ನಾನು-ನನ್ನ ಮೈತ್ರಿ-ಅವಳ ಮಗು, ಅಲ್ಲ ನಮ್ಮ ಮಗು ಆ ಮಗುನ ನನ್ನ ಮಗು ಥರನೇ ನೋಡಿಕೊಳ್ತೀನಿ. ಅವಳ ಗಂಡನಿಗೂ ಹೇಳಿಯಾಯಿತು, ಆ ಪ್ರಾಣಿ ನನ್ನ ಹೆಂಡತಿ ಹತ್ತಿರ ಮಾತಾಡ್ತೀನಿ ಅಂತ ಹೇಳಿದಾನೆ.'ಈಗ ಮನೆಗೆ ಬಾ' ಅಂತ ಮೈತ್ರಿ ಫೋನ್ ಮಾಡಿದ್ದಳಲ್ಲ, 'ಮಾತಾಡಬೇಕು' ಅಂತ. ನನಗೆ ಗೊತ್ತು ಮೈತ್ರಿ ನನ್ನ ಜೊತೆಗೆ ಬಂದೇ ಬರ್ತಾಳೆ, ನನ್ನ ತುಂಬ ಪ್ರೀತಿಸುತ್ತಾಳೆ ಅವಳು, ಅಂದುಕೊಂಡು ಕಾರಿನ ಕೀ ತೆಗೆದುಕೊಂಡು ಹೊರಟ.<br /><br /><br />4<br />ತನ್ನ ದುಃಖ ದುಮ್ಮಾನವನ್ನೆಲ್ಲಾ ಬಸಿದು ಹಾಕುವ ಹವಣಿಕೆ ಇರಬೇಕು, ರಾತ್ರಿಯೆಲ್ಲಾ ಆಕಾಶವು ಬಿಕ್ಕಳಿಸಿ ಅಳುತ್ತಿತ್ತು. ಏಕೋ ನನಗರಿವಿಲ್ಲದೆಯೇ ನನ್ನ ಕೆನ್ನೆಯ ಮೇಲೂ ಇಳಿದ ನೀರು, ಕಾರಣ ತಿಳಿಯದು. ಸುಮ್ಮನೆ ಕಲ್ಪಿಸಿಕೊಂಡ ಆತಂಕಗಳು ನನ್ನ ಕಾಡುತ್ತಿದ್ದರೆ ನನ್ನ ಕಲ್ಪನೆಗಳ ಬಗ್ಗೆ ನನಗೇ ಭಯ ಮೂಡಿ, ಟೀವಿ ನೋಡಲು ಬೇಸರವಾಗಿ, ಓದಲು ತಂದ ಪುಸ್ತಕದಲ್ಲಿ ಮನಸ್ಸು ಇಳಿಯದೆ, ಏನೂ ಮಾಡಲು ಹೊಳಿಯದೆ, ಆ ರಾತ್ರಿಯಲ್ಲಿ ಮನೆ ಒರೆಸತೊಡಗಿದೆ.<br /><br />ಯಾವಾಗ ಮಲಗಿದೆನೋ!! ಬೆಳಗ್ಗೆ ಎದ್ದು ರಂಗೋಲಿ ಹಾಕುತ್ತಿರುವಾಗ, ರಾತ್ರಿಯೆಲ್ಲಾ ಅತ್ತಿದ್ದರಿಂದಲೋ ಏನೋ ಎನ್ನುವಂತೆ ಕಣ್ಣು ಕೆಂಪಗಾಗಿರುವ ಆಕಾಶ, ದುಃಖ ಹೊರಹಾಕಿದ ಸುಖದ ಜೊತೆ. ಸುಮ್ಮನೆ ಅಚ್ಚರಿಯಿಂದ ನೋಡಿದೆ, ರಂಗೋಲಿ ಹಾಕುವುದನ್ನೂ ಮರೆತು- ಹಕ್ಕಿಯೊಂದು ತನ್ನ ಮೇಲಿದ್ದ ಮಳೆ ನೀರನ್ನು ಕೊಡಗಿಕೊಳ್ಳುತ್ತಿತ್ತು, ಅಲ್ಲೊಂದು ಮೈನಾ ಹಕ್ಕಿ ಮಾತಾಡುತ್ತಿದ್ದರೆ, ಹೆಸರೇ ಗೊತ್ತಿಲ್ಲದ ಹಕ್ಕಿಯೊಂದು ಹಾಡಾಗಿ ಉತ್ತರಿಸುತ್ತಿತ್ತು...<br /><br />ಅವನ ಕಾರು ದೂರದಲ್ಲಿ ಬರುತ್ತಿರುವುದು ಕಾಣಿಸುತ್ತಿತ್ತು, ಅವನಿಗೆ ಉತ್ತರ ಹೇಳಬೇಕಲ್ಲ. ಪಾಪು ಅಮ್ಮಾ ಎಂದು ಕರೆದ ಹಾಗೆ ಅನ್ನಿಸಿತು ಒಳಗೆ ಹೋಗಿ ನಿದ್ದೆಗಣ್ಣಿನ ಮಗುವನ್ನು ಎತ್ತಿಕೊಂಡು ಬಂದೆ. ಅವನು ನಲ್ಲೀಕಾಯಿ ಮರಕ್ಕೆ ಒರಗಿ ನಿಂತ್ತಿದ್ದ. ವ್ರಶಾಂಕ್,ನಿನಗೆ ನನ್ನ ಗಂಡನ್ನ ಕೇಳೋಕ್ಕೆ ಒಪ್ಪಿಗೆ ಕೊಟ್ಟಿದ್ದರಲ್ಲಿ ನನ್ನ ಸ್ವಾರ್ಥವಿದೆ, ಏನೂ ಅನ್ನಿಸದಂತಹ ವ್ಯಕ್ತಿತ್ವದ ಅವನಿಗೆ ನೀ ಹೇಳುವ ವಿಚಾರದಿಂದ ಏನಾದರೂ ಅನ್ನಿಸಬಹುದು, ರೊಚ್ಚಿಗೆ ಬೀಳಬಹುದು, ರೇಗಬಹುದು, ಸಿಟ್ಟಾಗಬಹುದು ಅನ್ನೋ ಆಸೆಯಿಂದ, ಆದರೆ ಅಂತದೇನೂ ಆಗಲಿಲ್ಲ.<br /><br />ಏನೂ ಅನ್ನಿಸದವನ ಜೊತೆ ಬದುಕಲು ಕಲಿತಿದೀನಿ, ಅಭ್ಯಾಸ ಆಗಿಹೋಗಿದೆ.ಅವನಿಗೆಪ್ರಾ ಪ್ರಾಮಿಸ್ ಮಾಡಿದೀನಿ ಅದಕೆ ಬರ್ತಿಲ್ಲಾ, ಅಥವಾ ಸಮಾಜಕ್ಕೆ ಹೆದರಿ ಬರ್ತಿಲ್ಲಾ ಅನ್ಕೊಬೇಡ. ನನಗೆ ಇದ್ಯಾವುದರ ಭಯ ಇಲ್ಲ. ಸೋ ಕಾಲ್ಡ್ 'ಎಥಿಕ್ಸ್', 'ಮಾರಲ್ಸ್' ಗಳಲ್ಲಿ ನನಗೆ ನಂಬಿಕೆ ಇಲ್ಲ. ಆದ್ರೂ, ನಾ ಬರೋಲ್ಲ. ಅಂದು ತೆರೆದ ಬಾಗಿಲಿಂದ ನೆಡೆದು ಹೋಗಲು ನೀನು ಒಪ್ಪಲಿಲ್ಲ, ಧೈರ್ಯ ಮಾಡಲಿಲ್ಲ, ನಿನಗೆ ತುಂಬ ಬಾಗಿಲುಗಳಿದ್ದವು. ಇಂದು ನನ್ನ ಬಾಗಿಲುಗಳು ಮುಚ್ಚಿವೆ, ಗೋಡೆ ಒಡೆಯುವ ಧೈರ್ಯ ಇದೆ ಆದರೆ ಮನಸಿಲ್ಲ. ನಾನು ಬರೋಲ್ಲ ಅಂದೆ, ನಲ್ಲೀ ಕಾಯಿ ಮರಕ್ಕೆ ಒರಗಿ ನಿಂತವನನ್ನು ನೋಡುತ್ತ.. ತೊಡೆಯ ಮೇಲಿನ ಮಗಳು ನಕ್ಕಂತಾಯ್ತು.ಮೃಗನಯನೀhttp://www.blogger.com/profile/05798486490706460406noreply@blogger.com26tag:blogger.com,1999:blog-7077041789502080406.post-11185098636954429862007-08-29T04:54:00.000-07:002007-08-29T04:54:14.971-07:00ಮಳೆ-ನೆನಪುನಾನು ಸುಶ್ ನಮ್ಮ ಹಾಸ್ಟಲೆಂಬ ಜೈಲಿನಲ್ಲಿ ನನ್ನ ರೂಮಿನ ಮುಂದಿನ ಕಿಟಕಿಯ ಬಳಿ ಬುಕ್ಕು ಪೆನ್ನು ಹಿಡಿದುಕೊಂಡು ಕುಳಿತಿದ್ದೆವು. ಮನೆಯಂಗಳದಲ್ಲೊಂದು ಸಾಹಿತ್ಯ ಸಂಜೆ ಎಂಬ ಕಾರ್ಯಕ್ರಮದ ರಿಪೋರ್ಟು ಮಾಡೊಕ್ಕಿತ್ತು.. ಜರ್ನಲಿಸಮ್ ಮೇಡಂ ಅಸೈನ್ಮೆಂಟ್ ಕೊಟ್ಟಿದ್ದರು. ಸುಶ್ ಬರೆಯೋಕ್ಕೆ ಶುರು ಮಾಡಿದ್ದಳು ನಾನು ಕಿಟಕಿಯಂದ ಕಾಣುವ ನಮ್ಮ ಕಾಲೇಜನ್ನೇ ನೋಡುತ್ತಾ ಕುಳಿತ್ತಿದ್ದೆ. ಸುಶ್ ಮಳೆ ಅಂದ್ರೆ ಏನನ್ನಿಸುತ್ತೆ ನಿಂಗೆ ಅಂತ ಕೇಳ್ದೆ ಅವಳು ಸುಮ್ನೆ ನನ್ನ ದುರುಗುಟ್ಟಿಕೊಂಡು ನೋಡಿ ಮತ್ತೆ ಬರೆಯೊದನ್ನ ಮುಂದುವರೆಸಿದಳು."ಇವಳಿಗೊಂದು ಮಳೆ ಹುಚ್ಚು" ಅಂತ ಗೊಣಗಿದ್ದು ಕೇಳಿಸಿತು.<br /><br /><br />ಕಡಲೂರಿನ ಮಳೆ ವಿಚಿತ್ರ .ನಮ್ಮೂರಲ್ಲಿ ಚಂದ, ಮಳೆ ಬರೋಕ್ಕೆ ಶುರುವಾದರೆ ಪೂರ್ತಿ ನಿಂತಿತು ಅಂತ ಹೇಳೋಕ್ಕಾಗಲ್ಲ ಸಣ್ಣಗೆ ಉದುರುತ್ತಾನೇ ಇರುತ್ತೆ.ಇಲ್ಲಿ ವಿಚಿತ್ರ ಸೂಚನೆಯನ್ನೇ ಕೊಡದೆ ದಬ ದಬ ಅಂತ ಸುರಿದು ಮತ್ತೆ ನಿಂತೇ ಹೋಗುತ್ತೆ ಅದರ ಘಮವನ್ನೂ ಉಳಿಸದೆ.<br /><br />ನಮ್ಮೂರ ಮಳೆ ಅಮ್ಮ ಮಾಡೋ ಕಾಫಿ ಥರ; ಬೆಳಗ್ಗೆ ಆರು ಮೂವತ್ತಕ್ಕೆ ಸ್ವಲ್ಪವೇ ಸ್ವಲ್ಪ ಒಂದು ಅರ್ಧ ಹಿಡಿಯಷ್ಟು ಕಾಫಿ ಬೀಜವನ್ನು ಹುರಿದು, ಅದನ್ನ ಪುಡಿ ಮಾಡುವ ಬಿಳೀ ಮಿಷಿನ್ನಿಗೆ ಹಾಕಿ ಟರ್ರ್ ಅನ್ನಿಸುತ್ತಿರುವಾಗಲೇ ಮನೆಯೆಲ್ಲಾ ಹಿತವಾಗಿ ಹರಡಿದ ಕಾಫಿಯ ಘಮ ಅದನ್ನ ಕುದಿಯೋ ಸಕ್ಕರೆ ನೀರಿಗೆ ಹಾಕಿ, ಸೋಸಿ, ಆಗಷ್ಟೇ ಹಾಲಿನವನು ತಂದ ಹಾಲನ್ನು ಕಾಯಿಸಿ ಅದನ್ನ ಡಿಕಾಕ್ಷನ್ನಿಗೆ ಸೇರಿಸಿ ಕುಡಿಯಲು ಕೊಟ್ಟ ಹಾಗೆ.. ಮಳೆ ಬರುವ ಮುಂಚೆಯೂ ಬಂದ ಮೇಲೂ ಹಿತವಾಗಿ ಹರಡಿದ ಮಳೆಯ ವಾತಾವರಣ, ಥೇಟ್ ಅಮ್ಮನ ಕಾಫಿಯೇ ಕುಡಿಯೋ ಮುಂಚೆಯೂ ಕುಡಿದ ಮೇಲೂ ಹಿತವೆನಿಸುವ ಅದರ ರುಚಿಯಂತೆ.<br /><br /><br />ಈ ಯೋಚನಾ ಲಹರಿಯನ್ನು ತುಂಡರಿಸಿದ್ದು ಸೂಚನೆಯನ್ನೇ ಕೊಡದೆ ಸುರಿಯಲು ಶುರುವಾದ ಮಳೆ ಸುಶ್ ನನ್ನ ನೊಡಿ ಮುಗುಳ್ನಕ್ಕಳು. ನಮ್ಮ ಕಾಲೇಜು ಮಳೆಯಲ್ಲಿ ನೆನೆಯುತ್ತಿತ್ತು.ತಂಗಾಳಿಯ ಜೊತೆ ಚುರುಚೂರೇ ಕಿಟಕಿಯೊಳಕ್ಕೆ ನುಗ್ಗುತ್ತಿರುವ ಮಳೆಯ ಹನಿಗಳು ಹಿತವಾಗಿ ನಮ್ಮಿಬ್ಬರನ್ನೂ ಒದ್ದೆಯಾಗಿಸುತ್ತಿತ್ತು.. ಸುಶ್ ಪುಸ್ತಕ ಮುಚ್ಚಿಟ್ಟು ಏನೋ ಯೊಚಿಸತೊಡಗಿದಳು...<br /><br /><br />ಮಳೆ ಅಂದ್ರೆ ನೆನಪು. ಮಳೆ ನೆಲವನ್ನು ಅಪ್ಪಿ ಚಿಮ್ಮುತ್ತಿದ್ದರೆ, ನನ್ನೊಳಗಿನ ನೆನಪಿನ ಪುಟಗಳು ಒಂದೊಂದಾಗಿ ಬಿಚ್ಚಿಕೊಳ್ಳಲು ಶುರು. ತಾತನ ಮನೆ ನೆನಪು, ಮಳೆ ಬೀಳುತ್ತಿದ್ದಂತೆಯೇ ಉರಿನಲ್ಲಿ ಮನೆ ಮುಂದೆ ಹರಡಿರುವ ಅಡಕೆಯನ್ನೆಲ್ಲಾ ಆ ದೊಡ್ಡ ದೊಡ್ಡ ಗೋಣಿ ಚೇಲದ ಸಮೇತ ಒಳಗೆ ತೆಗದುಕೊಂಡು ಹೋಗುವ ಚಿಕ್ಕಮ್ಮ, ಸರ ಸರನೆ ಓಡಿ ಬಂದು ಅವಳ ಜೊತೆ ಕೈ ಜೊಡಿಸುವ ಚಿಕ್ಕಪ್ಪ, ಆಗಿನ ಗಡಿಬಿಡಿ, 'ಹಾಳು ಮಳೆ' ಎಂದು ಸುಮ್ಮನೆ ಬಯ್ಯುವ ಪಾಟಿ(ಅಜ್ಜಿ), ಮಳೆಯಲ್ಲಿ ಒದ್ದೆಯಾಗುತ್ತಿರುವ ತನ್ನ ಹದಿನಾರು ಮೊಳದ ಸೀರೆಯನ್ನು ತೆಗೆಯಲು ಬರುತ್ತಿರುವ ಎದುರು ಮನೆಯ ಶೇಶಮ್ ಪಾಟಿ, ಮಳೆ ಶುರುವಾಗುತ್ತಿದ್ದಂತೆಯೇ ಕಾಫಿಗೆ ಹವಣಿಸುವ ಅಜ್ಜ,ಇವನ್ನೆಲ್ಲಾ ಪ್ರತೀ ವರ್ಷವೂ ಹೊಸದು ಎನ್ನುವಂತೆ ನೋಡುವ ನಾವು.....<br /><br />ಏನೋ ಯೋಚಿಸುತ್ತಿದ್ದವಳು, ಹ್ಮ್ ಮ್ ಮ್.. ಎಂದು ನಿಟ್ಟುಸಿರು ಬಿಡುತ್ತಾ "ಮಳೆ ಅಂದ್ರೆ ನೆನಪು." ಅಂದಳು ಸುಶ್. ನಾನು ಸುಮ್ಮನೆ ನಕ್ಕೆ....ಮೃಗನಯನೀhttp://www.blogger.com/profile/05798486490706460406noreply@blogger.com22tag:blogger.com,1999:blog-7077041789502080406.post-44617078435860961182007-08-21T13:20:00.000-07:002007-08-22T04:01:31.158-07:00ಅಮ್ಮಾ.. ನಿನ್ನ ಎದೆಯಾಳದಲ್ಲಿ..ಉಹೂಂ, ಅಪ್ಪನ ಮುಖ ನೆನಪಿಲ್ಲ ನನಗೆ ನನಗೆ ನೆನಪಿರೋದೆಲ್ಲ ಬರೀ ಇಷ್ಟೆ ಅಮ್ಮ ಕೆಂಪು ಸೀರೆ ಉಟ್ಟುಕೊಂಡು ಒಂದು ಶವದ ಮುಂದೆ ಕೂತಿರೋದು (ಅದು ಶವ ಅಂತಾನೂ ಗೊತ್ತಿರಲಿಲ್ಲ ನಂಗೆ ಯಾರೋ ಮಲಗಿದಾರಲ್ಲ .. ಯಾಕೆ ಬೀದೀಲಿ ಮಲಗಿದಾರೆ ಅನ್ಕೊಂಡಿದ್ದೆ) ಮತ್ತೆ ಶೂನ್ಯವನ್ನು ದ್ರುಷ್ಟಿಸುವ ಅಮ್ಮನ ಕಣ್ಣುಗಳು. ಎಲ್ಲರೂ ಅಳುತ್ತಿದ್ದರು, ಅಮ್ಮನ ಕಣ್ಣು ಭಯವಾಗೊಷ್ಟು ಕೆಂಪಾಗಿತ್ತು. ಪ್ರಾಯಷಃ ರಾತ್ರಿಯೆಲ್ಲಾ ಅತ್ತಿರಬೇಕು. ಏನಾಗಿದೆ ಅಂತ ಗೊತ್ತಿರಲಿಲ್ಲ ನನಗೆ ಆದರೆ ಅಮ್ಮನಲ್ಲಿ ಆದ ಬದಲಾವಣೆ ನನಗೆ ಅಳು ತರಿಸಿತ್ತು.ಅಮ್ಮನ ಹತ್ತಿರ ಹೋಗೋಕ್ಕೆ ಬಿಟ್ಟಿರಲಿಲ್ಲ ನಮ್ಮನ್ನ<br />"ಈ ಮೂರು ವರ್ಷದ ಮಗೀಗೆ ನಿನ್ ಅಪ್ಪಜಿ ಸತ್ತ್ ಹೋಗೈತೆ ಅಂತ ಹೇಗ್ ಹೇಳಾದು?"<br />ಅಂತ ಅಜ್ಜಿ ದೊಡ್ಡ್ ದನಿ ಮಾಡಿ ಅಳೋಕ್ಕೆ ಶುರು ಮಾಡಿದ್ಲು ನನಗೆ ಭಯ ಆಗಿ ನಾನು ಮನೆಯಾಳು ಮಂಜನ ಹತ್ರ ಓಡೋಗಿದ್ದೆ<br />ಹ್ಮ್ಮ್ಮ್ಮ್ ಮ್ ಮ್... ಅಂತ ದೊಡ್ಡ ನಿಟ್ಟುಸಿರುಬಿಟ್ಟು ನಾನ್ಯಾವಾಗಲೂ ಇಷ್ಟೇ ನೆನಪುಗಳಲ್ಲೇ ಮುಳುಗಿ ಹೋಗಿರ್ತೀನಿ ಅವರು ಬರೋಷ್ಟೊತ್ತಿಗೆ ಬೀಟ್ರೂಟ್ ಪಲ್ಯ ಮಾಡಿಟ್ಟಿರಬೇಕು.ಇರೋ ಮೂರು ಜನಕ್ಕೆ ಎರಡು ಕೇಜಿ ಬೀಟ್ರೂಟ್ ತಂದಿಟ್ಟಿದಾರೆ ಬರೀ ಅದರದೇ ಪಲ್ಯ, ಸಾಂಬಾರು, ಗೊಜ್ಜು ಅಂತ ದಿನಾ ಮಾಡಿ ಹಾಕಬೇಕು. ಆವಾಗ ಬುದ್ದಿ ಬರುತ್ತೆ ಅಂದುಕೊಂಡು, ಅಡುಗೆ ಮನೆ ಕಡೆ ನೆಡೆದಳು.<br /><br />ವಾಣಿ ಗ್ರುಹಿಣಿ ಮ್ ಸ್ ಸಿ ಮಡಿದಾಳೆ ಗಂಡ ಆರ್ ಬಿ ಐ ನಲ್ಲಿ ಮ್ಯಾನೇಜರ್. ದೊಡ್ಡ ಬ್ಯಾಂಕು, ದೊಡ್ಡ ಕೆಲಸ, ದೊಡ್ಡ ಸಂಬಳ. ಇವರಿಗೆ ಒಬ್ಬನೇ ಮಗ ರಾಘು. ವಾಣಿಗೆ ಅಮ್ಮ ತನ್ನ ಜೊತೇಲಿ ಇರಲಿ ಅನ್ನೋ ಆಸೆ ಆದರೆ ಅವಳ ಅಮ್ಮ ಮಾತ್ರ ತನ್ನ ಹಳ್ಳಿ ಮನೆಯೇ ಸ್ವರ್ಗವೆಂದುಕೊಂಡಾಕೆ. ಬೇಜಾರಾದಾಗ ವಾಣಿ ಮನೇಲಿ ಸ್ವಲ್ಪ ದಿನ ಇನ್ನೊಂದು ಸ್ವಲ್ಪ ದಿನ ವಾಣಿ ಅಕ್ಕ ವೀಣನ ಮನೇಲಿರ್ತಾರೆ.<br /><br /><br />ವಸುದಕ್ಕನ ಮದುವೆ ದಿನದ ಚಿತ್ರ ಇನ್ನೂ ಕಣ್ಣಲ್ಲಿ ಕಟ್ಟಿದಂತಿದೆ ಅವಳ ಅಮ್ಮ ಸತ್ತ ಮೇಲಲ್ಲವೆ ನಮ್ಮಮ್ಮ ಎರಡನೇ ಹೆಂಡತಿಯಾಗಿ ಆ ಮನೆ ಸೇರಿದ್ದು. ಅವಳೂ 'ಅಮ್ಮ' ಎಂದೇ ಕರೆಯುತ್ತಿದ್ದಳು ಆದರೆ ಅತ್ತೆ ,ಅಜ್ಜಿ, ಎಲ್ಲರೂ ಸೇರಿಕೊಂಡು ಅವಳ ಮದುವೆಯ ಯಾವ ಕೆಲಸಕ್ಕೂ ಕರೆಯದೆ ದೂರ ಇಟ್ಟಿದ್ದರು. ಮದುವೆಗೆ ಕರೆಯುವ ಯೋಚನೆಯನ್ನೂ ಮಾಡಿರಲಿಲ್ಲ ಅವರು ಅವಳ ಮದುವೆಯ ಓಲಗದ ಸದ್ದು ಬಸ್ಸ್ಟಾಂಡಿನಲ್ಲಿ ಮಂಗಳಜ್ಜಿ ಮನೆಗೆ ಹೋಗಲು ಬಸ್ಸಿಗೆ ಕಾಯುತ್ತ ಕುಳಿತಿದ್ದ ನಮಗೆ ಕೇಳಿಸುತ್ತಿತ್ತು. ನಾನು ಜೋರಾಗಿ ಅಳುತ್ತಿದ್ದೆ, ನನಗಿಂತ ಎರಡೇ ವರ್ಷಕ್ಕೆ ದೊಡ್ಡವಳಾದ ವೀಣ ವಯಸ್ಸಿಗೆ ಮೀರಿದ ಅರಿವನ್ನು ಮುಖದಲ್ಲಿ ಹೊತ್ತು ಮೌನವಾಗಿ ಕುಳಿತಿದ್ದಳು.ಅಮ್ಮನ ಕಣ್ಣು ಮತ್ತದೇ ಶೂನ್ಯದೆಡೆಗೆ...<br /><br /><br />ಗಂಗಜ್ಜಿ ಹೆಸರೇ ಒಂದು ನಡುಕ ಇಡೀ ಊರಿಗೆ ಊರೇ ಹೆದರುತ್ತಿತ್ತು ಈ ಹೆಸರಿಗೆ. ಗಂಗಜ್ಜಿಯಂತಹ ಅತ್ತೆ ಸಿಗುತ್ತಳೆ ಅಂತ ಗೊತ್ತಿದ್ದರೂ ಮಂಗಳಜ್ಜಿ ತನ್ನ ಪ್ರೀತಿಯ ಕೊನೇ ಮಗಳನ್ನು ಹೇಗೆ ಅವರ ಮನೆಗೆ ಕೊಟ್ಟರು ಅದೂ ಎರಡನೇ ಸಂಭಂದಕ್ಕೆ? ಶ್ರೀಮಂತರ ಮನೆ ಅಂತಲ? ಸೆರೆಮನೆ ಆದರೂ ಪರವಾಗಿಲ್ಲ ಬಂಗಾರದ್ದಲ್ಲವ ಅನ್ನೋ ಸ್ವಭಾವವ?<br />ನಿಮ್ಮ ಅಪ್ಪ ಎಂದರೆ ಗಂಡು ಗಂಡು ದೊಡ್ಡಪ್ಪ ಯಾವುದ್ದಕ್ಕೂ ಲಾಯಕ್ಕಿಲ್ಲ ಅನ್ನುತ್ತಿದ್ದರು ಊರಿನವರು ಯಾವುದೇ ಇತಿಮಿತಿ ಇಲ್ಲದೆ ಖರ್ಚು ಮಾಡುತ್ತಿದ್ದರಂತೆ ಅಪ್ಪ. ಗಂಗಜ್ಜಿಯಂತಹ ಗಂಗಜ್ಜಿ ಅಪ್ಪನಿಗೆ ಹೆದರುತ್ತ್ಹಿದ್ದಳಂತೆ.ತನಗೆ ಕಿಂಚಿತ್ತೂ ಹೆದರದ ಬಿಟ್ಟರೆ ತನ್ನನ್ನೇ ಹುರಿದು ತಿನ್ನುವಂತ ತನ್ನ ಮಗನ ಮೇಲೆ ಗಂಗಜ್ಜಿಗೆ ಅಸಾದ್ಯ ಸಿಟ್ಟು.<br />ಅವಳೇ ಅಪ್ಪನ ಮೊದಲನೇ ಹೆಂಡತಿಯನ್ನು ಸಾಯಿಸಿದ್ದು, ಆಮೇಲೆ ಅಪ್ಪನನ್ನೂ ಕೊಂದಳು. ನಾನು ಹುಟ್ಟಿದಾಗ ತಂದೆಗೆ ಆಗದ ನಕ್ಷತ್ರದಲ್ಲಿ ಹುಟ್ಟಿದಾಳೆ ಸಾಯಿಸಿಬಿಡಿ ಎಂದು ನನ್ನ ಕೊಲ್ಲಲು ಮಂಗಳಜ್ಜಿಯ ಮನೆಯವರೆಗೂ ಬಂದಿದ್ದಳಂತೆ. ಅಕ್ಕನ ಬಾಯಿಗೆ ಭಾರದ ಕಬ್ಬಿಣ ಹಾಕಿ ಅವಳು ಸಾಯುವ ಸ್ಥಿತಿ ತಲುಪಿ ಒದ್ದಾಡುತ್ತಿದ್ದರೂ ಸುಮ್ಮನೇ ಯಾವುದೇ ಭಾವನೆಗಳಿಲ್ಲದೆ ನೋಡುತ್ತಿದ್ದ ಅಜ್ಜಿಯನ್ನು ಕಂಡು ಮಂಜ ದಂಗಾಗಿದ್ದನಂತೆ, ಅವನು ಅ ದಿನ ಅಲ್ಲಿಲ್ಲದಿದ್ದರೆ ಅಕ್ಕ ಎಂದು ಕರೆಯಲೂ ಯಾರಿರುತ್ತಿರಲಿಲ್ಲ. ಅಜ್ಜಿಗೆ ಕೊಲೆ ಮಾಡುವುದು ಒಂದು fancy ಆಗಿಬಿಟ್ಟಿತ್ತಾ?<br /><br /><br /><br />"ನಿಮ್ಮಪ್ಪ ರಾಜಪ್ಪ ಹೆಸರಿಗೆ ತಕ್ಕ ಹಾಗೆ ರಾಜನಂತೆ ಇರುತ್ತಿದ್ದ. ಬಿಳೀ ಪಂಚೆ, ಬಿಳೀ ಶರಟು, ಕೈಯಲ್ಲಿ ಪುಸ್ತಕ ಮತ್ತು ಪಂಚೆಯ ಗಂಟಿಗೆ ಸಿಗಿಸಿದ ಮಚ್ಚು ಅವನು ತೋಟದ ಕಡೆಗೆ ಹೊರಟ ಅಂದರೆ ಆಳುಗಳೆಲ್ಲಾ ಚುರುಕಾಗಿ ಕೆಲಸ ಮಾಡಲು ಶುರು ಮಾಡುತ್ತಿದ್ದರು. ಅವ್ನ ಗತ್ತೇ ಗತ್ತು"<br />ಎಂದು ಹೇಳುತ್ತಿದ್ದ ಪಕ್ಕದ ಮನೆ ಪದ್ಮಜ್ಜಿಯ ಮಾತುಗಳಿಂದ ಅಪ್ಪ ಹೇಗಿದ್ದಿರಬಹುದು ಎಂದು ತುಂಬ ಸಾರಿ ಕಲ್ಪಿಸಿಕೊಂಡಿದ್ದೇನೆ... ಅಪ್ಪ ಇರಬೇಕಿತ್ತು.....<br /><br /><br /><br />ಆಸ್ತಿ ಭಾಗ ಮಾಡೋವಾಗ ಮಾವ ಸಹಾಯಕ್ಕೆ ಬಂದ್ದಿದ್ದ ಅನ್ನೋದೆನೋ ನಿಜ, ಆದರೆ ಆಮೇಲೆ ಅವನೂ ಅತ್ತೆಯೂ ಸೇರಿಕೊಂಡು ಗುಕ್ಕುಗುಕ್ಕಾಗಿ ನಮ್ಮ ಆಸ್ತಿಯನ್ನು ತಿನ್ನುತ್ತಿದ್ದುದು ಗೊತ್ತಾಗುತ್ತಿದ್ದರೂ, ಅಮ್ಮ ಏಕೆ ಸುಮ್ಮನಿದ್ದಳು ?ಗೊತ್ತಾಗುವುದಿಲ್ಲ."ಗಂಡು ದಿಕ್ಕಿಲ್ಲದ ಮನೆ ಅವನಾದರೂ ಒತ್ತಾಸೆಗೆ ಇರಲಿ ಅಂತ ಸುಮ್ಮನಿದ್ದೆ" ಅಂದಿದ್ದಳು ಬೇರೆ ಯಾವ ಕಾರಣವೂ ಹೊಳೆಯದೆ ನಿಜವಾದ ವಿಶಯವೆಂದರೆ ತನ್ನ ಅಣ್ಣನೆಂದರೆ ಸುಮ್ಮನೆ ಪ್ರೀತಿ ಅವಳಿಗೆ.ಅಣ್ಣನಿಗೆ ಏನೂ ಗೊತ್ತಗಲ್ಲ ಅತ್ತಿಗೆ ಹೇಳಿದಂಗೆ ಕುಣಿತಾನೆ ಪಾಪ ಅನ್ನೊ ನಂಬಿಕೆ ಅವಳದ್ದು ಆದರೆ ಮಾವ ಎಂಥವನೆಂದು ನನಗೆ ಗೊತ್ತಾಗುತ್ತಿತ್ತು ನಾನು ಇವತ್ತಿಗೂ ಮಾವನನ್ನು ಮಾತಾಡಿಸುತ್ತಿಲ್ಲ....<br /><br /><br /><br />ಅಪ್ಪನ ಜೊತೆಯ ಐದು ವರ್ಷದ ದಾಂಪತ್ಯ ಜೀವನದಲ್ಲಿ ನೀನು ಸುಖವಾಗಿದ್ದೆಯ ಎಂದು ಕೇಳಿದರೆ ಅಮ್ಮ ಇಂದಿಗೂ ಉತ್ತರಿಸುವುದಿಲ್ಲ ಉತ್ತರ ಕೊಡದೇ ಇರುವುದೂ ಒಂದು ಉತ್ತರವೇ.. ಆದರೆ ನನಗೂ ಅಮ್ಮನ ಉತ್ತರ ಬೇಕಿಲ್ಲ.. ಈ ಪ್ರಶ್ನೆ ಕೇಳಿದ ನಂತರ ಮೌನವಾಗುವ ಅಮ್ಮ, ಇಪ್ಪತ್ತು ಇಪ್ಪತ್ತೆರೆಡು ವರ್ಷ ಹಿಂದಕ್ಕೆ ಹೋಗುವ ಅವಳ ಯೋಚನೆ, ಅವಳ ಮೌನದಿಂದ ವಿಸ್ತರಿತವಾಗುವ ನನ್ನ ಕಲ್ಪನೆ ಇಷ್ಟ ನನಗೆ ಎಂದುಕೊಳುತ್ತಾ ಸಾರು ಕುದಿಯುವುದನ್ನೆ ನೋಡುತ್ತಿದ್ದಳು.<br /><br /><br />ನಮ್ಮಿಬ್ಬರ ಓದಿನ ಪ್ರತಿ ಹಂತದಲ್ಲೂ ಅಮ್ಮ ಖುಷಿಯಾಗಿ ಪಾಲ್ಗೊಂಡಿದ್ದಾಳೆ. ಅಕ್ಕನ ಮದುವೆಯಲ್ಲೂ ಅವಳ ಕಣ್ಗಳು ಖುಷಿಯಿಂದ ಅರಳಿದ್ದವು, ಆದರೆ ನನ್ನ ಮದುವೆಯ ಸಿದ್ದತೆಗಳನ್ನು ಆಸಕ್ತಿಯಿಂದ ಮಾಡುತ್ತಿದ್ದವಳು ಮದುವೆಯ ದಿನ ಸುಮ್ಮನಾಗಿಬಿಟ್ಟಿದ್ದಳು. ಯಾವುದರಲ್ಲೂ ಆಸಕ್ತಿ ಇರದ ಹಾಗೆ ಇದ್ದಳು,.. ಕಡೇ ಪಕ್ಷ ನನ್ನ ಕಳಿಸಿಕೊಡುವಾಗ ಕೂಡ ಅಳಲಿಲ್ಲ ಕಣ್ಣು ಶೂನ್ಯದೆಡೆಗೆ...<br />ಅಮ್ಮ ಯಾಕವತ್ತು ಹಾಗಿದ್ದೆ ಅಂದರೆ ತುಂಬ ಹೊತ್ತಿನ ನಂತರ ಇದಕ್ಕೂ ಉತ್ತರ ಕೊಡುವುದಿಲ್ಲವೇನೋ ಅಂದುಕೊಳುತ್ತಿದ್ದಾಗ ನಿಧಾನವಾಗಿ ಹೆಳಿದಳು<br />"ನಿಮ್ಮಪ್ಪ ಇದ್ದಾಗ ಅಂಥವರನ್ನು ಅರ್ಥಮಾಡಿಕೊಳ್ಳಬೇಕೆಂಬ ಕನಸಿತ್ತು, ಅವರು ಸತ್ತಾಗ ಎಲ್ಲ ಶೂನ್ಯ ಅನ್ನಿಸುತ್ತಿತ್ತು. ಆದ್ದರೆ ನಿಮ್ಮನ್ನು ಚೆನ್ನಾಗಿ ಓದಿಸುವ ಕನಸು ಕಟ್ಟಿಕೊಂಡೆ. ನಿಮ್ಮ ಓದಾದಮೇಲೆ ನಿಮ್ಮಗಳ ಮದುವೆಯ ಕನಸು, ನಿನ್ನ ಮದುವೆಯಾದ ಮೇಲೆ ಮತ್ತೆ ಶೂನ್ಯಕ್ಕೆ ಹಿಂತಿರುಗಿದೆ. ನಿಮಗಾಗಿ ನನ್ನ ಜೀವನ ಮುಡುಪಿಟ್ಟೆ ಅನ್ನೊ ಬೊಗಳೆ ಮಾತು ಹೇಳೊಲ್ಲ ನಾನು. ಬದುಕೊಕ್ಕೆ ಕನಸು ಬೆಕಿತ್ತು. ನಿಮ್ಮಗಳ ಭವಿಷ್ಯದ ಕನಸು, ಸುಖದ ಕನಸು, ನಿಮ್ಮ ಸುಖ-ದುಃಖ, ಆಸೆ, ಅಚ್ಚರಿ, ಅಳು, ಪ್ರತಿಯೊಂದನ್ನೂ ನನ್ನ ಜೊತೆಗೇ ಹಂಚಿಕೊಳ್ಳುತ್ತಿದ್ದಿರಿ 'ನನ್ನ ಬಿಟ್ಟರೆ ನಿಮಗೆ ಇನ್ಯಾರೂ ಇಲ್ಲ' ಅನ್ನೋಭಾವನೆಯೇ ಖುಷಿ ಕೊಡುತ್ತಿತ್ತು ನಂಗೆ. ಆದರೆ ನೀನು ಮದುವೆಯಾಗಿ ಹೋದಾಗ ಎಲ್ಲ ಕಳಕೊಂಡ ಭಾವ ನಿನ್ನ ಮದುವೆ ಸಮಯದಲ್ಲಿ ಕವಿದ ಶೂನ್ಯ ಭಯಂಕರವಾದದ್ದು ನನಗೆ ಬದುಕೋಕ್ಕೆ ಬೇರಾವ ಕನಸುಗಳೂ ಇಲ್ಲ ನನ್ನ ಮೇಲೆ ಯಾರೂ ಅವಲಂಬಿತವಾಗಿಲ್ಲ ಅನ್ನೊ ವಾಸ್ತವ ಕಣ್ಣೆದುರಿಗೆ.....<br /><br />ಅಂದಿದ್ದಳು ಅಂದುಕೊಳ್ಳುತ್ತಿದ್ದಾಗ ರಾಘವ ಧಡಾರಂತ ಬಾಗಿಲು ತಳ್ಳಿಕೊಂಡು ಒಳಗೆ ಬಂದು ಶೂಸು ಬಿಚ್ಚುತ್ತಾ ಅವನ ಸ್ಕೂಲಿನಲ್ಲಿ ನೆಡೆದುದ್ದನ್ನು ವರದಿ ಒಪ್ಪಿಸಲು ಶುರುಮಾಡಿದಾಗ, ಅವಳು ತನ್ನ ಆಲೊಚನೆಯ ಸರಣಿಯಿಂದ ಹೊರಬಂದು ಅವನ ಮುದ್ದು ಮಾತುಗಳಲ್ಲಿ ಮುಳುಗಿಹೋದಳು.ಮೃಗನಯನೀhttp://www.blogger.com/profile/05798486490706460406noreply@blogger.com12tag:blogger.com,1999:blog-7077041789502080406.post-16573627735159561622007-08-12T05:13:00.000-07:002007-08-12T05:33:35.099-07:00ವನಸಿರಿಯ ಮಗಳುಯಾರೂ ಓಡಾಡದಿದ್ದಲ್ಲಿ ಅವಳಿದ್ದಳು<br /><br />ಜೊತೆಗೆ ಕಾವೇರಿಯ ಝರಿ<br /><br />ಇವಳನ್ನು ಹೊಗಳಲು ಯಾರೂ ಇರಲಿಲ್ಲ<br /><br />ಪ್ರೀತಿಸುವವರು ಇನ್ನ್ಯಾರು<br /><br /><br /><br /><br />ಅವಳ ಓಡಾಟವೆಲ್ಲಾ ಹಸಿರ ಬಳಿ<br /><br />ಜೊತೆಗೆ ಬೆಚ್ಚಗಾಗುತಿಹ ಸೂರ್ಯ<br /><br />ದನಿಗೂಡಿಸಲು ಕೋಗಿಲೆಗಳಿವೆ<br /><br />ಅಲ್ಲಿ ಇನ್ನೆಲ್ಲಿಯ ಕ್ರೌರ್ಯ<br /><br /><br /><br /><br />ಅವಳ ಊಟ ಕಾಡು ಫಲ<br /><br />ಕುಡಿಯುವುದು ಮಕರಂದ<br /><br />ವನಸಿರಿಯ ಮಗಳಲ್ಲವೇ<br /><br />ನೋಡಲು ಬಲುಚಂದ<br /><br /><br /><br /><br />ಎಲೆಯ ಮರೆಯ ಸಂಪಿಗೆ<br /><br />ಕಣ್ಣಿಗೆ ಕಾಣದೆ ಅಡಗಿಹಳು<br /><br />ರಾತ್ರಿಯ ಒಂಟಿ ನಕ್ಷತ್ರ<br /><br />ಬೆಳ್ಳನೆ ಬೆಳಗುತಿಹಳು<br /><br /><br /><br /><br />ಅವಳಿದ್ದಳೆಂಬುದೇ ಕೆಲವರಿಗೆ ಗೊತ್ತಿದ್ದು<br /><br />ಸತ್ತರೆ ಹೇಗೆ ತಿಳಿಯಬೇಕು;<br /><br />ಅವಳೀಗ ಮಣ್ಣಲ್ಲಿ ಮಣ್ಣಾಗಿದ್ದಾಳೆ<br /><br />ಸಂಕಟವನ್ನು ನಾನೆಲ್ಲಿ ಬಚ್ಚಿಡಬೇಕು!<br /><br /><br /><br /><br /><br /><br /><br />ಇದು William Wordsworthನ She dwelt amoung the untrodden waysನ ಭಾವಾನುವಾದ ಆ poem ಹೀಗಿದೆ<br /><br /><br /><br />She dwelt among the untrodden ways<br /><br />Beside the springs of Dove;<br /><br />A Maid whom there were none to praise<br /><br />And very few to love<br /><br /><br /><br />A violet by a mossy stone<br /><br />Half hidden from the eye<br /><br />Fair as a star when only one<br /><br />Is shining in the sky<br /><br /><br /><br />She lived unknown and few could know<br /><br />When Lucy ceased to be<br /><br />She is in her grave, and,Oh!<br /><br />The difference to meಮೃಗನಯನೀhttp://www.blogger.com/profile/05798486490706460406noreply@blogger.com8tag:blogger.com,1999:blog-7077041789502080406.post-65905806295161246042007-08-01T13:00:00.000-07:002007-08-01T00:37:42.190-07:00ಮರೆತು ಹೋದವಳುಕಣ್ಣೀರು ತಡೆಯಕ್ಕೆ ಆಗ್ತಾ ಇಲ್ಲ...<br /><br /> ಗಂಡಸರು ಅಳಬಾರದು ಅಂತಾರಲ್ವ?? 'ಮದುವೇಲಿ ಹುಡುಗಿ ಅತ್ತರೆ ಎನೇ ಕಾರಣ ಇದ್ದರೂ ತವರು ಮನೆ ಬಿಟ್ಟು ಹೋಗುತ್ತಿದ್ದಾಳೆ ಅಂತ ಅಳುತ್ತಿದ್ದಾಳೆ' ಅಂದುಕೊಳ್ತಾರೆ ಈ ಮದುವೆ ಆಗಿ ನಿನ್ನಿಂದ ದೂರ ಆಗ್ತಿದೀನಿ ಅಂತ ಗೊತ್ತಾದರೂ ದು:ಖ ಆಗಬಾರದ? ಅಳು ಬಂದರೆ ಏನು ತಪ್ಪು?<br /><br />ಮೊದಲನೇ ಸಾರಿ ನಾನು ಸಾಗರ ಸಮ್ಮುಖದಲ್ಲಿ ನಿನ್ನೊಳಗಿಳಿದಾಗ ನಿನ್ನ ಬಿಳಿಗೆನ್ನೆಮೇಲಿದ್ದ ಕಣ್ಣೀರು, ಕೂಗಬಾರದೆಂದು ನೀನು ತುಟಿ ಕಚ್ಚಿದ್ದರಿಂದ ಜಿನುಗಿದ ರಕ್ತ, ನನ್ನ ಕಣ್ಣು ಚ್ಚುಚ್ಚುತ್ತಿದೆ.<br />ಹ್ಮ್ ಮ್... ನಿನ್ನ ಆಸೆಗಳೇ ಹಾಗೆ ನೀನು ಎಷ್ಟು ಹತ್ತಿರವಾಗಿ ಸಿಕ್ಕಿದ್ದೆ ನನ್ನ ರೂಮಿನಲ್ಲೇ ಆದರೆ ನನಗೆ ನಿನ್ನ ಕೈ ಮುಟ್ಟೊಕ್ಕೆ ಬಿಟ್ಟಿರಲಿಲ್ಲ ನೀನು ನಿನ್ನ ಸೇರಬೇಕೆಂದರೆ ಅದು ಕಡಲ ಮುಂದೆಯೋ, ಜಲಪಾತದೆದುರಿಗೋ, ಹರಿಯುವ ನದಿ ಪಕ್ಕದಲ್ಲೋ ,ಸುಡುವ ಬಂಡೆಗಲ್ಲ ಮೇಲೊ....<br /><br /> ಅವತ್ತು ನನ್ನ ಮನೆಯಲ್ಲಿ ನಾವಿಬ್ಬರೇ ನಾನು ನಿನ್ನ ಆಸೆಯಿಂದ ನೋಡುತ್ತಿದ್ದರೆ<br />"ಯಾವುದೊ ರೂಮಿನ ಮೂಲೆಯಲ್ಲಿ ನನ್ನ ಮೀಸಲು ಮುರಿಯೋಕ್ಕೆ ಇಷ್ಟ ಇಲ್ಲ. ಕಡಲೆಂದರೆ ಆಸೆ ನಂಗೆ, ನೀನು ಕಡಲೂರಿನವನು ಸಮುದ್ರದೆದುರಿಗೆ ಬೆಳ್ದಿಂಗಳ ರಾತ್ರಿಯಲ್ಲಿ ಕಡಲ ಶಬ್ಧ ಕೇಳುತ್ತಾ ನಮ್ಮಿಬ್ಬರ ಮಿಲನವಾಗಲಿ ನನಗೂ ಇನ್ನು ಹೆಚ್ಚು ವರ್ಷ ತಡೆಯೋಕ್ಕಾಗಲ್ಲ ವರ್ಷ 24ಆಯಿತು ಅಂದಿದ್ದೆ.<br /><br />ನೀನು ಯಾವತ್ತೂ ಹೀಗೆ.. ನೇರ- ನೇರ. ನನ್ನ ಕಣ್ಣ ಬೇಡಿಕೆ ಅರ್ಥವಾಗುತ್ತಿತ್ತು ನಿನಗೆ.<br />"ಕಾಡು ಕುದುರೆ ಸವಾರಿಗೆ ಸಿದ್ದವೇ ಹುಡುಗ?" ಎಂಡು ಕೇಳಿ ಝಲ್ಲನೆ ನಗುತ್ತಿದ್ದೆ ಅಷ್ಟೇ ಬೇಗ ತೆಕ್ಕೆಗೆ ಬಂದು ಬಿಡುತ್ತಿದ್ದೆ.<br /> ಕ್ರೂರಿ ನೀನು ಯಾಕೆ ಹೀಗೆ ನೆನಪಾಗ್ತಾ ಇದ್ದೀಯ?? ಪುರೋಹಿತರು ಗೊಣಗುತ್ತಾ ಇದ್ದಾರೆ ಸರಿಯಾಗಿ ಮಂತ್ರ ಹೆಳುತ್ತಿಲ್ಲ ನಾನು ಅಂತ. ನಿನ್ನ ನೆನಪುಗಳಿಂದ ಕಳಚಿಕಂಡು ಮಂತ್ರ ಪಠಿಸೋದಾದರೂ ಹೇಗೆ?<br /><br /> ನನ್ನ ಪಕ್ಕದಲ್ಲಿ ಕುಳಿತಿರುವ ಹುಡುಗಿ ಎಷ್ಟು ಸಪೂರ- ಸಪೂರ ಬಗ್ಗಿಸಿದ ಕತ್ತು ಎತ್ತಿಲ್ಲ ,ನೀನೇ ಇಲ್ಲಿದ್ದಿದ್ದರೆ ದಿಟ್ಟ ಕಣ್ಣುಗಳಿಂದ ನನ್ನೇ ನೋಡುತ್ತಿರುತ್ತಿದ್ದೆ.. ಆದರೆ ನೀ ಇಲ್ಲಿರಲು ಹೇಗೆ ಸಾಧ್ಯ?<br /><br /> ಅವತ್ತು ನೀನು ನನ್ನ ಭುಜದ ಮೇಲೆ ಗಲ್ಲವನ್ನಿಟ್ಟುಕೊಂಡು ಮುದ್ದುಮುದ್ದಾಗಿ<br /> "ಜಲತರಂಗದ ಸದ್ದು ಇದಕ್ಕಿಂತ ಚೆನ್ನಗಿರುತ್ತಾ?"<br />ಅಂತ ಕೇಳಿದ್ದೆ ಜಿಂಕ್ ಶೀಟಿನ ಮೇಲೆ ಬೀಳುತ್ತಿದ್ದ ಮಳೆ ಸದ್ದು ಕೇಳುತ್ತ.. ನಿನ್ನ ತುಂಬಿದ ಬಿಳಿಗೆನ್ನೆ ಕಚ್ಚಿಹಾಕಬೇಕೆನಿಸಿತ್ತು ಆವಾಗ.<br /><br />ನಿನ್ನಷ್ಟು ಚಂದದ ಹುಡುಗಿ ಸುಮ್ಮನೆ ನನ್ನ ಬಳಿ ಬಂದ್ದಾದರೂ ಹೇಗೆ? ಎಂದು ಯೋಚಿಸುತ್ತಿರುತ್ತೇನೆ ಬಹಳ ಸಲ, ಅಂತೆಯೇ ಏನೂ ಕಾರಣ ಕೊಡದೆ ನನ್ನಿಂದ ದೂರವಾದ ಮೇಲೂ...<br /><br /> ನಿಂಗೆ ಅವತ್ತಿನ ದಿನ ನೆನಪಿದೆಯ? ಎಂದಿನಂತೆ ಬೆಳದಿಂಗಳ ರಾತ್ರಿಯಲ್ಲಿ ಕಡಲೆದುರಿಗೆ ಕುಳಿತಿದ್ದೆವು ಭೊರ್ಗರೆಯುವ ಕಡಲೆದುರಿಗೆ ಮೌನ ದೇವತೆ ನೀನು. ಆದರೆ ಅವತ್ತು ಕೇಳಿದ್ದೆ<br /><br />"ಈಗ ಕಡಲನ್ನು ನೋಡಿದ್ರೆ ಹೇಗನ್ನಿಸುತ್ತೆ ನಿಂಗೆ... "<br /><br />"ಅದರ ಭೋರ್ಗರೆತ ಗಂಡಸಿನ ಆವೇಷದಂತೆ.." ಎನ್ನುವುದು ನನ್ನ ಉತ್ತರ..<br /><br />ನೀನು ಸ್ವಲ್ಪ ಹೊತ್ತು ಸುಮ್ಮನಿದ್ದು ಮುಂದುವರಿದೆ<br /><br />"ನಮ್ಮ ಕವಿಗಳು ನದೀನ ಹೆಣ್ಣಿಗೆ ಸಮುದ್ರನ ಗಂಡಸಿಗೆ ಹೋಲಿಸುತ್ತಾರೆ .ಪೌರಾಣಿಕ ಪುಸ್ತಕಗಳಲ್ಲಿ ಸಮುದ್ರ ರಾಜನ ಕಲ್ಪನೆ ಬರುತ್ತೆ...ಅದಕ್ಕೆ ನಾವೆಲ್ಲ ಸಮುದ್ರದ ಭೊರ್ಗರೆತದಲ್ಲಿ ಗಂಡಸಿನ ಆವೇಶ ಕಾಣುತ್ತೀವಿ. ಆದ್ರೆ ನಂಗೆ ಈ ಬೆಳ್ದಿಂಗಳ ರಾತ್ರಿಯಲ್ಲಿ ಕಡಲು ಹೆಣ್ಣಾಗಿ ಕಾಣ್ತಾಳೆ, ಅವಳ ನಗ್ನತೆಯನ್ನು ತನ್ನ ತೆಳು ಬೆಳ್ಳನೆ ಹೊದಿಕೆಯಿಂದ ಮುಚ್ಚಿದಾನೆ ಎನ್ನಿಸುವ ಚಂದ್ರ, ನಿದ್ದೆಯಲ್ಲಿ ಮಗ್ಗಲು ಬದಲಿಸುತ್ತಿರುವಳೋ ಎನ್ನುವಂತೆ ದಡ ಮುಟ್ಟುವ ಅಲೆಗಳು... "<br />ಅವತ್ತಿನಿಂದ ನನಗೆ ಕಡಲನ್ನು ಗಂಡೆಂದು ನೋಡಲು ಸದ್ಯವೇ ಆಗಿಲ್ಲ....<br /><br />ನೀನು ಹೇಳದೇ ಕೇಳದೇ ನನ್ನ ಬಿಟ್ಟು ಹೋಗಿ ಐದು ವರ್ಷಗಳಾದರೂ ನಾನು ಬೇರೆಯವರನ್ನು ಮದುವೆಯಾಗಲು ಒಪ್ಪಿರಲಿಲ್ಲ ನಿನ್ನ ಬಂಗಾರು ಬಣ್ಣದ ಕಣ್ಣುಗಳು ನಿನ್ನನ್ನು ಮರೆಯಲು ಬಿಟ್ಟಿರಲಿಲ್ಲ...ಆದರೆ ಮದುವೆಯಾಗಲೇಬೇಕಿತ್ತು ನಿನ್ನ ಮರೆಯಲಾದರೂ ಈ ಹುಡುಗಿಯಲ್ಲಿ ನಿನ್ನ ಹುಡುಕುವುದಿಲ್ಲ ನಾನು. ನನಗೆ ಒಂದು ಮಾತೂ ಹೇಳದೇ ಹೋದವಳಿಗೆ ಇನ್ನೇನು ಶಿಕ್ಷೆ ಕೊಡಲಿ?<br /><br />"ಸಂತು ನೆನಪು ಬರ್ತಾ ಇದೆ ಬೀಚ್ ಹತ್ರ ಹೋಗ್ತೀನಿ"<br /> ಅಂತ ನಿನ್ನ ಸ್ನೇಹಿತೆಗೆ ಹೇಳಿ ಹೋದವಳು ಎಷ್ಟು ಹೊತ್ತಾದರೂ ವಾಪಸ್ಸು ಬಂದಿರಲಿಲ್ಲ ಅವಳು ಗಾಭರಿಗೊಂಡು ಫೊನ್ ಮಾಡಿದ್ದಳು ನಾನು ದಡಬಡಿಸಿ ಬೆಂಗಳೂರಿನಿಂದ ಓಡಿ ಬಂದಿದ್ದೆ... ನಮ್ಮ ಘಾಬರಿ ಧಾವಂತಗಳು ಕಡಲಾಳಡಲ್ಲಿ ನೆಮ್ಮದಿಯ ಚಿರನಿದ್ದೆಗೆ ಇಳಿದವಳಿಗೆ ಹೇಗೆ ಗೊತ್ತಾಗಬೇಕು ನೆನಪಾಗಿ ಕಾಡಬೇಡ ಇನ್ನು ನಿನ್ನವನಲ್ಲ ನಾನು....ಮೃಗನಯನೀhttp://www.blogger.com/profile/05798486490706460406noreply@blogger.com22tag:blogger.com,1999:blog-7077041789502080406.post-12599011118931107642007-07-06T02:28:00.000-07:002007-07-06T03:14:48.289-07:00ಮಳೆ-ನೆನೆಯುವ ಖುಷಿಕಡಲೂರಿನಲ್ಲಿ ಅದ್ಭುತ ಮಳೆ.ಗುಡುಗಿನ ತಬಲಕ್ಕೆ ಸಿಡಿಲಿನ ನರ್ತನ ಗಾಳಿಯ ಹಿಮ್ಮೇಳದಲ್ಲಿ ಮಳೆಯ ಹಾಡು.<br /><br /> ನೀವು ಮಳೆಲಿ ನೆಂದಿದೀರಾ? ಅಯ್ಯೋ ಯಾರು ನೆಂದಿರೋಲ್ಲ ಎಲ್ಲ ನೆಂದಿರ್ತಾರೆ ಅನ್ನಬೇಡಿ.. ಒಂದೇ ಸಮನೆ ಸುರಿಯೋ ಮಳೆಲಿ, ಒಂದು ಅರ್ಧ ಗಂಟೆ ಬೇರೇನು ಮಾಡದೇ, ಕುಣಿದೆ, ಕಿರುಚದೆ ಸುಮ್ಮನೇ ಮಳೆ ಸದ್ದು ಕೇಳುತ್ತಾ ನೆಂದಿದೀರಾ? ಇಲ್ಲ ಅನ್ನೋದಾದರೆ ಈ ಮಳೆಗಾಲದಲ್ಲಿ ಚಾನ್ಸ್ ಬಿಡಬೇಡಿ. ಮಳೆ ಸುರಿಯೊಕ್ಕೆ ಶುರುವಾಯಿತ? ಮನೆಯಿಂದ, ರೂಮಿನಿಂದ, ಆಫೀಸಿನಿಂದ ಹೊರಗೆ ಬನ್ನಿ. ಆಕಾಶದಿಂದ ಮುತ್ತಾಗಿ ಬೀಳುತ್ತಿರುವ ಮಳೆಗೆ ಮೈ ಒಡ್ಡಿ ಖುಶಿ ಆಗ್ತಿದೆ ಅಲ್ಲವ? ಉಹೂo ಕಿರುಚಲೇಬಾರದು. ಮೋಡ ಮೌನ ಒಡೆದಿರುವಾಗ ನಿಮ್ಮ ಮಾತಿಗೆ ಬೆಲೆ ಇಲ್ಲ. ಸುಮ್ಮನೇ ಕೇಳಿ,ಸುರಿವ ಧಾರೆಯ ಶಬ್ಧವನ್ನ ಗಾಳಿಯ ಪಿಸುಮಾತನ್ನ.. ಛಳಿ ಆಗ್ತಿದೆಯಾ?? ಪರವಾಗಿಲ್ಲ ರೀ, ಮನಸ್ಸು ಬೆಚ್ಚಾಗಾಗುತ್ತಿದೆಯಲ್ಲ.. ಹೊಟ್ಟೆಯೋಳಗಿನಿಂದ ಇಷ್ಟಿಷ್ಟೇ ಚಿಮ್ಮುತ್ತಿರುವ ನಡುಕ ಎರಡೇ ನಿಮಿಷಕ್ಕೆ ಹತೋಟಿಗೆ ಬರುತ್ತದೆ. ಹೀಗೆ ಇಂಚಿಂಚಾಗಿ ವ್ಯಾಪಿಸುವ ನಡುಕ ನಿಮಗೆ ಮಳೆಯ ಹುಚ್ಚು ಹಿಡಿಸದಿದ್ದರೆ ಕೇಳಿ...<br /><br /> ಈ ಕನ್ನಡ, ಹಿಂದಿ ಚಲನಚಿತ್ರಗಳ ಬಗ್ಗೆ ನನ್ನದೊಂದು complaint ಇದೆ ಯಾವುದಾದರೂ ಭುತಾನೋ, ದೆವ್ವಾನೋ, ಕರಾಳ ರಾತ್ರಿಯ ಮಾಂತ್ರಿಕನನ್ನೋ, ಇಲ್ಲ ಯಾವುದಾದರೂ ಅಪಘಾತವಾನ್ನೋ ತೋರಿಸುವಾಗ ಕಂಪಲ್ಸರಿ ಮಳೆ ಬರ್ತಿರಬೇಕು. ಮಳೆ ಇಲ್ಲದಿದ್ದರೆ ಅಪಘಾತವೇ ಆಗೋಲ್ಲ, ಭೂತ ದೆವ್ವ ಬರೋಲ್ಲ ಅನ್ನೋ ಹಾಗೆ. ಇಂಥದನ್ನ ನೋಡಿದರೆ ಜನ ಮಳೆನ ಹೇಗೆ ಪ್ರೀತಿಸುತ್ತಾರೆ? ಮಳೆ ಅಂದ ತಕ್ಷಣ ಹೆದರಿಕೊಂಡು ಹೊದ್ದುಕೊಂಡು ಮಲಗುತ್ತಾರೆ ಅಷ್ಟೇ.<br /><br /> ಈ ಬಯಲುಸೀಮೆಯವರಿಗೆ ಮಳೆ ಅಂದರೆ ವಿಚಿತ್ರ ಭಯ. ಒಂದು ದಿನ ನಾನು ನನ್ನ ಸ್ನೇಹಿತೆಯರು(ಎಲ್ಲ ಬಯಲುಸೀಮೆಯವರು) ಅವರ ಉರಿನಲ್ಲಿ ಯಾವುದೋ ಚಂದದ ಕೆರೆ ಇದೆ ಅಂತ ಅದನ್ನ ನೋಡೋಕ್ಕೆ ಹೊರಟೆವು ಹತ್ತು ಹದಿನೈದು ನಿಮಿಷ ನೆಡೆದಮೇಲೆ 'ಕಾಡು-ಕಾಡು' ಅಂತ ಕೂಗೊಕ್ಕೆ ಶುರು ಮಾಡಿದರು. ನನಗೆ ದೂರದವರೆಗೂ ಕಾಡು ಕಾಣಿಸುತ್ತಿರಲಿಲ್ಲ ಇವರು ನೋಡಿದರೆ ಕಾಡು ಕಾಡು ಅಂತ ಕುಣೀತಿದಾರೆ.. "ಎಲ್ರೆ ಕಾಡು?" ಅಂದ್ರೆ ನೋಡು ಅಂತ ಒಂದಷ್ಟು ಪೊದೆ, ಹತ್ತು ಹದಿನೈದು ಮರ ಬೆಳೆದಿರುವ ಕಡೆ ಬೊಟ್ಟು ಮಾಡುತ್ತಿದ್ದರು.ಇವರನ್ನು ನೋಡಿ ನಗಬೇಕೋ ಅಳಬೆಕೋ ಗೊತ್ತಾಗಲಿಲ್ಲ ನನಗೆ.<br /> ಹಾ ಎಲ್ಲಿಗೋ ಬಂದುಬಿಟ್ಟೆ ಸರಿ ಅಲ್ಲೇ ಪಕ್ಕದಲ್ಲಿದ್ದ ಕೆರೆ ಕಡೆ ಹೋಗುತ್ತಿದ್ದೇವೆ, ದಪ್ಪ ದಪ್ಪ ಹನಿಗಳು ಆಕಾಶದಿಂದ ಉದುರಲು ಶುರು. ಈ ಹುಡುಗೀರೆಲ್ಲ "ಅಯ್ಯೋ ಮಳೆ! ಬೇಗ ಬಾರೆ" ಅಂದುಕೊಂಡು ರೈಟ್ ಅಬೌಟ್ ಟರ್ನ್ ಅಂತ ಮನೆ ಕಡೆ ಒಂದೇ ಸಮ ಓಡಿದರು. ನನಗೆ ಕಕ್ಕಾಬಿಕ್ಕಿ. ನಾನು ಆರಾಮಾಗಿ ಮಳೆಲಿ ನೆಂದುಕೊಂಡು ನಾವೆಲ್ಲ ಉಳಿದುಕೊಂಡಿದ್ದ ನನ್ನ ಸ್ನೇಹಿತೆಯ ಮನೆ ಸೇರಿದೆ.<br /> "ಯಾಕ್ರೆ ಹಂಗೆ ಓಡಿ ಬಂದ್ರಿ" ಅಂದ್ರೆ<br /><br />"ಅಯ್ಯೋ ಮಳೆ ಬರೊಕ್ಕೆ ಶುರುವಾಯಿತು ಭಯ ಆಗೋಲ್ವಾ?" ಅಂದಳು ಶಿಲ್ಪ.<br /><br />ಭಯ ಯಾಕೆ ಅಂದ್ರೆ, ಮಳೆ ಬಂದಾಗ ಕರ್ನಾಟಕದಲ್ಲಿ ಸತ್ತವರ ಕಥೆಗಳನ್ನೆಲ್ಲಾ ಬಿಡದೆ ಕೊರೆದಳು 'ಅತಿವೃಷ್ಟಿಯಿಂದ ಉಂಟಾಗುವ ಹಾನಿಗಳು' ಅಂತ ನಾನು ಪ್ರಭoದ ಬರೀಬಹುದೇನೋ ಅಷ್ಟು ಮಳೆಯಿಂದ ಆಗುವ ಹಾನಿಗಳ ಬಗ್ಗೆ ಇನ್ನೊಬ್ಬಳು ಹೇಳಿದಳು. ನಾನು "ಅದೆಲ್ಲ ಸರಿ ನಿಮ್ಮೂರಲ್ಲಿ ಮಳೆ ಬರೋದೆ ಅಪರೂಪ. ಅದು ಏನು ತುಂಬಾ ಜೋರಾಗಿ ಬರುತ್ತಿರಲಿಲ್ಲ ನಾನು ನೆಂದುಕೊಂಡು ಬಂದೆನಲ್ಲ ಏನಾಯ್ತು?" ಅಂದ್ರೆ ನೀನು ಬಿಡು ಅಂದಳು. ನೀನೊಂದು ಮೆಂಟ್ಲೂ ನಿಂಗೆನು ಹೇಳಿದ್ರು ಪ್ರಯೋಜನ ಇಲ್ಲ ಅನ್ನೋ ಅರ್ಥ.<br /><br /> ಸರಿ ಅದು ಬಿಡಿ ಎಲ್ಲಿದ್ಡೀವಿ? ಮಳೆಲಿ ನೆನಿತಾ ಇದ್ದೀವಿ. ತೃಪ್ತಿಯಾಗಿ ನೆಂದಾಯಿತ? ವಾಪಸ್ಸು ರೂಮಿಗೆ, ಮನೆಗೆ, ಬನ್ನಿ. ನೀವು ಆಫೀಸಿನಲ್ಲಿದ್ರೆ ದಯವಿಟ್ಟು ರಜ ಹಾಕಿ ಮನೆಗೆ ಹೋಗಿ. ಬೆಚ್ಚಗಿನ ಬಟ್ಟೆ ಹಾಕಿಕೊಳ್ಳಿ ನಂತರ ಒಂದು ಅತ್ಯದ್ಭುತವಾದ ಕಾಫಿ ಮಾಡಿಕೊಂಡು ಒಂದು ದೊಡ್ಡ ಬಟ್ಟಲಿಗೆ ಅದನ್ನ ಸುರಿದುಕೊಂಡು ಅದರ ಹಿತವಾದ ಬಿಸಿ ಮೈ ಮನಗಳನ್ನು ವ್ಯಾಪಿಸುವಂತೆ ತೊಟ್ಟು ತೊಟ್ಟಾಗಿ ಹೀರುತ್ತಿದ್ದರೆ ಅದೇನೋ ಹೇಳುತ್ತಾರಲ್ಲ.... ಸ್ವರ್ಗಕ್ಕೆ ಮೂರೇ ಗೇಣು.ಮೃಗನಯನೀhttp://www.blogger.com/profile/05798486490706460406noreply@blogger.com11tag:blogger.com,1999:blog-7077041789502080406.post-54955854403794696752007-06-11T17:58:00.000-07:002007-10-30T20:06:11.230-07:00ಕಾಣದ ಕಡಲಿಗೆ ಹಂಬಲಿಸುವ ಮನ. . .ನನಗೆ ಅಹಂಕಾರ!<br /><br />ನನಗೇ ಅಹಂಕಾರ! ಅದಕ್ಕೆ ಹೀಗಾಯ್ತು, ಅಂತ ಗಟ್ಟಿಯಾಗಿ ನನಗೆ ನಾನೇ ಕೇಳೋ ಹಾಗೆ ಹೇಳಿಕೊಂಡೆ.<br />ಭಾವ ಗೀತೆ ಕೇಳಿದ್ರೆ ಮನಸ್ಸಿಗೆ ಸಮಾಧಾನ ಆದ್ರೂ ಆಗುತ್ತೇನೋ ಅನ್ನಿಸಿ ಡಿ ವಿ ಡಿ ಪ್ಲೇಯರ್ ಆನ್ ಮಾಡಿದ್ರೆ ಮೊದಲಿಗೇ ಅವನಿಗಿಷ್ಟವಾದ ಹಾಡು - "ತೊರೆದು ಹೋಗದಿರು ಜೋಗೀ..ಅಡಿಗೆರಗಿಹ ಈ ದೀನಳ ಮರೆತು..."<br />ಸಿಟ್ಟು ಬಂದು ಮುಂದಿನ ಬಟನ್ ಅಮುಕಿದೆ. ಆದ್ರೆ ಆವನ ನೆನಪು ಬರುತ್ತೆ ಅಂತ ಆ ಹಾಡು ಕೇಳದೇ ಇರೋದು ಪಲಾಯನವಾದ. ಹಾಡು ಅವನದೇನು ಸ್ವತ್ತಲ್ಲವಲ್ಲ! ಒಂದು ಹಾಡು ಅವನ ನೆನಪು ತರಿಸಿ ನನ್ನ ವಿಚಲಿತಗೊಳಿಸುತ್ತೆ ಅನ್ನೋದು ಸುಳ್ಳು ಅನ್ನಿಸಿ, ಮತ್ತೆ ಹಿಂದಿನ ಬಟನ್ ಒತ್ತಿದಳು.<br /><br />ಸಿಟ್ಟು ಯಾರ ಮೇಲೆ? ಅವನ ಮೇಲೋ?? ಅವನಿಗೆ ಅರ್ಥವಾಗದ ತನ್ನ ವ್ಯಕ್ತಿತ್ವದ ಮೇಲೋ??<br />ಇಷ್ಟು ವರ್ಷದ ಸ್ನೇಹದಲ್ಲಿ ಎಂತೆಂಥಾ ಕಷ್ಟದ ಗಳಿಗೆಯಲ್ಲೂ ಅವನು ನನಗೆ - ನಾನು ಅವನಿಗೆ ಆಸರೆಯಾಗಿದ್ದೀವಿ, ಒಬ್ಬರಿಗೊಬ್ಬರು ಸಮಾಧಾನ ಮಾಡಿದ್ದೀವಿ, ತುಂಬಾ ಭಾವುಕರಾಗಿ ಭಾವನೆಗಳನ್ನ ಹಂಚಿಕೊಂಡಿದ್ದೀವಿ, ಒಬ್ಬರಿಗೊಬ್ಬರು ವಾಸ್ತಾವಿಕತೆಯ ಪಾಠ ಹೇಳಿದ್ದೀವಿ, ಬದುಕನ್ನ ಸಮರ್ಥವಾಗಿ ರೂಢಿಸಿಕೊಳ್ಳೋದನ್ನ ಕಲಿತಿದ್ದೀವಿ ಅಂದುಕೊಳ್ಳುತ್ತಿದ್ದಾಗ.. "ಅಮ್ಮಾ.." ಅಂತ ಪುಟ್ಟಿ ಕರೆದಿದ್ದು ಕೇಳಿಸಿತು. ಅವಳು ಕಟ್ಟಿದ ಆಟದ ಮನೆ ನೋಡಿ ಇವಳ ತಂದೇನೋ ತಾಯಿನೋ ಸಿವಿಲ್ ಎಂಜಿನೀರ್ ಇರ್ಬೇಕು ಅನ್ನಿಸಿತು."ಚೆನ್ನಾಗಿದೆ ಕಂದ, ಆದ್ರೆ ಆ ಮರ ರಸ್ತೆ ಮಧ್ಯ ಇದೆ ಅನ್ಸುತ್ತೆ , ಮನೆ ಪಕ್ಕದಲ್ಲಿಡು" ಅಂದೆ.<br /><br />ಮಗು ದತ್ತು ತೊಗೋತೀನಿ ಅಂದಾಗ ಮನೆಯವರೆಲ್ಲ ಎಷ್ಟು ಕೂಗಾಡಿದರು! ಅಪ್ಪ ಮಾತು ಬಿಟ್ಟರು .ಮದುವೆನೇ ಆಗದೇ ಮಗು ಹುಚ್ಚು ಯಾಕೆ ನಿಂಗೆ ? ಅಂತ ಅಮ್ಮ ಎಷ್ಟು ಬೈದರು.. ಇವನು ನನಗೆ ಒತ್ತಾಸೆಯಾಗಿ ನಿಲ್ಲದಿದ್ದರೆ ಮಗು ದತ್ತು ತೊಗೋಳಕ್ಕಾಗುತ್ತಿತ್ತ ನನಗೆ? ಅನ್ನೋದು ಜ್ಞಾಪಕಕ್ಕೆ ಬಂದು, "ಎಷ್ಟು ಒಳ್ಳೆಯವನಲ್ಲವ." ಅಂದುಕೊಂಡೆ.<br /><br />ಮೊದಲೆಲ್ಲಾ ಎಷ್ಟು ಜಗಳ ಆಗಿದೆ! ಆವಾಗಲೆಲ್ಲ ಜಗಳದ ನಂತರದ ಮೌನ ರಾಜಿಗೆ ಹಾತೊರೀತಿತ್ತು. ಆದರೆ ಮೊನ್ನೆ ಮೌನವಾಗಿ ಅಕ್ಕಪಕ್ಕದಲ್ಲೇ ಅರ್ಧಗಂಟೆ ಕೂತಿದ್ವಲ್ಲ ! ಮೌನಾನೂ ಜಗಳ ಆಡ್ತಿದೆ ಅನ್ನಿಸಿ ಹಿಂಸೆ ಆಗ್ತಿತ್ತು ನಂಗೆ. ಅವನು ಅಲ್ಲಿಂದ ಎದ್ದು ಹೋಗಿ ಒಳ್ಳೆಯ ಕೆಲಸ ಮಾಡಿದ ಅನ್ನಿಸಿತು.<br /><br />ಅವನು ಪುಸ್ತಕಗಳನ್ನು ತುಂಬಾ ಪ್ರೀತಿಸ್ತಿದ್ದ.. ಯಾವಾಗಲು ಶಾಪಿಂಗೂ, ಸಿನೆಮಾ ಅಂತ ತಿರ್ಗತಿರ್ತೀಯಾ ಈ ಪುಸ್ತಕ ಓದು ಅಂತ ಕಾರಂತರ 'ಬೆಟ್ಟದ ಜೀವ' ಕೈಯಲ್ಲಿಟ್ಟಿದ್ದ. ಆಮೇಲೆ ನಾನಂತೂ ಪುಸ್ತಕಗಳಲ್ಲೇ ಮುಳುಗಿ ಹೋದೆ. ಆಮೇಲೇನು ಪುಸ್ತಕಗಳ ಬಗ್ಗೆನೇ ಮಾತಾಡಿದ್ದು, ಭೈರಪ್ಪ, ಕಾರಂತ, ಬೀ ಜಿ ಎಲ್ ಸ್ವಾಮಿ, ಮಾಸ್ತಿ, ಗೊರೂರು, ಕುವೆಂಪು.. ಇವರುಗಳ ಮಧ್ಯಾನೇ ಓಡಾಡಿದ್ದು.<br /><br />ಈಗ್ಯಾಕ್ ಹಿಂಗಾಡ್ತಿದಾನೆ? ದುಬೈ ನಿಂದ ಬಂದವನು ಸೀದ ನನ್ನ ಮನೆಗೆ ಬಂದ. ಅವನು ನನ್ನ ಕಡೆಗೆ ನೋಡಿದ ನೋಟದಲ್ಲೇ ಅನ್ನಿಸಿತು ನನ್ನ ಬಗೆಗೆ ಇರೋ ಭಾವ ಬಾರಿ ಸ್ನೇಹದ್ದ್ಡಾಗಿ ಉಳಿದಿಲ್ಲ, ಮತ್ತೆ ಅವನನ್ನು ಸ್ನೇಹದ ಟ್ರಾಕ್ಗೆ ತರೊಕ್ಕೆ ಎರಡು ದಿನ ಆದ್ರೂ ಬೇಕು ಅಂತ.<br /><br />ಮಕ್ಕಳು ಅಂದರೆ ಅವನಿಗೆ ಪ್ರಾಣ. ತನ್ನ ಅಣ್ಣನ ಮಗು ಇನ್ನೂ ತೊಟ್ಟಿಲಲ್ಲಿರುವಾಗಲೇ ಎಷ್ಟು ಮಾತಾಡಿಸುತ್ತಿದ್ದ, ಆಟ ಆಡಿಸುತ್ತಿದ್ದ .. 'ಜನ ಗಣ ಮನ', 'ಸಾರೆ ಜಹಾನ್ಸೆ ಅಛ್ಚಾ' ಹೇಳಿ ಮಲಗಿಸುತ್ತಿದ್ದ ! ಇವನನ್ನು ಹೊರಗಡೆಯವರು ನೋಡಿದರೆ ಮೆಂಟ್ಲೂ ಅಂತ ಅಂದುಕೋತಿದ್ರು. ಯಾರಾದರೂ ಯಾಕೆ ಈ ಹಾಡು ಹಾಡಿ ಮಲಗಿಸುತ್ತೀಯ ? ಅಂದ್ರೆ "ಚಿಕ್ಕ ವಯಸ್ಸಿನಿದಲೇ ದೇಶ ಭಕ್ತಿ ಬರಲಿ" ಅಂತ ಅನ್ನುತ್ತಿದ್ದ.ಆದ್ರೆ ನನ್ನ ಹತ್ರ ಮಾತ್ರ 'ನಂಗೆ ಅವೆರೆಡು ಹಾಡು ಬಿಟ್ರೆ ಬೇರೆ ಯಾವ ಹಾಡು ಪೂರಾ ಬರೋಲ್ಲ ಕಣೆ' ಅಂದಿದ್ದ.ಅವರ ಅಣ್ಣನ ಮಗು ಅಂತೂ ಇವನನ್ನೇ ಅಪ್ಪ ಅನ್ನುತ್ತಿತ್ತು. ಈಗ ನನ್ನ ಮಗುನೂ ನನಗಿಂತ ಹೆಚ್ಚಾಗಿ ಅವನೇ ಪ್ರೀತಿಸುತ್ತಾನೆ ಅನ್ನಿಸುತ್ತೆ. ಪುಟ್ಟಿಯಂತೂ ಇವನನ್ನ ತುಂಬಾ ಹಚ್ಚಿಕೊಂಡುಬಿಟ್ಟಿದೆ . ಪುಟ್ಟಿನ ದತ್ತು ತಗೊಂಡಾಗ ಯಾವತ್ತೂ ಮಗುವಿಗೆ ತಾನು ದತ್ತು ಮಗು ಅನ್ನೋ ಭಾವನೆ ಬರದ ಹಾಗೆ ನೋಡಿಕೊ ಅಂತ ಭೋದಿಸಿದ್ದ.<br /><br />ಈಗ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾನೆ ಇಲ್ಲ. ಅನ್ಯ ಮನಸ್ಕನಾಗಿ ಏನೇನೋ ಮಾತಾಡುತ್ತಿದ್ದ. ಅಲ್ಲಿನ ಮುಸ್ಲಿಮ್ ಗಂಡಸರ ಬಗ್ಗೆ, ಯಾವಾಗಲೂ ಬುರಖಾದಲ್ಲಿ ಮುಳುಗಿರೋ ಅವರ ಹೆಂಡತೀರ ಬಗ್ಗೆ, ಅಲ್ಲಿ ಚೀಪಾಗಿ ಸಿಗೋ ಚಿನ್ನದ ಬಗ್ಗೆ- ಹೀಗೆ ಏನೇನೋ... ನನಗೆ ಹಿಂಸೆ ಆಗುತ್ತಿತ್ತು. "ದಯವಿಟ್ಟು ಕಣೋ , ಅದೇನು ಮನಸ್ಸಿನಲ್ಲಿದೆಯೋ ಹೇಳು. ಸುಮ್ಮನೇ ಏನೇನೋ ಮಾತಾಡಬೇಡ ನೀ ನಾಟಕ ಮಾಡೋದನ್ನ ನನ್ನಕೈಲಿ ನೋಡಕ್ಕಾಗಲ್ಲ "ಅಂದೆ.<br /><br />ಅವನಿಗೆ ದುಂಡು ಮಲ್ಲಿಗೆ ತುಂಬಾ ಇಷ್ಟ ಆಗೋದು. ಇನ್ನೂರು ಮುನ್ನೂರು ಗ್ರಾಂ ಬಿಡಿ ದುಂಡು ಮಲ್ಲಿಗೆ ತಂದು ಅತ್ತಿಗೆಗೆ ಕೊಟ್ಟು 'ಅತ್ತಿಗೆ ಹೂಕಟ್ಟಿ ದೇವರಿಗೆ ಇಟ್ಟು, ನೀವು ಮುಡುಕೊಳಿ, ಅಮ್ಮನಿಗೂ ಕೊಡಿ.' ಅಂತಿದ್ದನ್ನ ನಾನೇ ನೋಡಿದ್ದೆ. ಇನ್ನು ನನ್ನ ಮನೆಗೆ ಬಂದರೆ ಅವನೇ ದೇವರ ಮನೆಗೆ ಹೋಗಿ ಅಲ್ಲಿ ನಾನು ಹಾಕಿರೋ ರಂಗೋಲಿ ತುಂಬಾ ಸಾವಧಾನವಾಗಿ ದುಂಡು ಮಲ್ಲಿಗೆ ತುಂಬಿಸಿ 'ನೋಡೇ! ಎಷ್ಟು ಚೆನ್ನಾಗಿ ಕಾಣುತ್ತೇ ನಿನ್ನ ರಂಗೋಲಿ, ನನ್ನ ದುಂಡು ಮಲ್ಲಿಗೆ ಹೂವಿಲ್ಲ ಅಂದ್ರೆ ಚೆನ್ನಾಗಿ ಕಾಣೋದೇ ಇಲ್ಲ' ಅಂತ ತನ್ನ ಬೆನ್ನು ತಾನೇ ತಟ್ಟಿಕೊಂಡಿದ್ದ.<br /><br />"ಮನೇಲಿ ಹುಡುಗಿ ಹುಡುಕ್ತಿದಾರೆ ಕಣೇ, ನಿನ್ನನ್ನ ಎಲ್ಲಿ ಕಳೆದುಕೊಂಡು ಬಿಡ್ತೀನೋ ಅಂತ ಭಯ ಆಗ್ತಿದೆ. ನಾನು ಮದುವೆ ಆದಮೇಲೆ ನಿನ್ನ ಜೊತೆ ಹೀಗೆ ಇರಕ್ಕಾಗುತ್ತಾ?? ಮನಸ್ಸು ಬಂದಾಗಲೆಲ್ಲ ನಿನ್ನ ಮನೆಗೆ ಬಂದು ಗಂಟೆಗಟ್ಲೆ ಮಾತಾಡಿ ಬದ್ನೇಕಾಯಿ ಬಜ್ಜಿ , ಅಕ್ಕಿ ರೊಟ್ಟಿ, ಆಲೂ ಪರಾಟಾ, ಚಿನೀಸ್ ನೂಡಲ್ಸ್ ಅಂತ ಅಡುಗೆಗಳಲ್ಲಿ ಎಕ್ಸ್ಪೇರಿಮೆಂಟ್ ಮಾಡೋಕ್ಕಾಗುತ್ತಾ?? ನಿನ್ನ ಮಗೂನ ಹೀಗೆ ಮುದ್ದುಗರೆಯೊಕ್ಕಾಗುತ್ತಾ?? "<br />ಅಂತ ನನ್ನ ಕಣ್ಣುಗಳಲ್ಲಿ ಉತ್ತರ ಹುಡುಕಿದ. ಆದರೆ ನನ್ನ ಕಣ್ಣುಗಳು ಪ್ರಶ್ನೆ ಕೇಳುತ್ತಿದ್ದವು.. ಎಷ್ಟು ಸರ್ರ್ ಅಂತ ಸಿಟ್ಟು ಹತ್ತಿತು ಅವನಿಗೆ.<br /><br />" ನಿನಗೆ ಅಹಂಕಾರ ಕಣೆ ಯಾಕೆ ಎಲ್ಲದನ್ನು ನನ್ನ ಬಾಯಲ್ಲೇ ಹೇಳಿಸಬೇಕು ಅಂತೀಯ ಅರ್ಥಮಾಡ್ಕೋ ನನ್ನ! ಸರಿ. ನಾನೇ ಹೇಳ್ತೀನಿ ಕೇಳು, ಹೌದು ನಿನ್ನ ಪ್ರೀತಿಸುತ್ತೀನಿ ನಾನು ನೀನು ನಂಗೆ ಪೂರ್ತಿ ಪೂರ್ತಿಯಾಗಿ ಬೇಕು. ಮದುವೆ ಆಗ್ತೀಯಾ ನನ್ನ?" ಅಂದ.<br /><br />ಮೂರು ವರ್ಷದ ಹಿಂದೆ ನಾನು ಇವನಿಗೆ ಕೇಳಿದ ಮಾತನ್ನು ನನಗೆ ವಾಪಸ್ಸು ಕೇಳ್ತಿದಾನೆ ಅನ್ನಿಸಿ ಅವನ ಮುಖ ನೋಡಿದೆ.<br />"ಅಪ್ಪ ಅಮ್ಮನ ಚಿಂತೆ ಮಾಡ್ಬೇಡ ನಿಮ್ಮ ಮನೆಯೊರನ್ನ ಒಪ್ಪಿಸೋ ಜವಾಬ್ದಾರಿ ನಂದು ಹೇಗಾದ್ರೂ ಮಾಡಿ ಒಪ್ಪಿಸುತ್ತೀನಿ" ಅಂದ .<br /><br />ಅಪ್ಪ ಅಮ್ಮನ್ನ ಹೇಗಾದ್ರೂ ಮಾಡಿ ಒಪ್ಸಾಣ ಕಣೋ.. ನಾನು ಆವತ್ತು ಅಂದಿದಕ್ಕೆ -<br />"ಹೇಗೆ ಒಪ್ಪಿಸುತ್ತಿಯ? ನಿಮ್ಮ ಜಾತಿಯವರಿಗೂ ನಮ್ಮ ಜಾತಿಯವರಿಗೂ ನಾವೇ ಮೇಲೂ ಅನ್ನೋ ಹಮ್ಮೂ... ನಮ್ಮ ಮನೇಲಿ ಶಿವಾಪೂಜೆ ನಿಷಿದ್ಧ, ನಾವು ಶ್ರೀ ವೈಷ್ಣವರು ಅನ್ನೋ ಅಹಂಕಾರ.. ನಿಮ್ಮ ಮನೇಲಿ ಶಿವನನ್ನು ಬಿಟ್ಟರೆ ಇಲ್ಲ ಅನ್ನುತ್ತಾರೆ, ಲಿಂಗಾಯಿತರು ಬ್ರಾಹ್ಮಣರಿಗಿಂತ ಶ್ರೇಷ್ಠ ಅನ್ನೋ ಭಾವನೆ. ಹೇಗಾದ್ರೂ ಅಂದ್ರೆ ಹೇಗೆ? ಅಂತ ಯೋಚಿಸಿದ್ದೀಯ? ಅಪ್ಪ ಅಮ್ಮನಿಗೆ ನೂವು ಮಾಡೋದು ಬೇಡ"<br />ಮೂರು ವರ್ಷದ ಹಿಂದೆ ಅಂದದ್ದು ನೆನಪಾಗಿ ಅವನ ಕಂಗಳನ್ನೇ ದಿಟ್ಟಿಸಿದೆ.<br />"ನೀ ಹಾಗೆ ನನ್ನ ನೋಡಬೇಡ ಏನಾದ್ರೂ ಮಾತಾಡು ಏನ್ ತಿಳ್ಕೊಳ್ಳಲಿ ನಾನು" ಅಂದ.<br /><br />ಮೊದಮೊದಲು ಅವನನ್ನು ತನ್ನ ಕಣಿವೆಯಾಳಕ್ಕೆ ಇಳಿಸಿಕೊಂಡ ಹೆಣ್ಣಿನ ಬಗ್ಗೆ ಹೇಳಿಕೊಂಡಾಗ ನನಗೇನಾದರೂ ಅನ್ನಿಸಿತ್ತಾ ?? ಅನ್ನಿಸಿದ್ದು ಒಂದೇ.. ಸಧ್ಯ ಇವನು ದುಡ್ಡು ಕೊಟ್ಟು ಯಾರ ಹತ್ತಿರವೂ ಹೋಗಲಿಲ್ಲವಲ್ಲ ಅಂತ.ಅವಳು ಅಮೇರಿಕನ್ ಆದ್ದರಿಂದ ಏನು ಅನ್ನಿಸಲಿಲ್ಲವ? ಅಂತ ಮತ್ತೆ ಕೇಳಿಕೊಂಡಳು. ಅವಳು ಇವನಿಗೆ "dont kiss me - ಪ್ರೀತಿ ಇಲ್ಲದಿರೊವಾಗ ಕಿಸ್ಸಿಂಗ್ ಬೇಕಿಲ್ಲ" ಅಂದಿದ್ದಳಂತೆ.<br /><br /><br />ಆದರೆ ಪ್ರೀತಿಯೇ ಇಲ್ಲದಿರೋವಾಗ ಅಂತಹ ಸಂಬಂಧ ಹೇಗೆ ಸಾಧ್ಯವಾಗುತ್ತೆ? ಅದೂ ಇಷ್ಟೆಲ್ಲಾ ಯೋಚಿಸೋ ಹುಡುಗನಿಗೆ ಅಂತಹ ಜರೂರತ್ತಾದರೂ ಏನಿತ್ತು ಅನ್ನಿಸಿತು. ಈ ಪ್ರಶ್ನೆಯನ್ನೇ ಕೇಳಿದ್ದಕ್ಕೆ-<br /><br />"ಊಟಕ್ಕೆ ಕರೆದಿದ್ದಳು, ಹಾಗೆ ಈ ಊಟವನ್ನೂ ಮಾಡಿಸುತ್ತಾಳೆ ಅಂತ ಗೊತ್ತಿರಲಿಲ್ಲ. ಅವಳ ಅವತ್ತಿನ ಜರೂರತ್ತಿರಬಹುದು ನಾನು, ಇಲ್ಲ ಭಾರತದ ಗಂಡಸುತನ ಹೇಗಿರುತ್ತೆ ಅಂತ ನೋಡೋ ಆಸೆ ಇರಬಹುದು, ಅದೇನೇ ಆಗಲಿ ನಾನು ಪರಿಪೂರ್ಣ ಗಂಡು ಅನ್ನೋ ಭಾವನೆ, ಅಹಂಕಾರ ತರಿಸಿದ್ದೇ ಅವಳು" ಅಂದವನ ಮೇಲೆ ಭಯಂಕರ ಸಿಟ್ಟು ಬಂದಿತ್ತು.<br /><br />"ಮಿಲನ ಅಂದರೇನೇ ಎರಡು ಒಂದಾಗೋದು. ಎರಡು ಒಂದರೊಂದರಲ್ಲಿ ಮಿಳಿತವಾಗೋದು. ಐಕ್ಯದಲ್ಲಿ ಅಹಂಕಾರಕ್ಕೆ ಅರ್ಥ ಎಲ್ಲಿ ನಾನು ವಿಜ್ರಂಭಿಸಿದೆ ಅನ್ನೋವಾಗಲೇ ಅಹಂಕಾರ ಬರೋದು ಮೇಲನ ಬರೀ ವಿಜ್ರಂಭಣೆ ಆದರೆ ಅದು ಮಹೋತ್ಸವವಾಗೋಲ್ಲ, ಬರೀ ಕಾಮ ಅನ್ನಿಸಿಕೊಳ್ಳುತ್ತೆ. ಮುಗಿಲು ಕಣಿವೆಯೊಳಕ್ಕೆ ಮಳೆಯಾಗಿ ಇಳಿಯುತ್ತೆ, ನೆಲವನ್ನು ತಣಿಸುತ್ತೆ, ತಣಿಸಿ ತಾನು ಸುಖಿಸುತ್ತೆ. ಕಣಿವೆಯನ್ನ ಮಳೆಯಿಂದ ತುಂಬಿಸಿ ವಿಜ್ರಂಭಿಸುತ್ತೇನೆ ಅನ್ನೋ ಹುಂಬತನಕ್ಕೆ ಇಳಿಯೋಲ್ಲ" ಅಂತ ಆವೇಶದಲ್ಲಿ ಮಾತಾಡಿದ ಮೇಲೆ, ಮಾತಾಡಿದ್ದು ಹೆಚ್ಚಾಯಿತೇನೋ,ಇವೆಲ್ಲ ಅನುಭವವಿಲ್ಲದ ಪುಸ್ತಕದ ಬದನೇಕಾಯಿಯಾಗಿರುವ ತನ್ನ ಮಾತುಗಳೇನೋ ಎಂದು ಅನ್ನಿಸಿದರೂ ಕಣ್ಣುಗಳಲ್ಲಿನ ಕಾನ್ಫಿಡೆನ್ಸ್ ಬಿಟ್ಟುಕೊಡದೇ ಅವನನ್ನೇ ದಿಟ್ಟಿಸುತ್ತಿದ್ದರೆ ಅವನೂ ತುಂಬಾ ಹೊತ್ತು ದಿಟ್ಟಿಸಿ-<br />"ನೀನು, ನಿನ್ನ ಮೊದಲ ಮಿಲನ ಮಹೋತ್ಸವದ ಬಗ್ಗೆ ಹೇಳುತ್ತೀಯ ಅದು ಆದಾಗ?? ಅಂದಿದ್ದ. ಧ್ವನಿಯಲ್ಲಿ ವ್ಯಂಗ್ಯವಿತ್ತಾ? ಗೊತ್ತಿಲ್ಲ..<br /><br />"ತಿಂಗಳಿಗೆ ಒಂದು ಲಕ್ಷ ಸಂಬಳ, ಓಡಾಡೋಕ್ಕೆ ಕಾರು, ಇಂದ್ರನಗರದಲ್ಲಿ ಮನೆ, ದಿನದ ಇಪ್ಪತ್ತುನಾಲ್ಕು ಗಂಟೆ ಇಂಟರ್ನೆಟ್ಟು ಫೆಸಿಲಿಟಿ, ಎಲ್ಲದಕ್ಕಿಂತ ಹೆಚ್ಚಾಗಿ ನಿನ್ನ ಕನಸುಗಳನ್ನು ನನ್ನ ಕನಸಾಗಿಸಿಕೊಂಡಿರುವ ಮತ್ತು ಎಲ್ಲರಿಗಿಂತ ನಿನ್ನನ್ನು ಹೆಚ್ಚಾಗಿ ಅರ್ಥ ಮಾಡಿಕೊಂಡಿರುವ ನಾನು. ಇನ್ನೇನು ಬೇಕು ಹೇಳೇ ನಿಂಗೆ? ನಿನಗೂ ಬಹಳಷ್ಟು ಹುಡುಗರು ಸ್ನೇಹಿತರಿದ್ದಾರೆ , ಯಾರಾದರೂ ನನಗಿಂತ ನಿನ್ನ ಅರ್ಥಮಾಡಿಕೊಂಡೋರು ಇದ್ದಾರ? ಇದ್ದರೆ ಹೇಳು. ನಾವು ಒಂದು ದಿನ ಆದ್ರೂ ಒಬ್ಬರನ್ನೊಬ್ಬರು ಇಂಪ್ರೆಸ್ ಮಾಡೋಕ್ಕೆ ಪ್ರಯತ್ನಿಸಿದ್ದೀವ? ನೀನು ನೀನಾಗಿ ಬರಿ ವಸುಂಧರೆಯಾಗಿ, ನಾನು ನಾನಾಗಿ ಬರೀ ರಾಜೇಶನಾಗಿ ಇನ್ಯಾರ ಜೊತೆಗಾದರೂ ಇರೋಕ್ಕೆ ಸಾಧ್ಯವಾಗಿದೆಯಾ? "<br /><br />"ನೀ ಪ್ರೋಪೋಸ್ ಮಾಡ್ತೀಡೀಯಾ?" ಅಂತ ನಾನು ಕೇಳಿದೆ<br /><br />"ಇಲ್ಲ ಕಣೆ, ನಾಳೆ ನಮ್ಮ ಆಫೀಸಿನಲ್ಲ್ಲಿ ಭಾಷಣ ಇದೆ. ಅದಕ್ಕೆ ಪ್ರಾಕ್ಟೀಸ್ ಮಾಡ್ತೀದೀನಿ." ಅಂದವನಿಗೆ ಸಿಟ್ಟು ನೆತ್ತಿಗೇರಿತ್ತು.<br /><br />ಆದರೆ ನನ್ನ ಬದುಕಿನ ದಾರಿಯೇ ಬೇರೆಯಲ್ಲವ? ನಾನು ಇವನನ್ನ ಮದುವೆಯಾದರೆ ಅತ್ಯದ್ಭುತ ದಂಪತಿಗಳು ಅನ್ನಿಸಿಕೊಳ್ಳಬಹುದು. ಇವನು ನನ್ನಲ್ಲಿ ಮುಳುಗಬಹುದು, ನಾನು ಇವನ ಬೆಚ್ಚನೆಯ ಆಸರೆಯಲ್ಲಿ ತೇಲಬಹುದು..ಆದರೆ ನನಗೆ ಬೇಕಾಗಿರೋದು ಏನು? ಎಲ್ಲ ಹುಡುಗಿಯರಂತೆ ಮದುವೆಯಾಗಿಬಿಡೋದ? ಛೇ ಎಲ್ಲರನ್ನು ಯಾಕೆ ತರಲಿ ! ಹೋಲಿಕೆಗಳನ್ನು ಮಾಡಿಕೊಳ್ಳಬಾರದು. ನಾನೇ ಹೆಚ್ಚು ಎಲ್ಲರಿಗಿಂತ ಅನ್ನೋ ಅಹಂಕಾರ ಬರುತ್ತೆ.. ಆದರೆ ನನಗೆ ಬೇಕಾಗಿರೋದೇನು? ಗೊತ್ತಾಗುತ್ತಿಲ್ಲ.. ಮದುವೆಯಂತೂ ಬೇಡ ಅನ್ನಿಸುತ್ತಿದೆ.. ಆದರೆ ಇದನ್ನು ಅವನಿಗೆ ವಿವರಿಸಲಾಗಲಿಲ್ಲ.<br /><br />'ಇಲ್ಲ ನನಗೆ ಮದುವೆ ಬೇಡ' ಅಂದೆ. ಅವನೂ ಒಳಗೊಳಗೆ ಕುದ್ದು ಹೋಗುತ್ತಿರುವುದು ಗೊತ್ತಾಗುತ್ತಿತ್ತು . ಅರ್ಧ ಗಂಟೇ ಏನೂ ಮಾತಾಡಾದೇ "ನಿನಗೆ ಅಹಂಕಾರ!" ಎಂದಷ್ಟೇ ಹೇಳಿ ಎದ್ದು ಹೋದ. ನನಗೆ ಅಹಂಕಾರವೇ?<br />ಕೇಳಿಕೊಳ್ಳುತ್ತಿದ್ದೇನೆ ಪ್ಲೇಯರ್ನಲ್ಲಿ - ಕಾಣದಾ ಕಡಲಿಗೇ ಹಂಬಲಿಸಿದೇ ಮನಾ... ಅಂತ ಅಶ್ವಥ್ ರು ಹಾಡುತ್ತಿದ್ದಾರೆ.....ಮೃಗನಯನೀhttp://www.blogger.com/profile/05798486490706460406noreply@blogger.com23tag:blogger.com,1999:blog-7077041789502080406.post-69298061174083930342007-06-05T18:28:00.000-07:002007-06-06T00:05:51.946-07:00ಗಾಡಿ- ಪತ್ರ- ಮೊಬೈಲು..ಕಾಲೇಜಿನಲ್ಲಿ ಎಂತದ್ದೋ ಕಾನ್ಫರೆನ್ಸು ನಮಗೆಲ್ಲ ಒಂದು ವಾರ ರಜೆ. ಮನೆಗೆ ಬಂದೆ . ಊಟ- ಮಾತು ಆದ ಮೇಲೆ ಅಪ್ಪ ಏನೇನು ಹೊಸದು ತಂದಿದ್ದಾರೆ ಅಂತ ಚೆಕಿಂಗ್ ಮಾಡಿದೆ. ಬಂದ ರಿಸಲ್ಟು ನಾಲ್ಕು ಸೀಡಿ, ಎರಡು ಪುಸ್ತಕ...<br /><br />ಮೂರು ಸೀಡಿಗಳು ಶಾಸ್ತ್ರೀಯ ಸಂಗೀತದ್ದು. ನಾಲ್ಕನೆಯದು ಅಶ್ವಥರ ಸಂಗೀತದಲ್ಲಿ, ಕೆ.ಎಸ್.ನ ಅವರ ಮೈಸೂರು ಮಲ್ಲಿಗೆ! ನನಗೆ ಕುಣಿಯೋಷ್ಟು ಖುಷಿ.<br /><br />ಬಳೆಗಾರ ಚೆನ್ನಯ್ಯ ಬಂದು, "ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು" ಅಂತ ಶುರು ಮಾಡಿ "ಹೋಗಿ ಬನ್ನಿರಿ ಒಮ್ಮೆ ಕೈಮುಗಿದು ಬೇಡುವೆನು ಅಮ್ಮನಿಗೆ ನಿಮ್ಮದೇ ಕನಸು" ಎಂದು ಮುಗಿಸುವಾಗ ನನಗೇ ದುಃಖ ಮಡುವುಗಟ್ಟಿತ್ತು. ರಾಯರಂತು ಹೆಂಡತಿಯನ್ನ ನೋಡೋಕೆ ತಕ್ಷಣ ಹೊರಟಿರಬೇಕು..<br /><br /><br />ತವರು ಮನೆಯ ಸುದ್ದಿ ತಿಳೀಯೋಕೆ ಕಾತುರಳಾಗಿರುವ ಮಗಳು .. ಮಗಳು ಮೊಮ್ಮೊಕ್ಕಳ ವಿಷಯವನ್ನ ಕೇಳೋಕೆ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ತಂದೆ ತಾಯಿ ..ಮದುವೆಯಾಗಿ ಬೇರೆ ಬೇರೆ ಊರು ಸೇರಿರುವ ಅಕ್ಕತಂಗಿಯರು, ಒಡಹುಟ್ಟಿದವರ ವಿಷಯವನ್ನ ತಿಳಿಯೋಕೆ ಪಡುವ ಧಾವಂತಗಳು... ದೂರದ ಊರಲ್ಲಿ ಓದುತ್ತಿರುವ ಮಗನ ಬಗ್ಗೆ ಚಿಂತಿಸುವ ಅಮ್ಮ, ಇವರಿಗೆಲ್ಲ ಆಗ - ಅಂದರೆ ತುಂಬಾ ಹಿಂದೆ ಊರಿಂದ ಊರಿಗೆ ಸುತ್ತಾಡುತ್ತಿದ್ದ ಈ ಬಳೆಗಾರರು ಅಥವ ಊರಿಗೆ ಯಾವುದೋ ಕೆಲಸದ ಮೇಲೆ ಬಂದಿರುವ ಆ ಊರಿನ ಜನ ಅಥವ ಆಳುಗಳು ಇವರುಗಳೇ ಸಂದೇಶವಾಹಕರು... messengers.<br /><br />ಇವರುಗಳ ಬರವನ್ನ ಜನ ಹೇಗೆ ಚಾತಕ ಪಕ್ಷಿಯಂತೆ ಕಾಯುತ್ತಿರಬಹುದು ಅಂತ ಕಲ್ಪಿಸಿಕೊಂಡು, ನಾನೇ ಕಾಯುತ್ತಿರುವ ಹಾಗೆ ಅನ್ನಿಸಿ ರೋಮಾಂಚನವಾಗುತ್ತದೆ.. ಕಲ್ಪನೆಯೇ ಇಷ್ಟು ರೋಮಾಂಚನಗೊಳಿಸಿದರೆ ನಿಜವಾದ ಅನುಭವ ಹೇಗಿರಬಹುದು?<br /><br />ಈಮೇಲ್ ಮೊಬೈಲ್ ಯುಗದವರಾದ ನಮಗೆ ಸಂದೇಶವಾಹಕರ ಬಗ್ಗೆ, ಗಾಡಿ ಪ್ರಯಾಣಗಳ (ಎತ್ತಿನ ಗಾಡಿ) ಬಗ್ಗೆ ಒಂದು ಕಲ್ಪನೆ ಹುಟ್ಟಿದರೆ ಅದಕ್ಕೆ ಕೆ.ಎಸ್.ನ ಅವರ ಕವಿತೆ, ಕುವೆಂಪು, ಬೈರಪ್ಪ, ಅನಂತಮೂರ್ತಿಯವರ ಕಾದಂಬರಿಗಳೇ ಕಾರಣ.. ನಮ್ಮ ಅಪ್ಪ ಅಮ್ಮಂದಿರೆ ಈ ಮೆಸ್ಸೆಂಜರ್ಸ್ನ ನೋಡಿಲ್ಲ. ಅವರದು ಪತ್ರಗಳು , ಟ್ರಂಕ್ ಕಾಲ್ ಗಳ ಕಾಲ...<br /><br />ಪತ್ರಗಳು ಪರ್ವಾಗಿಲ್ಲ , ಅವು ಒಂಥರ exitementಏ! ನಮ್ಮಗಳಿಗೆ ಆ exitemenಟು ಇಲ್ಲ. ಹೋಗ್ಲಿ ನಾನು ಪತ್ರ ಬರೆದರೆ ನನಗೆ ಉತ್ತರ ಆದ್ರೂ ಬರೀಬೇಕಲ್ಲ ಅನ್ನಿಸಿ ಮೂರು ಜನ ಸ್ನೇಹಿತರಿಗೆ ಪತ್ರ ಬರೆದೆ. ಮೂರು ಜನಾನು ಫೋನ್ ಮಾಡಿ ನಿನ್ನ ಲೇಟರ್ ಸಿಕ್ಕಿತು ಅಂದ್ರು. ಒಬ್ಬಳು "ಸಕತ್ತಾಗಿ ಬರೀತಿಯ ಕಣೆ" ಅಂದ್ರೆ ಇನ್ನೊಬ್ಬ "ಏನು ಸೆಂಟಿಯಾಗಿ ಬರ್ದಿದೀಯಾ.. ಸ್ಕೂಲ್ ಡೇಯ್ಸ್ ನೆನಪು ಬಂತು" ಅಂದ!. ಮತ್ತೊಬ್ಬಳು "ಇದೇನೇ ಹೊಸಾ ಹುಚ್ಚು" ಅಂದಳು... ನನಗೆ ಒಂದಲ್ಲ ಒಂದು ಹುಚ್ಚು ಹಿಡಿದಿರುತ್ತೆ ಅನ್ನೋ ಇವರನ್ನೆಲ್ಲ ಕುಟ್ಟಿ ಹಾಕಬೇಕು ಅನ್ನಿಸಿತ್ತು.<br /><br /><br />ಭೈರಪ್ಪನವರ 'ಸಾರ್ಥ' ಓದಿದಾಗ, ಅಲ್ಲ ಅದಕ್ಕಿಂತ ಮೊದಲು ಡಾ.ಪಿ ವಿ ನಾರಾಯಣ್ ಅವರ 'ಅಂತರ' ಓದಿದಾಗ ಗಾಡಿ ಪ್ರಯಾಣದ ಕಲ್ಪನೆ ಬಂದಿತ್ತು ನನಗೆ.<br /><br />ನೀನು ಗಾಡೀಲಿ ಪ್ರಯಾಣ ಮಾಡಿದೀಯಾ? ಅಂತ ಸೌತೇಕಾಯಿ ಹೆಚ್ಚುತ್ತಿದ್ದ ಅಮ್ಮನನ್ನು ಕೇಳಿದಾಗ<br />"ಹೂಂ, ದಯಣ್ಣನ ಉಪನಯನಕ್ಕೆ ಗಾಡೀಲೇ ಹೋಗಿದ್ದು, ರಾತ್ರಿ ಹೊತ್ತಿನ ಪ್ರಯಾಣ ನಾಲ್ಕು ಗಾಡಿ. ಆಗ ನಾವೆಲ್ಲ ತುಂಬಾ ಚಿಕ್ಕವರು"<br /><br />ಮಧ್ಯದಲ್ಲಿ ನನ್ನ ತಂಗಿಯ ಪ್ರಶ್ನೆ "ನೀನು, ಮಾಮಾ, ದೊಡ್ಡಮ್ಮ, ಚಿಕ್ಕಮ್ಮ ಎಲ್ಲ ಒಟ್ಟಿಗೆ ಕೂತಿದ್ರ?"<br /><br />"ಹಾಗೆಲ್ಲಾ ಚಿಕ್ಕ ಚಿಕ್ಕವರನ್ನು ಒಂದೇ ಗಾಡೀಲಿ ಕೂರಿಸುತ್ತಾರ?" ಮತ್ತೆ ಅಮ್ಮನ ವರ್ಣನೆ..<br />"ನಿಮ್ಮಜ್ಜಿ, ಚಿಕ್ಕಜ್ಜಿ, ನನ್ನ ಸೋದರತ್ತೆ ಏನೇನೋ ಮಾತಾಡ್ತಿದ್ರು. ಅಕ್ಕ ಪಕ್ಕಾ ಸಾಲು ಸಾಲು ಮರಗಳು, ಗವ್ ಅನ್ನುವ ಕತ್ತಲು, ಗಾಡಿ ಹೊಡಿಯೋ ಭೈರ ಹಾಡು ಹೇಳುತ್ತಿದ್ದ ಸಣ್ಣ ದನಿಯಲ್ಲಿ...." ಅಂತ ಅವರ ಒಂದು ರಾತ್ರಿಯ ಗಾಡಿ ಪ್ರಯಾಣದ ಬಗ್ಗೆ ಹೇಳಿ ಮುಗಿಸೋ ಹೊತ್ತಿಗೆ ಸೌತೆ ಕಾಯಿ ಪೂರಾ ಹೆಚ್ಚಿ ಸಾಂಬಾರೂ ಮಾಡಾಗಿತ್ತು.<br /><br />ನಮ್ಮಮ್ಮ ಒಂದು ರಾತ್ರಿ ಗಾಡಿ ಪ್ರಯಾಣ ಮಾಡಿದರೆ, ನಾನೂ ಮಾಡಿದೀನಿ ,ಅರ್ಧ ಗಂಟೆಯ ಪ್ರಯಾಣ ನಮ್ಮ ಸೋದರತ್ತೆಯ ಮನೆಯಲ್ಲಿ ! ಎಂತದೋ ಫಂಕ್ಷನ್ನು.. ಅವರದು ತೀರಾ ಒಳಗಡೆ ಹಳ್ಳಿ - ಒಂದು ಆಟೋ ಇರಲಿಲ್ಲ. ಆಗ ಅತ್ತಂಬಿ (ಅತ್ತೆಯ ಗಂಡ) ಎತ್ತಿನ ಗಾಡಿ ಕಳಿಸಿದ್ರು. ನನ್ನ ಆ ಗಾಡಿ ಹೊಡೀಯೋನು ಎತ್ತಿ ಸೀದಾ ಗಾಡಿಯೊಳಗೆ ಕೂರಿಸಿದ್ದಷ್ಟೇ ಜ್ಞಾಪಕ. ಅದರಿಂದ ಇಳಿದಿದ್ದು ನೆನಪಿಲ್ಲ .. ಆಗ ನಾಲ್ಕು ವರ್ಷದವಳಿರಬೇಕು ನಾನು.<br /><br />ಈಗಂತು ಈ ಅನುಭವಗಳು ಆಗೊಕೆ ಸಾಧ್ಯಾನೆ ಇಲ್ಲ.. ಮೆಸ್ಸೆಂಜರ್ಸ್ ಇಲ್ಲ, ಪತ್ರಗಳಂತೂ ಪಿತೃಗಳಿಗೇ ಅರ್ಪಿತವಾಗಿವೆ.. ಗಾಡಿಪ್ರಯಾಣ outdatedಉ. ಈಗಿನವರಿಗೆ ಕಾಯುವ ಗೋಜೇ ಇಲ್ಲ .ಒಬ್ಬರೊಬ್ಬರ ಬಗ್ಗೆ ತಿಳಿದುಕೊಳ್ಳಲು ಪೋನ್ ಇದೆ, ಮೊಬೈಲ್ ಇದೆ. ಅಕ್ಕ ಪಕ್ಕದಲ್ಲಿ ಕೂತು ಮಾತಾಡ್ತಿರೋ ಹಂಗೆ ಕಾಡು ಹರಟೆ ಹೊಡೀಬಹುದು...<br /><br /><br />ಇನ್ನು ಈ ಮೊಬೈಲು ಕಾತುರತೆಯನ್ನ ಕಸದ ಬುಟ್ಟಿಗೆ ಸೇರಿಸಿದೆ . ಉದಾಹರಣೆಗೆ ನನ್ನ ಸ್ನೇಹಿತೆ ವಿಷಯ ಹೇಳ್ತೀನಿ - ಅವಳು ಅವರ ಊರಿಂದ ಹಾಸ್ಟೆಲಿಗೆ ಬರೋದು ಅವರ ಅಪ್ಪ ಅಮ್ಮನಿಗೆ live telecast ತರ..ಬಸ್ಸು ಹತ್ತುವಾಗ ಸೀಟು ಸಿಕ್ಕಿದಾಗ, ಒಂದು ಕಾಲ್. ಬಸ್ಸಿಂದ ಇಳಿದು ಟ್ರೇನ್ ಗೆ ಟಿಕೆಟ್ ತಗೊಂಡಾಗ ಇನ್ನೊಂದು. ಟ್ರೇನ್ ಮಧ್ಯದಲ್ಲಿ ನಿಂತು ಬೋರಾದಾಗ , ಹಾಸ್ಟೆಲ್ ಸೇರಿದಾಗ - ಹೀಗೆ ಪ್ರತಿ ಸಲ ಕಾಲು, ಮಾತು ಮಾತು ಮಾತು...ಎಷ್ಟು ವಿಚಿತ್ರ ಅಲ್ಲವ?<br /><br /><br />ನನ್ನ ರೂಮ್ ಮೇಟ್ ಹಳ್ಳಿಯವಳು . ನನಗಿಂತ ಅವಳಿಗೆ ಹಳ್ಳಿಯ ಹಿಂದಿನ ಕಾಲದ ಕಲ್ಪನೆ ಜಾಸ್ತಿ ಇದೆ. ಅವಳಿಗೆ ಇದನ್ನೆಲ್ಲ ಹೇಳಿದ್ರೆ, ಅವಳು ಇನ್ನು ಏನೇನೋ ಹತ್ತು ಹನ್ನೆರಡು ಕಂಪ್ಯಾರಿಸನ್ ಮಾಡಿ, ನಮಗೆಲ್ಲ ಆ ಅನುಭವಗಳು ಇಲ್ವಲ್ಲ ಅಂತ ನಾನು ಹೊಟ್ಟೆ ಉರ್ಕೋಳ್ಳೋದನ್ನ ನೋಡಿ.. "ನೀನು ಈ ಕಾಲದಲ್ಲಿ ತಪ್ಪಿ ಹುಟ್ಟಿದ್ದಿಯ ಇನ್ನೂರು ಮುನ್ನೂರು ವರ್ಷಗಳ ಹಿಂದೆ ಹುಟ್ಟಬೇಕಿತ್ತು "ಅಂತ ಗೇಲಿ ಮಾಡಿದಳು .. ನಾನು "ನಾನು ಅವಾಗ ಕೂಡ ಇದ್ದೆ ಇದು ನನ್ನ ಇನ್ನೊಂದು ಜನ್ಮ ಅಂತ ..ನಾನು ಹೇಳೋದು ನಿಜ ಇರಬಹುದು ಅಲ್ಲವ??" ಅಂದರೆ,<br /><br />"ಇಲ್ಲ ಕಣೆ ಸಕತ್ ಸುಳ್ಳು... ನಿಂದು ಇದೆ ಲಾಸ್ಟ್ ಜನ್ಮ ಇದೆ ಮೊದಲ ಜನ್ಮ...ಹೆಹೆಹೆಹೆ" ಅಂತ ನಕ್ಕಳು ಅವಳು.ಮೃಗನಯನೀhttp://www.blogger.com/profile/05798486490706460406noreply@blogger.com7tag:blogger.com,1999:blog-7077041789502080406.post-750233358456665342007-06-04T22:06:00.001-07:002007-06-04T22:12:40.881-07:00ಬೆಳ್ಳಿಯ ಭಾವನೆಕಾಡು ಕುದುರೆಯ ಆವೇಗವೇ,<br /><br />ಈಗಷ್ಟೇ ನೀನು ಎದ್ದು ಹೋದೆ. ಮೃದು ಹಾಸಿಗೆಯ ಮೇಲೆ ಮಲಗಿರುವ ನೀಲಿ ಬಣ್ಣದ ಹೂಗಳಿರುವ ಆ ಮೇಲು ಹಾಸಿನ ಮುದುರುಗಳಲ್ಲಿ ನಿನ್ನ ಘಮ.ಬೆಳಗಿನ ನಾಲ್ಕು ಘಂಟೆಗೆ ನೀನು ನನ್ನ ಮಳೆಯಾಗಿ ಸೇರುತ್ತಿದ್ದರೆ ಮೊದಲ ಮಳೆಗೆ ಘಂ ಎನ್ನುವ ಭುವಿಯಂತೆ ನಾನು ಕರಗುತ್ತಿದ್ದೆ.<br /><br />ನೀನು ಮುಗಿಲು ನಾನು ನೆಲ<br /><br />ನಾನು ಎಳೆವೆ ನೀನು ಮಣಿವೆ<br />ನಾನು ಕರೆವೆ ನೀನು ಸುರಿವೆ<br /><br />ನಾ ಅಚಲದ ತುಟಿ ಎತ್ತುವೆ<br />ನೀ ಮಳೆಯೊಳು ಮುತ್ತನಿಡುವೆ<br /><br /><br />ಹೊದಿಕೆಯೋ ಎಂಬಂತೆ ಸುಮ್ಮನೇ ನಿನ್ನ ಮೇಲಿದ್ದವಳಿಗೆ ಕರೆಗಂಟೆಯ ಸದ್ದು ಇಷ್ಟವಾಗಲಿಲ್ಲ. ಆದರೂ ಇಷ್ಟು ಮುಂಜಾನೆ ಬಾಗಿಲು ಬಡಿಯುತ್ತಿದ್ದಾರೆಂದರೆ ಯಾವುದೋ ಸೀರಿಯಸ್ ಕೇಸೇ ಬಂದಿರಬೇಕೆಂದು ಓಲ್ಲದ ಮನಸ್ಸಿನಿದ ಬಾಗಿಲು ತೆರೆದರೆ ಕಂಡಿದ್ದು ಕೆಂಡದಂತೆ ಮೈ ಸುಡುತ್ತಿರುವ 8ವರ್ಷದ ಹುಡುಗಿಯ ಜೊತೆ ಚಿಂತೆಗಣ್ಣಿನ ಅವರಪ್ಪ.ನನಗೆ ಗೊತ್ತು ನೀನು ಜಾಣ ಹುಡುಗ ಆ ಹುಡುಗಿಗೆ ಬೇಗ ವಾಸಿಯಾಗುತ್ತೆ.<br /><br /><br />ಬೆಳಗಿನ ಆ ಚಳಿಯಲ್ಲಿ ಮಗುವಿನ ಜೊತೆ ಬಂದ ತಂದೆಗೆ ಕಾಫಿಯ ಅವಶ್ಯಕತೆ ಇದೆ ಅನ್ನಿಸಿ ಹಬೆಯಾಡುವ ಕಾಫಿ ತಂದಿಟ್ಟಾಗ ನಿನ್ನ ಕಣ್ಣುಗಳಲ್ಲಿ ನನ್ನೆಡೆಗಿದ್ದ ಮೆಚ್ಚುಗೆ ನೋಡಿ ಹಿತವಾಯಿತು ಮನಸಿಗೆ.<br />ನಮ್ಮಿಬ್ಬರದು ಅರೆಂಜ್ ಮ್ಯಾರೇಜ್ ಅಂದರೆ ಯಾರು ನಂಬುವುದಿಲ್ಲ...ಏನೆಂದು ಕರೆಯಲಿ ನಿನ್ನ??ಗಂಡ? ಗೆಳೆಯ? ಆತ್ಮಸಖ??<br />ಆಸ್ಪತ್ರೆ ವಾಸನೆ ಅಂದರೆ ವಾಕರಿಸುತ್ತಿದ್ದ ನಾನು ದಿನಾ ಅದೇ ವಾಸನೆಯನ್ನು ಹೊತ್ತು ತರುವ ವೈದ್ಯನನ್ನು ಮದುವೆಯಾದದ್ದು ಹೇಗೆ??ಇದಕ್ಕೆ ಋಣಾನು ಬಂಧ ಎನ್ನುವುದ??<br /><br /><br />ಈಗ ನೀನು ಮಹಡಿ ಮೇಲಿನ ಕೊಣೆಯ ಆರಾಮು ಖುರ್ಚಿಯ ಮೇಲೆ ಕುಳಿತುಕೊಂಡು ಯಾವುದೋ medical journal ಓದುತ್ತಿರುತ್ತೀಯ. ಹಾಗೆ ನೀನು ಓದುವುದನ್ನು ದೂರದಿಂದ ನಿನಗೆ ಗೊತ್ತಾಗದ ಹಾಗೆ ನೋಡುವುದು ನನಗೆ ತುಂಬಾ ಖುಷಿ ಕೊಡುತ್ತೆ.<br /><br />ಸ್ನಾನ ಮಾಡಿ ಬಾ ಹುಡುಗ, ನಿನಗಿಷ್ಟವಾದ ದೋಸೆ ತಿನ್ನುತ್ತಾ ಈ ಪತ್ರ ಓದುವೆಯಂತೆ. ನಿನ್ನನ್ನು ಆಸ್ಪತ್ರೆಗೆ ಕಳುಹಿಸಿ ನಾನು ಬ್ಯಾಂಕಿನ ಕೆಲಸಕ್ಕೆ ಹೊರಡುವೆ. ಸಂಜೆ ಬೇಗ ಬಾ ಕಲಾಕ್ಷೇತ್ರದಲ್ಲಿ ಅಶ್ವತರ ಸಂಗೀತವಂತೆ. ಹೋಗೋಣ..ಅವರ ಭಾವ ಲೀಲೆಯಲ್ಲಿ ಮಿಂದುಬರೋಣ.<br /><br />...................................................ನಿನ್ನ ಬೆಳ್ಳಿ<br /><br /><br />(ಇದನ್ನು ಓ ಮನಸೇ communityಲಿ ಪೋಸ್ಟ್ ಮಾಡಿದ್ದೆ ಇಲ್ಲೂ ಇರಲಿ ಎಂದು ಹಾಕಿರುವೆ )ಮೃಗನಯನೀhttp://www.blogger.com/profile/05798486490706460406noreply@blogger.com8tag:blogger.com,1999:blog-7077041789502080406.post-27194998134183733832007-06-01T21:50:00.000-07:002007-06-01T22:46:10.871-07:00ಮುಟ್ಟಾದ ಹುಡುಗಿ!ಅವತ್ತು ಸಂಜೆ ಅವಳ ಓದ್ಕೊಳೋ ಕೋಣೆಯಿಂದ ವಾರೆಂಡಾದವರೆಗೂ ಬಂದಿದಾಳೆ "ಅಮ್ಮ.. ಹೊಟ್ಟೆಲಿ ಒಂಥರ ನೋವು- ಸಂಕಟ, ತಲೆನೋವು ಅಳು ಬರ್ತಿದೆ." ಅಂದಳು. ಅವಳ ಅಮ್ಮ "ಏನಾಯ್ತೆ ಕಂದ" ಅಂತ ಹುಡುಗಿ ಹತ್ರ ಹೋಗಿ ನೋಡಿದ್ರೆ ಒಂದು ತೊಟ್ಟು ರಕ್ತ ನೆಲಕ್ಕೆ ಬಿತ್ತು.ಸರಿಯಾಗಿ ಗಮನಿಸಿದಾಗ ರೂಮಿನಿಂದ ವರೆ0ಡಗೆ ಬರೋ ದಾರಿಯಲ್ಲಿ ಒಂದೊಂದು ತೊಟ್ಟು ರಕ್ತ ಬಿದ್ದಿದೆ ಅವಳು ಮೈ ನೆರೆದಿದಾಳೆ her body is matured.<br /><br />'ಅಯ್ಯೂ.. ಇಷ್ಟು ಬೇಗ ಆಗ್ಬಿಟ್ಲಲ್ಲ' ಅಂತ ತಾಯಿಗೆ ಹಿಂಸೆ ಆದ್ರೂ ತೋರಿಸಿಕೊಳ್ಳದೇ ತಮ್ಮ ಮಲಗೋ ಕೋಣೆಯಲ್ಲಿ ಯಾವುದೋ ಪುಸ್ತಕದಲ್ಲಿ ಮುಳುಗಿದ್ದ ಗಂಡನಿಗೆ ವಿಷಯ ತಿಳಿಸಿ, ಅವರ ಅಮ್ಮನಿಗೆ ಫೋನ್ ಮಾಡಿದಳು. ಮೊಮ್ಮಗಳು ಮೈನೇರೆದಳು ಅಂತ ತಿಳಿಸೋಣ ಅಂತಾನೂ? ಅಥವಾ ಅವಳಿಗೆ ಇನ್ನೂ ಮುಂದೆ ಏನು ಆರೈಕೆ ಮಾಡೋಣ ಅಂತ ಕೆಳೊಕ್ಕೋ? ಅಥವಾ ಎರಡಕ್ಕೂ?<br /><br />ಹೀಗೆ ಒಂದಲ್ಲ ಒಂದು ರೀತಿಲಿ ಹುಡುಗೀರು ಮೈ ನೆರೆದಿರೋದು ಅವರ ಮನೆಯೋರಿಗೆ ಗೊತ್ತಾಗುತ್ತೆ.ಕೆಲವರಿಗೆ ಅವರ ತಾಯಿನೋ, ಇನ್ಯಾರೋ ಮೊದಲೇ 'ಹುಡುಗಿ ವಯಸ್ಸಿಗೆ ಬಂದಿದಾಳೇ' ಅನ್ನಿಸಿದಾಗ ಇದರ ಬಗ್ಗೆ ಸೂಚ್ಯವಾಗಿ ತಿಳಿಸಿರುತ್ತಾರೆ. ಇನ್ನೂ ಕೆಲವು ಹುಡುಗೀರಿಗೆ ಅದೂ ಲಭ್ಯವಿಲ್ಲ.<br /><br />ಮುಟ್ಟಾಗೋಕೆ ಮುಂಚೆ ತಿಳಿಸಬೇಕೋ ಬೇಡವೋ? ಮುಟ್ಟಾದಮೇಲೆ ಅವರಿಗೆ ಆರತಿ ಮಾಡಬೇಕಾ? ಆರೈಕೆ ಮಾಡಬೇಕಾ? ಇದರ ಬಗ್ಗೆ ನಾನು ಮಾತಾಡ್ತಾ ಇಲ್ಲ! ನಾನು ಹೇಳ್ತೀರೂದೇ ಬೇರೆ.<br /><br />ನನ್ನ ಸ್ನೇಹಿತೆ ಒಬ್ಬಳು ಮೈನೆರೆದಾಗ "ಜೀವನದಲ್ಲಿ ಒಂದೇ ಸತಿ ಹೀಗೆ ಆಗೋದು ಹಾಳಾಗ್ ಹೋಗ್ಲಿ" ಅಂತ ಅಂದುಕೊಂಡಿದ್ದಳಂತೆ. ಮುಂದಿನ ತಿಂಗಳು ಮತ್ತೆ ಆದಾಗ ಅವಳಿಗೆ ಆಘಾತ, ನಿರಾಶೆ, ದು:ಖ. ಮೊದಲನೆದಾಗಿ ನಾವು ಫಿಸಿಕಲ್ ಹಿಂಸೇಗಳಾದ ರಕ್ತ ಸ್ರಾವ, ತಲೆನೋವು, ಹೊಟ್ಟೆನೋವು, ಬೆನ್ನುನೋವು, ಕೈ ಕಾಲು ಬಿದ್ದುಹೋದಹಾಗೆ ಅನ್ನಿಸುವುದು(ಒಬ್ಬೊಬ್ಬರಿಗೆ ಒಂದೊಂದು ರೀತಿ )ಇವುಗಳನ್ನ ಮೊದಲನೆ ಸಾರಿ ಅನುಭವಿಸುತಿರ್ತಿವಿ.<br />ಇದರ ಜೊತೆಗೆ ಅಮ್ಮಂದಿರ ಆರೈಕೆ ಮೊದಲು ಚಿಗಲಿ ಉಂಡೆ, ಒಂದೆರೆಡು ತಿಂಗಳು ಆದ ಮೇಲೆ ಕೊಬ್ಬರಿ ಬೆಲ್ಲ, ಅದಾದ ಒಂದು ತಿಂಗಳಿಗೆ ಸಜ್ಜಿಗೆ,ಮೇಂತೆ ಮುದ್ದೇ.. ಇವೆಲ್ಲವನ್ನು ಹಾಗೆ ಕೊಡ್ತಾರೆ ಅಂದುಕೋಬೆಡಿ ಪ್ರತಿಯೊಂದನ್ನು ತುಪ್ಪದಲ್ಲಿ ಮುಳುಗಿಸಿ ಕೊಟ್ಟಿರುತ್ತಾರೆ. ತುಪ್ಪದ ಹೊಳೇಲಿ ಚಿಗಲಿ ಉಂಡೆ, ಕೊಬ್ಬಾರಿ ಬೆಲ್ಲದ ಉಂಡೆ ತೇಲುತ್ತಿರುತ್ತದೆ.ಊಹಿಸಿಕೊಳ್ಳಿ ತುಪ್ಪ ಅಂದರೆ ಅಲರ್ಜಿ ಆಗಿಹೋಗುತ್ತೆ.ಇವನೆಲ್ಲಾ ನೋಡಿದರೆ ಓಡಿಹೋಗೋಣ ಅನ್ನೋಷ್ಟು ಅಸಹ್ಯ, ಹಿಂಸೆ ಆಗುತ್ತಿರುತ್ತೆ,ಕಣ್ಣಲ್ಲಿ ನೀರು.. ಆದರೆ ಅಮ್ಮಂದಿರು ಇದ್ಯಾವುದಕ್ಕೂ ಕ್ಯಾ ರೇ ಅನ್ನುವುದಿಲ್ಲ.<br />ತಣ್ಣೀರು ಮುಟ್ಟೋಹಂಗೆ ಇಲ್ಲ, ಕುಡಿಯೋಹಂಗೆ ಇಲ್ಲ! ಸುಡು ಬೇಸಿಗೆಲೂ ಶಾಲೆಗೆ ಸ್ವೇಟೆರ್ ಹಾಕಿಕೊಂಡು ಹೂಗಬೇಕು ಯಾರಾದರೂ ಸ್ನೇಹಿತೆಯರು ಯಾಕೆ ಸ್ವೇಟರ್ ಅಂತ ಕೇಳಿದರೆ ಹುಷರಿಲ್ಲ ಅಂತ ಸುಳ್ಳು ಹೇಳಬೇಕು..<br /><br />ಮುಟ್ಟಾದಾಗ ಹುಡುಗೀರು ತಾವು ಮುಟ್ಟಾಗಿರೋದು ಯಾರಿಗೂ ಗೊತ್ತಾಗಬಾರದು ಅನ್ಕೊಂಡಿರ್ತಾರೆ ಹುಡುಗೀರು ಕಷ್ಟಪಟ್ಟು ಶಾಲೆಲಿ ಹೊರಗಡೆ ಯಾರಿಗೂ ಗೊತ್ತಾಗದ ಹಾಗೆ ಗುಟ್ಟು ಕಾಪಾಡಿಕೊಂಡಿದ್ರೆ, ಮನೇಲಿ ಅವರ ಅಮ್ಮ ತನ್ನ ಎಲ್ಲ ಸಂಭಂಧಿಕರಿಗೂ ಸ್ನೇಹಿತೆಯರಿಗೂ ಆರಾಮಾಗಿ ಒಂದು ಚೂರು ಗುಟ್ಟು ಮಾಡದೇ ಹೇಳುತ್ತಿರುತ್ತಾರೆ.. ಆಗ ಆ ಹುಡುಗಿ ಎಷ್ಟು irritate ಆಗ್ತಾಳೆ! 'ದೇವರೇ! ನಂಗೆ ಯಾಕೆ ಇಷ್ಟೆಲ್ಲಾ ಕಷ್ಟ ಕೊಡ್ತೀಯಾ? ಈ ಅಮ್ಮಂಗೆ ಸ್ವಲ್ಪ ಬುದ್ದಿ ಕೊಡಪ್ಪಾ..' ಅಂತ ಮೊರೆ ಇಡ್ತಾಳೆ..<br /><br />ಈಗ ಅದೆಲ್ಲ ನನಪಿಸಿಕೊಂಡರೆ ಎಷ್ಟೊಂದು ಸಾಮಾನ್ಯ ವಿಷಯ ಅನ್ಸುತ್ತೆ. ಮುಟ್ಟಾಗೋ ದು ತಿಂಗಳಿಗೊಂದು ಸತಿ ಅನುಭವಿಸಬೇಕಾದ ಖರ್ಮ! ಅಂತ ಗೊತ್ತಾಗೋಗಿದೆ. ಆದರೆ ಪ್ರತಿಯೊಬ್ಬ ಹುಡುಗಿಯ ಮನಸಿನ ಡೈರಿಯಲ್ಲಿ ಮೊದಲ ಸಲ ಮುಟ್ಟಾದಾಗ ಉಂಟಾದ ಭಾವನೆಗಳು, ಒಂದು ಅಳಿಸಲಾಗದ ಹಾಳೆ - ಮರೆಯಲಾಗದ ನೆನಪು!ಮೃಗನಯನೀhttp://www.blogger.com/profile/05798486490706460406noreply@blogger.com21tag:blogger.com,1999:blog-7077041789502080406.post-88148992122217555862007-05-29T20:04:00.000-07:002007-05-29T21:29:32.799-07:00ಕಡಲಾಳದ ನೀಲಿಯಿಂದ ಒಂದು ಪತ್ರ !!!ನನಗಿನ್ನು ಆ ದಿನ ಚೆನ್ನಾಗಿ ನೆನಪಿದೆ. ನಾನು ಅಪ್ಪ ಅಮ್ಮನ ಜೊತೆ ನಮ್ಮ ಕಾಲೇಜಿನ ಆ ನರಿ ಮೂತಿ ಮ್ಯಾನೇಜರ್ ಕೋಣೆ ಮುಂದೆ ಕೂತಿದ್ವಿ. ಅವನ ಹೆಸರೇನೋ ನನಗಿನ್ನು ಗೊತ್ತಿಲ್ಲ ದಿನೇಶಾನೋ ಗಣೇಶಾನೊ ಇರ್ಬೇಕು...<br /><br />ನೀನು ನಿನ್ನ ತಂಗಿ ಜೊತೆ ಬಂದೆ. ಬಂದು, ಸೀದ ನುಗ್ಗುತ್ತಿದ್ದೀಯ ಮ್ಯಾನೇಜರ್ ಕೋಣೆಗೆ ಅಷ್ಟ್ ಹೊತ್ತಿನಿಂದ ಕಾದು ಕಾದು ರೋಸಿಹೋಗಿದ್ದ ನನಗೆ ಬರ್ತೀರೋ ಸಿಟ್ಟನ್ನೆಲ್ಲಾ ನಿನ್ನ ಮೇಲೆ ಕಕ್ಕೋಹಾಗಿತ್ತು. cant you see we are waiting here ಅಂದೆ ನಾನು. ನಿನ್ನ ಮುಖದಲ್ಲಿ ಒಂದು ತುಂಟ ನಗೆ...<br /><br />ನಾನು ನಿನ್ನ ದುರುಗುಟ್ಟಿಕೊಂಡು ನೋಡುತಿದ್ರೆ,ನೀನು ನನ್ನ ಕಣ್ಣುಗಳನ್ನ ಅಷ್ಟೇ ಪ್ರೀತಿಯಿಂದ ನೋಡುತಿದ್ದೆ. ನಾನು ಸ್ವಲ್ಪ ಅಹಂಕಾರದ ಹುಡುಗಿ ಅಂತ ಎಲ್ಲರಿಗೂ ಗೊತ್ತು. ನನ್ನ ಮುಂದೆ ಹುಡುಗರ ಗುಂಪೇ ಹೋಗುತಿದ್ರೂ ಕುತೂಹಲಕ್ಕಾದರೂ ನಾನು ಕಣ್ನೆತ್ತಿ ನೋಡಿದವಳಲ್ಲ ನನ್ನ ಕಣ್ಣುಗಳಲ್ಲಿ ಅದೇ ನಿರ್ಲಿಪ್ತ ಅಹಂಕಾರ...<br /><br />ಆದರೆ ಅವತ್ತು ಏನಾಯ್ತು ನನಗೆ? ನಿನ್ನನ್ನು ನನ್ನ ಕಣ್ಣುಗಳು ಪದೇ ಪದೇ ಯಾಕೆ ಹುಡುಕ ಹತ್ತಿದವು ? ? ಮತ್ತೆ ನೀ ಸಿಕ್ಕುಬಿಟ್ಟೆಯಲ್ಲ ನಿನ್ನ ಗುರು ಗುಟ್ಟೋ ಬೈಕಿನ ಮೇಲೆ! ನನಗೆ ಅಸೂಯ ಆಗುವಷ್ಟು ಆ ಬೈಕಿನ ಜೊತೆಗೇ ಇರತಿದ್ಯಲ್ಲ! ನೀನು ನೆಡದಿದ್ದೆ ನಾನು ನೋಡಿಲ್ಲ.<br /><br />ನನ್ನ ಕಣ್ಣುಗಳು ನಿನ್ನ ಹುಡುಕುತ್ತಿದ್ದವು ಅನ್ನೋದೇನೊ ನಿಜ. ಆದರೆ, ಈ ಪರಿ ನೀನು ನನ್ನ ಆವರಿಸಿಕೊಂಡಿರಲಿಲ್ಲ. ನಿನ್ನ ಸ್ನೇಹಕ್ಕಾಗಿ ಒಂದು ಚಿಕ್ಕ ಪ್ರಯತ್ನ ಕೂಡ ಮಾಡಿರಲಿಲ್ಲ ನಾನು...<br /><br />ಅವತ್ತು ನಿನ್ನ ತಂಗಿ ಲ್ಯಾಬ್ ನಲ್ಲಿ ನನ್ನ ಹತ್ರ ಬಂದು 'ಅಣ್ಣ ನಿಮ್ಮ ಹತ್ರ ಮಾತಾಡಬೇಕಂತೆ' ಅಂದಾಗ ಆಷ್ಚರ್ಯ ಆಯ್ತು ನೀನು ಮಾತಾಡಬೇಕು ಅಂತ ಹೇಳಿಕಳಿಸಿದ್ದಕ್ಕಲ್ಲ.. ನಿನ್ನ ತಂಗಿ ಮಾತಾಡಿದಳಲ್ಲ ಅದಕ್ಕೆ ಆ ಹುಡುಗೀನ ಏನು protectedಆಗಿ ಬೆಳಸಿದ್ದೀರೋ ಮಾರಾಯ? ಅವಳಿಗೆ ಮಾತಡಕ್ಕೆ ಬರುತ್ತೆ ಅಂತ ಗೊತ್ತಾಗಿ ಖುಷಿ ಆಯ್ತು ನನಗೆ...<br /><br />ನಮ್ಮ ಭೇಟಿ ಬಿಡು ಎಲ್ಲಾ ಹುಡುಗ-ಹುಡುಗಿ ಭೇಟಿಗಳoತೆ ಒಂದು ಸಾಮಾನ್ಯ ಭೇಟಿ, ಅರ್ಧ ಅರ್ಧ ದಾಳಿಂಬೆ ಹಣ್ಣಿನ ಜ್ಯೂಸ್ ನಿಂದ ಶುರುವಾಗಿದ್ದು..ನಿನ್ನ ಜೊತೆ ಅರ್ಧ ಗ್ಲಾಸಿನ ದಾಳಿಂಬೆ ಜೂಸ್ ಕುಡಿಯುವಾಗ ನಮ್ಮ ಸ್ನೇಹ ಇಷ್ಟು ಗಟ್ಟಿಯಾಗಿ ಬೆಳೆಯುತ್ತೆ ಅನ್ನೋ ಕಲ್ಪನೆ ಖಂಡಿತ ಇರಲಿಲ್ಲ.. <br /><br />ಮೊದಮೊದಲು ನೀನು ನಂಗೆ ಇಷ್ಟ ಆಗಲಿಲ್ಲ ಉಹೂ...ನಿನ್ನ ಪ್ರೀತಿ ಹಂಚೋ ಕಣ್ಣುಗಳಷ್ಟೆ ಇಷ್ಟವಾಗಿದ್ದು ನನಗೆ!!<br /><br />ಆದರೆ ಬರುಬರುತ್ತಾ ಏನಾಯ್ತ್ತು? ನಮ್ಮಿಬ್ಬರಿಗೂ? ಒಬ್ಬರನ್ನೊಬ್ಬರು ಅಷ್ಟು ಹಚ್ಚಿಕೊಂಡ್ವಿ. ಎಷ್ಟು ವಿಷಯ ಮಾತಡಿಲ್ಲ ನಾವು? ಬದುಕಿನೆಡೆಗೆ, ಪ್ರೀತಿಯೆಡೆಗೆ, ಕಾಮದೆಡೆಗೆ , ಆದ್ಯಾತ್ಮದೆಡೆಗೆ...ನನ್ನಲ್ಲಿದ್ದ ಪ್ರಶ್ನೆಗಳನ್ನ ನಾನು ಕೇಳುತ್ತಿದ್ದರೆ, ನೀನು ಆ ಎಲ್ಲಾ ಪ್ರಷ್ನೆಗಳಿಗೆ ಅತ್ಯಂತ ಸರಳವಾಗಿ, ಮುಜುಗರ ಆಗದೆ ಇರೊ ಹಾಗೆ ಉತ್ತರಿಸುತ್ತಿದ್ದೆ. ನಿನ್ನ ಉತ್ತರಗಳು ಯಾವತ್ತೂ ಭಾಷಣ ಅನ್ನಿಸಲಿಲ್ಲ ನಂಗೆ ನೀನು ಯಾವತ್ತು ನಿನ್ನ ಭಾವನೆಳಗನ್ನಾಗಲಿ, ಉತ್ತರಗಳನ್ನಾಗಲಿ, ಅನಿಸಿಕೆಗಳನ್ನಾಗಲಿ ಯಾವುದನ್ನು ನನ್ನ ಮೇಲೆ ಹೇರಲಿಲ್ಲ, ನನ್ನ ಉಸಿರುಕಟ್ಟಿಸಲಿಲ್ಲ! ಅದಕ್ಕೆ ನಾನು ಅಷ್ಟು ಇಂಪ್ರೆಸ್ಸ್ ಆಗಿದ್ದ?<br /><br /><br />ನಾವು ಒಬ್ಬರನ್ನೊಬ್ಬರು ಪ್ರೀತಿಸ್ತಿದ್ದೀವಿ ಅಂತ ಗೊತ್ತಾದರೂ ಯಾಕೆ ಹೇಳಿಕೊಳ್ಳಲಿಲ್ಲ? ನಾನಾದರೂ ಹೇಳಿಕೊಳ್ಳುತ್ತಿದ್ದೆನೇನೋ...ಆದರೆ ನೀನು ಪ್ರಭಾವ ಬೀರಿಬಿಟ್ಟಿದ್ದೆ..ಭಾವನೆಗಳ ಅಲೆಯಲ್ಲಿ ತೇಲಿ ಹೋಗದೇ ವಾಸ್ತವತೆಯಲ್ಲಿ ಹೇಗೆ ಬದುಕಬೇಕು ಅನ್ನೋದನ್ನ ನಿನ್ನಿಂದ್ಲೇ ಅಲ್ವ ನಾನು ಕಲಿತಿದ್ದು?<br /><br />ಆದ್ರೆ ನೀನು ಯಾಕೆ ಫ್ಲರ್ಟ್ ಮಾಡ್ತೀಯ ಎಲ್ಲರ ಜೊತೆ? ನಿನ್ನ ಮಾತನ್ನ ನಂಬೋದೇ ಕಷ್ಟ! ಆದರೂ ನಿನ್ನ ಯಾಕೆ ಅಷ್ಟು ಇಷ್ಟಪಡ್ತೀನಿ ಅಂತ ಯೋಚಿಸಿದರೆ ನಿನ್ನ ತುಂಟತನ ಮತ್ತು ನೀನು ಎಲ್ಲಾ ವಿಷಯದೆಡೆಗೂ ಬೆಳಸಿಕೊಂಡಿರುವ ದಿವ್ಯವಾದ ನಿರ್ಲಕ್ಷವೇ ಕಾರಣ ಅನ್ನಿಸುತ್ತೆ...<br /><br />ಇಷ್ಟೆಲ್ಲಾ ಬರೆದರೂ ಇದನ್ನ ನಿನಗೆ ಕೊಡಬೇಕೆ? ಅಂತ ಯೋಚಿಸ್ತಿದ್ದಿನಿ..ಉಹೂಂ..ನಾಚಿಕೆ ಅಲ್ಲ, ಭಯ ಮೊದಲೇ ಇಲ್ಲ, ಆದರೂ ಕೊಟ್ರೆ ಏನು ಸಾಧಿಸಿದ ಹಾಗಾಯ್ತು ಅನ್ನುವ ನಿರ್ಲಕ್ಷ...ಆದರೂ ಕೊಡುತೀನಿ ಯಾಕೆ ಗೊತ್ತ? ನನ್ನ ತುಂಬಾ ಪ್ರೀತಿಸ್ತಿರೋ ಹುಡುಗನ್ನ ಮದುವೆಯಾಗ್ತಿದೀನಿ. ಅವನನ್ನೆ ಪ್ರಜ್ನಾಪೂರ್ವಕವಾಗಿ ಪ್ರೀತಿಸಬೇಕು, ಪ್ರೀತಿಸ್ತೀನಿ...<br /><br />ಇಲ್ಲ! ನಾನು ನೀನು ಖಂಡಿತಾ ಮದುವೆ ಆಗಬಾರದು.` ಹೀಗೆ ಒಬ್ಬರೆಡೆಗೆ ಒಬ್ಬರು ಕುತೂಹಲವನ್ನು ಉಳಿಸಿಕೊಂಡೇ ಬದುಕಿಬಿಡಬೇಕು..ಮುಂದೆ ನನ್ನ ಗಂಡನ ಜೊತೆ ಒಂದು ಚಿಕ್ಕ ಜಗಳ ಆದಾಗ ನಿನ್ನ ನೆನಪು ಬರಬೇಕು, ನೀನು ಇದ್ದಿದ್ರೆ ಹೇಗೆ ರಿಯಾಕ್ಟ್ ಮಾಡ್ತಿದ್ದೆ ಅಂತ ಕಲ್ಪಿಸಿಕೊಳ್ಳಕ್ಕಾದರೂ ನಾವಿಬ್ಬರೂ ಬರೀ ಸ್ನೇಹಿತರಾಗೆ ಉಳಿದುಬಿಡೋಣ ...<br /><br />ಸಂಜೆ ಕಾಫೀ ಡೇನಲ್ಲಿ ಸಿಗೋಣ" ಏನೆ ಹುಡುಗಿ ನಿನ್ನ ಪತ್ರ ನನ್ನ ಸೆಂಟಿ ಮಾಡಿಬಿಟ್ಟಿತ್ತಲ್ಲ" ಅಂತ ..ನಿನ್ನ ಎವರ್ಗ್ರೀನ್ ಡೈಲಾಗ್ ಹೊಡೆಯುತ್ತ...ಮುಖದಲ್ಲಿ ತುಂಟನಗೆ ಹೊತ್ತು ಒಳಗೆ ಬಾ.....<br /><br />ಕಾಫಿಗಾಗಿ ಕಾದಿರುವವಳುಮೃಗನಯನೀhttp://www.blogger.com/profile/05798486490706460406noreply@blogger.com25tag:blogger.com,1999:blog-7077041789502080406.post-87972565233043909572007-05-26T00:50:00.000-07:002007-05-26T00:50:22.723-07:00ಬಂಧ!!!ಯಾವತ್ತು 6 15ಕ್ಕೆ ಎಚ್ಚರ ಆಗೋಗೂತ್ತೆ ನಂಗೆ ಅಂದುಕೊಂಡು ಗಡಿಯಾರ ನೋಡಿದರೆ 6 23ಆಗಿತ್ತು ಸಧ್ಯ 7-8ನಿಮಿಷ ಜಾಸ್ತಿ ನಿದ್ದೆ ಬಂದಿದೆ ಅನ್ನಿಸಿ ಸಮಾಧಾನ ಮಾಡ್ಕೊಂಡೆ. ಎದುರುಗಡೆ ಬೆಡ್ ನೋಡಿದಾಗ ಮನಸ್ಸು ಖಾಲಿ ಅನ್ನಿಸುತ್ತಿದೆ..ಅವಳು ಅಲ್ಲಿ ಇದ್ದಿದ್ರೆ ಅವಳ ನಿದ್ದೆ ಕಣ್ಣನ್ನ ನೋಡುತ್ತಾ 'ನೆನ್ನೆ ರಾತ್ರಿ ನೀನು ಹಿಂಗೆ ಏನೇನೋ ಬಡಬಡಿಸುತ್ತಿದೆ' ಅಂತ ಹೇಳಿ ಗೋಳು ಹುಯ್ಕೋಬಹುದಿತ್ತು..<br /><br /><br /><br />ಹಾ ಅವಳ ಹೆಸರು ವಾತ್ಸಾಲ.. ಇವತ್ತಿಗೆ ಸರಿಯಾಗಿ ಒಂದು ವಾರದ ಹಿಂದೆ ಅವಳು ಭಾರತಕ್ಕೆ ಹಾರಿಹೋದಳು. ನನ್ನ ಜೊತೆಗೆ ಕೆಲಸ ಮಾಡೊಳು ನಾವಿಬ್ಬರೂ ಒಂದೇ ಕಂಪನೀಲೀ ಕೆಲಸ ಮಾಡುತ್ತಿದ್ದೀವಿ...ನನಗಿಂತ ಮೊದಲೇ ಹಾಲೆಂಡ್ಗೆ ಬಂದವಳು. ಚೆನ್ನಾಗಿದ್ಲೂ ನೋಡೊಕ್ಕೆ.. ಅವಳೂ ಕನ್ನಡದವಳು ಅಂತ ಗೊತ್ತಾಗಿ ನಾನು ಸ್ವಲ್ಪ ಜಾಸ್ತಿನೇ ಸಲುಗೆಯಿಂದ ವರ್ತಿಸೊಕ್ಕೆ ಶುರು ಮಾಡ್ದಾಗ "ನೀವು ನನ್ನ ಜೊತೆ ಫ್ಲಾರ್ಟ್ ಮಾಡ್ತಿದ್ದೀರಾ ಅಂತ ಗೊತ್ತಗ್ತಿದೆ.. ಆದ್ರೂ ಇಷ್ಟ ಆಗ್ತಿರ ಅಂದಿದ್ಲು."<br /><br /><br /><br />ಒಂದು ದಿನ ಆಫೀಸಿನಲ್ಲಿ ಜೋಲುಮುಖ ಹಾಕ್ಕೊಂದು ಕಾಫಿ ಕುಡೀತಿದ್ದೊಳ ಹತ್ತಿರ ಹೋಗಿ ಏನಾಯ್ತು ಅಂದಿದ್ದಕ್ಕೆ.. "ಒಂದು ವಾರದಿಂದ ಹೊಸಮನೆ ಹುಡುಕುತ್ತಾ ಇದ್ದೀನಿ, ಈಗಿನ ಒನರ್ದು ಸ್ವಲ್ಪ ಕಿರಿಕ್ಕು. ಮನೆ ಚೆನ್ನಾಗಿದ್ರೆ ಅಲ್ಲಿನ ಜನ ಸರಿ ಇಲ್ಲ, ಜನ ಸರಿ ಇದ್ರೆ ಮನೆ ಸರಿಯಾಗಿರಲ್ಲ, ಸಾಕಾಗ್ ಹೋಯ್ತು." ಅಂದಳೂ..'ಸರಿ ಹಾಗಾದ್ರೆ ನಮ್ಮನೆಗೆ ಬನ್ನಿ, ನಾವು ಮೂರು ಜನ ಇದ್ದೀವಿ. ನನ್ನ ಇಬ್ಬರು ಸ್ನೇಹಿತರು ಬೇರೆ ಕಂಪನೀಲಿ ಕೆಲಸ ಮಾಡ್ತಿದಾರೆ.' ಅಂತ ತಮಾಶೇ ಮಾಡಿ ಹಲ್ಲು ಕಿರಿದ್ರೆ.."ನಿಮ್ಮನೇ ಅಡ್ರೆಸ್ಸು ಕೊಡಿ" ಅಂತ ಸೀರಿಯಸ್ಸಾಗಿ ಅಡ್ರೆಸ್ಸು ಈಸ್ಕೊಂಡು ಸಂಜೆ ಮಾನೆಗ್ ಬಂದು ಸಂದೀಪ, ಸರ್ವನರನ್ನ ಮಾತಾಡ್ಸ್ಕೊಂಡು..ಮಾರನೇ ದಿನಾನೇ ಗಂಟು ಮೂಟೆ ಸಮೇತ ಮನೆ ಮುಂದೆ ಇಳಿದಳು!!!<br /><br /><br /><br />ಅವಳು ಒಂಥರ ಮೂಡಿ..ಒಂದಿನ ಪಟಪಟಾ ಅಂತ ಮಾತಾಡೋದು, ಇನ್ನೊಂದು ದಿನಾ ಪೂರಾ ಮೌನವಾಗಿ ಇರೋದು.. ರಾತ್ರಿ ಇಡೀ ತಪಸ್ಸು ಮಾಡೊರ ಥರ ನನಗೆ ತಲೆ ಬುಡ ಅರ್ಥವೆ ಆಗದ ಪುಸ್ತಕನ ಓದೋದು..ಇನ್ನುಸ್ವಲ್ಪ ದಿನ ನಂಗೆ ಫ್ರೆಂಚ್ ಕಲೀಬೇಕು ಅಂತ ಆಸೆ ಅಂತ ಫ್ರೆಂಚ್ ಕಲಿಯೂಕ್ಕೆ ಇರೋ ಸೀಡಿ- ಪುಸ್ತಕಗಳನ್ನ ಗುಡ್ಡೆ ಹಾಕ್ಕೊಂಡು ಅದರಲ್ಲಿ ಮುಳುಗಿಹೋಗದು..ಅಯ್ಯೂ ಈ ಹಾಳಾದ್ ಭಾಷೆ ಕಲಿಯೂಕ್ಕೆ ಹೋಗಿ ಎಷ್ಟು ಸಮಯ ಹಾಳು ಮಾಡಿದೆ ಅಂದುಕೊಂಡು..ಭಾರತದಲ್ಲಿರೋ ತನ್ನ ಸ್ನೇಹಿತೆಗೆ ಫೋನ್ ಮಾಡಿ ಗಂಟೆಗಟ್ಟಲೆ ಹರಟೆ ಹೊಡೆಯೋದು,ಇದ್ದಕ್ಕಿಧಂಗೆ ಒಂದು ದಿನ ಜ್ಞಾನೋದಯ ಆದ್ಹಂಗೆ ಆಗಿ, ಸಕತ್ ದಪ್ಪ ಆಗಿದೀನಿ, ಅನ್ನಿಸಿ ಜಿಮ್ಗೆ ಹೋಗಿ ಯಾದ್ವಾ ತದ್ವಾ ವೊರ್ಕ್ ಔಟ್ ಮಾಡೋದು..ಹೀಗೆ!!!<br /><br /><br /><br />ಮೊದಲು ಬೇರೆ ರೂಮ್ ನಲ್ಲಿ ಇರುತ್ತಿದ್ದ ಅವಳು ಸ್ವಲ್ಪ ದಿನದಲ್ಲೇ ನನ್ನ ಜೊತೆ ನನ್ನ ರೂಮ್ನಲ್ಲೇ ಇರೊಕ್ಕೆ ಶುರು ಮಾಡಿದಳು. ಒಂದು ದಿನಕ್ಕೂ ಸಂಬಂಧ ಕ್ಕೆ ಹೆಸರು ಕೊಡೋ ಪ್ರಯತ್ನ ಮಾಡಲಿಲ್ಲ ಅವಳು ಅದು ನನಗೂ ಬೇಕಿರಲಿಲ್ಲ ಅವಳನ್ನ ಮದುವೆ ಆಗ್ತೀನಾ ಅಂತ ಕೂಡ ಯೋಚಿಸಿರಲಿಲ್ಲ ನಾನು. ಸಂದೀಪ ಸರ್ವನರೇ ಗರ್ಲ್ ಫ್ರೆಂಡ್- ಬಾಯ್ ಫ್ರೆಂಡ್ ಅನ್ನೊಕ್ಕೆ ಶುರು ಮಾಡಿದ್ದರು 'ನೀನು ಅವಳನ್ನ ಪ್ರೀತಿಸುತ್ತಿಯ' ಅಂತ ಸರ್ವನ ಕೇಳಿದ್ದ 'ಇಲ್ಲ ,ಅವಳು ನಂಗೆ ಇಷ್ಟ ಆಗ್ತಾಳೆ ಅಷ್ಟೇ' ಅಂದಿದ್ದೆ ಅವಳನ್ನ ಇದೆ ಪ್ರಶ್ನೆ ಕೇಳಿದ್ದಕ್ಕೆ.."ಹಾ ಪ್ರೀತಿಸುತ್ತೀನಿ, ಆದರೆ ಅವನಿಗೆ ಈ ವಿಷಯ ಹೇಳಬೇಡ. ಅವನು ಹೇಗೆ ಅಂತ ನಂಗೆ ಗೊತ್ತು ಅವನಿಗೆ ಉಸಿರುಕಟ್ಟೋ ಹಂಗೆ ಆಗಬಾರದು. ನನ್ನ ಅವನ ಸಂಬಂಧಕ್ಕೆ ಹೆಸರು ಬೇಡ" ಅಂದಿದ್ದಳಂತೆ.<br /><br /><br /><br />ದಿನಾ ರಾತ್ರಿ ನಿದ್ದೇಲಿ ಮಾತಾಡೋ ಅಭ್ಯಾಸ ಇತ್ತು ಅವಳಿಗೆ. ಅವಳು ರಾತ್ರಿ ಹಿಂಗ್ ಕಿರಿಚುತ್ತಿದ್ದಳು, ಹಂಗೆ ಮಾತಡುತ್ತಿದ್ದಳು, ಅಂತ ಸಂದೀಪ ಸರ್ವನರಿಗೆ ಹೇಳಿ..ಮೂರು ಜನಾನು ಅವಳನ್ನ ಸಕತ್ತು ಚುಡಾಯಿಸುತ್ತಿದ್ದವಿ..ಅವಳೂ ಅದಕ್ಕೆ ಆಯುರ್ವೇದಿಕ್ಕು, ಆಲೋಪತಿ, ಹೋಮಿಯೋಪತಿ, ರೇಖಿ, ಯುನಾನೀ, ಎಲ್ಲ ಟ್ರೀಟ್ಮೆಂಟ್ ಮಾಡಿಸಿಕೊಂಡು ಯಾವುದು ಸರಿ ಹೋಗದೇ, "ನಾನು ರಾತ್ರಿ ಮಾತಾಡೋದೇ ಸರಿ' ಅಂತ ನಿರ್ಧಾರ ಮಾಡಿದ್ಲು.<br /><br /><br /><br />ಹೊರಡೋಕ್ಕೆ ಮುಂಚೆ ಚಿಗರೇ ಥರ ಆಗೋಗಿದ್ದಳು ಅವಳು. ಅಪ್ಪನಿಗೆ, ಅಮ್ಮನಿಗೆ, ತಮ್ಮನಿಗೆ, ಅಜ್ಜಿ- ತಾತನ್ಗೆ, ಸ್ನೆಹಿತರಿಗೇ ಅಂತ ಎಲ್ಲರಿಗೂ ಶೋಪಿಂಗ್ ಮಾಡಿ, ನಮ್ಮ ಮೂರು ಜನರಿಗೆ ಒಂದು ಚಂದದ ಪಾರ್ಟಿ ಕೊಟ್ಟಳು.ಅವಳಿಗೇನು ಕೊಟ್ಟಿರಲಿಲ್ಲ ನಾನು ಏನು ಕೊಡೋದು ಅಂತ ಯೋಚಿಸಿ ಒಂದು ಅತ್ಯಂತ ದುಬಾರಿಯಾದ ಟೆಡ್ಡಿ ಬೆರ್ ಕೊಟ್ಟೆ ಅವಳಿಗೆ ಅದರ ಹಾಲಿನ ಕೆನೆ ಬಣ್ಣ ಇಷ್ಟ ಆಯ್ತು.<br /><br /><br /><br />ತೀರಾ ಹೊರೋಡೋ ಮುಂಚೆ ಏರ್ಪೋರ್ಟ್ ನಲ್ಲಿ ನನ್ನ ಕೈಗೆ ಒಂದು ಕವರ್ ಕೊಡುತ್ತಾ ನಾನು "ಇಲ್ಲಿಂದ ಹೋಗಿ ಒಂದೆರೆಡು ವರ್ಷಕ್ಕೆ ಮದುವೆ ಆಗಬಹುದು..ಆದರೆ ನನಗೆ ಇಷ್ಟವಾದವನ ಜೊತೆ ಯಾವುದೇ ಬಂಧನವಿಲ್ಲದೇ, ಬಂಧನ ಹಾಕದೆ, ಇದ್ದ ಸಂತೋಷವಿದೆ ನನಗೆ. ನಿನ್ನ ಮದುವೆಗೆ ನನ್ನ ಕರೆಯೋದು ಮರೀಬೇಡ" ಅಂತ ಹೇಳಿ ಹೊರಟೆ ಹೋದಳು. ಕವರು ಬಿಚ್ಚಿ ನೋಡಿದರೆ ಮೊಲದ ಬಿಳುಪಿನ ಟವೆಲ್ ಅದಕ್ಕಂಟಿಸಿದ ಚೀಟಿ "ನನ್ನ ಮಿಸ್ ಮಾಡಿಕೊಂಡಾಗ ಇದು ನಿನ್ನ ಮೈ- ಮನಗಳನ್ನ ಸವರಲಿ" ಅಂತ!!<br /><br /> ಆಫೀಸಿಗೆ ಲೇಟಾಯ್ತು ಅನ್ನೋದು ನೆನಪಾಗಿ ಅವಳು ಕೊಟ್ಟಿದ್ದ ಟವೆಲ್ ತೆಗೆದುಕೊಂಡು ಸ್ನಾನದ ಮನೆ ಹೊಕ್ಕೆ.....ಮೃಗನಯನೀhttp://www.blogger.com/profile/05798486490706460406noreply@blogger.com7tag:blogger.com,1999:blog-7077041789502080406.post-54188682124076278532007-05-22T22:57:00.000-07:002007-05-23T00:16:12.325-07:00ಒಂದು ಮುತ್ತಿನ ಕಥೆನಮ್ಮ ಮನೆ ಎದುರಿಗೆ ಒಬ್ಬ ನಿವೃತ್ತ ಸೇನೆಯ ಅಧಿಕಾರಿ ತಮ್ಮ ಕುಟುಂಬದ ಜೊತೆ ವಾಸವಾಗಿದ್ದರು. ಅವರಿಗೆ ಮೂರು ಜನ ಮಕ್ಕಳು ಮೊದಲನೆಯ ಅಣ್ಣ ವೈದ್ಯರು, ಮಧ್ಯದ ಹುಡುಗಿ ಟೀಚರ್, ಮೊರನೆಯ ಹುಡುಗ ಏನೂ ಮಾಡುತ್ತಿರಲಿಲ್ಲ ಏಕೆಂದರೆ ಅವನಿಗೆ ಬುದ್ಧಿಮಾoದ್ಯವಾಗಿತ್ತು.<br /><br />ಆ ಮನೆಯವರು ತುಂಬಾ ಒಳ್ಳೇ ಜನ. ತಮ್ಮ ಕೈಯಲ್ಲಿ ಆದಷ್ಟು ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ನಾವು ಮನೆ ಕಟ್ಟಿಸುವಾಗಲೂ ಕಬ್ಬಿಣ, ಸೆಮೆಂಟು ಏನೂ ಕಳ್ಳತನ ಆಗದ ಹಾಗೆ ನೋಡಿಕೊಂಡಿದ್ದರು.ನಾವು ಆ ಮನೆ ಕಟ್ಟಿಸಿ ಗೃಹ ಪ್ರವೇಶ ಮಾಡಿದಾಗ ನಾನು 10ನೇ ತರಗತೇಲಿದ್ದೆ.<br /><br />ಅವರ ಕೊನೇ ಹುಡುಗ ಕೈಗೆ ಸಿಕ್ಕಿದ ಚಪ್ಪಲಿ, ಟೀ ವಿಯ ರೆಮೋಟು ,ಚೇರು, ಪುಸ್ತಕ ಎಲ್ಲವನ್ನು ಹೊರಗೆ ಎಸೀತಿದ್ದ ಅವೆಲ್ಲ ನಮ್ಮ ಮನೆ ಮುಂದೆ ಬಂದು ಬೇಳುತ್ತಿದ್ದವು.ಆ ಮೇಂಟಲೀ ರಟಾರ್ಡೆಡ್ ಹುಡುಗ ಇವತ್ತು ಟೇಪ್ ರೆಕೊರ್ಡೆರ್ ಹೊರಗೆ ಎಸ್ದ ಕಣೆ ಅಂತ ನನ್ನ ತಂಗಿಗೆ ನಾನು ಹೇಳುವುದಕ್ಕೂ, ಅಪ್ಪ ಆಫೀಸಿನಿದ ಬರುವುದಕ್ಕೂ ಸರಿಯಾಯಿತು. "ಏನಮ್ಮ ಇದನ್ನೇನ ನಾನು ಕಲಿಸಿರೋದು ನಿಮಗೆ ಎಷ್ಟು ಓದಿದ್ರೆ ಏನು ಬಂತು? ಮನುಶ್ಯತ್ವ ಇಲ್ಲದಿರೊವಾಗ" ಅಂದರೂ ಅಪ್ಪ ನನಗೆ ಅರ್ಥವಾಗದೇ 'ನಾ ಏನು ಮಾಡ್ ದೇ ಈಗಾ..' ಅಂತ ರಾಗ ಎಳೆದೆ ."ಆ ಹುಡುಗನಿಗೆ ಹೆಸರಿಲ್ಲವ ಯಾವಾಗಲೂ ಮೇಂಟಲೀ ರಟಾರ್ಡೆಡ್ ಹಂಗೆ ಮಾಡ್ದ, ಹಿಂಗೆ ಮಾಡ್ದ ಅಂತಿರಲ್ಲ.... ಅವನ ಹೆಸರಿನಿಂದ ಕೆರೆಯೊಕ್ಕೆ ಏನು ಕಷ್ಟ ನಿಮಗೆ" ಅಂದರು. ನಾನು ಪುಟ್ಟಿ ಅಪ್ಪನ್ನ ಸಾರಿ ಕೇಳಿದ್ವಿ. ಅವನ ಹೆಸರು ರಾಮು ಅಂತ ಇಟ್ಕೋಳಿ.<br /><br /> ಈಗ ಮುಖ್ಯ ವಿಷಯಕ್ಕೆ ಬರೋಣ. ಆ ಮನೆಗೆ ಬಂದು ಎರಡು ವರ್ಷ ಆಗಿದ್ರೂ ಎದೂರುಗಡೆ ಮನೆಗೆ ನಾನು ಒಂದು ಸಲನು ಹೋಗಿರಲಿಲ್ಲ.ಅವರ ಮನೇಲಿ ಏನೇ ಫ್ಂಕ್ಷನ್ನು ಆದ್ರೂ ಅಪ್ಪ ಅಮ್ಮ ಪುಟ್ಟಿ ಹೋಗ್ತಿದ್ರು ನಾನು ಹೋಗ್ತಿರ್ಲಿಲ್ಲ. ನಾನು ಸೆಕೆಂಡ್ ಪಿ ಯು ಸಿ ನಲ್ಲಿದ್ದೆ ಅವತ್ತು ದೀಪಾವಳಿ ನಾನು ಸಚ್ಚು (ನನ್ನ ಕ್ಲಾಸ್ಸ ಮೇಟು) ಮತ್ತೆ ಪುಟ್ಟಿ ಮಾತಾಡುತ್ತಾ ನಿಂತಿದ್ವಿ.ಅಮ್ಮ ಬಂದು "ನೀನು ಇಷ್ಟು ದಿನ ಆದ್ರೂ ಅವರ ಮನೆಗೆ ಹೋಗಿಲ್ಲ ಜಂಬ ಅಂತ ತಿಳ್ಕೋತಾರೆ ಹೋಗಿ ಹೋಳಿಗೆ ತಿಂದು ಬಾ. ಸಚ್ಚು ನೀನು ಹೋಗಮ್ಮ, ಪುಟ್ಟಿ ನೀನು ಹೊಗೆ" ಅಂದ್ರೂ. ಸರಿ ಹೋಗಲೆ ಬೇಕಾಯ್ತು.<br /><br /> ಹೊದ್ವಿ ಡಾಕ್ಟರ್ ಅಣ್ಣ ಮಾತಾಡಿಸಿದರು.ಸಚ್ಚು, ಪುಟ್ಟಿ ಒಂದು ಸೊಫಾ ಮೇಲೆ ಕೊತ್ಕೊಂಡ್ರೂ. ನಾನು ಇನ್ನೊಂದರ ಒಂದು ಬದೀಲಿ ಕೊತ್ಕೊಂಡೆ ಆಂಟಿ ಹೋಳಿಗೆ ಕೊಟ್ರೂ.ಅಷ್ಟರಲ್ಲಿ ಆ ರಾಮು ನನ್ನ ಪಕ್ಕಾ ಖಾಲಿ ಇದ್ದ ಜಾಗದಲ್ಲಿ ಕೂತುಕೊಂಡ.ನನಗೆ ಎದೆಯಲ್ಲಿ ಅವಲ್ಕ್ಕಿ ಕುಟ್ಟಿದ ಹಾಗೆ ಆಗುತ್ತಿತ್ತು. ನಾನು ಹೋಳಿಗೆ ಮುರೀತಿದೀನಿ, ಅಷ್ಟರಲ್ಲಿ ನನ್ನ ಎರಡು ತೋಳು ಗಟ್ಟಿಯಾಗಿ ಹಿಡಿದುಕೊಂಡು ನನ್ನ ಎಡಗೆನ್ನೆಗೆ ಮುತ್ತಿಟ್ಟ ನಾನು ಕಿಟಾರ್.... ಅಂತ ಕಿರುಚಿಕೊಂಡು ತಟ್ಟೇನ ತ್ರೋ ಬಾಲ್ ತರ ದೂರಕ್ಕೆ ಎಸೆದು ಅಲ್ಲಿಂದ ಓಡಿದೆ.ಅಮ್ಮಂಗೆ ಕಿರುಚು ಕೇಳಿಸಿರಬೇಕು ಬಾಗಿಲ ಹತ್ತಿರ ಬಂದಿದ್ದರು. ಅಷ್ಟರಲ್ಲಿ ಪುಟ್ಟಿ, ಸಚ್ಚು, ಆಂಟಿಯು ಬಂದರೂ.ನನಗೆ ಹೇಗೆ ರಿಯಾಕ್ಟ್ ಮಾಡಬೇಕು ಅಂತ ಗೊತ್ತಾಗುತ್ತಿರಲಿಲ್ಲ.ಆಕಸ್ಮಾತ್ ಅವನು ತುಟಿಗೆ ಏನಾದರೂ ಮುತ್ತು ಕೊಟ್ಟಿದ್ದರೆ ಏನು ಗತಿ ಅಂತ ಯೋಚಿಸುತ್ತಿದ್ದೆ.<br /><br />ಅಮ್ಮ ತುಂಬಾ ಆರಾಮಾಗಿ 'ಹೋಗ್ಲಿ ಬಿಡು ಪಾಪ ಆ ಹುಡುಗನಿಗೆ ತಲೆ ಸರಿ ಇಲ್ಲ' ಅಂತ ನನಗೆ ಗೊತ್ತಿರೋದನ್ನೇ ಹೊಸ ವಿಷಯ ಅನ್ನೋಹಾಗೆ ಹೇಳಿದರು..ಅಮ್ಮ ಜೀವನದ ಮೊದಲನೆ ಕಿಸ್ಸು.. ಅಂತ ಏನೇನೋ ಗೊಣಗಿದೆ..ನೀನು ಚಿಕ್ಕವಳಾಗಿದ್ದಾಗ ಇಡೀ ರೋಡಿನವರು ನಿನ್ನ ಕೆನ್ನೆ ಹಿಂಡಿ, ಮುದ್ದು ಮಾಡಿ, ಮುತ್ತು ಕೊಟ್ಟು ಕಳಿಸೋರು ಇದನ್ನು ಹಾಗೆ ಅಂತ ತಿಳುಕೋ ಅಂದ್ರು.ಇದನ್ನು ಹಾಗೆ ಅಂತ ಹೇಗೆ ತಿಳ್ಕೋಳೋದು ಅಂತ ನನಗೆ ಅರ್ಥ ಆಗಲಿಲ್ಲ.ಆದ್ರೂ ಬೇರೆ ವಿಧಿ ಇಲ್ಲದೇ ಸುಮ್ಮನಾದೆಮೃಗನಯನೀhttp://www.blogger.com/profile/05798486490706460406noreply@blogger.com9tag:blogger.com,1999:blog-7077041789502080406.post-10572493015537807852007-05-16T18:35:00.000-07:002007-05-21T22:22:29.382-07:00ಒಂದು ಆಲೋಚನೆ!!!!<div align="justify">ನಾನು ಎಷ್ಟೋ ಸಲ ಯೋಚಿಸಿದ್ದೀನಿ ಈ ಜಗಳಗಳು ಅಸಮಾಧಾನ ಯಾಕೆ ಉಂಟಾಗುತ್ತೆ? ಏಷ್ಟು ಚೆನ್ನಾಗಿರೋರು ಆಷ್ಟೆ ಕೆಟ್ಟಾದಾಗಿ ಯಾಕೆ ಜಗಳ ಆಡ್ತಾರೆ? ಒಬ್ಬರಿಗೊಬ್ಬರು ಸ್ನೇಹದಿಂದ, ಪ್ರೀತಿಯಿಂದ ಇರೋಕೆ ಸಾದ್ಯನೇ ಇಲ್ಲವ?...<br /><br />ಸಾಮನ್ಯವಾಗಿ ಇಬ್ಬರು ಜಗಳ ಆಡಿದ್ರೆ ಅವರಲ್ಲಿ ಒಬ್ಬರ ಸಣ್ಣತನದಿಂದ (ಅಥವಾ ಇಬ್ಬರದೂ ಇರಬಹುದು) ಅಥವಾ ತಪ್ಪು ತಿಳುವಳಿಕೆಯಿಂದ ಜಗಳ ಆಗಿರುತ್ತೆ.. ತಪ್ಪು ಗ್ರಹಿಕೆಯಿಂದ ಆಗಿರೋ ಜಗಳಗಳಿಗೆ ಸಮಾಧಾನ ಹುಡುಕಬಹುದು, ಆದರೆ ಈ ಸಣ್ಣತನಕ್ಕೆ ಏನು ಮಾಡೋದು?<br /><br />ನಾನು ವಿಧ್ಯಾರ್ಥಿನಿಲಯದಲ್ಲಿ ಇರೋದ್ರಿಂದ ಸಣ್ಣತನಗಳ ಅನುಭವ ಚೆನ್ನಾಗಿ ಆಗಿದೆ. ಹುಡುಗೀರೆ ಹೀಗ? ಅಥವ ಹುಡುಗರಲ್ಲೂ ಹೀಗಾಗುತ್ತ? ಯಾಕೆ ಸಣ್ಣ ಪುಟ್ಟವಿಷಯಗಳನ್ನು ಹೀಗೆ ದೊಡ್ಡದು ಮಾಡಿ ಜಗಳ ಆಡ್ತಾರೆ? ಒಂದು ಕಡೆ ಮೂರು ಜನ ಇದ್ರು ಅಂತ ಇಟ್ಕೋಳ್ಳಿ.. ಅವರಲ್ಲಿ ಒಬ್ಬರು ಹೊರಗೆ ಹೋದ ತಕ್ಷಣ ಇನ್ನೊಬ್ಬರು ಅವರ ಬಗ್ಗೆ ಯಾಕೆ ಇಲ್ಲ ಸಲ್ಲದ ಮಾತಾಡಬೇಕು?ಯಾಕೆ ಒಬ್ಬರಿಗೊಬ್ಬರಿಗೆ ಪ್ರೀತಿ ಇರಲ್ಲ?ಮನೆಯವರು ಆಗಿದ್ರೆ ಚಿಕ್ಕ ಪುಟ್ಟ ತಪ್ಪುಗಳನ್ನ ಕ್ಷಮಿಸುತ್ತಿದ್ದರು ಅಲ್ಲವ? ನಮ್ಮ ಜೊತೆ ಇರುವವರು ಅವರ ಮನೆಯವರು ಅಲ್ಲ ಅಂದ ತಕ್ಷಣ ಯಾಕಿಷ್ಟು ಒರಟುತನ?<br /><br />ಎಲ್ಲ ಹುಡುಗೀರು ಹೀಗೆ ಇರ್ತಾರೆ ಅಂತ ಅಲ್ಲ..ಆದ್ರೆ ಸ್ವಲ್ಪ ಜನ ಅಂತೂ ಹೀಗೆ ಇರ್ತಾರೆ..ನಿಜ ಹೇಳಬೇಕು ಅಂದ್ರೆ ಅವರು ಬೆಳೆದ ರೀತಿನೆ ಹಾಗಿರುತ್ತೆ, ಅವರ ಒರಟುತನ, ಅವರು ಸಂಸ್ಕೃತಿ ಇಲ್ಲದೆ ಬೆಳೆದ ರೀತಿ ಅಥವ ಚಿಕ್ಕವಯಸ್ಸಿನಿಂದ ಪ್ರೀತಿ ಸಿಗದೇ ಇರೋದು ಅಥವ ಇನ್ನು ಏನೇನೋ ಕಾರಣಗಳು ಅವರನ್ನ ಹಾಗೆ ಮಾಡಿರುತ್ತವೆ....<br /><br />ಹೆಂಡತಿ ಗಂಡನನ್ನ, ಮಕ್ಕಳನ್ನ ಪ್ರೀತಿಸಬೇಕು. ಅತ್ತೆ, ಮಾವ, ನಾದೀನೀನ ದ್ವೇಶಿಸಬೇಕು ಅಂತ ಏನು ಇಲ್ಲವಲ್ಲ? ತಾಯಿ ಕೂಡ ಮಗನನ್ನ ಪ್ರೀತಿಸೋದು ಸೊಸೆಯನ್ನು ಗೋಳು ಹುಯ್ಕೋಳೊದು ಅಂತ ಏನು ಇಲ್ಲ?.. ಹೆಂಡತಿಗೆ ಗಂಡ ಮಾಡಿದ ತಪ್ಪು ಅಷ್ಟು ದೊಡ್ದದು ಅಂತ ಅನ್ನಿಸೊದಿಲ್ಲ; ಅನ್ನಿಸಿದರೂ ಅದನ್ನ ರಣರಂಪ ಮಾಡೋಲ್ಲ, ಅದೇ ತಪ್ಪು ಅತ್ತೆಯಿಂದ ಆದ್ರೆ ಯಾಕಿಷ್ಟು ಸಿಡಿ ಮಿಡಿ?<br /><br />ನಾವು ಯಾವಾಗ ಬೆಳೆಯೋದು ನಾವು ಯಾವಾಗ ಎಲ್ಲರನ್ನ ಪ್ರೀತಿಸೋದನ್ನ ಕಲಿಯೋದು. ಈ ಸಣ್ಣತನಗಳಿಂದ ಹೊರಗೆ ಉಳಿಯೋದು ಹೇಗೆ?<br /><br />ನಾವುಗಳೆ ಬದಲಾಗಬೇಕು, ಬದಲಾವಣೆ ತರಬೇಕು. ನಮಗೆ ಗೊತ್ತಿರೋರಿಂದ ಮತ್ತು ಹತ್ತಿರ ಇರೋರ 'ಮಾತು- ನಡುವಳಿಕೆಯಿಂದ' ನಮಗೆ ನೋವಾದರೆ ಎಲ್ಲರ ಮುಂದೆ ಹಿಂಗೆ ಮಾಡಿದರು, ಅವನು ಹಾಗಂದ, ಅವಳು ಹಾಗಂದಳು ಅಂತ ಕೊರಗೋದು ಅಥವ ಬೇರೆಯವರ ಹತ್ತಿರ ನಿಮಗೆ ನೋವು ಮಾಡಿರೋರ ಬಗ್ಗೆ, ಅವರ ವಯಕ್ತಿಕ ವಿಷಯಗಳ ಬಗ್ಗೆ ಗಾಸಿಪ್ ಮಾಡೊ ಬದಲು, ಅವರಿಗೇ ವಿಷಯ ಹೇಳಿ ಅರ್ಥ ಮಾಡಿಕೊಂಡ್ರೆ ಸರಿ..if not forget it ....</div><div align="justify"> </div><div align="justify">ನಿಮಗೆ ಹತ್ತಿರದೋರು ಮಾಡುತ್ತಿರುವುದು ತಪ್ಪು ಅನ್ನಿಸಿದರೆ ಅವರಿಗೇ ನೇರವಾಗಿ ಹೇಳಿ ಅವರನ್ನು ಪ್ರೀತಿಸ್ತೀರ ಆದ್ದರಿಂದ ಅವರ ಒಳ್ಳೇದನ್ನೆ ಬಯಸುತ್ತೀರ ಅನ್ನೋದು ಅವರಿಗೇ ಸ್ಪಷ್ಟವಾಗಲಿ.. ಬೇರೆ ಯಾರೋ ಮೂರನೆ ವ್ಯಕ್ತಿ ಬಗ್ಗೆ ಕುಹಕದ ಮಾತು ನಗು ಬೇಡವೇ ಬೇಡ ...ಅವರಿಗೆ ನೀವು ಹೇಳೋದು ಏನು ಇಲ್ಲ. ಅವರ ಹತ್ತಿರದವರು ಅವರಿಗೆ ಹೇಳ್ಕೋತಾರೆ.ಯಾರಾದರು ಇಬ್ಬರು ಜಗಳ ಆಡ್ತಿದ್ರೆ ದಯವಿಟ್ಟು ಅಲ್ಲಿಂದ ಹೊರಗೆ ಬಂದುಬಿಡಿ.ನೀವಿದ್ರೆ ನಿಮ್ಮ ಮುಂದೆ ಇನ್ನೊಬ್ಬರಿಗೆ ಸೋಲಬಾರದು ಅಂತ ಒಬ್ಬರಿಗೊಬ್ಬರು ಪ್ರತಿ ಮಾತು ಹೇಳ್ತಾನೇ ಇರ್ತಾರೆ..ನೀವು ಆ ರೂಮಿನಿಂದಹೋದ ತಕ್ಷಣ ಪಾತಾಳ ಶಾಂತ....<br /><br />ಇಂದಿನ ಹುಡುಗ ಹುಡುಗೀರು ನಾವು- ನಮ್ಮ ಜೀವನ ಬದಲಾಗಬೇಕು, ನಮ್ಮದು ಸುಂದರವಾದ ಜೀವನವಾಗಬೇಕು..ಜಗಳ, ಅಸಮಧಾನ, ಇನ್ಯಾರದೋ ವಿಷಯಗಳಲ್ಲಿ ಮುಳುಗೋದು ಬೇಡ. ನಮ್ಮಗಳಿಗೆ ಬೇಕಾಗಿರೋದು ಬರೀ ಬೇಸಿಕ್ ನೀಡ್ಸ್ ಅಷ್ಟೇನ? ಬರೀ ಅಷ್ಟಕ್ಕೆ ಇಷ್ಟೆಲ್ಲ ಒದ್ದಾಡುತ್ತೀವ? ಎನಾದರು ಕಂಡು ಹಿಡಿಯೋಣ, ಮಾಡೋ ಕೆಲಸಗಳನ್ನೇ ಹೊಸ ಹೊಸ ರೀತಿಯಲ್ಲಿ ಸಮರ್ಥವಾಗಿ ಮಾಡೋಣ, ಚಿಕ್ಕ ಪುಟ್ಟ ಕ್ಷಣಗಳಲ್ಲಿ ಸಂತೋಷ ಹುಡುಕೋಣ.ದೊಡ್ಡ ದೊಡ್ಡ ಅಘಾತ ಅಸಂತೋಷವನ್ನ ಮರೆಯೋಣ..</div><div align="justify"> </div><div align="justify"> ಭೈರಪ್ಪನವರ ವೈಚಾರಿಕ ದೃಷ್ಟಿ ಇರಲಿ,ರವಿ ಮಾಮನ ಥರ frankಆಗೋಣ , ತೇಜಸ್ವಿಯವರ ಹುಡುಕಾಟದಲ್ಲಿ ನಮ್ಮದೂ ಒಂದು ಹೆಜ್ಜೆ ಇರಲಿ, ಮಾಳವಿಕ ಅಕ್ಕನಿಂದ ಧೈರ್ಯ ಕಲಿಯೋಣ, ನಮ್ಮಲ್ಲಿ ಕೆ.ಎಸ್.ನ ಅವರ ಪ್ರೀತಿ ಇರಲಿ ದ್ರಾವಿಡ್ steadyness,ಸೆಹವಾಗ್ ಭೋರ್ಗರೆತದ ಜೊತೆಗೆ ಸುಬ್ಬಲಕ್ಷ್ಮಿ ಲತಾ ಚಿತ್ರ ಜಾನಕಿಯವರ ಸಂಗೀತದ ಮಾಧುರ್ಯವಿರಲಿ ನಮ್ಮ ನಿಮ್ಮಗಳ ಮದ್ಯೆ... </div>ಮೃಗನಯನೀhttp://www.blogger.com/profile/05798486490706460406noreply@blogger.com8tag:blogger.com,1999:blog-7077041789502080406.post-53383786708610250912007-05-16T06:15:00.001-07:002007-05-18T02:22:47.198-07:00ಪ್ರಶ್ನೆ!!???ಕಪ್ಪೆ ಸದ್ದು ಕೇಳಿ ಸಣ್ಣಗೆ ರೋಮಾಂಚನಗೊಳ್ಳುತ್ತಿದ್ದಳು ಅವಳು..ಮಳೆ ಬರುತ್ತೆ ಅಂತು ಮನಸ್ಸು..<br /><br />ಅಜ್ಜಯ್ಯ ತನ್ನ ಪುಟ್ಟ ಮೊಮ್ಮಕ್ಕಳಿಗೆ ನಾಳೆ ಖಂಡಿತ ನವಿಲು ತೋರುಸ್ತೀನಿ ಅಂತ ಆಸೆ ತೋರಿಸುತ್ತಿರೋದು ..God promise ಮಾಡು ತಾತಾ mother promiseಮಾಡು ತಾತಾ ಅಂತ ಅವು ಗೋಳು ಹುಯ್ಕೋತಿರೋದು ಕೆಳುಸ್ತಿತ್ತು.<br /><br />ಮನೆಯ ದೊಡ್ಡ ಮೊಮ್ಮಗಳಲ್ಲವೇ ಅವಳು...ತಾತ ಅವಳಿಗೂ ಮೊದಮೊದಲು ನವಿಲು ತೋರಿಸಿದ್ದ ಅವಳ ನಾಲ್ಕನೇ ವರ್ಷದಲ್ಲಿ...ಅವಳಿಗೆ ಒಂದು ಚಂದದ ಹೆಸರು ಇತ್ತು..ಅರುಂಧತಿ ಅಂತ 'ಅರೂ' ಅಂತ ಕರೀತಿದ್ರು ಪುಟ್ಟದಾಗಿ ಪ್ರೀತಿಯಿಂದ.... ಆದರೆ ತನ್ನ ಇಪ್ಪತ್ತನೆ ವಯಸ್ಸಿನಲ್ಲಿ ಸಿಕ್ಕ ಚುಂಬನ ಕೂಡ ನವಿಲಿನ ಮುಂದೇನೇ ಆಗುತ್ತೆ ಅಂತ ಖಂಡಿತ ಉಹೆ ಇರಲಿಲ್ಲ ಅವಳಿಗೆ.ಆ ಹುಡುಗನ ಎತ್ತರ ನೆನಪಿಗೆ ಬಂದು ಮುತ್ತು ಕೊಡೋಕ್ಕೆ ಅವನು ಬಗ್ಗಬೇಕಾಯ್ತಾಲ್ಲ... ಅನ್ನಿಸಿ ನಕ್ಕಳು.<br /><br />ಬೆಳಗ್ಗೆ ತೋಟದ ಬಾವಿ ನೀರಲ್ಲಿ ಈಜಾಡಬೇಕು ಅಂತ ಬೇಗನೆ ಎದ್ದು, ತಾತನ ಜೊತೆ ಅಷ್ಟು ದೂರ ಬಾವಿ ಕಡೆ ಹೋದ್ರೆ.."ನಿನ್ನ ಚಿಕ್ಕಪ್ಪ ಇನ್ನೂ ವಂದಿಲ್ಲೇ ಅವನು ಬಂದ್ರೆ ಬೇಕಾದ್ರೆ ಈಜಡಿಕೊ" ಅಂತ ಕನ್ನಡ ತಮಿಳು mix ಮಾಡಿ ಹೇಳಿದ ತಾತನ ಮೇಲೆ ಸಿಟ್ಟು ಬಂದಿತ್ತು. "ಚಿಕ್ಕಪ್ಪ ವರಲ್ಲೇ ಅಂತ ಗೊತ್ತಾಗಿ ಅಲ್ಲೇ ಮಣ್ಣು ನೆಲದ ಮೇಲೆ ಅಡ್ಡಾದಳು ..ಜೂರು ನಿದ್ದೆ..<br /><br />ಕರಿಯ ಬಂದು ಸಾಮಿ ಎದ್ದೇಳಿ ಮನೆ ತಾಕ್ಕೆ ಹೋಗ್ಬೇಕಂತೆ ದೊಡ್ಡ ಸಾಮಿ ಹೇಳ್ಟು ಅಂದಾಗ ಎಚ್ಚರ ಆಯ್ತು ಈ ಕರಿಯಂಗೆ ಹೆಣ್ಣು, ಗಂಡು, ದೊಡ್ಡವರು, ಚಿಕ್ಕವರು, ಅನ್ನೋ ಭೇದನೆ ಇಲ್ಲ ಅಪ್ಪಾಂಗು ಸಾಮಿ, ತಾತಂಗುಸಾಮಿ, ಅಜ್ಜಿಗೂ ಸಾಮಿ, ಮೊಮ್ಮಗಳಿಗೂ ಸಾಮಿ, ಮನೆ ಪುಟ್ಟ ಕಂದ - ರಾಘವಂಗು ಸಾಮಿ, ಅಂತನಲ್ಲ ಅನ್ನಿಸಿ.. ನಿದ್ದೆ ಕಣ್ಣಲ್ಲೇ ಅವನನ್ನೇ ನೋಡುತ್ತಿದ್ದಳು..ಅವನಿಗೆ ಗೊಂದಲವಾಗಿ 'ದೊಡ್ಡ ಸಾಮಿ ಕರಿತತೆ..' ಅಂತ ರಾಗ ಎಳೆದ...<br /><br />ಈ ಕರಿಯ ಅಜ್ಜಯ್ಯನಿಗಿಂತ ಹತ್ತು ವರ್ಷಕ್ಕೆ ಚಿಕ್ಕವನಿರಬಹುದು ಮೊದಲನೆ ಸತಿ ಅವನನ್ನು ನೋಡಿದಾಗ ಸಂಜೆ ತಂಪಲ್ಲಿ ಅವನು ಕಾಯಿಸುಲೀತಿದ್ದ... ಆಗ ನಾನು ಮೂರನೇ ಕ್ಲಾಸ್ನಲ್ಲಿದ್ದನಾ ಅಂತ ಜ್ಞಾಪಿಸಿಕೊಂಡಳು ಅರೂ.. ಅಜ್ಜಿ ಸಕ್ಕರೆ ನೀರು ಕಾಸಿ, ಹಳೆ ಕಾಫಿಗೆ ಆ ನೀರನ್ನು ಸೇರಿಸಿ ಒಂದು ದೊಡ್ಡ ಲೋಟ ಕಾಫಿ ಮಾಡಿದಳು. "ಇದನ್ನ ಕರಿಯನ ಲೋಟಕ್ಕೆ ಮೇಲಿಂದ ಸುರಿದು ಬಾ, ಅವನ ಲೋಟಕ್ಕೆ ಈ ಲೋಟ ತಾಗುಲಿಸ ಬೇಡ" ಅಂತ ಭೋಧಿಸಿ ಕಳುಹಿಸಿದಳು. ಆ ಛತ್ರದಂತಹ ಮನೆಯ ಅಡುಗೆ ಮನೆ, ಆರಂಗು, ಹಾಲೂ , ವಾರಂಡ ದಾಟಿ ಜಗುಲಿಗೆ ಬರೋಹ್ತೊತ್ತಿಗೆ ಅಜ್ಜಿಯ ಮಾತು ಮರೆತಿತ್ತು ಮೂರನೇ ಕ್ಲಾಸಿನ ಪುಟ್ಟ ಅರುಗೆ. ಕಯ್ಯಲ್ಲಿ ಕಾಫಿ ಇದ್ದಿದ್ದರಿಂದ ಅದನ್ನ ಕರಿಯನಿಗೆ ಹಾಕ್ಬೇಕು ಅಂತ ಗೊತ್ತಾಯ್ತು 'ಸಾಮಿ ಇಲ್ಲ್ಹಾಕಿ' ಅಂತ ಲೋಟ ಇಟ್ಟು ಬೆವರು ಒರೆಸಿಕೊಳ್ಳುತ್ತಾ ದೂರ ಹೋದ ಕರಿಯ.ಅರೂ ಕಾಫಿ ಕೆಳಗೆ ಚಲ್ಲದಂತೆ ನೀಟಾಗಿ ಹಾಕಬೇಕು ಅಂತ ಆ ಲೋಟಕ್ಕೆ ಈ ಲೋಟ ತಗುಲಿಸಿಯೇ ಹಾಕಿದ್ಲು..ಅಲ್ಲೇ ಇದ್ದ ಅವಳ ಅಪ್ಪ "ಹಂಗೆ ಲೋಟ ತಗುಲಿಸಿ ಹಾಕಬಾರದು ಕಂದ ಅಜ್ಜಿಗೆ ಬೇಜಾರಾಗುತ್ತೆ ನೋಡಿದ್ರೆ ನಿನ್ನ ಗ್ರಹಚಾರ ಬಿಡಿಸೋಳು" ಅಂದ್ರು.<br /><br />ಮಳೆ ಬಂದ್ರೆ ಅಜ್ಜಿ ನೆನೆಯಕ್ಕೆ ಬಿಡ್ತಾಳಾ.. ಅಂತ ಕೇಳಿಕೊಂಡಳು ..ಆದ್ರೆ ನಾನು ನೆಂದರೆ ಈ ಚಿಲ್ತಿ ಪಿಲ್ಟಿಗಳು ನೆನೆಯಕ್ಕೆ ಶುರು ಮಾಡುತ್ತವೆ.. ಚಿಕ್ಕಮ್ಮಂಗೆ ಬೇಜಾರಾಗುತ್ತೆ ಅನ್ನಿಸಿತು. ಹಾಳಾಗ್ ಹೋಗ್ಲಿ ನೆನೀದಿದ್ರೂ ಪರ್ವಾಗಿಲ್ಲ ಈ ಪುಟ್ಟ ಮಕ್ಕಳು ಗಲಾಟೆ ಮಾಡದಿದ್ರೆ ಮಳೆ ಸದ್ಡನ್ನಾದರೂ ಕೇಳಬೇಕು,ಜಗುಲಿಮೇಲೆ ಕೂತ್ಕೊಂಡು ಮಳೆ ನೋಡಬೇಕು ಅಂತ ಜಗುಲಿ ಕಡೆಗೆ ಹೋದ್ಲು.<br />ಮಲೆನಾಡಿನಲ್ಲಿ ಹುಟ್ಟಿ ಬೆಳೆದು ರಜಾದಲ್ಲಿ ಅಜ್ಜನ ತೋಟದ ಮನೇಲಿ ಸಮಯ ಕಳೆದ ಅವಳಿಗೆ ಮಳೆ everlasting ಅಚ್ಚರಿ ..ಬೆಳಗು, ಕಾಡು, ಕಡಲು, ಸಂಜೆ, ಉರಿಬಿಸಿಲು, ಬೆಳದಿಂಗಳು, ಎಲ್ಲಾನೂ ಒಂದು exitement..<br /><br />ಬೇಕಂತಲೇ ಕಾಲೇಜಿಗೆ ಛತ್ರಿ ತೊಗೊಂಡು ಹೋಗದೇ ವಾಪಾಸಾಗುವಾಗ ಬರೋ ಮಳೆಯಲ್ಲಿ ಪೂರ್ತಿ ನೆನೆದು, ಕುಣಿದು..ಮನೆಗೆ ಬಂದಾಗ 'ಛೇ! ಎಂಥ ಮಳೆ! ಪೂರ್ತಿ ಬಟ್ಟೆ ನೆಂದು ಹೋಗಿದೆ..ಕಾಲೇಜು ಬಿಟ್ಟಾಗಲೇ ಬರಬೇಕಾ ಈ ಮಳೆ ಏನು ಖರ್ಮಾನೋ' ಅಂತ ದಪ್ಪ ಟೆವಲಿನಲ್ಲಿ ತಲೆ ಒರೆಸುತ್ತೀರೋ ಅಮ್ಮನ ಮುಂದೆ ನಾಟಕ ಆಡಿದ್ದು, ರಸ್ತೆಯಲ್ಲಿ ಮಳೆ ನೀರು ತುಂಬಿದ ಹೋಂಡಗಳ ಪಕ್ಕವೇ ನೆಡೆದು ಹೋಗುತ್ತಿರುವಾಗ ಲಾರಿಯೋ ಬಸ್ಸೊ ಬರ್ರ್ರ್ ಅಂತ ಅದರ ಮೇಲೆ ಹೋಗಿ ಇವಳ ಮೇಲೆ ನೀರಿನ ಅಭಿಷೇಕ ಆದಾಗ ಮನಸ್ಸಿನಲ್ಲಿ ಕುಣಿಯೊಅಷ್ಟು ಖುಷಿ ಆಗ್ತಿದ್ದ್ರೋ 'ಥತ್ ಈ ಲಾರಿ ಬಸ್ಸಿನವರಿಗೆ ಸರಿಯಾಗಿ drive ಮಾಡೋಕ್ಕೋ ಬರೋಲ್ಲ' ಅಂತ ಸುಮ್ಮನೇ ಬೈದಿದ್ದು ನೆನಪಾಯಿತು.<br /><br />ಯಾರೋ ಕಪ್ಪಗಿನ ಹುಡುಗ ಬರುತ್ತಿರೋದು ಕಾಣಿಸಿತು ಜಗುಲಿ ಮೇಲೆ ಕೂತಿದ್ದವಳಿಗೆ..ನನ್ನ ಹುಡುಗನೂ ಹೇಗೆ ಇದಾನಲ್ಲ ಅನ್ನಿಸುತ್ತಿತ್ತು..ಆ ಹುಡುಗ ಬಂದದ್ದೆ "ಅಪ್ಪ ಎಲ್ಲೈತೆ ಗೊತ್ತಾ ಸಾಮಿ" ಅಂದ..ನೀ ಯಾರು ಅಂದಿದ್ದಕ್ಕೆ.."ಏ... ಕರಿಯನ ಕೊನೇ ಮಗ ಕನ ಸಾಮಿ" ಅಂದ ತೆಲೆ ಕೆರೆದುಕೊಳ್ಳುತ್ತಾ.."ತಾತನ ಜೊತೆ ತೋಟದ ಕಡೆಗೆ ಹೋದ ಎಂದಳು".<br /><br />ಈ ಹುಡುಗನ ತರ ಇರೋದು ಮಾತ್ರವಲ್ಲ ನನ್ನ ಹುಡುಗನ ಜಾತಿ ಕೂಡ ಇವರದೇ ಜಾತಿ ಎಂದು ನೆನಪಿಗೆ ಬಂದಾಗ ಸಣ್ಣಗೆ ಬೆವರಿದಳು.....<br />'ಅಜ್ಜಿ ನೋಡಿದ್ರೆ ಗ್ರಹಚಾರ ಬಿಡಿಸೋಳು' ಅಂದಿದ್ದ ಅಪ್ಪ ಈ ಜಾತಿ ಹುಡುಗನ್ನ ಮದುವೆ ಆಗ್ತೀನಿ ಆಂದ್ರೆ ಏನುಹೇಳಬಹುದು ಅಂತ ಯೋಚಿಸುತ್ತಾ ಕುಳಿತ ಅವಳಿಗೆ ಮಳೆ ಸದ್ದು ಕೇಳುತ್ತಿರಲಿಲ್ಲ.....ಮೃಗನಯನೀhttp://www.blogger.com/profile/05798486490706460406noreply@blogger.com8