ಅವಳು ಬಾಗಿಲು ತೆಗೆದು ನೋಡಿದ್ರೆ ಅವನು ಅಲ್ಲಿ ನಿಂತಿದ್ದ. ಅವಳಿಗೆ ಯಾವತ್ತೂ ಆಗದಷ್ಟು ಖುಷಿಯಾಯಿತು. ಆವ್ನು ಅವ್ಳ ಹಿಂದೆನೇ ಒಳಗೆ ಬಂದ, ಅಲ್ಲೆಗೆ ಬಂದಿರೋದಕ್ಕೆ ತುಂಬ ಖುಷಿಯಾಗಿದಾನೆ ಅನ್ನಿಸಿತು.
'ಏನೂ ಕೆಲಸ ಇಲ್ಲವಲ್ಲ?'
'ಇಲ್ಲ ಕಾಫಿ ಮಾಡ್ಕೊಂಡು ಕುಡಿಯೋಣ ಅಂತಿದ್ದೆ.'
'ಮತ್ತೆ ಯಾರಾದ್ರೂ ಬರೋರು ಇದಾರ??'
'ಇಲ್ಲ ಯಾರೂ ಇಲ್ಲ' 'ಆಹಾ.. ಒಳ್ಳೇದಾಯ್ತು.'
ಕಾರ್ ಕೀಯನ್ನ ಟೇಬಲ್ಲಿನಮೇಲಿಟ್ಟು ಆರಾಮಾಗಿ ಜರ್ಕಿನ್ನನ್ನೂ ಶೂಸನ್ನೂ ಬಿಚ್ಚಿದ. ಆವನನ್ನ ನೋಡ್ತಿದ್ದ್ರೆ ಯಾವ್ದಕ್ಕೂ ಆತುರ ಇಲ್ಲವೇನೋ, ಆರಾಮಾಗಿದಾನೇನೋ ಅಥವ ಅವುಗಳೆಲ್ಲಾ ಜೀವನ ಪರ್ಯಂತ ಬೇಡ್ವೇನೋ ಅನ್ನೋಹಾಗೆ ಕಂಡ. ಬಚ್ಚಲಿಗೆ ಹೋಗಿ ಸುಖವಾಗಿ ಕೈಕಾಲು ತೊಳೆದುಕಂಡು ಬಂದ.
ಕಿಟಕಿಗಳನ್ನು ಮುಚ್ಚಿದ ಭಾರವಾದ ಪರದೆಗಳನ್ನ ದಾಟಿ ಒಳಬರುತ್ತಿರುವ ಮಬ್ಬು ಬೆಳಕಿನಲ್ಲಿ ಒಂದುಕ್ಷಣ ಇಬ್ಬರೂ ಸುಮ್ಮನಾದರು, ಸುಮ್ಮನಿರುವ ಮಬ್ಬು ಬೆಳಕಿನಂತೆ. ಅವರ ತುಟಿಗಳಲ್ಲಿ ಹರಡಿದ ಖುಷಿಯ ಸಿಹಿಯನ್ನು ಅನುಭವಿಸುತ್ತಾ.. ಅವರ ಒಳಗುಗಳು ಪಿಸುಗುಟ್ಟುತ್ತಿದ್ದವು.
‘ನಾವು ಯಾಕಾದರೂ ಮಾತಾಡಬೇಕು?
' ಇಷ್ಟು ಸಾಕಾಗದ?ಬೇಕಾದಷ್ಟು ಇದು.'
'ನನಗೆ ಇಲ್ಲಿಯವರೆಗೆ ಗೊತ್ತೇ ಆಗಲಿಲ್ಲವಲ್ಲ’
‘ನಿನ್ನ ಜೊತೆ ಸುಮ್ಮನೆ ಇರೋಕ್ಕೆ ಎಷ್ಟು ಚೆನ್ನಾಗಿರುತ್ತೆ’
'ಹೀಗೇ ಸುಮ್ನೆ.ಇಷ್ಟು ಸಾಕಪ್ಪಾ ಇನ್ನೇನು ಬೇಡ'
ಅವನ ಕಣ್ಗಳು ಅವಳದ್ದನ್ನು ಸಂಧಿಸಿದವು ಅವಳು ತಕ್ಷಣ ಬೇರೆ ಕಡೆ ನೋಡಿದಳು.
‘ಕಾಫಿ ! ಕಾಫಿ ಕುಡೀಬೇಕು ಅನ್ನಿಸ್ತಿದೆಯಾ?’
'ಇಲ್ಲ ಅನ್ನಿಸ್ತಿಲ್ಲ'
'ನಂಗೆ ಅನ್ನಿಸ್ತಿದೆ'
'ನೀನು ಹಾಸ್ಪಿಟಲ್ನಲ್ಲ ಕಾಫೀ ಡೇಲೇ ಹುಟ್ಟಿದ್ದು ನಿಜ…' ಎನ್ನುತ್ತಾ ಸೋಫಾಮೇಲೆ ಧಡಾರಂತ ಕೂತ
'ಹೌವ್ದು ಕಣೋ ಕಾಫಿ ಇಷ್ಟ ನಂಗೆ' ಎನ್ನುತ್ತಾ ಅಡುಗೆ ಮನೆಗೆ ಹೋದಳು, ಅವನೂ ಹಿಂದೆಯೇ ಬಂದ.ಅವಳು ಕಾಫಿ ಮಾಡೋದನ್ನೇ ನೋಡುತ್ತಿದ್ದ. ಅವಳು ಕಾಫಿ ಮಾಡೋ ರೀತಿಲೇ ಅವಳಿಗೆ ಕಾಫಿ ಮಾಡೋಕ್ಕೆ ತುಂಬ ಇಷ್ಟ ಅನ್ನೋದು ಗೊತ್ತಾಗುತ್ತಿತ್ತು.ಕಾಫಿಬೀಜವನ್ನ ಹುರಿಯೊಕ್ಕೇ ಎಂದು ಇಟ್ಟಿದ್ದ ಬಾಣಲೆಯಲ್ಲಿ ಕಾಫಿಬೀಜವನ್ನ ಹುರಿಯುತ್ತಿದ್ದರೆ.. ಪಕ್ಕದಲ್ಲಿ ತುಂಬ ಕಡಿಮೆ ಕಾವಲ್ಲಿ ನೀರು ಬೆಚ್ಚಗಾಗುತ್ತಿತ್ತು.’ಸಕ್ಕರೆ ಹಾಕೋಲ್ಲ’ ಕಣ್ಣಲ್ಲಿ 'ನಿಂಗೂ ಬೇಡ ಅಲ್ಲ್ವ?'ಅನ್ನೊ ಪ್ರಶ್ನೆ. ಕಾಫಿ ಬೀಜವನ್ನ ಹಾಲುಬಿಳುಪಿನ ಪುಟ್ಟ ಮಿಕ್ಸರ್ನಲ್ಲಿ ಟರ್ರ್ ರ್ ರ್.. ಎನಿಸುತ್ತಿದ್ದರೆ, ಮನೆಯೆಲ್ಲಾ ಘಮಘಮ.. ‘ನಂಗೆ ಬೇಡ ಆಮೇಲ್ ಬೇಕಾದ್ರೆ ಮೇಲೆ ಹಾಕೋತಿನಿ’ ಫ್ರಿಡ್ಜಿನಿಂದ ಹಾಲು ತೆಗೆದು ಕೊಟ್ಟು, ಹೊರಗೆ ಹೋಗಿ ಪೇಪರ್ ನೋಡುತ್ತಾ ಮನೆಯೆಲ್ಲಾ ಅಡ್ಡಾಡುತ್ತಿದ್ದ ಘಮವನ್ನ ಅನುಭವಿಸುತ್ತಿದ್ದ. ಕಾಫಿ ಬಂತು ಹಿಂದೆಯೇ ಏನೇನೋ ತಿಂಡಿಗಳು. ಅವ್ಳು ಯಾವಾಗ್ಲೂ ರುಚಿರುಚಿಯಾಗಿರೋದನ್ನೇ ಇಟ್ಟಿರುತ್ತಾಳೆ… ಚಕ್ಕುಲಿ, ತೇಂಗೊಳಲು ನೆಂಚಿಕೊಳ್ಳೊಕ್ಕೆ ಪುಳಿಯೋಗರೆ ಗೊಜ್ಜು. ಕಾಫಿಯನ್ನ ಬೆಚ್ಚಗೆ ಹೀರುತ್ತಾ ಹೇಳಿದ ‘ಹೋದ್ ಸತಿ ಸಿಕ್ಕಾಗ ಹೇಳಿದೆಯಲ್ಲ ಅದರ ಬಗ್ಗೆ ಯೋಚಿಸುತ್ತಿದ್ದೆ. ನಂಗೇನನ್ಸುತ್ತೆ ಅಂದ್ರೆ…’
ಹೌದು ಅದಕ್ಕಾಗೇ ಅವನು ಕಾಯುತ್ತಿದ್ದ ಅವಳೂ ಕೂಡ. ಅವಳು ನೋಡಿದಳು ಅವನು ಸೋಫಾಕ್ಕೆ ಒರಗಿಕೊಂಡು ಬಿಚ್ಚಿಕೊಳ್ಳತೊಡಗಿದ್ದ ಮತ್ತು ತಾನು ನೀಲಿ ಕುರ್ಚಿಯಲ್ಲಿ ಮುದುಡಿಕೊಳ್ಳುತ್ತಿದ್ದಳು. ಈ ಚಿತ್ರ ಎಷ್ಟು ವಿವರವಾಗಿ ಸ್ಪುಟವಾಗಿ ಅವಳ ಕಣ್ಣುತುಂಬಿತೆಂದರೆ ಬಿಡಿಸಬಹುದೇನೋ ಅಂದುಕೊಂಡಳು. ಆದರೂ ಆತುರ ಮಾಡೋಕ್ಕಾಗೋಲ್ಲ ಅವಳಿಗೆ ‘ನಂಗೆ ಟೈಮ್ ಬೇಕು’ ಅಂತ ಕಿರುಚಿಕೊಳ್ಳುತ್ತಾಳೆ' ಅನ್ನಿಸಿತು. ತನಿನ್ನೂ ಬೆಳೆಯುವುದ್ದಕ್ಕೆ, ಒಳಗೊಳಗೇ ಶಾಂತವಾಗುವದಕ್ಕೆ ಸಮಯಬೇಕಾಗಿತ್ತು ಅವಳಿಗೆ. ಇಷ್ಟು ವಿವರವಾಗಿ ಬದುಕಿದ ಸಂಗತಿಗಳಿಂದ ಕಳಚಿಕೊಳ್ಳಲು , ಬರಿದಾಗಲು ಬೇಕಿತ್ತು ಸಮಯ. ಅಲ್ಲಿದ್ದ ಸಂತೋಷ ಕೊಡುವ- ಅಳಿಸುವ ಪ್ರತಿಯೊಂದು ವಸ್ತುವೂ ಅವಳ ಭಾಗವೇ, ಅವಳ ಕುಡಿಯೇ, ಅವುಗಳೇ ಅತಿ ಹೆಚ್ಚು ಹಕ್ಕನ್ನು ಅವಳ ಮೇಲೆ ಸಾಧಿಸಿದ್ದವು.ಆದರೆ ಅವೆಲ್ಲವುಗಳಿಂದ ದೂರವಾಗಬೇಕು, ಬಿಡಿಸಿಕೊಳ್ಳಬೇಕು. ಅವೆಲ್ಲವನ್ನೂ ಮಡಚಿ- ಉಸಿರುಗಟ್ಟಿಸಿ- ಅಟ್ಟದಮೇಲೆ ತುರುಕಬೇಕು ರಾತ್ರಿಯಾಗುತ್ತಲೆ ಬಲವಂತ ಮಾಡಿ ಮಲಗಿಸಬೇಕಾದ ಮಕ್ಕಳಂತೆ-ಚೂರು ಸದ್ದಿಲ್ಲದೆ ಉಸಿರುಗಟ್ಟಿಸಬೇಕು.
ಸ್ನೇಹದಲ್ಲಿ ಸಂಪೂರ್ಣ ಸಮರ್ಪಿಸಿಕೊಂಡಿದ್ದರು ಅವರು. ಮೈದಾನದ ಎರಡು ಬದಿಗಳಲ್ಲಿರುವ ದೊಡ್ಡ ನಗರಗಳಂತೆ, ಅವರ ಮನಸುಗಳು ಒಬ್ಬರಿಗೊಬ್ಬರಿಗೆ ತೆರೆಯಲ್ಪಟ್ಟಿದ್ದವು. ಆವನು ಅವಳಲ್ಲಿಗೆ ಗೆದ್ದುಕೊಳ್ಳುವವನಂತೆ ಆಕ್ರಮಣಕಾರನಂತೆ ಬರುತ್ತಿರಲಿಲ್ಲ. ಮ್ರುದು ದಳಗಳ ಮೇಲೆ ನೆಡೆದುಕೊಂಡುಬರುವ ರಾಣಿಯಂತೆ ಬರುವುದು ಅವಳ ರೀತಿಯಲ್ಲ. ಊಹಂ, ಅವರದು ತುಂಬು ಪ್ರಯಾಣಗಳು, ಚಾರಣಗಳು, ತಿರುಗಾಟಗಳು, ನೋಡಬೇಕಾಗಿದ್ದನ್ನು ಅಡಗಿರುವುದನ್ನು ಹುಡುಕುವುದರಲ್ಲಿ ಮುಳುಗಿಹೊಗುತ್ತಿದ್ದರು.. ಇವೆಲ್ಲವುದರಿಂದ ಅವನು ಅವಳಿಗೆ ಸಂಪೂರ್ಣ ನಿಜವಾಗಿದ್ದ.. ಅವಳು ಅವನಿಗೆ ಪ್ರಾಮಾಣಿಕವಾಗಿದ್ದಳು.
ಆವರಲ್ಲಿ ತುಂಬ ಚಂದದ್ದೇನೆಂದರೆ, ಅವರಿಬ್ಬರೂ ಆ ಎಲ್ಲಾ ಸಾಹಸ ಕಾರ್ಯಗಳನ್ನ ಯಾವುದೇ ಹುಚ್ಚು ಭಾವನೆಗಳಿಗೆ ಒಳಗಾಗದೆ, ಖುಷಿಯಾಗಿ ಅನುಭವಿಸೋಷ್ಟು ದೊಡ್ಡವರಾಗಿದ್ದರು. ಯಾವುದೇ ಅನುರಾಗ ಮೋಹ ಅವರನ್ನು ನಿರ್ನಾಮ ಮಾಡಿಬಿಡುತ್ತದೆಂಬುದು ಅವರಿಗೆ ಗೊತ್ತಿತ್ತು. ಅಂಥದೆಲ್ಲಾ ಅವರ ಜೊತೆ ಆಗಿಹೋಗಿತ್ತು. ಅವನಿಗೆ ಮೂವತ್ತೊಂದು ಅವಳಿಗೆ ಮೂವತ್ತು. ಆವರಿಗೆ ಅವರದೇ ಆದ ಅನುಭವಗಳಿದ್ದವು ತುಂಬು ಅನುಭವಗಳು, ವಿವಿಧ ಅನುಭವಗಳು. ಆದರೆ ಇದು ಕುಯಿಲಿನ ಸಮಯವಲ್ಲವೇ…??
ತಟ್ಟೆಯಲ್ಲಿಟ್ಟಿದ್ದ ಮೈಸೂರುಪಾಕನ್ನು ಕತ್ತರಿಸುತ್ತಿದ್ದಳು ಅವನು ತಟ್ಟೆಗೆ ಕೈಹಾಕಿದ.
‘ಅದೆಷ್ಟು ಚೆನ್ನಾಗಿದೆ ಅನ್ನೋದನ್ನ ಅರ್ಥ ಮಾಡ್ಕೋ. ಆದನ್ನ ಅನುಭವಿಸುತ್ತಾ ತಿನ್ನಬೇಕು ಕಣ್ಣು ಮುಚ್ಚಿಕೊಂಡು. ಬೀದಿ ಬದಿಯಲ್ಲಿ ಸಿಗೋ ಕಡ್ಲೆ ಮಿಠಾಯಿಯಲ್ಲ ಇದು, ನೋಡು ಬಾಯಲ್ಲಿಟ್ಟರೆ ಹೇಗೆ ಕರಗಿಹೋಗತ್ತೆ. ಪುರಾಣದಲ್ಲಿ ಬರೋ ಅಮ್ರಥದ ಥರ ಇದು. ಅಮ್ರತಕ್ಕೆ ಕಿತ್ತಾಡಿದ್ದರು ಅನ್ನೋದನ್ನ ಮರೀಬೆಡ’ ಅಂದಳು
‘ನಂಗೆ ಅದ್ನೆಲ್ಲಾ ವಿವರಿಸಬೇಕಿಲ್ಲ ನೀನು. ನಂಗೊತ್ತು ನಾ ಇಲ್ಲಿ ತಿನ್ನೋದು ಬೇರೆಲ್ಲೂ ಸಿಗೋಲ್ಲ. ಆದ್ರೆ ಪ್ರಯಷಃ ಅಷ್ಟು ದಿನದಿಂದ ಒಬ್ಬನೇ ಇದ್ದಿದ್ದರಿಂದಲೋ, ತಿನ್ನೋವಾಗಲೆಲ್ಲಾ ಓದಿಕೊಂಡೋ, ಟೀ ವಿ ನೋಡಿಕೊಂಡೋ, ಇನ್ನೇನನ್ನೋ ಮಾಡುತ್ತಿರೋದ್ರಿಂದಲೋ ಏನೋ.. ಆಹಾರವನ್ನ ಆಹಾರದಂತೆ ನೊಡ್ತೀನಿ. ಯಾವಾಗಲೂ ಗಬಗಬ ತಿಂದು ಮುಗಿಸ್ತೀನಿ.’
ನಕ್ಕ ‘ಆಶ್ಚರ್ಯ ಆಗತ್ತಲ್ವಾ ನಿಂಗೆ?’
ಅವಳ ಕಣ್ಗಳು ನಗುತ್ತಿದ್ದವು ಅವನು ಮತ್ತೆ ನಕ್ಕ.
ಆದ್ರೆ ನೋಡಿಲ್ಲಿ ಹರಡಿದ್ದ ಪೇಪರನ್ನು ಮಡಚಿ ಟೇಬಲ್ಲಿನಮೇಲಿಟ್ಟು ಪಟಪಟ ಮಾತಾಡತೊಡಗಿದ. ‘ಹೊರಗಡೆಯ ಜೀವನವೇ ಇಲ್ಲ ನನಗೆ. ಎಷ್ಟೋ ವಸ್ತುಗಳ ಹೆಸರು ಗೊತ್ತಿಲ್ಲ-ಮರಗಳು, ರೋಡುಗಳು, ತಿರುವುಗಳು, ಅಂಗಡಿಗಳು, ಇನ್ನೂ ಏನೇನೋ.. ನಾ ಯಾವತ್ತೂ ಜಾಗಗಳನ್ನ ಪೀಠೋಪಕರಣಗಳನ್ನ, ಗಾಜುಗಳನ್ನ, ಗಮನಿಸಿದ್ದೇ ಇಲ್ಲ. ಅಥವ ಜನ ಹೆಂಗೆ ಕಾಣ್ತಾರೆ ಅಂತ ಗೊತ್ತಿಲ್ಲ. ಒಂದು ಕೋಣೆ ಇನ್ನೊಂದರಂತೆ ಕಾಣತ್ತೆ, ಒಂದು ಜಾಗ ಇನ್ನೊಂದರಂತೆ, ಒಂದು ಸ್ಥಳ ಮತ್ತೊಂದರಂತೆ. ಯಾವುದಾದರೊಂದು ಜಾಗ ಕೂರೋಕ್ಕೆ- ಓದೊಕ್ಕೆ- ಮಾತಾಡೋಕ್ಕೆ. ಆದರೆ ಈಗ...’ ಆವನು ಇಲ್ಲಿ ನಿಲ್ಲಿಸಿದ ನಿಷ್ಕಪಟವಾದ ಸುಂದರ ನಗು ಅವನ ತುಟಿಗಳನ್ನ ಸವರಿಕೊಂಡು ಹೋಯಿತು. ‘ಆದರೆ ಈ ಮನೆಯೊಂದನ್ನ ಬಿಟ್ಟು” ಅವನು ತನ್ನ ಅವಳ ಸುತ್ತ ನೋಡಿ ಖುಷಿಯಿಂದ ಆಶ್ಚ್ಯರ್ಯದಿಂದ ನಕ್ಕ. ಆವನು ಯಾವಥರದೋನೆಂದರೆ ಪಯಣದ ಕೊನೆಗೆ ಬಂದಾಗಿದೆಯೆಂದು ನಿದ್ದೆಯಿಂದೆದ್ದು ತಿಳಿದುಕೊಳ್ಳುವ ಪ್ರಯಾಣಿಕನಂತೆ.
‘ ಇಲ್ಲಿ ವಿಲಕ್ಷಣವಾದ್ದೊಂದಿದೆ. ನಾನು ಕಣ್ಣು ಮುಚ್ಚಿಕೊಂಡರೆ ಈ ಜಗದ ಚಿಕ್ಕ ಚಿಕ್ಕ ವಿವರವೂ ನನ್ನ ಕಣ್ಣು ಕಟ್ಟುತ್ತೆ. ಇವಾಗ ಅದು ನನಗೆ ಗೊತ್ತಾಗುತ್ತಿದ್ದೆ. ನಾನು ಇಲ್ಲಿಂದ ದೂರ ಇದ್ದಾಗಲೆಲ್ಲ ನನ್ನ ಮನಸ್ಸು ಇಲ್ಲಿಗೆ ಬಂದು ಹೋಗುತ್ತೆ.. ನಿನ್ನ ಕೆಂಪು ನೀಲಿ ಕುರ್ಚಿಗಳ ಸುತ್ತ ಅಡ್ಡಾಡುತ್ತೆ. ಹಣ್ಣುಗಳನ್ನು ಇಟ್ಟಿರುತ್ತಿಯಲ್ಲ ಆ ಗಾಜಿನ ಬಟ್ಟಲು ಅದನ್ನ ದಿಟ್ಟಿಸುತ್ತೆ, ಮ್ರುದುವಾಗಿ ಮುಚ್ಚಿದ ಭಾರವಾದ ಕಿಟಕಿ ಪರದೆಗಳ ಹಿಂದೆ ಅಡಗುತ್ತೆ.' ಹೀಗೆ ಮಾತನಾಡುತ್ತಾ ಅವುಗಳೆಲ್ಲದರ ಮೇಲೆ ಕಣ್ಣಾಡಿಸಿದ. ‘ಆ ನೀಲಿ ಪರದೆ ನಂಗೆ ತುಂಬ ಇಷ್ಟ’ ಖುಷಿಯಿಂದ ಗುನುಗಿದ. ಆಮೇಲೆ ಅವರಿಬ್ಬರ ಮಧ್ಯೆ ಧಿಗ್ ಎಂದು ಮೌನ ಪ್ರತ್ಯಕ್ಷವಾಯಿತು.
ಮೌನ ನಿಧಾನವಾಗಿ ಹರಡಿತು. ಸಮಾಧಾನವಾಗಿ ಹರಡಿದ್ದ ಆ ಮೌನವು ‘ಸರಿ ಇಲ್ಲಿ ಸೇರಿದೀವಿ ಕೊನೆಯಸಲ ಬಿಟ್ಟಲಿನಿಂದ ಶುರುಮಾಡದಿರಲು ಕಾರಣಗಳೇ ಇಲ್ಲವಲ್ಲ ಎಂದಿತು’
ಇಬ್ಬರೂ ಮೌನವನ್ನು ಮುರಿದರು ‘ನಾನು ಅಡುಗೆ ಮನೆ ಕ್ಲೀನ್ ಮಾಡಿ ಬರ್ತೀನಿ.' ಅವಸರಿಸಿದಳು. 'ಪೇಪರಿನ ಆ ಕಾಲಮ್ಮನ್ನು ಓದಲೇ ಇಲ್ಲ’ ಅವನು ಉಸುರಿದ.. ಇಬ್ಬರೂ ಒಬ್ಬರಿಂದೊಬ್ಬರು ತಪ್ಪಿಸಿಕೊಂಡರು. ಅವಳು ಡಬ್ಬಗಳನ್ನ ಶಲ್ಫಿನಮೇಲಿಟ್ಟು, ಸ್ಲಾಬನ್ನು ಮ್ರುದು ಗುಲಾಬಿ ಬಟ್ಟೆಯಲ್ಲಿ ಒರೆಸಿದಳು. ಬೇಗ!ಬೇಗ! ಅದು ಮತ್ತೆ ಆಗೋದನ್ನ ಅವರು ತಡೀಬೇಕು.
‘ಮತ್ತೆ , ನೀನು ಬಿಟ್ಟು ಹೊದ ಪುಸ್ತಕವನ್ನ ಓದಿದೆ’
'ಓ..ಏನನ್ಸುತ್ತೆ’ ಕೇಳಿದಳವಳು
'ಏಲ್ಲದರ ತರಾನೇ ಮ್ಮ್ಹ್ಹ್ ಹ್ಹ್ ಹ್.. ಆದ್ರೆ ಅವರದು ಸ್ವಲ್ಪ ಅವಸರ ಅನ್ನಿಸೋಲ್ವ? ತುಂಬ ನಿಜವಾಗುತ್ತಾರೆ, ತುಂಬ ಬೇಗ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುತ್ತಾರೆ, ಒಬ್ಬರೊಳಗೊಬ್ಬರು ಇಳಿಯುತ್ತಾರೆ..ಎಲ್ಲಾ ಕಲ್ಪನೆ ನಿಜ ಜೀವನದಲ್ಲಿ ಹಾಗಾಗಲ್ಲ ಅಲ್ವ?’ ಎಂದವನ ಎದೆ ಹೊಡೆದುಕೊಳ್ಳುತ್ತಿತ್ತು.. ಅವಳ ಕೆನ್ನೆಗಳು ಬಿಸಿಯಾದವು, ಕೆಂಪಾದವು. ಒಂದುನಿಮಿಷ ಅವರೆಲ್ಲಿದ್ದಾರೆ ಏನಾಗುತ್ತಿದೆ ಗೊತ್ತಾಗಲಿಲ್ಲ ಅವಳಿಗೆ.. ಮತ್ತೆ ಸಮಯ ಸಿಗೋಲ್ಲ.. ಇಷ್ಟು ದೂರ ಬಂದಮೇಲೂ ಹಿಗೇಕಾಯಿತು? ತೊದಲಿದರು, ಅನುಮಾನಿಸಿದರು, ಸುಸ್ಥಾದರು,ಸುಮ್ಮನಾದರು.. ಸುರಿದು ಪ್ರಶ್ನಿಸುವ ಬೆಳಕಿನಲ್ಲಿ ಮತ್ತೆ ಮತ್ತೆ ಜಾಗ್ರುತರಾದರು…
ಅವಳು ತಲೆ ಎತ್ತಿದಳು ‘ಮಳೆಯಾಗುತ್ತಿದೆ ಪಿಸುಗುಟ್ಟಿದಳು’ ನನಗೆ ನೀಲಿ ಪರದೆ ಇಷ್ಟ ಎಂದವನ ಕುಷಿಯಿತ್ತು ಅದರಲ್ಲಿ.
ಆದರೆ ಅವರು ಯಾಕೆ ಹಾಗೇ ಅದನ್ನ ಘಟಿಸಲು ಬಿಡೋಲ್ಲ-ಶರಣಾಗತರಾಗೊಲ್ಲ-ಏನಾಗುತ್ತೆ ಅಂತ ನೋಡೋಲ್ಲ? ಇಲ್ಲ! ಅನಿಶ್ಚಿತವಾದ್ದ್ದನ್ನು ಕದಡಿದ್ದರು ಅವರು. ಆವರ ಸ್ನೆಹ ಅಪಾಯದಲ್ಲಿದೆ ಅನ್ನೋದನ್ನ ತಿಳಿದುಕೊಳ್ಳೋಕ್ಕೆ ಕಷ್ಟವಾಗಲಿಲ್ಲ ಅವರಿಗೆ.
ಆವನು ಮತ್ತೆ ಪೇಪರು ಮಡಿಸಿಟ್ಟ ತನ್ನ ತನ್ನ ತಲೆಗೂದಲಲ್ಲಿ ಕೈಯಾಡಿಸಿದ.. 'ನಾನೇನು ಯೋಚಿಸುತ್ತಿದ್ದೆ ಅಂದ್ರೆ ಭವಿಷ್ಯದ ಕಾದಂಬರಿ ಮನಷ್ಯಾಸ್ತ್ರದ ಕಾದಂಬರಿ ಆಗಿರುತ್ತೋ ಇಲ್ಲವೋ ಅಂತ. ಸಾಹಿತ್ಯಕ್ಕೂ ಮನಷ್ಯಾಸ್ತ್ರಕ್ಕೂ ಸಂಭಂದವಿದೆ ಅನ್ನಿಸೋಲ್ವ??'
‘ಹಾಗಾದ್ರೆ ಇವತ್ತಿನ ಯುವಬರಹಗಾರರೆಲ್ಲ ಮನಷ್ಯಾಸ್ತ್ರ ವಿಷ್ಲೇಷಣೆಗಳನ್ನ ತಮ್ಮ ಹಕ್ಕು ಅಂತ ತಿಳ್ಕೊಂಡು ವಿಷ್ಲೇಷಣೆಗೆ ಇಳಿಯುತ್ತಾರೆ ಅಂತೀಯ? 'ಅವಳು ಹುರಿಗಟ್ಟತೊಡಗಿದಳು
'ಹೌದು ಮತ್ತೆ. ಯಾಕಂದ್ರೆ ಇವತ್ತಿನ ಹುಡುಗರು ಎಷ್ಟು ಬುದ್ದಿವಂತರೆಂದರೆ ಈಗಿನ ಉಸಿರುಗಟ್ಟಿಸುವ ಕೊಳಕು, ಅಸಹ್ಯ ಸ್ಥಿತಿ ಸರಿಹೊಗಬೇಕೆಂದರೆ ಅದರ ಮೂಲಗಳಿಗೇ ಹೋಗಬೇಕೆಂಬುದನ್ನು ತಿಳಿದುಕೊಂಡಿದ್ದಾರೆ. ಅವುಗಳ ಮೂಲಗಳಿಗೆ ಹೊಗಬೇಕು, ಅವುಗಳ ಬುಡಕ್ಕೆ ಇಳಿಯಬೇಕು, ಎಲ್ಲವನ್ನೂ ವಿವರವಾಗಿ ಅಭ್ಯಸಿಸಬೇಕು ಅಲ್ಲಿಂದಲೇ ರೋಗವನ್ನ ಕಿತ್ತೆಯಬೇಕು’ ಅವನೂ ಹುರಿಗಟ್ಟತೊಡಗಿದ.
'ಆದ್ರೆ ಹ್ಮ್ಮ್ ಮ್ ಮ್ ..’ ನರಳಿದಳು 'ಎಂಥ ಭಯಾನಕ ನೀರಸ ನೋಟ ಅನ್ನಿಸುತ್ತೆ’
‘
ಖಂಡಿತ ಇಲ್ಲ..’ಅಂದನವ 'ನೋಡಿಲ್ಲಿ.. ಏನ್ಗೊತ್ತಾ..’ ಮಾತು ಮುಂದುವರೆಯಿತು ಈಗ ನಿಜವಾಗಿ ನಾವು ಗೆದ್ದೆವೇ?’ ಅವಳ ನಗು ಹೆಳಿತು ‘ನಾವು ಗೆದ್ದೆವು..’ ಅವನ ಕಣ್ಣು ನುಡಿಯಿತು ' ಹೌದುಗೆದ್ದೆವು’
ಆದರೆ ನಗು ಹೆಚ್ಚಾಯಿತು, ನೋವಾಯಿತು ಅವರಿಗೆ ತಮಗೆ ತಾವೇ ತೊಗಲು ಬೊಂಬೆಗಳಂತೆ ಇಲ್ಲದ್ದನ್ನು ಎಳೆದಾಡುತ್ತಿದ್ದೇವೆ ಅನ್ನಿಸಿತು.
‘ನಾವೇನು ಮಾತಾಡುತ್ತಿದ್ದೆವು’ ಯೊಚಿಸಿದ ಅವನು. ಆವನಿಗೆ ಎಷ್ಟು ಖಾಲಿ ಅನಿಸಿತೆಂದರೆ ಕಣ್ಣುಗಳು ತೆರೆದಿದ್ದರೂ ಎನೂ ಕಾಣಿಸುತ್ತಿಲ್ಲ ಅನ್ನಿಸಿತು.
'ಎಂಥ ಸನ್ನಿವೇಶ ನಮ್ಮಗಳದು' ಅನ್ನಿಸಿತು ಅವಳಿಗೆ. ನಿಧಾನವಾಗಿ ನೋಡಿದಳು ಅವನನ್ನ.. ತುಂಬಾ ನಿಧಾನವಾಗಿ ಅವಳಿಗೆ ತಾನು ಯಾವುದರ ಹಿಂದೆ ಓಡುತ್ತಿದ್ದೇನೆ ಅನ್ನಿಸಿತು. ಭೀಕರ ಮೌನ ಮಧ್ಯೆ.
ಗಡಿಯಾರ ಆರು ಗಂಟೆಯಾಯಿತೆಂದು ಆಕಳಿಸಿತು. ಎಂತ ದಡ್ಡರು ಅವರು-ಭಾರವಾದ ಹಿರಿದಾದ ಬುದ್ದಿಗಳು ಅವರದು.
ಮ್ರುದುವಾದ ಸಂಗಿತದಂತೆ ಮೌನವು ಅವರನ್ನು ಸುತ್ತುವರೆಯಿತು. ಆ ಸಂಗೀತದಲ್ಲಿ ಕೋಪವಿತ್ತು.. ಕೋಪ ಅವಳಿಗೆ ಅದನ್ನು ಸಹಿಸಿಕೊಳ್ಳಲು..ಅವನಂತೂ ಸತ್ತೇ ಹೋಗುತ್ತಿದ್ದ.. ಮೌನ ಮುರಿಯಬೇಕೆನ್ನಿಸಿತವನಿಗೆ ಆದರೆ ಮಾತಿನಿಂದಲ್ಲ.. ಯಾವುದೇ ಕಾರಣದಿಂದಲೂ ಹುಚ್ಚು ಬಡಬಡಿಕೆಗಳಿಂದಲ್ಲ. ಆವರಿಬ್ಬರಿಗೂ ಬೇರೆಯದೇ ಭಾಷೆಯಿತ್ತು ಮಾತನಾಡಲು..ಆ ರೀತಿಯಲ್ಲಿ ಅವನು ಪಿಸುಗುಟ್ಟಬೆಕೆಂದುಕೊಂಡ ‘ನಿನಗೂ ಹೀಗೆಲ್ಲ ಆಗುತ್ತಾ.. ? ಇದನ್ನೆಲ್ಲಾ ಅರ್ಥ ಮಾಡ್ಕೊತೀಯ ನೀನು?’
ಆದರೆ ನಾಲಿಗೆ ಮೋಸ ಮಾಡಿತು ಅವನ ಕಿವಿಗಳು ಕೇಳಿಸಿಕೊಂಡಿದ್ದೇ ಬೇರೆ ‘ನಾನು ಹೋಗಬೇಕು ರಾಯರು ಆರುಗಂಟೆಗೆ ಬರುತ್ತೆನೆಂದಿದ್ದರು’
'ದೇವರೇ ಹೀಗ್ಯಾಕೆ ಹೇಳಿದ’ ಅವಸರವಾಗಿ ಕುರ್ಚಿಯಿಂದ ಎದ್ದಳು ‘ಹಾಗದ್ರೆ ಓಡಬೇಕು ನೀನು ರಾಯರು ತುಂಬಾ ಶಿಸ್ತು ಸಮಯಕ್ಕೆ ಸರಿಯಾಗಿ ಹೊಗದಿದ್ರೆ ಬೇಜಾರಾಗುತ್ತೆ ಅವ್ರಿಗೆ’ ಅಂತ ಅವಳು ಹೇಳೋದನ್ನ ಅವನ ಕಿವಿಗಳು ಮತ್ತೆ ಕೇಳಿಸಿಕೊಂಡವು.
'ಯಾಕೆ ಹೀಗ್ ಮಾಡಿದೆ ಹುಡುಗ? ನೋಯಿಸಿದೆ ನನ್ನ.. ನಾನು ನಿನಗೆ ಅರ್ಥವಾಗುತ್ತಿಲ್ಲವಾ.. ನಾವು ಸೋತ್ವಿ’ ಅವಳ ಹ್ರುದಯ ನುಡಿಯಿತು ಜರ್ಕಿನ್ನನ್ನು ಕೈಗೆ ಕೊಟ್ಟಳು ಸಾಕ್ಸು ಹಾಕಿಕೊಂಡ. ಒಂದೇ ಒಂದು ಮಾತಿಗು ಅವಕಾಶ ಕೊಡದೆ ಸೀದ ಹೋಗಿ ಬಾಗಿಲು ತೆರೆದಳು.
ಅವರು ಒಬ್ಬರನ್ನೊಬ್ಬರು ಆ ಸ್ಥಿತಿಯಲ್ಲಿ ಬಿಡಬಹುದಾ..?ಅವನು ಹೊಸಲಿನ ಹೊರಗೆ ನಿಂತಿದ್ದ ಅವಳು ಬಾಗಿಲನ್ನು ಹಿಡಿದುಕೊಂಡು ಒಳಗೆ. ಈಗ ಮಳೆಬರುತ್ತಿರಲಿಲ್ಲ
'ನಂಗೆ ನೋವು ಮಾಡಿದೆ ಹುಡ್ಗ. ನೋವು ಮಾಡಿದೆ ಯಕ್ ಹೋಗ್ತಿಲ್ಲ ನೀನು? ಇಲ್ಲ ಹೋಗ್ಬೇಡ,ನಿಲ್ಲು ಬೇಡ ಹೋಗು,ಇಲ್ಲ-ನಿಲ್ಲು-ಹೋಗು.' ಕಣ್ಗಳು ಕತ್ತಲನ್ನು ದಿಟ್ಟಿಸುತ್ತಾ ನುಡಿಯುತ್ತಿದ್ದವು..
ಅವಳು ಅದೆಲ್ಲವನ್ನು ನೋಡಿದಳು..ಹಸಿರು ಹೂದೋಟ ಕಪ್ಪಗಾಗುತ್ತಿರುವುದು, ದೊಡ್ಡ ಕಿಟಕಿಗಳು ನಕ್ಷತ್ರಗಳನ್ನ ತುಂಬಿಕೊಳ್ಳುತ್ತಿರುವುದು, ಆದರೆ ಅವನು ಇದ್ಯಾವುದನ್ನೂ ನೋಡುವುದಿಲ್ಲ ಅವನಿಗಿರುವುದು ಆಧ್ಯಾತ್ಮಿಕ ದ್ರುಷ್ಟಿ
ಹೌದು ಅವಳಿಗನ್ನಿಸಿತು 'ಅವನೇನನ್ನೂ ನೊಡೋಲ್ಲ. ಇಲ್ಲ, ಇನ್ನು ಸರಿ ಮಾಡೋಕ್ಕೆ ಸಾಧ್ಯವೇ ಇಲ್ಲ. ತುಂಬ ನಿಧಾನವಾಯಿತು.' ತಣ್ಣನೆಯ ಕೊರೆಯುವ ಗಾಳಿ ಬೀಸಿತು.ಧಡಾರಂತ ಬಾಗಿಲು ಮುಚ್ಚಿದಳು
ಮತ್ತೆ ರೂಮಿಗೆ ಒಡಿಹೋಗಿ ಎಷ್ಟು ವಿಚಿತ್ರವಾಗಿ ಆಡಿದಳು ಕೈಯೆತ್ತಿ ಕೂಗಿದಳು. 'ಹುಚ್ಚು!' 'ಮೂರ್ಖತನ' ಹಾಸಿಗೆಯ ಮೇಲೆ ಅಡ್ಡಾದಳು, ಮ್ರುದು ಹಾಸಿಗೆ ಮುಲುಗುಟ್ಟಿತು. ಏನನ್ನೂ ಯೋಚಿಸುತ್ತಿರಲಿಲ್ಲ ಎಲ್ಲಾ ಖಾಲಿ ಖಾಲಿ. ನಿಧಾನವಾಗಿ ಅನ್ನಿಸಲು ಶುರುವಯಿತು ಎಲ್ಲಾ ಮುಗಿಯಿತ? ಏನಾದರೂ ಉಳಿಯಿತ? ಮುಗಿದ ಅಧ್ಯಾಯವ? ಅವನನ್ನು ಯಾವತ್ತೂ ನೋಡೋದಿಲ್ಲ ಅವಳು. ಬಾಗಿಲು ಬಡಿದ ಸದ್ದಾಯಿತು ಅವನೇ ಇರಬೇಕು ಹಾಗೆ ನಿಲ್ಲಿಸಿ ಬಡಿಯುವವನು ಅವನೇ. ಮನಸು ಎದ್ದಿತು, ದೇಹ ಮಲಗೇ ಇತ್ತು.. ನಾನು ಬಾಗಿಲು ತೆಗೆಯುವುದಿಲ್ಲ ಮನಸು ಹೇಳಿತು, ದೇಹ ಎದ್ದಿತು..ಅಷ್ಟರಲ್ಲಿ ಮತ್ತೆ ದಬದಬ ಇದು ಅವನಲ್ಲ..
ಬಗಿಲು ತೆರೆದಳು ಮದುವೆಯಾಗದ ವಯಸ್ಸಾದ ಮುದುಕಿ.. ದಿನಾ ಹೀಗೆ ಬಾಗಿಲು ಬಡಿದು ತೆರೆದಾಗ ‘ಹುಡುಗಿ ನನ್ನ ಹೊರಗೋಡಿಸು’ ಅನ್ನೋ ಅಭ್ಯಾಸವಿತ್ತು ಅವಳಿಗೆ. ಆದರೆ ಅವಳು ಯಾವತ್ತೂ ಕಳಿಸುತ್ತಿರಲಿಲ್ಲ ಅವಳನ್ನು. ಅವಳ ಕೆದರಿದ ಕೂದಲನ್ನು, ಕಂದಿದ ಕಣ್ಗಳನ್ನು, ಪ್ರೀತಿಯಿಂದ ನೋಡುತ್ತಿದ್ದಳು. ಧೂಳು ಮೆತ್ತಿದ ಹೂಗಳನ್ನು ಕೊಂಡುಕೊಳ್ಳುತ್ತಿದ್ದಳು.
ಆದರೆ ಇವತ್ತು'ಅಯ್ಯೋ ಆಗೋಲ್ಲ! ಇವತ್ತು ಯಾರೊ ಇದಾರೆ ತುಂಬ ಕೆಲಸ ಇದೆ.’ 'ಪರವಾಗಿಲ್ಲ ಹುಡುಗಿ ಹೂಗಳನ್ನ ಇಲ್ಲಿಟ್ಟು ಹೋಗಿರುತ್ತೇನೆ’ ನುಡಿದಳು ಅಜ್ಜಿ
ಅಜ್ಜಿ ಹೋಗತೊಡಗಿದಳು ಮತ್ತೆ ಅವೆಲ್ಲಾ ಕಾಣಿಸಿದವು.. ಕಪ್ಪು ಹೂದೋಟ, ನಕ್ಷತ್ರ ತುಂಬಿದ ಕಿಟಕಿ.. ಆದರೆ ಈಗ ಅವಳು ತಪ್ಪು ಮಾಡಲಿಲ್ಲ ಹೋಗಿ ತಬ್ಬಿಕೊಂಡಳು. ಆ ಅಜ್ಜಿ 'ಏನು ಅಲ್ಲ ಅವು ಕಡಿಮೆ ಬೆಲೆಯ ಹೂಗಳು’ ಅಂದಳು.ಇವಳು ಖುಷಿಯಾಗಿ ಹಣೆಗೆ ಮುತ್ತಿಟ್ಟಳು ‘ಹಾಗಾದರೆ ನಾ ಬಂದಿದ್ದು ನಿನಗೆ ನಿಜವಾಗಲೂ ಬೇಜಾರಿಲ್ಲವ’
'ಗುಡ್ ನೈಟ್ ಅಜ್ಜಿ' ಪಿಸುಗುಟ್ಟಿದಳು 'ಮತ್ತೆ ಮತ್ತೆ ಬಾ..’
ಈಗ ನಿಧಾನವಾಗಿ ಬಾಗಿಲು ಹಾಕಿದಳು ಸಾವಧಾನವಾಗಿ ರೂಮಿಗೆ ಹೋಗಿ ಕಣ್ಣು ಮುಚ್ಚಿ ನಿಂತರೆ 'ಎಷ್ಟು ಹಗುರವಾಗಿದ್ದೇನೆ'ಅನ್ನಿಸಿತು. ಮುಗ್ದ ನಿದ್ದೆಯನ್ನು ಮಾಡಿ ಮುಗಿಸಿದಂತೆ.ಉಸಿರಾಟವೂ ಖುಷಿ ಎನಿಸುತ್ತಿತ್ತು.
ಹರಡಿದ್ದೆಲ್ಲವನ್ನು ಜೋಡಿಸಿದಳು. ಪಾತ್ರೆ ತೊಳೆದಳು. ಬರೆಯೋಕ್ಕೆ ಹೋಗೋ ಮುಂಚೆ ಕೆಂಪು ನೀಲಿ ಕುರ್ಚಿಗಳನ್ನ, ನೀಲಿ ಪರದೆಗಳನ್ನ ಸರಿಮಾಡಿದಳು. ಹಣ್ಣುಗಳನ್ನ ಗಾಜಿನ ಬಟ್ಟಲಲ್ಲಿ ತುಂಬಿದಳು
‘ನಾನು ಆ ಮನಶ್ಯಾಸ್ತ್ರದ ಕಾದಂಬರಿಯ ಬಗ್ಗೆ ಯೋಚಿಸುತ್ತಿದ್ದೆ…’ಬರೆದೇ ಬರೆದಳು. 'ನಿಜವಾಗಲೂ ಎಷ್ಟು ಆಶ್ಚರ್ಯ ಅಲ್ವಾ…’ ಕೊನೆಗೆ ಕಪ್ಪು ಇಂಕು ಬರೆಯುತ್ತಿದ್ದುದು ಕಾಣಿಸಿತು 'ಗುಡ್ ನೈಟ್ ಸ್ನೇಹವೇ.. ಮತ್ತೆ ಮತ್ತೆ ಬಾ..'
(ಕ್ಯಾಥರೀನ್ ಮ್ಯಾನ್ಸ್-ಫೀಲ್ಡ್ ಬರೆದ psychology ಕತೆಯಿಂದ ಸ್ಪೂರ್ತಿಗೊಂಡು ಬರೆದ ಕತೆ)
Friday, January 25, 2008
Saturday, January 5, 2008
ನದಿಗೆ ನೆನಪಿನ ಹಂಗು
ಟ್ರೇನಿನ ಎ.ಸಿ ಕೋಚಿನಲ್ಲಿ ಸಿಕ್ಕಿದ ನೀನು ಸ್ವಲ್ಪವೇ ದಿನದಲ್ಲಿ ನನಗೆ ನನ್ನ ಮೊಬೈಲಿಗೆ ಮಾತು ಕಲಿಸಿದ್ದೆ... ಸ್ಕೂಟಿ 60ರಿಂದ 80ರಲ್ಲಿ ಓಡಲು ಶುರುವಾಗಿತ್ತು. ನಿತ್ಯ ಹೊಸ ಹೊಸ ಬಟ್ಟೆ ಹಾಕಿಕೊಳ್ಳುತ್ತಿದ್ದೆ, ಬಣ್ಣ ಬಣ್ಣದ ಲಿಪ್ ಸ್ಟಿಕ್ಕುಗಳು, ಪರ್ಪ್ಯೂಮುಗಳು ನನ್ನ ಮೇಕಪ್ ಕಿಟನ್ನು ತುಂಬಿತ್ತು... ಯಾರಿಗೂ ನಂಬರ್ ಕೊಡದ ನಾನು ನಿನಗೆ ಏಕೆ ಕೊಟ್ಟೆನೋ? ಆಕಾಶ್ ಎನ್ನುವ ಹೆಸರಿಗೆ ಮರುಳಾಗಿಯ? ಇಲ್ಲ ಹೆಸರಿನ ಭ್ರಮೆ ಇಲ್ಲ ನನಗೆ, ಯಾವ ಹೆಸರಾದರೇನು? ನನಗಿಷ್ಠವಾದ ಹಾಡುಗಳು ನಿನಗೂ ಇಷ್ಟ ಅನ್ನೋ ಒಂದೇ ಕಾರಣಕ್ಕೆ ಕೊಟ್ಟೆ ಅನ್ನುವುದಂತೂ ಸುಳ್ಳು. ಅದೊಂದೇ ಕಾರಣವಲ್ಲ, ಅದರ ಜೊತೆಗೆ ನೀನು ಶ್ರೀಮಂತ ಮತ್ತು ಮೆಚ್ಯೂರ್ಡ್ ಅನ್ನೋದನ್ನ ನಿನ್ನ ಮಾತು ತೋರಿಸಿಯಾಗಿತ್ತು. ಎಲ್ಲೋ ಅಪ್ಪನಂತೆ ಅನ್ನಿಸಿದ್ದೆ.
ನಿನಗೆ ಮದುವೆ ಆಗಿದೆ ಅಂತ ನೀನು ಹೇಳೋಕ್ಕೆ ಮೊದಲೇ ನನಗೆ ಗೊತ್ತಾಗಿ ಹೋಗಿತ್ತು. ನೀನು ನನ್ನ ಆವರಿಸಿಕೊಳ್ಳಲು ಮಾಡುತ್ತಿರುವ ಪ್ರತಿಯೊಂದು ಪ್ರಯತ್ನ, ಮಾತು,ನಗು,ಪ್ರೀತಿ,ದುಃಖ,ದುಮ್ಮಾನ.. ಎಲ್ಲವೂ.. ಆದರೂ ನಿನ್ನಿಂದ ನನ್ನ ಬಿಡಿಸಿಕೊಳ್ಳಲು ಆಗುತ್ತಿರಲಿಲ್ಲ. ನನ್ನ ವಯಸ್ಸಿನ, ನನ್ನ ಪ್ರೀತಿಸುತ್ತಿದ್ದ, ನನ್ನ ಸೌಂದರ್ಯವನ್ನು ಹೊಗಳುತ್ತಿದ್ದ, ನನ್ನ ಮುಂದೆ ಅವರ ಪ್ರೀತಿಯನ್ನು ಹೇಳಿಕೊಳ್ಳುತ್ತಿದ್ದ ಹುಡುಗರೆಲ್ಲಾ ಬುದ್ದಿ ಬಲಿಯದ ಶರಣಾಗತ ಹುಡುಗರಂತೆ ಕಾಣುತ್ತಿದ್ದರು. ನನಗೆ ಅವರ ಪ್ರೀತಿ ಅರ್ಥವೇ ಆಗುತ್ತಿರಲಿಲ್ಲ, ಅವರ ಪ್ರೀತಿಯನ್ನು ಆಡಿಸಿಕೊಂಡು ನಗುತ್ತಿದ್ದೆ. ನೀನು ಸಿಕ್ಕಿದೆ. ನಿನ್ನ ಮಾತುಗಳು ಅಪ್ಪಟ ಆರಾಧನೆ ನೀನು ಯಾವತ್ತಿಗೂ ನನ್ನ ಪ್ರೀತಿಸುತ್ತೀನಿ ಅಂತ ಹೇಳಿರಲಿಲ್ಲ, ಆದರೆ ನನ್ನ ಮನಸ್ಸಿನ ಪ್ರತಿಯೊಂದು ಎಳೆಯನ್ನೂ ಅರ್ಥ ಮಾಡಿಕೊಂಡು ಅದನ್ನು ವಿವರಿಸುತ್ತಿದ್ದೆ. ಸಮಾಧಾನ ಪಡಿಸುತ್ತಿದ್ದೆ. ನನ್ನ ಸೌಂದರ್ಯವನ್ನು ನಿನ್ನ ಕಣ್ಣ ತುಂಬ ತುಂಬಿಕೊಳ್ಳುತ್ತಿದ್ದೆ, ಹಾಗೆ ತುಂಬಿಕೊಳ್ಳುತ್ತಿದ್ದೇಯೆಂಬುದನ್ನು ನನಗೆ ತಿಳಿಯುವ ಹಾಗೆ ಮಾಡುತ್ತಿದ್ದೆ.
ಚೆನ್ನೈನಿಂದ ಬೆಂಗಳೂರಿಗೆ ಬರುವ ಟ್ರೇನಿನ ಎ.ಸಿ. ಕೋಚಿನಲ್ಲಿ ಕಿಟಕಿ ಪಕ್ಕ ಕುತು, ಕಿಟಕಿ ಹೊರಗೆ ನೋಡುತ್ತಿದ್ದ ನಾನು ಟ್ರೇನ್ ಹೊರಟಾಗ "ಸದ್ಯ ನನ್ನ ಪಕ್ಕ ಯಾರೂ ಇಲ್ಲವಲ್ಲ ತಲೆ ತಿನ್ನೋದಕ್ಕೆ." ಅಂದುಕೊಂಡು ಕಣ್ಣು ಮುಚ್ಚಿದೆ ಆದರೆ ಒಂದೇ ನಿಮಿಷ "ನಿಮ್ಗೆ ಡಿಸ್ಟರ್ಬ್ ಮಾಡ್ತಿದಿನಿ ಅನ್ಸತ್ತೆ ಇದು ನನ್ನ ಸಿಟು. ನಿಮ್ಮ ಲಗೇಜನ್ನು ಕೆಳಗಿಟ್ಟುಕೊಳ್ಳುತ್ತೀರ?" ಅಂದೆ ನೀನು. ಕಣ್ಣು ಬಿಟ್ಟು ನೋಡಿದೆ ನಿನ್ನ ಕಣ್ಣು ಗಳ ಭರ್ತಿ ಆರಾಧನೆ, ಆಶ್ಚರ್ಯ..'ಇನ್ನೊಬ್ಬ ಜೊಲ್ಲು.' ಎಂದು ಮನಸಲ್ಲೇ ಅಂದುಕೊಂಡು ಬ್ಯಾಗನ್ನು ಕೆಳಗಿಟ್ಟು ಮತ್ತೆ ಕಣ್ಣು ಮುಚ್ಚಿದೆ. "ಇನ್ನು ಇವನು ಮಾತಾಡಿಸುತ್ತಾನೆ ಹೇಗೆ ಶುರು ಮಾಡಬಹುದು?" ಅಂತ ಕಲ್ಪಿಸಿಕೊಳ್ಳುತ್ತಿದ್ದರೆ ನೀನು ನನ್ನ ಮಾತಾಡಿಸಲೇ ಇಲ್ಲ. ನನಗೆ ಹಠ ಹುಟ್ಟಿತು. ನಾನು ಮಲಗಿದ್ದೀನಿ ಅಂದುಕೊಂಡು ನೀನು ಮಾತಾಡಿಸುತ್ತಿಲ್ಲ ಅಂತ ಕಣ್ಣು ಬಿಟ್ಟು ಕಿಟಕಿ ಹೊರಗೆ ನೋಡುತ್ತಾ ಕೂತೆ. ನೀನು ಮಾತಾಡಿಸಲಿಲ್ಲ. ನನ್ನ ನೋಡುತ್ತಿರಬಹುದು ಅಂತ ಸುಮ್ಮನೆ ನಿನ್ನ ಕಡೆ ನೋಡಿದೆ ಇಲ್ಲ ನಿನ್ನ ಲೋಕವೇ ನಿನಗೆ. ನನಗೇ ಸಿಟ್ಟು ಬಂದು ನಾನೇ ಮಾತಾಡಿಸಿದೆ.
ನನ್ನ ಜೊತೆ ಮಾತಾಡದಿದ್ದರೆ, ನಾನು ಒಂದು ದಿವಸ ಸಿಗದಿದ್ದರೆ ಬದುಕು ಸಾಧ್ಯವಿಲ್ಲ ಅನ್ನೋ ಹಾಗೆ ಆಡುತ್ತಿದ್ದೆ ನೀನು. ಒಂದು ದಿನ 'ಮುತ್ತು ಕೊಡು' ಎಂದು ನೀನು ಕೇಳಿದಾಗ ಆಶ್ಚರ್ಯ ಆಗಿತ್ತು ನನಗೆ. ನಾವೆಷ್ಟು ಪ್ರೀತಿಯ ಮಾತು ಆಡಿದ್ದರೂ ಪ್ರೀತಿಯ ಆ ಮುಖದ ಬಗ್ಗೆ ಯೋಚಿಸೇ ಇರಲಿಲ್ಲ ನಾನು. ಸುಮ್ಮನೆ ನಿನ್ನ ಮುಖ ನೋಡಿದೆ, ನಿನ್ನ ಕಣ್ಣುಗಳು ನನ್ನ ತಿನ್ನುತ್ತಿದ್ದವು, ಹಿಂದೆ ನನ್ನ ಬಹಳಷ್ಟು ಜನ ನನ್ನ ಹಾಗೆ ನೋಡಿದ್ದರು ಆದರೆ ಆವಾಗ ಅದು ಯಾವ ಭಾವನೆ ಎಂದು ಅರ್ಥ ಆಗಿರಲಿಲ್ಲ ನನಗೆ. ಈಗ ಆ ಎಲ್ಲಾ ಕಣ್ಣುಗಳು ನನ್ನ ಅವಸರಿಸಿ ತಿನ್ನುತ್ತಿವೆ , ದೇಹದ ಮೇಲೆಲ್ಲಾ ಒಟ್ಟಿಗೆ ಸರಿದಾಡುತ್ತಿವೆ ಅನ್ನಿಸಿ, ತಲೆ ಸಿಡಿದು ಹೋಗುತ್ತಿದೆ ಅನ್ನಿಸಿತು. ಅಸಹ್ಯವಾಗಿ ಕಣ್ಣು ಮುಚ್ಚಿದೆ. ಅದು ನಿನಗೆ ಸಮ್ಮತಿ ಅನ್ನಿಸಿರಬೇಕು ನೀನು ಮುಂದುವರಿದೆ...
ನನ್ನ ಮೀಸಲು ಮುರಿದ ದಿನ ಅಳಲಿಲ್ಲ ನಾನು ಏನೂ ಅನಿಸಲಿಲ್ಲ ನನಗೆ ಆದರೆ ನನ್ನ ಕಲ್ಪನೆಯ ಮಿಲನ ಒಬ್ಬರೊನ್ನೊಬ್ಬರು ಹಂಚಿಕೊಳ್ಳುವುದು ಅದಕ್ಕೆ ಬೆಂಕಿ ಹಾಕಿದ್ದೆ ನೀನು ನಾನು ಅದಕ್ಕೆ ತಯಾರಾಗುವ ಮೊದಲೇ ನೀನು ನನ್ನ ಪಡೆದಾಗಿತ್ತು
ಮಿಲನವೆಂದರೆ ಅದೂ ಮಾತಿನಂತೆ ಮೊದಮೊದಲು ಆದ ಪರಿಚಯದಂತೆ. ಮೌನದಿಂದ ಕಣ್ಗಳ ಮುಗ್ಧ ನೋಟ, ನಗುವಿನ ಪರಿಚಯ-ಇಷ್ಟಿಷ್ಟೇ ಮಾತು, ನಡುವೆ ಸ್ವಲ್ಪ ಸ್ವಲ್ಪವೇ ಇಣುಕುವ ತುಂಟತನ- ಮುಂದುವರಿದು ಮಾತಿನ ಮಂಟಪ. ಹಾಗೇ ಮಿಲನವೆಂದರೆ ಚೂರು ಚೂರಾಗಿಯೇ ಶುರುವಾಗಿ ತುಂಟತನವನ್ನು ಮೀಟಿ, ಅಲ್ಲಲ್ಲಿ ತಡಕಿ ಇನ್ನೆಲ್ಲೋ ಬೆದಕಿ ಮುಂದುವರೆದು ಐಕ್ಯವಾಗುವ ಭವ್ಯ ಪ್ರಕ್ರಿಯೆ. ಸುಮ್ಮನೆ ಒಬ್ಬರು ಇನ್ನೊಬ್ಬರನ್ನು ತಿನ್ನುವುದಕ್ಕೆ ಮಿಲನವೆಂಬ ದೊಡ್ಡ ಹೆಸರು ಬೇಕಿಲ್ಲ.
ನೀನು ನನ್ನಿಂದ ಅಪೆಕ್ಷಿಸೋದಾದರೂ ಏನನ್ನ ಅಂತ ಅರ್ಥ ಮಾಡಿಕೊಳ್ಳಬೇಕಿತ್ತು ನಾನು. ಹದಿನಾರು ಹದಿನೇಳು ವರ್ಷದ ಹುಡುಗಿಗೆ ಅದೆಲ್ಲಾ ಅರ್ಥವಾಗೋದಾದರೂ ಹೇಗೆ? ನೀನು ಕೆಟ್ಟವನಾ? ಊಹುಂ ಗೊತ್ತಾಗಲಿಲ್ಲ ನಂಗೆ!
ಇಲ್ಲ ನೀ ನನ್ನ ಪ್ರೀತಿಸಲೇ ಇಲ್ಲ ಅಂತ ಹೇಳ್ತಿಲ್ಲ ನಾನು ಎಲ್ಲಿ ತುಂಬಿಡಲಿ ಎಂದು ಗೊತ್ತಾಗದಷ್ಟು ಪ್ರೀತಿಸುತ್ತಿದ್ದೆ ಅನ್ನಿಸುತ್ತಿತ್ತು.
ಆದರೆ ಪ್ರೀತಿಸುವವರು ತುಂಬಾ ನಂಬುತ್ತಾರೆ ಅಲ್ಲವ? ನೀನು ನನ್ನ ನಂಬುತ್ತಲೇ ಇರಲಿಲ್ಲ! 'ನಂಬದೇ ಇರುವುದಕ್ಕೂ' 'ಅಪನಂಬಿಕೆ' ಎನ್ನುವುದಕ್ಕೂ ವ್ಯತ್ಯಾಸವಿದೆ. ನಿನ್ನ ಮನೆಯ ನಂಬರ್ ಏನೆಂಬುದು ಇಂದಿಗೂ ನನಗೆ ಗೊತ್ತಿಲ್ಲ. ನಿನ್ನ ಮನೆಯಿರುವ ರಸ್ತೆಯಲ್ಲಿ ಎಂದೂ ಓಡಾದಿದ್ದೇ ಇಲ್ಲ ನಾನು. ನಿನ್ನ ಸ್ನೇಹಿತರು ಬಂಧುಗಳು ಯಾರೆಂಬುದರ ಬಗ್ಗೆ ಎಂದು ಹೇಳಲೇ ಇಲ್ಲ ನೀನು. ಆದರೆ ನನ್ನ ಸ್ನೇಹಿತರ ಬಂಧುಗಳ ವಿಳಾಸವೆಲ್ಲವೂ ತಿಳಿದಿತ್ತು ನಿನಗೆ. ನನ್ನ ಪತ್ರಗಳೆಲ್ಲವನ್ನೂ ಜೋಪಾನವಾಗಿ ಇರಿಸಿಕೊಂಡಿದ್ದೆ ನೀನು ಪತ್ರಗಳನ್ನೇ ಬರೆಯುತ್ತಿರಲಿಲ್ಲ...
ಆದರೆ ಇವೆಲ್ಲವುದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ನಾನು. ನನಗೆ ಬೇಕಾಗಿದ್ದಿದ್ದು ನಿನ್ನ ಪ್ರೀತಿ ಮಾತ್ರ.. ಹಾಗಂತ ನನ್ನ ಅಪ್ಪ "ಅಮ್ಮ ಪ್ರೀತಿಸುತ್ತಿರಲಿಲ್ಲ. ಅದಕ್ಕೆ ನಿನ್ನ ಬಳಿ ಬಂದೆ, ಹೊರಗಿನ ಪ್ರೀತಿಗೆ ಹಂಬಲಿಸಿದೆ." ಎಂದೆಲ್ಲಾ ಸುಳ್ಳು ಹೇಳುವುದಿಲ್ಲ ನಾನು. ತುಂಬ ಪ್ರೀತಿಸುತ್ತಿದ್ದರು ಮನೆಯವರೆಲ್ಲ ಎಲ್ಲರಿಗೂ ನಾನೆಂದರೆ ಮುದ್ದು ಆದರೂ ಹೊರಗಿನ ಪ್ರೀತಿಗೆ ಕಾತರಿಸಿದೆ. ಅದು ಯಾರ ತಪ್ಪು? ನಿಜವಾಗಲೂ ಹಾಗೆ ಅಪೇಕ್ಷಿಸುವುದು ತಪ್ಪೇ?
ದಿನೇದಿನೇ ನಿನ್ನ ಪ್ರೀತಿ ಹೆಚ್ಚಾಗುತ್ತಿತ್ತು ಮೊದಮೊದಲು ಇಷ್ಟ ಆಗುತ್ತಿದ್ದ ನಿನ್ನ ಪೊಸೆಸ್ಸಿವ್ನೆಸ್ ಬರಬರುತ್ತಾ ಉಸಿರುಕಟ್ಟಿಸತೊಡಗಿತ್ತು.
"ನನ್ನ ಹೆಂಡತಿ ನನ್ನ ಅರ್ಥವೇ ಮಾಡಿಕೊಳ್ಳೋಲ್ಲ. ಅವಳಿಗೆ ಅವಳ ಓದೇ ಹೆಚ್ಚು. ನನ್ನ ಬೇಕು ಬೇಡಗಳಿಗೆ ಸರಿಯಾಗಿ ಸ್ಪಂದಿಸಲ್ಲ." ಎಂದು ನೀ ಹೇಳಿದ ದಿನ ಹಿಂಸೆ ಆಗಿತ್ತು ನನಗೆ. ಅವಳು ಸರಿ ಇಲ್ಲ ಅದಕ್ಕೆ ನಿನ್ನ ಕಡೆ ವಾಲಿದೆ ಅನ್ನೋ ಎಕ್ಸ್ಕೂಸ್ ಅಲ್ಲವ? ಕಾಡೋ ಗಿಲ್ಟಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ. ಅವ್ಳ ಬಗ್ಗೆ ಇನ್ನೂ ಹಾಗೇ ಏನೇನೋ ಹೇಳಿ ನಿನ್ನ ನೀನು ಸಮರ್ಥಿಸಿಕೊಳ್ಳುತ್ತಿದ್ದರೆ ಅಸಹ್ಯ ಕಿಬ್ಬೊಟ್ಟೆಯಾಳದಿಂದ ಉಕ್ಕುತ್ತಿತ್ತು ನನಗೆ. ನಿನ್ನ ಹೆಂಡತಿ ಚಂದದ ಹೆಂಗಸು. ದೊಡ್ಡ ಕಾಲೇಜೊಂದರಲ್ಲಿ ಲೆಚೆರರ್. ಇಷ್ಟ ಆಗುತ್ತಿದ್ದಳು ಎಲ್ಲರಿಗೂ, ನನಗೂ. ಅವಳು ಕೆಟ್ಟವಳಲ್ಲ, ಕೆಟ್ಟವಳಾದರೂ ನೀನು ಹಾಗೆ ಸಮರ್ಥನೆ ಮಾಡಿಕೊಳ್ಳಬಾರದಿತ್ತು. ತಪ್ಪು ಮಾಡಿದ್ದರೆ ತಾನೆ ಸಮರ್ಥನೆ? ನಿನಗೆ ನನ್ನ ಪ್ರೀತಿಸಿದ್ದು ಅನೈತಿಕ ಅನ್ನಿಸಿತ್ತಾ? ನೀನು ಇಷ್ಟ ಆಗ್ತಿಯ ಅದಕ್ಕೆ ಪ್ರೀತಿಸ್ತೀನಿ ಅನ್ನೋದು ಎಷ್ಟು ನೇರ ಅಲ್ಲವ.. ನೀನು ನನ್ನ ಪ್ರೀತಿಸೋದಕ್ಕೆ ಹೆಂಡತಿ ಕೆಟ್ಟವಳಾಗಬೇಕಿರಲಿಲ್ಲ...
ನದಿಗೆ ನೆನಪಿನ ಹಂಗಿಲ್ಲವೆಂದು ಹೇಳುತ್ತಾರೆ ನೀರಿನ ಮೇಲೆ ಚಿತ್ರ ಬರೆಯೋಕ್ಕಾಗೊದಿಲ್ಲ ಕತ್ತಿಯಲ್ಲಿ ಗಾಯ ಮಾಡೊಕ್ಕಾಗುವುದಿಲ್ಲ ಅನ್ನುತ್ತಾರಲ್ಲ ಬರೆದ ಚಿತ್ರಗಳು ಆದ ಗಾಯಗಳು ಎಲ್ಲವೂ ಕಾಣಲೇ ಬೇಕೆಂದಿದೆಯೇನು? ನದಿ ಎಂದರೇನು ಚಲಿಸುವ, ಹರಿಯುವ, ಉಕ್ಕುವ ನೀರಲ್ಲವೇ? ಈ ನೀರಿಗೆ ನೆನಪಿನ ಹಂಗು ಮಾತ್ರವಲ್ಲ, ಹೆಸರು ಬದಲಿಸಿಕೊಳ್ಳುವ ಚಟವೂ ಇದೆ. ಇಲ್ಲಿ ಪುಟ್ಟಗೆ ಹರಿಯುವ ಝರಿ ಎನಿಸಿಕೊಂಡರೆ, ಮತ್ತೆಲ್ಲೋ ಜಲಪಾಟವೆಂಬ ಭವ್ಯತೆ. ಮುಂದೆಲ್ಲೋ ನದಿ ಎಂದು ಸುಮ್ಮನಾದರೆ, ಮೊಗದೊಮ್ಮೆ ಸಮುದ್ರದ ವಿಷಾಲತೆ. ಸಮುದ್ರದ ಉಪ್ಪು ನದಿಯ ಗಾಯದ ಕಣ್ಣೀರಿಗೆ ಸಾಕ್ಷಿ. ನದಿಗೆ ನೆನಪಿನ ಹಂಗಿದೆ! ನದಿ ಹೆಣ್ಣೇ? ಛೆ! ನನ್ನ ತಲೆಯಲ್ಲಿ ಎನೇನೋ ಯೋಚನೆಗಳು ಅರ್ಥವಿಲ್ಲದ್ದು.
ಕತ್ತಲೆಯಲ್ಲಿ ಇರುಳು ಹೊರಳುತ್ತಿದೆ. ಎದುರು ಸಮುದ್ರವೆಂಬ ಹೆಸರಿನ ಹಂಗು ಹೊತ್ತು ಉಕ್ಕುತ್ತಿರುವ ನೀರಿನ ಬಣ್ಣ ಕಪ್ಪೋ? ನೀಲಿಯೋ? ಎರೆಡೂ ಅಲ್ಲ ಕತ್ತಲೆ ನನ್ನ ನಿನ್ನ ಸಂಭಂದದ ಬಣ್ಣವೇನು? ಗುಲಾಬಿಯೊ.. ನೀಲಿಯೋ.. ಎರಡೂ ಅಲ್ಲ....
ನನಗೆ ಬಣ್ಣದ ಆಟ ಹೇಳಿಕೊಡಲು ಬಂದವನನ್ನು ಒಳಗೆ ಬಿಟ್ಟುಕೊಡಲೂ ಭಯವಾಗುತ್ತಿತ್ತು. ನಿನ್ನ ಭಯ. ಹೌದು ನಿನಗೆ ನಾನು ಹೆದುತ್ತೀದ್ದೇನೆಂಬುದು ನನಗೆ ಸ್ಪಷ್ಟವಾಗಿ ಗೊತ್ತಾಗಿದ್ದೇ ಆಗ.ಬಣ್ಣ ತುಂಬಿಸಲು ಬಂದ ಹುಡುಗನಿಗೆ ಯಾರೋ ಕೆಂಬಣ್ಣದ ರುಚಿ ತೋರಿಸಿದ್ದಾರೆಂಬುದು ತಿಳಿಯಿತು. ಅವನು ಆಸ್ಪತ್ರೆಯೊಂದರಲ್ಲಿ ಚೆತರಿಸಿಕೊಳ್ಳುತ್ತಿದ್ದ. ಆವಾಗಲೇ ಅನ್ನಿಸಿದ್ದು ನಿನ್ನಿಂದ ತಪ್ಪಿಸಿಕೊಳ್ಳಲೇಬೆಕೆಂದು. ದೂರ ಓಡಿಹೋಗೋಣವೆಂದುಕೊಂಡೆ ಆದರೆ ನನ್ನ ಓದು ಮುಗಿಯಲು ಇನ್ನೂ ಆರು ತಿಂಗಳಿತ್ತು. ಪ್ರೀತಿ ಸತ್ತಿತ್ತು. ಅಲ್ಲಿಯವರೆಗೂ ನಿನ್ನ ಜೊತೆ ಪ್ರೀತಿಯ ನಾಟಕ ಆಡದೆ ವಿಧಿ ಇರಲಿಲ್ಲ. ಅಪ್ಪನಿಗೆ "ಮದುವೆ ಮಾಡಿಬಿಡು" ಎಂದು ಹೇಳೋಣವೆಂದುಕೊಂಡೆ ಆದರೆ ಕೆಲವುದಿನಗಳಾದರೂ ದುಡಿದು ಸ್ವತಂತ್ರವಾಗಿರಬೇಕೆಂಬನನ್ನ ಹಂಬಲವನ್ನು ಹತ್ತಿಕ್ಕಲಾಗಲಿಲ್ಲ. ಆರು ತಿಂಗಳ ನಂತರ ನಿನ್ನಿಂದ ದೂರ ಮೇಘಾಲಯಕ್ಕೆ ಹೋದೆ ಫೋನು ಕೊಳ್ಳಲಿಲ್ಲ, ನಿನ್ನ ಜೊತೆಯ ಸಂಪರ್ಕ ಸಂಪುರ್ಣವಾಗಿ ಕಡಿದುಕೊಂಡಿದ್ದೆ.ನಿನಗೆ ಪತ್ರ ಬರೆಯುವ ತಾಕತ್ತಿಲ್ಲವೆಂಬುದು ಗೊತ್ತಿತ್ತು . ಎಲ್ಲಿ ಮನೆಗೆ ಹೊಗಿ ವಿಚಾರಿಸುತ್ತಿಯೋ? ಒಮ್ಮಿಂದೊಮ್ಮೆ ಧುತ್ ಎಂದು ಪ್ರತ್ಯಕ್ಷವಾಗಿಬಿಟ್ಟರೆ? ಎಂದು ಬಹಳಷ್ಟು ದಿನ ಹೆದರಿದ್ದೆ.ಆದರೆ ಹಾಗೇನಾಗಲಿಲ್ಲ. ಇಗ ನನ್ನ ಬದುಕಿನಲ್ಲಿ ಬಣ್ಣಗಳ ಮೇಳ! ಅವನದು ಸಮುದ್ರ ಪ್ರೀತಿ.
ಮೊನ್ನೆ ನಿನ್ನ ಫ್ಲೈಟಿನಲ್ಲಿ ನೋಡಿದೆನಲ್ಲ ನೀನು ಮಲಗಿದ್ದೆ. ಪಕ್ಕದಲ್ಲಿ ಇನ್ಯಾರೋ ಹುಡುಗಿ. ಸುಮ್ಮನೆ ಹಿಂದಿನದೆಲ್ಲಾ ನೆನಪಾಯಿತು. ನದಿಗೆ ನೆನಪಿನ ಹಂಗು!
ನೀನು ಕೆಟ್ಟವನಾ? ಉಹುಂ ಇನ್ನು ಗೊತ್ತಾಗುತ್ತಿಲ್ಲ...
ನಿನಗೆ ಮದುವೆ ಆಗಿದೆ ಅಂತ ನೀನು ಹೇಳೋಕ್ಕೆ ಮೊದಲೇ ನನಗೆ ಗೊತ್ತಾಗಿ ಹೋಗಿತ್ತು. ನೀನು ನನ್ನ ಆವರಿಸಿಕೊಳ್ಳಲು ಮಾಡುತ್ತಿರುವ ಪ್ರತಿಯೊಂದು ಪ್ರಯತ್ನ, ಮಾತು,ನಗು,ಪ್ರೀತಿ,ದುಃಖ,ದುಮ್ಮಾನ.. ಎಲ್ಲವೂ.. ಆದರೂ ನಿನ್ನಿಂದ ನನ್ನ ಬಿಡಿಸಿಕೊಳ್ಳಲು ಆಗುತ್ತಿರಲಿಲ್ಲ. ನನ್ನ ವಯಸ್ಸಿನ, ನನ್ನ ಪ್ರೀತಿಸುತ್ತಿದ್ದ, ನನ್ನ ಸೌಂದರ್ಯವನ್ನು ಹೊಗಳುತ್ತಿದ್ದ, ನನ್ನ ಮುಂದೆ ಅವರ ಪ್ರೀತಿಯನ್ನು ಹೇಳಿಕೊಳ್ಳುತ್ತಿದ್ದ ಹುಡುಗರೆಲ್ಲಾ ಬುದ್ದಿ ಬಲಿಯದ ಶರಣಾಗತ ಹುಡುಗರಂತೆ ಕಾಣುತ್ತಿದ್ದರು. ನನಗೆ ಅವರ ಪ್ರೀತಿ ಅರ್ಥವೇ ಆಗುತ್ತಿರಲಿಲ್ಲ, ಅವರ ಪ್ರೀತಿಯನ್ನು ಆಡಿಸಿಕೊಂಡು ನಗುತ್ತಿದ್ದೆ. ನೀನು ಸಿಕ್ಕಿದೆ. ನಿನ್ನ ಮಾತುಗಳು ಅಪ್ಪಟ ಆರಾಧನೆ ನೀನು ಯಾವತ್ತಿಗೂ ನನ್ನ ಪ್ರೀತಿಸುತ್ತೀನಿ ಅಂತ ಹೇಳಿರಲಿಲ್ಲ, ಆದರೆ ನನ್ನ ಮನಸ್ಸಿನ ಪ್ರತಿಯೊಂದು ಎಳೆಯನ್ನೂ ಅರ್ಥ ಮಾಡಿಕೊಂಡು ಅದನ್ನು ವಿವರಿಸುತ್ತಿದ್ದೆ. ಸಮಾಧಾನ ಪಡಿಸುತ್ತಿದ್ದೆ. ನನ್ನ ಸೌಂದರ್ಯವನ್ನು ನಿನ್ನ ಕಣ್ಣ ತುಂಬ ತುಂಬಿಕೊಳ್ಳುತ್ತಿದ್ದೆ, ಹಾಗೆ ತುಂಬಿಕೊಳ್ಳುತ್ತಿದ್ದೇಯೆಂಬುದನ್ನು ನನಗೆ ತಿಳಿಯುವ ಹಾಗೆ ಮಾಡುತ್ತಿದ್ದೆ.
ಚೆನ್ನೈನಿಂದ ಬೆಂಗಳೂರಿಗೆ ಬರುವ ಟ್ರೇನಿನ ಎ.ಸಿ. ಕೋಚಿನಲ್ಲಿ ಕಿಟಕಿ ಪಕ್ಕ ಕುತು, ಕಿಟಕಿ ಹೊರಗೆ ನೋಡುತ್ತಿದ್ದ ನಾನು ಟ್ರೇನ್ ಹೊರಟಾಗ "ಸದ್ಯ ನನ್ನ ಪಕ್ಕ ಯಾರೂ ಇಲ್ಲವಲ್ಲ ತಲೆ ತಿನ್ನೋದಕ್ಕೆ." ಅಂದುಕೊಂಡು ಕಣ್ಣು ಮುಚ್ಚಿದೆ ಆದರೆ ಒಂದೇ ನಿಮಿಷ "ನಿಮ್ಗೆ ಡಿಸ್ಟರ್ಬ್ ಮಾಡ್ತಿದಿನಿ ಅನ್ಸತ್ತೆ ಇದು ನನ್ನ ಸಿಟು. ನಿಮ್ಮ ಲಗೇಜನ್ನು ಕೆಳಗಿಟ್ಟುಕೊಳ್ಳುತ್ತೀರ?" ಅಂದೆ ನೀನು. ಕಣ್ಣು ಬಿಟ್ಟು ನೋಡಿದೆ ನಿನ್ನ ಕಣ್ಣು ಗಳ ಭರ್ತಿ ಆರಾಧನೆ, ಆಶ್ಚರ್ಯ..'ಇನ್ನೊಬ್ಬ ಜೊಲ್ಲು.' ಎಂದು ಮನಸಲ್ಲೇ ಅಂದುಕೊಂಡು ಬ್ಯಾಗನ್ನು ಕೆಳಗಿಟ್ಟು ಮತ್ತೆ ಕಣ್ಣು ಮುಚ್ಚಿದೆ. "ಇನ್ನು ಇವನು ಮಾತಾಡಿಸುತ್ತಾನೆ ಹೇಗೆ ಶುರು ಮಾಡಬಹುದು?" ಅಂತ ಕಲ್ಪಿಸಿಕೊಳ್ಳುತ್ತಿದ್ದರೆ ನೀನು ನನ್ನ ಮಾತಾಡಿಸಲೇ ಇಲ್ಲ. ನನಗೆ ಹಠ ಹುಟ್ಟಿತು. ನಾನು ಮಲಗಿದ್ದೀನಿ ಅಂದುಕೊಂಡು ನೀನು ಮಾತಾಡಿಸುತ್ತಿಲ್ಲ ಅಂತ ಕಣ್ಣು ಬಿಟ್ಟು ಕಿಟಕಿ ಹೊರಗೆ ನೋಡುತ್ತಾ ಕೂತೆ. ನೀನು ಮಾತಾಡಿಸಲಿಲ್ಲ. ನನ್ನ ನೋಡುತ್ತಿರಬಹುದು ಅಂತ ಸುಮ್ಮನೆ ನಿನ್ನ ಕಡೆ ನೋಡಿದೆ ಇಲ್ಲ ನಿನ್ನ ಲೋಕವೇ ನಿನಗೆ. ನನಗೇ ಸಿಟ್ಟು ಬಂದು ನಾನೇ ಮಾತಾಡಿಸಿದೆ.
ನನ್ನ ಜೊತೆ ಮಾತಾಡದಿದ್ದರೆ, ನಾನು ಒಂದು ದಿವಸ ಸಿಗದಿದ್ದರೆ ಬದುಕು ಸಾಧ್ಯವಿಲ್ಲ ಅನ್ನೋ ಹಾಗೆ ಆಡುತ್ತಿದ್ದೆ ನೀನು. ಒಂದು ದಿನ 'ಮುತ್ತು ಕೊಡು' ಎಂದು ನೀನು ಕೇಳಿದಾಗ ಆಶ್ಚರ್ಯ ಆಗಿತ್ತು ನನಗೆ. ನಾವೆಷ್ಟು ಪ್ರೀತಿಯ ಮಾತು ಆಡಿದ್ದರೂ ಪ್ರೀತಿಯ ಆ ಮುಖದ ಬಗ್ಗೆ ಯೋಚಿಸೇ ಇರಲಿಲ್ಲ ನಾನು. ಸುಮ್ಮನೆ ನಿನ್ನ ಮುಖ ನೋಡಿದೆ, ನಿನ್ನ ಕಣ್ಣುಗಳು ನನ್ನ ತಿನ್ನುತ್ತಿದ್ದವು, ಹಿಂದೆ ನನ್ನ ಬಹಳಷ್ಟು ಜನ ನನ್ನ ಹಾಗೆ ನೋಡಿದ್ದರು ಆದರೆ ಆವಾಗ ಅದು ಯಾವ ಭಾವನೆ ಎಂದು ಅರ್ಥ ಆಗಿರಲಿಲ್ಲ ನನಗೆ. ಈಗ ಆ ಎಲ್ಲಾ ಕಣ್ಣುಗಳು ನನ್ನ ಅವಸರಿಸಿ ತಿನ್ನುತ್ತಿವೆ , ದೇಹದ ಮೇಲೆಲ್ಲಾ ಒಟ್ಟಿಗೆ ಸರಿದಾಡುತ್ತಿವೆ ಅನ್ನಿಸಿ, ತಲೆ ಸಿಡಿದು ಹೋಗುತ್ತಿದೆ ಅನ್ನಿಸಿತು. ಅಸಹ್ಯವಾಗಿ ಕಣ್ಣು ಮುಚ್ಚಿದೆ. ಅದು ನಿನಗೆ ಸಮ್ಮತಿ ಅನ್ನಿಸಿರಬೇಕು ನೀನು ಮುಂದುವರಿದೆ...
ನನ್ನ ಮೀಸಲು ಮುರಿದ ದಿನ ಅಳಲಿಲ್ಲ ನಾನು ಏನೂ ಅನಿಸಲಿಲ್ಲ ನನಗೆ ಆದರೆ ನನ್ನ ಕಲ್ಪನೆಯ ಮಿಲನ ಒಬ್ಬರೊನ್ನೊಬ್ಬರು ಹಂಚಿಕೊಳ್ಳುವುದು ಅದಕ್ಕೆ ಬೆಂಕಿ ಹಾಕಿದ್ದೆ ನೀನು ನಾನು ಅದಕ್ಕೆ ತಯಾರಾಗುವ ಮೊದಲೇ ನೀನು ನನ್ನ ಪಡೆದಾಗಿತ್ತು
ಮಿಲನವೆಂದರೆ ಅದೂ ಮಾತಿನಂತೆ ಮೊದಮೊದಲು ಆದ ಪರಿಚಯದಂತೆ. ಮೌನದಿಂದ ಕಣ್ಗಳ ಮುಗ್ಧ ನೋಟ, ನಗುವಿನ ಪರಿಚಯ-ಇಷ್ಟಿಷ್ಟೇ ಮಾತು, ನಡುವೆ ಸ್ವಲ್ಪ ಸ್ವಲ್ಪವೇ ಇಣುಕುವ ತುಂಟತನ- ಮುಂದುವರಿದು ಮಾತಿನ ಮಂಟಪ. ಹಾಗೇ ಮಿಲನವೆಂದರೆ ಚೂರು ಚೂರಾಗಿಯೇ ಶುರುವಾಗಿ ತುಂಟತನವನ್ನು ಮೀಟಿ, ಅಲ್ಲಲ್ಲಿ ತಡಕಿ ಇನ್ನೆಲ್ಲೋ ಬೆದಕಿ ಮುಂದುವರೆದು ಐಕ್ಯವಾಗುವ ಭವ್ಯ ಪ್ರಕ್ರಿಯೆ. ಸುಮ್ಮನೆ ಒಬ್ಬರು ಇನ್ನೊಬ್ಬರನ್ನು ತಿನ್ನುವುದಕ್ಕೆ ಮಿಲನವೆಂಬ ದೊಡ್ಡ ಹೆಸರು ಬೇಕಿಲ್ಲ.
ನೀನು ನನ್ನಿಂದ ಅಪೆಕ್ಷಿಸೋದಾದರೂ ಏನನ್ನ ಅಂತ ಅರ್ಥ ಮಾಡಿಕೊಳ್ಳಬೇಕಿತ್ತು ನಾನು. ಹದಿನಾರು ಹದಿನೇಳು ವರ್ಷದ ಹುಡುಗಿಗೆ ಅದೆಲ್ಲಾ ಅರ್ಥವಾಗೋದಾದರೂ ಹೇಗೆ? ನೀನು ಕೆಟ್ಟವನಾ? ಊಹುಂ ಗೊತ್ತಾಗಲಿಲ್ಲ ನಂಗೆ!
ಇಲ್ಲ ನೀ ನನ್ನ ಪ್ರೀತಿಸಲೇ ಇಲ್ಲ ಅಂತ ಹೇಳ್ತಿಲ್ಲ ನಾನು ಎಲ್ಲಿ ತುಂಬಿಡಲಿ ಎಂದು ಗೊತ್ತಾಗದಷ್ಟು ಪ್ರೀತಿಸುತ್ತಿದ್ದೆ ಅನ್ನಿಸುತ್ತಿತ್ತು.
ಆದರೆ ಪ್ರೀತಿಸುವವರು ತುಂಬಾ ನಂಬುತ್ತಾರೆ ಅಲ್ಲವ? ನೀನು ನನ್ನ ನಂಬುತ್ತಲೇ ಇರಲಿಲ್ಲ! 'ನಂಬದೇ ಇರುವುದಕ್ಕೂ' 'ಅಪನಂಬಿಕೆ' ಎನ್ನುವುದಕ್ಕೂ ವ್ಯತ್ಯಾಸವಿದೆ. ನಿನ್ನ ಮನೆಯ ನಂಬರ್ ಏನೆಂಬುದು ಇಂದಿಗೂ ನನಗೆ ಗೊತ್ತಿಲ್ಲ. ನಿನ್ನ ಮನೆಯಿರುವ ರಸ್ತೆಯಲ್ಲಿ ಎಂದೂ ಓಡಾದಿದ್ದೇ ಇಲ್ಲ ನಾನು. ನಿನ್ನ ಸ್ನೇಹಿತರು ಬಂಧುಗಳು ಯಾರೆಂಬುದರ ಬಗ್ಗೆ ಎಂದು ಹೇಳಲೇ ಇಲ್ಲ ನೀನು. ಆದರೆ ನನ್ನ ಸ್ನೇಹಿತರ ಬಂಧುಗಳ ವಿಳಾಸವೆಲ್ಲವೂ ತಿಳಿದಿತ್ತು ನಿನಗೆ. ನನ್ನ ಪತ್ರಗಳೆಲ್ಲವನ್ನೂ ಜೋಪಾನವಾಗಿ ಇರಿಸಿಕೊಂಡಿದ್ದೆ ನೀನು ಪತ್ರಗಳನ್ನೇ ಬರೆಯುತ್ತಿರಲಿಲ್ಲ...
ಆದರೆ ಇವೆಲ್ಲವುದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ನಾನು. ನನಗೆ ಬೇಕಾಗಿದ್ದಿದ್ದು ನಿನ್ನ ಪ್ರೀತಿ ಮಾತ್ರ.. ಹಾಗಂತ ನನ್ನ ಅಪ್ಪ "ಅಮ್ಮ ಪ್ರೀತಿಸುತ್ತಿರಲಿಲ್ಲ. ಅದಕ್ಕೆ ನಿನ್ನ ಬಳಿ ಬಂದೆ, ಹೊರಗಿನ ಪ್ರೀತಿಗೆ ಹಂಬಲಿಸಿದೆ." ಎಂದೆಲ್ಲಾ ಸುಳ್ಳು ಹೇಳುವುದಿಲ್ಲ ನಾನು. ತುಂಬ ಪ್ರೀತಿಸುತ್ತಿದ್ದರು ಮನೆಯವರೆಲ್ಲ ಎಲ್ಲರಿಗೂ ನಾನೆಂದರೆ ಮುದ್ದು ಆದರೂ ಹೊರಗಿನ ಪ್ರೀತಿಗೆ ಕಾತರಿಸಿದೆ. ಅದು ಯಾರ ತಪ್ಪು? ನಿಜವಾಗಲೂ ಹಾಗೆ ಅಪೇಕ್ಷಿಸುವುದು ತಪ್ಪೇ?
ದಿನೇದಿನೇ ನಿನ್ನ ಪ್ರೀತಿ ಹೆಚ್ಚಾಗುತ್ತಿತ್ತು ಮೊದಮೊದಲು ಇಷ್ಟ ಆಗುತ್ತಿದ್ದ ನಿನ್ನ ಪೊಸೆಸ್ಸಿವ್ನೆಸ್ ಬರಬರುತ್ತಾ ಉಸಿರುಕಟ್ಟಿಸತೊಡಗಿತ್ತು.
"ನನ್ನ ಹೆಂಡತಿ ನನ್ನ ಅರ್ಥವೇ ಮಾಡಿಕೊಳ್ಳೋಲ್ಲ. ಅವಳಿಗೆ ಅವಳ ಓದೇ ಹೆಚ್ಚು. ನನ್ನ ಬೇಕು ಬೇಡಗಳಿಗೆ ಸರಿಯಾಗಿ ಸ್ಪಂದಿಸಲ್ಲ." ಎಂದು ನೀ ಹೇಳಿದ ದಿನ ಹಿಂಸೆ ಆಗಿತ್ತು ನನಗೆ. ಅವಳು ಸರಿ ಇಲ್ಲ ಅದಕ್ಕೆ ನಿನ್ನ ಕಡೆ ವಾಲಿದೆ ಅನ್ನೋ ಎಕ್ಸ್ಕೂಸ್ ಅಲ್ಲವ? ಕಾಡೋ ಗಿಲ್ಟಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ. ಅವ್ಳ ಬಗ್ಗೆ ಇನ್ನೂ ಹಾಗೇ ಏನೇನೋ ಹೇಳಿ ನಿನ್ನ ನೀನು ಸಮರ್ಥಿಸಿಕೊಳ್ಳುತ್ತಿದ್ದರೆ ಅಸಹ್ಯ ಕಿಬ್ಬೊಟ್ಟೆಯಾಳದಿಂದ ಉಕ್ಕುತ್ತಿತ್ತು ನನಗೆ. ನಿನ್ನ ಹೆಂಡತಿ ಚಂದದ ಹೆಂಗಸು. ದೊಡ್ಡ ಕಾಲೇಜೊಂದರಲ್ಲಿ ಲೆಚೆರರ್. ಇಷ್ಟ ಆಗುತ್ತಿದ್ದಳು ಎಲ್ಲರಿಗೂ, ನನಗೂ. ಅವಳು ಕೆಟ್ಟವಳಲ್ಲ, ಕೆಟ್ಟವಳಾದರೂ ನೀನು ಹಾಗೆ ಸಮರ್ಥನೆ ಮಾಡಿಕೊಳ್ಳಬಾರದಿತ್ತು. ತಪ್ಪು ಮಾಡಿದ್ದರೆ ತಾನೆ ಸಮರ್ಥನೆ? ನಿನಗೆ ನನ್ನ ಪ್ರೀತಿಸಿದ್ದು ಅನೈತಿಕ ಅನ್ನಿಸಿತ್ತಾ? ನೀನು ಇಷ್ಟ ಆಗ್ತಿಯ ಅದಕ್ಕೆ ಪ್ರೀತಿಸ್ತೀನಿ ಅನ್ನೋದು ಎಷ್ಟು ನೇರ ಅಲ್ಲವ.. ನೀನು ನನ್ನ ಪ್ರೀತಿಸೋದಕ್ಕೆ ಹೆಂಡತಿ ಕೆಟ್ಟವಳಾಗಬೇಕಿರಲಿಲ್ಲ...
ನದಿಗೆ ನೆನಪಿನ ಹಂಗಿಲ್ಲವೆಂದು ಹೇಳುತ್ತಾರೆ ನೀರಿನ ಮೇಲೆ ಚಿತ್ರ ಬರೆಯೋಕ್ಕಾಗೊದಿಲ್ಲ ಕತ್ತಿಯಲ್ಲಿ ಗಾಯ ಮಾಡೊಕ್ಕಾಗುವುದಿಲ್ಲ ಅನ್ನುತ್ತಾರಲ್ಲ ಬರೆದ ಚಿತ್ರಗಳು ಆದ ಗಾಯಗಳು ಎಲ್ಲವೂ ಕಾಣಲೇ ಬೇಕೆಂದಿದೆಯೇನು? ನದಿ ಎಂದರೇನು ಚಲಿಸುವ, ಹರಿಯುವ, ಉಕ್ಕುವ ನೀರಲ್ಲವೇ? ಈ ನೀರಿಗೆ ನೆನಪಿನ ಹಂಗು ಮಾತ್ರವಲ್ಲ, ಹೆಸರು ಬದಲಿಸಿಕೊಳ್ಳುವ ಚಟವೂ ಇದೆ. ಇಲ್ಲಿ ಪುಟ್ಟಗೆ ಹರಿಯುವ ಝರಿ ಎನಿಸಿಕೊಂಡರೆ, ಮತ್ತೆಲ್ಲೋ ಜಲಪಾಟವೆಂಬ ಭವ್ಯತೆ. ಮುಂದೆಲ್ಲೋ ನದಿ ಎಂದು ಸುಮ್ಮನಾದರೆ, ಮೊಗದೊಮ್ಮೆ ಸಮುದ್ರದ ವಿಷಾಲತೆ. ಸಮುದ್ರದ ಉಪ್ಪು ನದಿಯ ಗಾಯದ ಕಣ್ಣೀರಿಗೆ ಸಾಕ್ಷಿ. ನದಿಗೆ ನೆನಪಿನ ಹಂಗಿದೆ! ನದಿ ಹೆಣ್ಣೇ? ಛೆ! ನನ್ನ ತಲೆಯಲ್ಲಿ ಎನೇನೋ ಯೋಚನೆಗಳು ಅರ್ಥವಿಲ್ಲದ್ದು.
ಕತ್ತಲೆಯಲ್ಲಿ ಇರುಳು ಹೊರಳುತ್ತಿದೆ. ಎದುರು ಸಮುದ್ರವೆಂಬ ಹೆಸರಿನ ಹಂಗು ಹೊತ್ತು ಉಕ್ಕುತ್ತಿರುವ ನೀರಿನ ಬಣ್ಣ ಕಪ್ಪೋ? ನೀಲಿಯೋ? ಎರೆಡೂ ಅಲ್ಲ ಕತ್ತಲೆ ನನ್ನ ನಿನ್ನ ಸಂಭಂದದ ಬಣ್ಣವೇನು? ಗುಲಾಬಿಯೊ.. ನೀಲಿಯೋ.. ಎರಡೂ ಅಲ್ಲ....
ನನಗೆ ಬಣ್ಣದ ಆಟ ಹೇಳಿಕೊಡಲು ಬಂದವನನ್ನು ಒಳಗೆ ಬಿಟ್ಟುಕೊಡಲೂ ಭಯವಾಗುತ್ತಿತ್ತು. ನಿನ್ನ ಭಯ. ಹೌದು ನಿನಗೆ ನಾನು ಹೆದುತ್ತೀದ್ದೇನೆಂಬುದು ನನಗೆ ಸ್ಪಷ್ಟವಾಗಿ ಗೊತ್ತಾಗಿದ್ದೇ ಆಗ.ಬಣ್ಣ ತುಂಬಿಸಲು ಬಂದ ಹುಡುಗನಿಗೆ ಯಾರೋ ಕೆಂಬಣ್ಣದ ರುಚಿ ತೋರಿಸಿದ್ದಾರೆಂಬುದು ತಿಳಿಯಿತು. ಅವನು ಆಸ್ಪತ್ರೆಯೊಂದರಲ್ಲಿ ಚೆತರಿಸಿಕೊಳ್ಳುತ್ತಿದ್ದ. ಆವಾಗಲೇ ಅನ್ನಿಸಿದ್ದು ನಿನ್ನಿಂದ ತಪ್ಪಿಸಿಕೊಳ್ಳಲೇಬೆಕೆಂದು. ದೂರ ಓಡಿಹೋಗೋಣವೆಂದುಕೊಂಡೆ ಆದರೆ ನನ್ನ ಓದು ಮುಗಿಯಲು ಇನ್ನೂ ಆರು ತಿಂಗಳಿತ್ತು. ಪ್ರೀತಿ ಸತ್ತಿತ್ತು. ಅಲ್ಲಿಯವರೆಗೂ ನಿನ್ನ ಜೊತೆ ಪ್ರೀತಿಯ ನಾಟಕ ಆಡದೆ ವಿಧಿ ಇರಲಿಲ್ಲ. ಅಪ್ಪನಿಗೆ "ಮದುವೆ ಮಾಡಿಬಿಡು" ಎಂದು ಹೇಳೋಣವೆಂದುಕೊಂಡೆ ಆದರೆ ಕೆಲವುದಿನಗಳಾದರೂ ದುಡಿದು ಸ್ವತಂತ್ರವಾಗಿರಬೇಕೆಂಬನನ್ನ ಹಂಬಲವನ್ನು ಹತ್ತಿಕ್ಕಲಾಗಲಿಲ್ಲ. ಆರು ತಿಂಗಳ ನಂತರ ನಿನ್ನಿಂದ ದೂರ ಮೇಘಾಲಯಕ್ಕೆ ಹೋದೆ ಫೋನು ಕೊಳ್ಳಲಿಲ್ಲ, ನಿನ್ನ ಜೊತೆಯ ಸಂಪರ್ಕ ಸಂಪುರ್ಣವಾಗಿ ಕಡಿದುಕೊಂಡಿದ್ದೆ.ನಿನಗೆ ಪತ್ರ ಬರೆಯುವ ತಾಕತ್ತಿಲ್ಲವೆಂಬುದು ಗೊತ್ತಿತ್ತು . ಎಲ್ಲಿ ಮನೆಗೆ ಹೊಗಿ ವಿಚಾರಿಸುತ್ತಿಯೋ? ಒಮ್ಮಿಂದೊಮ್ಮೆ ಧುತ್ ಎಂದು ಪ್ರತ್ಯಕ್ಷವಾಗಿಬಿಟ್ಟರೆ? ಎಂದು ಬಹಳಷ್ಟು ದಿನ ಹೆದರಿದ್ದೆ.ಆದರೆ ಹಾಗೇನಾಗಲಿಲ್ಲ. ಇಗ ನನ್ನ ಬದುಕಿನಲ್ಲಿ ಬಣ್ಣಗಳ ಮೇಳ! ಅವನದು ಸಮುದ್ರ ಪ್ರೀತಿ.
ಮೊನ್ನೆ ನಿನ್ನ ಫ್ಲೈಟಿನಲ್ಲಿ ನೋಡಿದೆನಲ್ಲ ನೀನು ಮಲಗಿದ್ದೆ. ಪಕ್ಕದಲ್ಲಿ ಇನ್ಯಾರೋ ಹುಡುಗಿ. ಸುಮ್ಮನೆ ಹಿಂದಿನದೆಲ್ಲಾ ನೆನಪಾಯಿತು. ನದಿಗೆ ನೆನಪಿನ ಹಂಗು!
ನೀನು ಕೆಟ್ಟವನಾ? ಉಹುಂ ಇನ್ನು ಗೊತ್ತಾಗುತ್ತಿಲ್ಲ...
Wednesday, December 12, 2007
ನೀಲಿ ನಕ್ಷತ್ರದಿಂದ ಬಂದ ಪತ್ರ
ಮಧ್ಯರಾತ್ರಿಯ ಕಪ್ಪಿನೊಳಗಣ ಬೆಳಕೇ...
ಅಮ್ಮ ಅಡುಗೆ ಮನೆಯಲ್ಲಿ ಏನೋ ದಡ ಬಡ ಮಾಡುತ್ತಿದ್ದಾಳೆ.ಚಿಕ್ಕಪ್ಪ ಅಪ್ಪ ಸೇರಿ ಟಿ ವಿ, ಸೋಫ, ಟೆಬಲ್ಲು- ಕುರ್ಚಿ, ಮಂಚ ಎಲ್ಲವನ್ನೂ ತಂದು ಜೋಡಿಸಿಟ್ಟಿದ್ದಾರೆ..ನೀನು ಅವತ್ತು ಬಂದಾಗ ಖಾಲಿ ಇದ್ದ ಮನೆ ಈಗ ತುಂಬಿದೆ. ಹುಚ್ಚು ಅಪ್ಪನಿಗೆ, ಮನೆ ತುಂಬಬಹುದು........ಮನಸ್ಸು...????
ಈ ಮನೆ ಕೊಂಡು 'ಶಿಫ್ಟ್ ಮಾಡ್ತೀನಿ ನಾನು' ಅಂದಾಗ 'ನಿಂಗೊಬ್ನಿಗೇ ಕಷ್ಟ ಆಗುತ್ತೆ, ನಾ ಬರ್ತೀನಿ.' ಅಂದು ಮೊದಮೊದಲು ಮನೆಗೆ ಬಂದವಳು ನೀನು. ಖಾಲಿ ಮನೆ ಏನು ಕೊಂಡುಬಂದಿರಲಿಲ್ಲ.. ಬರೀ ನನ್ನ ಬಟ್ಟೆ, ಚಪ್ಪಲಿಗಳು, ಶೂಗಳು, ಹಾಗೂ ಲ್ಯಾಪ್ ಟಾಪ್. ಮನೆಗೆ ಬಂದವಳೇ ಒಂದಿಷ್ಟು ವಸ್ತುಗಳನ್ನ ಪಟ್ಟಿ ಮಾಡಿ 'ತೊಗೊಂಡು ಬಾ' ಎಂದು ನನ್ನ ಕೈಗೆ ಕೊಟ್ಟು, ನಾನು ಬರುವುದೊರೊಳಗೆ ಪಕ್ಕದ ಮನೆಯವರ ಸ್ನೇಹ ಮಾಡಿ, ಪೊರಕೆ ತಂದು, ಮನೆ ಗುಡಿಸಿ ನನ್ನ ಹಳೇ ಟೀ ಷರ್ಟಿನಲ್ಲಿ ನೆಲ ಒರೆಸುತ್ತಿದ್ದೆ! ಆಮೇಲೆ ನಾನು ನೀನು ಸೇರಿ ಸಾದ್ಯವಾದಷ್ಟು ಮನೆ ಸ್ವಚ್ಚ ಮಾಡಿ, ಒಟ್ಟಿಗೆ ಸ್ನಾನ-ಅಡುಗೆ-ಊಟ ಮಾಡಿ ಗಡಿಯಾರ ನೋಡಿದರೆ, ಗಡಿಯಾರದ ಮುಳ್ಳುಗಳು ಒಂಭತ್ತು ಘಂಟೆ ಎನ್ನುತ್ತಿದ್ದವು.
ಟೆರೇಸಿನ ಮೇಲೆ ಹೋದರೆ, ನಕ್ಷತ್ರಗಳು ಕೈಗೆ ಸಿಗುವಷ್ಟು ಹತ್ತಿರ! ಮಲಗೋಣವೆಂದೆ ನೀನು.. ಹಾಸಿಗೆ ಇಲ್ಲ.... ದಿಂಬಿಲ್ಲ.... ಮರೆತೇ ಹೋಗಿತ್ತು ನನಗೆ. ನಿನ್ನ ಕಣ್ಣು ನೋಡಿದರೆ ಅದರಲ್ಲಿ ತುಂಟ ನಗು...'ನಕ್ಷತ್ರದಿಂದ ನೀಲಿ ನೀಲಿ ಹೊಳೆಯುವ ಧೂಳು ಉದುರುತ್ತೆ, ಇಲ್ಲೇ ಮಲಗೋಣ' ಎಂದು ನನ್ನ ತೋಳ ಮೇಲೆ ತಲೆ ಇಟ್ಟು ಮಲಗಿದೆ. ತಕ್ಷಣ ಆವರಿಸಿಕೊಂಡ ನಿದ್ರೆ.
ಮಧ್ಯರತ್ರಿ ಸುಮ್ಮನೆ ಎಚ್ಚರವಾಯಿತು.. ಕತ್ತೆತ್ತಿ ನೋಡಿದರೆ ಜೇನಿನಲ್ಲಿ ಅದ್ದಿ ತೆಗೆದಂತಿದ್ದ ಚಂದ್ರ... ಅವನ ಬೆಳಕಿನಲ್ಲಿ ನಿನ್ನ ಹಾಲು ಬಿಳುಪಿನ ಬಣ್ಣಕ್ಕೆ ಬಂಗಾರದ ಮೆರಗು...ನಿನಗೆ ನೀಲಿ ನಕ್ಷತ್ರದ ಕನಸು...ನಾನು ನಿನ್ನೊಳಗೆ ಉಕ್ಕಿದೆ, ನೀನು ಸಣ್ಣಗೆ ನನಗೆ ಕೇಳುವಷ್ಟೇ ಹಿತವಾಗಿ ಚೀರುತ್ತಿದ್ದರೆ, ಚಂದ್ರ ನಕ್ಷತ್ರಗಳೂ ಹೊಟ್ಟೆ ಉರಿದುಕೊಳ್ಳುತ್ತಿದ್ದವು...
ಅವತ್ತು ಡವ್ ಸೋಪಿನಿಂದ ಸ್ನಾನ ಮಾಡಿದೆವಲ್ಲ ಆ ಸೋಪು ದಿನದಿನವೂ ಇಷ್ಟಿಷ್ಟೇ ಕರಗುತ್ತಿದೆ... ನೀನು ತರಿಸಿದ ಗ್ಯಾಸ್ ಸ್ಟೋವಿನಲ್ಲೆ ಅಮ್ಮ ಅಡುಗೆ ಮಾಡುತ್ತಾಳೆ, ನಿನಗಿಷ್ಟವಾದ ಬಿಳಿ-ನೀಲಿ ಬಣ್ಣದ ಭಾರವಾದ ಪರದೆಗಳು ಕಿಟಕಿಗಳಹಿಂದೆ ತಣ್ಣಗೆ ನಿಂತಿವೆ.. ನಿನಗೆ ಕಾಯುತ್ತಾ...
ಅಪ್ಪ ಅಮ್ಮ ಒಪ್ಪಿದ್ದಾರೆ...ನಿನ್ನ ಅಪ್ಪನನ್ನು ಒಪ್ಪಿಸಿ ಬಂದೇ ಈ ಪತ್ರ ಬರೆಯುತ್ತಿದ್ದೇನೆ...ನಿನ್ನ ವಿಲನ್ ಅಪ್ಪನೇ ಒಪ್ಪಿಕೊಂಡಾಗಿದೆ ಅಂದಮೇಲೆ ನೀನು ಜಂಬ ಮಾಡಿದರೆ ಅರ್ಥವಿಲ್ಲ...
ಟೆರೇಸಿಗೆ ಹೋಗಲು ಮನಸ್ಸೇ ಬರುವುದಿಲ್ಲ ನಕ್ಷತ್ರಗಳು ಹೊಳೆಯುವ ನೀಲಿ ಧೂಳನ್ನು ನಿನಗಲ್ಲದೆ ಬೇರೆ ಯಾರಿಗೂ ಕೊಡೋಲ್ಲವಂತೆ..ಡವ್ ಸೋಪ್ ಪೂರ್ತಿ ಕರಗುವುದರೊಳಗೆ ಬಂದುಬಿಡು...
.................................................ತುಂಬ ನಿನ್ನವನು,ನೀಲಿ ನಕ್ಷತ್ರ;-)
ಅಮ್ಮ ಅಡುಗೆ ಮನೆಯಲ್ಲಿ ಏನೋ ದಡ ಬಡ ಮಾಡುತ್ತಿದ್ದಾಳೆ.ಚಿಕ್ಕಪ್ಪ ಅಪ್ಪ ಸೇರಿ ಟಿ ವಿ, ಸೋಫ, ಟೆಬಲ್ಲು- ಕುರ್ಚಿ, ಮಂಚ ಎಲ್ಲವನ್ನೂ ತಂದು ಜೋಡಿಸಿಟ್ಟಿದ್ದಾರೆ..ನೀನು ಅವತ್ತು ಬಂದಾಗ ಖಾಲಿ ಇದ್ದ ಮನೆ ಈಗ ತುಂಬಿದೆ. ಹುಚ್ಚು ಅಪ್ಪನಿಗೆ, ಮನೆ ತುಂಬಬಹುದು........ಮನಸ್ಸು...????
ಈ ಮನೆ ಕೊಂಡು 'ಶಿಫ್ಟ್ ಮಾಡ್ತೀನಿ ನಾನು' ಅಂದಾಗ 'ನಿಂಗೊಬ್ನಿಗೇ ಕಷ್ಟ ಆಗುತ್ತೆ, ನಾ ಬರ್ತೀನಿ.' ಅಂದು ಮೊದಮೊದಲು ಮನೆಗೆ ಬಂದವಳು ನೀನು. ಖಾಲಿ ಮನೆ ಏನು ಕೊಂಡುಬಂದಿರಲಿಲ್ಲ.. ಬರೀ ನನ್ನ ಬಟ್ಟೆ, ಚಪ್ಪಲಿಗಳು, ಶೂಗಳು, ಹಾಗೂ ಲ್ಯಾಪ್ ಟಾಪ್. ಮನೆಗೆ ಬಂದವಳೇ ಒಂದಿಷ್ಟು ವಸ್ತುಗಳನ್ನ ಪಟ್ಟಿ ಮಾಡಿ 'ತೊಗೊಂಡು ಬಾ' ಎಂದು ನನ್ನ ಕೈಗೆ ಕೊಟ್ಟು, ನಾನು ಬರುವುದೊರೊಳಗೆ ಪಕ್ಕದ ಮನೆಯವರ ಸ್ನೇಹ ಮಾಡಿ, ಪೊರಕೆ ತಂದು, ಮನೆ ಗುಡಿಸಿ ನನ್ನ ಹಳೇ ಟೀ ಷರ್ಟಿನಲ್ಲಿ ನೆಲ ಒರೆಸುತ್ತಿದ್ದೆ! ಆಮೇಲೆ ನಾನು ನೀನು ಸೇರಿ ಸಾದ್ಯವಾದಷ್ಟು ಮನೆ ಸ್ವಚ್ಚ ಮಾಡಿ, ಒಟ್ಟಿಗೆ ಸ್ನಾನ-ಅಡುಗೆ-ಊಟ ಮಾಡಿ ಗಡಿಯಾರ ನೋಡಿದರೆ, ಗಡಿಯಾರದ ಮುಳ್ಳುಗಳು ಒಂಭತ್ತು ಘಂಟೆ ಎನ್ನುತ್ತಿದ್ದವು.
ಟೆರೇಸಿನ ಮೇಲೆ ಹೋದರೆ, ನಕ್ಷತ್ರಗಳು ಕೈಗೆ ಸಿಗುವಷ್ಟು ಹತ್ತಿರ! ಮಲಗೋಣವೆಂದೆ ನೀನು.. ಹಾಸಿಗೆ ಇಲ್ಲ.... ದಿಂಬಿಲ್ಲ.... ಮರೆತೇ ಹೋಗಿತ್ತು ನನಗೆ. ನಿನ್ನ ಕಣ್ಣು ನೋಡಿದರೆ ಅದರಲ್ಲಿ ತುಂಟ ನಗು...'ನಕ್ಷತ್ರದಿಂದ ನೀಲಿ ನೀಲಿ ಹೊಳೆಯುವ ಧೂಳು ಉದುರುತ್ತೆ, ಇಲ್ಲೇ ಮಲಗೋಣ' ಎಂದು ನನ್ನ ತೋಳ ಮೇಲೆ ತಲೆ ಇಟ್ಟು ಮಲಗಿದೆ. ತಕ್ಷಣ ಆವರಿಸಿಕೊಂಡ ನಿದ್ರೆ.
ಮಧ್ಯರತ್ರಿ ಸುಮ್ಮನೆ ಎಚ್ಚರವಾಯಿತು.. ಕತ್ತೆತ್ತಿ ನೋಡಿದರೆ ಜೇನಿನಲ್ಲಿ ಅದ್ದಿ ತೆಗೆದಂತಿದ್ದ ಚಂದ್ರ... ಅವನ ಬೆಳಕಿನಲ್ಲಿ ನಿನ್ನ ಹಾಲು ಬಿಳುಪಿನ ಬಣ್ಣಕ್ಕೆ ಬಂಗಾರದ ಮೆರಗು...ನಿನಗೆ ನೀಲಿ ನಕ್ಷತ್ರದ ಕನಸು...ನಾನು ನಿನ್ನೊಳಗೆ ಉಕ್ಕಿದೆ, ನೀನು ಸಣ್ಣಗೆ ನನಗೆ ಕೇಳುವಷ್ಟೇ ಹಿತವಾಗಿ ಚೀರುತ್ತಿದ್ದರೆ, ಚಂದ್ರ ನಕ್ಷತ್ರಗಳೂ ಹೊಟ್ಟೆ ಉರಿದುಕೊಳ್ಳುತ್ತಿದ್ದವು...
ಅವತ್ತು ಡವ್ ಸೋಪಿನಿಂದ ಸ್ನಾನ ಮಾಡಿದೆವಲ್ಲ ಆ ಸೋಪು ದಿನದಿನವೂ ಇಷ್ಟಿಷ್ಟೇ ಕರಗುತ್ತಿದೆ... ನೀನು ತರಿಸಿದ ಗ್ಯಾಸ್ ಸ್ಟೋವಿನಲ್ಲೆ ಅಮ್ಮ ಅಡುಗೆ ಮಾಡುತ್ತಾಳೆ, ನಿನಗಿಷ್ಟವಾದ ಬಿಳಿ-ನೀಲಿ ಬಣ್ಣದ ಭಾರವಾದ ಪರದೆಗಳು ಕಿಟಕಿಗಳಹಿಂದೆ ತಣ್ಣಗೆ ನಿಂತಿವೆ.. ನಿನಗೆ ಕಾಯುತ್ತಾ...
ಅಪ್ಪ ಅಮ್ಮ ಒಪ್ಪಿದ್ದಾರೆ...ನಿನ್ನ ಅಪ್ಪನನ್ನು ಒಪ್ಪಿಸಿ ಬಂದೇ ಈ ಪತ್ರ ಬರೆಯುತ್ತಿದ್ದೇನೆ...ನಿನ್ನ ವಿಲನ್ ಅಪ್ಪನೇ ಒಪ್ಪಿಕೊಂಡಾಗಿದೆ ಅಂದಮೇಲೆ ನೀನು ಜಂಬ ಮಾಡಿದರೆ ಅರ್ಥವಿಲ್ಲ...
ಟೆರೇಸಿಗೆ ಹೋಗಲು ಮನಸ್ಸೇ ಬರುವುದಿಲ್ಲ ನಕ್ಷತ್ರಗಳು ಹೊಳೆಯುವ ನೀಲಿ ಧೂಳನ್ನು ನಿನಗಲ್ಲದೆ ಬೇರೆ ಯಾರಿಗೂ ಕೊಡೋಲ್ಲವಂತೆ..ಡವ್ ಸೋಪ್ ಪೂರ್ತಿ ಕರಗುವುದರೊಳಗೆ ಬಂದುಬಿಡು...
.................................................ತುಂಬ ನಿನ್ನವನು,ನೀಲಿ ನಕ್ಷತ್ರ;-)
Wednesday, December 5, 2007
ಅಪ್ಪ ಕಾಣಿಸಿದ ಕತೆಗಳು- 1.ವೈದೇಚಿತ್ತಿ
ನಾನು ಸಣ್ಣವಳಾಗಿದ್ದಾಗಿಂದಾನೂ, ನನಗೆ ನೆನಪಿರೋವಾಗ್ಲಿಂದಾನೂ, ಕರೆಂಟು ಹೋದಾಗ ಪುಸ್ತಕಗಳನ್ನು ಮಡಚಿಟ್ಟು ಅಪ್ಪ ಅಮ್ಮನ ಜೊತೆಗೆ ಬಂದು ಕೂರ್ತಿದ್ವಿ(ನಾನು,ನನ್ನ ತಂಗಿ). ಆಗ ಅಪ್ಪ ತಮ್ಮ ನೆನಪಿನ ಬುಟ್ಟಿಯಿಂದ ಊರಿನ ಜನರ ಜೀವನದ ಘಟನೆಗಳನ್ನ, ಕತೆಗಳನ್ನ, ಒಂದೊಂದಾಗಿ ಹೆಕ್ಕಿ ಹೇಳೋರು. ಅಥವಾ ಈಸೋಪನಾ ನೀತಿ ಕತೆಗಳೋ, ಪಂಚತಂತ್ರದ ಕತೆಗಳೋ ನೀತಿಚಿಂತಾಮಣಿಯ ಕತೆಗಳನ್ನೋ ಹೇಳೋರು....ಇಲ್ಲವೇ ಭಗವದ್ ಗೀತೆ, ಶ್ಲೋಕಗಳು, ಮುಕುಂದ ಮಾಲೆ ಬಾಯಿಪಾಠ ಮಾಡಿಸೋರು...ನನ್ನ facinate ಮಾಡ್ತಿದಿದ್ದು ನಮ್ಮೂರಿನ ಜನರ ಕತೆಗಳು, ಅವರನ್ನ, ಅವರ ಸ್ವಭಾವಗಳನ್ನ ಅಪ್ಪ analise ಮಾಡ್ತಿದ್ದ ರೀತಿ. ರಥೋತ್ಸವಕ್ಕೋ, ದೀಪಾವಳಿಗೋ, ಗೋಕುಲಷ್ಟಮಿಗೋ, ಇಲ್ಲವೇ ನವರಾತ್ರಿಯ ಪಾರಾಯಣದ ಸಮಯದಲ್ಲೋ... ಊರಿಗೆ ಹೋದಾಗ ಆ ಜನರನ್ನೆಲ್ಲಾ ನೋಡಿ ಅವರಿಗೆ ಸಂಬಂಧಿಸಿದ ಕತೆಗಳನ್ನ ಜ್ನಾಪಿಸಿಕೊಂಡು ಖುಶಿ ಪಡ್ತಿನಿ...
ಈಗೊಂದು ಹೊಸ ಪ್ರಯೊಗ, ನಮ್ಮೂರಿನ ಜನರನ್ನ ಒಬ್ಬೂಬ್ಬರನ್ನೂ ನಾನು ನೋಡಿದ ಹಾಗೆ ನಿಮ್ಮ ಮುಂದೆ ಇಡ್ತೀನಿ. ಅವರಿಗೆ ರಿಲೆಟ್ ಆಗಿರೊ ಪಾಸ್ಟ್ ಸ್ಟೋರೀಸ್ ಇದ್ರೆ ಹೇಳ್ತಿನಿ. ಈ ಕತೆಗಳಲ್ಲಿ ಭೋದನೆ ಇಲ್ಲ, ಏನೋ ಸಂದೆಶ ಇರ್ಲೇಬೇಕು ಅಂತ ಹುಡುಕಬೇಡಿ. ಏನಾದ್ರು ಕಂಡ್ರೆ ಸಂತೋಷ. continous ಆಗಿ ಬರೀತಿನಿ ಅಂತ ಅಲ್ಲ, ಮದ್ಯೆ ಮದ್ಯೆ ಯಾವಾಗ್ಲಾದ್ರು ಬರಿತಿನಿ 'ಅಪ್ಪ ಕಾಣಿಸಿದ ಕತೆಗಳು' ಅಂತ ಕರ್ಯೋಕ್ಕೆ ಖುಶಿ ನಂಗೆ. ನಮ್ಮೂರಿನ ಜನರ ಕತೆ ಇಷ್ಟ ಆಗಬಹುದು ನಿಮಗೆ...
ವೈದೇಚಿತ್ತಿ
1
"ಈ ವೈದೇಹಿಗೆ ಇಷ್ಟು ವಯಸ್ಸಾದರೂ ಇಂಥ ಬುದ್ದಿ ಯಾಕೆ ಅಂತ? ಅವಳಿಗೇನು ಒಡವೆಯಾ? ಸೀರೆಯಾ? ಗೋಪಾಲ ಬಂದು ಪಾಪ ಗೊಳೋ ಅಂತ ಅತ್ತುಕಂಡ. ತಿಂಗಳಿಗೆ ಐನೂರು ರುಪಾಯಿ ಕೊಡ್ತಾಳಂತೆ ಕಣೋ ನಾವು ಕೆಲ್ಸದವರಿಗೂ ಅಷ್ಟು ಕಡಿಮೆ ಕೊಡೋಲ್ಲ. ಅದೇನು ಜಿಗ್ಗತನವೋ... ಮಗಂಗೆ ಕೊಟ್ರೆ ಏನಾದ್ರು ಕಳ್ಕತಾಳ? ಅಂಥದ್ರಲ್ಲಿ ಫೋನ್ ಬಿಲ್ಲೂ ನೀನೇ ಕಟ್ಟು ಅಂತಾಳಂತೆ. ಇನ್ನೇನ್ ಉಳಿಯುತ್ತೆ ಇವ್ನ ಕೈಯಲ್ಲಿ ಪಾಪ? ಆಕಡೀಗೆ ತೋಟ ತೋಟ ಅಂತ ಹಿಂದಿನಿಂದ್ಲೂ ಅಲ್ಕಂಡು ಪೌರೋಹಿತ್ಯಾನೂ ಕಲೀಲಿಲ್ಲ, ಓದ್ಲೂ ಇಲ್ಲ, ಈಕಡೀಗೆ ತೋಟದಲ್ಲಿ ಎಷ್ಟು ಗೈದ್ರೂ ಉಪ್ಯೋಗ್ವಿಲ್ಲ... ಸಾಲದ್ದಕ್ಕೆ ಮೂರುಮೂರು ಮಕ್ಕಳು ಬೇರೆ... ಊಟಕ್ ಕಷ್ಟವಿಲ್ಲ ಅನ್ನೋದ್ ಬಿಟ್ರೆ ಕೈಯಲ್ಲಿ ನಾಲ್ಕು ಕಾಸೂ ಆಡಂಗಿಲ್ಲ..... ನಿ ಏನೇ ಹೇಳು ಶ್ರೀನಿವಾಸ ಅವ್ಳಿಗೆ ತಲೆ ಕೆಟ್ಟಿರೋದಂತೂ ಸತ್ಯವೇಯ.” ಅಂತ ಅಜ್ಜಿ ಬಿಸಿ ಬಿಸಿ ಕಾವಲಿ ಮೇಲೆ ದೊಸೆ ಹಾಕ್ತಾ ಹೇಳ್ತಿದ್ರೆ, ಪುಟ್ಟಿ "ಅದೇ ಆ ಮುಂಬಾವಿ ಮನೆ ವೈದೇಚಿತ್ತಿನ?" ಅಂದ್ಲು ದೋಸೆ ನುಂಗುತ್ತಾ "ಹೂಂ...." ಅಂದ ಅಪ್ಪ "ಇನ್ನೂ ತುಂಬ ಚಿಕ್ಕವರು ನೀವು ದೊಡ್ಡವರ ವಿಷಯಾನೆಲ್ಲಾ ಮಾತಾಡ್ ಬಾರ್ದು" ಅಂದ್ರು.
2
ವೈದೇಚಿತ್ತಿ ಪೂರ್ತಿ ಹೆಸರು ವೈದೇಹಿ ಅಂತ ಅವರು ಈಗ ಇರೊದನ್ನ ನೋಡಿದ್ರೆ ಒಂದು ಕಾಲಕ್ಕೆ ನೋಡೋಕ್ಕೆ ಅಷ್ಟು ಲಕ್ಷಣ ಇಲ್ಲ್ದಿದ್ರೂ ತೆಳ್ಳಗೆ ಗೋಧಿಬಣ್ಣಕ್ಕೆ ಇದ್ದಿರಬಹುದು. ಈಗ ಮುಖದಲ್ಲಿ ಎಂಥದ್ರದ್ದೋ ಕಲೆಗಳು ಇವೆ. ಇನ್ನೂ ಸ್ವಲ್ಪ ದಪ್ಪ ಇದ್ದಿದ್ದ್ರೆ ಅವರ ವಯಸ್ಸಿಗೆ ಒಪ್ಪುತ್ತಿತ್ತು. ಬೋಳಿಸಿದ ತಲೇನ ಕೆಂಪು ಸೀರೆಯಲ್ಲಿ ಮುಚ್ಚಿಕೊಂಡಿರ್ತಾರೆ. ವೈದೇಚಿತ್ತಿ ಈಗ ಇರೋ ಮನೆ ಮುಂದೆ ಭಾವಿ ಇರೋದ್ರಿಂದ, ಅವರ ಮನೇನ ಮುಂಭಾವಿ ಮನೆ ಅಂತ ಕರೀತಾರೆ. ಆದ್ರೆ ಹಿಂದೆ ಅವ್ರು ನಮ್ಮ ತೊಟ್ಟಿ ಮನೇಲೇ ಇದ್ರಂತೆ. ಈ ವೈದೇಚಿತ್ತಿನ ನಾವೆಲ್ಲಾ ವೈದೇಚಿತ್ತಿ ಅಂತ ಯಾಕೆ ಕರೀತಿವಿ ಅಂತ ಇತಿಹಾಸ ಕೆದಕಿದಾಗ ತಿಳಿಯೋದು ಇಷ್ಟು...... ಹಿಂದೆ ಅಂದ್ರೆ ಈಗಿಂದ ಒಂದು ನಲವತ್ತು ಐವತ್ತು ವರ್ಷದ ಹಿಂದೆ ಈಗಿನ ನಮ್ಮ ಚತ್ರದಂತಹಾ ದೊಡ್ಡ ಮನೇಲಿ ಈಗಿನ ತರ ಬರೀ ಎರಡೇ ಸಂಸಾರಗಳಿರಲಿಲ್ಲವಂತೆ ಇನ್ನೂ ಎರೆಡು ಸಂಸಾರ ಇತ್ತಂತೆ. ವೈದೇಚಿತ್ತಿಯವರದೂ ಅದರಲ್ಲಿ ಒಂದು. ಈ ತೊಟ್ಟಿ ಮನೆಗೆ ವೈದೇಚಿತ್ತಿ ಮದುವೆ ಆಗಿ ಬಂದಾಗ ಆ ಮನೆಯ ಸೊಸೆಯಂದಿರಲ್ಲಿ ಅವರೇ ಚಿಕ್ಕವರಾದ್ದರಿಂದ ಹಾಗೂ ಆ ತೊಟ್ಟಿಯವರೆಲ್ಲಾ ಒಂದೇ ಗೋತ್ರದವರಾದ್ದರಿಂದ ವೈದೇಹಿ ಮನೆಯ ಮಕ್ಕಳಿಗೆ ವೈದೇಹಿಚಿತ್ತಿಯಾಗಿ ಕೊನೆಗೆ ವೈದೇಚಿತ್ತಿ ಆದ್ಲು.
ವೈದೇಚಿತ್ತಿಗೆ ಗಂಡ ಅನ್ನೋರು ಇದ್ದಿರಬಹುದು ಅಂತ ನನಗನ್ನಿಸಿದ್ದೇ ತೀರ ಇತ್ತೀಚೆಗೆ. ಅವರು ಆ ಕೆಂಪು ಮಡಿ ಬಟ್ಟೆಯಲ್ಲಿ ಹುಟ್ಟುಬಟ್ಟೆನೋ ಅನ್ನೋಷ್ಟು ಸಹಜವಾಗಿ ಕಾಣ್ತಿದ್ರು. ಆದ್ರೆ ಅವರಿಗೆ ಈಗ ಮಕ್ಕಳಿವೆ ಹಾಗೂ ಈಗ ಅವರು ವಿಧವೆ ಅನ್ನೋ ಎರೆಡು ಅಂಶಗಳಿಂದ (ಈ ಎರೆಡನೇ ಅಂಶದಿಂದ ಅವ್ರಿಗೇನು ಬೇಜಾರಾದಂಗೆ ಕಾಣ್ಸಲ್ಲ) ಅವರಿಗೆ ಗಂಡ ಇದ್ದಿದ್ದಂತೂ ನಿಶ್ಚಯ. ವೈದೇಚಿತ್ತಿ ಗಂಡನಿಗೆ ಆ ಊರಿನ ಎಲ್ಲರಂತೆ ಅಡಿಕೆ ತೋಟ ಇತ್ತು. ಸ್ವಲ್ಪ ಕಮ್ಮೀನೇ ಇತ್ತು ಅರ್ಧ ಎಕರೆ. ಜೊತೆಗೆ ಪೌರೋಹಿತ್ಯಾನೂ ಮಾಡ್ತಿದ್ರು. ಮೂರು ಜನ ಮಕ್ಕಳು ಎರೆಡು ಹೆಣ್ಣು ಒಂದು ಗಂಡು. ದೊಡ್ಡ ಹುಡುಗಿ ಶ್ಯಾಮಲಾನ ಆ ಕಾಲಕ್ಕೇ ಡೆಲ್ಲಿಲಿದ್ದ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ರು. "ಅವ್ನಿಗೆ ನಮ್ಮ ಕಮಲನ್ನ ಕೊಡಣ ಅಂತಿದ್ವಿ ಕಣೇ ನಿಮ್ಮ ತಾತ ಡೆಲ್ಲಿ ತುಂಬ ದೂರ ಕಷ್ಟ ಸುಖ ಅಂದ್ರೆ ನೋಡೋಕ್ಕಾಗಲ್ಲ ಬೇಡ ಅಂದ್ರು. ಅವ್ಳು ಹತ್ರದಲ್ಲೇ ಇದ್ದು ಸುಖ ಸುರ್ಕೊಂಡಿದ್ದು ಗೊತ್ತಿದ್ಯಲ್ಲ." ಅಂತ ಒಂದು ಸತಿ ನಿಟ್ಟುಸಿರಿಟ್ಟಿದ್ದರು ಅಜ್ಜಿ. ಎರಡನೇ ಮಗಳು ವಿಮಲನ್ನ ಹತ್ತಿರದ ಊರಿಗೇ ಕೊಟ್ಟಿದ್ದರು. ಆ ಆಂಟಿ ಎಷ್ಟು ಬಿಗಿಯಾದ ಬ್ಲೌಸ್ ಹಾಕ್ತಾರೆ ಅಂದ್ರೆ ಇನ್ನೇನು ಹರಿದೇ ಹೋಗುತ್ತೇನೋ ಅನ್ಸುತ್ತೆ... ಅವರನ್ನ ನೋಡಿದಾಗಲೆಲ್ಲಾ ನನಗೇ ಉಸಿರುಕಟ್ಟಿದಂಗೆ ತೋಳುಬಿಗಿದಹಾಗಾಗುತ್ತೆ. ಇನ್ನು ಉಳಿದವರು ಗೋಪಾಲ ಅವರಿಗೆ ಪಕ್ಕದ ಹಳ್ಳಿಯಿಂದ ಹೆಣ್ಣು ತಂದಿದಾರೆ ಆ ಆಂಟಿ ಮನೆ ಹೊರಗೆ ಕಾಲೇ ಹಾಕೋಲ್ಲ.
3
ವೈದೆಚಿತ್ತಿಗೆ ನಾನ್ಯಾರು ನನ್ನ ತಂಗಿ ಯಾರು ಅಂತ ಯಾವಾಗಲು ಗೊಂದಲವೇ ಅದೇನು ನಿಜವಾಗಲೂ ಗೊತ್ತಗಲ್ವೋ ಅಥ್ವಾ ಬೇಕ್ಬೇಕು ಅಂತ ಹಾಗೆ ಮಾಡ್ತಾರೋ ಗೊತ್ತಿಲ್ಲ. ನಾವು ನಾನು ನನ್ನ ತಂಗಿ ಪ್ರತಿ ಸಲ ಊರಿಗೆ ಹೋದಾಗಲೂ ನಮ್ಮಿಬ್ಬರಲ್ಲಿ ಅವರಿಗೆ ಯಾರು ಮೊದಲು ಸಿಕ್ಕಿದರೂ ಅವರು ಕೇಳೋದು ಒಂದೆ ರೀತಿಯ ಪ್ರಶ್ನೆಗಳು. ಉದಾಹರಣೆಗೆ ನಾನು ಸಿಕ್ಕಿದೆ ಅನ್ನಿ....
ವೈದೇಚಿತ್ತಿ: ನೀನು ಶ್ರೀನಿವಾಸನ ಮಗಳಲ್ಲವೇನೆ, ಯಾವಾಗ ಬಂದ್ರೆ? ನೀನು ಅಕ್ಕಾನೋ? ತಂಗಿಯೋ?
ನಾನು : ನಾನು ಅಕ್ಕ ತಂಗಿ ಒಳಗಡೆ ಇದಾಳೆ ನೀವು ಹೇಗಿದಿರ ವೈದೇಚಿತ್ತಿ?
ವೈದೇಚಿತ್ತಿ: ನಾನು ಚೆನ್ನಾಗಿದಿನಮ್ಮ..... ನಿನ್ನ ಅಮ್ಮ ಬ೦ದಿದಾಳೋ ? ಎಷ್ಟು ದಿನ ಇರ್ತಿರ?
ನಾನು : ಹೊ೦.... ಅಮ್ಮಾನು ಬ೦ದಿದಳೆ ರಥೋತ್ಸವ ಮುಗಿಸಿಕೊಂಡು ಹೊರ್ಡದು ಅಂತ.....
ವೈದೇಚಿತ್ತಿ: ಹಂಗಾದ್ರೆ ಇನ್ನು ನಾಲ್ಕೈದು ದಿನ ಇರ್ತಿರ ಅನ್ನಿ. (ದ್ರುಷ್ಟಿ ತೆಗೆಯುತ್ತಾ...) ಎಷ್ಟು ಚೆನ್ನಾಗಿದಿಯೇ ನನ್ನ ಕಂದ ಬೆಳ್ಳಿಗುಂಡು ಬೆಳ್ಳಿ ಗುಂಡು
ಈ ಬೆಳ್ಳಿ ಗುಂಡು ಅನ್ನೋದು ಒಂದು ಎಡವಟ್ಟು ಪದ. ನನ್ನ ಹಾಗೆ ಯಾರಾದರೂ ಕರೆದ್ರೆ ತುಂಬ ಗೊಂದಲ ಆಗುತ್ತೆ...ಯಾಕ್ ಗೊತ್ತ? ಅದರಲ್ಲಿ ಬೆಳ್ಳಿನೂ ಇದೆ ಗುಂಡೂ ಇದೆ, ಬೆಳ್ಳಗಿದಿಯಾ ಅಂತ ಹೊಗಳ್ತಾ ಇದಾರೋ ಅಥವಾ ಗುಂಡಗಿದಿಯಾ ಅಂತ ಆಡ್ಸ್ಕತಾ ಇದಾರೋ ಅಂತ ಗೊತ್ತಾಗದೇ ಸುಮ್ಮನೆ ಮಿಕ ಮಿಕ ಅಂತ ಹಾಗೆ ಕರೆದೋರನ್ನ ನೋಡ್ಕೊತಾ ನಿಂತ್ಕೊಬಿಡ್ತೀನಿ. ಇಂಥ ಎಡವಟ್ಟು ಪದಗಳಿಗೆ ಪ್ರತಿಕ್ರಯಿಸೋದಾದರೂ ಹೇಗೆ........
4
"ಗೋಪಾಲ ನೀನು ಶ್ಯಾಮಲನ ಕೈಲಿ ಹೇಳಿಸಿ ನೋಡು ವೈದೇಚಿತ್ತಿಗೆ ಶ್ಯಾಮಲ ಅಂದ್ರೆ ಸ್ವಲ್ಪ ಹೆಚ್ಚೇ ಪ್ರೀತಿ..." ಅಂತ ಅಪ್ಪ ಗೋಪಾಲ ಮಾಮಂಗೆ ಹೇಳ್ತಿದಿದ್ದು ಕೇಳಿಸ್ತು. ಪಕ್ಕದಲ್ಲಿದ್ದ ಚಿಕ್ಕಪ್ಪ "ಒಳಗಡೆ ಹೋಗಿ ಕಾಫಿ ಮಾಡ್ಸ್ಕಬಾಮ್ಮ" ಅಂದ್ರು. ಅಡುಗೇ ಮನೇಲಿ ಚಿಕ್ಕಮ್ಮ ಇದ್ರು "ಕಾಫಿ ಮಾಡ್ಬೇಕಂತೆ ಗೋಪಾಲ ಮಾಮ ಬಂದಿದಾರೆ ಅಂದೆ." " ಈ ಮನೇಲಿ ಒಂದು ಹಂಡೆಗಟ್ಲೆ ಕಾಫಿ ಮಾಡಿದ್ರೂ ಖಾಲಿಯಾಗೋಗುತ್ತೆ, ನನ್ ಜೀವನವೆಲ್ಲಾ ಕಾಫಿ ಮಾಡೋದ್ರಲ್ಲೇ ಕಳ್ದ್ಹೋಯ್ತು...." ಅಂತ ಚಿಕ್ಕಮ್ಮ ಗೊಣಗುತ್ತಾ ಕಾಫಿಗೆ ನೀರಿಟ್ಟಳು. ಕಾಫಿ ಮಾಡುವುದರ ಬಗ್ಗೆ ಅಮ್ಮ ಮತ್ತು ಚಿಕ್ಕಮ್ಮನಿಗೆ ಇರುವ ಅಸಮಾಧಾನದ ಪರಿಚಯವಿದ್ದ ನನಗೆ ಚಿಕ್ಕಮ್ಮನ ಮಾತುಗಳಿಗಿಂತ ತೊಟ್ಟಿಯಲ್ಲಿ ನಡೆಯುತ್ತಿರುವ ಮಾತುಗಳು ಮುಖ್ಯ ಅನ್ನಿಸಿ ಅಮ್ಮ ಆಗತಾನೆ ಒಗೆದು ತಂದು ಇಟ್ಟಿದ್ದ ಬಟ್ಟೆಗಳನ್ನು ಹಿಂಡಿ ಕೊಡಿಯ ಮೇಲೆ ಒಣಗಿಸುವ ನೆಪದಲ್ಲಿ ತೊಟ್ಟಿಗೆ ಬಂದು ಬಟ್ಟೆ ಹಿಂಡತೊಡಗಿದೆ.ನಾನು ಒಳಗೆ ಹೋಗಿ ಬರುವ ಹೊತ್ತಿಗೆ ಅಪ್ಪ ಮಾತು ಮುಗಿಸಿಯಾಗಿತ್ತು "ನಂಗು ಸಾಕಾಗ್ ಹೋಗಿದೆ ಶ್ರೀನಿವಾಸ ಎಲ್ಲರೂ ಅವಳಿಗೆ ಹೇಳಿದ್ದಾಯ್ತು ಶ್ಯಾಮಲಾನೂ ಹೇಳಿದ್ಲು, ಅವಳ ಮುಂದೆ ಹೂಂ ಹೂಂ.. ಅಂತಾಳೆ ಅವಳು ಮರೆಯಾದ ತಕ್ಷಣ ಅದೇ ರಾಗ ಅದೇ ತಾಳ. ಟವ್ನ್ ನಲ್ಲಿ ಯಾವುದಾದರೂ ಬೇಕರಿಗೆ ಹೋಗಿ ಸೇರ್ಕಳಣ, ಬೇಕರಿ ಇಡೋಕ್ಕಂತು ಭಾಗ್ಯವಿಲ್ಲ ತಿಂಗಳಿಗೆ ಎರೆಡು ಮೂರು ಸಾವ್ರನಾದ್ರೂ ಸಿಗುತ್ತೆ ಅನ್ಕಂಡ್ರೆ ಇಲ್ಲಿ ತೋಟ ನೋಡ್ಕಳೋರ್ಯಾರು? ಅಮ್ಮನ್ನ ಈ ಕೊನೇಗಾಲ್ದಲ್ಲಿ ಬಿಟ್ಟೊಗದ್ ಹ್ಯಾಗೆ? ಈಗ ಊಟಕ್ ಕಷ್ಟ್ವಿಲ್ಲ, ಆಮೇಲೆ ಅದಕ್ಕೂ ಕುತ್ತು ಬಂದ್ರೆ ಏನ್ ಮಾಡದು....?" ಅಷ್ಟು ಹೊತ್ತಿಗೆ ಕಾಫಿ ಬಂತು.. ಒಳಗಡೆ ಗೊಣಗುತ್ತಿದ್ದ ಚಿಕ್ಕಮ್ಮ ಅಷ್ಟೇ ವಿರುದ್ದವಾದ ಶಾಂತ ನಗುಮುಖದಿಂದ ಕಫಿ ತಂದು ಕೊಟ್ಟಳು. ಗೋಪಾಲಮಾಮನ ಮುಖ, ಗಂಟಲು ಕಾಫಿಯ ಹಿತದಿಂದ ತುಂಬಿಕೊಂಡಿತು. ಚಿಕ್ಕಮ್ಮ ಅಧ್ಭುತವಾಗಿ ಕಾಫಿ ಮಾಡ್ತಾಳೆ. ಚಿಕ್ಕಪ್ಪ ದಡಬಡಿಸಿ ಕಾಫಿ ಕುಡಿದು ತಮ್ಮ ಬುಲೆಟ್ಟಿನ ಗುಡು ಗುಡು ಶಭ್ದದೊಂದಿಗೆ ಅಂಗಡಿಗೆ ಹೋದರು.
ನಾನು ಹಿಂಡಿದ ಬಟ್ಟೆಯನ್ನ ಕಷ್ಟಪಟ್ಟು ಕೊಡಿಯಮೇಲೆ ಒಣಗಿಸುತ್ತಿದ್ದೆ ..."ಹೇಳ್ಕಳಕ್ಕೆ ನಾಚಿಕೆ ಯಾಗುತ್ತೆ ಶ್ರೀನಿವಾಸ, ಈಗೀಗ ಬ್ರಾಮ್ಹಣಾರ್ಥಕ್ಕೆ ಯಾರದ್ರು ಕರೀತಾರೇನೋ ಅಂತ ಕಾಯಂಗಾಗೋಗಿದೆ. ತಿಂಗಳಲ್ಲಿ ಒಂದು ನಾಲ್ಕೈದು ಬ್ರಾಮ್ಹಣಾರ್ಥ ಆದ್ರೆ ಕೈಯಲ್ಲಿ ಸ್ವಲ್ಪ ದುಡ್ಡಾಡುತ್ತೆ, ದುರಂತ ನೋಡು ಯಾರೂ ಸಿಗ್ದೆ ಈಗ ನಾನಂಥೋರ್ನೆಲ್ಲಾ ಬ್ರಾಮ್ಹಣಾರ್ಥಕ್ಕೆ ಕರೆಯೋಹಂಗಾಗೋಗಿದೆ. ನನಗೆ ಹೋಗೊಕ್ಕೆ ಎಷ್ಟು ಹಿಂಸೆ ಆಗುತ್ತೆ ಆದ್ರೆ ಹೋಗ್ದೆ ವಿದಿಯಿಲ್ಲ. ಹೆಚ್ಚು ಕಡಿಮೆ ಬ್ಯಾಂಕಿನಲ್ಲಿ ಹೆಚ್ಚು ಕಡಿಮೆ ಅಮ್ಮನ ಹೆಸರಿನಲ್ಲಿ ಮೂರು ಲಕ್ಷ ಇದೆ ಯಾಕ್ ಬೇಕು ಅವ್ಳಿಗೆ ನಂಗ್ ಬೇಡಪ್ಪ ಹೋಗ್ಲಿ ವಿಮ್ಲಂಗಾದ್ರೂ ಕೊಡ್ತಾಳ ಅವ್ಳೂ ಕಷ್ಟದಲ್ಲಿದ್ದಾಳೆ.... ಅಮ್ಮ ಸತ್ರೂ ಆ ಹಣನ ನಾ ಮುಟ್ಟೋಲ್ಲ...ಮೊದಲು ಅಮ್ಮ ಹೀಗಿರ್ಲಿಲ್ವೋ ಅಥವಾ ನಮಗೇ ಅಮ್ಮನ ಗುಣ ಗೊತ್ತಾಗಿದ್ದೇ ಅಪ್ಪ ಸತ್ತ ಮೇಲೆ ಅನ್ಸುತ್ತೆ. ಅಪ್ಪ ಇದ್ದಾಗ ಅಮ್ಮನ್ನ ಕಾರಣವಿಲ್ಲದೇ ಮಾತು ಮಾತಿಗೂ ಬೈದು ಹೀಯಾಳಿಸೋರು, ಅಮ್ಮನ ವ್ಯಕ್ತಿತ್ವ, ಅವಳು ಹೇಗೆ? ಅನ್ನೋದೇ ಗೊತ್ತಿರ್ಲಿಲ್ಲ. ಅಪ್ಪ ಸತ್ತ್ಮೇಲೇನೇ ಅಮ್ಮ ಸ್ವತಂತ್ರವಾಗಿದ್ದು, ಖುಶಿಯಾಗಿದ್ದು. ಅಪ್ಪಂಗೆ ಗಾಳಿ ಹಿಡ್ದು ಹೋದ್ರು ಅಂತಾರೆ ಅಪ್ಪಂಗೆ ಗಾಳಿ ಹಿಡ್ದಿದ್ದೋ, ಇವ್ಳಿಗೇ ಧನ ಪಿಚಾಚಿ ಹಿಡಿತೋ ಗೊತ್ತಿಲ್ಲ..."ಅನ್ನುತ್ತಿದ್ದ್ರು ಗೋಪಾಲ ಮಾಮ....
5
ಅಜ್ಜಿ ಜೊತೆ ಜಗುಲಿ ಮೇಲೆ ಕೂತ್ಕೊಂಡೋ ಅರಂಗಿನಲ್ಲಿ ಕೂತ್ಕೋಂಡೋ "ರಂಗಮಣಿ.... ವಿಶ್ಯ ಕೇಳಿದ್ಯ ಬಿ ಎ ಮೇಷ್ಟ್ರಿಗೆ ಈಗ ಕಿವಿ ಕೇಳಲ್ವಂತೆ....,ರಂಗಮಣೀ ಮೊನ್ನೆ ಆ ಹಾಲುಮಾರೋ ಕರಿಯನ್ ಮಗು ಸತ್ತೋಯ್ತಂತೆ..ಪಾಪ..." ಅಂತಾನೋ "ರಂಗಮಣಿ ನಮ್ಮ ಶ್ಯಾಮಲ ಹಿಂಗಂದ್ಲು, ನಮ್ಮ ಶ್ಯಾಮಲ ದೆಲ್ಲಿಯಿಂದ ಮಿಠಾಯಿ ಕಾಳ್ಸಿದಾಳೆ ತೊಗೋ... ಶ್ಯಾಮ್ಲನ್ನ ಮಕ್ಕ್ಳು ಕ್ಲಾಸ್ನಲ್ಲಿ ಫಸ್ಟ್ ಅಂತೆ, ಶ್ಯಾಮಲನ್ನ ಮೊದ್ಲನೇ ಮಗ ಗರುಡ ಗರುಡ(ಅಂದ್ರೇ ತುಂಬ ಚೆನ್ನಗಿದಾನೆ ಅಂತ)" ಅಂತ ಕೊರೆಯುತ್ತಾ ಕೂರುವ ವೈದೇಚಿತ್ತಿ ಹೀಗೆಲ್ಲಾ ಮಾಡ್ತಾರೆ ಅನ್ಸಲ್ಲ.. ಭೈರಪ್ಪನವರ ಸಾಕ್ಶಿಯಲ್ಲಿ ಬರೊ ಜಿಪುಣ ಮನುಷ್ಯನ ಥರಾನ ಇವರು? ಇವರು ಸತ್ತಾಗ ಗೋಪಲಮಾನೂ ಆ ಕಾದಂಬರಿಯಲ್ಲಿ ಬರೋ ರೀತಿಯಲ್ಲೇ ಮೂರು ಲಕ್ಷಾನ ಇವರ ಹೆಣದ ಜೊತೆ ಸುಡಬಹುದ..??? ಎಂದು ಏನೇನೋ ಅಸಂಭದ್ದವಾಗಿ ಯೋಚಿಸುತ್ತಾ ಜಗುಲಿಯ ಮೇಲೆ ಕೂತಿದ್ದೆ, ನನ್ನ ತಂಗಿಯೂ ಪಕ್ಕದಲ್ಲಿದ್ದಳು ಅದ್ಯಾವುದೋ ಮಾಯೆಯೆಲ್ಲಿ ಮನೆ ಬಾಗಿಲಿನ ಬಳಿ ಪ್ರತ್ಯಕ್ಷವಾದ ವೈದೇಚಿತ್ತಿ "ಶ್ರೀನಿವಾಸನ ಮಕ್ಕಳಲ್ವೇನ್ರೇ ಯಾವಾಗ ಬಂದ್ರಿ... ಇದರಲ್ಲಿ ಅಕ್ಕ ಯಾರು ತಂಗಿ ಯಾರು?" ಅಂದ್ರು....
ಈಗೊಂದು ಹೊಸ ಪ್ರಯೊಗ, ನಮ್ಮೂರಿನ ಜನರನ್ನ ಒಬ್ಬೂಬ್ಬರನ್ನೂ ನಾನು ನೋಡಿದ ಹಾಗೆ ನಿಮ್ಮ ಮುಂದೆ ಇಡ್ತೀನಿ. ಅವರಿಗೆ ರಿಲೆಟ್ ಆಗಿರೊ ಪಾಸ್ಟ್ ಸ್ಟೋರೀಸ್ ಇದ್ರೆ ಹೇಳ್ತಿನಿ. ಈ ಕತೆಗಳಲ್ಲಿ ಭೋದನೆ ಇಲ್ಲ, ಏನೋ ಸಂದೆಶ ಇರ್ಲೇಬೇಕು ಅಂತ ಹುಡುಕಬೇಡಿ. ಏನಾದ್ರು ಕಂಡ್ರೆ ಸಂತೋಷ. continous ಆಗಿ ಬರೀತಿನಿ ಅಂತ ಅಲ್ಲ, ಮದ್ಯೆ ಮದ್ಯೆ ಯಾವಾಗ್ಲಾದ್ರು ಬರಿತಿನಿ 'ಅಪ್ಪ ಕಾಣಿಸಿದ ಕತೆಗಳು' ಅಂತ ಕರ್ಯೋಕ್ಕೆ ಖುಶಿ ನಂಗೆ. ನಮ್ಮೂರಿನ ಜನರ ಕತೆ ಇಷ್ಟ ಆಗಬಹುದು ನಿಮಗೆ...
ವೈದೇಚಿತ್ತಿ
1
"ಈ ವೈದೇಹಿಗೆ ಇಷ್ಟು ವಯಸ್ಸಾದರೂ ಇಂಥ ಬುದ್ದಿ ಯಾಕೆ ಅಂತ? ಅವಳಿಗೇನು ಒಡವೆಯಾ? ಸೀರೆಯಾ? ಗೋಪಾಲ ಬಂದು ಪಾಪ ಗೊಳೋ ಅಂತ ಅತ್ತುಕಂಡ. ತಿಂಗಳಿಗೆ ಐನೂರು ರುಪಾಯಿ ಕೊಡ್ತಾಳಂತೆ ಕಣೋ ನಾವು ಕೆಲ್ಸದವರಿಗೂ ಅಷ್ಟು ಕಡಿಮೆ ಕೊಡೋಲ್ಲ. ಅದೇನು ಜಿಗ್ಗತನವೋ... ಮಗಂಗೆ ಕೊಟ್ರೆ ಏನಾದ್ರು ಕಳ್ಕತಾಳ? ಅಂಥದ್ರಲ್ಲಿ ಫೋನ್ ಬಿಲ್ಲೂ ನೀನೇ ಕಟ್ಟು ಅಂತಾಳಂತೆ. ಇನ್ನೇನ್ ಉಳಿಯುತ್ತೆ ಇವ್ನ ಕೈಯಲ್ಲಿ ಪಾಪ? ಆಕಡೀಗೆ ತೋಟ ತೋಟ ಅಂತ ಹಿಂದಿನಿಂದ್ಲೂ ಅಲ್ಕಂಡು ಪೌರೋಹಿತ್ಯಾನೂ ಕಲೀಲಿಲ್ಲ, ಓದ್ಲೂ ಇಲ್ಲ, ಈಕಡೀಗೆ ತೋಟದಲ್ಲಿ ಎಷ್ಟು ಗೈದ್ರೂ ಉಪ್ಯೋಗ್ವಿಲ್ಲ... ಸಾಲದ್ದಕ್ಕೆ ಮೂರುಮೂರು ಮಕ್ಕಳು ಬೇರೆ... ಊಟಕ್ ಕಷ್ಟವಿಲ್ಲ ಅನ್ನೋದ್ ಬಿಟ್ರೆ ಕೈಯಲ್ಲಿ ನಾಲ್ಕು ಕಾಸೂ ಆಡಂಗಿಲ್ಲ..... ನಿ ಏನೇ ಹೇಳು ಶ್ರೀನಿವಾಸ ಅವ್ಳಿಗೆ ತಲೆ ಕೆಟ್ಟಿರೋದಂತೂ ಸತ್ಯವೇಯ.” ಅಂತ ಅಜ್ಜಿ ಬಿಸಿ ಬಿಸಿ ಕಾವಲಿ ಮೇಲೆ ದೊಸೆ ಹಾಕ್ತಾ ಹೇಳ್ತಿದ್ರೆ, ಪುಟ್ಟಿ "ಅದೇ ಆ ಮುಂಬಾವಿ ಮನೆ ವೈದೇಚಿತ್ತಿನ?" ಅಂದ್ಲು ದೋಸೆ ನುಂಗುತ್ತಾ "ಹೂಂ...." ಅಂದ ಅಪ್ಪ "ಇನ್ನೂ ತುಂಬ ಚಿಕ್ಕವರು ನೀವು ದೊಡ್ಡವರ ವಿಷಯಾನೆಲ್ಲಾ ಮಾತಾಡ್ ಬಾರ್ದು" ಅಂದ್ರು.
2
ವೈದೇಚಿತ್ತಿ ಪೂರ್ತಿ ಹೆಸರು ವೈದೇಹಿ ಅಂತ ಅವರು ಈಗ ಇರೊದನ್ನ ನೋಡಿದ್ರೆ ಒಂದು ಕಾಲಕ್ಕೆ ನೋಡೋಕ್ಕೆ ಅಷ್ಟು ಲಕ್ಷಣ ಇಲ್ಲ್ದಿದ್ರೂ ತೆಳ್ಳಗೆ ಗೋಧಿಬಣ್ಣಕ್ಕೆ ಇದ್ದಿರಬಹುದು. ಈಗ ಮುಖದಲ್ಲಿ ಎಂಥದ್ರದ್ದೋ ಕಲೆಗಳು ಇವೆ. ಇನ್ನೂ ಸ್ವಲ್ಪ ದಪ್ಪ ಇದ್ದಿದ್ದ್ರೆ ಅವರ ವಯಸ್ಸಿಗೆ ಒಪ್ಪುತ್ತಿತ್ತು. ಬೋಳಿಸಿದ ತಲೇನ ಕೆಂಪು ಸೀರೆಯಲ್ಲಿ ಮುಚ್ಚಿಕೊಂಡಿರ್ತಾರೆ. ವೈದೇಚಿತ್ತಿ ಈಗ ಇರೋ ಮನೆ ಮುಂದೆ ಭಾವಿ ಇರೋದ್ರಿಂದ, ಅವರ ಮನೇನ ಮುಂಭಾವಿ ಮನೆ ಅಂತ ಕರೀತಾರೆ. ಆದ್ರೆ ಹಿಂದೆ ಅವ್ರು ನಮ್ಮ ತೊಟ್ಟಿ ಮನೇಲೇ ಇದ್ರಂತೆ. ಈ ವೈದೇಚಿತ್ತಿನ ನಾವೆಲ್ಲಾ ವೈದೇಚಿತ್ತಿ ಅಂತ ಯಾಕೆ ಕರೀತಿವಿ ಅಂತ ಇತಿಹಾಸ ಕೆದಕಿದಾಗ ತಿಳಿಯೋದು ಇಷ್ಟು...... ಹಿಂದೆ ಅಂದ್ರೆ ಈಗಿಂದ ಒಂದು ನಲವತ್ತು ಐವತ್ತು ವರ್ಷದ ಹಿಂದೆ ಈಗಿನ ನಮ್ಮ ಚತ್ರದಂತಹಾ ದೊಡ್ಡ ಮನೇಲಿ ಈಗಿನ ತರ ಬರೀ ಎರಡೇ ಸಂಸಾರಗಳಿರಲಿಲ್ಲವಂತೆ ಇನ್ನೂ ಎರೆಡು ಸಂಸಾರ ಇತ್ತಂತೆ. ವೈದೇಚಿತ್ತಿಯವರದೂ ಅದರಲ್ಲಿ ಒಂದು. ಈ ತೊಟ್ಟಿ ಮನೆಗೆ ವೈದೇಚಿತ್ತಿ ಮದುವೆ ಆಗಿ ಬಂದಾಗ ಆ ಮನೆಯ ಸೊಸೆಯಂದಿರಲ್ಲಿ ಅವರೇ ಚಿಕ್ಕವರಾದ್ದರಿಂದ ಹಾಗೂ ಆ ತೊಟ್ಟಿಯವರೆಲ್ಲಾ ಒಂದೇ ಗೋತ್ರದವರಾದ್ದರಿಂದ ವೈದೇಹಿ ಮನೆಯ ಮಕ್ಕಳಿಗೆ ವೈದೇಹಿಚಿತ್ತಿಯಾಗಿ ಕೊನೆಗೆ ವೈದೇಚಿತ್ತಿ ಆದ್ಲು.
ವೈದೇಚಿತ್ತಿಗೆ ಗಂಡ ಅನ್ನೋರು ಇದ್ದಿರಬಹುದು ಅಂತ ನನಗನ್ನಿಸಿದ್ದೇ ತೀರ ಇತ್ತೀಚೆಗೆ. ಅವರು ಆ ಕೆಂಪು ಮಡಿ ಬಟ್ಟೆಯಲ್ಲಿ ಹುಟ್ಟುಬಟ್ಟೆನೋ ಅನ್ನೋಷ್ಟು ಸಹಜವಾಗಿ ಕಾಣ್ತಿದ್ರು. ಆದ್ರೆ ಅವರಿಗೆ ಈಗ ಮಕ್ಕಳಿವೆ ಹಾಗೂ ಈಗ ಅವರು ವಿಧವೆ ಅನ್ನೋ ಎರೆಡು ಅಂಶಗಳಿಂದ (ಈ ಎರೆಡನೇ ಅಂಶದಿಂದ ಅವ್ರಿಗೇನು ಬೇಜಾರಾದಂಗೆ ಕಾಣ್ಸಲ್ಲ) ಅವರಿಗೆ ಗಂಡ ಇದ್ದಿದ್ದಂತೂ ನಿಶ್ಚಯ. ವೈದೇಚಿತ್ತಿ ಗಂಡನಿಗೆ ಆ ಊರಿನ ಎಲ್ಲರಂತೆ ಅಡಿಕೆ ತೋಟ ಇತ್ತು. ಸ್ವಲ್ಪ ಕಮ್ಮೀನೇ ಇತ್ತು ಅರ್ಧ ಎಕರೆ. ಜೊತೆಗೆ ಪೌರೋಹಿತ್ಯಾನೂ ಮಾಡ್ತಿದ್ರು. ಮೂರು ಜನ ಮಕ್ಕಳು ಎರೆಡು ಹೆಣ್ಣು ಒಂದು ಗಂಡು. ದೊಡ್ಡ ಹುಡುಗಿ ಶ್ಯಾಮಲಾನ ಆ ಕಾಲಕ್ಕೇ ಡೆಲ್ಲಿಲಿದ್ದ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ರು. "ಅವ್ನಿಗೆ ನಮ್ಮ ಕಮಲನ್ನ ಕೊಡಣ ಅಂತಿದ್ವಿ ಕಣೇ ನಿಮ್ಮ ತಾತ ಡೆಲ್ಲಿ ತುಂಬ ದೂರ ಕಷ್ಟ ಸುಖ ಅಂದ್ರೆ ನೋಡೋಕ್ಕಾಗಲ್ಲ ಬೇಡ ಅಂದ್ರು. ಅವ್ಳು ಹತ್ರದಲ್ಲೇ ಇದ್ದು ಸುಖ ಸುರ್ಕೊಂಡಿದ್ದು ಗೊತ್ತಿದ್ಯಲ್ಲ." ಅಂತ ಒಂದು ಸತಿ ನಿಟ್ಟುಸಿರಿಟ್ಟಿದ್ದರು ಅಜ್ಜಿ. ಎರಡನೇ ಮಗಳು ವಿಮಲನ್ನ ಹತ್ತಿರದ ಊರಿಗೇ ಕೊಟ್ಟಿದ್ದರು. ಆ ಆಂಟಿ ಎಷ್ಟು ಬಿಗಿಯಾದ ಬ್ಲೌಸ್ ಹಾಕ್ತಾರೆ ಅಂದ್ರೆ ಇನ್ನೇನು ಹರಿದೇ ಹೋಗುತ್ತೇನೋ ಅನ್ಸುತ್ತೆ... ಅವರನ್ನ ನೋಡಿದಾಗಲೆಲ್ಲಾ ನನಗೇ ಉಸಿರುಕಟ್ಟಿದಂಗೆ ತೋಳುಬಿಗಿದಹಾಗಾಗುತ್ತೆ. ಇನ್ನು ಉಳಿದವರು ಗೋಪಾಲ ಅವರಿಗೆ ಪಕ್ಕದ ಹಳ್ಳಿಯಿಂದ ಹೆಣ್ಣು ತಂದಿದಾರೆ ಆ ಆಂಟಿ ಮನೆ ಹೊರಗೆ ಕಾಲೇ ಹಾಕೋಲ್ಲ.
3
ವೈದೆಚಿತ್ತಿಗೆ ನಾನ್ಯಾರು ನನ್ನ ತಂಗಿ ಯಾರು ಅಂತ ಯಾವಾಗಲು ಗೊಂದಲವೇ ಅದೇನು ನಿಜವಾಗಲೂ ಗೊತ್ತಗಲ್ವೋ ಅಥ್ವಾ ಬೇಕ್ಬೇಕು ಅಂತ ಹಾಗೆ ಮಾಡ್ತಾರೋ ಗೊತ್ತಿಲ್ಲ. ನಾವು ನಾನು ನನ್ನ ತಂಗಿ ಪ್ರತಿ ಸಲ ಊರಿಗೆ ಹೋದಾಗಲೂ ನಮ್ಮಿಬ್ಬರಲ್ಲಿ ಅವರಿಗೆ ಯಾರು ಮೊದಲು ಸಿಕ್ಕಿದರೂ ಅವರು ಕೇಳೋದು ಒಂದೆ ರೀತಿಯ ಪ್ರಶ್ನೆಗಳು. ಉದಾಹರಣೆಗೆ ನಾನು ಸಿಕ್ಕಿದೆ ಅನ್ನಿ....
ವೈದೇಚಿತ್ತಿ: ನೀನು ಶ್ರೀನಿವಾಸನ ಮಗಳಲ್ಲವೇನೆ, ಯಾವಾಗ ಬಂದ್ರೆ? ನೀನು ಅಕ್ಕಾನೋ? ತಂಗಿಯೋ?
ನಾನು : ನಾನು ಅಕ್ಕ ತಂಗಿ ಒಳಗಡೆ ಇದಾಳೆ ನೀವು ಹೇಗಿದಿರ ವೈದೇಚಿತ್ತಿ?
ವೈದೇಚಿತ್ತಿ: ನಾನು ಚೆನ್ನಾಗಿದಿನಮ್ಮ..... ನಿನ್ನ ಅಮ್ಮ ಬ೦ದಿದಾಳೋ ? ಎಷ್ಟು ದಿನ ಇರ್ತಿರ?
ನಾನು : ಹೊ೦.... ಅಮ್ಮಾನು ಬ೦ದಿದಳೆ ರಥೋತ್ಸವ ಮುಗಿಸಿಕೊಂಡು ಹೊರ್ಡದು ಅಂತ.....
ವೈದೇಚಿತ್ತಿ: ಹಂಗಾದ್ರೆ ಇನ್ನು ನಾಲ್ಕೈದು ದಿನ ಇರ್ತಿರ ಅನ್ನಿ. (ದ್ರುಷ್ಟಿ ತೆಗೆಯುತ್ತಾ...) ಎಷ್ಟು ಚೆನ್ನಾಗಿದಿಯೇ ನನ್ನ ಕಂದ ಬೆಳ್ಳಿಗುಂಡು ಬೆಳ್ಳಿ ಗುಂಡು
ಈ ಬೆಳ್ಳಿ ಗುಂಡು ಅನ್ನೋದು ಒಂದು ಎಡವಟ್ಟು ಪದ. ನನ್ನ ಹಾಗೆ ಯಾರಾದರೂ ಕರೆದ್ರೆ ತುಂಬ ಗೊಂದಲ ಆಗುತ್ತೆ...ಯಾಕ್ ಗೊತ್ತ? ಅದರಲ್ಲಿ ಬೆಳ್ಳಿನೂ ಇದೆ ಗುಂಡೂ ಇದೆ, ಬೆಳ್ಳಗಿದಿಯಾ ಅಂತ ಹೊಗಳ್ತಾ ಇದಾರೋ ಅಥವಾ ಗುಂಡಗಿದಿಯಾ ಅಂತ ಆಡ್ಸ್ಕತಾ ಇದಾರೋ ಅಂತ ಗೊತ್ತಾಗದೇ ಸುಮ್ಮನೆ ಮಿಕ ಮಿಕ ಅಂತ ಹಾಗೆ ಕರೆದೋರನ್ನ ನೋಡ್ಕೊತಾ ನಿಂತ್ಕೊಬಿಡ್ತೀನಿ. ಇಂಥ ಎಡವಟ್ಟು ಪದಗಳಿಗೆ ಪ್ರತಿಕ್ರಯಿಸೋದಾದರೂ ಹೇಗೆ........
4
"ಗೋಪಾಲ ನೀನು ಶ್ಯಾಮಲನ ಕೈಲಿ ಹೇಳಿಸಿ ನೋಡು ವೈದೇಚಿತ್ತಿಗೆ ಶ್ಯಾಮಲ ಅಂದ್ರೆ ಸ್ವಲ್ಪ ಹೆಚ್ಚೇ ಪ್ರೀತಿ..." ಅಂತ ಅಪ್ಪ ಗೋಪಾಲ ಮಾಮಂಗೆ ಹೇಳ್ತಿದಿದ್ದು ಕೇಳಿಸ್ತು. ಪಕ್ಕದಲ್ಲಿದ್ದ ಚಿಕ್ಕಪ್ಪ "ಒಳಗಡೆ ಹೋಗಿ ಕಾಫಿ ಮಾಡ್ಸ್ಕಬಾಮ್ಮ" ಅಂದ್ರು. ಅಡುಗೇ ಮನೇಲಿ ಚಿಕ್ಕಮ್ಮ ಇದ್ರು "ಕಾಫಿ ಮಾಡ್ಬೇಕಂತೆ ಗೋಪಾಲ ಮಾಮ ಬಂದಿದಾರೆ ಅಂದೆ." " ಈ ಮನೇಲಿ ಒಂದು ಹಂಡೆಗಟ್ಲೆ ಕಾಫಿ ಮಾಡಿದ್ರೂ ಖಾಲಿಯಾಗೋಗುತ್ತೆ, ನನ್ ಜೀವನವೆಲ್ಲಾ ಕಾಫಿ ಮಾಡೋದ್ರಲ್ಲೇ ಕಳ್ದ್ಹೋಯ್ತು...." ಅಂತ ಚಿಕ್ಕಮ್ಮ ಗೊಣಗುತ್ತಾ ಕಾಫಿಗೆ ನೀರಿಟ್ಟಳು. ಕಾಫಿ ಮಾಡುವುದರ ಬಗ್ಗೆ ಅಮ್ಮ ಮತ್ತು ಚಿಕ್ಕಮ್ಮನಿಗೆ ಇರುವ ಅಸಮಾಧಾನದ ಪರಿಚಯವಿದ್ದ ನನಗೆ ಚಿಕ್ಕಮ್ಮನ ಮಾತುಗಳಿಗಿಂತ ತೊಟ್ಟಿಯಲ್ಲಿ ನಡೆಯುತ್ತಿರುವ ಮಾತುಗಳು ಮುಖ್ಯ ಅನ್ನಿಸಿ ಅಮ್ಮ ಆಗತಾನೆ ಒಗೆದು ತಂದು ಇಟ್ಟಿದ್ದ ಬಟ್ಟೆಗಳನ್ನು ಹಿಂಡಿ ಕೊಡಿಯ ಮೇಲೆ ಒಣಗಿಸುವ ನೆಪದಲ್ಲಿ ತೊಟ್ಟಿಗೆ ಬಂದು ಬಟ್ಟೆ ಹಿಂಡತೊಡಗಿದೆ.ನಾನು ಒಳಗೆ ಹೋಗಿ ಬರುವ ಹೊತ್ತಿಗೆ ಅಪ್ಪ ಮಾತು ಮುಗಿಸಿಯಾಗಿತ್ತು "ನಂಗು ಸಾಕಾಗ್ ಹೋಗಿದೆ ಶ್ರೀನಿವಾಸ ಎಲ್ಲರೂ ಅವಳಿಗೆ ಹೇಳಿದ್ದಾಯ್ತು ಶ್ಯಾಮಲಾನೂ ಹೇಳಿದ್ಲು, ಅವಳ ಮುಂದೆ ಹೂಂ ಹೂಂ.. ಅಂತಾಳೆ ಅವಳು ಮರೆಯಾದ ತಕ್ಷಣ ಅದೇ ರಾಗ ಅದೇ ತಾಳ. ಟವ್ನ್ ನಲ್ಲಿ ಯಾವುದಾದರೂ ಬೇಕರಿಗೆ ಹೋಗಿ ಸೇರ್ಕಳಣ, ಬೇಕರಿ ಇಡೋಕ್ಕಂತು ಭಾಗ್ಯವಿಲ್ಲ ತಿಂಗಳಿಗೆ ಎರೆಡು ಮೂರು ಸಾವ್ರನಾದ್ರೂ ಸಿಗುತ್ತೆ ಅನ್ಕಂಡ್ರೆ ಇಲ್ಲಿ ತೋಟ ನೋಡ್ಕಳೋರ್ಯಾರು? ಅಮ್ಮನ್ನ ಈ ಕೊನೇಗಾಲ್ದಲ್ಲಿ ಬಿಟ್ಟೊಗದ್ ಹ್ಯಾಗೆ? ಈಗ ಊಟಕ್ ಕಷ್ಟ್ವಿಲ್ಲ, ಆಮೇಲೆ ಅದಕ್ಕೂ ಕುತ್ತು ಬಂದ್ರೆ ಏನ್ ಮಾಡದು....?" ಅಷ್ಟು ಹೊತ್ತಿಗೆ ಕಾಫಿ ಬಂತು.. ಒಳಗಡೆ ಗೊಣಗುತ್ತಿದ್ದ ಚಿಕ್ಕಮ್ಮ ಅಷ್ಟೇ ವಿರುದ್ದವಾದ ಶಾಂತ ನಗುಮುಖದಿಂದ ಕಫಿ ತಂದು ಕೊಟ್ಟಳು. ಗೋಪಾಲಮಾಮನ ಮುಖ, ಗಂಟಲು ಕಾಫಿಯ ಹಿತದಿಂದ ತುಂಬಿಕೊಂಡಿತು. ಚಿಕ್ಕಮ್ಮ ಅಧ್ಭುತವಾಗಿ ಕಾಫಿ ಮಾಡ್ತಾಳೆ. ಚಿಕ್ಕಪ್ಪ ದಡಬಡಿಸಿ ಕಾಫಿ ಕುಡಿದು ತಮ್ಮ ಬುಲೆಟ್ಟಿನ ಗುಡು ಗುಡು ಶಭ್ದದೊಂದಿಗೆ ಅಂಗಡಿಗೆ ಹೋದರು.
ನಾನು ಹಿಂಡಿದ ಬಟ್ಟೆಯನ್ನ ಕಷ್ಟಪಟ್ಟು ಕೊಡಿಯಮೇಲೆ ಒಣಗಿಸುತ್ತಿದ್ದೆ ..."ಹೇಳ್ಕಳಕ್ಕೆ ನಾಚಿಕೆ ಯಾಗುತ್ತೆ ಶ್ರೀನಿವಾಸ, ಈಗೀಗ ಬ್ರಾಮ್ಹಣಾರ್ಥಕ್ಕೆ ಯಾರದ್ರು ಕರೀತಾರೇನೋ ಅಂತ ಕಾಯಂಗಾಗೋಗಿದೆ. ತಿಂಗಳಲ್ಲಿ ಒಂದು ನಾಲ್ಕೈದು ಬ್ರಾಮ್ಹಣಾರ್ಥ ಆದ್ರೆ ಕೈಯಲ್ಲಿ ಸ್ವಲ್ಪ ದುಡ್ಡಾಡುತ್ತೆ, ದುರಂತ ನೋಡು ಯಾರೂ ಸಿಗ್ದೆ ಈಗ ನಾನಂಥೋರ್ನೆಲ್ಲಾ ಬ್ರಾಮ್ಹಣಾರ್ಥಕ್ಕೆ ಕರೆಯೋಹಂಗಾಗೋಗಿದೆ. ನನಗೆ ಹೋಗೊಕ್ಕೆ ಎಷ್ಟು ಹಿಂಸೆ ಆಗುತ್ತೆ ಆದ್ರೆ ಹೋಗ್ದೆ ವಿದಿಯಿಲ್ಲ. ಹೆಚ್ಚು ಕಡಿಮೆ ಬ್ಯಾಂಕಿನಲ್ಲಿ ಹೆಚ್ಚು ಕಡಿಮೆ ಅಮ್ಮನ ಹೆಸರಿನಲ್ಲಿ ಮೂರು ಲಕ್ಷ ಇದೆ ಯಾಕ್ ಬೇಕು ಅವ್ಳಿಗೆ ನಂಗ್ ಬೇಡಪ್ಪ ಹೋಗ್ಲಿ ವಿಮ್ಲಂಗಾದ್ರೂ ಕೊಡ್ತಾಳ ಅವ್ಳೂ ಕಷ್ಟದಲ್ಲಿದ್ದಾಳೆ.... ಅಮ್ಮ ಸತ್ರೂ ಆ ಹಣನ ನಾ ಮುಟ್ಟೋಲ್ಲ...ಮೊದಲು ಅಮ್ಮ ಹೀಗಿರ್ಲಿಲ್ವೋ ಅಥವಾ ನಮಗೇ ಅಮ್ಮನ ಗುಣ ಗೊತ್ತಾಗಿದ್ದೇ ಅಪ್ಪ ಸತ್ತ ಮೇಲೆ ಅನ್ಸುತ್ತೆ. ಅಪ್ಪ ಇದ್ದಾಗ ಅಮ್ಮನ್ನ ಕಾರಣವಿಲ್ಲದೇ ಮಾತು ಮಾತಿಗೂ ಬೈದು ಹೀಯಾಳಿಸೋರು, ಅಮ್ಮನ ವ್ಯಕ್ತಿತ್ವ, ಅವಳು ಹೇಗೆ? ಅನ್ನೋದೇ ಗೊತ್ತಿರ್ಲಿಲ್ಲ. ಅಪ್ಪ ಸತ್ತ್ಮೇಲೇನೇ ಅಮ್ಮ ಸ್ವತಂತ್ರವಾಗಿದ್ದು, ಖುಶಿಯಾಗಿದ್ದು. ಅಪ್ಪಂಗೆ ಗಾಳಿ ಹಿಡ್ದು ಹೋದ್ರು ಅಂತಾರೆ ಅಪ್ಪಂಗೆ ಗಾಳಿ ಹಿಡ್ದಿದ್ದೋ, ಇವ್ಳಿಗೇ ಧನ ಪಿಚಾಚಿ ಹಿಡಿತೋ ಗೊತ್ತಿಲ್ಲ..."ಅನ್ನುತ್ತಿದ್ದ್ರು ಗೋಪಾಲ ಮಾಮ....
5
ಅಜ್ಜಿ ಜೊತೆ ಜಗುಲಿ ಮೇಲೆ ಕೂತ್ಕೊಂಡೋ ಅರಂಗಿನಲ್ಲಿ ಕೂತ್ಕೋಂಡೋ "ರಂಗಮಣಿ.... ವಿಶ್ಯ ಕೇಳಿದ್ಯ ಬಿ ಎ ಮೇಷ್ಟ್ರಿಗೆ ಈಗ ಕಿವಿ ಕೇಳಲ್ವಂತೆ....,ರಂಗಮಣೀ ಮೊನ್ನೆ ಆ ಹಾಲುಮಾರೋ ಕರಿಯನ್ ಮಗು ಸತ್ತೋಯ್ತಂತೆ..ಪಾಪ..." ಅಂತಾನೋ "ರಂಗಮಣಿ ನಮ್ಮ ಶ್ಯಾಮಲ ಹಿಂಗಂದ್ಲು, ನಮ್ಮ ಶ್ಯಾಮಲ ದೆಲ್ಲಿಯಿಂದ ಮಿಠಾಯಿ ಕಾಳ್ಸಿದಾಳೆ ತೊಗೋ... ಶ್ಯಾಮ್ಲನ್ನ ಮಕ್ಕ್ಳು ಕ್ಲಾಸ್ನಲ್ಲಿ ಫಸ್ಟ್ ಅಂತೆ, ಶ್ಯಾಮಲನ್ನ ಮೊದ್ಲನೇ ಮಗ ಗರುಡ ಗರುಡ(ಅಂದ್ರೇ ತುಂಬ ಚೆನ್ನಗಿದಾನೆ ಅಂತ)" ಅಂತ ಕೊರೆಯುತ್ತಾ ಕೂರುವ ವೈದೇಚಿತ್ತಿ ಹೀಗೆಲ್ಲಾ ಮಾಡ್ತಾರೆ ಅನ್ಸಲ್ಲ.. ಭೈರಪ್ಪನವರ ಸಾಕ್ಶಿಯಲ್ಲಿ ಬರೊ ಜಿಪುಣ ಮನುಷ್ಯನ ಥರಾನ ಇವರು? ಇವರು ಸತ್ತಾಗ ಗೋಪಲಮಾನೂ ಆ ಕಾದಂಬರಿಯಲ್ಲಿ ಬರೋ ರೀತಿಯಲ್ಲೇ ಮೂರು ಲಕ್ಷಾನ ಇವರ ಹೆಣದ ಜೊತೆ ಸುಡಬಹುದ..??? ಎಂದು ಏನೇನೋ ಅಸಂಭದ್ದವಾಗಿ ಯೋಚಿಸುತ್ತಾ ಜಗುಲಿಯ ಮೇಲೆ ಕೂತಿದ್ದೆ, ನನ್ನ ತಂಗಿಯೂ ಪಕ್ಕದಲ್ಲಿದ್ದಳು ಅದ್ಯಾವುದೋ ಮಾಯೆಯೆಲ್ಲಿ ಮನೆ ಬಾಗಿಲಿನ ಬಳಿ ಪ್ರತ್ಯಕ್ಷವಾದ ವೈದೇಚಿತ್ತಿ "ಶ್ರೀನಿವಾಸನ ಮಕ್ಕಳಲ್ವೇನ್ರೇ ಯಾವಾಗ ಬಂದ್ರಿ... ಇದರಲ್ಲಿ ಅಕ್ಕ ಯಾರು ತಂಗಿ ಯಾರು?" ಅಂದ್ರು....
Friday, November 2, 2007
ಗೋಡೆ
1
ನನ್ನ ಬಿಟ್ಟು ಹೋಗ್ತೀಯ ಮೈತ್ರಿ? ನನ್ಗೆ ಭಯ ಆಗ್ತಿದೆ. ನಾನೇನ್ ತಪ್ಪು ಮಾಡಿದೀನಿ? ನೀನು ಹೇಳಿದ ಹಾಗೆ ಕೇಳ್ತೀನಿ, ನೀ ಹೇಳಿದ್ದರ ವಿರುದ್ದ ಏನಾದರೂ ಮಾಡಿದೀನ ಇಲ್ಲಿವರೆಗೂ? ದಯವಿಟ್ಟು ಬಿಟ್ಟು ಹೊಗಬೇಡ ಮೈತ್ರಿ. 'ನಾವು ಒಬ್ಬರಿಗೊಬ್ಬರು ಜೊತೆಯಾಗಿರ್ತೀವಿ ಕಷ್ಟ ಆಗ್ಲಿ, ಸುಖ ಆಗ್ಲಿ.' ಅಂತ ದೇವರ ಮುಂದೆ ಪ್ರಮಾಣ ಮಾಡಿದೀವಿ. ನಂಗೆ ಭಯ ಆಗ್ತಿದೆ, ನನ್ನ ಬಿಟ್ಟು ಹೋಗಬೇಡ... ಅಂತ ಪಕ್ಕದಲ್ಲಿ ಮಲಗಿದ್ದ ನನ್ನ ಗಂಡ ಒಂದೇ ಸಮನೆ ಬಡಬಡಿಸತೊಡಗಿದಾಗ ವ್ರಶಾಂಕ್ ಇವನ ಹತ್ತಿರ ಮಾತಾಡಿದಾನೆ ಅಂತ ಗೊತ್ತಾಯ್ತು..ಉತ್ತರ ಕೊಡೋಕ್ಕೂ ಹಿಂಸೆ ಆಗಿ ಎದ್ದು ಹೊಗಿ ವೆರೆಂಡಾದ ಈಸಿ ಕುರ್ಚಿ ಮೆಲೆ ಕೂತೆ.
ವರೆಂಡಾದ ಕಿಟಕಿಯಿಂದ ಕಾಣುತ್ತಿದ್ದ ಮನೆಯ ಮುಂದಿನ ನಲ್ಲಿಕಾಯಿ ಮರದ ರುಚಿ ಇಲ್ಲದ ಚಿಕ್ಕ ಚಿಕ್ಕ ಕಾಯಿಗಳ ಬಗ್ಗೆ ಏನೂ ಅನ್ನಿಸಲಿಲ್ಲ. ತನ್ನ ಗಂಡನ ಅತೀ ಒಳ್ಳೆಯತನದ, ಪ್ರತಿಯೊಂದಕ್ಕೂ 'ನೀ ಹೇಳಿದ ಹಾಗೆ' ಅನ್ನುವ, ನನ್ನ ಮುಂದೆ ತಾನು ಬುದ್ದಿವಂತ ಅಂತ ತೋರಿಸಿಕೊಳ್ಳಲು ಹೋಗಿ ಪೆಚ್ಚಾಗುವ, ತನ್ನ ಬಸುರಿ ಮಾಡಿದ್ದನ್ನೇ ದೊಡ್ಡ ಸಾಧನೆ ಅನ್ನುವಂತೆ ಆಡಿದ್ದ ಅವನ ಬಗ್ಗೆ ಅಸಹ್ಯ ಆಗುವುದೂ ನಿಂತು ಹೊಗಿತ್ತು. ಎನೂ ಅನ್ನಿಸುವುದಿಲ್ಲ ಅವನ ಬಗ್ಗೆ. ಯಾರ ವ್ಯಕ್ತಿತ್ವವೂ 'ಇಷ್ಟು' ಎಂದು ಅಳೆದು ಮುಗಿಸಿಬಿಡುವಂತೆ ಇರಬಾರದು ಗಟ್ಟಿಯಾಗಬೇಕು- ದೊಡ್ಡದಾಗಬೇಕು- ಅಗಲವಾಗಬೇಕು -ವಿಸ್ತಾರವಾಗಬೇಕು. ಇಲ್ಲವೇ ಚಿಕ್ಕದಾಗಬೇಕು- ಪುಟ್ಟದಾಗಬೇಕು- ಜೊಳ್ಳಾಗಬೇಕು. ಇರ್ಬಾರ್ದು ಹೀಗೆ, ಏನೂ ಅನ್ನಿಸದ ನಲ್ಲೀಕಾಯಿ ಮರದಂತೆ ಅನ್ನಿಸಿತು ಹೀಗೆ ಅನ್ನಿಸಿದ್ದು ಮೊದಲ ಸಲವೇನಲ್ಲವಲ್ಲ ಅಂದುಕೊಂಡಳು.
ಹುಡುಗರಿಗೆ ವಿಷಯಗಳು ಅರ್ಥವಾಗುವುದು ಎಲ್ಲಾ ಬಾಗಿಲು ಮುಚ್ಚಿ ಹೋಗಿದೆ, ಇನ್ನು ಬಿಡಿಸಿಕೊಂಡು ಹೋಗಲು ದಾರಿ ಇಲ್ಲ ಅನ್ನುವಾಗಲ? ಬಾಗಿಲು ತೆಗೆದಿದ್ದರೂ ನೆಡೆದುಕೊಂಡು ಹೋಗಲಾರೆ ಎನ್ನುವಷ್ಟು ನಿಷಕ್ತರಾಗಿ ತೋರುವವರು, ಎಲ್ಲಾ ಬಾಗಿಲು ಮುಚ್ಚಿದಮೇಲೆ ಗೋಡೆ ಒಡೆಯಲೂ ಹೆದರುವುದಿಲ್ಲ.
ನನ್ನ ಒಂದು ವರ್ಷದ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು, 'ಇದು ನನ್ನ ಮಗು ಅಂತಾನೆ ನೋಡ್ಕೊತೀನಿ ದಯವಿಟ್ಟು ನೀ ನನ್ನ ಜೊತೆ ಬಾ' ಅಂದ.ನನ್ನ ಗಂಡ ಬದುಕಿದ್ದಾನೆ ಮತ್ತು ನನಗೂ ಅವನಿಗೂ ಡೈವೋರ್ಸ್ ಆಗೋ ಯಾವ ಛಾನ್ಸು ಇಲ್ಲ ಅಂತ ಹೇಳಿ ಜೋರಾಗಿ ನಕ್ಕಿದ್ದೆ.ಅವ್ನು 'ನಾನು ಜೊಕ್ ಮಾಡ್ತಿಲ್ಲ ಹುಡುಗಿ, ಅರ್ಥ ಮಾಡ್ಕೊ ನನ್ನ' ಅಂದ. ಆವಾಗ ನೀ ನನ್ನ ಅರ್ಥಮಾಡ್ಕೊಬಹುದಿತ್ತು ನಮ್ಮ ಸಂಭಂದದ ಬಗ್ಗೆ, ಅದರ ಸಾರ್ಥಕತೆ ಬಗ್ಗೆ ನಿಶ್ಚಿತತೆ ಇತ್ತು. ನೀನು ಅದನ್ನ ಅರ್ಥ ಮಾಡ್ಕೊಳಲಿಲ್ಲ. ಯಾರಿಗೋ ಪ್ರಾಮಿಸ್ ಮಾಡ್ಬಿಟ್ಟಿದ್ದೆ. ಪಾಪ... ನಿಂಗೆ ಆವಾಗ ಅರ್ಥ ಆಗ್ಲಿಲ್ಲ ,ನಿನ್ನ ತಪ್ಪೇನಿಲ್ಲ ಬಿಡು ಅಂದು ನಕ್ಕೆ. 'ನನ್ನ ಚುಚ್ಚ ಬೇಡ ಕಣೆ ನಂಗೆ ಅರ್ಥ ಆಗಿದೆ, ನಿನ್ನ ಬಿಟ್ಟು ಇರೊಕ್ಕಾಗಲ್ಲ ನಂಗೆ ಅಂತ. ನಾನು ನಿನ್ನ ಗಂಡನ್ನೇ ಕೇಳ್ತಿನಿ, ನನ್ನ ಹುಡುಗಿನ ನಂಗೆ ಕೊಡು ಅಂತ, ನೀ ಬೇಡ ಅನ್ನಬೇಡ' ಅಂದ. ಕೇಳು ಅಂದೆ.
2
'ವ್ರಶಾಂಕ್, ಲಾವಣ್ಯ ಅನ್ನೋ ಹುಡುಗೀನ ಪ್ರೀತಿಸ್ತಿದಾನೆ ಕಣೆ' ಅಂತ ಆದಿ ಹೇಳ್ದಾಗ ಒಂದು ದೊಡ್ಡ ನಿಟ್ಟುಸಿರು ಹೊರಟಿತ್ತು.ಲಾವಣ್ಯ ಹೆಸರು ಚೆನಾಗಿದೆ ಅಂದುಕೊಂಡಳು. ಎರಡು ತಿಂಗಳು ಬಿಟ್ಟು ವ್ರಶಾಂಕೇ ಫೋನ್ ಮಾಡಿ, ಮೈತ್ರಿ... ಅಂದಾಗ ಆಶ್ಚರ್ಯ ಆಗಿತ್ತು. ಮನೆಗೆ ಬಾ ಅಂದಳು, ಬಂದ. ಅಪ್ಪ ಅಮ್ಮ ಹಳ್ಳಿಗೆ ಹೋಗಿದ್ದರು ಅಲ್ಲಿಯ ದೇವಸ್ತಾನದಲ್ಲಿ ಎನೋ ಪೂಜೆ ಮಾಡಿಸಲು, ಆದ್ರೆ ಅಜ್ಜಿ ಮಾತ್ರ ಇದ್ದಳು ಮನೆಯಲ್ಲಿ, ಆಗಾಗ ಕೆಮ್ಮುತ್ತಾ.
ಏನೇನೋ ಮಾತಾಡಿದೆವು ಸ್ನೇಹಿತರ ವಿಷಯ,ಅವನ ಕೆಲಸದ ವಿಷಯ, ಅವಳ ಕೆಲಸದ ವಿಷಯ, ಲಾವಣ್ಯ ಹೇಗಿದಾಳೆ ಕೇಳಿದಳು 'ಅದು ಮಗು ಬಿಡು' ಅಂದ. ಇರಬಹುದು ಅನ್ನಿಸಿತು ಅವಳಿಗೆ. ಅಮ್ಮ ಬೆಳಗ್ಗೆ ಮಾಡಿಹೋಗಿದ್ದ ಉಪ್ಪಿಟ್ಟನ್ನೇ ಹಾಕಿಕೊಟ್ಟಳು, ಬಟ್ಟಲಲ್ಲಿ ಬಿಳಿ ಮೊಸರು. ನಿನಗೆ ಕೆನೆ ಮೊಸರು ಅಂದ್ರೆ ಈಗಲೂ ಆಗೋಲ್ಲವ? ಅಂದ. ಪರವಾಗಿಲ್ಲ ಹಳೇದೆಲ್ಲ ಇನ್ನು ನೆನಪಿದೆಯಲ್ಲ ಅಂದು ನಕ್ಕಳು. ಹತ್ತಿರ ಬಾರೆ ಅಂದ, ಹೋಗಿ ಪಕ್ಕದಲ್ಲಿ ಕೂತಳು. ಕಾಲೇಜಿನಲ್ಲಿ ನೀ ನನ್ನ ಪ್ರೀತಿಸ್ತಿದ್ದೆ ಅಲ್ವ? ಅಂದ.ಇಷ್ಟು ಹೊತ್ತು ಕೇಳಿಸಿದರು ಕೇಳಿಸದ ಹಾಗೆ ಇದ್ದ ಅಜ್ಜಿಯ ಕೆಮ್ಮು ಕೇಳಿಸತೊಡಗಿತ್ತು. ನೀನೂ ನನ್ನ ಪ್ರೀತಿಸುತ್ತಿದ್ಡೆ ವ್ರಶಾಂಕ್ ಅಂದಳು. ನಿನ್ನ ಅಜ್ಜಿಗೆ ತುಂಬ ಕೆಮ್ಮು ಅಲ್ವ? ಅಂದ, ಮುಗುಳ್ನಕ್ಕಳು. ಇನ್ನು ಎನೇನೊ ಮಾತಾಡಿದರು ಹೊರಡೋ ಮುಂಚೆ ಅಜ್ಜಿ..ನಿಮ್ಮ ಆರೋಗ್ಯ ನೋಡ್ಕೊಳಿ ಅಂದ. ದೂರ ಹೋದ ಮೇಲೆ ಲಾವಣ್ಯಳ ಫೋಟೊ ಮೇಲ್ ಮಾಡ್ತೀನಿ ಅಂತ ಕೂಗ್ದ.
ಸರಿಯಾಗಿ ಮೊಳಕೆಯೇ ಒಡೆಯದ್ದಿದ್ದ ಸಂಭಂದ, ಅಂದಿನಿಂದ ಜೀವ ಪಡೆಯಲು ಕಾತರಿಸುತ್ತಿತ್ತು, ಹಸಿರಾಗಲು ಶುರುವಾಗಿತ್ತು, ರಸ ಒಸರಲು ಪ್ರಾರಂಭಿಸಿತ್ತು.ಅದೇ ಸಮಯಕ್ಕೆ ಸರಿಯಾಗಿ ಅವಳಿಗೆ ಗಂಡು ನೋಡಲು ಶುರು ಮಾಡಿದ್ದರು ಪ್ರತಿಯೊಂದು ಹುಡುಗನನ್ನೂ ಬೇಡ ಬೇಡ ಎಂದು ನಿರಾಕರಿಸುತ್ತಿದ್ದಳು. ಏಕೆ ಅಂತ ಅವಳಿಗೇ ಗೊತ್ತಿರಲಿಲ್ಲ. ಅವಳ ಅಮ್ಮ ಅಳಲು ಶುರು ಮಾಡಿದ್ದರು, ಹಿಂಸೆ ಆಗುತಿತ್ತು ಮನೆಯಲ್ಲಿ. ಇವತ್ತು ನಿರ್ಧಾರಕ್ಕೆ ಬಂದೇ ಬಿಡಬೇಕು ಅಂತ ವ್ರಶಾಂಕ್ ಬಳಿ ಹೋಗಿ 'ನನ್ನ ಮದುವೆ ಆಗು ವ್ರಶಾಂಕ್' ಅಂದಿದ್ದಳು ನಾನೇನೋ ತಯಾರಿದ್ದೀನಿ ಆದ್ರೆ ಲಾವಣ್ಯಾಗೆ ಪ್ರಾಮಿಸ್ ಮಾಡಿಬಿಟ್ಟಿದೀನಲ್ಲ, ಪ್ರಾಮಿಸ್ ಮುರಿಯೋದು ತಪ್ಪಲ್ಲವ? ಅಂದಿದ್ದ. ತನ್ನ ಬಳಿ ಇರೋವಾಗ, ತನ್ನ ಸೇರೋವಾಗ, ಸುಖಿಸುವಾಗ, ಆಣೆ- ಪ್ರಮಾಣ, ನಂಬಿಕೆ, ಮನಸ್ಸು- ಮನಸ್ಸಾಕ್ಷಿ, ಎಲ್ಲವನ್ನೂ ಬೀದಿಗೆ ಎಸೆದಂತೆ ಆಡುತ್ತಿದ್ದವನಿಗೆ ಆಣೆ ಪ್ರಮಾಣದ ಜ್ನಾಪಕ ಬಂದ್ದಿದ್ದು ನೋಡಿ ಹೇಡಿ ಅನ್ನಿಸಿ 'ಸರಿ ನೀನು ನಿನ್ನ ಆಣೆ ಉಳಿಸಿಕೋ ಅವಳನ್ನೇ ಮದುವೆ ಆಗು.' ಅಂದಿದ್ದಳು. ಇದಾದ ಎರಡೇ ತಿಂಗಳಲ್ಲಿ ಮೈತ್ರಿಯ ಮದುವೆ ಆಗಿಹೋಗಿತ್ತು.
3
ಛೇ.. ನಾವು ಮತ್ತೆ ಸಿಗಲೇಬಾರದಿತ್ತು ಅವತ್ತು ಫೋನ್ನಲ್ಲಿ ಮಾತಾಡೋವಾಗ ನಾನು ಕೇರಳಕ್ಕೆ ಹೋಗ್ತಿದೀನಿ ಒಂದು ವಾರ ಅಂದೆ. ಲಾವಣ್ಯ ಬರ್ತಿದಾಳ ಅಂತ ಕೇಳಿದಳು, ಇಲ್ಲ ಅಂದೆ. ನಾ ಬರ್ತೀನಿ ವ್ರಶಾಂಕ್ ಅಂದಳು. ಆಶರ್ಯ ಆಯ್ತು ನಿಜವಾಗ್ಲು ಮೈತ್ರಿ!!! ಅಂದೆ. 'ನನಗು ತಿರುಗಬೇಕು ಅಂತ ಮನಸ್ಸಾಗಿದೆ, ಒಂದೇ ಕಡೆ ಇದ್ದು ಬೊರು. ಕೆಲಸಕ್ಕು ಒಂದುವಾರ ರಜೆ ಹಾಕಿಬಿಡ್ತೀನಿ, ಇವರೂ ಫಾರಿನ್ ಟೂರ್ನಲ್ಲಿದಾರೆ, ಮಗೂನು ಕರ್ಕೊಂಡು ಬರ್ತೀನಿ. ನಿನ್ನ ಕೆಲಸಕ್ಕೆ ತೊಂದರೆ ಮಾಡೋಲ್ಲ ಅಂದಿದ್ದಳು.
ಒಂದು ವಾರ ಪೂರ್ತಿ ಜೊತೆಲಿ ಕಳೆದೆನಲ್ಲ ಆವಾಗಲೇ ಗೊತ್ತಾಗಿದ್ದು ಅವಳಿಗೂ ಇವಳಿಗೂ ಎಷ್ಟು ವ್ಯತ್ಯಾಸ ಎಂದು. ಮೊದಮೊದಲು ಇನೊಸೆಂಟ್ ಅನ್ನಿಸುತ್ತಿದ್ದ ಲಾವಣ್ಯ, ಈಗ ನಾಟಕ ಮಾಡ್ತಾಳೆ ಅನ್ನಿಸುತಿತ್ತು. ಅವಳ ಜೊತೆ ಇರೋವಾಗಲೆಲ್ಲಾ ಉಸಿರುಕಟ್ಟುತ್ತಿರುವ ಭಾವನೆ. ಚಿಕ್ಕ ಚಿಕ್ಕ ವಿಷಯಗಳನ್ನೂ ದೊಡ್ಡದು ಮಾಡುವ, ನಾನು ಬೇರೆ ಹುಡುಗಿಯರನ್ನು ನೋಡಿದರೆ ಸಾಕು ಉರಿದು ಬೀಳುವ, ನನ್ನ ಬೇಕು ಬೇಡಗಳನ್ನು ಅರ್ಥ ಮಾಡಿಕೊಳ್ಳದ, ಸಂದರ್ಭಗಳಿಗೆ ಸರಿಯಾಗಿ ಸ್ಪಂದಿಸದ, ಅತ್ಯಂತ ಹಠಮಾರಿ-ಪೊಸೆಸ್ಸಿವ್ ಹುಡುಗಿ ಅವಳು. ಪಕ್ಕದಲ್ಲೇ ಕುಳಿತುಕೊಂಡು ನಾನು ಹುಡುಗಿಯರ ಜೊತೆ ಫ್ಲರ್ಟ್ ಮಾಡುವುದನ್ನು ಎಂಜಾಯ್ ಮಾಡುತ್ತಾ, ನನ್ನ ಚುಡಾಯಿಸುತ್ತಾ, ಹೆಚ್ಚು ಸ್ಪೇಸ್ ಕೊಡುವ, ಬೇಕಾದಲ್ಲಿ ಮಾತಾಗುವ-ಬೇಡವಾದಲ್ಲಿ ಮೌನವಾಗುವ, ಬರೀ ಪ್ರೀತಿ ಪ್ರೇಮದ ಮಾತಡಿ ಬೋರ್ ಮಾಡದೆ, ಏನೇ ವಿಷಯ ಎತ್ತಿಕೊಂಡರೂ ಸಮರ್ಥವಾಗಿ ವಾದ ಮಾಡುವ, ಆದರೆ ಜಗಳ ಆಡದ ಅಷ್ಟೇ ಪ್ರೀತಿಸುವ ಹುಡುಗಿ ಮೈತ್ರಿ.
ಹೌದು ನಾನಾಗ ತಪ್ಪೇ ಮಾಡಿರಬಹುದು. ಅವಳನ್ನ ಅರ್ಥ ಮಾಡಿಕೊಂಡಿದ್ದು ಬಹಳ ನಿಧಾನ ಇರಬಹುದು, ಆದ್ರೆ ಅವಳನ್ನ ತುಂಬಾ ಪ್ರೀತಿಸುತ್ತೇನೆ. ಅವಳ ಗಂಡ ಅವಳನ್ನ ನೋಡಿಕೊಳ್ಳೋದಕ್ಕಿಂತ ಚೆನ್ನಾಗಿ ನೋಡಿಕೊತೆನೆ ನಾನು. ಲಾವಣ್ಯಾಗೆ ಮೊನ್ನೇನೆ ಹೇಳಿಬಂದೆನಲ್ಲ ನನಗೂ ನಿನಗೂ ಆಗಿಬರೋಲ್ಲ, ನಮ್ಮಿಬ್ಬರ ಸ್ವಭಾವಗಳು ಬೇರೆ ಬೇರೆ, ಜೊತೇಗಿರೋದು ಕಷ್ಟ ಆಗುತ್ತೆ ಅಂತ. ಇದನ್ನ ಎಷ್ಟು ಹೊತ್ತು ಅವಳಿಗೆ ವಿವರಿಸಿದೆ ಆದ್ರೆ ಅವಳು ಮೊನ್ನೇನೂ ಅದೇ ಥರ ಆಡಿದಳು, ಅತ್ತಳು, ಬಾಯಿಗೆ ಬಂದ ಹಾಗೆ ಬೈದಳು, ಹೊಡೆದಳು, ನಾನು ಎದ್ದು ಬಂದೆ. ಆದ್ರೆ ಇನ್ನು ಮುಂದೆ ಎಲ್ಲಾ ಚೆನ್ನಾಗಿರುತ್ತೆ ನಾನು-ನನ್ನ ಮೈತ್ರಿ-ಅವಳ ಮಗು, ಅಲ್ಲ ನಮ್ಮ ಮಗು ಆ ಮಗುನ ನನ್ನ ಮಗು ಥರನೇ ನೋಡಿಕೊಳ್ತೀನಿ. ಅವಳ ಗಂಡನಿಗೂ ಹೇಳಿಯಾಯಿತು, ಆ ಪ್ರಾಣಿ ನನ್ನ ಹೆಂಡತಿ ಹತ್ತಿರ ಮಾತಾಡ್ತೀನಿ ಅಂತ ಹೇಳಿದಾನೆ.'ಈಗ ಮನೆಗೆ ಬಾ' ಅಂತ ಮೈತ್ರಿ ಫೋನ್ ಮಾಡಿದ್ದಳಲ್ಲ, 'ಮಾತಾಡಬೇಕು' ಅಂತ. ನನಗೆ ಗೊತ್ತು ಮೈತ್ರಿ ನನ್ನ ಜೊತೆಗೆ ಬಂದೇ ಬರ್ತಾಳೆ, ನನ್ನ ತುಂಬ ಪ್ರೀತಿಸುತ್ತಾಳೆ ಅವಳು, ಅಂದುಕೊಂಡು ಕಾರಿನ ಕೀ ತೆಗೆದುಕೊಂಡು ಹೊರಟ.
4
ತನ್ನ ದುಃಖ ದುಮ್ಮಾನವನ್ನೆಲ್ಲಾ ಬಸಿದು ಹಾಕುವ ಹವಣಿಕೆ ಇರಬೇಕು, ರಾತ್ರಿಯೆಲ್ಲಾ ಆಕಾಶವು ಬಿಕ್ಕಳಿಸಿ ಅಳುತ್ತಿತ್ತು. ಏಕೋ ನನಗರಿವಿಲ್ಲದೆಯೇ ನನ್ನ ಕೆನ್ನೆಯ ಮೇಲೂ ಇಳಿದ ನೀರು, ಕಾರಣ ತಿಳಿಯದು. ಸುಮ್ಮನೆ ಕಲ್ಪಿಸಿಕೊಂಡ ಆತಂಕಗಳು ನನ್ನ ಕಾಡುತ್ತಿದ್ದರೆ ನನ್ನ ಕಲ್ಪನೆಗಳ ಬಗ್ಗೆ ನನಗೇ ಭಯ ಮೂಡಿ, ಟೀವಿ ನೋಡಲು ಬೇಸರವಾಗಿ, ಓದಲು ತಂದ ಪುಸ್ತಕದಲ್ಲಿ ಮನಸ್ಸು ಇಳಿಯದೆ, ಏನೂ ಮಾಡಲು ಹೊಳಿಯದೆ, ಆ ರಾತ್ರಿಯಲ್ಲಿ ಮನೆ ಒರೆಸತೊಡಗಿದೆ.
ಯಾವಾಗ ಮಲಗಿದೆನೋ!! ಬೆಳಗ್ಗೆ ಎದ್ದು ರಂಗೋಲಿ ಹಾಕುತ್ತಿರುವಾಗ, ರಾತ್ರಿಯೆಲ್ಲಾ ಅತ್ತಿದ್ದರಿಂದಲೋ ಏನೋ ಎನ್ನುವಂತೆ ಕಣ್ಣು ಕೆಂಪಗಾಗಿರುವ ಆಕಾಶ, ದುಃಖ ಹೊರಹಾಕಿದ ಸುಖದ ಜೊತೆ. ಸುಮ್ಮನೆ ಅಚ್ಚರಿಯಿಂದ ನೋಡಿದೆ, ರಂಗೋಲಿ ಹಾಕುವುದನ್ನೂ ಮರೆತು- ಹಕ್ಕಿಯೊಂದು ತನ್ನ ಮೇಲಿದ್ದ ಮಳೆ ನೀರನ್ನು ಕೊಡಗಿಕೊಳ್ಳುತ್ತಿತ್ತು, ಅಲ್ಲೊಂದು ಮೈನಾ ಹಕ್ಕಿ ಮಾತಾಡುತ್ತಿದ್ದರೆ, ಹೆಸರೇ ಗೊತ್ತಿಲ್ಲದ ಹಕ್ಕಿಯೊಂದು ಹಾಡಾಗಿ ಉತ್ತರಿಸುತ್ತಿತ್ತು...
ಅವನ ಕಾರು ದೂರದಲ್ಲಿ ಬರುತ್ತಿರುವುದು ಕಾಣಿಸುತ್ತಿತ್ತು, ಅವನಿಗೆ ಉತ್ತರ ಹೇಳಬೇಕಲ್ಲ. ಪಾಪು ಅಮ್ಮಾ ಎಂದು ಕರೆದ ಹಾಗೆ ಅನ್ನಿಸಿತು ಒಳಗೆ ಹೋಗಿ ನಿದ್ದೆಗಣ್ಣಿನ ಮಗುವನ್ನು ಎತ್ತಿಕೊಂಡು ಬಂದೆ. ಅವನು ನಲ್ಲೀಕಾಯಿ ಮರಕ್ಕೆ ಒರಗಿ ನಿಂತ್ತಿದ್ದ. ವ್ರಶಾಂಕ್,ನಿನಗೆ ನನ್ನ ಗಂಡನ್ನ ಕೇಳೋಕ್ಕೆ ಒಪ್ಪಿಗೆ ಕೊಟ್ಟಿದ್ದರಲ್ಲಿ ನನ್ನ ಸ್ವಾರ್ಥವಿದೆ, ಏನೂ ಅನ್ನಿಸದಂತಹ ವ್ಯಕ್ತಿತ್ವದ ಅವನಿಗೆ ನೀ ಹೇಳುವ ವಿಚಾರದಿಂದ ಏನಾದರೂ ಅನ್ನಿಸಬಹುದು, ರೊಚ್ಚಿಗೆ ಬೀಳಬಹುದು, ರೇಗಬಹುದು, ಸಿಟ್ಟಾಗಬಹುದು ಅನ್ನೋ ಆಸೆಯಿಂದ, ಆದರೆ ಅಂತದೇನೂ ಆಗಲಿಲ್ಲ.
ಏನೂ ಅನ್ನಿಸದವನ ಜೊತೆ ಬದುಕಲು ಕಲಿತಿದೀನಿ, ಅಭ್ಯಾಸ ಆಗಿಹೋಗಿದೆ.ಅವನಿಗೆಪ್ರಾ ಪ್ರಾಮಿಸ್ ಮಾಡಿದೀನಿ ಅದಕೆ ಬರ್ತಿಲ್ಲಾ, ಅಥವಾ ಸಮಾಜಕ್ಕೆ ಹೆದರಿ ಬರ್ತಿಲ್ಲಾ ಅನ್ಕೊಬೇಡ. ನನಗೆ ಇದ್ಯಾವುದರ ಭಯ ಇಲ್ಲ. ಸೋ ಕಾಲ್ಡ್ 'ಎಥಿಕ್ಸ್', 'ಮಾರಲ್ಸ್' ಗಳಲ್ಲಿ ನನಗೆ ನಂಬಿಕೆ ಇಲ್ಲ. ಆದ್ರೂ, ನಾ ಬರೋಲ್ಲ. ಅಂದು ತೆರೆದ ಬಾಗಿಲಿಂದ ನೆಡೆದು ಹೋಗಲು ನೀನು ಒಪ್ಪಲಿಲ್ಲ, ಧೈರ್ಯ ಮಾಡಲಿಲ್ಲ, ನಿನಗೆ ತುಂಬ ಬಾಗಿಲುಗಳಿದ್ದವು. ಇಂದು ನನ್ನ ಬಾಗಿಲುಗಳು ಮುಚ್ಚಿವೆ, ಗೋಡೆ ಒಡೆಯುವ ಧೈರ್ಯ ಇದೆ ಆದರೆ ಮನಸಿಲ್ಲ. ನಾನು ಬರೋಲ್ಲ ಅಂದೆ, ನಲ್ಲೀ ಕಾಯಿ ಮರಕ್ಕೆ ಒರಗಿ ನಿಂತವನನ್ನು ನೋಡುತ್ತ.. ತೊಡೆಯ ಮೇಲಿನ ಮಗಳು ನಕ್ಕಂತಾಯ್ತು.
ನನ್ನ ಬಿಟ್ಟು ಹೋಗ್ತೀಯ ಮೈತ್ರಿ? ನನ್ಗೆ ಭಯ ಆಗ್ತಿದೆ. ನಾನೇನ್ ತಪ್ಪು ಮಾಡಿದೀನಿ? ನೀನು ಹೇಳಿದ ಹಾಗೆ ಕೇಳ್ತೀನಿ, ನೀ ಹೇಳಿದ್ದರ ವಿರುದ್ದ ಏನಾದರೂ ಮಾಡಿದೀನ ಇಲ್ಲಿವರೆಗೂ? ದಯವಿಟ್ಟು ಬಿಟ್ಟು ಹೊಗಬೇಡ ಮೈತ್ರಿ. 'ನಾವು ಒಬ್ಬರಿಗೊಬ್ಬರು ಜೊತೆಯಾಗಿರ್ತೀವಿ ಕಷ್ಟ ಆಗ್ಲಿ, ಸುಖ ಆಗ್ಲಿ.' ಅಂತ ದೇವರ ಮುಂದೆ ಪ್ರಮಾಣ ಮಾಡಿದೀವಿ. ನಂಗೆ ಭಯ ಆಗ್ತಿದೆ, ನನ್ನ ಬಿಟ್ಟು ಹೋಗಬೇಡ... ಅಂತ ಪಕ್ಕದಲ್ಲಿ ಮಲಗಿದ್ದ ನನ್ನ ಗಂಡ ಒಂದೇ ಸಮನೆ ಬಡಬಡಿಸತೊಡಗಿದಾಗ ವ್ರಶಾಂಕ್ ಇವನ ಹತ್ತಿರ ಮಾತಾಡಿದಾನೆ ಅಂತ ಗೊತ್ತಾಯ್ತು..ಉತ್ತರ ಕೊಡೋಕ್ಕೂ ಹಿಂಸೆ ಆಗಿ ಎದ್ದು ಹೊಗಿ ವೆರೆಂಡಾದ ಈಸಿ ಕುರ್ಚಿ ಮೆಲೆ ಕೂತೆ.
ವರೆಂಡಾದ ಕಿಟಕಿಯಿಂದ ಕಾಣುತ್ತಿದ್ದ ಮನೆಯ ಮುಂದಿನ ನಲ್ಲಿಕಾಯಿ ಮರದ ರುಚಿ ಇಲ್ಲದ ಚಿಕ್ಕ ಚಿಕ್ಕ ಕಾಯಿಗಳ ಬಗ್ಗೆ ಏನೂ ಅನ್ನಿಸಲಿಲ್ಲ. ತನ್ನ ಗಂಡನ ಅತೀ ಒಳ್ಳೆಯತನದ, ಪ್ರತಿಯೊಂದಕ್ಕೂ 'ನೀ ಹೇಳಿದ ಹಾಗೆ' ಅನ್ನುವ, ನನ್ನ ಮುಂದೆ ತಾನು ಬುದ್ದಿವಂತ ಅಂತ ತೋರಿಸಿಕೊಳ್ಳಲು ಹೋಗಿ ಪೆಚ್ಚಾಗುವ, ತನ್ನ ಬಸುರಿ ಮಾಡಿದ್ದನ್ನೇ ದೊಡ್ಡ ಸಾಧನೆ ಅನ್ನುವಂತೆ ಆಡಿದ್ದ ಅವನ ಬಗ್ಗೆ ಅಸಹ್ಯ ಆಗುವುದೂ ನಿಂತು ಹೊಗಿತ್ತು. ಎನೂ ಅನ್ನಿಸುವುದಿಲ್ಲ ಅವನ ಬಗ್ಗೆ. ಯಾರ ವ್ಯಕ್ತಿತ್ವವೂ 'ಇಷ್ಟು' ಎಂದು ಅಳೆದು ಮುಗಿಸಿಬಿಡುವಂತೆ ಇರಬಾರದು ಗಟ್ಟಿಯಾಗಬೇಕು- ದೊಡ್ಡದಾಗಬೇಕು- ಅಗಲವಾಗಬೇಕು -ವಿಸ್ತಾರವಾಗಬೇಕು. ಇಲ್ಲವೇ ಚಿಕ್ಕದಾಗಬೇಕು- ಪುಟ್ಟದಾಗಬೇಕು- ಜೊಳ್ಳಾಗಬೇಕು. ಇರ್ಬಾರ್ದು ಹೀಗೆ, ಏನೂ ಅನ್ನಿಸದ ನಲ್ಲೀಕಾಯಿ ಮರದಂತೆ ಅನ್ನಿಸಿತು ಹೀಗೆ ಅನ್ನಿಸಿದ್ದು ಮೊದಲ ಸಲವೇನಲ್ಲವಲ್ಲ ಅಂದುಕೊಂಡಳು.
ಹುಡುಗರಿಗೆ ವಿಷಯಗಳು ಅರ್ಥವಾಗುವುದು ಎಲ್ಲಾ ಬಾಗಿಲು ಮುಚ್ಚಿ ಹೋಗಿದೆ, ಇನ್ನು ಬಿಡಿಸಿಕೊಂಡು ಹೋಗಲು ದಾರಿ ಇಲ್ಲ ಅನ್ನುವಾಗಲ? ಬಾಗಿಲು ತೆಗೆದಿದ್ದರೂ ನೆಡೆದುಕೊಂಡು ಹೋಗಲಾರೆ ಎನ್ನುವಷ್ಟು ನಿಷಕ್ತರಾಗಿ ತೋರುವವರು, ಎಲ್ಲಾ ಬಾಗಿಲು ಮುಚ್ಚಿದಮೇಲೆ ಗೋಡೆ ಒಡೆಯಲೂ ಹೆದರುವುದಿಲ್ಲ.
ನನ್ನ ಒಂದು ವರ್ಷದ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು, 'ಇದು ನನ್ನ ಮಗು ಅಂತಾನೆ ನೋಡ್ಕೊತೀನಿ ದಯವಿಟ್ಟು ನೀ ನನ್ನ ಜೊತೆ ಬಾ' ಅಂದ.ನನ್ನ ಗಂಡ ಬದುಕಿದ್ದಾನೆ ಮತ್ತು ನನಗೂ ಅವನಿಗೂ ಡೈವೋರ್ಸ್ ಆಗೋ ಯಾವ ಛಾನ್ಸು ಇಲ್ಲ ಅಂತ ಹೇಳಿ ಜೋರಾಗಿ ನಕ್ಕಿದ್ದೆ.ಅವ್ನು 'ನಾನು ಜೊಕ್ ಮಾಡ್ತಿಲ್ಲ ಹುಡುಗಿ, ಅರ್ಥ ಮಾಡ್ಕೊ ನನ್ನ' ಅಂದ. ಆವಾಗ ನೀ ನನ್ನ ಅರ್ಥಮಾಡ್ಕೊಬಹುದಿತ್ತು ನಮ್ಮ ಸಂಭಂದದ ಬಗ್ಗೆ, ಅದರ ಸಾರ್ಥಕತೆ ಬಗ್ಗೆ ನಿಶ್ಚಿತತೆ ಇತ್ತು. ನೀನು ಅದನ್ನ ಅರ್ಥ ಮಾಡ್ಕೊಳಲಿಲ್ಲ. ಯಾರಿಗೋ ಪ್ರಾಮಿಸ್ ಮಾಡ್ಬಿಟ್ಟಿದ್ದೆ. ಪಾಪ... ನಿಂಗೆ ಆವಾಗ ಅರ್ಥ ಆಗ್ಲಿಲ್ಲ ,ನಿನ್ನ ತಪ್ಪೇನಿಲ್ಲ ಬಿಡು ಅಂದು ನಕ್ಕೆ. 'ನನ್ನ ಚುಚ್ಚ ಬೇಡ ಕಣೆ ನಂಗೆ ಅರ್ಥ ಆಗಿದೆ, ನಿನ್ನ ಬಿಟ್ಟು ಇರೊಕ್ಕಾಗಲ್ಲ ನಂಗೆ ಅಂತ. ನಾನು ನಿನ್ನ ಗಂಡನ್ನೇ ಕೇಳ್ತಿನಿ, ನನ್ನ ಹುಡುಗಿನ ನಂಗೆ ಕೊಡು ಅಂತ, ನೀ ಬೇಡ ಅನ್ನಬೇಡ' ಅಂದ. ಕೇಳು ಅಂದೆ.
2
'ವ್ರಶಾಂಕ್, ಲಾವಣ್ಯ ಅನ್ನೋ ಹುಡುಗೀನ ಪ್ರೀತಿಸ್ತಿದಾನೆ ಕಣೆ' ಅಂತ ಆದಿ ಹೇಳ್ದಾಗ ಒಂದು ದೊಡ್ಡ ನಿಟ್ಟುಸಿರು ಹೊರಟಿತ್ತು.ಲಾವಣ್ಯ ಹೆಸರು ಚೆನಾಗಿದೆ ಅಂದುಕೊಂಡಳು. ಎರಡು ತಿಂಗಳು ಬಿಟ್ಟು ವ್ರಶಾಂಕೇ ಫೋನ್ ಮಾಡಿ, ಮೈತ್ರಿ... ಅಂದಾಗ ಆಶ್ಚರ್ಯ ಆಗಿತ್ತು. ಮನೆಗೆ ಬಾ ಅಂದಳು, ಬಂದ. ಅಪ್ಪ ಅಮ್ಮ ಹಳ್ಳಿಗೆ ಹೋಗಿದ್ದರು ಅಲ್ಲಿಯ ದೇವಸ್ತಾನದಲ್ಲಿ ಎನೋ ಪೂಜೆ ಮಾಡಿಸಲು, ಆದ್ರೆ ಅಜ್ಜಿ ಮಾತ್ರ ಇದ್ದಳು ಮನೆಯಲ್ಲಿ, ಆಗಾಗ ಕೆಮ್ಮುತ್ತಾ.
ಏನೇನೋ ಮಾತಾಡಿದೆವು ಸ್ನೇಹಿತರ ವಿಷಯ,ಅವನ ಕೆಲಸದ ವಿಷಯ, ಅವಳ ಕೆಲಸದ ವಿಷಯ, ಲಾವಣ್ಯ ಹೇಗಿದಾಳೆ ಕೇಳಿದಳು 'ಅದು ಮಗು ಬಿಡು' ಅಂದ. ಇರಬಹುದು ಅನ್ನಿಸಿತು ಅವಳಿಗೆ. ಅಮ್ಮ ಬೆಳಗ್ಗೆ ಮಾಡಿಹೋಗಿದ್ದ ಉಪ್ಪಿಟ್ಟನ್ನೇ ಹಾಕಿಕೊಟ್ಟಳು, ಬಟ್ಟಲಲ್ಲಿ ಬಿಳಿ ಮೊಸರು. ನಿನಗೆ ಕೆನೆ ಮೊಸರು ಅಂದ್ರೆ ಈಗಲೂ ಆಗೋಲ್ಲವ? ಅಂದ. ಪರವಾಗಿಲ್ಲ ಹಳೇದೆಲ್ಲ ಇನ್ನು ನೆನಪಿದೆಯಲ್ಲ ಅಂದು ನಕ್ಕಳು. ಹತ್ತಿರ ಬಾರೆ ಅಂದ, ಹೋಗಿ ಪಕ್ಕದಲ್ಲಿ ಕೂತಳು. ಕಾಲೇಜಿನಲ್ಲಿ ನೀ ನನ್ನ ಪ್ರೀತಿಸ್ತಿದ್ದೆ ಅಲ್ವ? ಅಂದ.ಇಷ್ಟು ಹೊತ್ತು ಕೇಳಿಸಿದರು ಕೇಳಿಸದ ಹಾಗೆ ಇದ್ದ ಅಜ್ಜಿಯ ಕೆಮ್ಮು ಕೇಳಿಸತೊಡಗಿತ್ತು. ನೀನೂ ನನ್ನ ಪ್ರೀತಿಸುತ್ತಿದ್ಡೆ ವ್ರಶಾಂಕ್ ಅಂದಳು. ನಿನ್ನ ಅಜ್ಜಿಗೆ ತುಂಬ ಕೆಮ್ಮು ಅಲ್ವ? ಅಂದ, ಮುಗುಳ್ನಕ್ಕಳು. ಇನ್ನು ಎನೇನೊ ಮಾತಾಡಿದರು ಹೊರಡೋ ಮುಂಚೆ ಅಜ್ಜಿ..ನಿಮ್ಮ ಆರೋಗ್ಯ ನೋಡ್ಕೊಳಿ ಅಂದ. ದೂರ ಹೋದ ಮೇಲೆ ಲಾವಣ್ಯಳ ಫೋಟೊ ಮೇಲ್ ಮಾಡ್ತೀನಿ ಅಂತ ಕೂಗ್ದ.
ಸರಿಯಾಗಿ ಮೊಳಕೆಯೇ ಒಡೆಯದ್ದಿದ್ದ ಸಂಭಂದ, ಅಂದಿನಿಂದ ಜೀವ ಪಡೆಯಲು ಕಾತರಿಸುತ್ತಿತ್ತು, ಹಸಿರಾಗಲು ಶುರುವಾಗಿತ್ತು, ರಸ ಒಸರಲು ಪ್ರಾರಂಭಿಸಿತ್ತು.ಅದೇ ಸಮಯಕ್ಕೆ ಸರಿಯಾಗಿ ಅವಳಿಗೆ ಗಂಡು ನೋಡಲು ಶುರು ಮಾಡಿದ್ದರು ಪ್ರತಿಯೊಂದು ಹುಡುಗನನ್ನೂ ಬೇಡ ಬೇಡ ಎಂದು ನಿರಾಕರಿಸುತ್ತಿದ್ದಳು. ಏಕೆ ಅಂತ ಅವಳಿಗೇ ಗೊತ್ತಿರಲಿಲ್ಲ. ಅವಳ ಅಮ್ಮ ಅಳಲು ಶುರು ಮಾಡಿದ್ದರು, ಹಿಂಸೆ ಆಗುತಿತ್ತು ಮನೆಯಲ್ಲಿ. ಇವತ್ತು ನಿರ್ಧಾರಕ್ಕೆ ಬಂದೇ ಬಿಡಬೇಕು ಅಂತ ವ್ರಶಾಂಕ್ ಬಳಿ ಹೋಗಿ 'ನನ್ನ ಮದುವೆ ಆಗು ವ್ರಶಾಂಕ್' ಅಂದಿದ್ದಳು ನಾನೇನೋ ತಯಾರಿದ್ದೀನಿ ಆದ್ರೆ ಲಾವಣ್ಯಾಗೆ ಪ್ರಾಮಿಸ್ ಮಾಡಿಬಿಟ್ಟಿದೀನಲ್ಲ, ಪ್ರಾಮಿಸ್ ಮುರಿಯೋದು ತಪ್ಪಲ್ಲವ? ಅಂದಿದ್ದ. ತನ್ನ ಬಳಿ ಇರೋವಾಗ, ತನ್ನ ಸೇರೋವಾಗ, ಸುಖಿಸುವಾಗ, ಆಣೆ- ಪ್ರಮಾಣ, ನಂಬಿಕೆ, ಮನಸ್ಸು- ಮನಸ್ಸಾಕ್ಷಿ, ಎಲ್ಲವನ್ನೂ ಬೀದಿಗೆ ಎಸೆದಂತೆ ಆಡುತ್ತಿದ್ದವನಿಗೆ ಆಣೆ ಪ್ರಮಾಣದ ಜ್ನಾಪಕ ಬಂದ್ದಿದ್ದು ನೋಡಿ ಹೇಡಿ ಅನ್ನಿಸಿ 'ಸರಿ ನೀನು ನಿನ್ನ ಆಣೆ ಉಳಿಸಿಕೋ ಅವಳನ್ನೇ ಮದುವೆ ಆಗು.' ಅಂದಿದ್ದಳು. ಇದಾದ ಎರಡೇ ತಿಂಗಳಲ್ಲಿ ಮೈತ್ರಿಯ ಮದುವೆ ಆಗಿಹೋಗಿತ್ತು.
3
ಛೇ.. ನಾವು ಮತ್ತೆ ಸಿಗಲೇಬಾರದಿತ್ತು ಅವತ್ತು ಫೋನ್ನಲ್ಲಿ ಮಾತಾಡೋವಾಗ ನಾನು ಕೇರಳಕ್ಕೆ ಹೋಗ್ತಿದೀನಿ ಒಂದು ವಾರ ಅಂದೆ. ಲಾವಣ್ಯ ಬರ್ತಿದಾಳ ಅಂತ ಕೇಳಿದಳು, ಇಲ್ಲ ಅಂದೆ. ನಾ ಬರ್ತೀನಿ ವ್ರಶಾಂಕ್ ಅಂದಳು. ಆಶರ್ಯ ಆಯ್ತು ನಿಜವಾಗ್ಲು ಮೈತ್ರಿ!!! ಅಂದೆ. 'ನನಗು ತಿರುಗಬೇಕು ಅಂತ ಮನಸ್ಸಾಗಿದೆ, ಒಂದೇ ಕಡೆ ಇದ್ದು ಬೊರು. ಕೆಲಸಕ್ಕು ಒಂದುವಾರ ರಜೆ ಹಾಕಿಬಿಡ್ತೀನಿ, ಇವರೂ ಫಾರಿನ್ ಟೂರ್ನಲ್ಲಿದಾರೆ, ಮಗೂನು ಕರ್ಕೊಂಡು ಬರ್ತೀನಿ. ನಿನ್ನ ಕೆಲಸಕ್ಕೆ ತೊಂದರೆ ಮಾಡೋಲ್ಲ ಅಂದಿದ್ದಳು.
ಒಂದು ವಾರ ಪೂರ್ತಿ ಜೊತೆಲಿ ಕಳೆದೆನಲ್ಲ ಆವಾಗಲೇ ಗೊತ್ತಾಗಿದ್ದು ಅವಳಿಗೂ ಇವಳಿಗೂ ಎಷ್ಟು ವ್ಯತ್ಯಾಸ ಎಂದು. ಮೊದಮೊದಲು ಇನೊಸೆಂಟ್ ಅನ್ನಿಸುತ್ತಿದ್ದ ಲಾವಣ್ಯ, ಈಗ ನಾಟಕ ಮಾಡ್ತಾಳೆ ಅನ್ನಿಸುತಿತ್ತು. ಅವಳ ಜೊತೆ ಇರೋವಾಗಲೆಲ್ಲಾ ಉಸಿರುಕಟ್ಟುತ್ತಿರುವ ಭಾವನೆ. ಚಿಕ್ಕ ಚಿಕ್ಕ ವಿಷಯಗಳನ್ನೂ ದೊಡ್ಡದು ಮಾಡುವ, ನಾನು ಬೇರೆ ಹುಡುಗಿಯರನ್ನು ನೋಡಿದರೆ ಸಾಕು ಉರಿದು ಬೀಳುವ, ನನ್ನ ಬೇಕು ಬೇಡಗಳನ್ನು ಅರ್ಥ ಮಾಡಿಕೊಳ್ಳದ, ಸಂದರ್ಭಗಳಿಗೆ ಸರಿಯಾಗಿ ಸ್ಪಂದಿಸದ, ಅತ್ಯಂತ ಹಠಮಾರಿ-ಪೊಸೆಸ್ಸಿವ್ ಹುಡುಗಿ ಅವಳು. ಪಕ್ಕದಲ್ಲೇ ಕುಳಿತುಕೊಂಡು ನಾನು ಹುಡುಗಿಯರ ಜೊತೆ ಫ್ಲರ್ಟ್ ಮಾಡುವುದನ್ನು ಎಂಜಾಯ್ ಮಾಡುತ್ತಾ, ನನ್ನ ಚುಡಾಯಿಸುತ್ತಾ, ಹೆಚ್ಚು ಸ್ಪೇಸ್ ಕೊಡುವ, ಬೇಕಾದಲ್ಲಿ ಮಾತಾಗುವ-ಬೇಡವಾದಲ್ಲಿ ಮೌನವಾಗುವ, ಬರೀ ಪ್ರೀತಿ ಪ್ರೇಮದ ಮಾತಡಿ ಬೋರ್ ಮಾಡದೆ, ಏನೇ ವಿಷಯ ಎತ್ತಿಕೊಂಡರೂ ಸಮರ್ಥವಾಗಿ ವಾದ ಮಾಡುವ, ಆದರೆ ಜಗಳ ಆಡದ ಅಷ್ಟೇ ಪ್ರೀತಿಸುವ ಹುಡುಗಿ ಮೈತ್ರಿ.
ಹೌದು ನಾನಾಗ ತಪ್ಪೇ ಮಾಡಿರಬಹುದು. ಅವಳನ್ನ ಅರ್ಥ ಮಾಡಿಕೊಂಡಿದ್ದು ಬಹಳ ನಿಧಾನ ಇರಬಹುದು, ಆದ್ರೆ ಅವಳನ್ನ ತುಂಬಾ ಪ್ರೀತಿಸುತ್ತೇನೆ. ಅವಳ ಗಂಡ ಅವಳನ್ನ ನೋಡಿಕೊಳ್ಳೋದಕ್ಕಿಂತ ಚೆನ್ನಾಗಿ ನೋಡಿಕೊತೆನೆ ನಾನು. ಲಾವಣ್ಯಾಗೆ ಮೊನ್ನೇನೆ ಹೇಳಿಬಂದೆನಲ್ಲ ನನಗೂ ನಿನಗೂ ಆಗಿಬರೋಲ್ಲ, ನಮ್ಮಿಬ್ಬರ ಸ್ವಭಾವಗಳು ಬೇರೆ ಬೇರೆ, ಜೊತೇಗಿರೋದು ಕಷ್ಟ ಆಗುತ್ತೆ ಅಂತ. ಇದನ್ನ ಎಷ್ಟು ಹೊತ್ತು ಅವಳಿಗೆ ವಿವರಿಸಿದೆ ಆದ್ರೆ ಅವಳು ಮೊನ್ನೇನೂ ಅದೇ ಥರ ಆಡಿದಳು, ಅತ್ತಳು, ಬಾಯಿಗೆ ಬಂದ ಹಾಗೆ ಬೈದಳು, ಹೊಡೆದಳು, ನಾನು ಎದ್ದು ಬಂದೆ. ಆದ್ರೆ ಇನ್ನು ಮುಂದೆ ಎಲ್ಲಾ ಚೆನ್ನಾಗಿರುತ್ತೆ ನಾನು-ನನ್ನ ಮೈತ್ರಿ-ಅವಳ ಮಗು, ಅಲ್ಲ ನಮ್ಮ ಮಗು ಆ ಮಗುನ ನನ್ನ ಮಗು ಥರನೇ ನೋಡಿಕೊಳ್ತೀನಿ. ಅವಳ ಗಂಡನಿಗೂ ಹೇಳಿಯಾಯಿತು, ಆ ಪ್ರಾಣಿ ನನ್ನ ಹೆಂಡತಿ ಹತ್ತಿರ ಮಾತಾಡ್ತೀನಿ ಅಂತ ಹೇಳಿದಾನೆ.'ಈಗ ಮನೆಗೆ ಬಾ' ಅಂತ ಮೈತ್ರಿ ಫೋನ್ ಮಾಡಿದ್ದಳಲ್ಲ, 'ಮಾತಾಡಬೇಕು' ಅಂತ. ನನಗೆ ಗೊತ್ತು ಮೈತ್ರಿ ನನ್ನ ಜೊತೆಗೆ ಬಂದೇ ಬರ್ತಾಳೆ, ನನ್ನ ತುಂಬ ಪ್ರೀತಿಸುತ್ತಾಳೆ ಅವಳು, ಅಂದುಕೊಂಡು ಕಾರಿನ ಕೀ ತೆಗೆದುಕೊಂಡು ಹೊರಟ.
4
ತನ್ನ ದುಃಖ ದುಮ್ಮಾನವನ್ನೆಲ್ಲಾ ಬಸಿದು ಹಾಕುವ ಹವಣಿಕೆ ಇರಬೇಕು, ರಾತ್ರಿಯೆಲ್ಲಾ ಆಕಾಶವು ಬಿಕ್ಕಳಿಸಿ ಅಳುತ್ತಿತ್ತು. ಏಕೋ ನನಗರಿವಿಲ್ಲದೆಯೇ ನನ್ನ ಕೆನ್ನೆಯ ಮೇಲೂ ಇಳಿದ ನೀರು, ಕಾರಣ ತಿಳಿಯದು. ಸುಮ್ಮನೆ ಕಲ್ಪಿಸಿಕೊಂಡ ಆತಂಕಗಳು ನನ್ನ ಕಾಡುತ್ತಿದ್ದರೆ ನನ್ನ ಕಲ್ಪನೆಗಳ ಬಗ್ಗೆ ನನಗೇ ಭಯ ಮೂಡಿ, ಟೀವಿ ನೋಡಲು ಬೇಸರವಾಗಿ, ಓದಲು ತಂದ ಪುಸ್ತಕದಲ್ಲಿ ಮನಸ್ಸು ಇಳಿಯದೆ, ಏನೂ ಮಾಡಲು ಹೊಳಿಯದೆ, ಆ ರಾತ್ರಿಯಲ್ಲಿ ಮನೆ ಒರೆಸತೊಡಗಿದೆ.
ಯಾವಾಗ ಮಲಗಿದೆನೋ!! ಬೆಳಗ್ಗೆ ಎದ್ದು ರಂಗೋಲಿ ಹಾಕುತ್ತಿರುವಾಗ, ರಾತ್ರಿಯೆಲ್ಲಾ ಅತ್ತಿದ್ದರಿಂದಲೋ ಏನೋ ಎನ್ನುವಂತೆ ಕಣ್ಣು ಕೆಂಪಗಾಗಿರುವ ಆಕಾಶ, ದುಃಖ ಹೊರಹಾಕಿದ ಸುಖದ ಜೊತೆ. ಸುಮ್ಮನೆ ಅಚ್ಚರಿಯಿಂದ ನೋಡಿದೆ, ರಂಗೋಲಿ ಹಾಕುವುದನ್ನೂ ಮರೆತು- ಹಕ್ಕಿಯೊಂದು ತನ್ನ ಮೇಲಿದ್ದ ಮಳೆ ನೀರನ್ನು ಕೊಡಗಿಕೊಳ್ಳುತ್ತಿತ್ತು, ಅಲ್ಲೊಂದು ಮೈನಾ ಹಕ್ಕಿ ಮಾತಾಡುತ್ತಿದ್ದರೆ, ಹೆಸರೇ ಗೊತ್ತಿಲ್ಲದ ಹಕ್ಕಿಯೊಂದು ಹಾಡಾಗಿ ಉತ್ತರಿಸುತ್ತಿತ್ತು...
ಅವನ ಕಾರು ದೂರದಲ್ಲಿ ಬರುತ್ತಿರುವುದು ಕಾಣಿಸುತ್ತಿತ್ತು, ಅವನಿಗೆ ಉತ್ತರ ಹೇಳಬೇಕಲ್ಲ. ಪಾಪು ಅಮ್ಮಾ ಎಂದು ಕರೆದ ಹಾಗೆ ಅನ್ನಿಸಿತು ಒಳಗೆ ಹೋಗಿ ನಿದ್ದೆಗಣ್ಣಿನ ಮಗುವನ್ನು ಎತ್ತಿಕೊಂಡು ಬಂದೆ. ಅವನು ನಲ್ಲೀಕಾಯಿ ಮರಕ್ಕೆ ಒರಗಿ ನಿಂತ್ತಿದ್ದ. ವ್ರಶಾಂಕ್,ನಿನಗೆ ನನ್ನ ಗಂಡನ್ನ ಕೇಳೋಕ್ಕೆ ಒಪ್ಪಿಗೆ ಕೊಟ್ಟಿದ್ದರಲ್ಲಿ ನನ್ನ ಸ್ವಾರ್ಥವಿದೆ, ಏನೂ ಅನ್ನಿಸದಂತಹ ವ್ಯಕ್ತಿತ್ವದ ಅವನಿಗೆ ನೀ ಹೇಳುವ ವಿಚಾರದಿಂದ ಏನಾದರೂ ಅನ್ನಿಸಬಹುದು, ರೊಚ್ಚಿಗೆ ಬೀಳಬಹುದು, ರೇಗಬಹುದು, ಸಿಟ್ಟಾಗಬಹುದು ಅನ್ನೋ ಆಸೆಯಿಂದ, ಆದರೆ ಅಂತದೇನೂ ಆಗಲಿಲ್ಲ.
ಏನೂ ಅನ್ನಿಸದವನ ಜೊತೆ ಬದುಕಲು ಕಲಿತಿದೀನಿ, ಅಭ್ಯಾಸ ಆಗಿಹೋಗಿದೆ.ಅವನಿಗೆಪ್ರಾ ಪ್ರಾಮಿಸ್ ಮಾಡಿದೀನಿ ಅದಕೆ ಬರ್ತಿಲ್ಲಾ, ಅಥವಾ ಸಮಾಜಕ್ಕೆ ಹೆದರಿ ಬರ್ತಿಲ್ಲಾ ಅನ್ಕೊಬೇಡ. ನನಗೆ ಇದ್ಯಾವುದರ ಭಯ ಇಲ್ಲ. ಸೋ ಕಾಲ್ಡ್ 'ಎಥಿಕ್ಸ್', 'ಮಾರಲ್ಸ್' ಗಳಲ್ಲಿ ನನಗೆ ನಂಬಿಕೆ ಇಲ್ಲ. ಆದ್ರೂ, ನಾ ಬರೋಲ್ಲ. ಅಂದು ತೆರೆದ ಬಾಗಿಲಿಂದ ನೆಡೆದು ಹೋಗಲು ನೀನು ಒಪ್ಪಲಿಲ್ಲ, ಧೈರ್ಯ ಮಾಡಲಿಲ್ಲ, ನಿನಗೆ ತುಂಬ ಬಾಗಿಲುಗಳಿದ್ದವು. ಇಂದು ನನ್ನ ಬಾಗಿಲುಗಳು ಮುಚ್ಚಿವೆ, ಗೋಡೆ ಒಡೆಯುವ ಧೈರ್ಯ ಇದೆ ಆದರೆ ಮನಸಿಲ್ಲ. ನಾನು ಬರೋಲ್ಲ ಅಂದೆ, ನಲ್ಲೀ ಕಾಯಿ ಮರಕ್ಕೆ ಒರಗಿ ನಿಂತವನನ್ನು ನೋಡುತ್ತ.. ತೊಡೆಯ ಮೇಲಿನ ಮಗಳು ನಕ್ಕಂತಾಯ್ತು.
Wednesday, August 29, 2007
ಮಳೆ-ನೆನಪು
ನಾನು ಸುಶ್ ನಮ್ಮ ಹಾಸ್ಟಲೆಂಬ ಜೈಲಿನಲ್ಲಿ ನನ್ನ ರೂಮಿನ ಮುಂದಿನ ಕಿಟಕಿಯ ಬಳಿ ಬುಕ್ಕು ಪೆನ್ನು ಹಿಡಿದುಕೊಂಡು ಕುಳಿತಿದ್ದೆವು. ಮನೆಯಂಗಳದಲ್ಲೊಂದು ಸಾಹಿತ್ಯ ಸಂಜೆ ಎಂಬ ಕಾರ್ಯಕ್ರಮದ ರಿಪೋರ್ಟು ಮಾಡೊಕ್ಕಿತ್ತು.. ಜರ್ನಲಿಸಮ್ ಮೇಡಂ ಅಸೈನ್ಮೆಂಟ್ ಕೊಟ್ಟಿದ್ದರು. ಸುಶ್ ಬರೆಯೋಕ್ಕೆ ಶುರು ಮಾಡಿದ್ದಳು ನಾನು ಕಿಟಕಿಯಂದ ಕಾಣುವ ನಮ್ಮ ಕಾಲೇಜನ್ನೇ ನೋಡುತ್ತಾ ಕುಳಿತ್ತಿದ್ದೆ. ಸುಶ್ ಮಳೆ ಅಂದ್ರೆ ಏನನ್ನಿಸುತ್ತೆ ನಿಂಗೆ ಅಂತ ಕೇಳ್ದೆ ಅವಳು ಸುಮ್ನೆ ನನ್ನ ದುರುಗುಟ್ಟಿಕೊಂಡು ನೋಡಿ ಮತ್ತೆ ಬರೆಯೊದನ್ನ ಮುಂದುವರೆಸಿದಳು."ಇವಳಿಗೊಂದು ಮಳೆ ಹುಚ್ಚು" ಅಂತ ಗೊಣಗಿದ್ದು ಕೇಳಿಸಿತು.
ಕಡಲೂರಿನ ಮಳೆ ವಿಚಿತ್ರ .ನಮ್ಮೂರಲ್ಲಿ ಚಂದ, ಮಳೆ ಬರೋಕ್ಕೆ ಶುರುವಾದರೆ ಪೂರ್ತಿ ನಿಂತಿತು ಅಂತ ಹೇಳೋಕ್ಕಾಗಲ್ಲ ಸಣ್ಣಗೆ ಉದುರುತ್ತಾನೇ ಇರುತ್ತೆ.ಇಲ್ಲಿ ವಿಚಿತ್ರ ಸೂಚನೆಯನ್ನೇ ಕೊಡದೆ ದಬ ದಬ ಅಂತ ಸುರಿದು ಮತ್ತೆ ನಿಂತೇ ಹೋಗುತ್ತೆ ಅದರ ಘಮವನ್ನೂ ಉಳಿಸದೆ.
ನಮ್ಮೂರ ಮಳೆ ಅಮ್ಮ ಮಾಡೋ ಕಾಫಿ ಥರ; ಬೆಳಗ್ಗೆ ಆರು ಮೂವತ್ತಕ್ಕೆ ಸ್ವಲ್ಪವೇ ಸ್ವಲ್ಪ ಒಂದು ಅರ್ಧ ಹಿಡಿಯಷ್ಟು ಕಾಫಿ ಬೀಜವನ್ನು ಹುರಿದು, ಅದನ್ನ ಪುಡಿ ಮಾಡುವ ಬಿಳೀ ಮಿಷಿನ್ನಿಗೆ ಹಾಕಿ ಟರ್ರ್ ಅನ್ನಿಸುತ್ತಿರುವಾಗಲೇ ಮನೆಯೆಲ್ಲಾ ಹಿತವಾಗಿ ಹರಡಿದ ಕಾಫಿಯ ಘಮ ಅದನ್ನ ಕುದಿಯೋ ಸಕ್ಕರೆ ನೀರಿಗೆ ಹಾಕಿ, ಸೋಸಿ, ಆಗಷ್ಟೇ ಹಾಲಿನವನು ತಂದ ಹಾಲನ್ನು ಕಾಯಿಸಿ ಅದನ್ನ ಡಿಕಾಕ್ಷನ್ನಿಗೆ ಸೇರಿಸಿ ಕುಡಿಯಲು ಕೊಟ್ಟ ಹಾಗೆ.. ಮಳೆ ಬರುವ ಮುಂಚೆಯೂ ಬಂದ ಮೇಲೂ ಹಿತವಾಗಿ ಹರಡಿದ ಮಳೆಯ ವಾತಾವರಣ, ಥೇಟ್ ಅಮ್ಮನ ಕಾಫಿಯೇ ಕುಡಿಯೋ ಮುಂಚೆಯೂ ಕುಡಿದ ಮೇಲೂ ಹಿತವೆನಿಸುವ ಅದರ ರುಚಿಯಂತೆ.
ಈ ಯೋಚನಾ ಲಹರಿಯನ್ನು ತುಂಡರಿಸಿದ್ದು ಸೂಚನೆಯನ್ನೇ ಕೊಡದೆ ಸುರಿಯಲು ಶುರುವಾದ ಮಳೆ ಸುಶ್ ನನ್ನ ನೊಡಿ ಮುಗುಳ್ನಕ್ಕಳು. ನಮ್ಮ ಕಾಲೇಜು ಮಳೆಯಲ್ಲಿ ನೆನೆಯುತ್ತಿತ್ತು.ತಂಗಾಳಿಯ ಜೊತೆ ಚುರುಚೂರೇ ಕಿಟಕಿಯೊಳಕ್ಕೆ ನುಗ್ಗುತ್ತಿರುವ ಮಳೆಯ ಹನಿಗಳು ಹಿತವಾಗಿ ನಮ್ಮಿಬ್ಬರನ್ನೂ ಒದ್ದೆಯಾಗಿಸುತ್ತಿತ್ತು.. ಸುಶ್ ಪುಸ್ತಕ ಮುಚ್ಚಿಟ್ಟು ಏನೋ ಯೊಚಿಸತೊಡಗಿದಳು...
ಮಳೆ ಅಂದ್ರೆ ನೆನಪು. ಮಳೆ ನೆಲವನ್ನು ಅಪ್ಪಿ ಚಿಮ್ಮುತ್ತಿದ್ದರೆ, ನನ್ನೊಳಗಿನ ನೆನಪಿನ ಪುಟಗಳು ಒಂದೊಂದಾಗಿ ಬಿಚ್ಚಿಕೊಳ್ಳಲು ಶುರು. ತಾತನ ಮನೆ ನೆನಪು, ಮಳೆ ಬೀಳುತ್ತಿದ್ದಂತೆಯೇ ಉರಿನಲ್ಲಿ ಮನೆ ಮುಂದೆ ಹರಡಿರುವ ಅಡಕೆಯನ್ನೆಲ್ಲಾ ಆ ದೊಡ್ಡ ದೊಡ್ಡ ಗೋಣಿ ಚೇಲದ ಸಮೇತ ಒಳಗೆ ತೆಗದುಕೊಂಡು ಹೋಗುವ ಚಿಕ್ಕಮ್ಮ, ಸರ ಸರನೆ ಓಡಿ ಬಂದು ಅವಳ ಜೊತೆ ಕೈ ಜೊಡಿಸುವ ಚಿಕ್ಕಪ್ಪ, ಆಗಿನ ಗಡಿಬಿಡಿ, 'ಹಾಳು ಮಳೆ' ಎಂದು ಸುಮ್ಮನೆ ಬಯ್ಯುವ ಪಾಟಿ(ಅಜ್ಜಿ), ಮಳೆಯಲ್ಲಿ ಒದ್ದೆಯಾಗುತ್ತಿರುವ ತನ್ನ ಹದಿನಾರು ಮೊಳದ ಸೀರೆಯನ್ನು ತೆಗೆಯಲು ಬರುತ್ತಿರುವ ಎದುರು ಮನೆಯ ಶೇಶಮ್ ಪಾಟಿ, ಮಳೆ ಶುರುವಾಗುತ್ತಿದ್ದಂತೆಯೇ ಕಾಫಿಗೆ ಹವಣಿಸುವ ಅಜ್ಜ,ಇವನ್ನೆಲ್ಲಾ ಪ್ರತೀ ವರ್ಷವೂ ಹೊಸದು ಎನ್ನುವಂತೆ ನೋಡುವ ನಾವು.....
ಏನೋ ಯೋಚಿಸುತ್ತಿದ್ದವಳು, ಹ್ಮ್ ಮ್ ಮ್.. ಎಂದು ನಿಟ್ಟುಸಿರು ಬಿಡುತ್ತಾ "ಮಳೆ ಅಂದ್ರೆ ನೆನಪು." ಅಂದಳು ಸುಶ್. ನಾನು ಸುಮ್ಮನೆ ನಕ್ಕೆ....
ಕಡಲೂರಿನ ಮಳೆ ವಿಚಿತ್ರ .ನಮ್ಮೂರಲ್ಲಿ ಚಂದ, ಮಳೆ ಬರೋಕ್ಕೆ ಶುರುವಾದರೆ ಪೂರ್ತಿ ನಿಂತಿತು ಅಂತ ಹೇಳೋಕ್ಕಾಗಲ್ಲ ಸಣ್ಣಗೆ ಉದುರುತ್ತಾನೇ ಇರುತ್ತೆ.ಇಲ್ಲಿ ವಿಚಿತ್ರ ಸೂಚನೆಯನ್ನೇ ಕೊಡದೆ ದಬ ದಬ ಅಂತ ಸುರಿದು ಮತ್ತೆ ನಿಂತೇ ಹೋಗುತ್ತೆ ಅದರ ಘಮವನ್ನೂ ಉಳಿಸದೆ.
ನಮ್ಮೂರ ಮಳೆ ಅಮ್ಮ ಮಾಡೋ ಕಾಫಿ ಥರ; ಬೆಳಗ್ಗೆ ಆರು ಮೂವತ್ತಕ್ಕೆ ಸ್ವಲ್ಪವೇ ಸ್ವಲ್ಪ ಒಂದು ಅರ್ಧ ಹಿಡಿಯಷ್ಟು ಕಾಫಿ ಬೀಜವನ್ನು ಹುರಿದು, ಅದನ್ನ ಪುಡಿ ಮಾಡುವ ಬಿಳೀ ಮಿಷಿನ್ನಿಗೆ ಹಾಕಿ ಟರ್ರ್ ಅನ್ನಿಸುತ್ತಿರುವಾಗಲೇ ಮನೆಯೆಲ್ಲಾ ಹಿತವಾಗಿ ಹರಡಿದ ಕಾಫಿಯ ಘಮ ಅದನ್ನ ಕುದಿಯೋ ಸಕ್ಕರೆ ನೀರಿಗೆ ಹಾಕಿ, ಸೋಸಿ, ಆಗಷ್ಟೇ ಹಾಲಿನವನು ತಂದ ಹಾಲನ್ನು ಕಾಯಿಸಿ ಅದನ್ನ ಡಿಕಾಕ್ಷನ್ನಿಗೆ ಸೇರಿಸಿ ಕುಡಿಯಲು ಕೊಟ್ಟ ಹಾಗೆ.. ಮಳೆ ಬರುವ ಮುಂಚೆಯೂ ಬಂದ ಮೇಲೂ ಹಿತವಾಗಿ ಹರಡಿದ ಮಳೆಯ ವಾತಾವರಣ, ಥೇಟ್ ಅಮ್ಮನ ಕಾಫಿಯೇ ಕುಡಿಯೋ ಮುಂಚೆಯೂ ಕುಡಿದ ಮೇಲೂ ಹಿತವೆನಿಸುವ ಅದರ ರುಚಿಯಂತೆ.
ಈ ಯೋಚನಾ ಲಹರಿಯನ್ನು ತುಂಡರಿಸಿದ್ದು ಸೂಚನೆಯನ್ನೇ ಕೊಡದೆ ಸುರಿಯಲು ಶುರುವಾದ ಮಳೆ ಸುಶ್ ನನ್ನ ನೊಡಿ ಮುಗುಳ್ನಕ್ಕಳು. ನಮ್ಮ ಕಾಲೇಜು ಮಳೆಯಲ್ಲಿ ನೆನೆಯುತ್ತಿತ್ತು.ತಂಗಾಳಿಯ ಜೊತೆ ಚುರುಚೂರೇ ಕಿಟಕಿಯೊಳಕ್ಕೆ ನುಗ್ಗುತ್ತಿರುವ ಮಳೆಯ ಹನಿಗಳು ಹಿತವಾಗಿ ನಮ್ಮಿಬ್ಬರನ್ನೂ ಒದ್ದೆಯಾಗಿಸುತ್ತಿತ್ತು.. ಸುಶ್ ಪುಸ್ತಕ ಮುಚ್ಚಿಟ್ಟು ಏನೋ ಯೊಚಿಸತೊಡಗಿದಳು...
ಮಳೆ ಅಂದ್ರೆ ನೆನಪು. ಮಳೆ ನೆಲವನ್ನು ಅಪ್ಪಿ ಚಿಮ್ಮುತ್ತಿದ್ದರೆ, ನನ್ನೊಳಗಿನ ನೆನಪಿನ ಪುಟಗಳು ಒಂದೊಂದಾಗಿ ಬಿಚ್ಚಿಕೊಳ್ಳಲು ಶುರು. ತಾತನ ಮನೆ ನೆನಪು, ಮಳೆ ಬೀಳುತ್ತಿದ್ದಂತೆಯೇ ಉರಿನಲ್ಲಿ ಮನೆ ಮುಂದೆ ಹರಡಿರುವ ಅಡಕೆಯನ್ನೆಲ್ಲಾ ಆ ದೊಡ್ಡ ದೊಡ್ಡ ಗೋಣಿ ಚೇಲದ ಸಮೇತ ಒಳಗೆ ತೆಗದುಕೊಂಡು ಹೋಗುವ ಚಿಕ್ಕಮ್ಮ, ಸರ ಸರನೆ ಓಡಿ ಬಂದು ಅವಳ ಜೊತೆ ಕೈ ಜೊಡಿಸುವ ಚಿಕ್ಕಪ್ಪ, ಆಗಿನ ಗಡಿಬಿಡಿ, 'ಹಾಳು ಮಳೆ' ಎಂದು ಸುಮ್ಮನೆ ಬಯ್ಯುವ ಪಾಟಿ(ಅಜ್ಜಿ), ಮಳೆಯಲ್ಲಿ ಒದ್ದೆಯಾಗುತ್ತಿರುವ ತನ್ನ ಹದಿನಾರು ಮೊಳದ ಸೀರೆಯನ್ನು ತೆಗೆಯಲು ಬರುತ್ತಿರುವ ಎದುರು ಮನೆಯ ಶೇಶಮ್ ಪಾಟಿ, ಮಳೆ ಶುರುವಾಗುತ್ತಿದ್ದಂತೆಯೇ ಕಾಫಿಗೆ ಹವಣಿಸುವ ಅಜ್ಜ,ಇವನ್ನೆಲ್ಲಾ ಪ್ರತೀ ವರ್ಷವೂ ಹೊಸದು ಎನ್ನುವಂತೆ ನೋಡುವ ನಾವು.....
ಏನೋ ಯೋಚಿಸುತ್ತಿದ್ದವಳು, ಹ್ಮ್ ಮ್ ಮ್.. ಎಂದು ನಿಟ್ಟುಸಿರು ಬಿಡುತ್ತಾ "ಮಳೆ ಅಂದ್ರೆ ನೆನಪು." ಅಂದಳು ಸುಶ್. ನಾನು ಸುಮ್ಮನೆ ನಕ್ಕೆ....
Tuesday, August 21, 2007
ಅಮ್ಮಾ.. ನಿನ್ನ ಎದೆಯಾಳದಲ್ಲಿ..
ಉಹೂಂ, ಅಪ್ಪನ ಮುಖ ನೆನಪಿಲ್ಲ ನನಗೆ ನನಗೆ ನೆನಪಿರೋದೆಲ್ಲ ಬರೀ ಇಷ್ಟೆ ಅಮ್ಮ ಕೆಂಪು ಸೀರೆ ಉಟ್ಟುಕೊಂಡು ಒಂದು ಶವದ ಮುಂದೆ ಕೂತಿರೋದು (ಅದು ಶವ ಅಂತಾನೂ ಗೊತ್ತಿರಲಿಲ್ಲ ನಂಗೆ ಯಾರೋ ಮಲಗಿದಾರಲ್ಲ .. ಯಾಕೆ ಬೀದೀಲಿ ಮಲಗಿದಾರೆ ಅನ್ಕೊಂಡಿದ್ದೆ) ಮತ್ತೆ ಶೂನ್ಯವನ್ನು ದ್ರುಷ್ಟಿಸುವ ಅಮ್ಮನ ಕಣ್ಣುಗಳು. ಎಲ್ಲರೂ ಅಳುತ್ತಿದ್ದರು, ಅಮ್ಮನ ಕಣ್ಣು ಭಯವಾಗೊಷ್ಟು ಕೆಂಪಾಗಿತ್ತು. ಪ್ರಾಯಷಃ ರಾತ್ರಿಯೆಲ್ಲಾ ಅತ್ತಿರಬೇಕು. ಏನಾಗಿದೆ ಅಂತ ಗೊತ್ತಿರಲಿಲ್ಲ ನನಗೆ ಆದರೆ ಅಮ್ಮನಲ್ಲಿ ಆದ ಬದಲಾವಣೆ ನನಗೆ ಅಳು ತರಿಸಿತ್ತು.ಅಮ್ಮನ ಹತ್ತಿರ ಹೋಗೋಕ್ಕೆ ಬಿಟ್ಟಿರಲಿಲ್ಲ ನಮ್ಮನ್ನ
"ಈ ಮೂರು ವರ್ಷದ ಮಗೀಗೆ ನಿನ್ ಅಪ್ಪಜಿ ಸತ್ತ್ ಹೋಗೈತೆ ಅಂತ ಹೇಗ್ ಹೇಳಾದು?"
ಅಂತ ಅಜ್ಜಿ ದೊಡ್ಡ್ ದನಿ ಮಾಡಿ ಅಳೋಕ್ಕೆ ಶುರು ಮಾಡಿದ್ಲು ನನಗೆ ಭಯ ಆಗಿ ನಾನು ಮನೆಯಾಳು ಮಂಜನ ಹತ್ರ ಓಡೋಗಿದ್ದೆ
ಹ್ಮ್ಮ್ಮ್ಮ್ ಮ್ ಮ್... ಅಂತ ದೊಡ್ಡ ನಿಟ್ಟುಸಿರುಬಿಟ್ಟು ನಾನ್ಯಾವಾಗಲೂ ಇಷ್ಟೇ ನೆನಪುಗಳಲ್ಲೇ ಮುಳುಗಿ ಹೋಗಿರ್ತೀನಿ ಅವರು ಬರೋಷ್ಟೊತ್ತಿಗೆ ಬೀಟ್ರೂಟ್ ಪಲ್ಯ ಮಾಡಿಟ್ಟಿರಬೇಕು.ಇರೋ ಮೂರು ಜನಕ್ಕೆ ಎರಡು ಕೇಜಿ ಬೀಟ್ರೂಟ್ ತಂದಿಟ್ಟಿದಾರೆ ಬರೀ ಅದರದೇ ಪಲ್ಯ, ಸಾಂಬಾರು, ಗೊಜ್ಜು ಅಂತ ದಿನಾ ಮಾಡಿ ಹಾಕಬೇಕು. ಆವಾಗ ಬುದ್ದಿ ಬರುತ್ತೆ ಅಂದುಕೊಂಡು, ಅಡುಗೆ ಮನೆ ಕಡೆ ನೆಡೆದಳು.
ವಾಣಿ ಗ್ರುಹಿಣಿ ಮ್ ಸ್ ಸಿ ಮಡಿದಾಳೆ ಗಂಡ ಆರ್ ಬಿ ಐ ನಲ್ಲಿ ಮ್ಯಾನೇಜರ್. ದೊಡ್ಡ ಬ್ಯಾಂಕು, ದೊಡ್ಡ ಕೆಲಸ, ದೊಡ್ಡ ಸಂಬಳ. ಇವರಿಗೆ ಒಬ್ಬನೇ ಮಗ ರಾಘು. ವಾಣಿಗೆ ಅಮ್ಮ ತನ್ನ ಜೊತೇಲಿ ಇರಲಿ ಅನ್ನೋ ಆಸೆ ಆದರೆ ಅವಳ ಅಮ್ಮ ಮಾತ್ರ ತನ್ನ ಹಳ್ಳಿ ಮನೆಯೇ ಸ್ವರ್ಗವೆಂದುಕೊಂಡಾಕೆ. ಬೇಜಾರಾದಾಗ ವಾಣಿ ಮನೇಲಿ ಸ್ವಲ್ಪ ದಿನ ಇನ್ನೊಂದು ಸ್ವಲ್ಪ ದಿನ ವಾಣಿ ಅಕ್ಕ ವೀಣನ ಮನೇಲಿರ್ತಾರೆ.
ವಸುದಕ್ಕನ ಮದುವೆ ದಿನದ ಚಿತ್ರ ಇನ್ನೂ ಕಣ್ಣಲ್ಲಿ ಕಟ್ಟಿದಂತಿದೆ ಅವಳ ಅಮ್ಮ ಸತ್ತ ಮೇಲಲ್ಲವೆ ನಮ್ಮಮ್ಮ ಎರಡನೇ ಹೆಂಡತಿಯಾಗಿ ಆ ಮನೆ ಸೇರಿದ್ದು. ಅವಳೂ 'ಅಮ್ಮ' ಎಂದೇ ಕರೆಯುತ್ತಿದ್ದಳು ಆದರೆ ಅತ್ತೆ ,ಅಜ್ಜಿ, ಎಲ್ಲರೂ ಸೇರಿಕೊಂಡು ಅವಳ ಮದುವೆಯ ಯಾವ ಕೆಲಸಕ್ಕೂ ಕರೆಯದೆ ದೂರ ಇಟ್ಟಿದ್ದರು. ಮದುವೆಗೆ ಕರೆಯುವ ಯೋಚನೆಯನ್ನೂ ಮಾಡಿರಲಿಲ್ಲ ಅವರು ಅವಳ ಮದುವೆಯ ಓಲಗದ ಸದ್ದು ಬಸ್ಸ್ಟಾಂಡಿನಲ್ಲಿ ಮಂಗಳಜ್ಜಿ ಮನೆಗೆ ಹೋಗಲು ಬಸ್ಸಿಗೆ ಕಾಯುತ್ತ ಕುಳಿತಿದ್ದ ನಮಗೆ ಕೇಳಿಸುತ್ತಿತ್ತು. ನಾನು ಜೋರಾಗಿ ಅಳುತ್ತಿದ್ದೆ, ನನಗಿಂತ ಎರಡೇ ವರ್ಷಕ್ಕೆ ದೊಡ್ಡವಳಾದ ವೀಣ ವಯಸ್ಸಿಗೆ ಮೀರಿದ ಅರಿವನ್ನು ಮುಖದಲ್ಲಿ ಹೊತ್ತು ಮೌನವಾಗಿ ಕುಳಿತಿದ್ದಳು.ಅಮ್ಮನ ಕಣ್ಣು ಮತ್ತದೇ ಶೂನ್ಯದೆಡೆಗೆ...
ಗಂಗಜ್ಜಿ ಹೆಸರೇ ಒಂದು ನಡುಕ ಇಡೀ ಊರಿಗೆ ಊರೇ ಹೆದರುತ್ತಿತ್ತು ಈ ಹೆಸರಿಗೆ. ಗಂಗಜ್ಜಿಯಂತಹ ಅತ್ತೆ ಸಿಗುತ್ತಳೆ ಅಂತ ಗೊತ್ತಿದ್ದರೂ ಮಂಗಳಜ್ಜಿ ತನ್ನ ಪ್ರೀತಿಯ ಕೊನೇ ಮಗಳನ್ನು ಹೇಗೆ ಅವರ ಮನೆಗೆ ಕೊಟ್ಟರು ಅದೂ ಎರಡನೇ ಸಂಭಂದಕ್ಕೆ? ಶ್ರೀಮಂತರ ಮನೆ ಅಂತಲ? ಸೆರೆಮನೆ ಆದರೂ ಪರವಾಗಿಲ್ಲ ಬಂಗಾರದ್ದಲ್ಲವ ಅನ್ನೋ ಸ್ವಭಾವವ?
ನಿಮ್ಮ ಅಪ್ಪ ಎಂದರೆ ಗಂಡು ಗಂಡು ದೊಡ್ಡಪ್ಪ ಯಾವುದ್ದಕ್ಕೂ ಲಾಯಕ್ಕಿಲ್ಲ ಅನ್ನುತ್ತಿದ್ದರು ಊರಿನವರು ಯಾವುದೇ ಇತಿಮಿತಿ ಇಲ್ಲದೆ ಖರ್ಚು ಮಾಡುತ್ತಿದ್ದರಂತೆ ಅಪ್ಪ. ಗಂಗಜ್ಜಿಯಂತಹ ಗಂಗಜ್ಜಿ ಅಪ್ಪನಿಗೆ ಹೆದರುತ್ತ್ಹಿದ್ದಳಂತೆ.ತನಗೆ ಕಿಂಚಿತ್ತೂ ಹೆದರದ ಬಿಟ್ಟರೆ ತನ್ನನ್ನೇ ಹುರಿದು ತಿನ್ನುವಂತ ತನ್ನ ಮಗನ ಮೇಲೆ ಗಂಗಜ್ಜಿಗೆ ಅಸಾದ್ಯ ಸಿಟ್ಟು.
ಅವಳೇ ಅಪ್ಪನ ಮೊದಲನೇ ಹೆಂಡತಿಯನ್ನು ಸಾಯಿಸಿದ್ದು, ಆಮೇಲೆ ಅಪ್ಪನನ್ನೂ ಕೊಂದಳು. ನಾನು ಹುಟ್ಟಿದಾಗ ತಂದೆಗೆ ಆಗದ ನಕ್ಷತ್ರದಲ್ಲಿ ಹುಟ್ಟಿದಾಳೆ ಸಾಯಿಸಿಬಿಡಿ ಎಂದು ನನ್ನ ಕೊಲ್ಲಲು ಮಂಗಳಜ್ಜಿಯ ಮನೆಯವರೆಗೂ ಬಂದಿದ್ದಳಂತೆ. ಅಕ್ಕನ ಬಾಯಿಗೆ ಭಾರದ ಕಬ್ಬಿಣ ಹಾಕಿ ಅವಳು ಸಾಯುವ ಸ್ಥಿತಿ ತಲುಪಿ ಒದ್ದಾಡುತ್ತಿದ್ದರೂ ಸುಮ್ಮನೇ ಯಾವುದೇ ಭಾವನೆಗಳಿಲ್ಲದೆ ನೋಡುತ್ತಿದ್ದ ಅಜ್ಜಿಯನ್ನು ಕಂಡು ಮಂಜ ದಂಗಾಗಿದ್ದನಂತೆ, ಅವನು ಅ ದಿನ ಅಲ್ಲಿಲ್ಲದಿದ್ದರೆ ಅಕ್ಕ ಎಂದು ಕರೆಯಲೂ ಯಾರಿರುತ್ತಿರಲಿಲ್ಲ. ಅಜ್ಜಿಗೆ ಕೊಲೆ ಮಾಡುವುದು ಒಂದು fancy ಆಗಿಬಿಟ್ಟಿತ್ತಾ?
"ನಿಮ್ಮಪ್ಪ ರಾಜಪ್ಪ ಹೆಸರಿಗೆ ತಕ್ಕ ಹಾಗೆ ರಾಜನಂತೆ ಇರುತ್ತಿದ್ದ. ಬಿಳೀ ಪಂಚೆ, ಬಿಳೀ ಶರಟು, ಕೈಯಲ್ಲಿ ಪುಸ್ತಕ ಮತ್ತು ಪಂಚೆಯ ಗಂಟಿಗೆ ಸಿಗಿಸಿದ ಮಚ್ಚು ಅವನು ತೋಟದ ಕಡೆಗೆ ಹೊರಟ ಅಂದರೆ ಆಳುಗಳೆಲ್ಲಾ ಚುರುಕಾಗಿ ಕೆಲಸ ಮಾಡಲು ಶುರು ಮಾಡುತ್ತಿದ್ದರು. ಅವ್ನ ಗತ್ತೇ ಗತ್ತು"
ಎಂದು ಹೇಳುತ್ತಿದ್ದ ಪಕ್ಕದ ಮನೆ ಪದ್ಮಜ್ಜಿಯ ಮಾತುಗಳಿಂದ ಅಪ್ಪ ಹೇಗಿದ್ದಿರಬಹುದು ಎಂದು ತುಂಬ ಸಾರಿ ಕಲ್ಪಿಸಿಕೊಂಡಿದ್ದೇನೆ... ಅಪ್ಪ ಇರಬೇಕಿತ್ತು.....
ಆಸ್ತಿ ಭಾಗ ಮಾಡೋವಾಗ ಮಾವ ಸಹಾಯಕ್ಕೆ ಬಂದ್ದಿದ್ದ ಅನ್ನೋದೆನೋ ನಿಜ, ಆದರೆ ಆಮೇಲೆ ಅವನೂ ಅತ್ತೆಯೂ ಸೇರಿಕೊಂಡು ಗುಕ್ಕುಗುಕ್ಕಾಗಿ ನಮ್ಮ ಆಸ್ತಿಯನ್ನು ತಿನ್ನುತ್ತಿದ್ದುದು ಗೊತ್ತಾಗುತ್ತಿದ್ದರೂ, ಅಮ್ಮ ಏಕೆ ಸುಮ್ಮನಿದ್ದಳು ?ಗೊತ್ತಾಗುವುದಿಲ್ಲ."ಗಂಡು ದಿಕ್ಕಿಲ್ಲದ ಮನೆ ಅವನಾದರೂ ಒತ್ತಾಸೆಗೆ ಇರಲಿ ಅಂತ ಸುಮ್ಮನಿದ್ದೆ" ಅಂದಿದ್ದಳು ಬೇರೆ ಯಾವ ಕಾರಣವೂ ಹೊಳೆಯದೆ ನಿಜವಾದ ವಿಶಯವೆಂದರೆ ತನ್ನ ಅಣ್ಣನೆಂದರೆ ಸುಮ್ಮನೆ ಪ್ರೀತಿ ಅವಳಿಗೆ.ಅಣ್ಣನಿಗೆ ಏನೂ ಗೊತ್ತಗಲ್ಲ ಅತ್ತಿಗೆ ಹೇಳಿದಂಗೆ ಕುಣಿತಾನೆ ಪಾಪ ಅನ್ನೊ ನಂಬಿಕೆ ಅವಳದ್ದು ಆದರೆ ಮಾವ ಎಂಥವನೆಂದು ನನಗೆ ಗೊತ್ತಾಗುತ್ತಿತ್ತು ನಾನು ಇವತ್ತಿಗೂ ಮಾವನನ್ನು ಮಾತಾಡಿಸುತ್ತಿಲ್ಲ....
ಅಪ್ಪನ ಜೊತೆಯ ಐದು ವರ್ಷದ ದಾಂಪತ್ಯ ಜೀವನದಲ್ಲಿ ನೀನು ಸುಖವಾಗಿದ್ದೆಯ ಎಂದು ಕೇಳಿದರೆ ಅಮ್ಮ ಇಂದಿಗೂ ಉತ್ತರಿಸುವುದಿಲ್ಲ ಉತ್ತರ ಕೊಡದೇ ಇರುವುದೂ ಒಂದು ಉತ್ತರವೇ.. ಆದರೆ ನನಗೂ ಅಮ್ಮನ ಉತ್ತರ ಬೇಕಿಲ್ಲ.. ಈ ಪ್ರಶ್ನೆ ಕೇಳಿದ ನಂತರ ಮೌನವಾಗುವ ಅಮ್ಮ, ಇಪ್ಪತ್ತು ಇಪ್ಪತ್ತೆರೆಡು ವರ್ಷ ಹಿಂದಕ್ಕೆ ಹೋಗುವ ಅವಳ ಯೋಚನೆ, ಅವಳ ಮೌನದಿಂದ ವಿಸ್ತರಿತವಾಗುವ ನನ್ನ ಕಲ್ಪನೆ ಇಷ್ಟ ನನಗೆ ಎಂದುಕೊಳುತ್ತಾ ಸಾರು ಕುದಿಯುವುದನ್ನೆ ನೋಡುತ್ತಿದ್ದಳು.
ನಮ್ಮಿಬ್ಬರ ಓದಿನ ಪ್ರತಿ ಹಂತದಲ್ಲೂ ಅಮ್ಮ ಖುಷಿಯಾಗಿ ಪಾಲ್ಗೊಂಡಿದ್ದಾಳೆ. ಅಕ್ಕನ ಮದುವೆಯಲ್ಲೂ ಅವಳ ಕಣ್ಗಳು ಖುಷಿಯಿಂದ ಅರಳಿದ್ದವು, ಆದರೆ ನನ್ನ ಮದುವೆಯ ಸಿದ್ದತೆಗಳನ್ನು ಆಸಕ್ತಿಯಿಂದ ಮಾಡುತ್ತಿದ್ದವಳು ಮದುವೆಯ ದಿನ ಸುಮ್ಮನಾಗಿಬಿಟ್ಟಿದ್ದಳು. ಯಾವುದರಲ್ಲೂ ಆಸಕ್ತಿ ಇರದ ಹಾಗೆ ಇದ್ದಳು,.. ಕಡೇ ಪಕ್ಷ ನನ್ನ ಕಳಿಸಿಕೊಡುವಾಗ ಕೂಡ ಅಳಲಿಲ್ಲ ಕಣ್ಣು ಶೂನ್ಯದೆಡೆಗೆ...
ಅಮ್ಮ ಯಾಕವತ್ತು ಹಾಗಿದ್ದೆ ಅಂದರೆ ತುಂಬ ಹೊತ್ತಿನ ನಂತರ ಇದಕ್ಕೂ ಉತ್ತರ ಕೊಡುವುದಿಲ್ಲವೇನೋ ಅಂದುಕೊಳುತ್ತಿದ್ದಾಗ ನಿಧಾನವಾಗಿ ಹೆಳಿದಳು
"ನಿಮ್ಮಪ್ಪ ಇದ್ದಾಗ ಅಂಥವರನ್ನು ಅರ್ಥಮಾಡಿಕೊಳ್ಳಬೇಕೆಂಬ ಕನಸಿತ್ತು, ಅವರು ಸತ್ತಾಗ ಎಲ್ಲ ಶೂನ್ಯ ಅನ್ನಿಸುತ್ತಿತ್ತು. ಆದ್ದರೆ ನಿಮ್ಮನ್ನು ಚೆನ್ನಾಗಿ ಓದಿಸುವ ಕನಸು ಕಟ್ಟಿಕೊಂಡೆ. ನಿಮ್ಮ ಓದಾದಮೇಲೆ ನಿಮ್ಮಗಳ ಮದುವೆಯ ಕನಸು, ನಿನ್ನ ಮದುವೆಯಾದ ಮೇಲೆ ಮತ್ತೆ ಶೂನ್ಯಕ್ಕೆ ಹಿಂತಿರುಗಿದೆ. ನಿಮಗಾಗಿ ನನ್ನ ಜೀವನ ಮುಡುಪಿಟ್ಟೆ ಅನ್ನೊ ಬೊಗಳೆ ಮಾತು ಹೇಳೊಲ್ಲ ನಾನು. ಬದುಕೊಕ್ಕೆ ಕನಸು ಬೆಕಿತ್ತು. ನಿಮ್ಮಗಳ ಭವಿಷ್ಯದ ಕನಸು, ಸುಖದ ಕನಸು, ನಿಮ್ಮ ಸುಖ-ದುಃಖ, ಆಸೆ, ಅಚ್ಚರಿ, ಅಳು, ಪ್ರತಿಯೊಂದನ್ನೂ ನನ್ನ ಜೊತೆಗೇ ಹಂಚಿಕೊಳ್ಳುತ್ತಿದ್ದಿರಿ 'ನನ್ನ ಬಿಟ್ಟರೆ ನಿಮಗೆ ಇನ್ಯಾರೂ ಇಲ್ಲ' ಅನ್ನೋಭಾವನೆಯೇ ಖುಷಿ ಕೊಡುತ್ತಿತ್ತು ನಂಗೆ. ಆದರೆ ನೀನು ಮದುವೆಯಾಗಿ ಹೋದಾಗ ಎಲ್ಲ ಕಳಕೊಂಡ ಭಾವ ನಿನ್ನ ಮದುವೆ ಸಮಯದಲ್ಲಿ ಕವಿದ ಶೂನ್ಯ ಭಯಂಕರವಾದದ್ದು ನನಗೆ ಬದುಕೋಕ್ಕೆ ಬೇರಾವ ಕನಸುಗಳೂ ಇಲ್ಲ ನನ್ನ ಮೇಲೆ ಯಾರೂ ಅವಲಂಬಿತವಾಗಿಲ್ಲ ಅನ್ನೊ ವಾಸ್ತವ ಕಣ್ಣೆದುರಿಗೆ.....
ಅಂದಿದ್ದಳು ಅಂದುಕೊಳ್ಳುತ್ತಿದ್ದಾಗ ರಾಘವ ಧಡಾರಂತ ಬಾಗಿಲು ತಳ್ಳಿಕೊಂಡು ಒಳಗೆ ಬಂದು ಶೂಸು ಬಿಚ್ಚುತ್ತಾ ಅವನ ಸ್ಕೂಲಿನಲ್ಲಿ ನೆಡೆದುದ್ದನ್ನು ವರದಿ ಒಪ್ಪಿಸಲು ಶುರುಮಾಡಿದಾಗ, ಅವಳು ತನ್ನ ಆಲೊಚನೆಯ ಸರಣಿಯಿಂದ ಹೊರಬಂದು ಅವನ ಮುದ್ದು ಮಾತುಗಳಲ್ಲಿ ಮುಳುಗಿಹೋದಳು.
"ಈ ಮೂರು ವರ್ಷದ ಮಗೀಗೆ ನಿನ್ ಅಪ್ಪಜಿ ಸತ್ತ್ ಹೋಗೈತೆ ಅಂತ ಹೇಗ್ ಹೇಳಾದು?"
ಅಂತ ಅಜ್ಜಿ ದೊಡ್ಡ್ ದನಿ ಮಾಡಿ ಅಳೋಕ್ಕೆ ಶುರು ಮಾಡಿದ್ಲು ನನಗೆ ಭಯ ಆಗಿ ನಾನು ಮನೆಯಾಳು ಮಂಜನ ಹತ್ರ ಓಡೋಗಿದ್ದೆ
ಹ್ಮ್ಮ್ಮ್ಮ್ ಮ್ ಮ್... ಅಂತ ದೊಡ್ಡ ನಿಟ್ಟುಸಿರುಬಿಟ್ಟು ನಾನ್ಯಾವಾಗಲೂ ಇಷ್ಟೇ ನೆನಪುಗಳಲ್ಲೇ ಮುಳುಗಿ ಹೋಗಿರ್ತೀನಿ ಅವರು ಬರೋಷ್ಟೊತ್ತಿಗೆ ಬೀಟ್ರೂಟ್ ಪಲ್ಯ ಮಾಡಿಟ್ಟಿರಬೇಕು.ಇರೋ ಮೂರು ಜನಕ್ಕೆ ಎರಡು ಕೇಜಿ ಬೀಟ್ರೂಟ್ ತಂದಿಟ್ಟಿದಾರೆ ಬರೀ ಅದರದೇ ಪಲ್ಯ, ಸಾಂಬಾರು, ಗೊಜ್ಜು ಅಂತ ದಿನಾ ಮಾಡಿ ಹಾಕಬೇಕು. ಆವಾಗ ಬುದ್ದಿ ಬರುತ್ತೆ ಅಂದುಕೊಂಡು, ಅಡುಗೆ ಮನೆ ಕಡೆ ನೆಡೆದಳು.
ವಾಣಿ ಗ್ರುಹಿಣಿ ಮ್ ಸ್ ಸಿ ಮಡಿದಾಳೆ ಗಂಡ ಆರ್ ಬಿ ಐ ನಲ್ಲಿ ಮ್ಯಾನೇಜರ್. ದೊಡ್ಡ ಬ್ಯಾಂಕು, ದೊಡ್ಡ ಕೆಲಸ, ದೊಡ್ಡ ಸಂಬಳ. ಇವರಿಗೆ ಒಬ್ಬನೇ ಮಗ ರಾಘು. ವಾಣಿಗೆ ಅಮ್ಮ ತನ್ನ ಜೊತೇಲಿ ಇರಲಿ ಅನ್ನೋ ಆಸೆ ಆದರೆ ಅವಳ ಅಮ್ಮ ಮಾತ್ರ ತನ್ನ ಹಳ್ಳಿ ಮನೆಯೇ ಸ್ವರ್ಗವೆಂದುಕೊಂಡಾಕೆ. ಬೇಜಾರಾದಾಗ ವಾಣಿ ಮನೇಲಿ ಸ್ವಲ್ಪ ದಿನ ಇನ್ನೊಂದು ಸ್ವಲ್ಪ ದಿನ ವಾಣಿ ಅಕ್ಕ ವೀಣನ ಮನೇಲಿರ್ತಾರೆ.
ವಸುದಕ್ಕನ ಮದುವೆ ದಿನದ ಚಿತ್ರ ಇನ್ನೂ ಕಣ್ಣಲ್ಲಿ ಕಟ್ಟಿದಂತಿದೆ ಅವಳ ಅಮ್ಮ ಸತ್ತ ಮೇಲಲ್ಲವೆ ನಮ್ಮಮ್ಮ ಎರಡನೇ ಹೆಂಡತಿಯಾಗಿ ಆ ಮನೆ ಸೇರಿದ್ದು. ಅವಳೂ 'ಅಮ್ಮ' ಎಂದೇ ಕರೆಯುತ್ತಿದ್ದಳು ಆದರೆ ಅತ್ತೆ ,ಅಜ್ಜಿ, ಎಲ್ಲರೂ ಸೇರಿಕೊಂಡು ಅವಳ ಮದುವೆಯ ಯಾವ ಕೆಲಸಕ್ಕೂ ಕರೆಯದೆ ದೂರ ಇಟ್ಟಿದ್ದರು. ಮದುವೆಗೆ ಕರೆಯುವ ಯೋಚನೆಯನ್ನೂ ಮಾಡಿರಲಿಲ್ಲ ಅವರು ಅವಳ ಮದುವೆಯ ಓಲಗದ ಸದ್ದು ಬಸ್ಸ್ಟಾಂಡಿನಲ್ಲಿ ಮಂಗಳಜ್ಜಿ ಮನೆಗೆ ಹೋಗಲು ಬಸ್ಸಿಗೆ ಕಾಯುತ್ತ ಕುಳಿತಿದ್ದ ನಮಗೆ ಕೇಳಿಸುತ್ತಿತ್ತು. ನಾನು ಜೋರಾಗಿ ಅಳುತ್ತಿದ್ದೆ, ನನಗಿಂತ ಎರಡೇ ವರ್ಷಕ್ಕೆ ದೊಡ್ಡವಳಾದ ವೀಣ ವಯಸ್ಸಿಗೆ ಮೀರಿದ ಅರಿವನ್ನು ಮುಖದಲ್ಲಿ ಹೊತ್ತು ಮೌನವಾಗಿ ಕುಳಿತಿದ್ದಳು.ಅಮ್ಮನ ಕಣ್ಣು ಮತ್ತದೇ ಶೂನ್ಯದೆಡೆಗೆ...
ಗಂಗಜ್ಜಿ ಹೆಸರೇ ಒಂದು ನಡುಕ ಇಡೀ ಊರಿಗೆ ಊರೇ ಹೆದರುತ್ತಿತ್ತು ಈ ಹೆಸರಿಗೆ. ಗಂಗಜ್ಜಿಯಂತಹ ಅತ್ತೆ ಸಿಗುತ್ತಳೆ ಅಂತ ಗೊತ್ತಿದ್ದರೂ ಮಂಗಳಜ್ಜಿ ತನ್ನ ಪ್ರೀತಿಯ ಕೊನೇ ಮಗಳನ್ನು ಹೇಗೆ ಅವರ ಮನೆಗೆ ಕೊಟ್ಟರು ಅದೂ ಎರಡನೇ ಸಂಭಂದಕ್ಕೆ? ಶ್ರೀಮಂತರ ಮನೆ ಅಂತಲ? ಸೆರೆಮನೆ ಆದರೂ ಪರವಾಗಿಲ್ಲ ಬಂಗಾರದ್ದಲ್ಲವ ಅನ್ನೋ ಸ್ವಭಾವವ?
ನಿಮ್ಮ ಅಪ್ಪ ಎಂದರೆ ಗಂಡು ಗಂಡು ದೊಡ್ಡಪ್ಪ ಯಾವುದ್ದಕ್ಕೂ ಲಾಯಕ್ಕಿಲ್ಲ ಅನ್ನುತ್ತಿದ್ದರು ಊರಿನವರು ಯಾವುದೇ ಇತಿಮಿತಿ ಇಲ್ಲದೆ ಖರ್ಚು ಮಾಡುತ್ತಿದ್ದರಂತೆ ಅಪ್ಪ. ಗಂಗಜ್ಜಿಯಂತಹ ಗಂಗಜ್ಜಿ ಅಪ್ಪನಿಗೆ ಹೆದರುತ್ತ್ಹಿದ್ದಳಂತೆ.ತನಗೆ ಕಿಂಚಿತ್ತೂ ಹೆದರದ ಬಿಟ್ಟರೆ ತನ್ನನ್ನೇ ಹುರಿದು ತಿನ್ನುವಂತ ತನ್ನ ಮಗನ ಮೇಲೆ ಗಂಗಜ್ಜಿಗೆ ಅಸಾದ್ಯ ಸಿಟ್ಟು.
ಅವಳೇ ಅಪ್ಪನ ಮೊದಲನೇ ಹೆಂಡತಿಯನ್ನು ಸಾಯಿಸಿದ್ದು, ಆಮೇಲೆ ಅಪ್ಪನನ್ನೂ ಕೊಂದಳು. ನಾನು ಹುಟ್ಟಿದಾಗ ತಂದೆಗೆ ಆಗದ ನಕ್ಷತ್ರದಲ್ಲಿ ಹುಟ್ಟಿದಾಳೆ ಸಾಯಿಸಿಬಿಡಿ ಎಂದು ನನ್ನ ಕೊಲ್ಲಲು ಮಂಗಳಜ್ಜಿಯ ಮನೆಯವರೆಗೂ ಬಂದಿದ್ದಳಂತೆ. ಅಕ್ಕನ ಬಾಯಿಗೆ ಭಾರದ ಕಬ್ಬಿಣ ಹಾಕಿ ಅವಳು ಸಾಯುವ ಸ್ಥಿತಿ ತಲುಪಿ ಒದ್ದಾಡುತ್ತಿದ್ದರೂ ಸುಮ್ಮನೇ ಯಾವುದೇ ಭಾವನೆಗಳಿಲ್ಲದೆ ನೋಡುತ್ತಿದ್ದ ಅಜ್ಜಿಯನ್ನು ಕಂಡು ಮಂಜ ದಂಗಾಗಿದ್ದನಂತೆ, ಅವನು ಅ ದಿನ ಅಲ್ಲಿಲ್ಲದಿದ್ದರೆ ಅಕ್ಕ ಎಂದು ಕರೆಯಲೂ ಯಾರಿರುತ್ತಿರಲಿಲ್ಲ. ಅಜ್ಜಿಗೆ ಕೊಲೆ ಮಾಡುವುದು ಒಂದು fancy ಆಗಿಬಿಟ್ಟಿತ್ತಾ?
"ನಿಮ್ಮಪ್ಪ ರಾಜಪ್ಪ ಹೆಸರಿಗೆ ತಕ್ಕ ಹಾಗೆ ರಾಜನಂತೆ ಇರುತ್ತಿದ್ದ. ಬಿಳೀ ಪಂಚೆ, ಬಿಳೀ ಶರಟು, ಕೈಯಲ್ಲಿ ಪುಸ್ತಕ ಮತ್ತು ಪಂಚೆಯ ಗಂಟಿಗೆ ಸಿಗಿಸಿದ ಮಚ್ಚು ಅವನು ತೋಟದ ಕಡೆಗೆ ಹೊರಟ ಅಂದರೆ ಆಳುಗಳೆಲ್ಲಾ ಚುರುಕಾಗಿ ಕೆಲಸ ಮಾಡಲು ಶುರು ಮಾಡುತ್ತಿದ್ದರು. ಅವ್ನ ಗತ್ತೇ ಗತ್ತು"
ಎಂದು ಹೇಳುತ್ತಿದ್ದ ಪಕ್ಕದ ಮನೆ ಪದ್ಮಜ್ಜಿಯ ಮಾತುಗಳಿಂದ ಅಪ್ಪ ಹೇಗಿದ್ದಿರಬಹುದು ಎಂದು ತುಂಬ ಸಾರಿ ಕಲ್ಪಿಸಿಕೊಂಡಿದ್ದೇನೆ... ಅಪ್ಪ ಇರಬೇಕಿತ್ತು.....
ಆಸ್ತಿ ಭಾಗ ಮಾಡೋವಾಗ ಮಾವ ಸಹಾಯಕ್ಕೆ ಬಂದ್ದಿದ್ದ ಅನ್ನೋದೆನೋ ನಿಜ, ಆದರೆ ಆಮೇಲೆ ಅವನೂ ಅತ್ತೆಯೂ ಸೇರಿಕೊಂಡು ಗುಕ್ಕುಗುಕ್ಕಾಗಿ ನಮ್ಮ ಆಸ್ತಿಯನ್ನು ತಿನ್ನುತ್ತಿದ್ದುದು ಗೊತ್ತಾಗುತ್ತಿದ್ದರೂ, ಅಮ್ಮ ಏಕೆ ಸುಮ್ಮನಿದ್ದಳು ?ಗೊತ್ತಾಗುವುದಿಲ್ಲ."ಗಂಡು ದಿಕ್ಕಿಲ್ಲದ ಮನೆ ಅವನಾದರೂ ಒತ್ತಾಸೆಗೆ ಇರಲಿ ಅಂತ ಸುಮ್ಮನಿದ್ದೆ" ಅಂದಿದ್ದಳು ಬೇರೆ ಯಾವ ಕಾರಣವೂ ಹೊಳೆಯದೆ ನಿಜವಾದ ವಿಶಯವೆಂದರೆ ತನ್ನ ಅಣ್ಣನೆಂದರೆ ಸುಮ್ಮನೆ ಪ್ರೀತಿ ಅವಳಿಗೆ.ಅಣ್ಣನಿಗೆ ಏನೂ ಗೊತ್ತಗಲ್ಲ ಅತ್ತಿಗೆ ಹೇಳಿದಂಗೆ ಕುಣಿತಾನೆ ಪಾಪ ಅನ್ನೊ ನಂಬಿಕೆ ಅವಳದ್ದು ಆದರೆ ಮಾವ ಎಂಥವನೆಂದು ನನಗೆ ಗೊತ್ತಾಗುತ್ತಿತ್ತು ನಾನು ಇವತ್ತಿಗೂ ಮಾವನನ್ನು ಮಾತಾಡಿಸುತ್ತಿಲ್ಲ....
ಅಪ್ಪನ ಜೊತೆಯ ಐದು ವರ್ಷದ ದಾಂಪತ್ಯ ಜೀವನದಲ್ಲಿ ನೀನು ಸುಖವಾಗಿದ್ದೆಯ ಎಂದು ಕೇಳಿದರೆ ಅಮ್ಮ ಇಂದಿಗೂ ಉತ್ತರಿಸುವುದಿಲ್ಲ ಉತ್ತರ ಕೊಡದೇ ಇರುವುದೂ ಒಂದು ಉತ್ತರವೇ.. ಆದರೆ ನನಗೂ ಅಮ್ಮನ ಉತ್ತರ ಬೇಕಿಲ್ಲ.. ಈ ಪ್ರಶ್ನೆ ಕೇಳಿದ ನಂತರ ಮೌನವಾಗುವ ಅಮ್ಮ, ಇಪ್ಪತ್ತು ಇಪ್ಪತ್ತೆರೆಡು ವರ್ಷ ಹಿಂದಕ್ಕೆ ಹೋಗುವ ಅವಳ ಯೋಚನೆ, ಅವಳ ಮೌನದಿಂದ ವಿಸ್ತರಿತವಾಗುವ ನನ್ನ ಕಲ್ಪನೆ ಇಷ್ಟ ನನಗೆ ಎಂದುಕೊಳುತ್ತಾ ಸಾರು ಕುದಿಯುವುದನ್ನೆ ನೋಡುತ್ತಿದ್ದಳು.
ನಮ್ಮಿಬ್ಬರ ಓದಿನ ಪ್ರತಿ ಹಂತದಲ್ಲೂ ಅಮ್ಮ ಖುಷಿಯಾಗಿ ಪಾಲ್ಗೊಂಡಿದ್ದಾಳೆ. ಅಕ್ಕನ ಮದುವೆಯಲ್ಲೂ ಅವಳ ಕಣ್ಗಳು ಖುಷಿಯಿಂದ ಅರಳಿದ್ದವು, ಆದರೆ ನನ್ನ ಮದುವೆಯ ಸಿದ್ದತೆಗಳನ್ನು ಆಸಕ್ತಿಯಿಂದ ಮಾಡುತ್ತಿದ್ದವಳು ಮದುವೆಯ ದಿನ ಸುಮ್ಮನಾಗಿಬಿಟ್ಟಿದ್ದಳು. ಯಾವುದರಲ್ಲೂ ಆಸಕ್ತಿ ಇರದ ಹಾಗೆ ಇದ್ದಳು,.. ಕಡೇ ಪಕ್ಷ ನನ್ನ ಕಳಿಸಿಕೊಡುವಾಗ ಕೂಡ ಅಳಲಿಲ್ಲ ಕಣ್ಣು ಶೂನ್ಯದೆಡೆಗೆ...
ಅಮ್ಮ ಯಾಕವತ್ತು ಹಾಗಿದ್ದೆ ಅಂದರೆ ತುಂಬ ಹೊತ್ತಿನ ನಂತರ ಇದಕ್ಕೂ ಉತ್ತರ ಕೊಡುವುದಿಲ್ಲವೇನೋ ಅಂದುಕೊಳುತ್ತಿದ್ದಾಗ ನಿಧಾನವಾಗಿ ಹೆಳಿದಳು
"ನಿಮ್ಮಪ್ಪ ಇದ್ದಾಗ ಅಂಥವರನ್ನು ಅರ್ಥಮಾಡಿಕೊಳ್ಳಬೇಕೆಂಬ ಕನಸಿತ್ತು, ಅವರು ಸತ್ತಾಗ ಎಲ್ಲ ಶೂನ್ಯ ಅನ್ನಿಸುತ್ತಿತ್ತು. ಆದ್ದರೆ ನಿಮ್ಮನ್ನು ಚೆನ್ನಾಗಿ ಓದಿಸುವ ಕನಸು ಕಟ್ಟಿಕೊಂಡೆ. ನಿಮ್ಮ ಓದಾದಮೇಲೆ ನಿಮ್ಮಗಳ ಮದುವೆಯ ಕನಸು, ನಿನ್ನ ಮದುವೆಯಾದ ಮೇಲೆ ಮತ್ತೆ ಶೂನ್ಯಕ್ಕೆ ಹಿಂತಿರುಗಿದೆ. ನಿಮಗಾಗಿ ನನ್ನ ಜೀವನ ಮುಡುಪಿಟ್ಟೆ ಅನ್ನೊ ಬೊಗಳೆ ಮಾತು ಹೇಳೊಲ್ಲ ನಾನು. ಬದುಕೊಕ್ಕೆ ಕನಸು ಬೆಕಿತ್ತು. ನಿಮ್ಮಗಳ ಭವಿಷ್ಯದ ಕನಸು, ಸುಖದ ಕನಸು, ನಿಮ್ಮ ಸುಖ-ದುಃಖ, ಆಸೆ, ಅಚ್ಚರಿ, ಅಳು, ಪ್ರತಿಯೊಂದನ್ನೂ ನನ್ನ ಜೊತೆಗೇ ಹಂಚಿಕೊಳ್ಳುತ್ತಿದ್ದಿರಿ 'ನನ್ನ ಬಿಟ್ಟರೆ ನಿಮಗೆ ಇನ್ಯಾರೂ ಇಲ್ಲ' ಅನ್ನೋಭಾವನೆಯೇ ಖುಷಿ ಕೊಡುತ್ತಿತ್ತು ನಂಗೆ. ಆದರೆ ನೀನು ಮದುವೆಯಾಗಿ ಹೋದಾಗ ಎಲ್ಲ ಕಳಕೊಂಡ ಭಾವ ನಿನ್ನ ಮದುವೆ ಸಮಯದಲ್ಲಿ ಕವಿದ ಶೂನ್ಯ ಭಯಂಕರವಾದದ್ದು ನನಗೆ ಬದುಕೋಕ್ಕೆ ಬೇರಾವ ಕನಸುಗಳೂ ಇಲ್ಲ ನನ್ನ ಮೇಲೆ ಯಾರೂ ಅವಲಂಬಿತವಾಗಿಲ್ಲ ಅನ್ನೊ ವಾಸ್ತವ ಕಣ್ಣೆದುರಿಗೆ.....
ಅಂದಿದ್ದಳು ಅಂದುಕೊಳ್ಳುತ್ತಿದ್ದಾಗ ರಾಘವ ಧಡಾರಂತ ಬಾಗಿಲು ತಳ್ಳಿಕೊಂಡು ಒಳಗೆ ಬಂದು ಶೂಸು ಬಿಚ್ಚುತ್ತಾ ಅವನ ಸ್ಕೂಲಿನಲ್ಲಿ ನೆಡೆದುದ್ದನ್ನು ವರದಿ ಒಪ್ಪಿಸಲು ಶುರುಮಾಡಿದಾಗ, ಅವಳು ತನ್ನ ಆಲೊಚನೆಯ ಸರಣಿಯಿಂದ ಹೊರಬಂದು ಅವನ ಮುದ್ದು ಮಾತುಗಳಲ್ಲಿ ಮುಳುಗಿಹೋದಳು.
Subscribe to:
Posts (Atom)