Wednesday, May 16, 2007

ಒಂದು ಆಲೋಚನೆ!!!!

ನಾನು ಎಷ್ಟೋ ಸಲ ಯೋಚಿಸಿದ್ದೀನಿ ಈ ಜಗಳಗಳು ಅಸಮಾಧಾನ ಯಾಕೆ ಉಂಟಾಗುತ್ತೆ? ಏಷ್ಟು ಚೆನ್ನಾಗಿರೋರು ಆಷ್ಟೆ ಕೆಟ್ಟಾದಾಗಿ ಯಾಕೆ ಜಗಳ ಆಡ್ತಾರೆ? ಒಬ್ಬರಿಗೊಬ್ಬರು ಸ್ನೇಹದಿಂದ, ಪ್ರೀತಿಯಿಂದ ಇರೋಕೆ ಸಾದ್ಯನೇ ಇಲ್ಲವ?...

ಸಾಮನ್ಯವಾಗಿ ಇಬ್ಬರು ಜಗಳ ಆಡಿದ್ರೆ ಅವರಲ್ಲಿ ಒಬ್ಬರ ಸಣ್ಣತನದಿಂದ (ಅಥವಾ ಇಬ್ಬರದೂ ಇರಬಹುದು) ಅಥವಾ ತಪ್ಪು ತಿಳುವಳಿಕೆಯಿಂದ ಜಗಳ ಆಗಿರುತ್ತೆ.. ತಪ್ಪು ಗ್ರಹಿಕೆಯಿಂದ ಆಗಿರೋ ಜಗಳಗಳಿಗೆ ಸಮಾಧಾನ ಹುಡುಕಬಹುದು, ಆದರೆ ಈ ಸಣ್ಣತನಕ್ಕೆ ಏನು ಮಾಡೋದು?

ನಾನು ವಿಧ್ಯಾರ್ಥಿನಿಲಯದಲ್ಲಿ ಇರೋದ್ರಿಂದ ಸಣ್ಣತನಗಳ ಅನುಭವ ಚೆನ್ನಾಗಿ ಆಗಿದೆ. ಹುಡುಗೀರೆ ಹೀಗ? ಅಥವ ಹುಡುಗರಲ್ಲೂ ಹೀಗಾಗುತ್ತ? ಯಾಕೆ ಸಣ್ಣ ಪುಟ್ಟವಿಷಯಗಳನ್ನು ಹೀಗೆ ದೊಡ್ಡದು ಮಾಡಿ ಜಗಳ ಆಡ್ತಾರೆ? ಒಂದು ಕಡೆ ಮೂರು ಜನ ಇದ್ರು ಅಂತ ಇಟ್ಕೋಳ್ಳಿ.. ಅವರಲ್ಲಿ ಒಬ್ಬರು ಹೊರಗೆ ಹೋದ ತಕ್ಷಣ ಇನ್ನೊಬ್ಬರು ಅವರ ಬಗ್ಗೆ ಯಾಕೆ ಇಲ್ಲ ಸಲ್ಲದ ಮಾತಾಡಬೇಕು?ಯಾಕೆ ಒಬ್ಬರಿಗೊಬ್ಬರಿಗೆ ಪ್ರೀತಿ ಇರಲ್ಲ?ಮನೆಯವರು ಆಗಿದ್ರೆ ಚಿಕ್ಕ ಪುಟ್ಟ ತಪ್ಪುಗಳನ್ನ ಕ್ಷಮಿಸುತ್ತಿದ್ದರು ಅಲ್ಲವ? ನಮ್ಮ ಜೊತೆ ಇರುವವರು ಅವರ ಮನೆಯವರು ಅಲ್ಲ ಅಂದ ತಕ್ಷಣ ಯಾಕಿಷ್ಟು ಒರಟುತನ?

ಎಲ್ಲ ಹುಡುಗೀರು ಹೀಗೆ ಇರ್ತಾರೆ ಅಂತ ಅಲ್ಲ..ಆದ್ರೆ ಸ್ವಲ್ಪ ಜನ ಅಂತೂ ಹೀಗೆ ಇರ್ತಾರೆ..ನಿಜ ಹೇಳಬೇಕು ಅಂದ್ರೆ ಅವರು ಬೆಳೆದ ರೀತಿನೆ ಹಾಗಿರುತ್ತೆ, ಅವರ ಒರಟುತನ, ಅವರು ಸಂಸ್ಕೃತಿ ಇಲ್ಲದೆ ಬೆಳೆದ ರೀತಿ ಅಥವ ಚಿಕ್ಕವಯಸ್ಸಿನಿಂದ ಪ್ರೀತಿ ಸಿಗದೇ ಇರೋದು ಅಥವ ಇನ್ನು ಏನೇನೋ ಕಾರಣಗಳು ಅವರನ್ನ ಹಾಗೆ ಮಾಡಿರುತ್ತವೆ....

ಹೆಂಡತಿ ಗಂಡನನ್ನ, ಮಕ್ಕಳನ್ನ ಪ್ರೀತಿಸಬೇಕು. ಅತ್ತೆ, ಮಾವ, ನಾದೀನೀನ ದ್ವೇಶಿಸಬೇಕು ಅಂತ ಏನು ಇಲ್ಲವಲ್ಲ? ತಾಯಿ ಕೂಡ ಮಗನನ್ನ ಪ್ರೀತಿಸೋದು ಸೊಸೆಯನ್ನು ಗೋಳು ಹುಯ್ಕೋಳೊದು ಅಂತ ಏನು ಇಲ್ಲ?.. ಹೆಂಡತಿಗೆ ಗಂಡ ಮಾಡಿದ ತಪ್ಪು ಅಷ್ಟು ದೊಡ್ದದು ಅಂತ ಅನ್ನಿಸೊದಿಲ್ಲ; ಅನ್ನಿಸಿದರೂ ಅದನ್ನ ರಣರಂಪ ಮಾಡೋಲ್ಲ, ಅದೇ ತಪ್ಪು ಅತ್ತೆಯಿಂದ ಆದ್ರೆ ಯಾಕಿಷ್ಟು ಸಿಡಿ ಮಿಡಿ?

ನಾವು ಯಾವಾಗ ಬೆಳೆಯೋದು ನಾವು ಯಾವಾಗ ಎಲ್ಲರನ್ನ ಪ್ರೀತಿಸೋದನ್ನ ಕಲಿಯೋದು. ಈ ಸಣ್ಣತನಗಳಿಂದ ಹೊರಗೆ ಉಳಿಯೋದು ಹೇಗೆ?

ನಾವುಗಳೆ ಬದಲಾಗಬೇಕು, ಬದಲಾವಣೆ ತರಬೇಕು. ನಮಗೆ ಗೊತ್ತಿರೋರಿಂದ ಮತ್ತು ಹತ್ತಿರ ಇರೋರ 'ಮಾತು- ನಡುವಳಿಕೆಯಿಂದ' ನಮಗೆ ನೋವಾದರೆ ಎಲ್ಲರ ಮುಂದೆ ಹಿಂಗೆ ಮಾಡಿದರು, ಅವನು ಹಾಗಂದ, ಅವಳು ಹಾಗಂದಳು ಅಂತ ಕೊರಗೋದು ಅಥವ ಬೇರೆಯವರ ಹತ್ತಿರ ನಿಮಗೆ ನೋವು ಮಾಡಿರೋರ ಬಗ್ಗೆ, ಅವರ ವಯಕ್ತಿಕ ವಿಷಯಗಳ ಬಗ್ಗೆ ಗಾಸಿಪ್ ಮಾಡೊ ಬದಲು, ಅವರಿಗೇ ವಿಷಯ ಹೇಳಿ ಅರ್ಥ ಮಾಡಿಕೊಂಡ್ರೆ ಸರಿ..if not forget it ....
ನಿಮಗೆ ಹತ್ತಿರದೋರು ಮಾಡುತ್ತಿರುವುದು ತಪ್ಪು ಅನ್ನಿಸಿದರೆ ಅವರಿಗೇ ನೇರವಾಗಿ ಹೇಳಿ ಅವರನ್ನು ಪ್ರೀತಿಸ್ತೀರ ಆದ್ದರಿಂದ ಅವರ ಒಳ್ಳೇದನ್ನೆ ಬಯಸುತ್ತೀರ ಅನ್ನೋದು ಅವರಿಗೇ ಸ್ಪಷ್ಟವಾಗಲಿ.. ಬೇರೆ ಯಾರೋ ಮೂರನೆ ವ್ಯಕ್ತಿ ಬಗ್ಗೆ ಕುಹಕದ ಮಾತು ನಗು ಬೇಡವೇ ಬೇಡ ...ಅವರಿಗೆ ನೀವು ಹೇಳೋದು ಏನು ಇಲ್ಲ. ಅವರ ಹತ್ತಿರದವರು ಅವರಿಗೆ ಹೇಳ್ಕೋತಾರೆ.ಯಾರಾದರು ಇಬ್ಬರು ಜಗಳ ಆಡ್ತಿದ್ರೆ ದಯವಿಟ್ಟು ಅಲ್ಲಿಂದ ಹೊರಗೆ ಬಂದುಬಿಡಿ.ನೀವಿದ್ರೆ ನಿಮ್ಮ ಮುಂದೆ ಇನ್ನೊಬ್ಬರಿಗೆ ಸೋಲಬಾರದು ಅಂತ ಒಬ್ಬರಿಗೊಬ್ಬರು ಪ್ರತಿ ಮಾತು ಹೇಳ್ತಾನೇ ಇರ್ತಾರೆ..ನೀವು ಆ ರೂಮಿನಿಂದಹೋದ ತಕ್ಷಣ ಪಾತಾಳ ಶಾಂತ....

ಇಂದಿನ ಹುಡುಗ ಹುಡುಗೀರು ನಾವು- ನಮ್ಮ ಜೀವನ ಬದಲಾಗಬೇಕು, ನಮ್ಮದು ಸುಂದರವಾದ ಜೀವನವಾಗಬೇಕು..ಜಗಳ, ಅಸಮಧಾನ, ಇನ್ಯಾರದೋ ವಿಷಯಗಳಲ್ಲಿ ಮುಳುಗೋದು ಬೇಡ. ನಮ್ಮಗಳಿಗೆ ಬೇಕಾಗಿರೋದು ಬರೀ ಬೇಸಿಕ್ ನೀಡ್ಸ್ ಅಷ್ಟೇನ? ಬರೀ ಅಷ್ಟಕ್ಕೆ ಇಷ್ಟೆಲ್ಲ ಒದ್ದಾಡುತ್ತೀವ? ಎನಾದರು ಕಂಡು ಹಿಡಿಯೋಣ, ಮಾಡೋ ಕೆಲಸಗಳನ್ನೇ ಹೊಸ ಹೊಸ ರೀತಿಯಲ್ಲಿ ಸಮರ್ಥವಾಗಿ ಮಾಡೋಣ, ಚಿಕ್ಕ ಪುಟ್ಟ ಕ್ಷಣಗಳಲ್ಲಿ ಸಂತೋಷ ಹುಡುಕೋಣ.ದೊಡ್ಡ ದೊಡ್ಡ ಅಘಾತ ಅಸಂತೋಷವನ್ನ ಮರೆಯೋಣ..
ಭೈರಪ್ಪನವರ ವೈಚಾರಿಕ ದೃಷ್ಟಿ ಇರಲಿ,ರವಿ ಮಾಮನ ಥರ frankಆಗೋಣ , ತೇಜಸ್ವಿಯವರ ಹುಡುಕಾಟದಲ್ಲಿ ನಮ್ಮದೂ ಒಂದು ಹೆಜ್ಜೆ ಇರಲಿ, ಮಾಳವಿಕ ಅಕ್ಕನಿಂದ ಧೈರ್ಯ ಕಲಿಯೋಣ, ನಮ್ಮಲ್ಲಿ ಕೆ.ಎಸ್.ನ ಅವರ ಪ್ರೀತಿ ಇರಲಿ ದ್ರಾವಿಡ್ steadyness,ಸೆಹವಾಗ್ ಭೋರ್ಗರೆತದ ಜೊತೆಗೆ ಸುಬ್ಬಲಕ್ಷ್ಮಿ ಲತಾ ಚಿತ್ರ ಜಾನಕಿಯವರ ಸಂಗೀತದ ಮಾಧುರ್ಯವಿರಲಿ ನಮ್ಮ ನಿಮ್ಮಗಳ ಮದ್ಯೆ...

8 comments:

Unknown said...

tumba chennagide
a matured writing

Unknown said...

@ Chayapati
thnx kano...

Unknown said...

Manassina Bhavanegalanu Channagi putad myle hakiddira..Naduve english shabdagalu upayoga madovadu tappu annolla..English shabdagalu sathya gatanegalalli upamaya chennagi anisutte manassina bhavanegalalli atondu chennagi anisolla..Arambha chennagide..Keep it up Carry on..

ಮೃಗನಯನೀ said...

@kannadada kusu
thank u..wil try to write something more worth

ವಿ.ರಾ.ಹೆ. said...

ವಾವ್, ತುಂಬಾ ಚೆನ್ನಾಗಿ ಮನ್ಸಿಗೆ ಮುಟ್ಟೋ ರೀತಿ ಬರ್ದಿದಿಯಾ..

ಮುಂದುವರೆಯಲಿ. ಗುಡ್

ಮೃಗನಯನೀ said...

Thnx Vikaas

ಅಪ್ಪು..... said...

ಮೃಗನಯನೀ.... ವಿದ್ಯಾರ್ಥಿ/ನಿ ನಿಲಯಗಳ ಬಗ್ಗೆ ನಿಮ್ಮ ಲೇಖನ ತು೦ಬಾ ಚೆನ್ನಾಗಿ ಮೂಡಿ ಬ೦ದಿದೆ... ಜಗಳಗಳಿಗೆ ವಿದ್ಯಾರ್ಥಿ ನಿಲಯಗಳೇನು ಹೊರತಲ್ಲ....!!!

ಮೃಗನಯನೀ said...

thnx ಅಪ್ಪು ನನ್ನ doubt ಪರಿಹಾರ ಮಾಡಿದ್ದಕ್ಕೆ...